ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Monday 4 April 2016

ಮೌನಿಯ ಒಲವು

ಮೌನಿಯ ಒಲವು..
......................
ಇನ್ನೂ ... ಇನ್ನೇನು ಹೇಳಲಿ...
ಈ ಮೌನವೇ ಎಲ್ಲಾ ಹೇಳಿದೇ..
        ಸುಮ್ಮನಿರುವ ಸೊನ್ನೆ ನಾನು
         ಸುಮ್ಮನೆ ಒಂದಾಗಿ ಜೊತೆಯಿರು ಬೆಲೆಯಿದೆ.
ಅಲೆಯೋ ಕಡಲಲೆಗಳ ಎಣಿಸು ..
ನನ್ನೊಡನೇ  ಇನ್ನೂ ಇದ್ದರೆ ಮುನಿಸು
ದೂರ ಕೂರಬೇಡ..
ಸುಮ್ಮನೆ ಕಣ್ಣಲಿ ಗಾಳ ಹಾಕೆನು.
ಕಾಳು ಚೆಲ್ಲಬೇಡ.
ಒಲವ ಹಸಿವಿದೆ...
ಬಿಕ್ಷೆ ಬೇಡದ ಸ್ವಾಭಿಮಾನಿ ನಾ
ನೀನೇ ಉಪಚರಿಸು.
ನನಗೆ ಒಂದಿಷ್ಟು ಕನಸು ಕಳಿಸು.

ಗಿಜಿಗುಡುವ ಜನರ ನಡುವೆ ಎದೆಯಲಿ
ನಿನ್ನ ಧನಿಯದೇ ನಿಲ್ಲದ ಕಲರವ
ಗುನು ಗುನುಗುವ ಒಲವಾ ಗುಂಗಲೂ
ನಿನಗಾಗಿಯೆ ಕಲಿತೇ ಸಕಲವ.
ಒಲವಾ ಗುರುಕುಲದ ಬಾಗಿಲು ತೆರೆಯೇ
ಹೆಬ್ಬೆರಳು ನೀಡುವ ತ್ಯಾಗಿಯಲ್ಲ ...
ಸ್ವಾರ್ಥಿ ನಾ ನಿನ್ನ ಪ್ರೀತಿಗೇ...
ನನ್ನೊಲವೇ ಧಕ್ಷಿಣೇ ನಿನಗೇ.....

( ಶೀಘ್ರವೇ "ಬಾವಬಂಡಿ" ಬಾವಸಂಕಲನ ಬಿಡುಗಡೆ. )

