ನನ್ನ ಕವನ "ಕನ್ನಡಮ್ಮನ ಅಳಲು" ಗೆ ಮಾನಸ ಪತ್ರಿಕಾ ಬಳಗ ಪ್ರಥಮ ಬಹುಮಾನಕೆ ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಸನ್ಮಾನಿಸಿದ್ದೂ ಅಲ್ಲದೆ ಬಿಜಾಪುರದ ರಾಜ್ಯ ಮಟ್ಟದ ಕವಿಗೋಷ್ಠಿಗೂ ಆಯ್ಕೆ ಮಾಡಿದ ಸಂಪಾದಕರಾದ ganesh kodur .ಅವರ ದಂಪತಿಗಳು ಸಾಹಿತ್ಯ ಕೃಷಿ ಬದ್ದತೆ ಹೆಚ್ಚಿಸಿ ಪ್ರೋತ್ಸಾಹಿಸಿದಾರೆ .ಸಾಹಿತ್ಯ ಪರಿಷತ್ತಿನ ಸೀಟಿಗಾಗಿಯೇ ಇರುವವರ ನಡುವೆ ಯುವ ಸಾಹಿತಿಗಳನು ಸದಾ ಪೋಷಿಸುವ ಗಣೇಶ್ ಕೋಡೂರ್ ಅವರ ಕಾರ್ಯ ಶ್ಲಾಘನೀಯ. ನಾವು ಅವರಿಗೆ ಅಬಾರಿ. Pramod kumar pattar ಅವರೂ ತಮ್ಮ ಮನ್ವಂತರ ಟ್ರಸ್ಟ್.ಹಾಗೂ ಕೋಡೂರರ ಬೆನಕ ಬುಕ್ಸ ಬ್ಯಾಂಕ್ ಈ ಕಾರ್ಯಕ್ರಮ ಹಲವು ಅಚ್ಚರಿಯೊಂದಿಗೆ ಅಚ್ಚುಕಟ್ಟಾಗಿ ನಿರ್ವಹಿಸಿದ್ದು ವಿಶೇಷ.
ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ
- Home
- ಸಂಪಾದಕೀಯ
- ಮಕ್ಕಳು ಬರೆದ ಕತೆ /ಕವನಗಳು
- ನಮ್ಮೂರ ಸುದ್ದಿಗಳು
- ಮಕ್ಕಳ ಬರಹಗಳು
- ಬಾಲ ಸಾಧಕರು
- ಮಕ್ಕಳು ಬಿಡಿಸಿದ ಚಿತ್ರಗಳು
- ನಮ್ಮೂರ ಜಾನಪದ
- ಜ್ಞಾನ - ವಿಜ್ಞಾನ
- ಸಾಮಾನ್ಯ ಜ್ಞಾನ
- ನಮ್ಮ ಪತ್ರಿಕಾ ಅಭಿಯಾನಗಳು
- ಓದುಗರ ಓಲೆ
- ಅತಿಥಿ ಸಾಹಿತಿಗಳ ಅಂಕಣ
- ಮಕ್ಕಳ ಪುಸ್ತಕಗಳ ಪರಿಚಯ-ಆನ್ ಲೈನ್ ಬುಕ್ ಹೌಸ್
- ಶೈಕ್ಷಣಿಕ ಲೇಖನಗಳು
- ಶೈಕ್ಷಣಿಕ ಚಟುವಟಿಕೆಗಳು
- ಲಾಂಗ್ವೇಜ್ ಕಾರ್ನರ್
- 1ರಿಂದ -puc ತರಗತಿ ಈ ಶಾಲೆ
- ನನ್ನ ಶೈಕ್ಷಣಿಕ ವೀಡಿಯೋಗಳು
- ಸಾರ್ವಜನಿಕ ಶಿಕ್ಷಣ ಇಲಾಖೆ
- ಹಿಂದಿನ ಸಂಚಿಕೆಗಳು ಮತ್ತು ಪತ್ರಿಕೆ ಕುರಿತು ಮಾಧ್ಯಮ ವರದಿ ...
- ನಮ್ಮ ಕುರಿತು ಫೋಟೋ ಗ್ಯಾಲರಿ
- ಅಂಕಣ ಬರಹ- ಕನಸುಗಳೂರ ಶ್ರಮಿಕ
- ಆನ್ಲೈನ್ ಪುಸ್ತಕ ಮಳಿಗೆಗಳು
- ಪಿಡಿಎಫ್ ಪುಸ್ತಕಗಳು.
- Ravichandra
- ಆನ್ಲೈನ್ ಪಾಠಗಳು - ದೀಕ್ಷಾ ಪೊರ್ಟಲ್
- ಇನ್ನೋವೇಟಿವ್ ಎಜ್ಯುಕೇಶನ್
Sunday 6 November 2016
Wednesday 26 October 2016
ಸಾಮಾನ್ಯ ವಿಜ್ಞಾನ ತಿಳಿಯಿರಿ
*ಸಾಮಾನ್ಯ ವಿಜ್ಞಾನ*
1) ವಿಶ್ವದಲ್ಲಿ ಅತಿ ಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಜಲಜನಕ.*
2) ಅತಿ ಹಗುರವಾದ ಲೋಹ ಯಾವುದು?
