ಅವಸರದ ಪ್ರಯಾಣ
ಅಪಘಾತಕೆ ಕಾರಣವಾದೀತು...
ಅವಸರದಿ ಗೀಚಿ
ಪತ್ರಿಕೆಗೆ ಕಳಿಸಿದರೆ
ಕಸದ ಬುಟ್ಟಿಗೆ ಸೇರೀತು...
ಎಚ್ಚರವೆಂದ ರವಿರಾಜ ಮಾರ್ಗ.
ಜಗದ ವ್ಯವಸ್ಥೆಯಲಿ ಈಜುವಾಗ
ಭ್ರಷ್ಟಾಚಾರದ ಕೆಸರು ಪಾದಕಂಟದೇ ಬಿಡದು.
ನಿನ್ನ ನಾಲಗೆ ಸುಮ್ಮನಿದ್ದರೂ
ಜಗದ ಜನರ ನಾಲಗೆ ನಿನ್ನ ಬಿಡದು.
ಒಳ್ಳೆಯ ಮರ ಕಂಡರೆ ಎಲ್ಲರಿಗೂ ಇಷ್ಟ. ..
ನೆರಳಲಿ ಕೂತು....
ಕಾಂಡವನ್ನೇ ಕಡಿದೊಯ್ದು
ಬಿಸಿಲೆಂದು ಪೇಚಾಡುವರು.
No comments:
Post a Comment