ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Friday 13 May 2016

ನಿಸರ್ಗ ನಿಯಮ

ನಿಸರ್ಗ ನಿಯಮ ಕೋಗಿಲೆಯೊಂದು ಕರೆದಿದೆ ಕೂಗಿ ಹಾಡಲು ತನ್ನೊಂದಿಗೆ ವಯ್ಯಾರದ ನವಿಲು ಕೈಹಿಡಿದೆಳೆದಿದೆ ಕುಣಿಯಲು ಜೂತೆಯಾಗಿದೆ. ಮಲ್ಲಿಗೆ ಮೆಲ್ಲಗೆ ಮಾತಿಗೆಳೆದಿದೆ ಸುಗಂಧವಾ ಹರಡಲೂ ಜೋಗದಿ ದುಮುಕುತ ಶರಾವತಿ ಕರೆದಳು ಸಾಗರವಾ ಸೇರಲೂ ಕತ್ತಲ ಕರಗಿಸೋ ಜ್ಯೋತಿ ಸೆಳೆದಳು ಶೃಂಗಾರ ಸಡಗರ ಸಮಯದ ಸಾಕ್ಷಿಗೇ; ಸಂತಸ ಹಂಚಿ ಸುಂದರ ಬದುಕು ಎನ್ನುವ ನಿಸರ್ಗ ನಿಯಮವೇ ಚೆಂದ ಒಣ ವೇದಾಂತ ಕಿವಿಗೂ ಹಿತವಲ್ಲ.. ಆಸೆಗಳೂರಲಿ ಅಲೆದರೆ ತಪ್ಪಲ್ಲ. ಸಂತಸ ಹಂಚಿರಿ ಧರೆಯೆಲ್ಲ.. # ರವಿರಾಜ್ ಸಾಗರ್

No comments:

Post a Comment