ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ
- Home
- ಸಂಪಾದಕೀಯ
- ಮಕ್ಕಳು ಬರೆದ ಕತೆ /ಕವನಗಳು
- ನಮ್ಮೂರ ಸುದ್ದಿಗಳು
- ಮಕ್ಕಳ ಬರಹಗಳು
- ಬಾಲ ಸಾಧಕರು
- ಮಕ್ಕಳು ಬಿಡಿಸಿದ ಚಿತ್ರಗಳು
- ನಮ್ಮೂರ ಜಾನಪದ
- ಜ್ಞಾನ - ವಿಜ್ಞಾನ
- ಸಾಮಾನ್ಯ ಜ್ಞಾನ
- ನಮ್ಮ ಪತ್ರಿಕಾ ಅಭಿಯಾನಗಳು
- ಓದುಗರ ಓಲೆ
- ಅತಿಥಿ ಸಾಹಿತಿಗಳ ಅಂಕಣ
- ಮಕ್ಕಳ ಪುಸ್ತಕಗಳ ಪರಿಚಯ-ಆನ್ ಲೈನ್ ಬುಕ್ ಹೌಸ್
- ಶೈಕ್ಷಣಿಕ ಲೇಖನಗಳು
- ಶೈಕ್ಷಣಿಕ ಚಟುವಟಿಕೆಗಳು
- ಲಾಂಗ್ವೇಜ್ ಕಾರ್ನರ್
- 1ರಿಂದ -puc ತರಗತಿ ಈ ಶಾಲೆ
- ನನ್ನ ಶೈಕ್ಷಣಿಕ ವೀಡಿಯೋಗಳು
- ಸಾರ್ವಜನಿಕ ಶಿಕ್ಷಣ ಇಲಾಖೆ
- ಹಿಂದಿನ ಸಂಚಿಕೆಗಳು ಮತ್ತು ಪತ್ರಿಕೆ ಕುರಿತು ಮಾಧ್ಯಮ ವರದಿ ...
- ನಮ್ಮ ಕುರಿತು ಫೋಟೋ ಗ್ಯಾಲರಿ
- ಅಂಕಣ ಬರಹ- ಕನಸುಗಳೂರ ಶ್ರಮಿಕ
- ಆನ್ಲೈನ್ ಪುಸ್ತಕ ಮಳಿಗೆಗಳು
- ಪಿಡಿಎಫ್ ಪುಸ್ತಕಗಳು.
- Ravichandra
- ಆನ್ಲೈನ್ ಪಾಠಗಳು - ದೀಕ್ಷಾ ಪೊರ್ಟಲ್
- ಇನ್ನೋವೇಟಿವ್ ಎಜ್ಯುಕೇಶನ್
Friday 14 September 2018
bhumi butti chittara- raviraj sagar/ಭೂಮಿ ಬುಟ್ಟಿ ಚಿತ್ತಾರ ಹಾಗು ಹಸೆಗೋಡೆ ಚ...
ನಮ್ಮ ಜನಪದರ ಹಸೆಗೋಡೆ ಹಾಗು ಭೂಮಿ ಬುಟ್ಟಿ ಚಿತ್ತಾರ ಕಲೆ ಪರಿಚಯ - ನಮ್ಮೂರ ಜಾನಪದ ಅನುಸಂಧಾನದಲ್ಲಿ ..
ಈ ಲಿಂಕ್ ಕ್ಲಿಕ್ ಮಾಡಿ ..ಸಬ್ ಸ್ಕ್ರೈಬ್ / subscraibe ಬಟನ್ ಒತ್ತಿ ಹೆಚ್ಚು ಜಾನಪದ ವಿಡಿಯೋಗಳಿಗಾಗಿ ಬೆಂಬಲಿಸಿ
Saturday 1 September 2018
ಕಾರಣ ನೀನೇನಾ ..
ಕಾರಣ ನೀನೇನಾ....
ಪ್ರೀತಿಯ ಬೆಳಕು ಚೆಲ್ಲಿ
ವಿರಹದ ನೆರಳೂ ಹಿಂಬಾಲಿಸುವಂತೆ ಮಾಡಿದವಳು .....,?
ಸಾಗರದ ದಂಡೆಯಲ್ಲಿ ಜೊತೆ ಜೊತೆಗೆ ಹೆಜ್ಜೆ ಹಾಕಿ....
