ಯಾವ ಬಡವನೂ ಹಣ ಕೊಡಿ. ಹೆಂಡ ಕೊಡಿ ಎಂದು ಯಾವ ರಾಜಕಾರಣಿಗಳ ಮನೆಗೂ ಹೋಗಲಿಲ್ಲ . ರಾಜಕೀಯ ಪಕ್ಷಗಳ ಮುಖಂಡರ ಸ್ಪರ್ಧಾ ವ್ಯವಸ್ಥೆ ಗೆಲ್ಲುಲು ಜನಸಾಮಾನ್ಯರ ಅಸಹಾಯಕತೆ,ಹಸಿವು, ಅವಿವೇಕತೆ ಬಳಸಿಕೊಂಡು ಇಡೀ ಜನಸಾಮಾನ್ಯರ ಸಮೂಹವನ್ನು ತಮ್ಮ ವೃತ್ತದೊಳಗೆ ಸಿಲುಕಿಸಿದರು . ( ಅಂದಿನವ ರಾಜಪ್ರಭುತ್ವದ ಕಾಲ ಇನ್ನೂ ಶೋಚನೀಯ ಹಂತದಲ್ಲಿತ್ತು)
. ಪ್ರಜಾಪ್ರಬುತ್ವ ಬಂದಮೇಲೆ ಜನಸಾಮಾನ್ಯರ ಉದ್ದಾರದ ಹೆಸರಲ್ಲಿ ಯಾವುದೇ ಆರ್ಥಿಕ ಮೂಲಗಳಿರದ ಬಡತನದ... ಅಶಿಕ್ಷಿತ ಶ್ರೀ ಸಾಮಾನ್ಯರತ್ತ ಕೈ ಚಾಚಿ ತಾವು ಮೇಲೇ ನಿಂತು ಭೂ ಸಂಪತ್ತನ್ನು ತಮ್ಮಲ್ಲಿ ಉಳಿಸಿಕೊಂಡರು. ಕೆಲವರು ಭಾಷಣ ಬಿಗಿದರು. ಬರಹಗಾರರು... ದೊಡ್ಡ ದೊಡ್ಡ ಪುಸ್ತಕ ಬರೆದರು. ಕೆಲವರುಬಡ ಬಡವರ ಸೇವೆ ಮಾಡಿ ಗುಡಿಯೋಳಗೆ ದೇವರಾಗಿ ಬಂಧಿ ಆದರು. ಕೆಲವೇ ಶ್ರಮಿಕರು ಬುದ್ಧಿ ಬಲದಿಂದ ಮೇಲೆ ಬಂದರು.. ತುಂಡು ಭೂಮಿಯಿಲ್ಲದೇ ದುಡಿವ ಕಠಿಣ ಶ್ರಮಿಕ ಜಾತಿಗಳು ಎಷ್ಟು ದುಡಿದರೂ ಅಷ್ಟೇ ಅನ್ನುವ ವ್ಯವಸ್ಥೆ ಹೆಣೆಯಲಾಯಿತು. ಅಸಹಾಯಕ ಸ್ಥಿತಿಯ ಅವರು ಶತ ಶತಮಾನಗಳಿಂದ ಹಾಗೇ ಉಳಿವಂತ ಆರ್ಥಿಕ ಸ್ಥಿತಿ ಹೇರಲಾಗಿದೆ. ಈ ಭೂಮಿ..ಇಲ್ಲಿಯ ಬಹುತೇಕ ಸಂಪತ್ತು ಮೇಲ್ವರ್ಗದವರ ಹಿಡಿತದಲ್ಲೇ ಉಳಿದಿದೆ. ಭೂಮಿಯ ಮೇಲೆ ಖಾಸಗಿ ಒಡೆತನದ ಪರಿಕಲ್ಪನೆಯೇ ಈ ಅಸಮತೋಲನಕೆ ಕಾರಣ. ನೈಸರ್ಗಿಕ ವಿರೋಧ ಪ್ರಕ್ರಿಯೆ ಅದು. ಆಸ್ತಿ , ಭೂಮಿ ಮೇಲೆ ನಿರಂತರವಾಗಿ ತಲೆಮಾರಿನಿಂದ ತಲೆಮಾರಿಗೆ ಖಾಸಗಿ ಒಡೆತನದ ಹಕ್ಕು ನೀಡುವ ಪ್ರಕ್ರಿಯೆ ನಿಂತಂದು ಜಗತ್ತಿನ ಬಹುತೇಕ ಸಮಸ್ಯೆಗೆ ಪರಿಹಾರ ಸಿಗಲಿದೆ. ಯಾರೂ ಅತಿಯಾಗಿ ಆಸ್ತಿ ಕೊಡಿಡುವ ಕೆಲಸ ಮಾಡರು. ಆಗ ಭ್ರಷ್ಟಾಚಾರ, ಆಸ್ತಿ ಕೂಡಿಡುವ ಪೈಪೋಟಿ ಕಡಿಮೆಯಾಗಿ ಸಾಮಾನ್ಯರಿಗೂ ಒಂದಿಷ್ಟು ಭೂಮಿ, ಆರ್ಥಿಕ ಮೂಲಗಳ ಸುಲಭ ಲಭ್ಯತೆ.. ಎಲ್ಲರಂತೆ ಬದುಕುವ ವ್ಯವಸ್ಥೆಗೆ ದಾಪುಗಾಲಿಡುವರು. ಸರ್ಕಾರದ ಭಾಗ್ಯಗಳ ಮೇಲೆ ನಿರೀಕ್ಷೆ ಕಡಿಮೆಯಾಗಿ ಆರ್ಥಿಕವಾಗಿ ಅಸಮತೋಲನವಲ್ಲದ ಸಹಬಾಳ್ವೆಯ ಸಮಾಜ ತಂತಾನೆ ಬೆಳೆಯುತ್ತದೆ ಎನ್ನುವುದು ನನ್ನ ಅಭಿಮತ. - ರವಿರಾಜ್ ಸಾಗರ್.
ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ
- Home
- ಸಂಪಾದಕೀಯ
- ಮಕ್ಕಳು ಬರೆದ ಕತೆ /ಕವನಗಳು
- ನಮ್ಮೂರ ಸುದ್ದಿಗಳು
- ಮಕ್ಕಳ ಬರಹಗಳು
- ಬಾಲ ಸಾಧಕರು
- ಮಕ್ಕಳು ಬಿಡಿಸಿದ ಚಿತ್ರಗಳು
- ನಮ್ಮೂರ ಜಾನಪದ
- ಜ್ಞಾನ - ವಿಜ್ಞಾನ
- ಸಾಮಾನ್ಯ ಜ್ಞಾನ
- ನಮ್ಮ ಪತ್ರಿಕಾ ಅಭಿಯಾನಗಳು
- ಓದುಗರ ಓಲೆ
- ಅತಿಥಿ ಸಾಹಿತಿಗಳ ಅಂಕಣ
- ಮಕ್ಕಳ ಪುಸ್ತಕಗಳ ಪರಿಚಯ-ಆನ್ ಲೈನ್ ಬುಕ್ ಹೌಸ್
- ಶೈಕ್ಷಣಿಕ ಲೇಖನಗಳು
- ಶೈಕ್ಷಣಿಕ ಚಟುವಟಿಕೆಗಳು
- ಲಾಂಗ್ವೇಜ್ ಕಾರ್ನರ್
- 1ರಿಂದ -puc ತರಗತಿ ಈ ಶಾಲೆ
- ನನ್ನ ಶೈಕ್ಷಣಿಕ ವೀಡಿಯೋಗಳು
- ಸಾರ್ವಜನಿಕ ಶಿಕ್ಷಣ ಇಲಾಖೆ
- ಹಿಂದಿನ ಸಂಚಿಕೆಗಳು ಮತ್ತು ಪತ್ರಿಕೆ ಕುರಿತು ಮಾಧ್ಯಮ ವರದಿ ...
- ನಮ್ಮ ಕುರಿತು ಫೋಟೋ ಗ್ಯಾಲರಿ
- ಅಂಕಣ ಬರಹ- ಕನಸುಗಳೂರ ಶ್ರಮಿಕ
- ಆನ್ಲೈನ್ ಪುಸ್ತಕ ಮಳಿಗೆಗಳು
- ಪಿಡಿಎಫ್ ಪುಸ್ತಕಗಳು.
