ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Thursday 16 August 2018

ಉಪ್ಪಿನ ಗೊಂಬೆ

ಉಪ್ಪಿನ ಗೊಂಬೆ ಸದಾ ಮಕ್ಕಳಿಗೆಂದೇ ಬರೆಯುವ ಚಂದ್ರಕಾಂತ ಕರದಳ್ಳಿಯವರು ಬರೆದ ಮಕ್ಕಳ ಕಿರು ಕಾದಂಬರಿ 'ಉಪ್ಪಿನ ಗೊಂಬೆಯನ್ನು ಮೊನ್ನೆ ಮಕ್ಕಳ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಪ್ರೀತಿಯಿಂದ ನೀಡಿದರು. ಜೊತೆಗೆ ಗಾಡಿ ಬಂತು ಗಾಡಿ, ಚಂದಮಾಮ ಒಬ್ಬನೇ ಇದ್ದೀಯ , ಬಯಲು ಸೀಮೆಯಿಂದ ಕರಾವಳಿಗೆ ಸಹ ನೀಡಿದ್ದರು ಅವುಗಳಲ್ಲಿ ನನ್ನನ್ನು ಗಮನ ಸೆಳೆದದ್ದು ಉಪ್ಪಿನಗೊಂಬೆ .ಮಕ್ಕಳು ಒದಲೇಬೇಕಾದ ಕೃತಿ. ಉಪ್ಪನ್ನು ತಾಯಾರಿಸುವ ಮಡಿಯಲ್ಲಿ ತಾನಾಗಿ ರೂಪು ತಳೆದ ಉಪ್ಪಿನ ಗೊಂಬೆ ಊರು ತಿರುಗಲು ಆರಂಭಿಸುತ್ತದೆ. ಅದು ಪ್ರವಾಸ ಹೊತಾಡುತ್ತ ಚೆನ್ನ ಪಟ್ಟಣ ತಲುಪಿ ಅಲ್ಲಿನ ಮುದ್ದಾದ ಮರದ ಗೊಂಬೆಗಳೊಂದಿಗೆ ಸ್ನೇಹ ಬೆಳೆಸಿಕೊಂಡು ತನ್ನ ಊರಾದ ಸಮುದ್ರದತ್ತ ಅವರನ್ನು ಕರೆದುಕೊಂಡು ಬರುತ್ತದೆ. ಅವುಗಳಿಗೆ ತಾವು ಹುಟ್ಟಿದ ಕಾಡನ್ನು ತೋರಿಸುತ್ತದೆ.. ಹೀಗೆ ಸಾಗುತ್ತ ಇದು ಒಂದು ಪ್ರವಾಸ ಕ್ತನವಾಗುತ್ತ ಬೆಳೆಯುವ ಮಕ್ಕಳ ಕಾದಂಬರಿಯಾಗಿ ಸಾಗಿ ನಿಮ್ಮನ್ನು ಓದಿಸಿಕೊಂಡು ಹೋಗುತ್ತದೆ. ಮಕ್ಕಳಿಗಂತೂ ತುಂಬಾ ಆಪ್ತವಾಗುವತ್ತಾ ಸಾಗುತ್ತದೆ. ಆ ಉಪ್ಪಿನ ಗೊಂಬೆ ಕೊನೆಗೆ ಸಾಗುತ್ತಾ ಶಿವಶರಣರ ನಾಡು ಉಳವಿಗೂ ಬಂದು ಜೋಯಿಡಾ ಕಾಡು ಸುತ್ತಿ ವಾಸ ಮಾಡುತ್ತಾ ಆಮೇಲೆ ಸಮುದ್ರಕ್ಕೆ ಸಾಗಿ ತನ್ನ ತಾಯಿಯನ್ನು ಮರದ ಗೊಂಬೆಗಳಿಗೆ ಪರಿಚಯಿಸುವ ಕತೆಯು ಇಲ್ಲಿ ಸಾಗುತ್ತದೆ. ಉಪ್ಪಿನ ಗೊಂಬೆ ಎನ್ನುವ ಕಲ್ಪನೆಯೇ ಮಕ್ಕಳಿಗೆ ಕುತೂಹಲ ಕೆರಳಿಸುತ್ತದೆ .ಇನ್ನು ಅದರ ಕತೆ ಮತ್ತೂ ಮುಂದೆ ಸಾಗಿ ಕೃತಿ ಓಂದೆ ಗುಕ್ಕಿಗೆ ಓದಿಸಿಕೊಂಡು ಹೋಗದೆ ಬಿಡದು. ಮಕ್ಕಳಿಗಾಗಿ ಸರಳ ಭಾಷಾ ಬಳಕೆ, ಸರಳ ಸಂಬಾಷಣೆ ಮನೋರಂಜನೆಗೆ ಬೇಕಾದದ್ದೆಲ್ಲ ಈ ಕೃತಿಯಲ್ಲಿದೆ . ನೀವು ನಿಮ್ಮ ಮಕ್ಕಳ ಹತ್ತಿರ ಇಂತಹ ಕೃತಿ ಇಡಿ , ನೀವೂ ಜೊತೆಗೂಡಿ ಓದಿ. ನಿಮ್ಮ ಮಕ್ಕಳು ಟಿ ವಿಯನ್ನು ದೂರ ಇಡುತ್ತಾರೆ. ರವಿರಾಜ್. ಸಾಗರ್. .

Wednesday 25 July 2018

ಕತಾ ಪುರಸ್ಕಾರಕ್ಕೆ ಅರ್ಜಿ..

