ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Friday 6 November 2015

ವಿರಹ ಕ ( ವಿ ) ತೆ.

ವಿರಹ ಕ (ವಿ)ತೆ
ಅವಳಿಗಾಗಿ ಕವಿತೆಯಲ್ಲಿ ಅವಿತೆ
ಪದಗಳ ಹೂರಾಶಿಯಲಿ ಬೆರೆತೆ
ಪ್ರಾಸಗಳೂರ ಜಾತ್ರೆಯಲ್ಲಿ ಅಲೆದೆ
ತ್ರಾಸಾದರೂ ನುಡಿಗಟ್ಟುಗಳ ಬೆಟ್ಟದಲ್ಲಿ
ಅಲಂಕಾರ, ಉಪಮೆಗಳ ಶೋದಿಸಿದೆ.
ಶೃತಿ, ಲಯ,ಛಂದಸ್ಸಿಗಾಗಿ ಜಪಿಸಿದೆ;
ಕೊನೆಗೂ ಅವಳೆದುರು ಕವಿತೆಯ ವಾಚಿಸಲು
ಗುಂಡಿಗೆ ಗಟ್ಟಿ ಮಾಡಿ ನಾಲಗೆಗೂ ದೈರ್ಯ ಹೇಳಿದೆ; ಆದರೂ ಮತ್ತೆ ಹೇಳದೆ ಅವಿತೆ...!
ಅವಳೆದುರು ಬೆವರಿದೆ;
ನನ್ನೊಲವ ಕವಿತೆ, ಕತೆಯಲ್ಲಿ ಮುಗಿಸಿದೆ...!
ಇಂಗಿ ಹೋದ ಕಣ್ಣೀರ ಕಣ್ಣಿಗೆ ಕಂಡದ್ದು.!
ಅವಳ ಕೈಲಿದ್ದ ಮದುವೆಯ ಕರೆಯೋಲೆ .
ಆದರೂ ಎದೆಯೊಡೆಯದೇ ಜೀವ ಉಳಿದದ್ದು ಕವಿತೆಯ ತಂಗಿ 'ಕವನ' ಇರುವಳಲ್ಲಾ ಎನ್ನುವ ಆಶಾಬಾವ..!

No comments:

Post a Comment