ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Saturday 22 September 2018

ಮಹಾಕವಿಯ ಮಕ್ಕಳ ನಾಟಕ

ಮಕ್ಕಳ ನಾಟಕಗಳೆಂದರೆ ಅವರ ಸಮಸ್ಯೆ , ನೋವು, ಕಲಿಕೆ, ಸಮಾಜದ ವಾಸ್ತವ ಸಮಸ್ಯೆಗಳ ಉದ್ದುದ್ದ ಸಂಬಾಷಣೆ, ಹಿಂದಿನ ಯಾವುದೋ ವ್ಯಕ್ತಿ  ಚರಿತ್ರೆ ಅಭಿನಯ , ಇನ್ನಿತರೆ ಅಂಶಗಳತ್ತಲೇ ವಾಲುತ್ತಿರುವ ನಾಟಕಕಾರರಿಗಿಂತ ಕೊಂಚ ವಿಭಿನ್ನವಾಗಿ ಯೋಚಿಸಿ ಕುವೆಂಪು ಅವರು ಬರೆದ ವಿಶಿಷ್ಟ ಗೀತ ನಾಟಕ ಈ ಮೋಡಣ್ಣನ ತಮ್ಮ. ಬಹಳಷ್ಟು ವಿಷಯ , ವಸ್ತು ಸಂಭಾಷಣೆ ,ಭಾಷೆಯ ಬಳಕೆ ಮಕ್ಕಳ ಆಸಕ್ತಿ ಮತ್ತಿತರ ಅಂಶ ದತ್ತ ಗಮನವಿಟ್ಟು ಬರೆದ ವಿಶೇಷ ಪ್ರಯೋಗದ ನಾಟಕ ವಾಗಿ ಇದು ಗಮನ ಸೆಳೆಯಿತು. ಮಹಾಕಾವ್ಯ ಬರೆದರೂ ಮಕ್ಕಳ ಕಾವ್ಯ, ನಾಟಕಕ್ಕೂ ಕುವೆಂಪು ಅವರು ಅಂದೆ ತೊಡಗಿಕೊಂಡು ವಿಶಿಷ್ಟ ನಾಟಕ ಕವಿತೆ ಬರೆದು   ಮಕ್ಕಳ ಸಾಹಿತ್ಯ ವಿಸ್ತಾರಗೊಳಿಸಿದ್ದಾರೆ.ಕೆಲವರಿಂದ ಮಕ್ಕಳ ಸಾಹಿತ್ಯ ಚರ್ಚೆ  ನಿರ್ಲಕ್ಷೆ ಗೋಳಗಾದದ್ದೂ ಮಾತ್ರ ಗಂಭೀರ ವಿಷಯ.

Thursday 20 September 2018

ಕಾಗುಣಿತಗಳಿಲ್ಲದ ಪದ್ಯ

ಕಾಗುಣಿತಾಕ್ಷರಗಳೇ ಇಲ್ಲದ ಪದ್ಯ!

ಘನರಸಶಯನತನಯ ಮದಮಥನ ಧವಳಘನ
ಘನವರದ ಶತದಳನಯನ ನಯನಪದಕಮಳ
ವನದಗಮನಧವ ಶತದಳವರತಪನದ ದಹನ ನಯನಪರತರ ಗದಧರ
ಸನಕನತ ಸಮದಶಯನ ಶಮನಶಮನ ಭವರ
ಮನಭಯ ಶಮನ ಗರಳಧರ ಗರಳಧರ ಪರಗ
ಮನತನಯ ಶಶಧರಧರ ಧರವರಭವನ ಕನದನಘ ಭವಹರಪರಮವ

