ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Monday 18 January 2016

ಗಾಂಧೀಜಿಯ ಗಾಂದಿತ್ವದಿಂದ ಲಾಭ ಪಡೆದವರಾರು

ಶಾಲಾ ಪಠ್ಯದಲ್ಲಿ ಮಾತ್ರ ಗಾಂಧಿ ಅವರ ಬಗ್ಗೆ ಓದಿ ಮೆಚ್ಚಿ  ಕೊಂಡಿದ್ದ ನಾನು ಆವರ " ಆತ್ಮಕತೆ ,"ನನ್ನ ಸತ್ಯಾನ್ವೇಷಣೆ"  ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಅನುವಾದಿತ ಕೃತಿ ಓದಿ ಮತ್ತಷ್ಟು  ಮೆಚ್ಚುಗೆ ಆಯಿತು.  ಆ ನಂತರವೂ ಮತ್ತೆ ಮತ್ತೆ ಅವರ ಹಲವು ಪುಸ್ತಕಗಳಗನು ಓದಿದಾಗ ಅವರ ಗಾಂದಿತ್ವದೊಳಗಿದ್ದ ವೈರುದ್ಯಗಳು, ಅವರ ತತ್ವ  ಚಿಂತನೆಗಳ ವಿರೋಧಿಗಳ ದೊಡ್ಡ ಬಣ ಬರೆದ ಕೆಲವು ಪುಸ್ತಕ ಬೇರೇಯೇ ವಿಚಾರ ಬಿತ್ತಿ ಕೆಣಕಿದವು.ನಾನು ಗಾಂಧಿ ಬಗ್ಗೆ ಅವೆಲ್ಲ ಓದಿಯೂ ಗಾಂಧಿ ಅಬಿಮಾನಿಯಾಗಿಯೇ ಉಳಿದಿರುವೆ ಆದರೂ ಕೆಲವು  ಪ್ರಶ್ನೆಗಳು ಕಾಡುತ್ತಿದೆ  ?
       ಗಾಂದಿತ್ವದಿಂದ ದೇಶಕ್ಕೆ ಲಾಭ  ಆಗಿಲ್ಲವೇ...?
ವಿಶ್ವ ಶಾಂತಿದೂತ ಎನಿಸಿದ ಅವರಿಂದ ಜಗತ್ತಿನ ಹಲವರು ಕಲಿತದ್ದು ಬಹಳ ಇದೆ. ಹಾಗಾದರೆ  ಗಾಂದಿತ್ವದಿಂದ ಲಾಭ ಪಡೆದವರು ಯಾರು. .? ಬಲಪಂಥೀಯರೋ..ಎಡಪಂಥೀಯರೋ... ? ನೇಹರೂ ಅವರೊ..?
ದೀನ ದಲಿತರಿಗಾಗಿ ಎಲ್ಲಾ ತೊರೆದು ಹರಿಹರಿಜನ ಕೇರಿ ಕೇರಿಗಳಲಿ ದುಡಿದರಲ್ಲಾ ಅವರು ಅದನ್ನು ಮರೆಯಲಾದೀತೇ..?
ಅವರು ಅಂಬೇಡ್ಕರ್ ಅವರ ತತ್ವ ಚಿಂತನೆಗಳ ಕೆಲವನ್ನು ವಿರೋಧಿಸಿದ ಮಾತ್ರಕ್ಕೆ ಅವರು ದಲಿತರ ಹಿತಾಸಕ್ತಿಗೆ ದುಡಿದದ್ದನು ಕಡೆಗಣಿಲಾದೀತೇ...? ಎಡಪಂಥೀಯರೋ ..ಬಲಪಂಥೀಯರೋ  ಮನ ಬಂದಂತೆ ಕೆಲ ಪುಸ್ತಕ ಬಿಡುಗಡೆ ಮಾಡಿ  ಅವರ ಒಟ್ಟಾರೆ ಸೇವೆಯನ್ನು ಬೇರೆ ಬೇರೆ ರೀತಿಯಲ್ಲಿ ನೋಡಿರುವುದು ಗಮನಿಸಬೇಕು.
    ಗಾಂಧಿ ರಾಮರಾಜ್ಯ  ಕನಸಿನೋಂದಿಗೇ ಹಿಂದು ಧರ್ಮದ ಹಲವು ಅಂಶಗಳನ್ನು ಒಳಗೊಂಡಂತೆ  ಉತ್ತಮ ಅಭಿಪ್ರಾಯ ಹೊಂದಿದ್ದರು ಎನ್ನುವುದು ಹಲವು ಸಾಸಾಕ್ಷಿ ಇವೆ. ಆದರೆ  ಅಲ್ಪಸಂಖ್ಯಾತರಿಗಾಗಿಯೂ  ದುಡಿದವರು. ಒಟ್ಟಾರೆ ಮಾನವತಾವಾದಿ ಆಗಿ ಬಹಳ ಶ್ರಮಿಸಿದ್ದಾರೆ.
ಇತಿಹಾಸ ಕೆದಕಿದರೆ ಅವರ ಕೆಲವು ನಿರ್ಣಯ. ಅಭಿಪ್ರಾಯ ಗಳ  ಹಿಂದೆ ಯಾರದೋ ಛಾಯೆ ಇದೆ ಎನಿಸುತ್ತದೆ. ಆದರೆ ಅವರ ಒಟ್ಟು ಸೇವೆ ,ಜಗತ್ತಿಗೇ ಮಾದರಿ ಎನ್ನಬಹುದು.

No comments:

Post a Comment