ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Tuesday 26 January 2016

ಸೋಲನ್ನು ಸೋಲಿಸಿ

                                     ಮೂಲಸಂಗ್ರಹ:

ಸೋಲು.. ಯಾರಿಗಾಗಿಲ್ಲ..? ಎಷ್ಟು ಜನ ಎದುರಿಸಿಲ್ಲ..? ಸೋಲದೇ ಇದ್ದವನು ಗೆದ್ದ ಉದಾಹರಣೇನೇ ಇಲ್ಲ..! ಇವತ್ತು ಇಡೀ ಪ್ರಪಂಚದಲ್ಲೇ ವೇಗವಾಗಿ ಓಡೋನು ಅನುಸ್ಕೊಂಡಿರೋ ಉಸೇನ್ ಬೋಲ್ಟ್ ಸಹ, ಸೋತು, ಬಿದ್ದು ಎದ್ದು ಈಗ ಗೆಲ್ತಾ ಇರೋದು.. ಸೋತಾಗ ಸತ್ತೆ ಅನ್ಕೊಂಡ್ರೆ ನೀವು ಶಾಶ್ವತವಾಗಿ ಸೋತಹಾಗೆ..! ಸೋತಾಗ, ಇದ್ಯಾವ ಸೋಲು, ನಾನು ಗೆದ್ದೇ ಗೆಲ್ತೀನಿ ಅನ್ಕೊಂಡ್ರೆ ಮಾತ್ರ ಲೈಫ್ ಜಿಂಗಾಲಾಲ..! ತುಂಬಾ ಸೋತವನನ್ನು ಕೇಳಿನೋಡಿ, ಇನ್ನಾಗಲ್ಲ ನಾನು ಸೋತು ಸುಣ್ಣ ಆಗ್ಬಿಟ್ಟಿದೀನಿ.. ಏನ್ ಮಾಡುದ್ರೂ ಕೈ ಹತ್ತುತಿಲ್ಲ.. ಏನ್ ಮಾಡ್ಬೇಕೋ ಗೊತ್ತಾಗ್ತಿಲ್ಲ ಅಂತ ಹೇಳ್ತಾರೆ.! ಅದೇ ಗೆದ್ದವರನ್ನು ಮಾತಾಡ್ಸಿ ನೋಡಿ. ಸೋತವನಿಗಿಂತ ಜಾಸ್ತಿ ಸಲ ಅವರೂ ಸೋತಿರ್ತಾರೆ..! ಆದ್ರೆ ಗೆಲ್ಲೋ ತನಕ ಸೋತಿದ್ದರ ಬಗ್ಗೆ ಚಿಂತೆ ಮಾಡಲ್ಲ ಅಂತ ಡಿಸೈಡ್ ಮಾಡಿರ್ತಾರೆ..! ಹಾಗಾಗಿ ಅವರು ಅಂತ ಸೋಲನ್ನು ಮೀರಿ ಗೆದ್ದಿರ್ತಾರೆ..! ಯಾವಾಗ ಸೋತು ಸೋತು ಗೆಲ್ಲಬೇಕು ಅನ್ನೋ ಹಠ ಶುರುವಾಗುತ್ತೋ ಅವಾಗ್ಲೆ ಗೆಲ್ಲೋಕೆ ಸಾಧ್ಯ..! ಯಾವಾಗ ಗೆಲ್ಲೋ ಹಠ ಜಾಸ್ತಿಯಾಗಿ ಗೆದ್ದುಬಿಡ್ತೀರೋ, ಆಮೇಲೆ ಗೆಲ್ಲೋದು ನಿಮಗೆ ಚಟ ಆಗೋಗುತ್ತೆ..! ಅದೊಂದೇ ಚಟ, ಜೀವನದ ಅತ್ಯಂತ ಒಳ್ಳೇ ಚಟ… ಜೀವನದಲ್ಲಿ ನಿಮ್ಮನ್ನು ಎತ್ತರೆತ್ತರಕ್ಕೆ ಕರ್ಕೊಂಡೋಗಿ ಬಿಡೋ ಚಟ..! ಆ ಚಟ ನಿಮಗೆ ಅಭ್ಯಾಸ ಆಗೋ ತನಕ ತಿರುಗಿ ನೋಡದೇ ನುಗ್ತಾ ಇದ್ರೆ, ಯಾವ ಸೋಲೂ ನಿಮ್ಮನ್ನು ಏನೂ ಮಾಡಕ್ಕಾಗಲ್ಲ..!

ಜೀವನ ಹೆಂಗಿರುತ್ತೆ ಗೊತ್ತಾ..? ಎಂತವರನ್ನೆ ಕೇಳಿ ನೋಡಿ, ಸಾಕಾಗಿದೆ ಅನ್ನೋ ಉತ್ತರ ಕೊಡ್ತಾರೆ.. ಅವನು ರಸ್ತೇಲಿ ಭಿಕ್ಷೆ ಬೇಡೋನಾದ್ರೂ ಅಷ್ಟೆ, ಆಡಿ ಕಾರಲ್ಲಿ ಜುಮ್ ಅಂತ ಹೋಗೋನಾದ್ರೂ ಅಷ್ಟೆ..! ಅವರವರಿಗೆ ಅವರವರ ಸಮಸ್ಯೆಗಳು.. ಹಂಗಂತ ಸಮಸ್ಯೆಗಳನ್ನ ತಲೆ ಮೇಲೆ ಹೊತ್ಕೊಂಡು ಕೂತ್ರೆ ಸಮಸ್ಯೆ ಕಮ್ಮಿ ಆಗೋದೇ ಇಲ್ಲ..! ಸಮಸ್ಯೆ ಬರೋಕೆ ಮುಂಚೇನೇ ಅದನ್ನ ಹೆದರಿಸಿ ಓಡ್ಸೋ ಪ್ರಯತ್ನ ಮಾಡಬೇಕು. ಸಾಧ್ಯ ಆಗಲೇ ಇಲ್ಲ, ಸಮಸ್ಯೆ ಆಗೇ ಹೋಯ್ತು ಅಂದಾಗ ಅದನ್ನು ಎದುರಿಸೋ ತಾಕತ್ತು ಇರಬೇಕು.. ಐಸ್ ಕ್ರೀಮ್ ತಿನ್ನಬೇಕಾದ್ರೆ ಎಂಜಾಯ್ ಮಾಡ್ಕೊಂಡು ತಿನ್ನೋರು ಶೀತ ಆದ್ರೆ ಮಾತ್ರೆ ತಿನ್ನೋಕೂ ರೆಡಿ ಇರಬೇಕು..! ಬರೀ ಐಸ್ ಕ್ರೀಂ ಬೇಕು, ಶೀತ ಬೇಡ ಅಂದ್ರೆ ಆಗಲ್ಲ.. ಹಾಗೇನೇ, ಬರೀ ಗೆಲುವೇ ಬೇಕು, ಸೋಲು ಬರಲೇಬಾರದು ಅಂದ್ರೆ ಸಾಧ್ಯವೇ ಇಲ್ಲ..! ಇವತ್ತು ಗೆದ್ದವರೆಲ್ಲಾ ಸೋತು ಸೋತು ಸೋತು ಗೆದ್ದವರು..! ಗೆಲುವಿನ ಹಿಂದೆ ಸೋಲಿನ ಸರಮಾಲೆಗಳಿರುತ್ತೆ, ಸೋಲು ಅನ್ನೋದು ಶತೃವಿನ ಹಾಗೆ ಕಾಟ ಕೊಡುತ್ತೆ, ಸೋಲು ನಿಮ್ಮ ಸತ್ವ ಪರೀಕ್ಷೆ ಮಾಡುತ್ತೆ.. ಆದ್ರೆ ಅದನ್ನೆಲ್ಲಾ ಎದುರಿಸಿ, ಹೆದರಿಸಿ ನುಗ್ಗಿ ಗೆದ್ದು ಬಿಟ್ರೆ ಸೋಲು ನಿಮಗೇ ಶರಣಾಗಿ ಬಿಡುತ್ತೆ..! ಸೋಲು ನಿಮ್ಮನ್ನು ಸೋಲಿಸುವ ಮುನ್ನ, ನೀವೇ ಸೋಲನ್ನು ಸೋಲಿಸಿಬಿಡಿ..!
ಜ್ಯಾಕ್ ಮಾ ಅಂತ ಒಂದು ಹೆಸರು ಕೇಳಿರಬೇಕು ನೀವು. ಅವರು ಚೀನಾದ ಅತ್ಯಂತ ಶ್ರೀಮಂತ..! ಆಲಿಬಾಬಾ ಡಾಟ್ ಕಾಮ್ ಸಂಸ್ಥೆಯ ಚೇರ್ಮನ್..! ಇವತ್ತು ಅವರ ಆಸ್ತಿ ಅದೆಷ್ಟೋ ಸಾವಿರ ಸಾವಿರ ಕೋಟಿ..! ಅವರು ಆ ಸಾವಿರ ಸಾವಿರ ಕೊಟಿ ಇವತ್ತು ಅನುಭವಿಸ್ತಿರಬಹುದು. ಆದ್ರೆ ಅದರ ಹಿಂದೆ ಸೋತಿದ್ದು ಎಷ್ಟು ಸಲ ಗೊತ್ತಾ.. ಲೆಕ್ಕವೇ ಇಲ್ಲದಷ್ಟು ಸಲ..! ನಿನ್ ಕೈಲಿ ಏನಾಗುತ್ತೆ ಹೋಗಲೆ ಅಂತ ಅವರನ್ನು ಕಾಲೆಳೆದವರು ಇವತ್ತು ಅವರದೇ ಆಫೀಸಲ್ಲಿ ಕೆಲಸ ಮಾಡ್ತಿದ್ದಾರೆ.. ಬರೀ 12 ಡಾಲರ್ ಸಂಬಳಕ್ಕೆ ಟೀಚರ್ ಕೆಲಸ ಮಾಡ್ತಿದ್ದವರು ಇವತ್ತು 15-20 ಸಾವಿರ ಜನರಿಗೆ ಕೆಲಸ ಕೊಟ್ಟಿದ್ದಾರೆ.. ಪ್ರತಿಷ್ಟಿತ ಕೆ.ಎಫ್.ಸಿ ಸಂಸ್ಥೆ, ಅವರನ್ನು ಸರ್ವರ್ ಆಗಿಯೂ ಕೆಲಸಕ್ಕೆ ಸೇರಿಸಿಕೊಂಡಿರಲಿಲ್ಲ..! ಆದ್ರೆ ಇವತ್ತು ಆ ಸೋಲಿಗೆ ಹೆದರದೇ ಇದ್ದ ಕಾರಣಕ್ಕೆ ಎತ್ತರೆತ್ತಕ್ಕೆ ಏರಿದ್ದಾರೆ.. ಅವತ್ತು ಜ್ಯಾಕ್ ಮಾ ಜೊತೆ ಕೆ.ಎಫ್.ಸಿ ಗೆ 24 ಜನ ಕೆಲಸಕ್ಕೆ ಟ್ರೈ ಮಾಡಿದ್ರು. ನೀವು ನಂಬ್ತಿರೋ ಬಿಡ್ತಿರೋ, ಆ 23 ಜನಾನೂ ಸೆಲೆಕ್ಟ್ ಆಗಿದ್ರು. ಆದ್ರೆ ಜಾಕ್ ಮಾ ಆಗಿರಲಿಲ್ಲ..! ಅಯ್ಯೋ ನಾನು ಸೋತುಬಿಟ್ಟೆ ಅಂತ ಅವರೇನಾದ್ರೂ ಅನ್ಕೊಂಡಿದ್ದಿದ್ರೆ ಇವತ್ತು ಅಲಿಬಾಬಾ ಡಾಟ್ ಕಾಮ್ ಎಲ್ಲಿರ್ತಿತ್ತು..? ಗೆದ್ದಾಗ ಹೆಂಗೆ ಗೆಲ್ಲಬೇಕು ಅನ್ನೋದು ಗೊತ್ತಾದ್ರೆ, ಸೋತಾಗ ಇನ್ನು ಮುಂದೆ ಹೇಗೆ ಸೋಲಬಾರದು ಅನ್ನೋದು ಗೊತ್ತಗುತ್ತೆ..! ಸೋ ಸೋಲು ಅಂದ್ರೆ ಗೆಲ್ಲೋ ರೋಡಿನ ಹಂಪ್ ಗುಂಡಿ ಅಷ್ಟೆ..! ಅಯ್ಯೋ ಹೆಂಗಪ್ಪಾ ಈ ಗುಂಡಿ ದಾಟೋದು, ಹೆಂಗಪ್ಪಾ ಹಂಪ್ ಎಗರಿಸೋದು ಅಂತ ಯೋಚನೆ ಮಾಡ್ತಾ ಕೂತ್ರೆ ನಾವು ಯಾವತ್ತೂ ಗುರಿ ಮುಟ್ಟೋಕೆ ಸಾಧ್ಯಾನೇ ಆಗಲ್ಲ..!