(ಅರ್ಥ- ಸಮುದ್ರಶಯನನಾದ ವಿಷ್ಣುವಿನ ಮಗ ಮನ್ಮಥನ ಗರ್ವಭಂಗ ಮಾಡಿದವ, ಬೆಳ್ಳಗಿನ ಮೈಯವ, ಶ್ರೇಷ್ಠ ವರಗಳನ್ನು ನೀಡುವವ, ವಿಷ್ಣುವಿನ ಕಣ್ಣಿನಿಂದ ಅರ್ಚಿಸಲ್ಪಟ್ಟ ಪಾದಪದ್ಮವುಳ್ಳವ, ಚಂದ್ರ ಸೂರ್ಯ ಮತ್ತು ಅಗ್ನಿಗಳನ್ನೇ ಕಣ್ಣಾಗಿ ಉಳ್ಳವ, ಶ್ರೇಷ್ಠ, ರೋಗನಿವಾರಕ, ಸನಕನಿಂದ ನಮಸ್ಕೃತನಾದವ, ಯಮನನ್ನು ನಿಗ್ರಹಿಸಿದವ, ಜನ್ಮ ಹಿಂಗಿಸಿದವ, ಭಯ ಹೋಗಲಾಡಿಸಿದವ, ವಿಷಕಂಠ, ಚಂದ್ರಶೇಖರ, ಕೈಲಾಸವಾಸಿ, ಪಾಪರಹಿತ, ಭವನೆಂದೂ ಹರನೆಂದೂ ಕೀರ್ತಿತ ಈಶ್ವರ). 

ಪದ್ಮಣಾಂಕ ಎಂಬ ಕವಿಯ ಪದ್ಮರಾಜಪುರಾಣದಲ್ಲಿನ ಪದ್ಯ

Friday 14 September 2018

bhumi butti chittara- raviraj sagar/ಭೂಮಿ ಬುಟ್ಟಿ ಚಿತ್ತಾರ ಹಾಗು ಹಸೆಗೋಡೆ ಚ...



ನಮ್ಮ ಜನಪದರ ಹಸೆಗೋಡೆ ಹಾಗು ಭೂಮಿ ಬುಟ್ಟಿ ಚಿತ್ತಾರ ಕಲೆ ಪರಿಚಯ - ನಮ್ಮೂರ ಜಾನಪದ ಅನುಸಂಧಾನದಲ್ಲಿ ..

ಈ ಲಿಂಕ್ ಕ್ಲಿಕ್ ಮಾಡಿ ..ಸಬ್ ಸ್ಕ್ರೈಬ್ / subscraibe ಬಟನ್ ಒತ್ತಿ ಹೆಚ್ಚು ಜಾನಪದ ವಿಡಿಯೋಗಳಿಗಾಗಿ ಬೆಂಬಲಿಸಿ

Saturday 1 September 2018

ಕಾರಣ ನೀನೇನಾ ..

ಕಾರಣ ನೀನೇನಾ....

ಪ್ರೀತಿಯ ಬೆಳಕು ಚೆಲ್ಲಿ
ವಿರಹದ ನೆರಳೂ   ಹಿಂಬಾಲಿಸುವಂತೆ ಮಾಡಿದವಳು .....,?
ಸಾಗರದ ದಂಡೆಯಲ್ಲಿ ಜೊತೆ ಜೊತೆಗೆ ಹೆಜ್ಜೆ ಹಾಕಿ....
ಅವುಗಳನ್ನು ಅಳಿಸಿಬಿಡುವಂತೆ 
ಅಲೆಗಳನು ಚೂ ಬಿಟ್ಟಿದ್ದು...?
ಒಲವ ಬಳ್ಳಿಯಲಿ
ಹೂ ಬಿಟ್ಟು  ಅರಳುವವರೆಗೂ ನೀರುಣಿಸಿ
ಸಂಜೆವೇಳೆಗೆ ಬಾಡುವ ಶಾಪ ಕೊಟ್ಟಿದ್ದು...?
ಸ್ವರ್ಗದಲೇ ಮದುವೆ ನಿಶ್ಚಯ ಆಗಿರುವುದೆಂದು
ಬದನೆ ಶಾಸ್ತ್ರ ಅದ್ಯಾರಿಂದಲೋ ಹೇಳಿಸಿ
ಒಲವ ವಿಶ್ವಾಸದಲ್ಲಿ ತೇಲಿಸಿ
ಶ್ವಾಶವೆ ನಿಲ್ಲುವಂತೆ ಎದೆಗೆ ಬಂಡೆಕಲ್ಲು ತಳ್ಳಿದ್ದು...
ವಿಧಿ ಹಡೆದು ,ಹೆಣೆದು ಕಳಿಸಿದ ಬಲೆಯ
ನೀ ನನಗೆ ಬೀಸಲು ಕಾರಣವಿದೆಯ ಹೇಳಿಬಿಡು...