* *ಲಿಥಿಯಂ.*
3) ಅತಿ ಭಾರವಾದ ಲೋಹ ಯಾವುದು?
* *ಒಸ್ಮೆನೆಯಂ.*
4) ಚಿನ್ನವನ್ನು ಶುದ್ಧೀಕರಿಸುವ ವಿಧಾನ
ಯಾವುದು?
* *ಸೈನೈಡೇಶನ್.*
5) ಅತಿ ಹಗುರವಾದ ಮೂಲವಸ್ತು ಯಾವುದು?
* *ಜಲಜನಕ.*
6) ಭೂಮಿಯ ವಾತಾವರಣದಲ್ಲಿ ಅತಿಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಸಾರಜನಕ.*
7) ಪ್ರೋಟಾನ್ ಕಂಡು ಹಿಡಿದವರು ಯಾರು?
* *ರುದರ್ ಫರ್ಡ್.*
8) ಭೂಮಿಯ ಮೇಲ್ಪದರಲ್ಲಿ ಅತಿ ಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಆಮ್ಲಜನಕ.*
9) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು
ಯಾರು?
* *ಜೇಮ್ಸ್ ಚಾಡ್ ವಿಕ್.*
10) ಎಲೆಕ್ಟ್ರಾನ್ ಗಳನ್ನು ಕಂಡು ಹಿಡಿದವರು
ಯಾರು?
* *ಜೆ.ಜೆ.ಥಾಮ್ಸನ್.*
11) ಒಂದು ಪರಮಾಣುವಿನಲ್ಲಿರುವ
ಪ್ರೋಟಾನ್ ಅಥವಾ ಎಲೆಕ್ಟ್ರಾನ್ ಗಳ
ಸಂಖ್ಯೆಯೇ -----?
* *ಪರಮಾಣು ಸಂಖ್ಯೆ.*
12) ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ 2 ನೇ
ಮೂಲವಸ್ತು ಯಾವುದು?
* *ಹಿಲಿಯಂ.*
13) ಮೂರ್ಖರ ಚಿನ್ನ ಎಂದು ಯಾವುದನ್ನು
ಕರೆಯುತ್ತಾರೆ?
* *ಕಬ್ಬಿಣದ ಪೈರೆಟ್ಸ್.*
14) ಪೌಂಟೆನ್ ಪೇನ್ ನ ನಿಬ್ ತಯಾರಿಸಲು -----
ಬಳಸುತ್ತಾರೆ?
* *ಒಸ್ಮೆನಿಯಂ.*
15) ಪ್ರಾಚೀನ ಕಾಲದ ಮಾನವ ಮೊದಲ
ಬಳಸಿದ ಲೋಹ ಯಾವುದು?
* *ತಾಮ್ರ.*
16) ಉದು ಕುಲುಮೆಯಿಂದ ಪಡೆದ ಕಬ್ಬಿಣ
ಯಾವುದು?
* *ಬೀಡು ಕಬ್ಬಿಣ.*
17) ಚಾಲ್ಕೋಪೈರೇಟ್ ಎಂಬುದು ------- ದ
ಅದಿರು.
* *ತಾಮ್ರದ.*
18) ಟಮೋಟದಲ್ಲಿರುವ ಆಮ್ಲ ಯಾವುದು?
* *ಅಕ್ಸಾಲಿಕ್.*
20) "ಆಮ್ಲಗಳ ರಾಜ" ಎಂದು ಯಾವ
ಆಮ್ಲವನ್ನು ಕರೆಯುವರು?
* *ಸಲ್ಫೂರಿಕ್ ಆಮ್ಲ.*
21) ಕಾಸ್ಟಿಕ್ ಸೋಡದ ರಾಸಾಯನಿಕ
ಹೆಸರೇನು?
* *ಸೋಡಿಯಂ ಹೈಡ್ರಾಕ್ಸೈಡ್.*
22) "ಮಿಲ್ಖ್ ಆಫ್ ಮೆಗ್ನಿಷಿಯಂ" ಎಂದು
ಯಾವುದನ್ನು ಕರೆಯುವರು?
* *ಮೆಗ್ನಿಷಿಯಂ ಹೈಡ್ರಾಕ್ಸೈಡ್.*
23) ಅಡುಗೆ ಉಪ್ಪುವಿನ ರಾಸಾಯನಿಕ
ಹೆಸರೇನು?
* *ಸೋಡಿಯಂ ಕ್ಲೋರೈಡ್.*
24) ಗಡಸು ನೀರನ್ನು ಮೃದು ಮಾಡಲು -----
ಬಳಸುತ್ತಾರೆ?