ಕೆಲವರು ಏನೋ ಮಾಡ್ಬೇಕು ಅಂತ ಹೋಗ್ತಾರೆ, ಆದ್ರೆ ಕೈ ಸುಟ್ಟುಕೊಂಡು ಸುಮ್ಮನಾಗಿಬಿಡ್ತಾರೆ.. ಒಂದು ಇಡ್ಲಿ ಅಂಗಡಿ ಓಪನ್ ಮಾಡೋನು ಮೊದಲ ದಿನವೇ 1000 ಇಡ್ಲಿ ಸೇಲ್ ಆಗಬೇಕು ಅಂತ ಯೋಚನೆ ಮಾಡೋದ್ರಲ್ಲಿ ತಪ್ಪಿಲ್ಲ..! ಆದ್ರೆ ಆಗಿಲ್ಲ ಅಂತ ಮಾರನೇ ದಿನವೇ ಅಂಗಡಿ ಮುಚ್ಚಿದ್ರೆ ಹೇಗೆ..? ಇವತ್ತು ಇಡ್ಲಿ ತಿಂದ ಹತ್ತಾರು ಜನ ನಾಳೆ ನೂರಾರು ಜನರಿಗೆ ಹೇಳಬೇಕು. ಅವರು ನಿಮ್ಮ ಹೋಟೆಲ್ ಹುಡುಕಿ ಬರಬೇಕು.. ಅವರಿಗೆ ನೀವು ಕೊಟ್ಟ ಇಡ್ಲಿ ಇಷ್ಟ ಆಗಬೇಕು. ಮತ್ತೆ ಅವರು ಮತ್ತಷ್ಟು ಜನರಿಗೆ ಹೇಳಬೇಕು.. ಹೀಗೆ ಮಾಡಿದಾಗ ಮಾತ್ರ ಸಾವಿರ ಇಡ್ಲಿ ಮಾರಬೇಕು ಅನ್ಕೊಂಡೋರು ಎರಡು ಸಾವಿರ ಇಡ್ಲಿ ಮಾರೋಕೆ ಸಾಧ್ಯ..! ಮೊದಲ ದಿನ ಅನ್ಕೊಂಡಷ್ಟು ಆಗದೇ ಇರಬಹುದು, ಆದ್ರೆ ಮುಂದೊಂದು ದಿನ ಅನ್ಕೊಂಡಿದ್ದಕ್ಕಿಂತ ಜಾಸ್ತಿ ಆಗುತ್ತೆ..! ಅಲ್ಲಿ ತನಕ ಕಾಯೋ ತಾಳ್ಮೆ ಇರಬೇಕು. ಫಸ್ಟ್ ಡೇ ಆಗಿಲ್ಲ ಅಂದಮಾತ್ರಕ್ಕೆ ಅದು ಸೋಲಲ್ಲ..! ಹಂಗೇನಾದ್ರೂ ರೆಡ್ ಬಸ್ ಡಾಟ್ ಇನ್ ಶುರು ಮಾಡಿದವರು ಆರಂಭದಲ್ಲಿ ಸೋತಾಗ ಹೆದರಿದ್ರೆ ಇವತ್ತು ಆ ಕಂಪನಿ ಎಲ್ಲಿರ್ತಿತ್ತು..? ಇವತ್ತು ನಾವು ಎಲ್ಲಿಗೇ ಹೋಗ್ಬೇಕು ಅಂದ್ರೆ ಬಸ್ ಟಿಕೆಟ್ ಬುಕ್ ಮಾಡೋಕೆ ರೆಡ್ ಬಸ್ ಡಾಟ್ ಕಾಮ್ ನೋಡ್ತೀವಿ. ಆದ್ರೆ ಅವತ್ತು ಇದೇ ರೆಡ್ ಬಸ್ ಕಂಪನಿ ಕಟ್ಟೋಕೆ ಅವರು ಅದೆಷ್ಟು ಒದ್ದಾಡಿದ್ರು ಗೊತ್ತಾ..? ಊಟ ತಿಂಡಿ ಬಿಟ್ಟು, ಇರೋ ದುಡ್ಡಲ್ಲಿ ಒದ್ದಾಡ್ಕೊಂಡು ಕಟ್ಟಿದ ಕಂಪನಿ ಇವತ್ತು ಮಿಲಿಯನ್ ಡಾಲರ್ ಕಂಪನಿ..! ಹಬ್ಬಕ್ಕೆ ಊರಿಗೆ ಹೋಗೋಕೆ ಬಸ್ ಟಿಕೆಟ್ ಸಿಗಲಿಲ್ಲ ಅನ್ನೋ ಕಾರಣಕ್ಕೆ ರಜದಲ್ಲಿ ಕೂತು ಅವರು ಡೆವಲಪ್ ಮಾಡಿದ ರೆಡ್ ಬಸ್ ಡಾಟ್ ಇನ್ ಆರಂಭದಲ್ಲಿ ಸೋತು ಸೋತು ಸತ್ತೇ ಹೋಗಬೇಕಿತ್ತು. ಆದ್ರೆ ಅದನ್ನು ಹುಟ್ಟುಹಾಕಿದ ಫಣೀಂದ್ರ ರೆಡ್ಡಿ ಸಮಾ, ಸುದಾಕರ್ ಪಸುಪುನುರಿ, ಚರಣ್ ಪದ್ಮರಾಜು ಆ ಸೋಲಿನ ಹೊಡೆತಕ್ಕೆ ಹೆದರಿಹೋಗ್ಲಿಲ್ಲ.. ಹೆಂಗಾದ್ರೂ ಗೆದ್ದೇ ಗೆಲ್ತೀನಿ ಅಂತ ಹಠಕ್ಕೆ ಬಿದ್ದರು ಅಷ್ಟೆ..! ಆರಂಭದಲ್ಲಿ ಇವರ ವೆಬ್ ಸೈಟ್ ಮೂಲಕ ನಿಮ್ಮ ಬಸ್ ಟಿಕೆಟ್ ಬುಕ್ ಮಾಡ್ಬೋದು ಅಂತ ಹೇಳಿದ್ರೆ ಬಸ್ ಏಜೆಂಟರು, ಬುಕಿಂಗ್ ಆಫೀಸಿನವರು ಬೈದು ಕಳಿಸೋರಂತೆ. `ತಲೆ ತಿನಬೇಡ್ರಿ, ಹೋಗ್ರಪ್ಪ’ ಅಂತ..! ಆದ್ರೂ ಅವರು ನಾವು ಸೋಲ್ತೀವಿ ಅನ್ನೋ ಭಯಕ್ಕೆ ಬೀಳದೇ, ನಾವು ಗೆಲ್ಲಬೆಕು ಅನ್ನೋ ಚಟಕ್ಕೆ ಬಿದ್ರು..! ಆರಂಭದಲ್ಲಿ ಸೀಟು ಕೊಡದೇ ಇದ್ದವರು, ಇವರ ಕಾಟಕ್ಕೆ ಆಮೇಲಾಮೇಲೆ ಬಸ್ಸಿನ ಹಿಂದಿನ ಸೀಟುಗಳನ್ನು ಬುಕಿಂಗ್ ಗೆ ಕೊಟ್ರು.. ಆಮೇಲೆ ಅದರಲ್ಲಿನ ಬುಕಿಂಗ್ ನೋಡಿ ಮತ್ತಷ್ಟು ಸೀಟ್ ಕೊಟ್ರು.. ಇವತ್ತು ರೆಡ್ ಬಸ್ ಬೇಕು ಅಂದ್ರೆ ಸಪರೇಟ್ ಬಸ್ ಬಿಡೋಕೂ ಬಸ್ ಮಾಲೀಕರು ರೆಡಿ ಇರ್ತಾರೆ..! ಅವತ್ತು ಸೋತುಸೋತು ಸತ್ತುಹೋಗಬೇಕಾದವರು ಇವತ್ತು ಗೆದ್ದು ಬೀಗ್ತಾ ಇದ್ದಾರೆ.. ಅವತ್ತು ಒಂದು ಟಿಕೆಟ್ ಬುಕ್ ಆದ್ರೆ ಸಂಭ್ರಮಿಸ್ತಾ ಇದ್ದವರು, ಇವತ್ತು ದೇಶದ ಮೂಲೆಮೂಲೆಯಲ್ಲಿ ಲಕ್ಷಗಟ್ಟಲೇ ಟಿಕೆಟ್ ಬುಕ್ ಮಾಡಿ ಸಂಭ್ರಮಿಸ್ತಿದ್ದಾರೆ..! ಅವತ್ತು ಕೇವಲ ಬೆರಳೆಣಿಕೆಯ ಟಿಕೆಟ್ ಬುಕ್ ಆದಾಗ `ಇದ್ಯಾಕೋ ಗೆಲ್ಲೋದು ಡೌಟು ‘ ಅನ್ನೋ ಸಣ್ಣ ಹುಳ ಏನಾದ್ರೂ ಅವರ ತಲೆ ಹೊಕ್ಕಿದ್ರೆ, ಇವತ್ತು ಅವರ ಕಂಪನಿಯನ್ನು 800 ಕೋಟಿ ರೂಪಾಯಿ ಕೊಟ್ಟು ಗೋ ಇಬಿಬೋ ತಗೋತಾ ಇರ್ಲಿಲ್ಲ..! ದಟ್ ಈಸ್ ಕಾಲ್ಡ್ ಎಫರ್ಟ್, ಅಂಡ್ ದಟ್ ಈಸ್ ಕಾಲ್ಡ್ ವಿನಿಂಗ್…!