ಎಲ್ಲೋ ತೇಲಿ ಹೊರಟ ಮೋಡ ನೀನು..
ಹೆಪ್ಪುಗಟ್ಟಿ  ಒಲವು ಉಕ್ಕಿಸಿ
ಒಲವ ವರ್ಷಧಾರೆ ಹರಿಸಿ
ಬಯಲು ಸೀಮೆಯ ಬಿಸಿಲಲಿ
ಒಂಟಿ ಮಾಡಲು ಕಾರಣವೆನಿತ್ತು...?
ಮತ್ತೆ ಮತ್ತೆ ಕೇಳಲಾರೆ ಕಾರಣ

ಬದುಕೀಗ  ಅಲ್ಪಾವರಣ...                ರವಿರಾಜ್ ಸಾಗರ್💕🌹🌹

Thursday 16 August 2018

ಉಪ್ಪಿನ ಗೊಂಬೆ

ಉಪ್ಪಿನ ಗೊಂಬೆ ಸದಾ ಮಕ್ಕಳಿಗೆಂದೇ ಬರೆಯುವ ಚಂದ್ರಕಾಂತ ಕರದಳ್ಳಿಯವರು ಬರೆದ ಮಕ್ಕಳ ಕಿರು ಕಾದಂಬರಿ 'ಉಪ್ಪಿನ ಗೊಂಬೆಯನ್ನು ಮೊನ್ನೆ ಮಕ್ಕಳ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಪ್ರೀತಿಯಿಂದ ನೀಡಿದರು. ಜೊತೆಗೆ ಗಾಡಿ ಬಂತು ಗಾಡಿ, ಚಂದಮಾಮ ಒಬ್ಬನೇ ಇದ್ದೀಯ , ಬಯಲು ಸೀಮೆಯಿಂದ ಕರಾವಳಿಗೆ ಸಹ ನೀಡಿದ್ದರು ಅವುಗಳಲ್ಲಿ ನನ್ನನ್ನು ಗಮನ ಸೆಳೆದದ್ದು ಉಪ್ಪಿನಗೊಂಬೆ .ಮಕ್ಕಳು ಒದಲೇಬೇಕಾದ ಕೃತಿ. ಉಪ್ಪನ್ನು ತಾಯಾರಿಸುವ ಮಡಿಯಲ್ಲಿ ತಾನಾಗಿ ರೂಪು ತಳೆದ ಉಪ್ಪಿನ ಗೊಂಬೆ ಊರು ತಿರುಗಲು ಆರಂಭಿಸುತ್ತದೆ. ಅದು ಪ್ರವಾಸ ಹೊತಾಡುತ್ತ ಚೆನ್ನ ಪಟ್ಟಣ ತಲುಪಿ ಅಲ್ಲಿನ ಮುದ್ದಾದ ಮರದ ಗೊಂಬೆಗಳೊಂದಿಗೆ ಸ್ನೇಹ ಬೆಳೆಸಿಕೊಂಡು ತನ್ನ ಊರಾದ ಸಮುದ್ರದತ್ತ ಅವರನ್ನು ಕರೆದುಕೊಂಡು ಬರುತ್ತದೆ. ಅವುಗಳಿಗೆ ತಾವು ಹುಟ್ಟಿದ ಕಾಡನ್ನು ತೋರಿಸುತ್ತದೆ.. ಹೀಗೆ ಸಾಗುತ್ತ ಇದು ಒಂದು ಪ್ರವಾಸ ಕ್ತನವಾಗುತ್ತ ಬೆಳೆಯುವ ಮಕ್ಕಳ ಕಾದಂಬರಿಯಾಗಿ ಸಾಗಿ ನಿಮ್ಮನ್ನು ಓದಿಸಿಕೊಂಡು ಹೋಗುತ್ತದೆ. ಮಕ್ಕಳಿಗಂತೂ ತುಂಬಾ ಆಪ್ತವಾಗುವತ್ತಾ ಸಾಗುತ್ತದೆ. ಆ ಉಪ್ಪಿನ ಗೊಂಬೆ ಕೊನೆಗೆ ಸಾಗುತ್ತಾ ಶಿವಶರಣರ ನಾಡು ಉಳವಿಗೂ ಬಂದು ಜೋಯಿಡಾ ಕಾಡು ಸುತ್ತಿ ವಾಸ ಮಾಡುತ್ತಾ ಆಮೇಲೆ ಸಮುದ್ರಕ್ಕೆ ಸಾಗಿ ತನ್ನ ತಾಯಿಯನ್ನು ಮರದ ಗೊಂಬೆಗಳಿಗೆ ಪರಿಚಯಿಸುವ ಕತೆಯು ಇಲ್ಲಿ ಸಾಗುತ್ತದೆ. ಉಪ್ಪಿನ ಗೊಂಬೆ ಎನ್ನುವ ಕಲ್ಪನೆಯೇ ಮಕ್ಕಳಿಗೆ ಕುತೂಹಲ ಕೆರಳಿಸುತ್ತದೆ .ಇನ್ನು ಅದರ ಕತೆ ಮತ್ತೂ ಮುಂದೆ ಸಾಗಿ ಕೃತಿ ಓಂದೆ ಗುಕ್ಕಿಗೆ ಓದಿಸಿಕೊಂಡು ಹೋಗದೆ ಬಿಡದು. ಮಕ್ಕಳಿಗಾಗಿ ಸರಳ ಭಾಷಾ ಬಳಕೆ, ಸರಳ ಸಂಬಾಷಣೆ ಮನೋರಂಜನೆಗೆ ಬೇಕಾದದ್ದೆಲ್ಲ ಈ ಕೃತಿಯಲ್ಲಿದೆ . ನೀವು ನಿಮ್ಮ ಮಕ್ಕಳ ಹತ್ತಿರ ಇಂತಹ ಕೃತಿ ಇಡಿ , ನೀವೂ ಜೊತೆಗೂಡಿ ಓದಿ. ನಿಮ್ಮ ಮಕ್ಕಳು ಟಿ ವಿಯನ್ನು ದೂರ ಇಡುತ್ತಾರೆ. ರವಿರಾಜ್. ಸಾಗರ್. .