ಅವುಗಳನ್ನು ಅಳಿಸಿಬಿಡುವಂತೆ
ಅಲೆಗಳನು ಚೂ ಬಿಟ್ಟಿದ್ದು...?
ಒಲವ ಬಳ್ಳಿಯಲಿ
ಹೂ ಬಿಟ್ಟು ಅರಳುವವರೆಗೂ ನೀರುಣಿಸಿ
ಸಂಜೆವೇಳೆಗೆ ಬಾಡುವ ಶಾಪ ಕೊಟ್ಟಿದ್ದು...?
ಸ್ವರ್ಗದಲೇ ಮದುವೆ ನಿಶ್ಚಯ ಆಗಿರುವುದೆಂದು
ಬದನೆ ಶಾಸ್ತ್ರ ಅದ್ಯಾರಿಂದಲೋ ಹೇಳಿಸಿ
ಒಲವ ವಿಶ್ವಾಸದಲ್ಲಿ ತೇಲಿಸಿ
ಶ್ವಾಶವೆ ನಿಲ್ಲುವಂತೆ ಎದೆಗೆ ಬಂಡೆಕಲ್ಲು ತಳ್ಳಿದ್ದು...
ವಿಧಿ ಹಡೆದು ,ಹೆಣೆದು ಕಳಿಸಿದ ಬಲೆಯ
ನೀ ನನಗೆ ಬೀಸಲು ಕಾರಣವಿದೆಯ ಹೇಳಿಬಿಡು...
ಎಲ್ಲೋ ತೇಲಿ ಹೊರಟ ಮೋಡ ನೀನು..
ಹೆಪ್ಪುಗಟ್ಟಿ ಒಲವು ಉಕ್ಕಿಸಿ
ಒಲವ ವರ್ಷಧಾರೆ ಹರಿಸಿ
ಬಯಲು ಸೀಮೆಯ ಬಿಸಿಲಲಿ
ಒಂಟಿ ಮಾಡಲು ಕಾರಣವೆನಿತ್ತು...?
ಮತ್ತೆ ಮತ್ತೆ ಕೇಳಲಾರೆ ಕಾರಣ
ಬದುಕೀಗ ಅಲ್ಪಾವರಣ... ರವಿರಾಜ್ ಸಾಗರ್💕🌹🌹
Thursday 16 August 2018
ಉಪ್ಪಿನ ಗೊಂಬೆ
Wednesday 25 July 2018
ಕತಾ ಪುರಸ್ಕಾರಕ್ಕೆ ಅರ್ಜಿ..
ಶಹಾಪುರ: ಪ್ರತಿ ವರ್ಷದಂತೆ ಈ ಬಾರಿಯೂ ಇಲ್ಲಿಯ ಸಂಧ್ಯಾ ಸಾಹಿತ್ಯ ವೇದಿಕೆಯು 16 ವಯಸ್ಸಿನವರೆಗಿನ ಬಾಲ ಬರಹಗಾರರಿಗೆ "ವಿದ್ಯಾಸಾಗರ ಬಾಲ ಪುರಸ್ಕಾರ" ಮತ್ತು ಮಕ್ಕಳಿಗಾಗಿ ಕತೆ ಬರೆಯುವ ಹಿರಿಯರಿಗೆ "ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ" ನೀಡುತ್ತಿದ್ದು, ಅರ್ಜಿ ಆಹ್ವಾನಿಸಿದೆ.
ಬಾಲ ಬರಹಗಾರರು ಒಂದು ಸಂಕಲನಕ್ಕಾಗುವಷ್ಟು ಯಾವುದೇ ಪ್ರಕಾರದ ಪ್ರಕಟಿತ ಇಲ್ಲವೆ ಅಪ್ರಕಟಿತ ಕನ್ನಡ ಬರಹಗಳನ್ನು ಕಳುಹಿಸಬಹುದು. ಕಥೆಗಳು ಕಳೆದ ಅಕ್ಟೋಬರ್ನಿಂದ ವರ್ಷದ ಅವಧಿಯೊಳಗೆ ರಚಿಸಿದವುಗಳಾಗಿರಬೇಕು. ಬರಹಗಳನ್ನು ಅಧ್ಯಕ್ಷರು, ಸಂಧ್ಯಾ ಸಾಹಿತ್ಯ ವೇದಿಕೆ, ಅಮೃತ ನಿವಾಸ, ಸಿ.ಬಿ. ಕಮಾನಿನ ಹತ್ತಿರ, ಶಹಾಪುರ-585223(ಯಾದಗಿರಿ ಜಿಲ್ಲೆ) ಇಲ್ಲಿಗೆ ಸೆಪ್ಟಂಬರ್ 30 ರೊಳಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ಮೊ. 9448651520 ಅಥವಾ 9986590894 ಗೆ ಸಂಪರ್ಕಿಸಬಹುದು.