ಏನೇ ಶುರು ಮಾಡೋಕೆ ಮುಂಚೆ ಎಲ್ಲದಕ್ಕೂ ರೆಡಿ ಆಗಿರಿ. ಮೆಂಟಲಿ ಪ್ರಿಪೇರ್ ಆಗಿರಿ.. ಇದ ಹೆಂಗಿರಬೇಕು ಅನ್ನೋದು ಗೊತ್ತಿರಲಿ, ಹಂಗಾಗ್ಲಿಲ್ಲ ಅಂದ್ರೆ ಹೆಂಗೆ ಅನ್ನೋದರ ಬಗ್ಗೆನೂ ಗೊತ್ತಿರಲಿ..! ಯಾವಾಗ ಆಲ್ಟರ್ನೇಟಿವ್ ಐಡಿಯಾ ಇರಲ್ವೋ, ಅವಾಗ್ಲೇ ಸೋಲು ಸುತ್ತಾಕ್ಕೊಂಡು ನಿಮ್ಮ ಹತ್ತಿರ ಬರೋದು..! ಯಾವುದೇ ಇನ್ವೆಸ್ಟ್ ಮೆಂಟ್ ಮಾಡುವಗ ಅದರ ಲಾಭ ನಷ್ಟದ ಬಗ್ಗೆ ಐಡಿಯಾ ಇರಲಿ. ಇದರಲ್ಲಿ ಲಾಸ್ ಆದ್ರೆ ಮತ್ತೆಷ್ಟು ಕಳ್ಕೋತೀನಿ ಅಂತ ಯೋಚನೆ ಮಾಡಬೇಡಿ.. ಅಪ್ಪಿತಪ್ಪಿ ಲಾಸ್ ಆದ್ರೆ ಮತ್ತೆ ಇದರಲ್ಲೇ ಹೇಗೆ ರಿಕವರ್ ಮಾಡ್ಕೊಳ್ಳಿ ಅಂತ ಯೋಚನೆ ಮಾಡಿ..! ಅಟ್ ದ ಸೇಮ್ ಟೈಂ, ಶುರುಮಡೋಕೂ ಮುಂಚೆ ನೆಗೆಟಿವ್ ಮೈಂಡ್ ಸೆಟ್ ಇಟ್ಕೊಂಡು ಏನೂ ಆರಂಭಿಸಬೇಡಿ. ಅಂತವರು ಗೆಲ್ಲೋದು ಕಷ್ಟ ಕಷ್ಟ ಕಷ್ಟ..! ಗೆಲ್ತೀನಿ ಅಂದವರು ಮಾತ್ರ ಗೆಲ್ತಾರೆ, ನಾನು ಸೋಲ್ತೀನಿ ಅಂತ ಅನ್ಕೊಂಡು ಟ್ರೈ ಮಾಡೋರು ಎಷ್ಟೇ ಆದ್ರೂ ಗೆಲ್ಲಲ್ಲ..! ಆ ಮನಸ್ಥಿತಿ ಶಾಶ್ವತವಾಗಿದ್ರೆ, ನೀವು ಶಾಶ್ವತವಾಗಿ ಗೆಲ್ಲಲ್ಲ..! ಆಗಿದ್ದಾಗ್ಲಿ ಅಂತ ನುಗ್ಗಿ, ಆಗೋದೆಲ್ಲಾ ಒಳ್ಳೇದೇ ಆಗುತ್ತೆ..! ಆಗದೇ ಇದ್ರೆ ಹೆಂಗೆ ಅಂತ ನುಗ್ಗೋಕೆ ಹಿಂದೆಮುಂದೆ ನೋಡಿದ್ರೆ, ಇನ್ಯಾರೋ ನುಗ್ಗಿ ಗೆದ್ದು ಬಿಡ್ತಾರೆ.. ಅವತ್ತು ಪಶ್ಚಾತ್ತಾಪ ಪಟ್ಟರೆ ನೋ ಯೂಸ್..! ನೀವು ಪಾಸಿಟಿವ್ ಆಗಿದ್ರೆ ಎಲ್ಲಾ ಪಾಸಿಟಿವ್ ಆಗಿರುತ್ತೆ..! ನೀವು ನೆಗೆಟಿವ್ ಆಗಿದ್ರೆ ನಿಮ್ಮ ರಿಸಲ್ಟ್ ನೆಗೆಟಿವ್ವೇ ಆಗಿರುತ್ತೆ.. ಬಿ ಆಪ್ಟಿಮಿಸ್ಟ್.. ನಾಟ್ ಪೆಸಿಮಿಸ್ಟ್..! ಇತಿಹಾಸದಲ್ಲಿ ಪೆಸಿಮಿಸ್ಟ್ ಗಳು ಗೆದ್ದ ಉದಾಹರಣೇನೇ ಇಲ್ಲ..!

