ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Monday, 30 November 2015

ಸ್ಮಶಾನ ರಂಗದಲ್ಲಿ ಕಂಡದ್ದು

ಸ್ಮಶಾನ  ರಂಗದಲ್ಲಿ ಕಂಡದ್ದು
.....  .......  ...............
ಅವಳು ಎಷ್ಟೇ ಅತ್ತರೂ ...
ಉರಿಯುತಿರುವ  ಅವನ ಚಿತೆ ಆರುವುದಿಲ್ಲ..
ಆದರೂ ಅವಳೊಂದಿಗೆ ಇನ್ನಷ್ಟು ಜನ ಅಳುವರು..
ಕೇಳಿಸಿಕೊಳ್ಳಲು ಇರದ ಅವನ ಕುರಿತು
ಈಸು ದಿನ ಬೈದವರೂ ಹೊಗಳುತಿದ್ದರು.
     ಅವನ ನಗುವ ಕಿತ್ತುಕೊಂಡವರೆಲ್ಲಾ
     ಅಳುವ ಪಾತ್ರದಲಿ ಪರಕಾಯ ಪ್ರವೇಶ ಮಾಡಿದ್ದರು.
       ಚಿತೆಯ ಬೆಂಕಿಯ ಕೆನ್ನಾಲಿಗೆ
       ಕಣ್ಣೀರಿಡುತ ಬೂದಿ ಉಗುಳಿತು.
     ನರರ ನಾಟಕಕೆ  ಶ್ಮಶಾನರಂಗ
      ನಿತ್ಯ ತೆರೆ  ತೆರೆಯಿತು. !

No comments:

Post a Comment

ಜಾನಪದ ವಿಶ್ವವಿದ್ಯಾಲಯದ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ ..

 ಜಾನಪದ ವಿಶ್ವವಿದ್ಯಾಲಯದ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ . ಹಸೆ ಚಿತ್ತಾರ , ನಾಟಿ ವೈದ್ಯ ,ವಿವಿಧ ಜಾನಪದ ನಿಕಾಯಗಳಲ್ಲಿ ಸ್ನಾತಕೋತ್ತರ ಡಿಪ್ಲೋಮಾ ,ಡಿಪ್ಲೋಮಾ ...