Friday 20 July 2018
ಕುಟುಂಬ ನಿರ್ವಹಣೆಗೆ ಕೆಲವು ಕಹಿ ಸತ್ಯದ ಔಷದೋಪಚಾರ...
*''ಸುಪ್ರೀಂಕೋರ್ಟ್- ಕೌಟುಂಬಿಕ ಕಲಹ ವಿಚಾರಣೆ ಮಾಡುವ-ನ್ಯಾಯಮೂರ್ತಿ''ಗಳ ಹತ್ತು ಸಲಹೆಗಳು"*
(1) *ನಿಮ್ಮ ಮಗ ಮತ್ತು ಆತನ ಹೆಂಡತಿಗೆ: ನಿಮ್ಮ ಒಟ್ಟಿಗೆ "ಒಂದೇ ಸೂರಿನಡಿ" ಇರಲು ಪ್ರೋತ್ಸಾಹಿಸಬೇಡಿ, ಬಾಡಿಗೆ ಮನೆಯಾದರೂ ಸರಿ ಹೊರ ಹೋಗಲು ತಿಳಿಸಿ,* ಅದು ಅವರ ಜವಾಬ್ದಾರಿ, ಅವರ ಕುಟುಂಬ ಮತ್ತು ಮಕ್ಕಳಿಂದ ದೂರವಿರಿ-ಕಾನೂನಿನ ರೀತಿ ಮಾತ್ರ ಸಂಬಂಧವಿರಲಿ,
(2) *ಮಗನ ಹೆಂಡತಿಯನ್ನು-ಆತನ ಹೆಂಡತಿ ಎಂದು ಪರಿಗಣಿಸಿ, ಆದರೆ ಸ್ವಂತ ಮಗಳು ಎಂದು ಪರಿಗಣಿಸಬೇಡಿ* ಆಕೆಯನ್ನು ಸ್ನೇಹಿತರಂತೆ ಕಾಣಿರಿ,ಮಗನನ್ನು
ನಿಮ್ಮ ಜೂನಿಯರ್ ಎಂದು ಪರಿಗಣಿಸಿ, ಆತನ ಹೆಂಡತಿಗೆ
ನೀವು ಬೈಯ್ಯುವಹಾಗೇ ಇಲ್ಲ,
ಬೈದರೆ ಜೀವನ ಪಯ್ಂತ ಅದನ್ನು ಜ್ಞಾಪಕ ಇಟ್ಟುಕೊಂಡು
ಸಾದಿಸುತ್ತಾಳೆ, ನಿಜಜೀವನದಲ್ಲಿ ಆಕೆಯ ಹೆತ್ತತಾಯಿಗೆ ಮಾತ್ರ ಬೈಯುವ- ದಂಡಿಸುವ-ತಿದ್ದುವ ಹಕ್ಕು ಇರುತ್ತದೆ-ನಿಮ್ಮದಲ್ಲ,
(3) *ಸೊಸೆಯ ಹವ್ಯಾಸ/ನಡವಳಿಕೆ ಏನಾದರೂ ಇರಲಿ-ಅದು ಮಗನ ಸಮಸ್ಯೆ,* - ನಿಮಗೆ
ಸೇರಿದ್ದಲ್ಲ,
(4) *ಒಟ್ಟಿಗೆ ಇದ್ದರೂ ವ್ಯವಹಾರ ಪ್ರತ್ಯೇಕವಾಗಿರಬೇಕು/ನಿಖರ ವಾಗಿರ ಬೇಕು,,* ಅವರುಗಳ ಬಟ್ಟೆಯನ್ನು ಒಗೆಯುವ/ಅಡುಗೆ ಮಾಡುವ/ಮಕ್ಕಳನ್ನು ನೋಡಿಕೊಳ್ಳುವ ಉಸಾಬರಿ ಬೇಡ, ಸೊಸೆ ಒತ್ತಾಯಕ್ಕೆ ನೋಡಿಕೂಂಡರೆ-ನಿಮಗೆ ಶಕ್ತಿ ಇರಬೇಕು/ಏನನ್ನೂ ಪ್ರತಿಫಲ ಬಯಸಬಾರದು,
ಮುಖ್ಯವಾಗಿ ಮಗನ ಕುಟುಂಬದ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ,ಅವನಿಗೆ
ಸೇರಿದ್ದು,
(5) *ಗಂಡ ಹೆಂಡತಿ ಜಗಳವಾಡುತ್ತಿದ್ದರೆ--ಕುರುಡರ ಹಾಗೆ/ಕಿವುಡರ ಹಾಗೆ ಇದ್ದುಬಿಡಿ,* ಯುವಜೋಡಿಗಳು
