ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Sunday, 16 March 2014

ಬಿಡುವು ಮಾಡಿಕೊಂಡು ಓದಿ ,,,ಕಡಿಮೆ ಸಮಯದಲ್ಲಿ ,!


೧./ಅವಳು                                                
ಅವಳು ಬಿಡಿಸಲಾಗದ ಒಗಟು
ಬಿಡಿಸಿದರೂ ಒಗಟು
ನಾನು ಒರಟ
ಕರಗದ ಕಲ್ಲು
ಒಲವ ಮಳೆ ಸುರಿದು
ಹಾಗೆ ಸೇರಿತು ಸಾಗರ

ಮನವೀಗ ಹುಡುಕಿದೆ
ಕಡಲ ದಡದಲಿ
ಬೆರೆತುಹೋದ
ಸಿಹಿ ಒಲವ ಮಳೆ

ಪಾದಕಂಟಿದೆ

ಬರಿ ಉಪ್ಪು ನೀರು.
ಕಚ್ಚಿದೆ ವಿರಹ ಕಡಲ ಕರಡಿ
೨.ನಾನು ರಸ್ತೆ
ಅವಳು ವಾಹನ

ಆಗೀಗ ನಿಂತರೂ ಹೊರಟು ಬಿಡುವಳು ಕ್ಷಣದಲಿ

ಹೋದ್ರೆ ಹೋಗಲಿ ಬೇರೆ ವಾಹನ ಬರಲಿ ಎಂದು ಕಾದೆ

ಅವೂ ಕ್ಷಣ ನಿಂತು ಹೊರಟವು ....

೩.ಅವಳು .........
ಕತ್ತಲೆಯಲ್ಲಿ  ಕರೆಯದಿದ್ದರೂ ಬರುವ ಚಂದ್ರನಂತಲ್ಲ....
ಹಗಲಲ್ಲಿ ಬೇಡವೆಂದರೂ ಓದಿ ಹೋಗುವ ಸೂರ್ಯನಂತೆ ..
ಕರೆನ್ಸಿ  ಕಾಲಿಯಾಗುವತನಕ ಮಾತ್ರ
ಕಾಲ್ ಮಾಡಲು ಅವಕಾಶ ನೀಡುವ  ದೊರವಾಣಿ ಕಂಪನಿಗಳಂತೆ !!!

೪.ಪೇಸ್ ಬೂಕ್ ಲೈಕ್ ನೋಡಿ ಹಿರಿ ಹಿರಿ ಹಿಗ್ತಾರೆ ರಾಜಕಾರಾಣಿಗಳು
ನಮ್ಮ ಜನಾ ಸುಮ್ನೆ 'ಹುಚ್ಚು ಕೋತಿ' ಪೊಟ್ಹೊಗು ಲೈಕ್ ಒತ್ತುತ್ತಾರೆ ಗೊತ್ತಿರಲಿ ....
ನಿದನ ವಾರ್ತೆ ಗು ಲೈಕ್ ಒತ್ತುತ್ತಾರೆ
ಗುಂಡಿಗೆ ಬಿದ್ದಾಗಲೂ,,ಎದ್ದಾಗಲು ,,ಲೈಕ್ ಒತುತಲೇ ಇರುತ್ತಾರೆ ........
ಯಾರೋ ಹೇಳಿದಾಗೆಲ್ಲ ಓಟನ್ನು ಹಂಗೆ ಸುಮ್ನೆ ಒತ್ತಿ ಒತ್ತಿ ಅಬ್ಯಾಸ ಆಗಿ ಬಿಟ್ಟಿದೆ ,,,!

೫.ಕಿತ್ತರೂ ಬಾಡದ ಕೂದಲಿನ ಗುಣದ ಕನಸು
ಕತ್ತರಿಸಿದರೂ ಮತ್ತೆ ಚಿಗುರುವ ಉಗುರಿನ ಗುಣದ ಶ್ರಮವಿರಲಿ
ಗೆಲುವಿನ ರಾಜಮಾರ್ಗ ನಿಮ್ಮದಾಗಲಿದೆ .

೬.  ಚಿತ್ರಾನ್ನಾ ಕ್ಕೆ , ಉಪ್ಪಿಟ್ಟಿಗೆ ಯಾರು ಕೂದಲು ಹಾಕೋಲ್ಲ
ಆದರೂ ಒಮ್ಮೂಮ್ಮೆ ಅವು ಪ್ರತ್ಯಕ್ಷ ವಾಗುತ್ತವೆ.

ಎಲ್ಲ ಗೆಳೆಯರೊಡನೆ ಚೆನಾಗಿರಬೇಕು ಎಂದು ಕೊಂಡರು ...
ಅನಿರೀಕ್ಸಿತ ಸಂಗತಿಗಳು ನುಗ್ಗಿ ಬಿಡುತ್ತವೆ .....?
ಬದುಕು ಹಿಂಗೆನೆ ..!
೭.
ಕನಸುಗಾರನಿಗೆ ನಾಳೆಗಳೆಲ್ಲ ಸುಂದರ ..ಸುಂದರ ,,,
ಕನಸು ಹೊತ್ತೇ ಬರುವರು ರವಿ..ಚಂದ್ರ... .


೮,
ಅವಳು .........
ಕತ್ತಲೆಯಲ್ಲಿ ಕರೆಯದಿದ್ದರೂ ಬರುವ ಚಂದ್ರನಂತಲ್ಲ....

ಕರೆದರು ಬರದ ಮೋಡ ,,,,

ಸುರಿದರೆ ಜಡಿ ಮಳೆ,,
...
ಬರ ಪರಿಹಾರ / ನೆರೆ ಪರಿಹಾರ ....

ನಾನೇ ಘೋಸಿಸಿಕೊಳ್ಳಬೇಕು ..



೯.. ಮನಸೆ ಎದ್ದು ಆಸೆ ಬಲೆಯ ಹೊದ್ದು ಕೊಂಡರೆ

ತಪ್ಪಿಸಿಕೊಳ್ಳಲು ಸಾದ್ಯವೇ ..?

ಮೇಯೂ ಬೇಲಿಯ ಹೊಲ ತಡೆದೀತೆ ?

ಲಂಚಾವತಾರದ ಲೋಕವ ಸೃಷ್ಟಿಸಿ ಕೊಂಡ ಪ್ರಜೆಗಳನು

ಲಂಚದಿಂದ ಪಾರುಮಾಡಲಾದೀತೆ ??

೧೦ .   ನಿಮಗೊಂದು ಸುಳ್ಳು ಹೇಳಬೇಕು.
ಆದರೇನು ಮಾಡಲಿ ...
ನನಗೆ ಸುಳ್ಳು ಹೇಳೋಕೆ ಬರೂದಿಲ್ಲ ..!!







No comments:

Post a Comment

ಮಕ್ಕಳ ಮನೆ ಮನೆಗೆ marks rigister app

📱 'ಮಾರ್ಕ್ಸ್ ರಿಜಿಸ್ಟರ್' (Marks Register) ಆ್ಯಪ್ !!   ಶಿಕ್ಷಕರ ಶ್ರಮಕ್ಕೆ ತಂತ್ರಜ್ಞಾನದ ಆಸರೆ! ಶಿಕ್ಷಕರ ಕೆಲಸ ಇಂದು ಮುಂಚಿನಂತಿಲ್ಲ. ಬದಲಾಗುತ್ತಿರುವ...