ರೈತ ಪ್ರೇಮಿ.
ಅವನೆದೆಯ ಹೊಲವ ಅಡವಿಟ್ಟು....
ಸಾಲ ಮಾಡಿದ್ದ;
ಅವಳೆದೆಯ ಹೊಲದಲ್ಲಿ
ಒಲವ ತೋಟ ಮಾಡಿ
ಫಸಲು ಪಡೆಯಲು ಕನಸು ಕಂಡಿದ್ದ.!
ಥಿಯೇಟರ್, ಕ್ಲಬ್ಬುಗುಳ ಮಬ್ಬು ಬೆಳಕಲಿ
ಗೊಬ್ಬರ,ಔಷಧಿ-ಚಾಕ್ಲೇಟ್, ಐಸ್ಕ್ರೀಮ್
ಎಲ್ಲಕೂ ಹಣವಾ ಸುರಿದಿದ್ದ.
ಆದರೂ ಎಂತದೋ ರೋಗ ಬಂತು...!
ಫಸಲಿರಲಿ , ಅಸಲೂ ಇಲ್ಲ. ..
ಮುತ್ತು ಬೆಳೆವ ಆಸೆಯ ನಡುವೆ
ಚಕ್ರ ಬಡ್ಡಿ ಕೊರಳಿಗೆ ಬಂದು
ಆತ್ಮಹತ್ಯೆ ಶರಣಾದ ದೇವಿದಾಸ..,!
ಪತ್ರಿಕೆಗಳ ಮುಖಪುಟದಲ್ಲಿ ಕೊನೆಗೂ ಬಂದ
ರೈತನ ಆತ್ಮ ಹತ್ಯೆ ಎಂದು ಸುದ್ದಿಯಾದ.
ಯಾರೋ ಕೊಟ್ಟ ಲಕ್ಷದ ಚೆಕ್ಕು
ಸೂತಕದ ಮನೆಯೊಳಗೆ
ಆಸೆಯ ಮನಗಳ ಕೆಣಕುತ್ತಿತ್ತು....!
ಒಲವ ಪಸಲು ಕಾಣದ ಹಸಿರು, ಉಸಿರು;
ಮಣ್ಣಿಂದ ಮಣ್ಣಿಗೇ ಹೊರಟಿತ್ತು.
ಕಲ್ಲು ಹೃದಯ , ಕರುಣೆ ಇಲ್ಲದ ಮುಗಿಲು
ಒಲವ ಫಸಲು ನೀಡದ ವಸುಂಧರೆ..!
ಎಲ್ಲಾ ಸೇರಿ ಶೋಕದ ನಾಟಕ ಮುಗಿಸಿದರು.
ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ
- Home
- ಸಂಪಾದಕೀಯ
- ಮಕ್ಕಳು ಬರೆದ ಕತೆ /ಕವನಗಳು
- ನಮ್ಮೂರ ಸುದ್ದಿಗಳು
- ಮಕ್ಕಳ ಬರಹಗಳು
- ಬಾಲ ಸಾಧಕರು
- ಮಕ್ಕಳು ಬಿಡಿಸಿದ ಚಿತ್ರಗಳು
- ನಮ್ಮೂರ ಜಾನಪದ
- ಜ್ಞಾನ - ವಿಜ್ಞಾನ
- ಸಾಮಾನ್ಯ ಜ್ಞಾನ
- ನಮ್ಮ ಪತ್ರಿಕಾ ಅಭಿಯಾನಗಳು
- ಓದುಗರ ಓಲೆ
- ಅತಿಥಿ ಸಾಹಿತಿಗಳ ಅಂಕಣ
- ಮಕ್ಕಳ ಪುಸ್ತಕಗಳ ಪರಿಚಯ-ಆನ್ ಲೈನ್ ಬುಕ್ ಹೌಸ್
- ಶೈಕ್ಷಣಿಕ ಲೇಖನಗಳು
- ಶೈಕ್ಷಣಿಕ ಚಟುವಟಿಕೆಗಳು
- ಲಾಂಗ್ವೇಜ್ ಕಾರ್ನರ್
- 1ರಿಂದ -puc ತರಗತಿ ಈ ಶಾಲೆ
- ನನ್ನ ಶೈಕ್ಷಣಿಕ ವೀಡಿಯೋಗಳು
- ಸಾರ್ವಜನಿಕ ಶಿಕ್ಷಣ ಇಲಾಖೆ
- ಹಿಂದಿನ ಸಂಚಿಕೆಗಳು ಮತ್ತು ಪತ್ರಿಕೆ ಕುರಿತು ಮಾಧ್ಯಮ ವರದಿ ...
- ನಮ್ಮ ಕುರಿತು ಫೋಟೋ ಗ್ಯಾಲರಿ
- ಅಂಕಣ ಬರಹ- ಕನಸುಗಳೂರ ಶ್ರಮಿಕ
- ಆನ್ಲೈನ್ ಪುಸ್ತಕ ಮಳಿಗೆಗಳು
- ಪಿಡಿಎಫ್ ಪುಸ್ತಕಗಳು.
- Ravichandra
- ಆನ್ಲೈನ್ ಪಾಠಗಳು - ದೀಕ್ಷಾ ಪೊರ್ಟಲ್
- ಇನ್ನೋವೇಟಿವ್ ಎಜ್ಯುಕೇಶನ್
Tuesday 20 October 2015
ರೈತ ಪ್ರೇಮಿ
Subscribe to:
Post Comments (Atom)
-
ಚಿಕ್ಕಂದಿನಲ್ಲಿ ನಮಗೆ ಬರುತ್ತಿದ್ದ, ನಾವೆಲ್ಲಾ ಹಾಡುತ್ತಿದ್ದ ಮರೆಯಲಾಗದ ಪದ್ಯಗಳು.. ಇವುಗಳಲ್ಲಿ ನಿಮಗೆಷ್ಟು ಗೊತ್ತು.. ತಿಳಿಸಿ..* ❤️❤️❤️...
-
ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಶಾಲಾಮಾಹಿತಿ ಸಲ್ಲಿಸಿ. ಈ ಮೇಲಿನ ಲಿಂಕ್ ಮಾಡಿ ಬೇಡಿಕೆ ಮಾಹಿತಿ ಸಲ್ಲಿಸಲು ಕೋರುವೆವು.
-
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಳೂರು ಶಾಲಾ ಮಕ್ಕಳ ಮಂತ್ರಿಮಂಡಲದಿಂದ ಶಾಲೆಯಲ್ಲಿ ಆಟದ ಮೈದಾನ, ವಿವಿಧ ಕ್ರೀಡಾಂಗಣ, ಶಾಲಾ ಪ್ರಾರ್ಥನ ಅಂಕಣದಲ್ಲಿ ಸಿಮೆಂಟ್ ಬ್ರಿಕ್...
No comments:
Post a Comment