ನೀವು ಮದ್ಯೆಬರುವುದನ್ನು ಇಷ್ಟಪದುವುದಿಲ್ಲ,
(6) *ಮೊಮಕ್ಕಳನ್ನು ಸರಿಯಾಗಿ ಬೆಳೆಸುವುದು--ಒಳ್ಳೆಯದು/ಕೆಟ್ಟದ್ದು ಎಲ್ಲಾ ಅವರಿಗೇ ಸೇರಿದ್ದು, ನಿಮ್ಮದ್ದಲ್ಲ,*
(7) *ನಿಮ್ಮ ಸೊಸೆ ನಿಮಗೆ ಗೌರವಿಸುವ/ಸೇವೆ ಮಾಡಬೇಕಾದ ಅಗತ್ಯವಿಲ್ಲ*
- ಅದು ನಿಮ್ಮ ಮಗನ ಜವಾಬ್ದಾರಿ, ಮಗ ಸಮಾಧಾನ ವಾಗಿರಬೇಕು ಎನ್ನುವುದಾದರೆ ?
ನೀಮ್ಮ ಆಕೆಯ ಸಂಬಂಧ ಉತ್ತಮವಾಗಿರಬೇಕು,
(8) *ನಿಮ್ಮ ನಿವೃತ್ತಿ ಜೀವನಕ್ಕೆ ಮೊದಲೇ ಎಲ್ಲಾ ವ್ಯವಸ್ಥೆ ಮಾಡಿಕೊಂಡಿರಬೇಕು,*
ಮಕ್ಕಳು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ ಎಂದು ನಂಬಬೇಡಿ/ಅವಲಂಬಿಸಬೇಡಿ,
ನೀವು ಜೀವನದ ಬಹುಕಾಲ ಪ್ರಯಾಣ ಮಾಡಿದ್ದೀರ,-ಕೊನೆಯವರಗೂ
ಇನ್ನೂ ತಿಳಿಯುವುದು ಇದ್ದೇಇರುತ್ತದೆ,
(9) *ನಿಮ್ಮ ನಿವೃತ್ತ ಜೀವನ ನಮಗೆ ಸೇರಿದ್ದು:*
ಹಣವನ್ನು ಉಪಯೋಗಿಸಿ/ಸಂತೋಷಪಡಿ,ಸಾಯುವ ಒಳಗೆ ಅದನ್ನು ಉಪಯೋಗಿಸಿಕೂಳ್ಳಿ,
ಗಳಿಸಿಟ್ಟು ಅದನ್ನು ವ್ಯರ್ಥ ಮಾಡಬೇಡಿ,
(10) *ಮೊಮ್ಮಕ್ಕಳು ನಿಮ್ಮ ಕುಟುಂಬಕ್ಕೆ ಸೇರಿಲ್ಲ* - ಅವರ ತಂದೆ-ತಾಯಿಯ ಕೊಡುಗೆ,:
ಈ ಸಂದೇಶ ನಿಮಗೊಬ್ಬರಿಗಲ್ಲ
ಮಿತ್ರರು,ಬಂಧುಗಳು,ತಂದೆ- ತಾಯಿಗಳಿಗೆ, ಗಂಡ-ಹೆಂಡತಿ, ಸಮಾಜದ ಎಲ್ಲರಿಗೂ ಹಂಚಿ ಎಂದು ಸುಪ್ರೀಂಕೋರ್ಟ್
ನ್ಯಾಯಾದೀಶರು, ಕೌಟುಂಬಿಕ
ಕಲಹ ತೀರ್ಪು ನೀಡುತ್ತಿದ್ದವರ ಸಲಹೆ
*(ಕನ್ನಡ ಅನುವಾದ)*
Wednesday 11 July 2018
ಅಲ್ಲಾ ಗಿರಿರಾಜ್ ಅವರ ಗಝಲ್ ಸಂವಾದ
ಕನ್ನಡದ ಪ್ರಮುಖ ಗಜಲ್ ಸಾಹಿತ್ಯ ಕೃಷಿಕ "ಅಲ್ಲಾ ಗಿರಿರಾಜ್" ಅವರು 'ನೂರ್ ಗಜಲ್' ನಂತರ ಮತ್ತೆ ಕನ್ನಡ ಸಾಹಿತ್ಯದಲ್ಲಿ ಗಜಲ್ ಸಾಹಿತ್ಯ ಸುಗಂಧ ಹರಡುತ್ತಿರುವ "ಸುರೂರ್ ಗಜಲ್" ಕೃತಿಯನ್ನು ಪ್ರೀತಿಯಿಂದ ನೀಡಿದರು..