ನೆನಪಿಟ್ಕೊಳಿ ಸೋಲು ನಿಮಗೆ ನಿಮ್ಮವರು ಯಾರು ಅನ್ನೊದು ಪರಿಚಯಿಸುತ್ತೆ..! ಸೋತಾಗ ನಿಮ್ಮ ಜೊತೆಗೆ ಯಾರಿರ್ತಾರೋ ಅವರು ಮಾತ್ರ ಸಾಯೋ ತನಕ ಜೊತೆಗಿರ್ತಾರೆ.. ನೀವು ಸೋತು ಗೆದ್ದಾಗ ಮಾತ್ರ ಪ್ರಪಂಚ ಏನು ಅಂತ ನಿಮಗೆ ಅರ್ಥ ಆಗೋದು.. ಗೆಲುವು ಈಸಿಯಾಗಿ ಸಿಕ್ಕಿದ್ರೆ ಅಷ್ಟೆ ಬೇಗ ಅದು ನಿಮ್ಮ ಕೈ ಜಾರಿ ಹೋಗುತ್ತೆ.. ಸೋತು ಗೆದ್ದವನಿಗೆ ಮಾತ್ರ ಗೆಲುವು ಉಳಿಸ್ಕೊಳೋ ಐಡಿಯಾ ಇರುತ್ತೆ. ಯಾಕಂದ್ರೆ ಅವನು ಈ ಹಿಂದೆ ಸೋತಿದ್ದು ಯಾವ್ಯಾವ ಕಾರಣಕ್ಕೆ ಅಂತ ಅವನಿಗೆ ಗೊತ್ತಿರುತ್ತೆ..! ಸೋ ಸೋತಾಗ ಸೊರಗಬೇಡಿ.. ಜೊತೆಲಿದ್ದವರು ದೂರ ಆಗ್ತಾರೆ. ಆಗ್ಲಿ ಬಿಡಿ..! ಕ್ಲೋಸ್ ಫ್ರೆಂಡ್ ಅನಿಸಿಕೊಂಡೋನು ಫ್ರೆಂಡ್ ಶಿಪ್ ಕ್ಲೋಸ್ ಮಾಡ್ತಾನೆ.. ಮಾಡ್ಲಿಬಿಡಿ..! ನಿಮ್ಮ ಮನೆಯಲ್ಲೇ ನಿಮಗೆ ಅವಮಾನಗಳಾಗ್ಬೋದು, ಆಗ್ಲಿಬಿಡಿ..! ಸಾಲ ಕೊಟ್ಟವರು ಮನೆಗೆ ಬಂದು ಕೂರಬಹುದು, ಕೂರ್ಲಿಬಿಡಿ..! ಅಂತಹ ಟೈಮಲ್ಲಿ ನಿಮ್ಮ ಹುಮ್ಮಸ್ಸು ಕಳ್ಕೋಬೇಡಿ, ಇನ್ನಾಗಲ್ಲ ಅಂತ ಕೈಚೆಲ್ಲಬೇಡಿ..! ನನ್ನ ಲೈಫ್ ಮುಗೀತು ಅಂತ ಕೊರಗಬೇಡಿ..! ಕಳ್ಕೊಂಡವರನ್ನು ನೆನಸ್ಕೊಂಡು ದುಃಖ ಪಡಬೇಡಿ..! ಹೆಂಗಿದ್ರೂ ಸೋತಿದೀನಿ, ಮತ್ತೆ ಟ್ರೈ ಮಾಡ್ತೀನಿ.. ಗೆದ್ರೆ ಕೇಕೆ ಹಾಕ್ತೀನಿ.. ಸೋತ್ರೆ ಮತ್ತೆ ಇವತ್ತಿನ ದಿನ ಅಷ್ಟೆ ತಾನೇ ಅಂತ ನುಗ್ಗಿ.. ಎಸ್.. ನುಗ್ಗಿ..! ನೀವು ಮತ್ತೆ ತಿರುಗಿ ನೋಡಲ್ಲ..! ಬಿಟ್ಟು ಹೋದವರಿಗೆ ಮತ್ತೆ ನಿಮ್ಮ ಹತ್ತಿರ ಬರೋ ಮುಖ ಇರಲ್ಲ..! ಅವತ್ತು ನೀವೇ ಅವರನ್ನು ಕರೆದು ಮಾತಾಡಿಸಿ..! ದೂರ ಆದವರನ್ನು ಹತ್ತಿರ ಕರೆಸಿ..! ಅದು ನಿಮ್ಮ ನಿಜವಾದ ಗೆಲುವು…! ಸೋಲು ಯಾವತ್ತೂ ಅನಾಥ, ಆದ್ರೆ ಗೆಲುವಿಗೆ ನೂರಾರು ಜನ ಅಪ್ಪಂದಿರು..! ಡೋಂಟ್ ವರಿ… ಗೆಟ್ ರೆಡಿ ಟು ರೀಚ್ ದ ಗೋಲ್..! ನೀವು ಸೋತಾಗ `ಅವನ್ಯಾರೋ ನಂಗೆ ಗೊತ್ತಿಲ್ಲ, ನಮ್ಮ ದೂರದ ರಿಲೇಶನ್, ನಂಗೂ ಅವನಿಗೂ ಅಷ್ಟಕ್ಕಷ್ಟೆ’ ಅಂದವರು, ಗೆದ್ದಾಗ ` ಅವನು ನನ್ನ ಕ್ಲೋಸ್ ಫ್ರೆಂಡ್, ನಮ್ಮ ಹತ್ತಿರದ ರಿಲೇಟಿವ್, ನಾನೂ ಅವನು ಸಖತ್ ಕ್ಲೋಸ್’ ಅಂತ ಹೇಳ್ತಾರೆ..! ನಿಮ್ಮ ಗೆಲುವಿನ ಜೊತೆಗೆ ಅದನ್ನೂ ಎಂಜಾಯ್ ಮಾಡಿ..! ಆದ್ರೆ ಗೆಲುವು ಯಾವಾಗಲೂ ತುದಿಯಲ್ಲಿರುತ್ತೆ ಅನ್ನೋದು ನೆನಪಿರಲಿ..! ಅಲ್ಲಿಗೆ ತಲುಪೋದು ಎಷ್ಟು ಕಷ್ಟವೋ, ಅಲ್ಲಿಂದ ಕೆಳಗೆ ಬೀಳೋದು ಅಷ್ಟೇ ಸುಲಭ..! ಅಲ್ಲಿದ್ದಾಗ ತಳ್ಳೋಕೆ ತುಂಬ ಜನ ಪ್ರಯತ್ನ ಪಡಬಹುದು, ಆದ್ರೆ ನಿಮ್ಮ ಗೆಲುವಿನ ಗೂಟ ಬಲವಾಗಿರಲಿ..ಅದನ್ನು ಅಲುಗಾಡಿಸೋದು ತುಂಬಾ ಕಷ್ಟ ಇದೆ ಅನ್ನೋದು ಉಳಿದವರಿಗೆ ಅರ್ಥ ಮಾಡಿಸಿ..! ಒಂದು ದಿನ ಅಂತಹ ಪ್ರಯತ್ನಗಳು ನಿಂತು ಹೋಗುತ್ತೆ. ಅವತ್ತು ನೀವು ಆ ಗೆಲುವಿನ ಹೀರೋ…! ಜಗತ್ತಿನ ಪಾಲಿಗೆ ಹೀರೋ..! ಸೋಲು ಯಾವತ್ತೂ ಸೋಲೋ, ಅಂದ್ರೆ ಸಿಂಗಲ್,.. ಡೋಂಟ್ ವರಿ, ಸಿಂಗ ಸಿಂಗಲ್ಲಾದವರು..! ಸಿಂಗಲ್ಲಾಗಿ ಸಿಂಹದ ಹಾಗೆ ನುಗ್ಗಿ.. ಗೆಲುವು ಬೇಡ ಅಂದ್ರೂ ನಿಮ್ಮ ಹೆಗಲೇರಿಬಿಡುತ್ತೆ..! ಅಲ್ಲಿ ತನಕ ಅಡ್ಡ ಬರೋ ಯಾರಿಗೂ ತಲೆಕೆಡಿಸಿಕೊಳ್ಳಬೇಡಿ ಅಷ್ಟೆ..! ಗೆಲುವಷ್ಟೇ ನಿಮ್ಮ ಗುಂಗು.. ಅದೆ ನಿಮ್ಮ ಲೈಫಿನ ಸಾಂಗು.. ಗೆದ್ದವರ ಜೀವನ ಖುಷಿಯಾಗಿರುತ್ತೆ ಲೈಫ್ ಲಾಂಗು..!