* *ಸೋಡಿಯಂ ಕಾರ್ಬೋನೆಟ್.*
25) ಕೆಂಪು ಇರುವೆ ಕಚ್ಚಿದಾಗ ಉರಿಯಲು
ಕಾರಣವೇನು?
* *ಪಾರ್ಮಿಕ್ ಆಮ್ಲ.*
26) ಗೋಧಿಯಲ್ಲಿರುವ ಆಮ್ಲ ಯಾವುದು?
* *ಗ್ಲುಮಟಿಕ್.*
27) ಪಾಲಾಕ್ ಸೊಪ್ಪುವಿನಲ್ಲಿರುವ ಆಮ್ಲ
ಯಾವುದು?
* *ಪೋಲಿಕ್.*
28) ಸಾರಜನಕ ಕಂಡು ಹಿಡಿದವರು ಯಾರು?
* *ರುದರ್ ಪೊರ್ಡ್.*
29) ಆಮ್ಲಜನಕ ಕಂಡು ಹಿಡಿದವರು ಯಾರು?
* *ಪ್ರಿಸ್ಟೆ.*
30) ಗಾಳಿಯ ಆರ್ದತೆ ಅಳೆಯಲು ----
ಬಳಸುತ್ತಾರೆ?
* *ಹೈಗ್ರೋಮೀಟರ್.*
31) ಹೈಗ್ರೋಮೀಟರ್ ಅನ್ನು ----- ಎಂದು
ಕರೆಯುತ್ತಾರೆ?
* *ಸೈಕೋಮೀಟರ್.*
32) ಯಾವುದರ ವಯಸ್ಸು ಪತ್ತೆಗೆ ಸಿ-14
ಪರೀಕ್ಷೆ ನಡೆಸುತ್ತಾರೆ?
* *ಪಳೆಯುಳಿಕೆಗಳ.*
33) ಕೋಬಾಲ್ಟ್ 60 ಯನ್ನು ಯಾವ
ಚಿಕಿತ್ಸೆಯಲ್ಲಿ ಬಳಸುತ್ತಾರೆ?
* *ಕ್ಯಾನ್ಸರ್.*
34) ಡುರಾಲು ಮಿನಿಯಂ ಲೋಹವನ್ನು
ಯಾವುದರ ತಯಾರಿಕೆಯಲ್ಲಿ ಬಳಸುತ್ತಾರೆ?
* *ವಿಮಾನ.*
35) ನೀರಿನಲ್ಲಿ ಕರಗುವ ವಿಟಮಿನ್ ಗಳು
ಯಾವುವು?
* *ಬಿ & ಸಿ.*
36) ರಿಕೆಟ್ಸ್ ರೋಗ ಯಾರಲ್ಲಿ ಕಂಡು
ಬರುವುದು?
* *ಮಕ್ಕಳಲ್ಲಿ.*
37) ಕಾಮನ ಬಿಲ್ಲಿನಲ್ಲಿ ಅತಿ ಹೆಚ್ಚು
ಬಾಗಿರುವ ಬಣ್ಣ ಯಾವುದು?
* *ನೇರಳೆ.*
38) ಕಾಮನ ಬಿಲ್ಲಿನಲ್ಲಿ ಅತಿ ಕಡಿಮೆ ಬಾಗಿರುವ
ಬಣ್ಣ ಯಾವುದು?
* *ಕೆಂಪು.*
39) ಆಲೂಗಡ್ಡೆ ಯಾವುದರ
ರೂಪಾಂತರವಾಗಿದೆ?
* *ಬೇರು.*
40) ಮಾನವನ ದೇಹದ ಉದ್ದವಾದ ಮೂಳೆ
ಯಾವುದು?
* *ತೊಡೆಮೂಳೆ(ಫೀಮರ್).*
41) ವಯಸ್ಕರಲ್ಲಿ ಕೆಂಪು ರಕ್ತಕಣಗಳು
ಹುಟ್ಟುವ ಸ್ಥಳ ಯಾವುದು?
* *ಅಸ್ಥಿಮಜ್ಜೆ.*
42) ಲಿವರ್(ಯಕೃತ್)ನಲ್ಲಿ ಸಂಗ್ರಹವಾಗುವ
ವಿಟಮಿನ್ ಯಾವು?
* *ಎ & ಡಿ.*
43) ರಿಕೆಟ್ಸ್ ರೋಗ ತಗುಲುವ ಅಂಗ
ಯಾವುದು?
* *ಮೂಳೆ.*
44) ವೈರಸ್ ಗಳು ----- ಯಿಂದ
ರೂಪಗೊಂಡಿರುತ್ತವೆ?
* *ಆರ್.ಎನ್.ಎ.*
45) ತಾಮ್ರ & ತವರದ ಮಿಶ್ರಣ ಯಾವುದು?
* *ಕಂಚು.*
46) ತಾಮ್ರ & ಸತುಗಳ ಮಿಶ್ರಣ ಯಾವುದು?