Saturday 2 April 2016

ಸಾಮಾಜಿಕ ಜಾಲತಾಣಗಳಲಿ ಸಾಹಿತ್ಯ ಕೃಷಿ

ಸಾಮಾಜಿಕ ಜಾಲತಾಣಗಳಲಿ ಸಾಹಿತ್ಯ ಕೃಷಿ
........................................
ಕಾವ್ಯ ವಿಷಯ ವಸ್ತುವನ್ನು ಹೆಚ್ಚು ಸಂಕೀರ್ಣವಾಗಿ, ಸೂಚ್ಯವಾಗಿ.ನುಡಿಗಟ್ಟುಗಳಲಿ ಅಡಗಿಸಿ ಒಗಟಾಗಿಸಿ ಕಾವ್ಯದ ಕುಸುರಿ ಕೆಲಸ  ನಡೆಯಬೇಕು ಎಂದು ಹೇಳುವ ಹಾಗು ಅಂತಹುದು ಮಾತ್ರ ಶ್ರೇಷ್ಠ  ಕಾವ್ಯ ಎನ್ನುವ ಸಾಹಿತ್ಯ ಪಂಡಿತರು ಇಂದಿನ ಯುವ ಜನಾಂಗದ ಕಾಲ, ಅಭಿರುಚಿ, ಭಾಷೆಯ ಆಳ ಅರಿವು , ಅನಿವಾರ್ಯತೆಯನ್ನೂ  ಗಮನಿಸಿ ಪ್ರಸ್ತುತ ಕಾವ್ಯರಚನೆಯ ಮಾರ್ಗದಲ್ಲಿ ಆಗಬೇಕಾದ ಬದಲಾವಣೆ ಪ್ರಕ್ರಿಯೆ ಪಲ್ಲಟಗಳ ಬಗ್ಗೆಯೂ ಚಿಂತನೆ ನಡೆಸಬೇಕಿದೆ.ಸೂಕ್ತ ಮಾರ್ಗೋಪಾಯ ಕಂಡುಕೊಂಡು ಯುವಕರನ್ನು ಸಾಹಿತ್ಯ ಕೃಷಿಗೆ ಸೆಳೆಯಬೇಕಿದೆ. ಸಮೂಹೋಪಾದಿಯಲಿ ಸಾಗಬೇಕಿದೆ .ಆಗ ಸಾಹಿತ್ಯ ಕೃತಿಗಳು  ಗೆದ್ದಲಿನಿಂದ , ದೂಳಿನಿಂದ ರಕ್ಷಣೆ ಪಡೆಯುತ್ತವೆ.
       ಹಲವಾರು ಭಾಷೆ ಕಲಿವ
( ಇಂಗ್ಲಿಷ್ ಅಂತೂ ಅನಿವಾರ್ಯ) ಅಗತ್ಯ ಇರುವ ಇಂದು ಯಾವ ಭಾಷೆಯನ್ನೂ ಆಳವಾಗಿ ಅಧ್ಯಯನ ಮಾಡುವ ಗೊಡವೆಗೆ ಹೋಗದವರೆ ಹೆಚ್ಚಿನವರಿದ್ದು ಡಿಕ್ಷನರಿ ತೆಗೆದು ಅರ್ಥ ಹುಡುಕಿ ಕಾವ್ಯ ಆಸ್ವಾದಿಸುವ ಕವಿಮನಸುಗಳು ಕಡಿಮೆಯಾಗುತಿದ್ದು ಮನರಂಜನೆಗೆ.. ಸಮಯಕಳೆಯಲು ಹಲವು ಮಾಧ್ಯಮಗಳು,  ಕ್ರೀಡೆಗಳು ಬರಸೆಳೆದು ಕರೆವ ಆಕರ್ಷಕತೆ , ಪ್ರಭಾವ ಬೀರುತ್ತಿರುವ ದಿನಗಳಲ್ಲಿ  ಅತಿ ಸಂಕೀರ್ಣ ಸೂಚ್ಚ ಸಾಹಿತ್ಯ ರಚನೆ ಕೆಲವೇ ಪಂಡಿತೋತ್ತಮರಿಂದ ಪಂಡಿತೋತ್ತಮರಿಗಾಗಿ ಎನಿಸಿಬಿಟ್ಟಿದೆ.
ಹಾಗಾಗಿ  ಸರಳ ಲಾಲಿತ್ಯದ  ,ಜನಬಳಕೆಯ  ಸರಳ ನುಡಿಗಟ್ಟುಗಳ, ಇಂದು ಹೆಚ್ಚು ಬಳಕೆಯಲ್ಲಿರುವ  ಪದಗಳ ಬಳಕೆ ಒಳಗೊಂಡ ಸಾಹಿತ್ಯ ಕೃತಿಗಳನ್ನು ಹೆಚ್ಚು ಪ್ರೋತ್ಸಾಹಿಸಬೇಕಿದೆ. ಸಾಹಿತ್ಯ ಕೃತಿಗಳ ಹೆಚ್ಚಿನ ಬಳಕೆ ಬದಲಾವಣೆಗೆ
ಸಾಹಿತ್ಯ ಕ್ಷೇತ್ರ ತೆರೆದುಕೂಳುವ ದಿನಗಳನ್ನು ಹಿರಿಯರು ಸ್ವಾಗತಿಸಬೀಕಿದೆ.
ಅಂತರ್ಜಾಲ ತಾಣದ ಸಾಹಿತ್ಯ ಕೃಷಿಯನ್ನು ಲಘುವಾಗಿ ಪರಿಗಣಿಸದೆ ಹೊಸ ವಿಸ್ತರಣೆ, ಸಾಧ್ಯತೆ ಬಗ್ಗೆ  ಮಾರ್ಗದರ್ಶನ ,ಮಾರ್ಗೋಪಾಯ ನೀಡಬೇಕಿದೆ.
ನಿಮ್ಮವ  - ರವಿರಾಜ್ ಸಾಗರ್.
9980952630

Thursday 31 March 2016

ಹಣ, ಹೆಂಡ ಕೊಡಿ ಎಂದು ಬೇಡಿದವರಾರು..?

