ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Wednesday 23 March 2016

ಹಿಂಗೂ ಬರೀಬಹುದಾ...

ಕಚ್ಚಿದ ಇರುವೆಯ ಕಚ್ಚಲಾರೆ...
ಚುಚ್ಚಿದ ಮುಳ್ಳನು ಚುಚ್ಚಲಾರೆ..
ಸ್ವಲ್ಪ ಒಳ್ಳೆ ಹುಡುಗ ನಾನು.
ದಯೆಯೇ ಧರ್ಮ ಅಲ್ಲವೇನು..?
      -ರವಿರಾಜ ಮಾರ್ಗ.
ರವಿರಾಜ್ ಸಾಗರ್,

Friday 18 March 2016

ಪ್ರಾಥಮಿಕ ಶಾಲೆ ಶಿಕ್ಷಕರೆಂದರೆ ಯಾರು.?

ಅಕ್ಷರ ದಾಸೋಹ
ಕ್ಷೀರಭಾಗ್ಯ
ಸುವರ್ಣ ಆರೋಗ್ಯ ಚೈತನ್ಯ
ಸೈಕಲ್ ವಿತರಣೆ
ಪಠ್ಯಪುಸ್ತಕ ವಿತರಣೆ
ಬ್ಯಾಗ್ ವಿತರಣೆ..ಶೂ
ಚಿಣ್ಢರ ಅಂಗಳ
ಕೂಲಿಯಿಂದ ಶಾಲೆಗೆ
ಬಾ ಬಾಲೆ ಶಾಲೆಗೆ
ಬಾ ಮರಳಿ ಶಾಲೆಗೆ
ಶಾಲಾ ಪ್ರಾರಂಭೋತ್ಸವ
ದಾಖಲಾತಿ ಆಂದೋಲನ
ಶಾಲೆ ಬಿಟ್ಟ ಮಕ್ಕಳ ಮನೆಭೇಟಿ
ಎಸ್ ಡಿ ಎಂ ಸಿ ರಚನೆ
ಶೌಚಾಲಯ ನಿರ್ವಹಣೆ
ಕಟ್ಟಡ ಕಾಮಗಾರಿ
ಸಮುದಾಯದತ್ತ ಶಾಲೆ
ಶಾಲಾ ವಾರ್ಷಿಕೋತ್ಸವ
ಪ್ರಗತಿಪತ್ರ ತುಂಬವುದು
ಪಾಠಯೋಜನೆ
ಪಾಠಬೋಧನೆ
ಕ್ರಿಯಾಯೋಜನೆ
ಕ್ರೀಯಾಸಂಶೋಧನೆ
ಶೈಕ್ಷಣಿಕ ಯೋಜನೆ
ದಾಖಲೆ ನಿರ್ವಹಣೆ
ಡಾಟ ಎಂಟ್ರಿ
ಮಕ್ಕಳಿಗೆ ಬ್ಯಾಂಕ್ ಖಾತೆ ತರೆಯುವುದು
ವಿದ್ಯಾರ್ಥಿವೇತನ
ಸಮನ್ವಯ ಶಿಕ್ಷಣ
ಜನಗಣತಿ
ಮಕ್ಕಳ ಗಣತಿ
ಜಾತಿಗಣತಿ
ಚುನಾವಣಾಕಾರ್ಯ
ಬಿಎಲ್ ಒ ಕೆಲಸ
ಗುಳಿಗೆ ಹಂಚಿಕೆ
ಪಲ್ಸ್ ಪೋಲಿಯೋ
ಸಮಾಲೋಚನ ಸಭೆ
ಎಸ್ ಡಿ ಎಂ ಸಿ ಸಭೆ
ಪಾಲಕರ ಸಭೆ
ಶಿಕ್ಷಕರ ಸಭೆ
ಪುನಶ್ಚೇತನ ತರಬೇತಿ
ಬ್ರಿಟಿಷ್ ಕೌನ್ಸಿಲ್ ತರಬೇತಿ
ಹೊರಸಂಚಾರ
ಕ್ಷೇತ್ರ ಸಂದರ್ಶನ
ಶೈಕ್ಷಣಿಕ ಪ್ರವಾಸ
ಜಿಲ್ಲಾದರ್ಶನ
ಸೇತುಬಂಧ
ಪರಿಹಾರ ಬೋಧನೆ
ಪೂರಕಬೋಧನೆ
ನಲಿ ಕಲಿ
ಕಲಿ ನಲಿ
ಚೈತನ್ಯ ಮಾದರಿ
ಟಿ ಎಲ್ ಎಂ ತಯಾರಿ
ಚಿನ್ನರಚುಕ್ಕಿ
ಚುಕ್ಕಿಚಿನ್ನ
ಕೇಳಿಕಲಿ
ಕ್ರೀಡಾಮೇಳ
ಪ್ರತಿಭಾ ಕಾರಂಜಿ