Monday 18 January 2016

ಗಾಂಧೀಜಿಯ ಗಾಂದಿತ್ವದಿಂದ ಲಾಭ ಪಡೆದವರಾರು

ಶಾಲಾ ಪಠ್ಯದಲ್ಲಿ ಮಾತ್ರ ಗಾಂಧಿ ಅವರ ಬಗ್ಗೆ ಓದಿ ಮೆಚ್ಚಿ  ಕೊಂಡಿದ್ದ ನಾನು ಆವರ " ಆತ್ಮಕತೆ ,"ನನ್ನ ಸತ್ಯಾನ್ವೇಷಣೆ"  ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಅನುವಾದಿತ ಕೃತಿ ಓದಿ ಮತ್ತಷ್ಟು  ಮೆಚ್ಚುಗೆ ಆಯಿತು.  ಆ ನಂತರವೂ ಮತ್ತೆ ಮತ್ತೆ ಅವರ ಹಲವು ಪುಸ್ತಕಗಳಗನು ಓದಿದಾಗ ಅವರ ಗಾಂದಿತ್ವದೊಳಗಿದ್ದ ವೈರುದ್ಯಗಳು, ಅವರ ತತ್ವ  ಚಿಂತನೆಗಳ ವಿರೋಧಿಗಳ ದೊಡ್ಡ ಬಣ ಬರೆದ ಕೆಲವು ಪುಸ್ತಕ ಬೇರೇಯೇ ವಿಚಾರ ಬಿತ್ತಿ ಕೆಣಕಿದವು.ನಾನು ಗಾಂಧಿ ಬಗ್ಗೆ ಅವೆಲ್ಲ ಓದಿಯೂ ಗಾಂಧಿ ಅಬಿಮಾನಿಯಾಗಿಯೇ ಉಳಿದಿರುವೆ ಆದರೂ ಕೆಲವು  ಪ್ರಶ್ನೆಗಳು ಕಾಡುತ್ತಿದೆ  ?
       ಗಾಂದಿತ್ವದಿಂದ ದೇಶಕ್ಕೆ ಲಾಭ  ಆಗಿಲ್ಲವೇ...?
ವಿಶ್ವ ಶಾಂತಿದೂತ ಎನಿಸಿದ ಅವರಿಂದ ಜಗತ್ತಿನ ಹಲವರು ಕಲಿತದ್ದು ಬಹಳ ಇದೆ. ಹಾಗಾದರೆ  ಗಾಂದಿತ್ವದಿಂದ ಲಾಭ ಪಡೆದವರು ಯಾರು. .? ಬಲಪಂಥೀಯರೋ..ಎಡಪಂಥೀಯರೋ... ? ನೇಹರೂ ಅವರೊ..?
ದೀನ ದಲಿತರಿಗಾಗಿ ಎಲ್ಲಾ ತೊರೆದು ಹರಿಹರಿಜನ ಕೇರಿ ಕೇರಿಗಳಲಿ ದುಡಿದರಲ್ಲಾ ಅವರು ಅದನ್ನು ಮರೆಯಲಾದೀತೇ..?
ಅವರು ಅಂಬೇಡ್ಕರ್ ಅವರ ತತ್ವ ಚಿಂತನೆಗಳ ಕೆಲವನ್ನು ವಿರೋಧಿಸಿದ ಮಾತ್ರಕ್ಕೆ ಅವರು ದಲಿತರ ಹಿತಾಸಕ್ತಿಗೆ ದುಡಿದದ್ದನು ಕಡೆಗಣಿಲಾದೀತೇ...? ಎಡಪಂಥೀಯರೋ ..ಬಲಪಂಥೀಯರೋ  ಮನ ಬಂದಂತೆ ಕೆಲ ಪುಸ್ತಕ ಬಿಡುಗಡೆ ಮಾಡಿ  ಅವರ ಒಟ್ಟಾರೆ ಸೇವೆಯನ್ನು ಬೇರೆ ಬೇರೆ ರೀತಿಯಲ್ಲಿ ನೋಡಿರುವುದು ಗಮನಿಸಬೇಕು.
    ಗಾಂಧಿ ರಾಮರಾಜ್ಯ  ಕನಸಿನೋಂದಿಗೇ ಹಿಂದು ಧರ್ಮದ ಹಲವು ಅಂಶಗಳನ್ನು ಒಳಗೊಂಡಂತೆ  ಉತ್ತಮ ಅಭಿಪ್ರಾಯ ಹೊಂದಿದ್ದರು ಎನ್ನುವುದು ಹಲವು ಸಾಸಾಕ್ಷಿ ಇವೆ. ಆದರೆ  ಅಲ್ಪಸಂಖ್ಯಾತರಿಗಾಗಿಯೂ  ದುಡಿದವರು. ಒಟ್ಟಾರೆ ಮಾನವತಾವಾದಿ ಆಗಿ ಬಹಳ ಶ್ರಮಿಸಿದ್ದಾರೆ.
ಇತಿಹಾಸ ಕೆದಕಿದರೆ ಅವರ ಕೆಲವು ನಿರ್ಣಯ. ಅಭಿಪ್ರಾಯ ಗಳ  ಹಿಂದೆ ಯಾರದೋ ಛಾಯೆ ಇದೆ ಎನಿಸುತ್ತದೆ. ಆದರೆ ಅವರ ಒಟ್ಟು ಸೇವೆ ,ಜಗತ್ತಿಗೇ ಮಾದರಿ ಎನ್ನಬಹುದು.

Sunday 17 January 2016

ವಿರಹ ಕ ( ವಿ ) ತೆ.

ವಿರಹ  ಕ (ವಿ)ತೆ
ಅವಳಿಗಾಗಿ ಕವಿತೆಯಲ್ಲಿ ಅವಿತೆ
ಪದಗಳ ಹೂರಾಶಿಯಲಿ ಬೆರೆತೆ
ಪ್ರಾಸಗಳೂರ ಜಾತ್ರೆಯಲ್ಲಿ ಅಲೆದೆ
ತ್ರಾಸಾದರೂ ನುಡಿಗಟ್ಟುಗಳ ಬೆಟ್ಟದಲ್ಲಿ
ಅಲಂಕಾರ,  ಉಪಮೆಗಳ ಶೋದಿಸಿದೆ.
ಶೃತಿ, ಲಯ,ಛಂದಸ್ಸಿಗಾಗಿ  ಜಪಿಸಿದೆ;
ಕೊನೆಗೂ ಅವಳೆದುರು
ಕವಿತೆಯ ವಾಚಿಸಲು 
ಗುಂಡಿಗೆ ಗಟ್ಟಿ ಮಾಡಿ
ನಾಲಗೆಗೂ ದೈರ್ಯ ಹೇಳಿದೆ;
    ಆದರೂ ಮತ್ತೆ  ಹೇಳದೆ ಅವಿತೆ...!
     ಅವಳೆದುರು  ಬೆವರಿದೆ;
    ನನ್ನೊಲವ ಕವಿತೆ,
    ಕತೆಯಲ್ಲಿ ಮುಗಿಸಿದೆ...!
ಇಂಗಿ  ಹೋದ ಕಣ್ಣೀರ ಕಣ್ಣಿಗೆ ಕಂಡದ್ದು.!
ಅವಳ ಕೈಲಿದ್ದ ಮದುವೆಯ ಕರೆಯೋಲೆ .
ಆದರೂ ಎದೆಯೊಡೆಯದೇ ಜೀವ ಉಳಿದದ್ದು
ಕವಿತೆಯ ತಂಗಿ 'ಕವನ' ಇರುವಳಲ್ಲಾ
ಎನ್ನುವ  ಆಶಾಬಾವ..!
ರವಿರಾಜ್ ಸಾಗರ್.

Saturday 9 January 2016

ಶ್ ..!!
ನಾನು ಕತ್ತಲೆಗೆ ಹೆದರಿ ಓಡುವವನಲ್ಲ ..
ಜಗತ್ತೆಲ್ಲಾ  ಮಲಗಲೆಂದು
ನಾನು  ಕತ್ತಲೆಗೆ ಅವಕಾಶ ನೀಡಿ
ಓಡುತ್ತೇನೆ ಅಷ್ಟೇ ,,,
ಇಲ್ಲದಿದ್ದರೆ ನಾನು ಕತ್ತಲೆಗೆ ಹೆದರಿ ಓಡುವವನಲ್ಲ
ನಾನು ಸ್ವಯಂಬು,,
ನಾನೇ  ನಿಮ್ಮೂರ ರವಿ.
ಬಾಡದ ಗಗನ ಕುಸುಮ.

ಕೇಳು ಗೆಳತೀ. ..

ಕೇಳು ಗೆಳತೀ.... .
"""""""""""
ನಿನ್ನ ಹೊಟ್ಟೆಕಿಚ್ಚು ಹೆಚ್ಚಾಗುವಷ್ಟು ಗೆಳೆತಿಯರು ಇದಾರೆ...
ಪೇಸ್ಬೂಕ್ಕ್ ಕ್ಯಾಂಪಾಸಿನಲಿ
ನಾನು ಒಂಟಿಯಲ್ಲ......
ಆದರೂ ನಿನಗೊಬ್ಬಳಿಗಾಗಿಯೇ ಕಾದಿರುವೆ
ಈ ಭುವಿಯಲಿ ಜೀವಂತ.
ನನ್ನೊಲವು ಕಡಿಮೆಯಾಗಿಲ್ಲ..!
          ಕಡಲ ದಡದಲಿ ಬೆರಳು ಗೀಚಿದ ಓಲೆಯ
          ಕಡಲ ಅಲೆಯೂ ಅಪ್ಪಳಿಸಿ ಅಳಿಸದೆ
          ಶುಭಕೊರಿ ಹೋಯಿತು.
         ಉರಿವ ಸೂರ್ಯ ಕಡಲಿಂದಲೇ
         ಹೊಂಬಣ್ಣದ ಆರತಿ ಮಾಡಿ ಕಾದಿಹ
         ನನ್ನ ರತಿಯ ನೋಡಲು
         ನೀನೇಕೆ ಬರದೆ ಒಂಟಿಮಾಡಿದೆ..?
ಕೇಳು ಗೆಳತೀ. ..
ನಾನೀಗ ಒಂಟಿಯಲ್ಲ....! .