- Ravichandra
- ಆನ್ಲೈನ್ ಪಾಠಗಳು - ದೀಕ್ಷಾ ಪೊರ್ಟಲ್
- ಇನ್ನೋವೇಟಿವ್ ಎಜ್ಯುಕೇಶನ್
Thursday 31 March 2016
ಹಣ, ಹೆಂಡ ಕೊಡಿ ಎಂದು ಬೇಡಿದವರಾರು..?
Tuesday 29 March 2016
ರವಿರಾಜ ಮಾರ್ಗದ ಮೈಲಿಗಲ್ಲುಗಳು...
ಅವಸರದ ಪ್ರಯಾಣ
ಅಪಘಾತಕೆ ಕಾರಣವಾದೀತು...
ಅವಸರದಿ ಗೀಚಿ
ಪತ್ರಿಕೆಗೆ ಕಳಿಸಿದರೆ
ಕಸದ ಬುಟ್ಟಿಗೆ ಸೇರೀತು...
ಎಚ್ಚರವೆಂದ ರವಿರಾಜ ಮಾರ್ಗ.
ಜಗದ ವ್ಯವಸ್ಥೆಯಲಿ ಈಜುವಾಗ
ಭ್ರಷ್ಟಾಚಾರದ ಕೆಸರು ಪಾದಕಂಟದೇ ಬಿಡದು.
ನಿನ್ನ ನಾಲಗೆ ಸುಮ್ಮನಿದ್ದರೂ
ಜಗದ ಜನರ ನಾಲಗೆ ನಿನ್ನ ಬಿಡದು.
ಒಳ್ಳೆಯ ಮರ ಕಂಡರೆ ಎಲ್ಲರಿಗೂ ಇಷ್ಟ. ..
ನೆರಳಲಿ ಕೂತು....
ಕಾಂಡವನ್ನೇ ಕಡಿದೊಯ್ದು
ಬಿಸಿಲೆಂದು ಪೇಚಾಡುವರು.
Wednesday 23 March 2016
ಹಿಂಗೂ ಬರೀಬಹುದಾ...
ಕಚ್ಚಿದ ಇರುವೆಯ ಕಚ್ಚಲಾರೆ...
ಚುಚ್ಚಿದ ಮುಳ್ಳನು ಚುಚ್ಚಲಾರೆ..
ಸ್ವಲ್ಪ ಒಳ್ಳೆ ಹುಡುಗ ನಾನು.
ದಯೆಯೇ ಧರ್ಮ ಅಲ್ಲವೇನು..?
-ರವಿರಾಜ ಮಾರ್ಗ.
ರವಿರಾಜ್ ಸಾಗರ್,
Friday 18 March 2016
ಪ್ರಾಥಮಿಕ ಶಾಲೆ ಶಿಕ್ಷಕರೆಂದರೆ ಯಾರು.?
ಅಕ್ಷರ ದಾಸೋಹ
ಕ್ಷೀರಭಾಗ್ಯ
ಸುವರ್ಣ ಆರೋಗ್ಯ ಚೈತನ್ಯ
ಸೈಕಲ್ ವಿತರಣೆ
ಪಠ್ಯಪುಸ್ತಕ ವಿತರಣೆ
ಬ್ಯಾಗ್ ವಿತರಣೆ..ಶೂ
ಚಿಣ್ಢರ ಅಂಗಳ
ಕೂಲಿಯಿಂದ ಶಾಲೆಗೆ
ಬಾ ಬಾಲೆ ಶಾಲೆಗೆ
ಬಾ ಮರಳಿ ಶಾಲೆಗೆ
ಶಾಲಾ ಪ್ರಾರಂಭೋತ್ಸವ
ದಾಖಲಾತಿ ಆಂದೋಲನ
ಶಾಲೆ ಬಿಟ್ಟ ಮಕ್ಕಳ ಮನೆಭೇಟಿ
ಎಸ್ ಡಿ ಎಂ ಸಿ ರಚನೆ
ಶೌಚಾಲಯ ನಿರ್ವಹಣೆ
ಕಟ್ಟಡ ಕಾಮಗಾರಿ
ಸಮುದಾಯದತ್ತ ಶಾಲೆ
ಶಾಲಾ ವಾರ್ಷಿಕೋತ್ಸವ
ಪ್ರಗತಿಪತ್ರ ತುಂಬವುದು
ಪಾಠಯೋಜನೆ
ಪಾಠಬೋಧನೆ
ಕ್ರಿಯಾಯೋಜನೆ
ಕ್ರೀಯಾಸಂಶೋಧನೆ
ಶೈಕ್ಷಣಿಕ ಯೋಜನೆ