ಕಲಿಕೋತ್ಸವ
ಮೆಟ್ರಿಕ್ ಮೇಳ
ವಿಜ್ಞಾನ ಮೇಳ
ಸಾಂಸ್ಕೃತಿಕ ಕಾರ್ಯಕ್ರಮ
ಸೈನ್ಸ ಇನ್ಸ್ ಪೈಯರ್ ಅವಾರ್ಡ್
ಪೂರಕ ಪರೀಕ್ಷೆ
ನೈದಾನಿಕ ಪರೀಕ್ಷೆ
ಸಿಸಿಇ ಪರೀಕ್ಷೆ
ಘಟಕ ಪರೀಕ್ಷೆ
ಮೊರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆ
ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ
ಕಸ್ತೂರಿ ಬಾ ಬಾಲಿಕ ವಿದ್ಯಾಲಯ ಪ್ರವೇಶ ಪರೀಕ್ಷೆ
ನವೋದಯ ಪ್ರವೇಶ ಪರೀಕ್ಷೆ
ಎನ್ ಟಿ ಎಸ್ ಪರೀಕ್ಷೆ
ಎನ್ ಎಮ್ ಎಮ್ ಎಸ್ ಪರೀಕ್ಷೆ
ಗಣರಾಜ್ಯೋತ್ಸವ
ಸ್ವಾತಂತ್ರ್ಯೋತ್ಸವ
ಹೈ-ಕ ವಿಮೋಚನಾ ದಿನಾಚರಣೆ
ಯುವಕರ ದಿನಾಚರಣೆ
ಮಕ್ಕಳ ದಿನಾಚರಣೆ
ಶಿಕ್ಷಕರ ದಿನಾಚರಣೆ
ಸಾಕ್ಷರತ ದಿನಾಚರಣೆ
ಪರಿಸರ ದಿನಾಚರಣೆ
ವಿಜ್ಞಾನಿಗಳ ದಿನಾಚರಣೆ
ರಾಷ್ಟ್ರೀಯ ಶಿಕ್ಷಣ ದಿನಾಚರಣೆ
ಭೂ ದಿನಾಚರಣೆ
ಗಾಂಧಿ ಜಯಂತಿ
ಕನಕ ಜಯಂತಿ
ಬಸವ ಜಯಂತಿ
ಅಂಬೇಡ್ಕರ್ ಜಯಂತಿ
ಕನ್ನಡ ರಾಜ್ಯೋತ್ಸವ
ಬಾಬು ಜಗಜೀವನ್ ರಾಂ ದಿನಾಚರಣೆ
ವನಮಹೋತ್ಸವ
ಇತ್ಯಾದಿ ಇತ್ಯಾದಿ.
   ಇವನ್ನೆಲ್ಲ   ಮಾಡಿ . . ಸರ್ಕಾರದ ಶಾಲೆಗೆ  ಬರಬಹುದಾದ ಮಕ್ಕಳನ್ನೂ ಆರ್ ಟಿ ಇ ನೆಪದಲ್ಲಿ  ಒಂದಷ್ಟು.. ನವೋದಯ,  ಮುರಾರ್ಜಿ ಶಾಲೆ. ಆದರ್ಶ ಶಾಲೆ, ಕಿತ್ತೂರು ಚೆನ್ನಮ್ಮ ವಸತಿ ಶಾಲೆ,  ಮತ್ತಿತರೆ ಶಾಲೆಗೆ ಪ್ರತಿಭಾವಂತ ವಿದ್ಯಾರ್ಥಿ ಗಳ ನ್ನು ಶೋಸಿ ಕಳಿಸಿ,  ಬಡವರ,  ವಲಸೆ ಕುಟುಂಬದ ಹಳ್ಳಿಗಳಲ್ಲಿ ಉಳಿದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಇರುವವರೇ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು. .!! ಬೆಳಿಗ್ಗೆ ಇಂದ ಸಂಜೆ ವರೆಗೂ ಸಣ್ಣ ಮಕ್ಕಳಿಗೆ ಪಾಠ  ಹೇಳಿಕೊಡುವವರು. ..! ಸಣ್ಣ ಸಂಬಳದವರು...
     