* *ಹಿತ್ತಾಳೆ.*
47) ಎಲ್ ಪಿ ಜಿ ಯಲ್ಲಿರುವ ಪ್ರಮುಖ ಅನಿಲಗಳು
ಯಾವುವು?
* *ಬ್ಯೂಟೆನ್ & ಪ್ರೋಫೆನ್.*
48) ಚೆಲುವೆ ಪುಡಿಯ ರಾಸಾಯನಿಕ ಹೆಸರೇನು?
* *ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್.*
49) ವನಸ್ಪತಿ ತುಪ್ಪ ತಯಾರಿಕೆಯಲ್ಲಿ
ಬಳಸುವ ಅನಿಲ ಯಾವುದು?
* *ಜಲಜನಕ.*
50) ಕಾಯಿಗಳನ್ನು ಹಣ್ಣು ಮಾಡಲು ಬಳಸುವ
ರಾಸಾಯನಿಕ ಯಾವುದು?
* *ಎಥಲಿನ್.*
51) ಆಳಸಾಗರದಲ್ಲಿ ಉಸಿರಾಟಕ್ಕೆ
ಆಮ್ಲಜನಕದೊಂದಿಗೆ ಬಳಸುವ ಅನಿಲ
ಯಾವುದು?
* *ಸಾರಜನಕ.*
52) ಭೂ ಚಿಪ್ಪಿನಲ್ಲಿ ಅಧಿಕವಾಗಿರುವ ಲೋಹ
ಯಾವುದು?
* *ಅಲ್ಯೂಮೀನಿಯಂ.*
53) ಹಾರುವ ಬಲೂನ್ ಗಳಲ್ಲಿ ಬಳಸುವ ಅನಿಲ
ಯಾವುದು?
* *ಹೀಲಿಯಂ.*
54) ಪರಿಶುದ್ಧವಾದ ಕಬ್ಬಿಣ ಯಾವುದು?
* *ಮ್ಯಾಗ್ನಟೈಟ್.*
55) ಅಗ್ನಿಶಾಮಕಗಳಲ್ಲಿ ಬಳಸುವ ಅನಿಲ
ಯಾವುದು?
* *ಕಾರ್ಬನ್ ಡೈ ಆಕ್ಸೈಡ್.*
56) ಮೃದು ಪಾನಿಯಗಳಲ್ಲಿ ಬಳಸುವ ಅನಿಲ
ಯಾವುದು?
*ಕಾರ್ಬೋನಿಕ್ ಆಮ್ಲ.*
57) ಹಣ್ಣಿನ ರಸ ಸಂರಕ್ಷಿಸಲು ಬಳಸುವ
ರಾಸಾಯನಿಕ ಯಾವುದು?
*ಸೋಡಿಯಂ ಬೆಂಜೋಯಿಟ್.*
58) "ಆತ್ಮಹತ್ಯಾ ಚೀಲ"ಗಳೆಂದು ------
ಗಳನ್ನು ಕರೆಯುತ್ತಾರೆ?
* *ಲೈಸೋಜೋಮ್*
59) ವಿಟಮಿನ್ ಎ ಕೊರತೆಯಿಂದ ----
ಬರುತ್ತದೆ?
*ಇರುಳು ಕುರುಡುತನ*
60) ಐಯೋಡಿನ್ ಕೊರತೆಯಿಂದ ಬರುವ ರೋಗ
ಯಾವುದು?
*ಗಳಗಂಡ (ಗಾಯಿಟರ್)*
Friday 14 October 2016
ಕೃಷಿ ಉದ್ಯಮಾಧಿಪತ್ಯ ಯಾರ ಕೈಲಿದೆ..?
ಕೃಷಿ ಉಧ್ಯಮಾಧಿಪತ್ಯ ಯಾರ ಕೈಲಿದೆ...?
ರೈತರಿಗಾಗಿ ಸ್ವತಂತ್ರ ಭಾರತದಲ್ಲಿ 60 ವರ್ಷಗಳಿಂದ ಅದೆಷ್ಟು ಯೋಜನೆಗಳು ಬಂದಿವೆ.ಅದೆಷ್ಟು ಸಹಸ್ರ ಲಕ್ಷ ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲಾಗಿದೆ ಎಂದು ಲೆಕ್ಕ ಹಾಕಿದರೆ ಭಾರತದ ರೈತರಿಗೆ ಅದನ್ನು ನೇರವಾಗಿ ಹಂಚಿದ್ದರೆ ಅವರೆಲ್ಲ ಲಕ್ಷಾದೀಶರಾಗಿ ಇರುತ್ತಿ ದರು.ಆದರೆ ಹಾಗಾಗಲೇ ಇಲ್ಲ. ಬದಲಾಗಿ ಕೃಷಿ ಭೂಮಿ ಕಾರ್ಖಾನೆ, ರಿಯಲ್ ಎಸ್ಟೇಟ್ ಉದ್ಯಮ ಕ್ಕೆ ಬಲಿಯಾಯಿತು.