ಶಹಾಪುರ: ಪ್ರತಿ ವರ್ಷದಂತೆ ಈ ಬಾರಿಯೂ ಇಲ್ಲಿಯ ಸಂಧ್ಯಾ ಸಾಹಿತ್ಯ ವೇದಿಕೆಯು 16 ವಯಸ್ಸಿನವರೆಗಿನ ಬಾಲ ಬರಹಗಾರರಿಗೆ "ವಿದ್ಯಾಸಾಗರ ಬಾಲ ಪುರಸ್ಕಾರ" ಮತ್ತು ಮಕ್ಕಳಿಗಾಗಿ ಕತೆ ಬರೆಯುವ ಹಿರಿಯರಿಗೆ "ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ" ನೀಡುತ್ತಿದ್ದು, ಅರ್ಜಿ ಆಹ್ವಾನಿಸಿದೆ.
ಬಾಲ ಬರಹಗಾರರು ಒಂದು ಸಂಕಲನಕ್ಕಾಗುವಷ್ಟು ಯಾವುದೇ ಪ್ರಕಾರದ ಪ್ರಕಟಿತ ಇಲ್ಲವೆ ಅಪ್ರಕಟಿತ ಕನ್ನಡ ಬರಹಗಳನ್ನು ಕಳುಹಿಸಬಹುದು.  ಕಥೆಗಳು ಕಳೆದ ಅಕ್ಟೋಬರ್‌ನಿಂದ ವರ್ಷದ ಅವಧಿಯೊಳಗೆ ರಚಿಸಿದವುಗಳಾಗಿರಬೇಕು. ಬರಹಗಳನ್ನು ಅಧ್ಯಕ್ಷರು, ಸಂಧ್ಯಾ ಸಾಹಿತ್ಯ ವೇದಿಕೆ, ಅಮೃತ ನಿವಾಸ, ಸಿ.ಬಿ. ಕಮಾನಿನ ಹತ್ತಿರ, ಶಹಾಪುರ-585223(ಯಾದಗಿರಿ ಜಿಲ್ಲೆ) ಇಲ್ಲಿಗೆ ಸೆಪ್ಟಂಬರ್ 30 ರೊಳಗೆ  ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ಮೊ. 9448651520 ಅಥವಾ 9986590894 ಗೆ ಸಂಪರ್ಕಿಸಬಹುದು.

Friday 20 July 2018

ಕುಟುಂಬ ನಿರ್ವಹಣೆಗೆ ಕೆಲವು ಕಹಿ ಸತ್ಯದ ಔಷದೋಪಚಾರ...

*''ಸುಪ್ರೀಂಕೋರ್ಟ್- ಕೌಟುಂಬಿಕ ಕಲಹ ವಿಚಾರಣೆ ಮಾಡುವ-ನ್ಯಾಯಮೂರ್ತಿ''ಗಳ ಹತ್ತು ಸಲಹೆಗಳು"*

(1) *ನಿಮ್ಮ ಮಗ ಮತ್ತು ಆತನ ಹೆಂಡತಿಗೆ: ನಿಮ್ಮ ಒಟ್ಟಿಗೆ "ಒಂದೇ ಸೂರಿನಡಿ" ಇರಲು ಪ್ರೋತ್ಸಾಹಿಸಬೇಡಿ, ಬಾಡಿಗೆ ಮನೆಯಾದರೂ ಸರಿ ಹೊರ ಹೋಗಲು ತಿಳಿಸಿ,* ಅದು ಅವರ ಜವಾಬ್ದಾರಿ, ಅವರ ಕುಟುಂಬ ಮತ್ತು ಮಕ್ಕಳಿಂದ ದೂರವಿರಿ-ಕಾನೂನಿನ ರೀತಿ ಮಾತ್ರ ಸಂಬಂಧವಿರಲಿ,

(2) *ಮಗನ ಹೆಂಡತಿಯನ್ನು-ಆತನ ಹೆಂಡತಿ ಎಂದು ಪರಿಗಣಿಸಿ, ಆದರೆ ಸ್ವಂತ ಮಗಳು ಎಂದು ಪರಿಗಣಿಸಬೇಡಿ* ಆಕೆಯನ್ನು ಸ್ನೇಹಿತರಂತೆ ಕಾಣಿರಿ,ಮಗನನ್ನು
ನಿಮ್ಮ ಜೂನಿಯರ್ ಎಂದು ಪರಿಗಣಿಸಿ, ಆತನ ಹೆಂಡತಿಗೆ
ನೀವು ಬೈಯ್ಯುವಹಾಗೇ ಇಲ್ಲ,
ಬೈದರೆ ಜೀವನ ಪಯ್ಂತ ಅದನ್ನು ಜ್ಞಾಪಕ ಇಟ್ಟುಕೊಂಡು
ಸಾದಿಸುತ್ತಾಳೆ, ನಿಜಜೀವನದಲ್ಲಿ ಆಕೆಯ ಹೆತ್ತತಾಯಿಗೆ ಮಾತ್ರ ಬೈಯುವ- ದಂಡಿಸುವ-ತಿದ್ದುವ ಹಕ್ಕು ಇರುತ್ತದೆ-ನಿಮ್ಮದಲ್ಲ,

(3) *ಸೊಸೆಯ ಹವ್ಯಾಸ/ನಡವಳಿಕೆ ಏನಾದರೂ ಇರಲಿ-ಅದು ಮಗನ ಸಮಸ್ಯೆ,* - ನಿಮಗೆ
ಸೇರಿದ್ದಲ್ಲ,

(4) *ಒಟ್ಟಿಗೆ ಇದ್ದರೂ ವ್ಯವಹಾರ ಪ್ರತ್ಯೇಕವಾಗಿರಬೇಕು/ನಿಖರ ವಾಗಿರ ಬೇಕು,,* ಅವರುಗಳ ಬಟ್ಟೆಯನ್ನು ಒಗೆಯುವ/ಅಡುಗೆ ಮಾಡುವ/ಮಕ್ಕಳನ್ನು ನೋಡಿಕೊಳ್ಳುವ ಉಸಾಬರಿ ಬೇಡ, ಸೊಸೆ ಒತ್ತಾಯಕ್ಕೆ ನೋಡಿಕೂಂಡರೆ-ನಿಮಗೆ ಶಕ್ತಿ ಇರಬೇಕು/ಏನನ್ನೂ ಪ್ರತಿಫಲ ಬಯಸಬಾರದು,
ಮುಖ್ಯವಾಗಿ ಮಗ‌ನ ಕುಟುಂಬದ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ,ಅವನಿಗೆ
ಸೇರಿದ್ದು,