Wednesday 25 July 2018

ಕತಾ ಪುರಸ್ಕಾರಕ್ಕೆ ಅರ್ಜಿ..

ಶಹಾಪುರ: ಪ್ರತಿ ವರ್ಷದಂತೆ ಈ ಬಾರಿಯೂ ಇಲ್ಲಿಯ ಸಂಧ್ಯಾ ಸಾಹಿತ್ಯ ವೇದಿಕೆಯು 16 ವಯಸ್ಸಿನವರೆಗಿನ ಬಾಲ ಬರಹಗಾರರಿಗೆ "ವಿದ್ಯಾಸಾಗರ ಬಾಲ ಪುರಸ್ಕಾರ" ಮತ್ತು ಮಕ್ಕಳಿಗಾಗಿ ಕತೆ ಬರೆಯುವ ಹಿರಿಯರಿಗೆ "ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ" ನೀಡುತ್ತಿದ್ದು, ಅರ್ಜಿ ಆಹ್ವಾನಿಸಿದೆ.
ಬಾಲ ಬರಹಗಾರರು ಒಂದು ಸಂಕಲನಕ್ಕಾಗುವಷ್ಟು ಯಾವುದೇ ಪ್ರಕಾರದ ಪ್ರಕಟಿತ ಇಲ್ಲವೆ ಅಪ್ರಕಟಿತ ಕನ್ನಡ ಬರಹಗಳನ್ನು ಕಳುಹಿಸಬಹುದು.  ಕಥೆಗಳು ಕಳೆದ ಅಕ್ಟೋಬರ್‌ನಿಂದ ವರ್ಷದ ಅವಧಿಯೊಳಗೆ ರಚಿಸಿದವುಗಳಾಗಿರಬೇಕು. ಬರಹಗಳನ್ನು ಅಧ್ಯಕ್ಷರು, ಸಂಧ್ಯಾ ಸಾಹಿತ್ಯ ವೇದಿಕೆ, ಅಮೃತ ನಿವಾಸ, ಸಿ.ಬಿ. ಕಮಾನಿನ ಹತ್ತಿರ, ಶಹಾಪುರ-585223(ಯಾದಗಿರಿ ಜಿಲ್ಲೆ) ಇಲ್ಲಿಗೆ ಸೆಪ್ಟಂಬರ್ 30 ರೊಳಗೆ  ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ಮೊ. 9448651520 ಅಥವಾ 9986590894 ಗೆ ಸಂಪರ್ಕಿಸಬಹುದು.