ಮನಸು ಮನಸುಗಳ ನಡುವಿನ ಪ್ರೀತಿಯ ಕಟ್ಟುವ ಪ್ರೀತಿ ವೃತಾಂತ ಸಾರುವ ಮಹತ್ವದ ಗಜಲ್ ಪ್ರಕಾರವೇ ಹಾಗೆ ಅವು ಪ್ರೇಮ ವೃತಾಂತದ ವಿಶಿಷ್ಟ ದ್ವಿಪದಿ.
ಗಜಲ್ ರಚನಾ ಕ್ರಮದ ಬಗ್ಗೆ ನನಗೆ ಒಂದಿಷ್ಟು ಸ್ಪಷ್ಟತೆ ದೊರೆತಿದ್ದೆ ಈ ಕೃತಿ ಓದಿದಮೇಲೆ..ಮೂಲ ಗಜಲ್ ರಚನಾ ಕ್ರಮದಿಂದ ಸ್ಫೂರ್ತಿಗೊಂಡು ಒಂದಿಷ್ಟು ಕನ್ನಡೀಕರಿಸಿ ನಮ್ಮ ನಾಡಿನಲ್ಲಿ ಒಂದಿಷ್ಟು ಗಜಲ್ ಸಾಹಿತ್ಯ ಪುಷ್ಪ ಕೃಷಿ ಮಾಡುತ್ತಿರುವವರು ಹಲವರಿದ್ದಾರೆ.. ನಮ್ಮ ಕವಿಮಿತ್ರ ಅರಿಫ್ ರಾಜ ಸಹ ಆ ನಿಟ್ಟಿನ ಯಶಸ್ವಿ ಪಯಣ ಆರಂಭಿಸಿದ್ದಾರೆ. ರಚನಾ ವಿಶೇಷತೆ, ಮೂಲ ಗಜಲ್ ಸೆಲೆಯ ದಾರಿಯ ಪಯಣದಲ್ಲಿ ಅಲ್ಲಾ ಗಿರಿರಾಜ್ ಅವರದ್ದು ವಿಶಿಷ್ಟ ನಡೆಗೆ ಈ ಕೃತಿಯು ಸಹ ನೂರ್ ಗಜಲ್ ನಷ್ಟೇ ವಿಶೇಷತೆ ಉಳಿಸಿಕೊಂಡಿದೆ.
"ಧರ್ಮದ ಝಂಡಾ ಕಟ್ಟಿಕೊಂಡ ಮಂದಿರ ಮಸೀದಿಗಿಂತ ಮೌನ ಸ್ಮಶಾನ ಲೇಸು
ನೋವಿಗಾಗಿಯೇ ಅಳುವ ಕಣ್ಣುಗಳಿಗಿಂತ ನಗದಂತೆ ಮೌನವಾಗಿರುವ ನಿನ್ನ ತುಟಿ ಲೇಸು" ಎನ್ನುವ ಕವಿಯ ಒಟ್ಟು ಆಶಯ ಅಲ್ಲಲ್ಲಿ ಹಲವೆಡೆ ಗಜಲ್ಗಳಲ್ಲಿ ರೂಪದರ್ಶನ ಮಾಡಿದೆ.