ಆದರೆ ಹಣ ಏನಾಯಿತು . .? ರೈತರ ಹೆಸರಿನ ಯೋಜನೆಗಳ ಹಣ ಅನುಷ್ಠಾನದ ಮಾರ್ಗದಲ್ಲಿಯೇ ಮಂತ್ರಿಗಳು. ರಾಜಕೀಯ ಪಕ್ಷಗಳ ನಾಯಕರು, ಅಧಿಕಾರ ಶಾಹಿಗಳು... ಉದ್ಯಮಿಗಳ ಮನೆ ಸೇರಿ ಅವರ ಆಸ್ತಿ ಏಣಿಸಲಾಗದಷ್ಟು ಬೆಳೆಯಿತೇ ಹೊರತು ರೈತ ಉದ್ದಾರ ಸಾಧ್ಯ ಆಗಲಿಲ್ಲ.
ತಾವು ದುಡಿದು ಬಂಡವಾಳ ಹೂಡಿಕೆ ಮಾಡಿ ತಮ್ಮ ಹೊಲದಲಿ ಬೆಳೆಬೆಳೆದ ಬೆಳೆಗೆ ರೈತರಿಗೆ ಲಾಭದ ಬೆಲೆಗೆ ಮಾರಾಟ ಮಾಡುವ ವ್ಯವಸ್ಥೆ ಇಲ್ಲ. ಆದರೆ ಯಾರನ್ನೋ ದುಡಿಸಿ... ಯಾರದೋ ಕಚ್ಚಾ ವಸ್ತು ಬಳಸುವ ಕಾರ್ಖಾನೆ ಮಾಲೀಕರು, ಉದ್ಯಮಿಗಳು ತಮ್ಮ ಉತ್ಪನ್ನ ವನ್ನು ತಮಗಿಷ್ಟ ಬಂದ ಲಾಭಕ್ಕೆ ಮಾರಾಟ ಮಾಡುವ ವ್ಯವಸ್ಥೆ ಇದೆ. ಇದೆಂತ ನ್ಯಾಯ..?
ರೈತರ ಉತ್ಪನ್ನಗಳ ಬೆಲೆ ಆತನೇ ನಿರ್ಧರಿಸುವಂತಾಗಿ ರೈತನಿಗೆ ಸೂಕ್ತ ಲಾಭ ತರುವಂತೆ ಮಾಡುವುದು ನಮ್ಮ ವ್ಯವಸ್ಥೆಯಲ್ಲಾಗಲೇ ಬೇಕಾದ ತುರ್ತು ಬದಲಾವಣೆ ಆಗಿದೆ. ಆದರೆ ಕೃಷಿಯೂ ಉಧ್ಯಮವೆಂದು ಪರಿಗಣಿಸಿ ಕೃಷಿ ಉಧ್ಯಮಾಧಿಪತ್ಯ ರೈತರೇ ಸಾದಿಸುವಂತಾಗುವುದು ಸಾಧ್ಯವೇ...? ನಮ್ಮ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಿರುವ ವರ್ತಕರ ಗುಂಪು ಇದಕ್ಕೆ ಅವಕಾಶ ನೀಡದು.ಕಬ್ಫು. ಅಡಿಕೆ, ತೆಂಗು,ಹತ್ತಿ.. ತೊಗರಿ ಯಂತಹ ಬೆಳೆ ಮಾರುಕಟ್ಟೆಯೇ ದೊಡ್ಡ ದೊಡ್ಡ ರಪ್ತುದಾರರ ಹಿಡಿತದಲ್ಲಿದ್ದು ಅದು ಯಾವಾಗ ಬೇಕಾದರೂ ಬೆಲೆ ಏರಿಕೆ, ಇಳಿಕೆ ಮಾಡುವ.... ಕೃತಕ ಅಭಾವ ಸೃಷ್ಟಿಸಿ ಮಾರುಕಟ್ಟೆ ನಿಯಂತ್ರಣ ಮಾಡುವ ಅವರ ಚಿದಂಬರ ರಹಸ್ಯ ಬಯಲು ಮಾಡಲು ನಮ್ಮ ರೈತ ಒಕ್ಕೂಟ ಗಳು ಮುಂದಾಗಬೇಕು. ಇಲ್ಲವಾದರೆ ರೈತರೆಂದೂ ಕೃಷಿ ಉತ್ಪನ್ನ ಮಾರುಕಟ್ಟೆ ಯ ಹಾವು ಏಣಿ ಆಟ ಆಡುತ್ತ, ನೋಡುತ್ತ ಕೂರಬೇಕಷ್ಟೇ...
ನಿಮ್ಮ ಅನಿಸಿಕೆ ಇದೇ ಆಗಿದ್ದರೆ ಶೇರ್ ಮಾಡಿ. ಆಗದಿದ್ದರೂ ಶೇರ್ ಮಾಡಬಹುದು...
@ ರವಿರಾಜ್ ಸಾಗರ್.
