ಮುಗಿಲಲ್ಲಿ ಆಡಿ ನಲಿಯುತ್ತ
ಮಳೆ ಸುರಿಸುತ್ತಿದ್ದ ಮೋಡಗಳೆಲ್ಲ
ಹೆದರಿ ಓಡಿ ಹೋದವು.
ಏಕೆ ಗೊತ್ತಾ....?
ಮುಗಿಲೂರ ಓಣಿ ಓಣಿಯಲಿ
ಕೊಳಕು ಹೊಗೆ, ರಕ್ಕಸ ಶಬ್ಧ ಉಗುಳುವ
ದಿನವೆಲ್ಲ ಆಕಾಶದಾಗೆ ಓಡಾಡುವ ರಾಜಕಾರಣಿಗಳ ವಿಮಾನ,
ರಾಕೆಟ್, ಕ್ಷಿಪಣಿಗಳನು ಕಂಡು ಬೆದರಿ
ಅದೆಲ್ಲಿಗೊ ನೆಮ್ಮದಿ ಹುಡುಕಿಕೊಂಡು
ಅಲೆಯುತಿವೆ.ಪಾಪ...!
ಕೊಳಕು ನರನ ಊರಿಗೆ ಬರಲು ಹಿಂಜರಿಯುತಿವೆ ಅವು.
ಇಲ್ಲಿ ನರನ ಊರಲಿ ನೇಣು ಹಾಕಿಕೊಂಡವರಿಗೆ ಲಕ್ಷ ಕೊಟ್ಟರೇನು.?
ಮಾನವ ಹಕ್ಕುಗಳ ರಕ್ಷಣೆಗೆ
ನೂರು ನಿಯಮ ಮಾಡಿದರೇನು..?
ಸಕಲ ಜೀವರಾಶಿಯ ಸಲಹೋ
ಮೇಘಗಳ ಕಾಪಾಡದಿರೆ ...
ಕಣ್ಣಲಿ ಕಣ್ಣಿರಿಗೂ
ಕೊರತೆಯಾದೀತು ಜೋಕೆ. .?
ಸ್ವಚ್ಛ ಭಾರತ..! ಸ್ವಾಸ್ಥ್ಯ ಭಾರತ...!
ಸಾಲದು ,ಮುಗಿಲೂರಲೂ ಸ್ವಚ್ಛತೆ ಬೇಕು.
ಮೇಘಗಗಳು ನಕ್ಕರೆ
ಧರೆಯೆಲ್ಲ ಮಳೆ ನೆನಪಿರಲಿ.
ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ
- Home
- ಸಂಪಾದಕೀಯ
- ಮಕ್ಕಳು ಬರೆದ ಕತೆ /ಕವನಗಳು
- ನಮ್ಮೂರ ಸುದ್ದಿಗಳು
- ಮಕ್ಕಳ ಬರಹಗಳು
- ಬಾಲ ಸಾಧಕರು
- ಮಕ್ಕಳು ಬಿಡಿಸಿದ ಚಿತ್ರಗಳು
- ನಮ್ಮೂರ ಜಾನಪದ
- ಜ್ಞಾನ - ವಿಜ್ಞಾನ
- ಸಾಮಾನ್ಯ ಜ್ಞಾನ
- ನಮ್ಮ ಪತ್ರಿಕಾ ಅಭಿಯಾನಗಳು
- ಓದುಗರ ಓಲೆ
- ಅತಿಥಿ ಸಾಹಿತಿಗಳ ಅಂಕಣ
- ಮಕ್ಕಳ ಪುಸ್ತಕಗಳ ಪರಿಚಯ-ಆನ್ ಲೈನ್ ಬುಕ್ ಹೌಸ್
- ಶೈಕ್ಷಣಿಕ ಲೇಖನಗಳು
- ಶೈಕ್ಷಣಿಕ ಚಟುವಟಿಕೆಗಳು
- ಲಾಂಗ್ವೇಜ್ ಕಾರ್ನರ್
- 1ರಿಂದ -puc ತರಗತಿ ಈ ಶಾಲೆ
- ನನ್ನ ಶೈಕ್ಷಣಿಕ ವೀಡಿಯೋಗಳು
- ಸಾರ್ವಜನಿಕ ಶಿಕ್ಷಣ ಇಲಾಖೆ
- ಹಿಂದಿನ ಸಂಚಿಕೆಗಳು ಮತ್ತು ಪತ್ರಿಕೆ ಕುರಿತು ಮಾಧ್ಯಮ ವರದಿ ...
