ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Wednesday 11 July 2018

ಅಲ್ಲಾ ಗಿರಿರಾಜ್ ಅವರ ಗಝಲ್ ಸಂವಾದ

ಕನ್ನಡದ ಪ್ರಮುಖ ಗಜಲ್ ಸಾಹಿತ್ಯ ಕೃಷಿಕ "ಅಲ್ಲಾ ಗಿರಿರಾಜ್" ಅವರು 'ನೂರ್ ಗಜಲ್' ನಂತರ ಮತ್ತೆ ಕನ್ನಡ ಸಾಹಿತ್ಯದಲ್ಲಿ ಗಜಲ್ ಸಾಹಿತ್ಯ ಸುಗಂಧ ಹರಡುತ್ತಿರುವ "ಸುರೂರ್ ಗಜಲ್"   ಕೃತಿಯನ್ನು ಪ್ರೀತಿಯಿಂದ ನೀಡಿದರು..
ಮನಸು ಮನಸುಗಳ ನಡುವಿನ ಪ್ರೀತಿಯ ಕಟ್ಟುವ  ಪ್ರೀತಿ ವೃತಾಂತ ಸಾರುವ ಮಹತ್ವದ ಗಜಲ್ ಪ್ರಕಾರವೇ ಹಾಗೆ  ಅವು ಪ್ರೇಮ ವೃತಾಂತದ ವಿಶಿಷ್ಟ ದ್ವಿಪದಿ.

ಗಜಲ್ ರಚನಾ ಕ್ರಮದ ಬಗ್ಗೆ ನನಗೆ ಒಂದಿಷ್ಟು ಸ್ಪಷ್ಟತೆ ದೊರೆತಿದ್ದೆ ಈ ಕೃತಿ ಓದಿದಮೇಲೆ..ಮೂಲ ಗಜಲ್ ರಚನಾ ಕ್ರಮದಿಂದ ಸ್ಫೂರ್ತಿಗೊಂಡು ಒಂದಿಷ್ಟು ಕನ್ನಡೀಕರಿಸಿ ನಮ್ಮ ನಾಡಿನಲ್ಲಿ ಒಂದಿಷ್ಟು ಗಜಲ್ ಸಾಹಿತ್ಯ ಪುಷ್ಪ ಕೃಷಿ ಮಾಡುತ್ತಿರುವವರು ಹಲವರಿದ್ದಾರೆ.. ನಮ್ಮ ಕವಿಮಿತ್ರ  ಅರಿಫ್ ರಾಜ ಸಹ ಆ ನಿಟ್ಟಿನ ಯಶಸ್ವಿ ಪಯಣ ಆರಂಭಿಸಿದ್ದಾರೆ. ರಚನಾ ವಿಶೇಷತೆ, ಮೂಲ ಗಜಲ್ ಸೆಲೆಯ ದಾರಿಯ ಪಯಣದಲ್ಲಿ ಅಲ್ಲಾ ಗಿರಿರಾಜ್ ಅವರದ್ದು ವಿಶಿಷ್ಟ ನಡೆಗೆ ಈ ಕೃತಿಯು ಸಹ ನೂರ್ ಗಜಲ್ ನಷ್ಟೇ ವಿಶೇಷತೆ ಉಳಿಸಿಕೊಂಡಿದೆ.

  "ಧರ್ಮದ  ಝಂಡಾ ಕಟ್ಟಿಕೊಂಡ ಮಂದಿರ ಮಸೀದಿಗಿಂತ ಮೌನ ಸ್ಮಶಾನ ಲೇಸು
ನೋವಿಗಾಗಿಯೇ ಅಳುವ ಕಣ್ಣುಗಳಿಗಿಂತ ನಗದಂತೆ ಮೌನವಾಗಿರುವ ನಿನ್ನ ತುಟಿ ಲೇಸು"    ಎನ್ನುವ ಕವಿಯ ಒಟ್ಟು ಆಶಯ ಅಲ್ಲಲ್ಲಿ ಹಲವೆಡೆ ಗಜಲ್ಗಳಲ್ಲಿ ರೂಪದರ್ಶನ ಮಾಡಿದೆ.

ನಿನ್ಹೆಜ್ಜೆಗಳು ಸದ್ದಾಗದಿರಲಿ ಎನ್ನ ಮನದಂಗಳದಲ್ಲಿ
ಅಲ್ಲಿ ಕನಸುಗಳು ಹುಳಿಉಂಡು ಹೆಪ್ಪಾಗುತಿವೆ ನಾಳೆಗಾಗಿ "  ಎಂದೂ ಬಹುತೇಕ ಗಜಲ್ ಸೊಬಗಿನ  ಹಲವು
ರೂಪಕಗಳ ಪದಮಾಲೆ ಪೋಣಿಸಿದ್ದಾರೆ..ಹಲವು ಕಡೆ ಬೇಂದ್ರೆ,ಅರವಿಂದ ರವೀಂದ್ರ, ಅಲ್ಲಮ ಮುಂತಾದವರು ಉಲ್ಲೇಖ ಮಾಡಲಾಗಿದೆ.ನಾಡಿನ ಹಲವು ಸ್ಥಳಗಳು  ಬನವಾಸಿ, ತಲಕಾಡು ಇಣುಕುತ್ತವೆ.ಕನ್ನಡ ಬಿಟ್ಟು ಬೇರೆ ಬಾಷೆ ಅರಿಯದ ನನ್ನಂತವನಿಗಾಗಿ ಅರ್ಥ ಆಗದ ಪದಗಳ ಅರ್ಥ ಅಲ್ಲೇ ನೀಡಿದ್ದು ಈ ಕೃತಿಯ ವಿಶೇಷತೆ. ಹೊಸ ಸಾಹಿತ್ಯ ಅನುಭವಕ್ಕೆ ಈ ಕೃತಿ ಓದಲೇ ಬೇಕು. ಮತ್ತೆ ಮತ್ತೆ ಕಾಡುತಿವೆ ಕೆಲವು .ಪ್ರೀತಿ ಪ್ರೇಮ ಬರಹಗಳೆಂದರೆ ಮತ್ತೆ ಕಾಡದೆ ಬಿಡವು ಸಹ. ಇನ್ನು ಕಾಡಲಿಕ್ಕೆಂದೇ ಹುಟ್ಟಿದ  ಗಿರಿರಾಜರ ಮೋಡಿಯ ಗಝಲ್ ಬಿಟ್ಟಾವೆಯೇ ...

ಹೆಚ್ವು  ಬರೆಯಲು ಈ ಬಗ್ಗೆ ಹೆಚ್ಚು ಗೊತ್ತಿಲ್ಲ.. ಮತ್ತೆ ಓದಿ ಮತ್ತೆ ತಿಳಿದು ಮತ್ತೆ ಬರೆವೆ...
- ರವಿರಾಜ ಮಾರ್ಗ

.

No comments:

Post a Comment