ನಿನ್ಹೆಜ್ಜೆಗಳು ಸದ್ದಾಗದಿರಲಿ ಎನ್ನ ಮನದಂಗಳದಲ್ಲಿ
ಅಲ್ಲಿ ಕನಸುಗಳು ಹುಳಿಉಂಡು ಹೆಪ್ಪಾಗುತಿವೆ ನಾಳೆಗಾಗಿ " ಎಂದೂ ಬಹುತೇಕ ಗಜಲ್ ಸೊಬಗಿನ ಹಲವು
ರೂಪಕಗಳ ಪದಮಾಲೆ ಪೋಣಿಸಿದ್ದಾರೆ..ಹಲವು ಕಡೆ ಬೇಂದ್ರೆ,ಅರವಿಂದ ರವೀಂದ್ರ, ಅಲ್ಲಮ ಮುಂತಾದವರು ಉಲ್ಲೇಖ ಮಾಡಲಾಗಿದೆ.ನಾಡಿನ ಹಲವು ಸ್ಥಳಗಳು ಬನವಾಸಿ, ತಲಕಾಡು ಇಣುಕುತ್ತವೆ.ಕನ್ನಡ ಬಿಟ್ಟು ಬೇರೆ ಬಾಷೆ ಅರಿಯದ ನನ್ನಂತವನಿಗಾಗಿ ಅರ್ಥ ಆಗದ ಪದಗಳ ಅರ್ಥ ಅಲ್ಲೇ ನೀಡಿದ್ದು ಈ ಕೃತಿಯ ವಿಶೇಷತೆ. ಹೊಸ ಸಾಹಿತ್ಯ ಅನುಭವಕ್ಕೆ ಈ ಕೃತಿ ಓದಲೇ ಬೇಕು. ಮತ್ತೆ ಮತ್ತೆ ಕಾಡುತಿವೆ ಕೆಲವು .ಪ್ರೀತಿ ಪ್ರೇಮ ಬರಹಗಳೆಂದರೆ ಮತ್ತೆ ಕಾಡದೆ ಬಿಡವು ಸಹ. ಇನ್ನು ಕಾಡಲಿಕ್ಕೆಂದೇ ಹುಟ್ಟಿದ ಗಿರಿರಾಜರ ಮೋಡಿಯ ಗಝಲ್ ಬಿಟ್ಟಾವೆಯೇ ...
ಹೆಚ್ವು ಬರೆಯಲು ಈ ಬಗ್ಗೆ ಹೆಚ್ಚು ಗೊತ್ತಿಲ್ಲ.. ಮತ್ತೆ ಓದಿ ಮತ್ತೆ ತಿಳಿದು ಮತ್ತೆ ಬರೆವೆ...
- ರವಿರಾಜ ಮಾರ್ಗ
.
Tuesday 10 July 2018
ಕುವೆಂಪು ಕೃತಿ ಬಗ್ಗೆ ಗೆಳೆಯ ಪ್ರಶಾಂತ್ ಬರೆದದ್ದು
'ಸ್ನಿಗ್ಧೋಜ್ಜ್ವಲಜ್ಯೋತ್ನ್ಸೆ'
ಈ ಪದವನ್ನು ಒಂದೇ ಬಾರಿಗೆ ಉಚ್ಚರಿಸಿ ನೋಡುವ. ಇಡೀ ಪದದ ಅರ್ಥವನ್ನು ಯಾವ ಕನ್ನಡ ನಿಘಂಟು ಹುಡುಕಿದರೂ ಸಿಗಲಾರದು. 'ಸ್ನಿಗ್ಧ+ಉಜ್ವಲ+ಜ್ಯೋತ್ನ್ಸೆ' ಎಂದು ಬಿಡಿಬಿಡಿಯಾಗಿ ಪದವನ್ನು ಒಡೆದು ಓದಿಕೊಂಡರೆ ಮಾತ್ರ ಅರ್ಥವಾಗುತ್ತದೆ. ಸ್ನಿಗ್ಧ = ಕೋಮಲವಾದ, ಉಜ್ವಲ = ಪ್ರಕಾಶಮಾನವಾದ, ಜ್ಯೋತ್ನ್ಸೆ = ಬೆಳದಿಂಗಳು. ಕೋಮಲವಾದ ಪ್ರಕಾಶಮಾನವಾದ ಬೆಳದಿಂಗಳು. ಇದು ಕುವೆಂಪು ಅವರು 'ಮಲೆನಾಡಿನ ಚಿತ್ರಗಳು' ಪುಸ್ತಕದಲ್ಲಿ 'ಕಾಡಿನಲ್ಲಿ ಕಳೆದ ಒಂದಿರುಳು' ಚಿತ್ರದಲ್ಲಿ ತಾವು ಕಂಡ ಬೆಳದಿಂಗಳನ್ನು ವರ್ಣಿಸಲು ಉಪಯೋಗಿಸಿರುವ ಪದ. ಪೂರ್ತಿ ವಾಕ್ಯದ ಸಾಲು ಹೀಗಿದೆ-
