ಭಾವ- ಅನುಭಾವ:
ಅಕ್ಕಿ ಅನ್ನಕ್ಕೆ ಕೇಳಿತು...ನೀನು ನಾನೇ ಆಗಿದ್ದೆ, ಆದರೆ ಹೇಗೆ ಅನ್ನವಾದೆ?
ಅನ್ನ ಹೇಳಿತು... ನೀರು, ಬೆಂಕಿಗಳ ಸಂಪರ್ಕಕ್ಕೆ ಒಳಗಾದರೆ ಅವುಗಳ ಸಂಸ್ಕಾರದಿಂದ ಮೃದುವಾದೆ... ಮಧುರವಾದೆ. ಅಕ್ಕಿ ಎನ್ನುವ 'ಭಾವ' ಕಳೆದು ಕೊಂಡೆ... ಅನ್ನ ಎನ್ನುವ 'ಅನುಭಾವ' ಪಡೆದು ಕೊಂಡೆ...
ಅದೇ ರೀತಿ ಸಜ್ಜನರ ಸಂಗದಿಂದ ನಮ್ಮಲ್ಲಿರುವ ಅಜ್ಞಾನ, ದುರಿತ, ದುಮ್ಮಾನಗಳ 'ಭಾವ' ಕಾಠಿಣ್ಯತೆ ತೊಲಗಿ... ಪುಣ್ಯ, ಜ್ಞಾನ, ಮೋಕ್ಷಗಳೆಂಬ ಮೃದುತ್ವದ 'ಅನುಭಾವ' ದೊರೆಯುತ್ತದೆ.
No comments:
Post a Comment