(5) *ಗಂಡ ಹೆಂಡತಿ ಜಗಳವಾಡುತ್ತಿದ್ದರೆ--ಕುರುಡರ ಹಾಗೆ/ಕಿವುಡರ ಹಾಗೆ ಇದ್ದುಬಿಡಿ,* ಯುವಜೋಡಿಗಳು
ನೀವು ಮದ್ಯೆಬರುವುದನ್ನು ಇಷ್ಟಪದುವುದಿಲ್ಲ,

(6) *ಮೊಮಕ್ಕಳನ್ನು ಸರಿಯಾಗಿ ಬೆಳೆಸುವುದು--ಒಳ್ಳೆಯದು/ಕೆಟ್ಟದ್ದು ಎಲ್ಲಾ ಅವರಿಗೇ ಸೇರಿದ್ದು, ನಿಮ್ಮದ್ದಲ್ಲ,*

(7) *ನಿಮ್ಮ ಸೊಸೆ ನಿಮಗೆ ಗೌರವಿಸುವ/ಸೇವೆ ಮಾಡಬೇಕಾದ ಅಗತ್ಯವಿಲ್ಲ*
- ಅದು ನಿಮ್ಮ ಮಗನ ಜವಾಬ್ದಾರಿ, ಮಗ ಸಮಾಧಾನ ವಾಗಿರಬೇಕು ಎನ್ನುವುದಾದರೆ ?
ನೀಮ್ಮ ಆಕೆಯ ಸಂಬಂಧ ಉತ್ತಮವಾಗಿರಬೇಕು,

(8) *ನಿಮ್ಮ ನಿವೃತ್ತಿ ಜೀವನಕ್ಕೆ  ಮೊದಲೇ ಎಲ್ಲಾ ವ್ಯವಸ್ಥೆ ಮಾಡಿಕೊಂಡಿರಬೇಕು,*
ಮಕ್ಕಳು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ ಎಂದು ನಂಬಬೇಡಿ/ಅವಲಂಬಿಸಬೇಡಿ,
ನೀವು ಜೀವನದ ಬಹುಕಾಲ ಪ್ರಯಾಣ ಮಾಡಿದ್ದೀರ,-ಕೊನೆಯವರಗೂ
ಇನ್ನೂ ತಿಳಿಯುವುದು ಇದ್ದೇಇರುತ್ತದೆ,

(9) *ನಿಮ್ಮ ನಿವೃತ್ತ ಜೀವನ ನಮಗೆ ಸೇರಿದ್ದು:*
ಹಣವನ್ನು ಉಪಯೋಗಿಸಿ/ಸಂತೋಷಪಡಿ,ಸಾಯುವ ಒಳಗೆ ಅದನ್ನು ಉಪಯೋಗಿಸಿಕೂಳ್ಳಿ,
ಗಳಿಸಿಟ್ಟು ಅದನ್ನು ವ್ಯರ್ಥ ಮಾಡಬೇಡಿ,

(10) *ಮೊಮ್ಮಕ್ಕಳು ನಿಮ್ಮ ಕುಟುಂಬಕ್ಕೆ ಸೇರಿಲ್ಲ* - ಅವರ ತಂದೆ-ತಾಯಿಯ ಕೊಡುಗೆ,:

ಈ ಸಂದೇಶ ನಿಮಗೊಬ್ಬರಿಗಲ್ಲ
ಮಿತ್ರರು,ಬಂಧುಗಳು,ತಂದೆ- ತಾಯಿಗಳಿಗೆ, ಗಂಡ-ಹೆಂಡತಿ, ಸಮಾಜದ ಎಲ್ಲರಿಗೂ ಹಂಚಿ ಎಂದು ಸುಪ್ರೀಂಕೋರ್ಟ್
ನ್ಯಾಯಾದೀಶರು, ಕೌಟುಂಬಿಕ
ಕಲಹ ತೀರ್ಪು ನೀಡುತ್ತಿದ್ದವರ ಸಲಹೆ

*(ಕನ್ನಡ ಅನುವಾದ)*

Wednesday 11 July 2018

ಅಲ್ಲಾ ಗಿರಿರಾಜ್ ಅವರ ಗಝಲ್ ಸಂವಾದ

ಕನ್ನಡದ ಪ್ರಮುಖ ಗಜಲ್ ಸಾಹಿತ್ಯ ಕೃಷಿಕ "ಅಲ್ಲಾ ಗಿರಿರಾಜ್" ಅವರು 'ನೂರ್ ಗಜಲ್' ನಂತರ ಮತ್ತೆ ಕನ್ನಡ ಸಾಹಿತ್ಯದಲ್ಲಿ ಗಜಲ್ ಸಾಹಿತ್ಯ ಸುಗಂಧ ಹರಡುತ್ತಿರುವ "ಸುರೂರ್ ಗಜಲ್"   ಕೃತಿಯನ್ನು ಪ್ರೀತಿಯಿಂದ ನೀಡಿದರು..
ಮನಸು ಮನಸುಗಳ ನಡುವಿನ ಪ್ರೀತಿಯ ಕಟ್ಟುವ  ಪ್ರೀತಿ ವೃತಾಂತ ಸಾರುವ ಮಹತ್ವದ ಗಜಲ್ ಪ್ರಕಾರವೇ ಹಾಗೆ  ಅವು ಪ್ರೇಮ ವೃತಾಂತದ ವಿಶಿಷ್ಟ ದ್ವಿಪದಿ.

