ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Sunday 19 June 2016

ನಾನೂ ಅಪ್ಪಾನಪ್ಪಾ

ನಾನೂ ಅಪ್ಪಾನಪ್ಪಾ.          
                              
ಅಪ್ಪನಂತ ಅಪ್ಪನೊಳಗೂ         
ಅವ್ವನಂತ ಹೆಂಗರುಳಿದೆ
ಆಡಿಸಿ ನಲಿಸಿ ಹಾಲುಣಿಸಿಹನು     
ತೊಟ್ಟಿಲು ತೂಗಿ ಹಾಡಿಹನು.   
ಯಾರೂ ಅವನ ಕಕ್ಕುಲತೆಯ ಕೊಂಡಾಡದಿದ್ದರೂ ...
  ತನ್ನಪಾಡಿಗೆ ತಾ  ಪ್ರೀತಿಧಾರೆ ಎರೆದಿಹನು ಹಗಲೆಲ್ಲ ಮೈಮುರಿದು ದುಡಿದು  ಧಣಿದು
ಕಂದನ ಕಂಡು ಹಗುರಾಗುವ  ತಂದೆಯೊಲವಿಗೆ ಸಾಟಿಯಾರು.? 
ಹೆತ್ತವಳಕೂಗು ಲೋಕಕ್ಕೆಕೇಳಿತಾದರೂ..
ಅಪ್ಪನೋಡಲ ಅಂತರ್ಗತ ಅಕ್ಕರೆ
ಯಾರೂ  ಕೊಂಡಾಡರು...!!            
ಕಣ್ಣಿಂದ ಇಳಿಯದಂತೆ ಹನಿಯ ತಡೆದು                 ಎದೆಯ ಒಳಗೆ ಎಲ್ಲ ಬಚ್ಚಿಟ್ಟುಕೊಂಡು ಗಂಭೀರನಾಗಿ ಲೋಕದಿ ಉಳಿವ ಅವನ ಪ್ರೀತಿ   ಕಂಡರೂ
ತಾಯ ಬೆಚ್ಚನೆ ಮಡಿಲೇ ಹಿತ ಮಕ್ಕಳೆಲ್ಲರಿಗೂ....     
ಅಪ್ಪನ ತ್ಯಾಗ ನೀಲ ಬಾನು..
ಇನ್ನು ಏನು ಹೇಳಲಿ ನಾನೂ.  
ಅಪ್ಪಾ... ಅಪ್ಪಾ..
ತಿಳಿಯಿತು ನಿನ್ನ ತ್ಯಾಗ ಶ್ರಮ.  
  ನಾನಾದಮೇಲೆ ಅಪ್ಪ.         

# ರವಿರಾಜ್ ಸಾರ್#

ನಾನೂ ಅಪ್ಪಾನಪ್ಪಾ

ನಾನೂ ಅಪ್ಪಾನಪ್ಪಾ.          
                              
ಅಪ್ಪನಂತ ಅಪ್ಪನೊಳಗೂ         
ಅವ್ವನಂತ ಹೆಂಗರುಳಿದೆ
ಆಡಿಸಿ ನಲಿಸಿ ಹಾಲುಣಿಸಿಹನು     
ತೊಟ್ಟಿಲು ತೂಗಿ ಹಾಡಿಹನು.   
ಯಾರೂ ಅವನ ಕಕ್ಕುಲತೆಯ ಕೊಂಡಾಡದಿದ್ದರೂ ...
  ತನ್ನಪಾಡಿಗೆ ತಾ  ಪ್ರೀತಿಧಾರೆ ಎರೆದಿಹನು ಹಗಲೆಲ್ಲ ಮೈಮುರಿದು ದುಡಿದು  ಧಣಿದು
ಕಂದನ ಕಂಡು ಹಗುರಾಗುವ  ತಂದೆಯೊಲವಿಗೆ ಸಾಟಿಯಾರು.? 
ಹೆತ್ತವಳಕೂಗು ಲೋಕಕ್ಕೆಕೇಳಿತಾದರೂ..
ಅಪ್ಪನೋಡಲ ಅಂತರ್ಗತ ಅಕ್ಕರೆ
ಯಾರೂ  ಕೊಂಡಾಡರು...!!            
ಕಣ್ಣಿಂದ ಇಳಿಯದಂತೆ ಹನಿಯ ತಡೆದು                 ಎದೆಯ ಒಳಗೆ ಎಲ್ಲ ಬಚ್ಚಿಟ್ಟುಕೊಂಡು ಗಂಭೀರನಾಗಿ ಲೋಕದಿ ಉಳಿವ ಅವನ ಪ್ರೀತಿ   ಕಂಡರೂ
ತಾಯ ಬೆಚ್ಚನೆ ಮಡಿಲೇ ಹಿತ ಮಕ್ಕಳೆಲ್ಲರಿಗೂ....     
ಅಪ್ಪನ ತ್ಯಾಗ ನೀಲ ಬಾನು..
ಇನ್ನು ಏನು ಹೇಳಲಿ ನಾನೂ.  
ಅಪ್ಪಾ... ಅಪ್ಪಾ..
ತಿಳಿಯಿತು ನಿನ್ನ ತ್ಯಾಗ ಶ್ರಮ.  
  ನಾನಾದಮೇಲೆ ಅಪ್ಪ.         