ದಾಖಲೆ ನಿರ್ವಹಣೆ
ಡಾಟ ಎಂಟ್ರಿ
ಮಕ್ಕಳಿಗೆ ಬ್ಯಾಂಕ್ ಖಾತೆ ತರೆಯುವುದು
ವಿದ್ಯಾರ್ಥಿವೇತನ
ಸಮನ್ವಯ ಶಿಕ್ಷಣ
ಜನಗಣತಿ
ಮಕ್ಕಳ ಗಣತಿ
ಜಾತಿಗಣತಿ
ಚುನಾವಣಾಕಾರ್ಯ
ಬಿಎಲ್ ಒ ಕೆಲಸ
ಗುಳಿಗೆ ಹಂಚಿಕೆ
ಪಲ್ಸ್ ಪೋಲಿಯೋ
ಸಮಾಲೋಚನ ಸಭೆ
ಎಸ್ ಡಿ ಎಂ ಸಿ ಸಭೆ
ಪಾಲಕರ ಸಭೆ
ಶಿಕ್ಷಕರ ಸಭೆ
ಪುನಶ್ಚೇತನ ತರಬೇತಿ
ಬ್ರಿಟಿಷ್ ಕೌನ್ಸಿಲ್ ತರಬೇತಿ
ಹೊರಸಂಚಾರ
ಕ್ಷೇತ್ರ ಸಂದರ್ಶನ
ಶೈಕ್ಷಣಿಕ ಪ್ರವಾಸ
ಜಿಲ್ಲಾದರ್ಶನ
ಸೇತುಬಂಧ
ಪರಿಹಾರ ಬೋಧನೆ
ಪೂರಕಬೋಧನೆ
ನಲಿ ಕಲಿ
ಕಲಿ ನಲಿ
ಚೈತನ್ಯ ಮಾದರಿ
ಟಿ ಎಲ್ ಎಂ ತಯಾರಿ
ಚಿನ್ನರಚುಕ್ಕಿ
ಚುಕ್ಕಿಚಿನ್ನ
ಕೇಳಿಕಲಿ
ಕ್ರೀಡಾಮೇಳ
ಪ್ರತಿಭಾ ಕಾರಂಜಿ
ಕಲಿಕೋತ್ಸವ
ಮೆಟ್ರಿಕ್ ಮೇಳ
ವಿಜ್ಞಾನ ಮೇಳ
ಸಾಂಸ್ಕೃತಿಕ ಕಾರ್ಯಕ್ರಮ
ಸೈನ್ಸ ಇನ್ಸ್ ಪೈಯರ್ ಅವಾರ್ಡ್
ಪೂರಕ ಪರೀಕ್ಷೆ
ನೈದಾನಿಕ ಪರೀಕ್ಷೆ
ಸಿಸಿಇ ಪರೀಕ್ಷೆ
ಘಟಕ ಪರೀಕ್ಷೆ
ಮೊರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆ
ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ
ಕಸ್ತೂರಿ ಬಾ ಬಾಲಿಕ ವಿದ್ಯಾಲಯ ಪ್ರವೇಶ ಪರೀಕ್ಷೆ
ನವೋದಯ ಪ್ರವೇಶ ಪರೀಕ್ಷೆ
ಎನ್ ಟಿ ಎಸ್ ಪರೀಕ್ಷೆ
ಎನ್ ಎಮ್ ಎಮ್ ಎಸ್ ಪರೀಕ್ಷೆ
ಗಣರಾಜ್ಯೋತ್ಸವ
ಸ್ವಾತಂತ್ರ್ಯೋತ್ಸವ
ಹೈ-ಕ ವಿಮೋಚನಾ ದಿನಾಚರಣೆ
ಯುವಕರ ದಿನಾಚರಣೆ
ಮಕ್ಕಳ ದಿನಾಚರಣೆ
ಶಿಕ್ಷಕರ ದಿನಾಚರಣೆ
ಸಾಕ್ಷರತ ದಿನಾಚರಣೆ
ಪರಿಸರ ದಿನಾಚರಣೆ
ವಿಜ್ಞಾನಿಗಳ ದಿನಾಚರಣೆ
ರಾಷ್ಟ್ರೀಯ ಶಿಕ್ಷಣ ದಿನಾಚರಣೆ
ಭೂ ದಿನಾಚರಣೆ
ಗಾಂಧಿ ಜಯಂತಿ
ಕನಕ ಜಯಂತಿ
ಬಸವ ಜಯಂತಿ
ಅಂಬೇಡ್ಕರ್ ಜಯಂತಿ
ಕನ್ನಡ ರಾಜ್ಯೋತ್ಸವ
ಬಾಬು ಜಗಜೀವನ್ ರಾಂ ದಿನಾಚರಣೆ
ವನಮಹೋತ್ಸವ
ಇತ್ಯಾದಿ ಇತ್ಯಾದಿ.