ಗಜಲ್ ರಚನಾ ಕ್ರಮದ ಬಗ್ಗೆ ನನಗೆ ಒಂದಿಷ್ಟು ಸ್ಪಷ್ಟತೆ ದೊರೆತಿದ್ದೆ ಈ ಕೃತಿ ಓದಿದಮೇಲೆ..ಮೂಲ ಗಜಲ್ ರಚನಾ ಕ್ರಮದಿಂದ ಸ್ಫೂರ್ತಿಗೊಂಡು ಒಂದಿಷ್ಟು ಕನ್ನಡೀಕರಿಸಿ ನಮ್ಮ ನಾಡಿನಲ್ಲಿ ಒಂದಿಷ್ಟು ಗಜಲ್ ಸಾಹಿತ್ಯ ಪುಷ್ಪ ಕೃಷಿ ಮಾಡುತ್ತಿರುವವರು ಹಲವರಿದ್ದಾರೆ.. ನಮ್ಮ ಕವಿಮಿತ್ರ  ಅರಿಫ್ ರಾಜ ಸಹ ಆ ನಿಟ್ಟಿನ ಯಶಸ್ವಿ ಪಯಣ ಆರಂಭಿಸಿದ್ದಾರೆ. ರಚನಾ ವಿಶೇಷತೆ, ಮೂಲ ಗಜಲ್ ಸೆಲೆಯ ದಾರಿಯ ಪಯಣದಲ್ಲಿ ಅಲ್ಲಾ ಗಿರಿರಾಜ್ ಅವರದ್ದು ವಿಶಿಷ್ಟ ನಡೆಗೆ ಈ ಕೃತಿಯು ಸಹ ನೂರ್ ಗಜಲ್ ನಷ್ಟೇ ವಿಶೇಷತೆ ಉಳಿಸಿಕೊಂಡಿದೆ.

  "ಧರ್ಮದ  ಝಂಡಾ ಕಟ್ಟಿಕೊಂಡ ಮಂದಿರ ಮಸೀದಿಗಿಂತ ಮೌನ ಸ್ಮಶಾನ ಲೇಸು
ನೋವಿಗಾಗಿಯೇ ಅಳುವ ಕಣ್ಣುಗಳಿಗಿಂತ ನಗದಂತೆ ಮೌನವಾಗಿರುವ ನಿನ್ನ ತುಟಿ ಲೇಸು"    ಎನ್ನುವ ಕವಿಯ ಒಟ್ಟು ಆಶಯ ಅಲ್ಲಲ್ಲಿ ಹಲವೆಡೆ ಗಜಲ್ಗಳಲ್ಲಿ ರೂಪದರ್ಶನ ಮಾಡಿದೆ.

ನಿನ್ಹೆಜ್ಜೆಗಳು ಸದ್ದಾಗದಿರಲಿ ಎನ್ನ ಮನದಂಗಳದಲ್ಲಿ
ಅಲ್ಲಿ ಕನಸುಗಳು ಹುಳಿಉಂಡು ಹೆಪ್ಪಾಗುತಿವೆ ನಾಳೆಗಾಗಿ "  ಎಂದೂ ಬಹುತೇಕ ಗಜಲ್ ಸೊಬಗಿನ  ಹಲವು
ರೂಪಕಗಳ ಪದಮಾಲೆ ಪೋಣಿಸಿದ್ದಾರೆ..ಹಲವು ಕಡೆ ಬೇಂದ್ರೆ,ಅರವಿಂದ ರವೀಂದ್ರ, ಅಲ್ಲಮ ಮುಂತಾದವರು ಉಲ್ಲೇಖ ಮಾಡಲಾಗಿದೆ.ನಾಡಿನ ಹಲವು ಸ್ಥಳಗಳು  ಬನವಾಸಿ, ತಲಕಾಡು ಇಣುಕುತ್ತವೆ.ಕನ್ನಡ ಬಿಟ್ಟು ಬೇರೆ ಬಾಷೆ ಅರಿಯದ ನನ್ನಂತವನಿಗಾಗಿ ಅರ್ಥ ಆಗದ ಪದಗಳ ಅರ್ಥ ಅಲ್ಲೇ ನೀಡಿದ್ದು ಈ ಕೃತಿಯ ವಿಶೇಷತೆ. ಹೊಸ ಸಾಹಿತ್ಯ ಅನುಭವಕ್ಕೆ ಈ ಕೃತಿ ಓದಲೇ ಬೇಕು. ಮತ್ತೆ ಮತ್ತೆ ಕಾಡುತಿವೆ ಕೆಲವು .ಪ್ರೀತಿ ಪ್ರೇಮ ಬರಹಗಳೆಂದರೆ ಮತ್ತೆ ಕಾಡದೆ ಬಿಡವು ಸಹ. ಇನ್ನು ಕಾಡಲಿಕ್ಕೆಂದೇ ಹುಟ್ಟಿದ  ಗಿರಿರಾಜರ ಮೋಡಿಯ ಗಝಲ್ ಬಿಟ್ಟಾವೆಯೇ ...

ಹೆಚ್ವು  ಬರೆಯಲು ಈ ಬಗ್ಗೆ ಹೆಚ್ಚು ಗೊತ್ತಿಲ್ಲ.. ಮತ್ತೆ ಓದಿ ಮತ್ತೆ ತಿಳಿದು ಮತ್ತೆ ಬರೆವೆ...
- ರವಿರಾಜ ಮಾರ್ಗ

.