ಯಾವ ಬಡವನೂ ಹಣ ಕೊಡಿ. ಹೆಂಡ ಕೊಡಿ ಎಂದು ಯಾವ ರಾಜಕಾರಣಿಗಳ ಮನೆಗೂ ಹೋಗಲಿಲ್ಲ . ರಾಜಕೀಯ ಪಕ್ಷಗಳ ಮುಖಂಡರ ಸ್ಪರ್ಧಾ ವ್ಯವಸ್ಥೆ  ಗೆಲ್ಲುಲು ಜನಸಾಮಾನ್ಯರ ಅಸಹಾಯಕತೆ,ಹಸಿವು,   ಅವಿವೇಕತೆ ಬಳಸಿಕೊಂಡು  ಇಡೀ  ಜನಸಾಮಾನ್ಯರ ಸಮೂಹವನ್ನು  ತಮ್ಮ  ವೃತ್ತದೊಳಗೆ ಸಿಲುಕಿಸಿದರು . ( ಅಂದಿನವ ರಾಜಪ್ರಭುತ್ವದ ಕಾಲ  ಇನ್ನೂ ಶೋಚನೀಯ ಹಂತದಲ್ಲಿತ್ತು)
. ಪ್ರಜಾಪ್ರಬುತ್ವ  ಬಂದಮೇಲೆ ಜನಸಾಮಾನ್ಯರ ಉದ್ದಾರದ  ಹೆಸರಲ್ಲಿ  ಯಾವುದೇ ಆರ್ಥಿಕ ಮೂಲಗಳಿರದ   ಬಡತನದ... ಅಶಿಕ್ಷಿತ ಶ್ರೀ ಸಾಮಾನ್ಯರತ್ತ  ಕೈ ಚಾಚಿ ತಾವು ಮೇಲೇ ನಿಂತು ಭೂ ಸಂಪತ್ತನ್ನು ತಮ್ಮಲ್ಲಿ  ಉಳಿಸಿಕೊಂಡರು. ಕೆಲವರು ಭಾಷಣ  ಬಿಗಿದರು. ಬರಹಗಾರರು... ದೊಡ್ಡ ದೊಡ್ಡ ಪುಸ್ತಕ ಬರೆದರು. ಕೆಲವರುಬಡ ಬಡವರ ಸೇವೆ ಮಾಡಿ ಗುಡಿಯೋಳಗೆ ದೇವರಾಗಿ ಬಂಧಿ ಆದರು.  ಕೆಲವೇ ಶ್ರಮಿಕರು ಬುದ್ಧಿ ಬಲದಿಂದ ಮೇಲೆ ಬಂದರು.. ತುಂಡು ಭೂಮಿಯಿಲ್ಲದೇ ದುಡಿವ ಕಠಿಣ ಶ್ರಮಿಕ  ಜಾತಿಗಳು ಎಷ್ಟು ದುಡಿದರೂ ಅಷ್ಟೇ ಅನ್ನುವ ವ್ಯವಸ್ಥೆ ಹೆಣೆಯಲಾಯಿತು. ಅಸಹಾಯಕ ಸ್ಥಿತಿಯ ಅವರು    ಶತ ಶತಮಾನಗಳಿಂದ ಹಾಗೇ ಉಳಿವಂತ ಆರ್ಥಿಕ ಸ್ಥಿತಿ ಹೇರಲಾಗಿದೆ.  ಈ ಭೂಮಿ..ಇಲ್ಲಿಯ ಬಹುತೇಕ ಸಂಪತ್ತು  ಮೇಲ್ವರ್ಗದವರ ಹಿಡಿತದಲ್ಲೇ ಉಳಿದಿದೆ. ಭೂಮಿಯ ಮೇಲೆ ಖಾಸಗಿ ಒಡೆತನದ ಪರಿಕಲ್ಪನೆಯೇ ಈ ಅಸಮತೋಲನಕೆ ಕಾರಣ. ನೈಸರ್ಗಿಕ ವಿರೋಧ ಪ್ರಕ್ರಿಯೆ ಅದು. ಆಸ್ತಿ , ಭೂಮಿ ಮೇಲೆ ನಿರಂತರವಾಗಿ ತಲೆಮಾರಿನಿಂದ ತಲೆಮಾರಿಗೆ ಖಾಸಗಿ ಒಡೆತನದ ಹಕ್ಕು ನೀಡುವ ಪ್ರಕ್ರಿಯೆ ನಿಂತಂದು ಜಗತ್ತಿನ ಬಹುತೇಕ  ಸಮಸ್ಯೆಗೆ ಪರಿಹಾರ ಸಿಗಲಿದೆ.  ಯಾರೂ ಅತಿಯಾಗಿ ಆಸ್ತಿ ಕೊಡಿಡುವ ಕೆಲಸ ಮಾಡರು. ಆಗ ಭ್ರಷ್ಟಾಚಾರ,  ಆಸ್ತಿ ಕೂಡಿಡುವ ಪೈಪೋಟಿ ಕಡಿಮೆಯಾಗಿ ಸಾಮಾನ್ಯರಿಗೂ ಒಂದಿಷ್ಟು ಭೂಮಿ, ಆರ್ಥಿಕ ಮೂಲಗಳ ಸುಲಭ ಲಭ್ಯತೆ.. ಎಲ್ಲರಂತೆ ಬದುಕುವ ವ್ಯವಸ್ಥೆಗೆ ದಾಪುಗಾಲಿಡುವರು. ಸರ್ಕಾರದ ಭಾಗ್ಯಗಳ ಮೇಲೆ ನಿರೀಕ್ಷೆ ಕಡಿಮೆಯಾಗಿ ಆರ್ಥಿಕವಾಗಿ  ಅಸಮತೋಲನವಲ್ಲದ  ಸಹಬಾಳ್ವೆಯ ಸಮಾಜ ತಂತಾನೆ ಬೆಳೆಯುತ್ತದೆ ಎನ್ನುವುದು ನನ್ನ ಅಭಿಮತ. - ರವಿರಾಜ್ ಸಾಗರ್.