ಇವನ್ನೆಲ್ಲ ಮಾಡಿ . . ಸರ್ಕಾರದ ಶಾಲೆಗೆ ಬರಬಹುದಾದ ಮಕ್ಕಳನ್ನೂ ಆರ್ ಟಿ ಇ ನೆಪದಲ್ಲಿ ಒಂದಷ್ಟು.. ನವೋದಯ, ಮುರಾರ್ಜಿ ಶಾಲೆ. ಆದರ್ಶ ಶಾಲೆ, ಕಿತ್ತೂರು ಚೆನ್ನಮ್ಮ ವಸತಿ ಶಾಲೆ, ಮತ್ತಿತರೆ ಶಾಲೆಗೆ ಪ್ರತಿಭಾವಂತ ವಿದ್ಯಾರ್ಥಿ ಗಳ ನ್ನು ಶೋಸಿ ಕಳಿಸಿ, ಬಡವರ, ವಲಸೆ ಕುಟುಂಬದ ಹಳ್ಳಿಗಳಲ್ಲಿ ಉಳಿದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಇರುವವರೇ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು. .!! ಬೆಳಿಗ್ಗೆ ಇಂದ ಸಂಜೆ ವರೆಗೂ ಸಣ್ಣ ಮಕ್ಕಳಿಗೆ ಪಾಠ ಹೇಳಿಕೊಡುವವರು. ..! ಸಣ್ಣ ಸಂಬಳದವರು...
Tuesday 1 March 2016
ನಾನು ಮತ್ತು ಅವಳು
ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ
ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...
-
ಚಿಕ್ಕಂದಿನಲ್ಲಿ ನಮಗೆ ಬರುತ್ತಿದ್ದ, ನಾವೆಲ್ಲಾ ಹಾಡುತ್ತಿದ್ದ ಮರೆಯಲಾಗದ ಪದ್ಯಗಳು.. ಇವುಗಳಲ್ಲಿ ನಿಮಗೆಷ್ಟು ಗೊತ್ತು.. ತಿಳಿಸಿ..* ❤️❤️❤️...
-
ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಶಾಲಾಮಾಹಿತಿ ಸಲ್ಲಿಸಿ. ಈ ಮೇಲಿನ ಲಿಂಕ್ ಮಾಡಿ ಬೇಡಿಕೆ ಮಾಹಿತಿ ಸಲ್ಲಿಸಲು ಕೋರುವೆವು.
-
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಳೂರು ಶಾಲಾ ಮಕ್ಕಳ ಮಂತ್ರಿಮಂಡಲದಿಂದ ಶಾಲೆಯಲ್ಲಿ ಆಟದ ಮೈದಾನ, ವಿವಿಧ ಕ್ರೀಡಾಂಗಣ, ಶಾಲಾ ಪ್ರಾರ್ಥನ ಅಂಕಣದಲ್ಲಿ ಸಿಮೆಂಟ್ ಬ್ರಿಕ್...