ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Tuesday 10 July 2018

ಕುವೆಂಪು ಕೃತಿ ಬಗ್ಗೆ ಗೆಳೆಯ ಪ್ರಶಾಂತ್ ಬರೆದದ್ದು

'ಸ್ನಿಗ್ಧೋಜ್ಜ್ವಲಜ್ಯೋತ್ನ್ಸೆ'
ಈ ಪದವನ್ನು ಒಂದೇ ಬಾರಿಗೆ ಉಚ್ಚರಿಸಿ ನೋಡುವ. ಇಡೀ ಪದದ ಅರ್ಥವನ್ನು ಯಾವ ಕನ್ನಡ ನಿಘಂಟು ಹುಡುಕಿದರೂ ಸಿಗಲಾರದು. 'ಸ್ನಿಗ್ಧ+ಉಜ್ವಲ+ಜ್ಯೋತ್ನ್ಸೆ' ಎಂದು ಬಿಡಿಬಿಡಿಯಾಗಿ ಪದವನ್ನು ಒಡೆದು ಓದಿಕೊಂಡರೆ ಮಾತ್ರ ಅರ್ಥವಾಗುತ್ತದೆ. ಸ್ನಿಗ್ಧ = ಕೋಮಲವಾದ, ಉಜ್ವಲ = ಪ್ರಕಾಶಮಾನವಾದ, ಜ್ಯೋತ್ನ್ಸೆ = ಬೆಳದಿಂಗಳು. ಕೋಮಲವಾದ ಪ್ರಕಾಶಮಾನವಾದ ಬೆಳದಿಂಗಳು. ಇದು ಕುವೆಂಪು ಅವರು 'ಮಲೆನಾಡಿನ ಚಿತ್ರಗಳು' ಪುಸ್ತಕದಲ್ಲಿ 'ಕಾಡಿನಲ್ಲಿ ಕಳೆದ ಒಂದಿರುಳು' ಚಿತ್ರದಲ್ಲಿ ತಾವು ಕಂಡ ಬೆಳದಿಂಗಳನ್ನು ವರ್ಣಿಸಲು ಉಪಯೋಗಿಸಿರುವ ಪದ. ಪೂರ್ತಿ ವಾಕ್ಯದ ಸಾಲು ಹೀಗಿದೆ-
"ಕಂಬಳಿಯನ್ನು ಹೊದೆದುಕೊಂಡು, ಅಂಗಾತನೆ ಮಲಗಿ, ಅನಂತಾಕಾಶದಲ್ಲಿ ಸ್ವರ್ಣ ಜ್ಯೋತಿರ್ಮಯ ಬಿಂಬದಿಂದ ರಂಜಿಸುತ್ತಿದ ಯಾಮಿನೀಕಾಂತನಿಂದ ಹೊರಹೊಮ್ಮಿ ಬನದ ಮೇಲೆ ಎಡೆಬಿಡದೆ ಸುರಿಯುತ್ತಿದ್ದ ಸ್ನಿಗ್ಧೋಜ್ಜ್ವಲಜ್ಯೋತ್ನ್ಸೆಯನ್ನು ಕಣ್ಣಿನಿಂದ ಕುಡಿಯತೊಡಗಿದೆ."

ಕುಪ್ಪಳ್ಳಿಯ ಪ್ರಕೃತಿ ಸೌಂದರ್ಯದೊಂದಿಗೆ ಇಂತಹ ವಿಶಿಷ್ಟ ಕನ್ನಡ ಪದಗಳ ಭಂಡಾರವೇ ಈ ಪುಸ್ತಕದಲ್ಲಿ ತುಂಬಿಕೊಂಡಿದೆ. ಸವಿಯಲು ತಪ್ಪದೇ ಓದಿ. ಅಂತಹ ಪದಗಳಲ್ಲಿ ಕೆಲವು- 'ಮೇಘಗವಾಕ್ಷ, ಗೈರಿಕವಸಧಾರಿ, ವರ್ಣೋಪವರ್ಣ, ಧವಳಫೇನ, ಆವರ್ತಗರ್ತ, ಗಗನತಟಾಕ್ರಾಂತ, ಪರಿವೃತಶೈಲಶ್ರೇಣಿ, ಪಸುಳೆವಿಸಿಲು, ತಿಮಿರಬ್ರಹ್ಮಸಮಾಧಿ, ವಿಕಟನಿರ್ಘೋಷ, ಕಾಳಪಾಷಾಣಭಿತ್ತಿ, ಭೀಮಭೂರೋಹರಾಜಿ, ಉಲ್ಮೀಲಿತನಯ, ಶ್ವೇತೋರ್ಣಸದೃಶ, ಜೋತ್ಸ್ನಾತುಷಾರವೃಷ್ಟಿ...

No comments:

Post a Comment