Tuesday 29 March 2016

ರವಿರಾಜ ಮಾರ್ಗದ ಮೈಲಿಗಲ್ಲುಗಳು...

ಅವಸರದ ಪ್ರಯಾಣ
ಅಪಘಾತಕೆ ಕಾರಣವಾದೀತು...
ಅವಸರದಿ ಗೀಚಿ
ಪತ್ರಿಕೆಗೆ ಕಳಿಸಿದರೆ
ಕಸದ ಬುಟ್ಟಿಗೆ ಸೇರೀತು...
ಎಚ್ಚರವೆಂದ ರವಿರಾಜ ಮಾರ್ಗ.

ಜಗದ ವ್ಯವಸ್ಥೆಯಲಿ ಈಜುವಾಗ
ಭ್ರಷ್ಟಾಚಾರದ ಕೆಸರು ಪಾದಕಂಟದೇ ಬಿಡದು.

ನಿನ್ನ ನಾಲಗೆ ಸುಮ್ಮನಿದ್ದರೂ
ಜಗದ ಜನರ ನಾಲಗೆ ನಿನ್ನ ಬಿಡದು.

ಒಳ್ಳೆಯ ಮರ ಕಂಡರೆ ಎಲ್ಲರಿಗೂ ಇಷ್ಟ. ..
ನೆರಳಲಿ ಕೂತು....
ಕಾಂಡವನ್ನೇ ಕಡಿದೊಯ್ದು
ಬಿಸಿಲೆಂದು ಪೇಚಾಡುವರು.

Wednesday 23 March 2016

ಹಿಂಗೂ ಬರೀಬಹುದಾ...

ಕಚ್ಚಿದ ಇರುವೆಯ ಕಚ್ಚಲಾರೆ...
ಚುಚ್ಚಿದ ಮುಳ್ಳನು ಚುಚ್ಚಲಾರೆ..
ಸ್ವಲ್ಪ ಒಳ್ಳೆ ಹುಡುಗ ನಾನು.
ದಯೆಯೇ ಧರ್ಮ ಅಲ್ಲವೇನು..?
      -ರವಿರಾಜ ಮಾರ್ಗ.
ರವಿರಾಜ್ ಸಾಗರ್,

Friday 18 March 2016

ಪ್ರಾಥಮಿಕ ಶಾಲೆ ಶಿಕ್ಷಕರೆಂದರೆ ಯಾರು.?