Friday 8 January 2016

ಮಮತೆಯ ಸುಧೆಯ ಸಾಗರ ಮಾತೆ

ಮಮತೆಯ  ಸುಧೆಯ ಸಾಗರ ಮಾತೆ.
""""""""""""""":""""""""""""
ತಿಂಗಳಿಗೊಮ್ಮೆ ತಲುಪುವ ಪತ್ರಕೆ
ಕಾಯುತ್ತಿದ್ದ ಅಮ್ಮ
ಈಗ ದಿನ ಸಂಜೆ ನನ್ನ ಪೋನಿಗಾಗಿ
ಸಂಬ್ರಮದಿ ಕಾಯುತ್ತಾಳೆ ಎಂದು ಗೊತ್ತಾಗಿದೆ.
         ಮನೆಯ ಪೋನು ರಿಂಗಣಿಸಿದಾಗಲೆಲ್ಲಾ
         ಅದು ನನ್ನದೇ ಆಗಿರುತ್ತದೆಂದು
ಸಂಭ್ರಮದಿ ಹಂಬಲಿಸುವ ಅವಳ ಕರುಳ ವೀಣೆಯ ಧನಿ ನನ್ನ  ಎದೆತಾಗಿ ದೂರದೂರಿನ
ಮಾಯಾ  ನಗರದ ಬದುಕು ಸಾಕೆನಿಸಿದೆ. . !
      ಹುಟ್ಟಿದ ಹಳ್ಳಿ ಬಿಡಲೊಪ್ಪದ
ಅಮ್ಮನ ಊರಪ್ರೇಮದ ಆನಂದದ ಗುಟ್ಟು
ನನಗೀಗ ಅರಿವಾಗುತಿದೆ...!
    ಆದರೂ ನಗರ ಮೋಹ ಚಕ್ರವೂಹದಲ್ಲಿ
ಸೋಲೊಪ್ಪಿ ಹೈವೇಲಿ  ಸಂತಸ ಹುಡುಕುತಿಹೆ....!
  ಕೆಲವೇ ವರುಷ  ಶಾಲೆ  ಮೆಟ್ಟಿಲು ಹತ್ತಿದ್ದ   ಅಮ್ಮಳೀಗ ಪೇಸ್ಬೂಕ್ಕಲಿ ನನ್ನ ಕಾರ್ಯಕ್ರಮದ ಪೋಟೋ ನೋಡಿ  ಲೈಕಿಸಿ ಹಿಗ್ಗುತಿಹಳಂತೆ. !
ಬರೀ ಬಯಕೆಗಳ ಬಿಸಿಗೆ ಆಗೀಗ ಬತ್ತುವ
ನದಿಯಂತ ರೂಪಸಿ ಹೆಂಡತಿ ಪ್ರೀತಿ ಸನಿಹದಲ್ಲಿದ್ದರೂ
ಬತ್ತದ ಸಾಗರ ಅಮ್ಮನ ಪ್ರೀತಿಗೆ
ಯಾವ ರೂಪಕವು  ಪೂರ್ಣವಾಗುತ್ತಿಲ್ಲ.
ಮಮತೆಯ ಸುಧೆಯ ಸಾಗರ ಮಾತೆ ಆಕೆ.
- ರವಿರಾಜ್ ಸಾಗರ್
( ನನ್ನ ಬಾವ ಜೀವಿ.  ಸಂಕಲನದಿಂದ ನಿಮಗಾಗಿ)

Wednesday 6 January 2016

ನೂರು ಪ್ರಶ್ನೆಗೆ ನೂರು ಉತ್ತರ

300) ಕರ್ನಾಟಕದ ಪ್ರಥಮ ವಚನಗಾರ್ತಿ ಯಾರು?
- ಅಕ್ಕಮಹಾದೇವಿ

301) ಕರ್ನಾಟಕದ ಪ್ರಥಮ ಪತ್ರಕರ್ತೆ / ಪ್ರಕಾಶಕಿ ಯಾರು?
- ನಂಜನಗೂಡು ತಿರುಮಲಾಂಬಾ

302) ನಾಟಕ ರಂಗದ ಮೇಲೆ ಏರಿದ ಕನ್ನಡದ ಮೊದಲ ಸ್ತ್ರೀ ಯಾರು?
- ಗಂಗೂಬಾಯಿ ಗುಳೇದಗುಡ್ಡ

303) ಕರ್ನಾಟಕದ ಪ್ರಥಮ ಮಹಿಳಾ ಮಂತ್ರಿ ಯಾರು?
- ಗ್ರೇಸ್ ಠಕ್ಕರ್

304) ಅಖಿಲ ಭಾರತದ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷರು ಯಾರು?
- ಜಯದೇವಿ ತಾಯಿ ಲಿಗಾಡೆ

305) ಸೋವಿಯತ್ ಲ್ಯಾಂಡ್ ಪ್ರಶಸ್ತಿ ಪಡೆದ ಮೊದಲ ಕನ್ನಡಿತಿ ಯಾರು?
- ಅನುಪಮಾ ನಿರಂಜನ

306) ಕನ್ನಡದ ಪ್ರಥಮ ನವೋದಯ ಕವಯಿತ್ರಿ ಯಾರು?
- ಬೆಳಗೆರೆ ಜಾನಕಮ್ಮ

   ★'''''★'''''★

★ ಪತ್ರಿಕಾ ಲೋಕದ ಪ್ರಥಮರು ★

307) ಕರ್ನಾಟಕದ ಪ್ರಥಮ ಪತ್ರಿಕೆ ಯಾವುದು?
- ಮಂಗಳೂರು ಸಮಾಚಾರ (೧೮೪೮)

308) ಕರ್ನಾಟಕದ ಪ್ರಥಮ ದಿನಪತ್ರಿಕೆ ಯಾವುದು?
- ಸೂರ್ಯೋದಯ ಪ್ರಕಾಶಿಕ (೧೮೭೦)

309) ಕರ್ನಾಟಕದ ಪ್ರಥಮ ಕನ್ನಡ e-ಪತ್ರಿಕೆ ಯಾವುದು?
- ವಿಶ್ವಕನ್ನಡ

310) ಕರ್ನಾಟಕದ ಪ್ರಥಮ ವಾರ ಪತ್ರಿಕೆ ಯಾವುದು?
- ಸುಬುದ್ಧಿ ಪ್ರಕಾಶ (೧೮೫೦)

311) ಕರ್ನಾಟಕದ ಪ್ರಥಮ ವಿಜ್ಞಾನ ಪತ್ರಿಕೆ ಯಾವುದು?
- ವಿಜ್ಞಾನ

312) ಕರ್ನಾಟಕದ ಪ್ರಥಮ ವಿಡಿಯೋ ಪತ್ರಿಕೆ ಯಾವುದು?
- ಬೆಳ್ಳಿಚುಕ್ಕಿ

313) ಕರ್ನಾಟಕದ ಪ್ರಥಮ ಮಕ್ಕಳ ಪತ್ರಿಕೆ ಯಾವುದು?
- ಮಕ್ಕಳ ಪುಸ್ತಕ

314) ಕರ್ನಾಟಕದ ಪ್ರಥಮ ಮಹಿಳಾ ಪತ್ರಿಕೆ ಯಾವುದು?
- ಕರ್ನಾಟಕ ನಂದಿನಿ (೧೯೧೩)

315) ಕರ್ನಾಟಕದ ಪ್ರಥಮ ಸಾಹಿತ್ಯಿಕ ವೈಜ್ಞಾನಿಕ ಪತ್ರಿಕೆ ಯಾವುದು?
- ಕರ್ನಾಟಕ ಜ್ಞಾನ ಮಂಜರಿ (೧೮೭೮)

316) ಕರ್ನಾಟಕದ ಪ್ರಥಮ ಶಿಕ್ಷಣ ಪತ್ರಿಕೆ ಯಾವುದು?
- ಕನ್ನಡ ಜ್ಞಾನ ಬೋಧಿನಿ (೧೮೬೨)

317) ಕರ್ನಾಟಕದ ಪ್ರಥಮ ಜಿಲ್ಲಾ ಪತ್ರಿಕೆ ಯಾವುದು?
- ಜ್ಞಾನೋದಯ (ಶಿವಮೊಗ್ಗ)

318) ಕನ್ನಡದಲ್ಲಿ ಪ್ರಾರಂಭವಾದ ಮೊದಲ ಕಾಮಶಾಸ್ತ್ರ ಪತ್ರಿಕೆ ಯಾವುದು?
- ಪ್ರೇಮ

319) ಕರ್ನಾಟಕದ ಮೊಟ್ಟಮೊದಲ ಕಾನೂನು ಪತ್ರಿಕೆ ಯಾವುದು?
- ನ್ಯಾಯ ಸಂಗ್ರಹ

320) ಕರ್ನಾಟಕದ ಮೊಟ್ಟಮೊದಲ ಚಲನಚಿತ್ರ ಪತ್ರಿಕೆ ಯಾವುದು?
- ಸಿನಿಮಾ

321) ಕನ್ನಡದಲ್ಲಿ ಆರಂಭಗೊಂಡ ಮೊದಲ ಹಾಸ್ಯ ಪತ್ರಿಕೆ ಯಾವುದು?
- ವಿಕಟ ಪ್ರತಾಪ

322) ಅತಿ ಹೆಚ್ಚು ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಕನ್ನಡದ ಮೊದಲ ಪತ್ರಿಕೆ ಯಾವುದು?
- ಉದಯವಾಣಿ

 

   ★'''''★'''''★

★ ಕರ್ನಾಟಕದ ಸಾಹಿತ್ಯ ಲೋಕ  ಪ್ರಥಮರು ★

323) ಕನ್ನಡದ ಮೊದಲ ಕೃತಿ ಯಾವುದು?
- ಕವಿರಾಜಮಾರ್ಗ

324) ಕನ್ನಡದಲ್ಲಿ ರಚನೆಗೊಂಡ ಮೊದಲ ಕಾವ್ಯ ಯಾವುದು?
- ಆದಿಪುರಾಣ

325) ಕನ್ನಡದ ಮೊದಲ ಗದ್ಯ ಕೃತಿ ಯಾವುದು?
- ವಡ್ಡಾರಾಧನೆ

326) ಕನ್ನಡದಲ್ಲಿ ರಚನೆಗೊಂಡ ಮೊದಲ ನಾಟಕ ಯಾವುದು?
- ಮಿತ್ರಾವಿಂದಾ ಗೋವಿಂದಾ

327) ಕನ್ನಡದ ಮೊದಲ ಗೀತ ನಾಟಕ ಯಾವುದು?
- ಮುಕ್ತದ್ವಾರ

328) ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ ಯಾವುದು?
- ಜಾತಕ ತಿಲಕ ( ಶ್ರೀಧರಾಚಾರ್ಯ )

