ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Friday, 30 September 2016

ಭಾವಗಗನ ವಿಹಾರಿ

ಭಾವಗಗನ ವಿಹಾರ
......................
ಅನಂತ ಬಾವಗಳ ಗಗನ ವಿಹಾರಿ ನಾನು ಸ್ವಾತಿಮಳೆಯಲಿ ಬಿದ್ದ ಕನಸುಗಳ
ಕಪ್ಪೆಚಿಪ್ಪಿನಲಿ ಬಚ್ಚಿಟ್ಟಿರುವೆ.
ಹುಚ್ಚು ಆಸೆಗಳ ಜಡಿಮಳೆಯಲಿ ನೆನೆದವಳು
ಬಣ್ಣದ ಕೊಡೆಯೊಳಗೆ ಸೇರಿ ಬಿಸಿಲು ಮಳೆಯ ಮದುವೆ ಕತೆ ಹೇಳಿ ಸಂಜೆ ಕಡಲಂಚಲಿ
ನನ್ನ ಹೆಸರ ಗೀಚಿದಳು ಅವಳ ಹೆಸರ ಜೊತೆಗೆ. ಕೆಣಕುವ ಕಡಲೂ ಅವಳತ್ತ ಸಾಗದೇ
ಹೆಸರನು ಅಳಿಸಲೇ ಇಲ್ಲ. .!
ಜಡಿ ಮಳೆ ಗಾಳಿ ಮೌನ ತಾಳಿ
ಅವಳ ಕಣ್ಣ ಕಡಲಿಗೆ ತಳ್ಳಿದವು. ಇನ್ನೇನು ಮಾಡಲಿ...!! ಖಾಲಿ ಮನಸಿನ ಪೋಲಿ ಕನಸಿದು... ಗೇಲಿ ಮಾಡಬೇಡಿ...!!
ಈಗ ಸೂರ್ಯನೂರ ಸುಂದರಿಗೆ ಗೋರಂಟಿ ಹಾಕಿಬರುವೆ..
ಸುಟ್ಟು ಹೋಗದಿರೆ ಮತ್ತೆ ಸಿಗುವೆ.
#ರವಿರಾಜ್ ಸಾಗರ್ .

1 comment:

ಜಾನಪದ ವಿಶ್ವವಿದ್ಯಾಲಯದ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ ..

 ಜಾನಪದ ವಿಶ್ವವಿದ್ಯಾಲಯದ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ . ಹಸೆ ಚಿತ್ತಾರ , ನಾಟಿ ವೈದ್ಯ ,ವಿವಿಧ ಜಾನಪದ ನಿಕಾಯಗಳಲ್ಲಿ ಸ್ನಾತಕೋತ್ತರ ಡಿಪ್ಲೋಮಾ ,ಡಿಪ್ಲೋಮಾ ...