Friday 7 October 2016
ಅಮುಕ್ತ
Tuesday 4 October 2016
ನಲಿ ಕಲಿ ಮೆಟ್ಟಿಲು ವಿವಿವರ
ನಲಿಕಲಿ ತರಗತಿಯಲ್ಲಿ ಇರಬೇಕಾದ ಕಾರ್ಡುಗಳ ಸಂಖ್ಯೆ
ವಿಷಯ ಕನ್ನಡ
ತರಗತಿ = 1 +2 +3
ಹುಡುಗ ಹುಡುಗಿ =11 + 12 +11
ಬಾಯಿ =08 +04 +01
ಇಲಿಗಳ ಮ ಗಂ =02 +02 +00
ಡ ಮೇ ಮಂಗ = 05+ 03+ 02
ನಾಯಿ =17 +16 +00
ಪು ಮಗು =00 +00 +07
ರೈಲು ಇಂ =02 +00 +00
ಡ ಬ್ರಷ್ =03 +04 +04
ಕರು =10 +00 +00
ಲೇ ಹಿ ಬ ಕೈ =49 +32+ 09
ಮೀನು =09 +05 +12
ನರಿ =17 +08 +11
ಮೊಲ = 00 +00 +11
ಅಳಿಲು = 00 +00 +11
ಕ ಹ ಮೇ ಬ ಬಾ =01 +00 +00
ಮೊಸಳೆ =17+ 18 +00
ಹಸು =17 +18 +00
ಜಿಂಕೆ =17+ 17 +00
ಕುರಿ =17 +00 +00
ಆಮೆ =04 +08 +00
ಒಂಟೆ =00 +08+ 00
ಜಿರಾಫೆ =10 +00 +07
ಕುದುರೆ =00+ 05 +00
ಏಡಿ =00 +13 +02
ಹಾವು =04 +00 +09
ಸಿಂಹ =05 +04 +09
ಝಿಬ್ರಾ =00 +01 +02
ಒಟ್ಟು ಕಾರ್ಡು =225 +178 +108
ಟಿಎಲ್ಎಮ್
ಸೀತಾಫಲ =01+ 00 +00
ತಾರಾನಾಥ =01 +00+ 00
ಗುಣಿತಾಕ್ಷಿ =01+ 00 +00
ಅಭ್ಯಾಸ ಪುಸ್ತಕ =75+ 82 +97
ವಾಚಕ =50 +50 +40
ಒಟ್ಟು ಮೆಟ್ಟಿಲು =360+ 310 +245
ವಿಷಯ ಗಣಿತ
ತರಗತಿ = 1+2+3
ಮೊ ಹೊ ಕೋ ಮ =14 +01 +00
ಕೋಗಿಲೆ =20 +17 +21
ಚಂಡು = 19 +15 +20
ಪ್ಲೆ ಬ್ರಷ್ =01 +02+ 00
ಕಕಹಾಪ =04 +04+ 04
ಬಾತುಕೋಳಿ =04+ 04+ 04
ಕೋ ಮ ಮರಿ =02 +02+ 00
ಗಂ ಬೇರುಂಡ =02+ 02 +02
ಜಾರುಬಂಡಿ = 02 +02 +00
ಹಂಸ =16 +03 +05
+-×÷ =01 +04 +02
ಅಬಾಕಸ್ =01+ 00 +01
ಏಣಿ =00 +01 +00
ನವಿಲು =00 +02 +02
ಮರಕುಟಿಗ =00 +02 +01
ಜೋಡಿ ಕೊಕ್ಕರೆ =00+ 03 +04
ಕೈವಾರ =01 +02 +02
ಸ್ಕೇಲ್ =01+ 01 +04
ಗಡಿಯಾರ =01 +01+ 03
ನಾಣ್ಯ =01 +01+ 02
ತೂಕದ ಬೊಟ್ಟು =00+ 01+ 02
ಲೀಟರ =00 +01 +02
ಪಾರಿವಾಳ =00 +00 +01
ಬಾವಲಿ =00 +00 +02
ಹುಂಜ =00 +01 +02
ಆಮೆ =01 +00 +00
ಲೇ ಹಿ ಬ ಕೈ =02 +01 +01
ಬಾಯಿ =11 +22+ 09
ರೈಲ ಇಂಜಿನ್ =01+ 00+ 00
ಡೈಸ್ =12 +19 +18
ಗಣಕ ಯಂತ್ರ =00+ 01+ 01
ಗೀ ಗೂಡು =00 +00 +05
ಗರುಡ =01+ 01 +03
ಕ್ಲಿಪ್ ಆ ಪ್ಯಾಡ್ =26 +38 +20
ತಕ್ಕಡಿ =02+ 02+ 04
ಒಟ್ಟು ಕಾರ್ಡು =146+ 145+ 147
ಪೆಂಗ್ವಿನ್ =15 +07 +04
ಜೋಡಿಗಿಳಿ =99 +153 +169