ಅಕ್ಷರ ದಾಸೋಹ
ಕ್ಷೀರಭಾಗ್ಯ
ಸುವರ್ಣ ಆರೋಗ್ಯ ಚೈತನ್ಯ
ಸೈಕಲ್ ವಿತರಣೆ
ಪಠ್ಯಪುಸ್ತಕ ವಿತರಣೆ
ಬ್ಯಾಗ್ ವಿತರಣೆ..ಶೂ
ಚಿಣ್ಢರ ಅಂಗಳ
ಕೂಲಿಯಿಂದ ಶಾಲೆಗೆ
ಬಾ ಬಾಲೆ ಶಾಲೆಗೆ
ಬಾ ಮರಳಿ ಶಾಲೆಗೆ
ಶಾಲಾ ಪ್ರಾರಂಭೋತ್ಸವ
ದಾಖಲಾತಿ ಆಂದೋಲನ
ಶಾಲೆ ಬಿಟ್ಟ ಮಕ್ಕಳ ಮನೆಭೇಟಿ
ಎಸ್ ಡಿ ಎಂ ಸಿ ರಚನೆ
ಶೌಚಾಲಯ ನಿರ್ವಹಣೆ
ಕಟ್ಟಡ ಕಾಮಗಾರಿ
ಸಮುದಾಯದತ್ತ ಶಾಲೆ
ಶಾಲಾ ವಾರ್ಷಿಕೋತ್ಸವ
ಪ್ರಗತಿಪತ್ರ ತುಂಬವುದು
ಪಾಠಯೋಜನೆ
ಪಾಠಬೋಧನೆ
ಕ್ರಿಯಾಯೋಜನೆ
ಕ್ರೀಯಾಸಂಶೋಧನೆ
ಶೈಕ್ಷಣಿಕ ಯೋಜನೆ
ದಾಖಲೆ ನಿರ್ವಹಣೆ
ಡಾಟ ಎಂಟ್ರಿ
ಮಕ್ಕಳಿಗೆ ಬ್ಯಾಂಕ್ ಖಾತೆ ತರೆಯುವುದು
ವಿದ್ಯಾರ್ಥಿವೇತನ
ಸಮನ್ವಯ ಶಿಕ್ಷಣ
ಜನಗಣತಿ
ಮಕ್ಕಳ ಗಣತಿ
ಜಾತಿಗಣತಿ
ಚುನಾವಣಾಕಾರ್ಯ
ಬಿಎಲ್ ಒ ಕೆಲಸ
ಗುಳಿಗೆ ಹಂಚಿಕೆ
ಪಲ್ಸ್ ಪೋಲಿಯೋ
ಸಮಾಲೋಚನ ಸಭೆ
ಎಸ್ ಡಿ ಎಂ ಸಿ ಸಭೆ
ಪಾಲಕರ ಸಭೆ
ಶಿಕ್ಷಕರ ಸಭೆ
ಪುನಶ್ಚೇತನ ತರಬೇತಿ
ಬ್ರಿಟಿಷ್ ಕೌನ್ಸಿಲ್ ತರಬೇತಿ
ಹೊರಸಂಚಾರ
ಕ್ಷೇತ್ರ ಸಂದರ್ಶನ
ಶೈಕ್ಷಣಿಕ ಪ್ರವಾಸ
ಜಿಲ್ಲಾದರ್ಶನ
ಸೇತುಬಂಧ
ಪರಿಹಾರ ಬೋಧನೆ
ಪೂರಕಬೋಧನೆ
ನಲಿ ಕಲಿ
ಕಲಿ ನಲಿ
ಚೈತನ್ಯ ಮಾದರಿ
ಟಿ ಎಲ್ ಎಂ ತಯಾರಿ
ಚಿನ್ನರಚುಕ್ಕಿ
ಚುಕ್ಕಿಚಿನ್ನ
ಕೇಳಿಕಲಿ
ಕ್ರೀಡಾಮೇಳ
ಪ್ರತಿಭಾ ಕಾರಂಜಿ
ಕಲಿಕೋತ್ಸವ
ಮೆಟ್ರಿಕ್ ಮೇಳ
ವಿಜ್ಞಾನ ಮೇಳ
ಸಾಂಸ್ಕೃತಿಕ ಕಾರ್ಯಕ್ರಮ
ಸೈನ್ಸ ಇನ್ಸ್ ಪೈಯರ್ ಅವಾರ್ಡ್
ಪೂರಕ ಪರೀಕ್ಷೆ
ನೈದಾನಿಕ ಪರೀಕ್ಷೆ
ಸಿಸಿಇ ಪರೀಕ್ಷೆ
ಘಟಕ ಪರೀಕ್ಷೆ
ಮೊರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆ
ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ
ಕಸ್ತೂರಿ ಬಾ ಬಾಲಿಕ ವಿದ್ಯಾಲಯ ಪ್ರವೇಶ ಪರೀಕ್ಷೆ
ನವೋದಯ ಪ್ರವೇಶ ಪರೀಕ್ಷೆ
ಎನ್ ಟಿ ಎಸ್ ಪರೀಕ್ಷೆ
ಎನ್ ಎಮ್ ಎಮ್ ಎಸ್ ಪರೀಕ್ಷೆ
ಗಣರಾಜ್ಯೋತ್ಸವ
ಸ್ವಾತಂತ್ರ್ಯೋತ್ಸವ
ಹೈ-ಕ ವಿಮೋಚನಾ ದಿನಾಚರಣೆ
ಯುವಕರ ದಿನಾಚರಣೆ
ಮಕ್ಕಳ ದಿನಾಚರಣೆ
ಶಿಕ್ಷಕರ ದಿನಾಚರಣೆ
ಸಾಕ್ಷರತ ದಿನಾಚರಣೆ
ಪರಿಸರ ದಿನಾಚರಣೆ
ವಿಜ್ಞಾನಿಗಳ ದಿನಾಚರಣೆ
ರಾಷ್ಟ್ರೀಯ ಶಿಕ್ಷಣ ದಿನಾಚರಣೆ
ಭೂ ದಿನಾಚರಣೆ
ಗಾಂಧಿ ಜಯಂತಿ
ಕನಕ ಜಯಂತಿ
ಬಸವ ಜಯಂತಿ
ಅಂಬೇಡ್ಕರ್ ಜಯಂತಿ
ಕನ್ನಡ ರಾಜ್ಯೋತ್ಸವ
ಬಾಬು ಜಗಜೀವನ್ ರಾಂ ದಿನಾಚರಣೆ
ವನಮಹೋತ್ಸವ
ಇತ್ಯಾದಿ ಇತ್ಯಾದಿ.
   ಇವನ್ನೆಲ್ಲ   ಮಾಡಿ . . ಸರ್ಕಾರದ ಶಾಲೆಗೆ  ಬರಬಹುದಾದ ಮಕ್ಕಳನ್ನೂ ಆರ್ ಟಿ ಇ ನೆಪದಲ್ಲಿ  ಒಂದಷ್ಟು.. ನವೋದಯ,  ಮುರಾರ್ಜಿ ಶಾಲೆ. ಆದರ್ಶ ಶಾಲೆ, ಕಿತ್ತೂರು ಚೆನ್ನಮ್ಮ ವಸತಿ ಶಾಲೆ,  ಮತ್ತಿತರೆ ಶಾಲೆಗೆ ಪ್ರತಿಭಾವಂತ ವಿದ್ಯಾರ್ಥಿ ಗಳ ನ್ನು ಶೋಸಿ ಕಳಿಸಿ,  ಬಡವರ,  ವಲಸೆ ಕುಟುಂಬದ ಹಳ್ಳಿಗಳಲ್ಲಿ ಉಳಿದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಇರುವವರೇ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು. .!! ಬೆಳಿಗ್ಗೆ ಇಂದ ಸಂಜೆ ವರೆಗೂ ಸಣ್ಣ ಮಕ್ಕಳಿಗೆ ಪಾಠ  ಹೇಳಿಕೊಡುವವರು. ..! ಸಣ್ಣ ಸಂಬಳದವರು...
     