# ರವಿರಾಜ್ ಸಾರ್#

Friday 3 June 2016

ಪುಣ್ಯ ಕ್ಷೇತ್ರಗಳ ಪೋನ್ ನಂಬರ್

Namma Prasidda PUNNYA KSHETHRAGALA duravani Sanke...               Dharmasthala 08256 277121                   kukke subhramanya 08257 281224        kollurooru 08254 258221                      hatti angadi 08254 264201                      shree krishna mattha 0820  2520592     ane gudde 08254 267397                     Mandharathi 08250 2568433                   Bhagvady  08254 278033                        Maranakatte 08254 239231                     Bennekudru 08250 2587121                 Ucchila 0820 2506118                              Neelavara 0820 2001864                         khamalashele 08259 277221                 koteshwara 08254 262230                       Kota ambrutheshwari 0820 2564681  Idagunji 08387 247227                           kundeshwara 0824 232256                     Hiriyadka 08250 2542605                       guddambady 08254 279574                   Shankaranarayana 08259 280551           Katilu 0824 2200591                              Khadri Mangalore 0824 2214176             Kudhroli 08254 2495740                        Sigandoor 08186  210555                       bappadnadu 0824 2290585                     sawkur 08254 271202                            Bayndoor seneshwara 08254 251900   Murdeshwara  08385 268524                  Mekkekattu 0820 2001214                      manikallu 0820 2567812                        shrungeri 08265 250123                          Horanadu 08263 269714                         gokarna 08386 257956                          Guvayooru +91487 2554844                    Thirupathi 0877 2233333                       Manthralaya 08512 279429/459              Ambalapady 0820 2520871                    Shabharymale 04735 202048                  Salygrama 0820 2564544                        Bharkuru kalikamba 0820  2587129

Friday 13 May 2016

ನಿಸರ್ಗ ನಿಯಮ

ನಿಸರ್ಗ ನಿಯಮ ಕೋಗಿಲೆಯೊಂದು ಕರೆದಿದೆ ಕೂಗಿ ಹಾಡಲು ತನ್ನೊಂದಿಗೆ ವಯ್ಯಾರದ ನವಿಲು ಕೈಹಿಡಿದೆಳೆದಿದೆ ಕುಣಿಯಲು ಜೂತೆಯಾಗಿದೆ. ಮಲ್ಲಿಗೆ ಮೆಲ್ಲಗೆ ಮಾತಿಗೆಳೆದಿದೆ ಸುಗಂಧವಾ ಹರಡಲೂ ಜೋಗದಿ ದುಮುಕುತ ಶರಾವತಿ ಕರೆದಳು ಸಾಗರವಾ ಸೇರಲೂ ಕತ್ತಲ ಕರಗಿಸೋ ಜ್ಯೋತಿ ಸೆಳೆದಳು ಶೃಂಗಾರ ಸಡಗರ ಸಮಯದ ಸಾಕ್ಷಿಗೇ; ಸಂತಸ ಹಂಚಿ ಸುಂದರ ಬದುಕು ಎನ್ನುವ ನಿಸರ್ಗ ನಿಯಮವೇ ಚೆಂದ ಒಣ ವೇದಾಂತ ಕಿವಿಗೂ ಹಿತವಲ್ಲ.. ಆಸೆಗಳೂರಲಿ ಅಲೆದರೆ ತಪ್ಪಲ್ಲ. ಸಂತಸ ಹಂಚಿರಿ ಧರೆಯೆಲ್ಲ.. # ರವಿರಾಜ್ ಸಾಗರ್