Tuesday 10 July 2018

ಕುವೆಂಪು ಕೃತಿ ಬಗ್ಗೆ ಗೆಳೆಯ ಪ್ರಶಾಂತ್ ಬರೆದದ್ದು

'ಸ್ನಿಗ್ಧೋಜ್ಜ್ವಲಜ್ಯೋತ್ನ್ಸೆ'
ಈ ಪದವನ್ನು ಒಂದೇ ಬಾರಿಗೆ ಉಚ್ಚರಿಸಿ ನೋಡುವ. ಇಡೀ ಪದದ ಅರ್ಥವನ್ನು ಯಾವ ಕನ್ನಡ ನಿಘಂಟು ಹುಡುಕಿದರೂ ಸಿಗಲಾರದು. 'ಸ್ನಿಗ್ಧ+ಉಜ್ವಲ+ಜ್ಯೋತ್ನ್ಸೆ' ಎಂದು ಬಿಡಿಬಿಡಿಯಾಗಿ ಪದವನ್ನು ಒಡೆದು ಓದಿಕೊಂಡರೆ ಮಾತ್ರ ಅರ್ಥವಾಗುತ್ತದೆ. ಸ್ನಿಗ್ಧ = ಕೋಮಲವಾದ, ಉಜ್ವಲ = ಪ್ರಕಾಶಮಾನವಾದ, ಜ್ಯೋತ್ನ್ಸೆ = ಬೆಳದಿಂಗಳು. ಕೋಮಲವಾದ ಪ್ರಕಾಶಮಾನವಾದ ಬೆಳದಿಂಗಳು. ಇದು ಕುವೆಂಪು ಅವರು 'ಮಲೆನಾಡಿನ ಚಿತ್ರಗಳು' ಪುಸ್ತಕದಲ್ಲಿ 'ಕಾಡಿನಲ್ಲಿ ಕಳೆದ ಒಂದಿರುಳು' ಚಿತ್ರದಲ್ಲಿ ತಾವು ಕಂಡ ಬೆಳದಿಂಗಳನ್ನು ವರ್ಣಿಸಲು ಉಪಯೋಗಿಸಿರುವ ಪದ. ಪೂರ್ತಿ ವಾಕ್ಯದ ಸಾಲು ಹೀಗಿದೆ-
"ಕಂಬಳಿಯನ್ನು ಹೊದೆದುಕೊಂಡು, ಅಂಗಾತನೆ ಮಲಗಿ, ಅನಂತಾಕಾಶದಲ್ಲಿ ಸ್ವರ್ಣ ಜ್ಯೋತಿರ್ಮಯ ಬಿಂಬದಿಂದ ರಂಜಿಸುತ್ತಿದ ಯಾಮಿನೀಕಾಂತನಿಂದ ಹೊರಹೊಮ್ಮಿ ಬನದ ಮೇಲೆ ಎಡೆಬಿಡದೆ ಸುರಿಯುತ್ತಿದ್ದ ಸ್ನಿಗ್ಧೋಜ್ಜ್ವಲಜ್ಯೋತ್ನ್ಸೆಯನ್ನು ಕಣ್ಣಿನಿಂದ ಕುಡಿಯತೊಡಗಿದೆ."

ಕುಪ್ಪಳ್ಳಿಯ ಪ್ರಕೃತಿ ಸೌಂದರ್ಯದೊಂದಿಗೆ ಇಂತಹ ವಿಶಿಷ್ಟ ಕನ್ನಡ ಪದಗಳ ಭಂಡಾರವೇ ಈ ಪುಸ್ತಕದಲ್ಲಿ ತುಂಬಿಕೊಂಡಿದೆ. ಸವಿಯಲು ತಪ್ಪದೇ ಓದಿ. ಅಂತಹ ಪದಗಳಲ್ಲಿ ಕೆಲವು- 'ಮೇಘಗವಾಕ್ಷ, ಗೈರಿಕವಸಧಾರಿ, ವರ್ಣೋಪವರ್ಣ, ಧವಳಫೇನ, ಆವರ್ತಗರ್ತ, ಗಗನತಟಾಕ್ರಾಂತ, ಪರಿವೃತಶೈಲಶ್ರೇಣಿ, ಪಸುಳೆವಿಸಿಲು, ತಿಮಿರಬ್ರಹ್ಮಸಮಾಧಿ, ವಿಕಟನಿರ್ಘೋಷ, ಕಾಳಪಾಷಾಣಭಿತ್ತಿ, ಭೀಮಭೂರೋಹರಾಜಿ, ಉಲ್ಮೀಲಿತನಯ, ಶ್ವೇತೋರ್ಣಸದೃಶ, ಜೋತ್ಸ್ನಾತುಷಾರವೃಷ್ಟಿ...

Wednesday 13 December 2017

ಮಾಸ್ ಮಪ್ತಿ ನರ್ತನ್

ಕ್ರೌಯ ರಂಜನೆಯ ಮಾಸ್ ಮಪ್ತಿ  ನರ್ತನ್...

ವ್ಯವಸ್ಥೆಯ ಲೋಪದಿಂದ  ಸಾಂಧರ್ಭಿಕವಾಗಿ ರೂಪುಗೊಂಡ " ರಾಕ್ಷಸ ರೂಪದ ಕರ್ತವ್ಯ ವ್ಯಕ್ತಿತ್ವ  ಹಾಗೂ  ಅಂತವನನ್ನು ಬಂಧಿಸಲು ಬಂದು ತಾನೇ  ಬಂಧಿಯಾಗುವ ಕರ್ತವ್ಯ ರೂಪದ ರಾಕ್ಷಸ ವ್ಯಕ್ತಿತ್ವ ವನ್ನು  ಕ್ರೌರ್ಯ ರಂಜನೆಯ ಕತೆಯನ್ನಿಟ್ಟುಕೊಂಡು  ನಿರ್ದೇಶಕ ನರ್ತನ ಅವ್ರು ಮೊದಲ ಪ್ರಯತ್ನದಲ್ಲೇ  ಕನ್ನಡ ಸಿನಿಮೊದ್ಯಮ ಅವರತ್ತ ನೋಡುವಂತ ಸಿನಿಮಾ ಮಾಡಿದ್ದು ಅವರ ಪ್ರತಿಭೆಗೆ ಸಾಕ್ಷಿ.ಅವರನ್ನು ಪ್ರೋತ್ಸಾಹಿಸಲು ನೀವೊಮ್ಮೆ ಈ ಸಿನಿಮಾ ನೋಡಬೇಕು.