      

Tuesday 1 March 2016

ನಾನು ಮತ್ತು ಅವಳು

ನಾನು ಮತ್ತು ಅವಳು ಉನ್ಮತ್ತ ನಾನು.. ಉದಾರಿ ನೀನು ಅಸಲು ನೀಡಲಾರೆ ನೀ ಕೊಟ್ಟ ಚುಂಬನದ ಸಾಲಕೆ. ಹರಾಜಿನಲ್ಲಿ ನನ್ನ ದೋಚಿಕೋ. ಕನಸುಗಾರ ನಾನು... ಪಂಚರಂಗಿ ನೀನು.. ಲೋಕಕಂಜಿ ಬಿಡಲಾರೆ ಹೆದರಬೇಡ ಜನರ ನಿಯಮಕೆ ಮುಲಾಜೆ ಬೇಡ ನನ್ನ ನಂಬಿಕೊ. ಮಹಾ ಮೌನಿ ನಾನು ಹೂ ಮಳೆ ನೀನು. ಸುರಿದು ಬಿಡು ಸುಮ್ಮನೆ ಮುಳುಗಿ ಹೋದರು... ತೇಲಾಡುವೆ ಒಲವಲಿ. - ರವಿರಾಜ್ ಸಾಗರ್ ( ನನ್ನ" ಬಾವಜೀವಿ" ಬಾವಗೀತೆಗಳ ಸಂಕಲನದ ಒಂದು ಗೀತೆಯ ಸಾಲು ನಿಮ್ಮ ವಿಮರ್ಶೆಗಾಗಿ .)

Wednesday 24 February 2016

ಬೋದಿಸದ ಬುದ್ಧ

ಬೋದಿಸದ ಬುದ್ಧ
.................
ನಾನೂ  ಮುಗ್ದ ಮಗು....!
ಬದಲಿಸಿತು ನಿನ್ನ  ನಗು.
ಬುದ್ಧನೆದುರು ಬದಲಾದರೆಲ್ಲಾ.. ..
ಮುಗ್ದನೆದುರು ನಾನೂ....
ಮುದ್ದು ಮಗು.
         ನನ್ನ ಮನೆ ಗಡಿಯಾರದ
     ಮುಳ್ಳುಗಳೀಗ ಚಲನೆ ಬದಲಿಸಿ
     ಆಟಕ್ಕಿಳಿದಿವೆ ನನಗೇ ಚೇಷ್ಟೆ ಮಾಡುತ.
     ನನ್ನ ಪುಸ್ತಕಗಳೆಲ್ಲಾ ಹಾಯಾಗಿ 
ಚೂರಾಗಿ  ಮುಕ್ತಿ ಪಡೆಯಲು ತವಕಿಸುತಿವೆ
ಹಸುಗೂಸಿನ ಕೋಮಲ ಕೈಗಳಲಿ
ಪರ್ರನೆ ಕೇಕೆ ಹಾಕುತಿವೆ.
ಇನ್ನು  ನಾನು ಉಳಿದೆನೇ...
ಬದಲಾಗಿಬಿಟ್ಟೆ ಮಗುವಾಗಿ....
        ಎಸು ಓದಿದರೂ ಬದಲಾಗದವರೆಲ್ಲ
        ಬದಲಾಗಬಹುದಾದ
         ಪುಸ್ತಕವೇ ಮಗು .
           ಮಗುವೇ ಪುಸ್ತಕ.
          ಎಲ್ಲ ಬದಲಿಸಿತು.
         ಏನೂ ಹೇಳದೆ.
ಬೋದಿಸದ ಬುದ್ಧ.

Sunday 14 February 2016

"ಮಂದಾರ ಕನ್ನಡ". ಶಾಲಾ ಮಕ್ಕಳ ಪತ್ರಿಕೆ

ಮಕ್ಕಳಿಂದ ಮಕ್ಕಳಿಗೆ ಸೃಜನಶೀಲ ಬರವಣಿಗೆ ಗೆ ವೇದಿಕೆಗಾಗಿ "ಮಂದಾರ ಕನ್ನಡ"  ಶಾಲಾ  ಮಕ್ಕಳ ಪತ್ರಿಕೆಯ ಜೆಪಿ. ಜೆ ಆವೃತ್ತಿ. ನಿನಿಮಗಾಗಿ.

