ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Friday, 7 October 2016

ಅಮುಕ್ತ

ಅಮುಕ್ತ.... ತಾಯಿ ಗೂಡು ತೊರೆದು ಬಾನಿಗೆ ಹಾರಿದ ಹಕ್ಕಿಗೆ ಮತ್ತೆಂದೂ ತಾಯಗೂಡೇ ಹಿತವೆನಿಸದೇ.? ಎಲ್ಲ ತೊರೆದ ಸನ್ಯಾಸಿ ಮಠದೊಳಗೆ ಮಿನುಗುವ ಹಣ ಹೆಣ್ಣಿಗೆ ಸೋಲದೆ ಹೇಗಿರುವನು....? ಸತ್ಯ,ನಿಷ್ಠೆ, ಪ್ರಾಮಾಣಿಕ ತೆ ಬೋದಿಸಿ ಗೆದ್ದ ರಾಜಕಾರಣಿ ಮುಕ್ತವಾಗಿ ಉಳಿದಾನೆಯೇ..? ಬುದ್ದ ಬಸವ ಏಸು ಮಹಮದ್ ....ಅದೆಷ್ಟು ಜನ ಬಂದು ಅದೆಷ್ಟು ಧರ್ಮ ಚಳುವಳಿ ಮಾಡಿಹೋದರೂ.... ಜನ ಸ್ವಾರ್ಥ ಗಡಿ ಮುಕ್ತರಾದರೇ..? ಜಗದ ತುಂಬಾ ಗುಡಿ ಚರ್ಚು ಮಸೀದಿ ಎದ್ದವಾದರೂ .ನ್ಯಾಯ. ನೀತಿ ಸಹಬಾಳ್ವೆ , ಶಾಂತಿ ನೆಲೆಸೀತೇ..? ಹೇ...ಬುಧ್ಧ... ನಿಜ. ಹೇಳು.... ನಿನಗೆ ಮತ್ತೆಂದೂ ಸಂಸಾರ ಭವ ಬಂಧನದಲಿ ಅದೇನೋ..... ಇದೆ ; ಎಂದು ಮತ್ತೆಂದೂ ಅನಿಸಲೇ ಇಲ್ಲವೇ..? ಬದುಕಿ ಸಾದಿಸುವಾಸೆಯಿಲ್ಲದ ದೇಹ ಬದುಕುವುದೇಕೆ...? ಮುಕ್ತಿಗಾಗಿ ಹಂಬಲಿಸಿ ಮನುಜ ಏನೆಲ್ಲ ಮಾಡಿದರೂ ಏನಾಗಿಹನಿಂದು...? ನರಗುಣವ ಹರನಿಗೂ ಬದಲಿಸಲಾಗಲಿಲ್ಲ ಜಗವನ್ನೇ ನರ ಬದಲಾಯಿಸಿಹನು. ರವಿರಾಜ್ ಸಾಗರ್..

No comments:

Post a Comment

ಮಕ್ಕಳ ಮನೆ ಮನೆಗೆ marks rigister app

📱 'ಮಾರ್ಕ್ಸ್ ರಿಜಿಸ್ಟರ್' (Marks Register) ಆ್ಯಪ್ !!   ಶಿಕ್ಷಕರ ಶ್ರಮಕ್ಕೆ ತಂತ್ರಜ್ಞಾನದ ಆಸರೆ! ಶಿಕ್ಷಕರ ಕೆಲಸ ಇಂದು ಮುಂಚಿನಂತಿಲ್ಲ. ಬದಲಾಗುತ್ತಿರುವ...