329) ಕನ್ನಡದ ಮೊದಲ ಸ್ವತಂತ್ರ ಪೌರಾಣಿಕ ನಾಟಕ ಯಾವುದು?
- ಪೃಥು ವಿಜಯ

330) ಕನ್ನಡದಲ್ಲಿ ರಚನೆಗೊಂಡ ಮೊದಲ ಗಾದೆಗಳ ಸಂಕಲನ ಯಾವುದು?
- ಕನ್ನಡ ಗಾದೆಗಳು

331) ಕನ್ನಡದಲ್ಲಿ ರಚನೆಗೊಂಡ ಮೊದಲ ಒಗಟುಗಳ ಸಂಗ್ರಹ ಯಾವುದು?
- ಮಕ್ಕಳ ಒಡಪುಗಳು

332) ಕನ್ನಡದಲ್ಲಿ ರಚನೆಗೊಂಡ ಮೊದಲ ಪ್ರಬಂಧ ಸಂಕಲನ ಯಾವುದು?
- ಲೋಕರಹಸ್ಯ

333) ಕನ್ನಡದ ಮೊದಲ ಛಂದಶಾಸ್ತ್ರ ಗ್ರಂಥ ಯಾವುದು?
- ಛಂದೋಂಬುಧಿ

334) ಕನ್ನಡದ ಮೊದಲ ವೈದ್ಯ ಗ್ರಂಥ ಯಾವುದು?
- ಗೋವೈದ್ಯ ( ಕೀರ್ತಿವರ್ಮ )

335) ಕನ್ನಡದ ಮೊದಲ ವಿಷಯ ವಿಶ್ವಕೋಶ ಯಾವುದು?
- ವಿವೇಕ ಚಿಂತಾಮಣಿ

336) ಕನ್ನಡದ ಮೊದಲ ವಿಶ್ವಕೋಶ ಯಾವುದು?
- ಲೋಕೋಪಕಾರ

337) ಕನ್ನಡದಲ್ಲಿ ರಚನೆಗೊಂಡ ಮೊದಲ ಮಕ್ಕಳ ವಿಶ್ವಕೋಶ ಯಾವುದು?
- ಬಾಲ ಪ್ರಪಂಚ

338) ಕನ್ನಡದ ಮೊದಲ ನವ್ಯತೆಯನ್ನೊಳಗೊಂಡ ಕಾದಂಬರಿ ಯಾವುದು?
- ವಿಶ್ವಾಮಿತ್ರನ ಸೃಷ್ಟಿ (ಶ್ರೀರಂಗ)

339) ಕನ್ನಡದಲ್ಲಿ ರಚನೆಗೊಂಡ ಮೊದಲ ಮನೋವೈಜ್ಞಾನಿಕ ಕಾದಂಬರಿ ಯಾವುದು?
- ಅಂತರಂಗ ( ದೇವುಡು )

340) ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು?
- ಶಬ್ದಮಣಿ ದರ್ಪಣ

341) ಕನ್ನಡದ ಮೊದಲ ಲಾಕ್ಷಣಿಕ ಗ್ರಂಥ ಯಾವುದು?
- ಕವಿರಾಜ ಮಾರ್ಗ

342) ಮೊಟ್ಟಮೊದಲು ಬೈಬಲ್ ನ್ನು ಕನ್ನಡೀಕರಣಗೊಳಿಸಿದವರು ಯಾರು?
- ಜಾನ್ ಹ್ಯಾಂಡ್ಸ್

343) ಕನ್ನಡದ ಮೊದಲ ಐತಿಹಾಸಿಕ ನಾಟಕಕಾರ ಯಾರು?
- ಸಂಸ

344) ಕನ್ನಡದಲ್ಲಿ ರಚನೆಗೊಂಡ ಮೊದಲ ಪ್ರವಾಸ ಕಥನ ಯಾವುದು?
- ದಕ್ಷಿಣ ಭಾರತ ಯಾತ್ರೆ

345) ಕನ್ನಡದಲ್ಲಿ ರಚನೆಗೊಂಡ ಮೊದಲ ಪತ್ತೇದಾರಿ ಕಾದಂಬರಿ ಯಾವುದು?
- ಚೋರಗ್ರಹಣ ತಂತ್ರ

346) ಕನ್ನಡದ ಮೊದಲ ಆಯುರ್ವೇದ ಗ್ರಂಥ ಯಾವುದು?
- ಕರ್ಣಾಟಕ ಕಲ್ಯಾಣಕಾರಕ

347) ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ ಯಾವುದು?
- ಇಂದಿರಾಬಾಯಿ

348) ಕನ್ನಡದಲ್ಲಿ ರಚನೆಗೊಂಡ ಮೊದಲ ಐತಿಹಾಸಿಕ ಕಾದಂಬರಿ ಯಾವುದು?
- ಮುದ್ರಾಮಂಜೂಷ

349) ಕನ್ನಡದಲ್ಲಿ ರಚನೆಗೊಂಡ ಮೊದಲ ಜೀವನಚರಿತ್ರೆ ಯಾವುದು?
- ಕುಣಿಗಲ್ ರಾಮಾಶಾಸ್ತ್ರಿಗಳ ಜೀವನ ಚರಿತ್ರೆ

350) ಕನ್ನಡದ ಮೊದಲ ಅಭಿನಂದನಾ ಗ್ರಂಥ ಯಾವುದು?
- ಸಂಭಾವನೆ ( ಬಿ.ಎಂ.ಶ್ರೀ.ಯವರಿಗೆ )

351) ಕನ್ನಡದಲ್ಲಿ ರಚನೆಗೊಂಡ ಮೊದಲ ಇಂಗ್ಲೀಷ್ - ಕನ್ನಡ ನಿಘಂಟುಕಾರ ಯಾರು?
- ವಿಲಿಯಮ್ ರೀವ್ಸ್

352) ಕನ್ನಡದ ಮೊದಲ ತಾಂತ್ರಿಕ ಪದಕೋಶ ಯಾವುದು?
- ಔದ್ಯಮಿಕ ನಿಘಂಟು

353) ಕನ್ನಡದ ಮೊದಲ ಕಾವ್ಯ ನಿಘಂಟು ಯಾವುದು?
- ರನ್ನಕಂದ

354) ಕನ್ನಡದ ಮೊದಲ ಗದ್ಯ ನಿಘಂಟು ಯಾವುದು?
- ಕರ್ಣಾಟಕ ಶಬ್ದಸಾರ

355) ಕನ್ನಡದಲ್ಲಿ ರಚನೆಗೊಂಡ ಮೊದಲ ವೈದ್ಯಕೀಯ ನಿಘಂಟು ಯಾವುದು?
- ವೈದ್ಯ ಪದಕೋಶ

   ★'''''★'''''★

★ ಬಣ್ಣದ ಲೋಕದ ಪ್ರಥಮರು ★

356) ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ ಮೊದಲ ಚಿತ್ರ ಯಾವುದು?
- ಬೇಡರ ಕಣ್ಣಪ್ಪ

357) ಕನ್ನಡದ ಮೊದಲ ಐತಿಹಾಸಿಕ ಚಿತ್ರ ಯಾವುದು?
- ರಣಧೀರ ಕಂಠೀರವ

358) ಕನ್ನಡದ ಮೊದಲ ಮೂಕಿ ಚಿತ್ರ ಯಾವುದು?
- ಮೃಚ್ಛಕಟಿಕ

359) ಕನ್ನಡದ ಮೊದಲ ವರ್ಣ ಚಲನಚಿತ್ರ ಯಾವುದು?
- ಅಮರಶಿಲ್ಪಿ ಜಕಣಾಚಾರಿ

360) ಕರ್ನಾಟಕದ ಮೊಟ್ಟಮೊದಲ ಚಿತ್ರಮಂದಿರ ಯಾವುದು?
- ಪ್ಯಾರಾಮೌಂಟ್ ( ೧೯೦೫ )

361) ಕನ್ನಡದ ಮೊದಲ ಕಾದಂಬರಿ ಆಧಾರಿತ ಚಲನಚಿತ್ರ ಯಾವುದು?
- ಕರುಣೆಯೇ ಕುಟುಂಬದ ಕಣ್ಣು

362) ಕನ್ನಡದ ಮೊದಲ ರಿಯಾಯಿತಿ (ಸಬ್ಸಿಡಿ ) ಪಡೆದ ಚಿತ್ರ ಯಾವುದು?
- ನಕ್ಕರೆ ಅದೇ ಸ್ವರ್ಗ

363) ಕನ್ನಡದ ಮೊದಲ ಸಾಮಾಜಿಕ ಚಲನಚಿತ್ರ ಯಾವುದು?
- ಸಂಸಾರ ನೌಕೆ (೧೯೩೬)

364) ಚಲನಚಿತ್ರ ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಕನ್ನಡದ ಮೊದಲಿಗರು ಯಾರು?
- ಶಿವಮೊಗ್ಗ ಸುಬ್ಬಣ್ಣ

365) ಚಿತ್ರ ಸಂಗೀತಕ್ಕೆ ೨ ಬಾರಿ ರಾಷ್ಟ್ರ ಪ್ರಶಸ್ತಿ ಕನ್ನಡದ ಮೊದಲಿಗರು ಯಾರು?
- ಬಿ.ವಿ.ಕಾರಂತ್