ಕ್ರೌರ್ಯ ರಂಜನೆಯ ಕತೆ ಜೊತೆಗೆ ಕಣ್ಣಂಚಲಿ  ಕಣ್ಣಿರಾಡುವಂತೆ ಮಾಡುವ ಅಣ್ಣ ತಂಗಿ ಸೆಂಟಿಮೆಂಟ್ ಜೊತೆಗೆ  ಕತೆಗೆ ಗಟ್ಟಿ ತನ ತಂದುಕೊಡಬಲ್ಲ  ಸಂಬಾಷಣೆ , ಒಬ್ಬರಿಗೊಬ್ಬರು ಹಠಕ್ಕೆ ಬಿದ್ದು  ಅದ್ಬುತ ಅಭಿನಯ ನೀಡಲು ಶ್ರಮಿಸಿರುವುದು ಚಿತ್ರದುದ್ದಕ್ಕೂ ನಿಮ್ಮನ್ನು ಪ್ರತಿ ಕ್ಷಣವೂ ಪ್ರತಿ ಪ್ರೇಮುಗಳು ಥಿಯೇಟರಿನಲ್ಲೇ ನಿಮ್ಮನ್ನು ಹಿಡಿದುಕೂರಿಸುತ್ತದೆ.
ರವಿ ಬಸರುರ್ ಹಿನ್ನಲೆ ಸಂಗೀತದ ಅಬ್ಬರದ ಜೊತೆಗೆ ಭೈರತಿ ರಣಗಲ್ಲು , ಗಣ, ಸಿಂಗ, ಠಾಕೂರ್, ಮತ್ತಿತರ ಪಾತ್ರಗಳೆಲ್ಲ ನಿಮ್ಮನ್ನು ಮತ್ತೆ ಮತ್ತೆ ಥಿಯೇಟರಿಗೆ   ಕರೆಯುವುದು ಮಪ್ತಿಯ ಹೆಚ್ಚುಗಾರಿಕೆ.
ರವಿರಾಜ್ ಸಾಗರ್