ಒಟ್ಟು ಮೆಟ್ಟಿಲು =260 +315+ 320
ವಿಷಯ ಪರಿಸರ ಅಧ್ಯಯನ
ತರಗತಿ = 1+2+3
ದುಂಬಿ =12 +10 +14
ಪೆನ್ಸಿಲ್ =02+ 02 +03
ವಿಮಾನ ಚಿಟ್ಟೆ =05 +07 +02
ಜೇಡ =05 +05+ 01
ಹತ್ತಿಗೊಂಬೆ =01+ 02 +01
ಸೂ ಮೋಡ =01+ 01 +01
ಶತಪದಿ =02 +01 +01
ಚಿಟ್ಟೆ =12 +15 +38
ಕತ್ತರಿ =00 +00+ 02
ಮಿಡತೆ =00 +03 +00
ಜೋಕರ =03+ 02 +02
ಜಾದೂಗಾರ =08 +06 +07
ಬ ಹುಳು =00+ 08 +00
ದಾಸವಾಳ =00+ 00+ 03
ಡ ಕೈ =00 +00 +08
ಸೂರ್ಯಕಾಂತಿ =02+ 02 +02
ಇರುವೆ ಸಾ =04 +04 +07
ಕಪ್ಪೆ =00 +00+ 02
ಜೇನುಹುಳು =00 +05+ 02
ಒಟ್ಟು ಕಾರ್ಡು =57 +73 +96
ಜೋಡಿ ಗುಲಾಬಿ =63+ 62 +104
ಒಟ್ಟು ಮೆಟ್ಟಿಲು =120 +135 +200
ಇಲಾಖೆಯಿಂದ ಬದಲಾವಣೆಯಾದಾಗ ದಯವಿಟ್ಟು ತಿದ್ದುಪಡಿಮಾಡಿಕೊಳ್ಳಿರಿ.
ಧನ್ಯವಾದಗಳು.
ಕೃಪೆ: ವಾಟ್ಸ್ ಆಪ್ ಗ್ರೂಪ್.
Friday 30 September 2016
"ನರಲೀಲೆ" ಕೃತಿ ಕುರಿತು ಒಂದು ವಿಮರ್ಶೆ
*ನರಲೀಲೆ* ಕವನ ಸಂಕಲನವನ್ನು ಶಿವಮೊಗ್ಗದಿಂದ ಕಳಿಸಿಕೊಟ್ಟಿರುವ ಆತ್ಮೀಯ ಸ್ನೇಹಿತರಾದ *ರವಿರಾಜ್ ಸಾಗರ* ಅವರಿಗೆ ಧನ್ಯವಾದಗಳು.
ಎಂಥಹವರ ಹೃದಯವನ್ನು ತಟ್ಟಬಲ್ಲ, ನರನ ಕೃತ್ಯಗಳನ್ನು ವಿವೇಚಿಸುವಂತೆ ಮಾಡಬಲ್ಲ, ಸರಳವಾಗಿ ಓದಿಸಿಕೊಂಡು ಹೋಗುವ ವಿಭಿನ್ನ ಕವನ ಸಂಕಲನ. ಇತಿಹಾಸದ ಪುಟಗಳ ಸಾಕ್ಷಿಯಾಗಿ ಮನುಷ್ಯನ ನರಲೀಲೆಗಳ ರೌದ್ರತೆಯನ್ನು ವರ್ಣಿಸಿದ್ದಾರೆ. ಲೋಕದ ಬಾಯಾರಿಕೆಯನ್ನು ಹೋಗಲಾಡಿಸುವ ನೀರು ತಾನೇ ಬಾಯಾರಿ ಬಳಲಿ ಸಾಯುವ ವಸ್ತುವುಳ್ಳ ಕವಿತೆ *ಬಾಯಾರಿದ ನೀರು* ಅದ್ಭುತ, ಕಾವೇರಿದ ಕಾವೇರಿಯ ಗಲಾಟೆಯಲ್ಲಿ ಪ್ರಸ್ತುತ ಕೂಡ.ವಿಧಿಯ ದೈವದಾಟಕ್ಕೆ ಮನುಷ್ಯ ಸಾವಿನ ನಂತರ ಉಸಿರು ನಿಲ್ಲಿಸುತ್ತಾನೆ. ಆದರೆ *ಉಸಿರಾಡುತ್ತಿವೆ ಹೆಣಗಳು* ಕವನದಲ್ಲಿ ಸಾವಿನ ನಂತರವೂ ಉಸಿರಾಟ ನಡೆದಿದೆ. *ನನ್ನೊಳಗಿನ ಬೆಂಕಿ*ಯಲ್ಲಿ ಪಂಚೇಂದ್ರಿಯಗಳೇ ಸೌದೆಗಳಾಗಿ ಒಳಗಿನ ಬೆಂಕಿಯ ಜ್ವಾಲೆಯನ್ನು ಮತ್ತೆ ಹೆಚ್ಚಿಸುತ್ತಿವೆ. *ಕಲ್ಲಣ್ಣನ ಮನವಿ* ಕವನದಲ್ಲಿ 'ಕಲ್ಲು ಕಣ್ಣೀರಿಟ್ಟಿತು..! ನೀರು ಬಾಯಾರಿಕೆ ಸತ್ತ ಕಥೆ ಕೇಳಿ.ಮೋಡಣ್ಣನಿಗೆ ಮನವಿ ಮಾಡಿತು; ಧರಣಿಗೆ ಡೈವರ್ಸ್ ಕೊಡುವ ಮೊದಲು ಜೀವನಾಂಶವನ್ನಾದರೂ ಕೊಡು' ಎಂಬ ಸಾಲುಗಳು ಅದ್ಭುತ! *ತುಂಬಿದ ಹೊಟ್ಟೆಗೆ ಮತ್ತೆ ಹಸಿವು* ಕವನದಲ್ಲಿ *ಡಿ.ವಿ.ಜಿ.*ಯವರ ಅನ್ನದಾತುರಕ್ಕಿಂತ ಚಿನ್ನದಾತುರವು.... ಎಂಬ ಸಾಲುಗಳನ್ನು ಮತ್ತೆ ನೆನಪಿಸಿದ್ದಾರೆ.