Friday 20 July 2018

ಕುಟುಂಬ ನಿರ್ವಹಣೆಗೆ ಕೆಲವು ಕಹಿ ಸತ್ಯದ ಔಷದೋಪಚಾರ...

*''ಸುಪ್ರೀಂಕೋರ್ಟ್- ಕೌಟುಂಬಿಕ ಕಲಹ ವಿಚಾರಣೆ ಮಾಡುವ-ನ್ಯಾಯಮೂರ್ತಿ''ಗಳ ಹತ್ತು ಸಲಹೆಗಳು"*

(1) *ನಿಮ್ಮ ಮಗ ಮತ್ತು ಆತನ ಹೆಂಡತಿಗೆ: ನಿಮ್ಮ ಒಟ್ಟಿಗೆ "ಒಂದೇ ಸೂರಿನಡಿ" ಇರಲು ಪ್ರೋತ್ಸಾಹಿಸಬೇಡಿ, ಬಾಡಿಗೆ ಮನೆಯಾದರೂ ಸರಿ ಹೊರ ಹೋಗಲು ತಿಳಿಸಿ,* ಅದು ಅವರ ಜವಾಬ್ದಾರಿ, ಅವರ ಕುಟುಂಬ ಮತ್ತು ಮಕ್ಕಳಿಂದ ದೂರವಿರಿ-ಕಾನೂನಿನ ರೀತಿ ಮಾತ್ರ ಸಂಬಂಧವಿರಲಿ,

(2) *ಮಗನ ಹೆಂಡತಿಯನ್ನು-ಆತನ ಹೆಂಡತಿ ಎಂದು ಪರಿಗಣಿಸಿ, ಆದರೆ ಸ್ವಂತ ಮಗಳು ಎಂದು ಪರಿಗಣಿಸಬೇಡಿ* ಆಕೆಯನ್ನು ಸ್ನೇಹಿತರಂತೆ ಕಾಣಿರಿ,ಮಗನನ್ನು
ನಿಮ್ಮ ಜೂನಿಯರ್ ಎಂದು ಪರಿಗಣಿಸಿ, ಆತನ ಹೆಂಡತಿಗೆ
ನೀವು ಬೈಯ್ಯುವಹಾಗೇ ಇಲ್ಲ,
ಬೈದರೆ ಜೀವನ ಪಯ್ಂತ ಅದನ್ನು ಜ್ಞಾಪಕ ಇಟ್ಟುಕೊಂಡು
ಸಾದಿಸುತ್ತಾಳೆ, ನಿಜಜೀವನದಲ್ಲಿ ಆಕೆಯ ಹೆತ್ತತಾಯಿಗೆ ಮಾತ್ರ ಬೈಯುವ- ದಂಡಿಸುವ-ತಿದ್ದುವ ಹಕ್ಕು ಇರುತ್ತದೆ-ನಿಮ್ಮದಲ್ಲ,

(3) *ಸೊಸೆಯ ಹವ್ಯಾಸ/ನಡವಳಿಕೆ ಏನಾದರೂ ಇರಲಿ-ಅದು ಮಗನ ಸಮಸ್ಯೆ,* - ನಿಮಗೆ
ಸೇರಿದ್ದಲ್ಲ,

(4) *ಒಟ್ಟಿಗೆ ಇದ್ದರೂ ವ್ಯವಹಾರ ಪ್ರತ್ಯೇಕವಾಗಿರಬೇಕು/ನಿಖರ ವಾಗಿರ ಬೇಕು,,* ಅವರುಗಳ ಬಟ್ಟೆಯನ್ನು ಒಗೆಯುವ/ಅಡುಗೆ ಮಾಡುವ/ಮಕ್ಕಳನ್ನು ನೋಡಿಕೊಳ್ಳುವ ಉಸಾಬರಿ ಬೇಡ, ಸೊಸೆ ಒತ್ತಾಯಕ್ಕೆ ನೋಡಿಕೂಂಡರೆ-ನಿಮಗೆ ಶಕ್ತಿ ಇರಬೇಕು/ಏನನ್ನೂ ಪ್ರತಿಫಲ ಬಯಸಬಾರದು,
ಮುಖ್ಯವಾಗಿ ಮಗ‌ನ ಕುಟುಂಬದ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ,ಅವನಿಗೆ
ಸೇರಿದ್ದು,

