ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Friday, 4 December 2015

ಕಡಲ ಮೋಹ


ಆಸೆ ಕಡಲುಕ್ಕಿ
ನದಿಯನು ಬರಸೆಳೆದು ಮುತ್ತಿಕ್ಕಲು
ಮೋಹ ಮಿತಿಮೀರಿ
ಕಾದ ಮರಳ ದಂಡೆಯಲಿ ಮೈಮರೆತವು.
ತೇಟು ನಮ್ಮಂತೆಯೇ ...!
  ಕಂಪಿಸಿದ ಸಂಜೆಕಡಲಿಗೆ
ಬಾಯ್ ಹೇಳಿದ ರವಿಯನು ಕಂಡು
ಕಣ್  ಅರಳಿಸುತ ಮೆಲ್ಲನೆ ಬಂದ ಚಂದ್ರ
ಕಡಲನು ಕದ್ದುನೋಡುತ
ಮಂದಹಾಸ  ಬೀರಿ ಬರಸೆಳೆದನು.
ಕಡಲಲಿದ್ದ ಲಲನೆಯರೂ  ಬೆರಗಾಗಿ
ಮುಸ್ಸಂಜೆ  ಕೆಂಪು ಕಡಲಿಗೆ  ದುಮುಕಿ
ಮೈ ಮನ ಮರೆತರು.
ಕಡಲು  ಮತ್ತಷ್ಟು  ಕೆಂಪೇರಿತು.

No comments:

Post a Comment

ಜಾನಪದ ವಿಶ್ವವಿದ್ಯಾಲಯದ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ ..

 ಜಾನಪದ ವಿಶ್ವವಿದ್ಯಾಲಯದ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ . ಹಸೆ ಚಿತ್ತಾರ , ನಾಟಿ ವೈದ್ಯ ,ವಿವಿಧ ಜಾನಪದ ನಿಕಾಯಗಳಲ್ಲಿ ಸ್ನಾತಕೋತ್ತರ ಡಿಪ್ಲೋಮಾ ,ಡಿಪ್ಲೋಮಾ ...