Tuesday 17 October 2017

ದೀಪಾವಳಿ ಹಬ್ಬದ ಪರಂಪರ ಬಗ್ಗೆ ಒಂದಿಷ್ಟು ತಿಳಿಯಿರಿ

*"ದೀಪಾವಳಿ"*-
ಕತ್ತಲೆಯ ಕಳೆದು ಬೆಳಕು ಹರಿಸುವ ಹಬ್ಬ*                                                                    ‌                                                                                    *"ದೀಪವು ಜ್ಞಾನದ ಸಂಕೇತ,ಅಭಿವೃದ್ಧಿಯ ಸಂಕೇತ*"                         ‌                            ‌                                                                                                                          ಸಾಲು ಸಾಲಾಗಿ ದೀಪಗಳನ್ನು ಮನೆ, ಮಂದಿರ, ಮಠ, ನದಿ ತೀರಗಳಲ್ಲಿ ಬೆಳಗಿಸಿ, ದೇವತಾರಾಧನೆ ಮಾಡಿ, ಬಂಧು ಬಾಂಧವರೊಡನೆ ನಲಿಯುವ ಹಬ್ಬವೇ ದೀಪಾವಳಿ. ದೀಪಗಳನ್ನು, ಬೆಳಕನ್ನು ಪೂಜಿಸುವ ನಾವು ದೀಪದಲ್ಲಿ ದೇವಿಯ ಸಾನ್ನಿಧ್ಯವನ್ನು ಕಂಡವರು.                                       ‌                 ‌                                                                            ‌                                                                    * ಕಾರ್ತಿಕ ಮಾಸದಲ್ಲಿ  ದೀಪೋತ್ಸವ ಆಚರಿಸಬೇಕು. ದೀಪ ಪರಬ್ರಹ್ಮನ ಪ್ರತೀಕ. ಕತ್ತಲು ಎಂದರೆ ತಮೋಗುಣ - ಅಜ್ಞಾನ. ಬೆಳಕು ಎಂದರೆ ಸತ್ವಗುಣ - ಜ್ಞಾನ. ಬೆಳಕು ಹೊಸ ಬದುಕಿನ ಹಾದಿಯಾದರೆ, ಕತ್ತಲು ಕಷ್ಟ, ಭಯ, ಆತಂಕ, ನೋವುಗಳನ್ನು ಬಿಂಬಿಸುತ್ತದೆ. ಬೆಳಕು ಶಾಂತಿಯ ಸಂಕೇತ. ಕತ್ತಲು ಹಾಗೂ ಬೆಳಗಿನ ನಡುವೆ ಜೀವನ ನಡೆಸುವ ನಮಗೆ ದೀಪಾವಳಿ ಹೊಸ ಜೀವನ, ಬದುಕಿನ ಹಾದಿ ತೋರಿಸುವ ಹಬ್ಬವಾಗಿದೆ.                     ‌    ‌   ‌                                                                                      ‌                                                             ದೀಪಾವಳಿ ಹಬ್ಬವು 5 ದಿನಗಳ ಹಬ್ಬವಾಗಿದೆ.                                  ‌                                                            🌻 *ನೀರು ತುಂಬುವ ಹಬ್ಬ* 🌻                                        ‌                                                                   ಆಶ್ವಯುಜ ಮಾಸದ ಕೃಷ್ಣ  ಪಕ್ಷದ ತ್ರಯೋದಶಿ ದಿನದ ಸಾಯಂಕಾಲ ನೀರು ತುಂಬುವ ಹಬ್ಬ ಆಚರಿಸಲಾಗುತ್ತದೆ.  ಇದನ್ನು "ಧನ ತ್ರಯೋದಶಿ" ಎಂದೂ ಕರೆಯಲಾಗುತ್ತದೆ. ಆ ದಿನ ನೀರಿನ ಕೊಡಗಳನ್ನು ಶುದ್ಧವಾಗಿ ತೊಳೆದು ಸ್ವಚ್ಛ  ಮಾಡಿ, ಶುದ್ಧವಾದ ನೀರನ್ನು ತುಂಬಿ ಅದಕ್ಕೆ ಪೂಜೆ ಮಾಡುತ್ತಾರೆ. ಆ ದಿನ ಆ ನೀರನ್ನು ಉಪಯೋಗಿಸುವ   ಹಾಗಿಲ್ಲ ‌ ಕಳಶ ಪೂಜೆ ಮಾಡಿದ ರೀತಿಯಲ್ಲಿ ಆ ಕೊಡವನ್ನು    ಪೂಜಿಸಬೇಕು.                        ‌                                                                                         ‌                                                                                  🌻 *ನರಕ ಚತುರ್ದಶಿ ಹಬ್ಬ* 🌻                                                 ‌                                                         ದ್ವಾಪರ ಯುಗದಲ್ಲಿ ಲೋಕಕಂಟಕನಾದ ನರಕಾಸುರ  ಎಂಬ ರಾಕ್ಷಸನೊಂದಿಗೆ ಘೋರ ಯುದ್ಧ ಮಾಡಿ ಆ ರಾಕ್ಷಸನನ್ನು ಸಂಹರಿಸಿದನು. ಆ ದಿನ ಆಶ್ವಯುಜ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನವಾಗಿತ್ತು. ಆ ರಾತ್ರಿ ಶ್ರೀಕೃಷ್ಣನು ರಾಕ್ಷಸರನ್ನು ಸಂಹಾರ ಮಾಡಿ ಇಡೀ ಲೋಕಕ್ಕೆ ನೆಮ್ಮದಿಯ ಬೆಳಕನ್ನು ನೀಡಿದ ಶುಭ ದಿನವಾಯಿತು. ಹಾಗಾಗಿ ಆ ದಿನ ನರಕ ಚತುರ್ದಶಿ ಎಂದು ಕರೆಯಲ್ಪಟ್ಟಿದೆ.  ನರಕ ಚತುರ್ದಶಿ ದಿನ ತೈಲ ಸ್ನಾನ ಮಾಡುತ್ತೇವೆ. ಈ ಸ್ನಾನ ಮಾಡಲು ಕಾರಣ ನರಕಾಸುರನು ಮರಣ ಹೊಂದಿದ್ದರಿಂದ ಅಶೌಚವಾಯಿತು. ಆದ್ದರಿಂದಲೇ ಆ ದಿನ ಎಣ್ಣೆ ನೀರಿನ ಅಭ್ಯಂಜನ ಸ್ನಾನ ಮಾಡಬೇಕು.                                                                                        ‌                                                                                            ಆ ದಿನ ಎಣ್ಣೆ ಸ್ನಾನಕ್ಕೆ ಬಹಳ ಪ್ರಾಶಸ್ತ್ಯವಿದೆ. ಎಣ್ಣೆ ಸ್ನಾನ ಮಾಡದೇ ಇರುವವರು ಆ ದಿನ ಮಾಡಲೇಬೇಕು. ಸ್ತ್ರೀಯರು, ಪುರುಷರು, ಮಕ್ಕಳು, ಸಂನ್ಯಾಸಿಗಳಾದಿಗಳಾಗಿ ಎಲ್ಲರೂ ಅಂದು ಎಣ್ಣೆ ಸ್ನಾನ ಮಾಡಬೇಕು ಎಂದು ಧರ್ಮ ಶಾಸ್ತ್ರ ಹೇಳುತ್ತದೆ.                            ‌                                                                                    ಎಣ್ಣೆಯಲ್ಲಿ ಲಕ್ಷ್ಮೀ ದೇವಿಯೂ, ನೀರಿನಲ್ಲಿ ಗಂಗಾ ದೇವಿಯೂ ಇರುವುದರಿಂದ, ನಮಗೆ ಲಕ್ಷ್ಮೀ ಹಾಗೂ ಗಂಗಾ ದೇವಿಯ ಆಶೀರ್ವಾದ ಸಿಗುತ್ತದೆ ಎಂದು ನಂಬಿಕೆ ಇದೆ.                                                                                                 ‌                                                                  ‌  ನರಕ ಎಂದರೆ ಅಜ್ಞಾನ. ಈ ಅಜ್ಞಾನವು ಚತುರ್ದಶಿ ದಿನದಂದಲೇ ನಾಶವಾಗಿ ಜ್ಞಾನ ದೊರೆಯಲಿ ಎಂದು ನರಕ ಚತುರ್ದಶಿ ಹಬ್ಬವನ್ನು ಆಚರಿಸುವುದು. ಚತುರ್ದಶಿ ಎಂದರೆ 14 ಎಂದು ಅರ್ಥ. ಜ್ಞಾನವನ್ನು ಸಂಪಾದಿಸಲು 14 ವಿದ್ಯೆಗಳನ್ನು ಸಂಪಾದಿಸಬೇಕು.  ನರಕ ಚತುರ್ದಶಿ ದಿನ ಸಂಜೆ ಮನೆಯ ಮುಂದೆ ಲೋಹದಿಂದಲೋ ಅಥವಾ ಮಣ್ಣಿನಿಂದಲೋ ಮಾಡಿದ ಹಣತೆಯಲ್ಲಿ ದೀಪವನ್ನು ಮತ್ತು ನರಕಾಸುರನ ಸಂಹಾರವಾದ ಸಂತೋಷಕ್ಕಾಗಿ ಪಟಾಕಿ ಹಚ್ಚಿ ಸಂತೋಷ ಪಡುವ ಕಾರ್ಯ ಹಿಂದಿನಿಂದಲೂ ಆಚರಣೆಯಲ್ಲಿ ಬಂದಿದೆ.                             ‌     ‌        ‌     ‌      ‌     ‌                             ‌ 🌻 *ಅಮಾವಾಸ್ಯೆಯ ಹಬ್ಬ (ಧನಲಕ್ಷ್ಮೀ ಪೂಜೆ)* 🌻                   ‌                                                                                                                                                                                   ಆಶ್ವಯುಜ ಮಾಸದ ಅಮಾವಾಸ್ಯೆ ದಿನ ಧನಲಕ್ಷ್ಮಿಗೆ ಪೂಜೆ ಸಲ್ಲಿಸುತ್ತಾರೆ.  ಅಮಾವಾಸ್ಯೆ ಎಂದರೆ ಅಶುಭ ಎಂದು ಕರೆಯುತ್ತಾರೆ. ಅಂದು ಯಾವ ಹೊಸ ಕಾರ್ಯಗಳನ್ನೂ ಮಾಡುವುದಿಲ್ಲ ಹಾಗೂ ಮಂಗಳಕರವಾದ ಪೂಜೆ ಸಹ ಮಾಡುವುದಿಲ್ಲ. ಆದರೆ ಈ ದೀಪಾವಳಿಯ ಅಮಾವಾಸ್ಯೆ ಇದಕ್ಕೆ ವಿರುದ್ಧವಾಗಿದೆ. ಏಕೆಂದರೆ ಅಂದು ವಿಷ್ಣುವಿನ ಪತ್ನಿಯಾದ ಮತ್ತು ಧನದೇವತೆಯಾದ ಮಹಾಲಕ್ಷ್ಮಿಯು ಸಮುದ್ರ ಮಥನದಿಂದ ಉದಯಿಸಿದ ದಿನ ಎಂದು ಪುರಾಣಗಳು ಹೇಳುತ್ತವೆ. ಆದ್ದರಿಂದ ಅಂದು ಧನಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ. ದುಡಿದ ಸಂಪತ್ತು ಸ್ಥಿರವಾಗಿ ನಮ್ಮಲ್ಲಿರಬೇಕು ಎಂದು ಜ್ಞಾನಿಗಳು ಹೇಳುತ್ತಾರೆ. ಆದ್ದರಿಂದ ಆ ದಿನ ನಾವು ಶ್ರದ್ಧಾ ಭಕ್ತಿಗಳಿಂದ ಲಕ್ಷ್ಮೀ ಪೂಜೆಯನ್ನು ಮಾಡಬೇಕು.          ‌                                                                                                            

