ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Saturday 26 December 2015

ಕಂದ ತಂದ ಸೌಭಾಗ್ಯ

ಕಂದ ತಂದ ಸೌಭಾಗ್ಯ

ಹೊಸಿಲೊಳಗೆ ನೀನಿರಲು
ಹೊತ್ತು ಹೋದದ್ದೇ ತಿಳಿಯೋಲ್ಲ ಕಂದಾ...
ಹೊತ್ತುಕೊಂಡು  ಮುದ್ದಾಡುತಿರಲು
ಬೆನ್ನಟ್ಟಿಬರುವ  ನೂರು ಚಿಂತೆ ಸುಳಿಯವು ಕಂದಾ.
     ಈಗೀಗ ಆ ಸೂರ್ಯ ಬೇಗ ಬೇಗನೆ ಬಂದು
ಕಿಟಕಿಯಲಿ ಇಣುಕಿ ಕದ್ದು ನೋಡುವನು
ದೃಷ್ಟಿ ಆದಿತು ಕಂದ ದಿಟ್ಟಿಸಿ ನೋಡಲೇಬೇಡ.
ದೃಷ್ಟಿ ಬೊಟ್ಟಿಡುವೆ ಅಳಿಸಿಕೊಳ್ಳಬೇಡ ಕಂದಯ್ಯಾ..
    ನೀ ಹೊಸಿಲು ತುಳಿದ ಮೇಲೇ
    ಮನೆತುಂಬಾ ನಗುಸಿರಿ
   ಸುಖ ಶಾಂತಿ ಐಸಿರಿಯೆಲ್ಲಾ ನಿನ್ನಿಂದಲೇ ಕಂದಾ. 
ನೀನಮ್ಮ ಬಾಳಿನ ಸೌಭಾಗ್ಯ ಕಂದಾ.

No comments:

Post a Comment