"ಕಂಬಳಿಯನ್ನು ಹೊದೆದುಕೊಂಡು, ಅಂಗಾತನೆ ಮಲಗಿ, ಅನಂತಾಕಾಶದಲ್ಲಿ ಸ್ವರ್ಣ ಜ್ಯೋತಿರ್ಮಯ ಬಿಂಬದಿಂದ ರಂಜಿಸುತ್ತಿದ ಯಾಮಿನೀಕಾಂತನಿಂದ ಹೊರಹೊಮ್ಮಿ ಬನದ ಮೇಲೆ ಎಡೆಬಿಡದೆ ಸುರಿಯುತ್ತಿದ್ದ ಸ್ನಿಗ್ಧೋಜ್ಜ್ವಲಜ್ಯೋತ್ನ್ಸೆಯನ್ನು ಕಣ್ಣಿನಿಂದ ಕುಡಿಯತೊಡಗಿದೆ."
ಕುಪ್ಪಳ್ಳಿಯ ಪ್ರಕೃತಿ ಸೌಂದರ್ಯದೊಂದಿಗೆ ಇಂತಹ ವಿಶಿಷ್ಟ ಕನ್ನಡ ಪದಗಳ ಭಂಡಾರವೇ ಈ ಪುಸ್ತಕದಲ್ಲಿ ತುಂಬಿಕೊಂಡಿದೆ. ಸವಿಯಲು ತಪ್ಪದೇ ಓದಿ. ಅಂತಹ ಪದಗಳಲ್ಲಿ ಕೆಲವು- 'ಮೇಘಗವಾಕ್ಷ, ಗೈರಿಕವಸಧಾರಿ, ವರ್ಣೋಪವರ್ಣ, ಧವಳಫೇನ, ಆವರ್ತಗರ್ತ, ಗಗನತಟಾಕ್ರಾಂತ, ಪರಿವೃತಶೈಲಶ್ರೇಣಿ, ಪಸುಳೆವಿಸಿಲು, ತಿಮಿರಬ್ರಹ್ಮಸಮಾಧಿ, ವಿಕಟನಿರ್ಘೋಷ, ಕಾಳಪಾಷಾಣಭಿತ್ತಿ, ಭೀಮಭೂರೋಹರಾಜಿ, ಉಲ್ಮೀಲಿತನಯ, ಶ್ವೇತೋರ್ಣಸದೃಶ, ಜೋತ್ಸ್ನಾತುಷಾರವೃಷ್ಟಿ...
-
ಚಿಕ್ಕಂದಿನಲ್ಲಿ ನಮಗೆ ಬರುತ್ತಿದ್ದ, ನಾವೆಲ್ಲಾ ಹಾಡುತ್ತಿದ್ದ ಮರೆಯಲಾಗದ ಪದ್ಯಗಳು.. ಇವುಗಳಲ್ಲಿ ನಿಮಗೆಷ್ಟು ಗೊತ್ತು.. ತಿಳಿಸಿ..* ❤️❤️❤️...
-
ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಶಾಲಾಮಾಹಿತಿ ಸಲ್ಲಿಸಿ. ಈ ಮೇಲಿನ ಲಿಂಕ್ ಮಾಡಿ ಬೇಡಿಕೆ ಮಾಹಿತಿ ಸಲ್ಲಿಸಲು ಕೋರುವೆವು.
-
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಳೂರು ಶಾಲಾ ಮಕ್ಕಳ ಮಂತ್ರಿಮಂಡಲದಿಂದ ಶಾಲೆಯಲ್ಲಿ ಆಟದ ಮೈದಾನ, ವಿವಿಧ ಕ್ರೀಡಾಂಗಣ, ಶಾಲಾ ಪ್ರಾರ್ಥನ ಅಂಕಣದಲ್ಲಿ ಸಿಮೆಂಟ್ ಬ್ರಿಕ್...