🌻*ಬಲಿಪಾಡ್ಯಮಿ*🌻                                                                      ‌     ‌                                                   ಕಾರ್ತೀಕ ಮಾಸದ ಮೊದಲನೆಯ ದಿನ ಅಂದರೆ ಪಾಡ್ಯಮಿಯ ದಿನ ಈ ಹಬ್ಬವನ್ನು ಆಚರಿಸುತ್ತಾರೆ. ಎಲ್ಲಾ ದಾನವರಿಗಿರುವ ದುರಾಸೆಯಂತೆ ಪ್ರಹ್ಲಾದನ ವಂಶದ ಬಲಿ ಚಕ್ರವರ್ತಿಗೂ ಸ್ವರ್ಗಾಧಿಪತಿಯಾಗಬೇಕೆಂಬ ಮಹದಾಸೆಯಿತ್ತು. ಬಲಿಯ ಗರ್ವಭಂಗ ಮಾಡಲು, ಶ್ರೀ ಹರಿಯು ವಾಮನ ಅವತಾರ ಎತ್ತಿ, ಬಲಿಯನ್ನು ಪಾತಾಳಕ್ಕೆ ತಳ್ಳಿದನು. ಆತನ ಮಹಾ ಬಲಿದಾನಕ್ಕೆ ಅವನ ಆಸೆಯಂತೆ ಶ್ರೀಹರಿಯು ಸದಾಕಾಲವೂ ಬಲಿಯ ಬಳಿಯೇ ಇರುತ್ತಾನೆಂದೂ, ಶ್ರೀಲಕ್ಷ್ಮಿಯ ಪ್ರಾರ್ಥನೆಯಂತೇ ಬಲಿಪಾಡ್ಯಮಿಯಂದು ಬಂದು ಭಕ್ತರ ಇಷ್ಟಾರ್ಥ ನೆರವೇರಿಸುತ್ತಾನೆಂದೂ, ಪ್ರಸನ್ನಳಾದ ಲಕ್ಷ್ಮೀ ಸಕಲ ಸಂಪತ್ತನ್ನೂ ನೀಡುತ್ತಾಳೆಂದೂ ಪುರಾಣ ಪ್ರಸಿದ್ಧಿಯಾಗಿದೆ. 🌻           ‌   ‌              ‌                                     ‌                                                             🌻 *ಸೋದರ ಬಿದಿಗೆ* 🌻   ‌          ‌         ‌         ‌                                           ‌                                                                               ಪಾಡ್ಯದ ನಂತರ ಬರುವ ಹಬ್ಬವೇ ಸೋದರ ಬಿದಿಗೆ. ಅಂದು ಯಮನು ತನ್ನ  ಸೋದರಿ ಯಾದ ಯಮುನಾದೇವಿಯ ಮನೆಗೆ ಹೋಗಿ ಅವಳ ಸತ್ಕಾರ ಸ್ವೀಕರಿಸಿ ಅವಳನ್ನು ಹರಸಿ ಉಡುಗೊರೆ ಕೊಟ್ಟು ಬಂದನೆಂದು ಪ್ರತೀತಿ. ಅವರ ನೆನಪಿಗಾಗಿ ಸೋದರ- ಸೋದರಿಯರು ವರ್ಷಕ್ಕೊಮ್ಮೆಯಾದರೂ ಈ ರೀತಿ ಸೇರಿ ತಮ್ಮ ಬಾಂಧವ್ಯವನ್ನು ಉಳಿಸಿಕೊಳ್ಳಲಿ ಎಂದು ಅಂದು ಸೋದರನು ತನ್ನ ಸೋದರಿಯ ಮನೆಗೆ ಹೋಗಿ ಅವಳ ಕೈಯಲ್ಲಿ ಊಟ ಮಾಡಿ ಉಡುಗೊರೆ ಕೊಟ್ಟು ಹರಸಿ ಬರುವ ವಾಡಿಕೆ ಇದೆ.  ‌         ‌                  ‌   ‌         ‌      ‌     ‌                                                                                                                                                     ನಮ್ಮ ಬದುಕು ಜ್ಞಾನದ ಬೆಳಕಿನಿಂದ ತುಂಬಿದ್ದರೆ ಬದುಕು ಸಾರ್ಥಕವಾಗುತ್ತದೆ. ಅಜ್ಞಾನದ ಅಂಧಕಾರ ನಿವಾರಿಸುವುದಕ್ಕೆ ದೀಪಗಳನ್ನು ಬೆಳಗುವುದು ಸಾಂಕೇತಿಕ ರೂಪವಾದರೂ, ನಮ್ಮನ್ನು ನಾವು ತಿದ್ದಿ ಕೊಂಡು ಮುನ್ನಡೆಯ ಬೇಕೆಂಬ ಮನೋಭಾವ ನಮ್ಮಲ್ಲಿ ಒಡಮೂಡಬೇಕು. *ಪ್ರತಿಯೊಬ್ಬರೂ ಮನದೊಳಗೆ ದೀಪಗಳನ್ನು ಬೆಳಗಿಸೋಣ*. ಜ್ಞಾನವನ್ನು ಪಡೆಯೋಣ.
*ಎಲ್ಲರಿಗೂ ಶುಭವಾಗಲಿ*