(5) *ಗಂಡ ಹೆಂಡತಿ ಜಗಳವಾಡುತ್ತಿದ್ದರೆ--ಕುರುಡರ ಹಾಗೆ/ಕಿವುಡರ ಹಾಗೆ ಇದ್ದುಬಿಡಿ,* ಯುವಜೋಡಿಗಳು
ನೀವು ಮದ್ಯೆಬರುವುದನ್ನು ಇಷ್ಟಪದುವುದಿಲ್ಲ,

(6) *ಮೊಮಕ್ಕಳನ್ನು ಸರಿಯಾಗಿ ಬೆಳೆಸುವುದು--ಒಳ್ಳೆಯದು/ಕೆಟ್ಟದ್ದು ಎಲ್ಲಾ ಅವರಿಗೇ ಸೇರಿದ್ದು, ನಿಮ್ಮದ್ದಲ್ಲ,*

(7) *ನಿಮ್ಮ ಸೊಸೆ ನಿಮಗೆ ಗೌರವಿಸುವ/ಸೇವೆ ಮಾಡಬೇಕಾದ ಅಗತ್ಯವಿಲ್ಲ*
- ಅದು ನಿಮ್ಮ ಮಗನ ಜವಾಬ್ದಾರಿ, ಮಗ ಸಮಾಧಾನ ವಾಗಿರಬೇಕು ಎನ್ನುವುದಾದರೆ ?
ನೀಮ್ಮ ಆಕೆಯ ಸಂಬಂಧ ಉತ್ತಮವಾಗಿರಬೇಕು,

(8) *ನಿಮ್ಮ ನಿವೃತ್ತಿ ಜೀವನಕ್ಕೆ  ಮೊದಲೇ ಎಲ್ಲಾ ವ್ಯವಸ್ಥೆ ಮಾಡಿಕೊಂಡಿರಬೇಕು,*
ಮಕ್ಕಳು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ ಎಂದು ನಂಬಬೇಡಿ/ಅವಲಂಬಿಸಬೇಡಿ,
ನೀವು ಜೀವನದ ಬಹುಕಾಲ ಪ್ರಯಾಣ ಮಾಡಿದ್ದೀರ,-ಕೊನೆಯವರಗೂ
ಇನ್ನೂ ತಿಳಿಯುವುದು ಇದ್ದೇಇರುತ್ತದೆ,

(9) *ನಿಮ್ಮ ನಿವೃತ್ತ ಜೀವನ ನಮಗೆ ಸೇರಿದ್ದು:*
ಹಣವನ್ನು ಉಪಯೋಗಿಸಿ/ಸಂತೋಷಪಡಿ,ಸಾಯುವ ಒಳಗೆ ಅದನ್ನು ಉಪಯೋಗಿಸಿಕೂಳ್ಳಿ,
ಗಳಿಸಿಟ್ಟು ಅದನ್ನು ವ್ಯರ್ಥ ಮಾಡಬೇಡಿ,

(10) *ಮೊಮ್ಮಕ್ಕಳು ನಿಮ್ಮ ಕುಟುಂಬಕ್ಕೆ ಸೇರಿಲ್ಲ* - ಅವರ ತಂದೆ-ತಾಯಿಯ ಕೊಡುಗೆ,:

ಈ ಸಂದೇಶ ನಿಮಗೊಬ್ಬರಿಗಲ್ಲ
ಮಿತ್ರರು,ಬಂಧುಗಳು,ತಂದೆ- ತಾಯಿಗಳಿಗೆ, ಗಂಡ-ಹೆಂಡತಿ, ಸಮಾಜದ ಎಲ್ಲರಿಗೂ ಹಂಚಿ ಎಂದು ಸುಪ್ರೀಂಕೋರ್ಟ್
ನ್ಯಾಯಾದೀಶರು, ಕೌಟುಂಬಿಕ
ಕಲಹ ತೀರ್ಪು ನೀಡುತ್ತಿದ್ದವರ ಸಲಹೆ

*(ಕನ್ನಡ ಅನುವಾದ)*