      

Tuesday 1 March 2016

ನಾನು ಮತ್ತು ಅವಳು

ನಾನು ಮತ್ತು ಅವಳು ಉನ್ಮತ್ತ ನಾನು.. ಉದಾರಿ ನೀನು ಅಸಲು ನೀಡಲಾರೆ ನೀ ಕೊಟ್ಟ ಚುಂಬನದ ಸಾಲಕೆ. ಹರಾಜಿನಲ್ಲಿ ನನ್ನ ದೋಚಿಕೋ. ಕನಸುಗಾರ ನಾನು... ಪಂಚರಂಗಿ ನೀನು.. ಲೋಕಕಂಜಿ ಬಿಡಲಾರೆ ಹೆದರಬೇಡ ಜನರ ನಿಯಮಕೆ ಮುಲಾಜೆ ಬೇಡ ನನ್ನ ನಂಬಿಕೊ. ಮಹಾ ಮೌನಿ ನಾನು ಹೂ ಮಳೆ ನೀನು. ಸುರಿದು ಬಿಡು ಸುಮ್ಮನೆ ಮುಳುಗಿ ಹೋದರು... ತೇಲಾಡುವೆ ಒಲವಲಿ. - ರವಿರಾಜ್ ಸಾಗರ್ ( ನನ್ನ" ಬಾವಜೀವಿ" ಬಾವಗೀತೆಗಳ ಸಂಕಲನದ ಒಂದು ಗೀತೆಯ ಸಾಲು ನಿಮ್ಮ ವಿಮರ್ಶೆಗಾಗಿ .)