ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Wednesday 25 July 2018

ಕತಾ ಪುರಸ್ಕಾರಕ್ಕೆ ಅರ್ಜಿ..

ಶಹಾಪುರ: ಪ್ರತಿ ವರ್ಷದಂತೆ ಈ ಬಾರಿಯೂ ಇಲ್ಲಿಯ ಸಂಧ್ಯಾ ಸಾಹಿತ್ಯ ವೇದಿಕೆಯು 16 ವಯಸ್ಸಿನವರೆಗಿನ ಬಾಲ ಬರಹಗಾರರಿಗೆ "ವಿದ್ಯಾಸಾಗರ ಬಾಲ ಪುರಸ್ಕಾರ" ಮತ್ತು ಮಕ್ಕಳಿಗಾಗಿ ಕತೆ ಬರೆಯುವ ಹಿರಿಯರಿಗೆ "ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ" ನೀಡುತ್ತಿದ್ದು, ಅರ್ಜಿ ಆಹ್ವಾನಿಸಿದೆ.
ಬಾಲ ಬರಹಗಾರರು ಒಂದು ಸಂಕಲನಕ್ಕಾಗುವಷ್ಟು ಯಾವುದೇ ಪ್ರಕಾರದ ಪ್ರಕಟಿತ ಇಲ್ಲವೆ ಅಪ್ರಕಟಿತ ಕನ್ನಡ ಬರಹಗಳನ್ನು ಕಳುಹಿಸಬಹುದು.  ಕಥೆಗಳು ಕಳೆದ ಅಕ್ಟೋಬರ್‌ನಿಂದ ವರ್ಷದ ಅವಧಿಯೊಳಗೆ ರಚಿಸಿದವುಗಳಾಗಿರಬೇಕು. ಬರಹಗಳನ್ನು ಅಧ್ಯಕ್ಷರು, ಸಂಧ್ಯಾ ಸಾಹಿತ್ಯ ವೇದಿಕೆ, ಅಮೃತ ನಿವಾಸ, ಸಿ.ಬಿ. ಕಮಾನಿನ ಹತ್ತಿರ, ಶಹಾಪುರ-585223(ಯಾದಗಿರಿ ಜಿಲ್ಲೆ) ಇಲ್ಲಿಗೆ ಸೆಪ್ಟಂಬರ್ 30 ರೊಳಗೆ  ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ಮೊ. 9448651520 ಅಥವಾ 9986590894 ಗೆ ಸಂಪರ್ಕಿಸಬಹುದು.

No comments:

Post a Comment