ಕೇಳೇ ಸಖೀ

ಕೇಳೇ ಸಖೀ... ಕನಸುಗಳೂರಿನ ಪರಿಶ್ರಮಿ ನಾನು ಮನಸಿದ್ದರೆ ಸಹಬಾಳ್ವೆಗೆ ಜೊತೆಯಾಗು ನೀನೂ ಮಿತಿಯಿಲ್ಲದ ಆಸೆಗಳ ಬೆನ್ನೇರೆನು ನಾನೂ ಸರಳ ಬದುಕಲ್ಲೇ ಸಂತೋಷ ಇಲ್ಲವೇನು..? ಕೊಂಡಷ್ಟೂ ಮುಗಿಯದ ಮಾರುಕಟ್ಟೆ ಒಡಲು ಕೊನೆಗಾಣದ ಅಸೆಗಳ ಮುಗಿಲು ಯಾಕೊ ಏನೂ ಈಗೀಗ ದಿಗಿಲು ಶಾಂತವಾಗುತಿಲ್ಲ ಮನದ ಕಡಲು. ಕತ್ತಲಲಿ ಕರಿಮಣಿಯ ಕಟ್ಟಿದವ ನಾನಲ್ಲ ಕತ್ತುಒಡ್ಡಿದ ಮೇಲೆಯೇ ಕಿರುಬೆರಳು ಹಿಡಿದೆನಲ್ಲೇ.. ಕಾಯಾ ವಾಚಾ ಮನಸಾ ನೀನೆ ನನ್ನ ನಲ್ಲೇ ಸಮಯ ಕೆಟ್ಟರೂನು ಇರುವೆ ನಿನ್ನಲ್ಲೇ ಬದುಕಿನ ಫರೀಕ್ಷೆಗಳಲಿ ಪಾಸಾಗು ಬಾ ನಲ್ಲೇ ಹಗಲಿಗಂಜಿದ ಚುಕ್ಕಿಗಳು ನಲಿದಿವೆ ಕತ್ತಲಾ ಬಾನಲ್ಲೇ ಒಲವೇ ಜೀವನ ಸಾಕ್ಷಾತ್ಕಾರ ಸ್ವಲ್ಪ ಇರಲಿ ಲೆಕ್ಕಾಚಾರ. ಒಲವಿಗೂ ತಪ್ಪೊಲ್ಲ ಗ್ರಹಚಾರ ನಾವೇ ಅರಿಯಬೇಕು ವಿಚಾರ-ಆಚಾರ ನಾಳೆ ಅನ್ನೊದು ಅಗೋಚರ ಆದರೂ ಕಟ್ಟೋಣ ಕನಸುಗಳ ಗೋಪುರ ಅಲ್ಲಿ ರಾಜಾ ರಾಣಿ ಪಟ್ಟ ನಮಗೆ ನಿರಂತರ ಸಹನೆಯಿಂದಲೇ ಸಹಬಾಳ್ವೆಯ ಸಂಸಾರ. ಕೊನೇ ಮಾತು ಕೇಳೇ ಸಖೀ ನಿನ್ನಿಂದಲೇ ನಾನು ಪರಮಸುಖೀ. ( " ಅವಳ ಡೈರಿಯ ಗೆದ್ದಲು ನೆಕ್ಕಿದ ಸಾಲುಗಳು".. ಕವನ ಸಂಕಲನ ದಿಂದ )