ಕೊನೆಯ ಮಾತಾಗಿ ಕವನ ಸಂಕಲನವನ್ನು ಒಂದು ಸಲ ಓದಲೇಬೇಕು.
*ಮಹೇಶ ಗಾಣಿಗೇರ, ವಿಜಯಪುರ*
ಭಾವಗಗನ ವಿಹಾರಿ
ಭಾವಗಗನ ವಿಹಾರ
......................
ಅನಂತ ಬಾವಗಳ ಗಗನ ವಿಹಾರಿ ನಾನು ಸ್ವಾತಿಮಳೆಯಲಿ ಬಿದ್ದ ಕನಸುಗಳ
ಕಪ್ಪೆಚಿಪ್ಪಿನಲಿ ಬಚ್ಚಿಟ್ಟಿರುವೆ.
ಹುಚ್ಚು ಆಸೆಗಳ ಜಡಿಮಳೆಯಲಿ ನೆನೆದವಳು
ಬಣ್ಣದ ಕೊಡೆಯೊಳಗೆ ಸೇರಿ ಬಿಸಿಲು ಮಳೆಯ ಮದುವೆ ಕತೆ ಹೇಳಿ ಸಂಜೆ ಕಡಲಂಚಲಿ
ನನ್ನ ಹೆಸರ ಗೀಚಿದಳು ಅವಳ ಹೆಸರ ಜೊತೆಗೆ. ಕೆಣಕುವ ಕಡಲೂ ಅವಳತ್ತ ಸಾಗದೇ
ಹೆಸರನು ಅಳಿಸಲೇ ಇಲ್ಲ. .!
ಜಡಿ ಮಳೆ ಗಾಳಿ ಮೌನ ತಾಳಿ
ಅವಳ ಕಣ್ಣ ಕಡಲಿಗೆ ತಳ್ಳಿದವು. ಇನ್ನೇನು ಮಾಡಲಿ...!! ಖಾಲಿ ಮನಸಿನ ಪೋಲಿ ಕನಸಿದು... ಗೇಲಿ ಮಾಡಬೇಡಿ...!!
ಈಗ ಸೂರ್ಯನೂರ ಸುಂದರಿಗೆ ಗೋರಂಟಿ ಹಾಕಿಬರುವೆ..
ಸುಟ್ಟು ಹೋಗದಿರೆ ಮತ್ತೆ ಸಿಗುವೆ.
#ರವಿರಾಜ್ ಸಾಗರ್ .
-
ಚಿಕ್ಕಂದಿನಲ್ಲಿ ನಮಗೆ ಬರುತ್ತಿದ್ದ, ನಾವೆಲ್ಲಾ ಹಾಡುತ್ತಿದ್ದ ಮರೆಯಲಾಗದ ಪದ್ಯಗಳು.. ಇವುಗಳಲ್ಲಿ ನಿಮಗೆಷ್ಟು ಗೊತ್ತು.. ತಿಳಿಸಿ..* ❤️❤️❤️...
-
ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಶಾಲಾಮಾಹಿತಿ ಸಲ್ಲಿಸಿ. ಈ ಮೇಲಿನ ಲಿಂಕ್ ಮಾಡಿ ಬೇಡಿಕೆ ಮಾಹಿತಿ ಸಲ್ಲಿಸಲು ಕೋರುವೆವು.
-
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಳೂರು ಶಾಲಾ ಮಕ್ಕಳ ಮಂತ್ರಿಮಂಡಲದಿಂದ ಶಾಲೆಯಲ್ಲಿ ಆಟದ ಮೈದಾನ, ವಿವಿಧ ಕ್ರೀಡಾಂಗಣ, ಶಾಲಾ ಪ್ರಾರ್ಥನ ಅಂಕಣದಲ್ಲಿ ಸಿಮೆಂಟ್ ಬ್ರಿಕ್...