ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Saturday, 12 December 2015

ಅವಳ ಬಯಕೆ

ಅವಳ ಬಯಕೆ.
...................
ಮುನಿದ ಪಾಕಿಸ್ತಾನವನ್ನು
ಮರಳಿ ಭಾರತದ ಮಹಾಮನೆಗೆ
ಕರೆತಂದು ...
ಶಾಂತಿ ಸಹಬಾಳ್ವೆಯ ದಿನಗಳ
ಕಾಣಬೇಕೆನಿಸಿದೆಯಂತೆ ಅವಳಿಗೆ
ಹೇಗೆ ಯತ್ನಿಸಲಿ.?
       ಹರಿದು ಓಡುತಿರುವ
ಕಪ್ಪು ಮೋಡಗಳ ತಡೆದು
ಕಾಮನ ಬಿಲ್ಲಿಗೆ
ತೋರಣ ಕಟ್ಟಿ
ರವಿಯ ರಮಿಸಿ
ಕೊಂಚ ಬಿಸಿಲು
ಕೊಂಚ ಹೂಮಳೆಯಲಿ
ಅವಳು ಕುಣಿಯಬೇಕಂತೆ
ಹೇಗೆ ಈಡೇರಿಸಲಿ...?
    ಇನ್ನೂ ಏನೇನೋ ಇವೆ...
      ಅವೆಲ್ಲ ಹೇಳಲು ಹೋದರೆ
ಕವನ ಕಾದಂಬರಿ ಆದೀತು. .!
ಅನಂತ ಅವಳ ಬಯಕೆ.

No comments:

Post a Comment

ಜಾನಪದ ವಿಶ್ವವಿದ್ಯಾಲಯದ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ ..

 ಜಾನಪದ ವಿಶ್ವವಿದ್ಯಾಲಯದ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ . ಹಸೆ ಚಿತ್ತಾರ , ನಾಟಿ ವೈದ್ಯ ,ವಿವಿಧ ಜಾನಪದ ನಿಕಾಯಗಳಲ್ಲಿ ಸ್ನಾತಕೋತ್ತರ ಡಿಪ್ಲೋಮಾ ,ಡಿಪ್ಲೋಮಾ ...