Saturday 30 April 2016

ಗುಬ್ಬಿಯ ಮನವಿ

ಗುಬ್ಬಿಯ ಮನವಿ

ಬಾಯಿ ಆರಿದೆ
ದೇಹ ದಣಿದಿದೆ
ಸಾವೇ  ಬಂದು ಕೇಕೆ ಹಾಕುತಿದೆ
ನೋವೇ ಗೂಡಲಿ  ಟಿಕಾಣಿ ಹೂಡಿದೆ..
ಗುಟುಕು ನೀರು ಕೊಡಿ ತಾಯಿ..
ಮರಿ ಗುಬ್ಬಿಗಳೆಲ್ಲಾ ಗೂಡಲೇ ಬೆಂದಿವೆ ತಾಯೀ...
ನರಮಾನವ ಹೇಗೋ ಬದುಕುಳಿಯುವನು
ಧರೆಯೆಲ್ಲಾ ಉರಿದರು ಬುದ್ಧಿ ಕಲಿಯನು
ವಿಲಾಸಿ ಬದುಕಿಗೆ ದಾಸನಾಗಿ
ವಿನಾಶದೂರಿಗೆ ಹೊರಟಿಹನು..
ವಿಶ್ವಾಪುರದ ನೆಮ್ಮದಿ ಕದಡಿ
ವನ್ಯಜೀವಿಗಳ  ಸಂಕುಲವ ಸಂಕಟಕ್ಕೆ ದೂಡಿ
ಧರೆಯೆಲ್ಲಾ  ಶಕೆಯಲಿ ಬೆವರಿ ಬಸವಳಿದಿಹುದು
ಎಚ್ಚರವಾಗದೇನು ನಾಗರೀಕ ನರನೇ.?
ಧರೆ ಉಳಿಯದಿರೆ ನಿನ್ನ ಯಂತ್ರ ತಂತ್ರ
ಉಳಿಸವು ನಿನ್ನ ಜೀವನ ಸೂತ್ರ
ಜಪಿಸು ಬೇಗ ಹಸಿರು ಮಂತ್ರ
ಮತ್ತೆ ಧರೆಯೆಲ್ಲೆಡೆ ಬರಲಿ ನಿತ್ಯ ಚೈತ್ರ-ವರ್ಷ.
ರವಿರಾಜ್ ಸಾಗರ್.

ಗುಬ್ಬಿಯ ಮನವಿ

ಗುಬ್ಬಿಯ ಮನವಿ

ಬಾಯಿ ಆರಿದೆ
ದೇಹ ದಣಿದಿದೆ
ಸಾವೇ  ಬಂದು ಕೇಕೆ ಹಾಕುತಿದೆ
ನೋವೇ ಗೂಡಲಿ  ಟಿಕಾಣಿ ಹೂಡಿದೆ..
ಗುಟುಕು ನೀರು ಕೊಡಿ ತಾಯಿ..
ಮರಿ ಗುಬ್ಬಿಗಳೆಲ್ಲಾ ಗೂಡಲೇ ಬೆಂದಿವೆ ತಾಯೀ...
ನರಮಾನವ ಹೇಗೋ ಬದುಕುಳಿಯುವನು
ಧರೆಯೆಲ್ಲಾ ಉರಿದರು ಬುದ್ಧಿ ಕಲಿಯನು
ವಿಲಾಸಿ ಬದುಕಿಗೆ ದಾಸನಾಗಿ
ವಿನಾಶದೂರಿಗೆ ಹೊರಟಿಹನು..
ವಿಶ್ವಾಪುರದ ನೆಮ್ಮದಿ ಕದಡಿ
ವನ್ಯಜೀವಿಗಳ  ಸಂಕುಲವ ಸಂಕಟಕ್ಕೆ ದೂಡಿ
ಧರೆಯೆಲ್ಲಾ  ಶಕೆಯಲಿ ಬೆವರಿ ಬಸವಳಿದಿಹುದು
ಎಚ್ಚರವಾಗದೇನು ನಾಗರೀಕ ನರನೇ.?
ಧರೆ ಉಳಿಯದಿರೆ ನಿನ್ನ ಯಂತ್ರ ತಂತ್ರ
ಉಳಿಸವು ನಿನ್ನ ಜೀವನ ಸೂತ್ರ
ಜಪಿಸು ಬೇಗ ಹಸಿರು ಮಂತ್ರ
ಮತ್ತೆ ಧರೆಯೆಲ್ಲೆಡೆ ಬರಲಿ ನಿತ್ಯ ಚೈತ್ರ-ವರ್ಷ.
ರವಿರಾಜ್ ಸಾಗರ್.