Friday 5 February 2016

ಮುಳುಗಡಲೇ. .(ಮಂಡಗಳಲೆ )

ಮುಳುಗಡಲೇ...(ಮಂಡಗಳಲೆ)

ಅತ್ತ ಸಹ್ಯಾದ್ರಿ ಕಣಿವೆಯಲಿ
  ಸೊಗಸಾಗಿ  ದುಮುಕುವ ಶರಾವತಿ
ಇತ್ತ ಅಬ್ಬರಿಸುತ  ವಯ್ಯಾರದಿ ಬರುವ ವರದಾ ನದಿ
ನಾನೇನು ಕಡಿಮೆಯೇ ಎನ್ನುವ ಕನ್ನೆಹೊಳೆ
ಆದ್ರೆ ಮಳೆಯನುಂಡು
ಅಣ್ಣ ತಮ್ಮನ ಮಳೆಯಲಿ
ಮೈದುಂಬಿ ಮೆರೆದು
ನಮ್ಮೂರ ಮುಳುಗಿಸಿ
ಮಜ ನೋಡುವಳು...
ಆದರೂ ಮಳುಗಡೆಯ ಮಕ್ಕಳು ನಾವು
ಮುಳುಗಿ ಹೋಗುವೆವೇ..?
ದೀವರ ಕುಲದ ದಿಟ್ಟರು ನಾವು
ಕಾಯಕವೇ ಕೈಲಾಸ ಎನ್ನುತ
ಆಳಾಗಲೂ ಸೈ.. ಅರಸಾಗಲೂ ಜೈ,
            ಸಹ್ಯಾದ್ರಿಯ ಹೆಬ್ಬಾಗಿಲ
  ಪುಟ್ಟ  ತಗ್ಗು ಬಯಲು ನನ್ನೂರು..
ಸಮಾಜವಾದಿಗಳ ಕಾಗೋಡು ಚಳುವಳಿಗೆ
ಜೂತೆಯಾದವರು ನನ್ನೋರು..
  ಶೂದ್ರ ಕುಲಗಳ ಸುಶಿಕ್ಷಿತರ ನೆಲೆಬೀಡು
  ದಂಡು ದಾಳಿಗೆ ಅಂಜದ ದೀವರ ಗೂಡು.
ಮುಳುಗೇಳುವ  ಮಂಡಗಳಲೆ
ಶ್ರಮಿಕರ ಸಹಬಾಳ್ವೆಯ ನೆಲೆ.
- ರವಿರಾಜ್ ಸಾಗರ್.ಮಂಡಗಳಲೆ.

Tuesday 2 February 2016

ಹುಸಿಯಲ್ಲ ಹಸಿವು

ಹುಸಿಯಲ್ಲ ಹಸಿವು
...................
ಕಾಲೆಳೆವ ಕಾಲದ ಕಾಲೆಳೆದೇ ಬದುಕಬೇಕೆಂದು ಹಠ ಹಿಡಿದು
ಕಡಲಲೆಯ ತಡೆದು
ಹೊಂಬಣ್ಣದ ಕಡಲೇ ಕೆಂಪಾಗುವಂತೆ ಮುನಿದು
ಸೂರ್ಯನ  ನೆತ್ತಿ ಸುಟ್ಟು
ನಗುನಗುತ ಕುಂತ ಕಾಲಬೈರವ ನಾನು.
ನಿನಗೆ ಹೆದರುವೆನೆ  ಚೆಲುವೆ.?
ಅಂತೇನು ಹೇಳಲಾರೆ
ನಿನ್ನ ಅಂಗಾಲಿಗೆ ಹಾಲು ಸುರಿದು
ಮುಡಿಗೆ ಮಲ್ಲಿಗೆ ಮುಡಿಸಿ
ನಿನ್ನ ಹುಸಿ ಮುನಿಸಿಗೆ
ಕ್ಷಮೆ ಕೇಳುವಾಸೆ
ಹುಸಿ ಮುನಿಸಿಕೊಂಡಾಗ ನೀ ಬಲು ಚೆಲುವೆ
  ಹಸಿ ಪ್ರೇಮದಿಂದ ಮನ್ನಿಸಿ ಬಿಡು ಒಲವೇ..
ಹುಸಿಯಲ್ಲ ನನ್ನೊಲವು
ಒಲವ   ಹಸಿವಾಗಿದೆ
ಉಳಿಸಿ, ಉಣಿಸು ಬಾ ಒಲವಾಮೃತ.
ರವಿರಾಜ್ ಸಾಗರ್. - (ಬಾವಜೀವಿ ಸಂಕಲನ ದಿಂದ. )