366) ಕನ್ನಡದ ಮೊದಲ ಭಾವಗೀತೆ ಧ್ವನಿಸುರುಳಿ ಯಾವುದು?
- ನಿತ್ಯೋತ್ಸವ

367) ಕರ್ನಾಟಕದ ಮೊಟ್ಟಮೊದಲ ವೃತ್ತಿನಾಟಕ ಕಂಪೆನಿ ಯಾವುದು?
- ಶ್ರೀ ವೀರನಾರಾಯಣ ಪ್ರಾಸಾದಿತ ಕೃತಪುರ ನಾಟಕ ಮಂಡಳಿ

368) ಕರ್ನಾಟಕದ ಮೊಟ್ಟಮೊದಲ ಬೀದಿ ನಾಟಕ ಪ್ರಯೋಗ ಯಾವುದು?
-  ಕಟ್ಟು

369) ಕನ್ನಡದ ಮೊಟ್ಟಮೊದಲ ಹವ್ಯಾಸಿ ನಾಟಕ ತಂಡ ಯಾವುದು?
- ಭಾರತ ಕಲೋತ್ತೇಜಕ ಸಂಗೀತ ಸಮಾಜ

370) ಕನ್ನಡದ ಮೊಟ್ಟಮೊದಲ ರೇಡಿಯೋ ನಾಟಕ ಯಾವುದು?
- ನೀರಗಂಟಿ ಮಾರ ( ವಿ.ಕೆ.ಶ್ರೀನಿವಾಸನ್ )

371) ಕರ್ನಾಟಕದಲ್ಲಿ ಪ್ರದರ್ಶನಗೊಂಡ ಮೊದಲ ಅಸಂಗತ ನಾಟಕ ಯಾವುದು?
- ಬೊಕ್ಕತಲೆಯ ನರ್ತಕಿ ( ಸುಮತೀಂದ್ರ ನಾಡಿಗ್ )

   ★'''''★'''''★

★ನಾಡಿನ ಮೊದಲುಗಳು ★

372) ಕರ್ನಾಟಕದ ಮೊಟ್ಟಮೊದಲ ರಾಜವಂಶ ಯಾವುದು?
- ಕದಂಬ

373) ಕರ್ನಾಟಕದಲ್ಲಿ ಕಟ್ಟಲಾದ ಮೊಟ್ಟಮೊದಲ ಕೆರೆ ಯಾವುದು?
- ಚಂದ್ರವಳ್ಳಿ

374) ಕರ್ನಾಟಕದಲ್ಲಿ ನಿರ್ಮಿಸಲಾದ ಮೊದಲ ಶಿಲ್ಪ ಯಾವುದು?
- ನಾಗಶಿಲ್ಪ

375) ಕರ್ನಾಟಕದ ಮೊಟ್ಟಮೊದಲ ಶಾಸನ ಯಾವುದು?
- ಹಲ್ಮಿಡಿ

376) ಕರ್ನಾಟಕದಲ್ಲಿ ನಿರ್ಮಿಸಲಾದ ಮೊಟ್ಟಮೊದಲ ಕೋಟೆ ಯಾವುದು?
- ಬಾದಾಮಿ ಕೋಟೆ

377) ಕರ್ನಾಟಕದಲ್ಲಿ ನಿರ್ಮಿಸಲಾದ ಮೊಟ್ಟಮೊದಲ ಜೈನ ದೇವಾಲಯ ಯಾವುದು?
- ಪ್ರಣವೇಶ್ವರ ದೇವಾಲಯ, ತಾಳಗುಂದ

378) ಕರ್ನಾಟಕದಲ್ಲಿ ಕಟ್ಟಲಾದ ಮೊಟ್ಟಮೊದಲ ಬೌದ್ಧ ವಿಹಾರ ಯಾವುದು?
- ಬನವಾಸಿ

379) ಕರ್ನಾಟಕದ ಅತಿ ಪ್ರಾಚೀನ ಕಲ್ಲಿನ ನಿರ್ಮಿತ ಕಟ್ಟಡ ಯಾವುದು?
- ಹಲಸಿಯ ಜೈನ ಬಸದಿ

380) ಕರ್ನಾಟಕದ ಮೊಟ್ಟಮೊದಲ ವಿಶ್ವವಿದ್ಯಾಲಯ ಯಾವುದು?
- ಮೈಸೂರು ವಿ.ವಿ.

381) ಕರ್ನಾಟಕದ ಮೊಟ್ಟಮೊದಲ ಕಾಲೇಜು ಯಾವುದು?
- ಸೆಂಟ್ರಲ್ ಕಾಲೇಜು, ಬೆಂಗಳೂರು.

382) ಕರ್ನಾಟಕದ ಮೊಟ್ಟಮೊದಲ ವೈದ್ಯಕೀಯ ಕಾಲೇಜು ಯಾವುದು?
- ಮೈಸೂರು.

383) ಕರ್ನಾಟಕದ ಮೊಟ್ಟಮೊದಲ ಪಾಲಿಟೆಕ್ನಿಕ್ ಕಾಲೇಜು ಯಾವುದು?
- ಶ್ರೀ ಜಯಚಾಮರಾಜೇಂದ್ರ ಪಾಲಿಟೆ.

   ★'''''★'''''★

★ ಖಂಡವಾರು ಅತಿ ದೊಡ್ಡ  ನದಿಗಳು ★

384) ಏಷ್ಯಾ ಖಂಡದ ಅತಿ ದೊಡ್ಡ  ನದಿ ಯಾವುದು?
-ಯಾಂಗ್ ಶಿಕಿಯಾಂಗ.

385) ಆಫ್ರಿಕಾ ಖಂಡದ ಅತಿ ದೊಡ್ಡ  ನದಿ ಯಾವುದು?
-ನೈಲ್.

386) ಉತ್ತರ ಅಮೇರಿಕಾ ಖಂಡದ ಅತಿ ದೊಡ್ಡ  ನದಿ ಯಾವುದು?
-ಮಿಸಿಸಿಪ್ಪಿ.

387) ದಕ್ಷಿಣ ಅಮೇರಿಕಾ ಖಂಡದ ಅತಿ ದೊಡ್ಡ  ನದಿ ಯಾವುದು?
-ಅಮೆಜಾನ್.

388) ಯುರೋಪ ಖಂಡದ ಅತಿ ದೊಡ್ಡ  ನದಿ ಯಾವುದು?
-ಓಲ್ಗಾ.

389) ಆಸ್ಟ್ರೇಲಿಯಾ ಖಂಡದ ಅತಿ ದೊಡ್ಡ  ನದಿ ಯಾವುದು?
-ಮುರ್ರೆ.

★ ಭಾರತದ ಮೊದಲ ಮಹಿಳೆಯರು:

390) ಭಾರತದ ರಾಷ್ಟ್ರೀಯ ಕಾಂಗ್ರೆಸನ  ಪ್ರಥಮ ಮಹಿಳಾ ಅಧ್ಯಕ್ಷೆ ಯಾರು?
-ಸರೋಜಿನಿ ನಾಯ್ಡು

391) ಯು.ಎಸ್.ಜನರಲ್ ಅಸೆಂಬ್ಲಿಯ ಅಧ್ಯಕ್ಷರಾದ ಪ್ರಥಮ ಮಹಿಳೆ
-ವಿಜಯಲಕ್ಷ್ಮಿ ಪಂಡಿತ್ .

392) ಇಂಡಿಯನ್ ಏರ್ ಲೈನ್ಸ್ ನ ಪ್ರಥಮ ವಿಮಾನಚಾಲಕಿ ಯಾರು?
-ದರ್ಬಾ ಬ್ಯಾನರ್ಜಿ.

393) ಇಂಗ್ಲಿಷ್ ಕಾಲುಮೆಯನ್ನು ಈಜಿಕೊಂಡು ದಾಟಿದ ಪ್ರಥಮ ಮಹಿಳೆ ಯಾರು?
-ಆರತಿಸಹ.

394) ದಕ್ಷಿಣ ಭಾರತದಿಂದ ವೈದ್ಯಕೀಯ ಪದವಿ ಪಡೆದ ಪ್ರಥಮ ಮಹಿಳೆ ಯಾರು?
-ಡಾ|| ಮುತ್ತುಲಕ್ಷ್ಮಿ ರೆಡ್ಡಿ.

395) ಉಚ್ಚ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ಆಯ್ಕೆಯಾದ ಪ್ರಥಮ ಮಹಿಳೆ ಯಾರು?
-ಲೈಲಾ ಸೇಠ್.

396) ಎವರೆಸ್ಟ್ ಶಿಖರವನ್ನು ಏರಿದ ಪ್ರಥಮ ಭಾರತೀಯ ಮಹಿಳೆ ಯಾರು?
-ಬಚೇಂದ್ರಿ ಪಾಲ್.

397) ಸೇನಾಪದಕ ಪಡೆದ ಮೊದಲ ಮಹಿಳೆ ಯಾರು?
-ಬಿನ್ ಲಾದೇವಿ.

398) ವಿಶ್ವಸುಂದರಿಯಾಗಿ ಆಯ್ಕೆಯಾದ ಪ್ರಥಮ ಭಾರತೀಯ ಸುಂದರಿ ಯಾರು?
-ರೀಟಾ ಫೆರಿಯಾ.

399) ಭಾರತದ ಮೊದಲ ಮಹಿಳಾ ಇಂಜಿನಿಯರ್ ಯಾರು?
ಪಿ.ಕೆ. ಥ್ರೇಸಿಯಾ.

400) ಭಾರತದ ಪ್ರಥಮ ಮಹಿಳಾ ಗಗನಯಾತ್ರಿ ಯಾರು?
-ಕಲ್ಪನಾ ಚಾವ್ಲಾ.