ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Tuesday, 29 March 2016

ರವಿರಾಜ ಮಾರ್ಗದ ಮೈಲಿಗಲ್ಲುಗಳು...

ಅವಸರದ ಪ್ರಯಾಣ
ಅಪಘಾತಕೆ ಕಾರಣವಾದೀತು...
ಅವಸರದಿ ಗೀಚಿ
ಪತ್ರಿಕೆಗೆ ಕಳಿಸಿದರೆ
ಕಸದ ಬುಟ್ಟಿಗೆ ಸೇರೀತು...
ಎಚ್ಚರವೆಂದ ರವಿರಾಜ ಮಾರ್ಗ.

ಜಗದ ವ್ಯವಸ್ಥೆಯಲಿ ಈಜುವಾಗ
ಭ್ರಷ್ಟಾಚಾರದ ಕೆಸರು ಪಾದಕಂಟದೇ ಬಿಡದು.

ನಿನ್ನ ನಾಲಗೆ ಸುಮ್ಮನಿದ್ದರೂ
ಜಗದ ಜನರ ನಾಲಗೆ ನಿನ್ನ ಬಿಡದು.

ಒಳ್ಳೆಯ ಮರ ಕಂಡರೆ ಎಲ್ಲರಿಗೂ ಇಷ್ಟ. ..
ನೆರಳಲಿ ಕೂತು....
ಕಾಂಡವನ್ನೇ ಕಡಿದೊಯ್ದು
ಬಿಸಿಲೆಂದು ಪೇಚಾಡುವರು.

No comments:

Post a Comment

ಮಕ್ಕಳ ಮನೆ ಮನೆಗೆ marks rigister app

📱 'ಮಾರ್ಕ್ಸ್ ರಿಜಿಸ್ಟರ್' (Marks Register) ಆ್ಯಪ್ !!   ಶಿಕ್ಷಕರ ಶ್ರಮಕ್ಕೆ ತಂತ್ರಜ್ಞಾನದ ಆಸರೆ! ಶಿಕ್ಷಕರ ಕೆಲಸ ಇಂದು ಮುಂಚಿನಂತಿಲ್ಲ. ಬದಲಾಗುತ್ತಿರುವ...