ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Sunday 18 September 2016

ಅನಾಮಿತೆ

ಅನಾಮಿತೆ

ಸಂಜೆ ಕಡಲಲಿ
ಮರಳ ತೀರದಲಿ
ಮನಕೆ ಮುದ ನೀಡಿದ ಆ ತಂಗಾಳಿ
ನೆನಪಿಸುತಿದೆ ಮತ್ತೆ ಮತ್ತೆ...
ಒಂಟಿ ಯಾಕೆ ನೀನು....?
  ಮೋಡಗಳನೆಲ್ಲಾ ಸೆಳೆದುಕೊಂಡು
ಮುದದಿ ನೀಲಕನಸು ಕಾಣುತಿದೆ ನೋಡು ಆ ಬಾನು.
ಇಷ್ಟು ಮೌನ ಸಾಕು...
ಸಹಿ ಮಾತು ಬೇಕು
ಉಪ್ಪು ಕಡಲಿಗೂ ಸಹಿ ನದಿಯ ಸಹವಾಸ ಸದಾ ಬೇಕು.
ನಡೆ ಎಂದು ಬಡಿದೆಚ್ಚರಿಸಿದಾಗಲೇ ಅರಿತದ್ದು ಕಡಲ ತೀರದಲ್ಲಿ
ಕನವರಿಸುತ ಬಿದ್ದ  ಅನಾಮಿಕನನು ಕೈಹಿಡಿದದ್ದು ಆ ಆನಾಮಿತೆ ....
ಆ ಚೆಲುವಿಗೆ ಹೋಲುವ ಹೆಸರು ಹೋಳೆದಿಲ್ಲ ನನಗಿನ್ನೂ .....
ಅವಳೂ ಹೇಳಲಿಲ್ಲ ಹೆಸರನ್ನು. ..!!
ರವಿರಾಜ್ ಸಾಗರ್.#

No comments:

Post a Comment