- ನಮ್ಮ ಕುರಿತು ಫೋಟೋ ಗ್ಯಾಲರಿ
- ಅಂಕಣ ಬರಹ- ಕನಸುಗಳೂರ ಶ್ರಮಿಕ
- ಆನ್ಲೈನ್ ಪುಸ್ತಕ ಮಳಿಗೆಗಳು
- ಪಿಡಿಎಫ್ ಪುಸ್ತಕಗಳು.
- Ravichandra
- ಆನ್ಲೈನ್ ಪಾಠಗಳು - ದೀಕ್ಷಾ ಪೊರ್ಟಲ್
- ಇನ್ನೋವೇಟಿವ್ ಎಜ್ಯುಕೇಶನ್
Saturday, 31 October 2015
ಮುಗಿಲೂರ ಓಣಿಯ ಸ್ವಚ್ಛಗೊಳಿಸುವರಾರು. ?
Subscribe to:
Post Comments (Atom)
ಜಾನಪದ ವಿಶ್ವವಿದ್ಯಾಲಯದ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ ..
ಜಾನಪದ ವಿಶ್ವವಿದ್ಯಾಲಯದ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ . ಹಸೆ ಚಿತ್ತಾರ , ನಾಟಿ ವೈದ್ಯ ,ವಿವಿಧ ಜಾನಪದ ನಿಕಾಯಗಳಲ್ಲಿ ಸ್ನಾತಕೋತ್ತರ ಡಿಪ್ಲೋಮಾ ,ಡಿಪ್ಲೋಮಾ ...
-
ಚಿಕ್ಕಂದಿನಲ್ಲಿ ನಮಗೆ ಬರುತ್ತಿದ್ದ, ನಾವೆಲ್ಲಾ ಹಾಡುತ್ತಿದ್ದ ಮರೆಯಲಾಗದ ಪದ್ಯಗಳು.. ಇವುಗಳಲ್ಲಿ ನಿಮಗೆಷ್ಟು ಗೊತ್ತು.. ತಿಳಿಸಿ..* ❤️❤️❤️...
-
ಕನ್ನಡ ವ್ಯಾಕರಣ @EDUCATIONGKNEWS. •ಕನ್ನಡ ವರ್ಣಮಾಲೆ •ಸಂಧಿ ಪ್ರಕರಣ •ನಾಮ ಪದ ಪ್ರಕರಣ •ಲಿಂಗಳು •ವಚನಗಳು •ವಿಭಕ್ತಿ ಪ್ರತ್ಯಯಗಳು •ಕ್ರಿಯಾಪದ ಪ್ರಕರಣ •ಕ...
-
*ಛಂದಸ್ಸು* ಛಂದಸ್ಸು - ಪದ್ಯವನ್ನು ರಚಿಸುವ ಶಾಸ್ತ್ರ. ಛಂದಸ್ಸಿನ ಶಾಸ್ತ್ರದ ಪ್ರಕಾರ ರಚಿತವಾದ ಪದ್ಯವನ್ನು ಛಂದೋಬದ್ಧ ಪದ್ಯ ಎನ್ನುವರು. ಛಂದಸ್ಸು ಕನ್ನಡ ಸಾಹಿತ್ಯ, ಸ...
No comments:
Post a Comment