ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Monday 7 September 2020

ವೈದ್ಯಲೋಕದ ಬೆರಗು ಬವಣೆಗಳ ಆರ್ಥನಾದಲಯದ ಆತ್ಮ ಚರಿತ್ರೆ ಉಸಿರೇ ಗಾಳಿಯಾದಾಗ

ವೈದ್ಯಲೋಕದ ಬೆರಗು ಬವಣೆಗಳ ಆರ್ಥನಾದಲಯದ  ಆತ್ಮಚರಿತ್ರೆ 'ಉಸಿರೇ ಗಾಳಿಯಾದಾಗ".

ಟಿ ಎಸ್ ಎಲಿಯಟ್ ರವರ ಅಮರತ್ವದ ಪಿಸುಮಾತು ಸ್ಮರಿಸುತ್ತಲೇ  ತನಗೆ ಶ್ವಾಸಕೋಶದಲ್ಲಿ ಸಣ್ಣ ಸಣ್ಣ ಕ್ಯಾನ್ಸರ್ ಗಡ್ಡೆಗಳು ತುಂಬಿಕೊಂಡಿರುವುದು ಸಿಟಿ ಸ್ಕ್ಯಾನ್ ಪ್ರತಿಬಿಂಬದಿಂದ ದೃಢಪಟ್ಟಿರುವ ವಿಚಾರದ ಬಗ್ಗೆ ನೇರವಾಗಿ ವರ್ತಮಾನದಲ್ಲಿ ವಿವರಿಸುತ್ತಲೇ ತನ್ನ  ಆತ್ಮಚರಿತ್ರೆ ಆರಂಭಿಸಿರುವ ಭಾರತೀಯ ಮೂಲದ ಅಮೇರಿಕದ  ನರರೋಗ ತಙ್ಞ ಡಾಕ್ಟರ್ ಪೌಲ್ ಕಲಾನಿಧಿ ಅವರ "when breath becomes air" ಕೃತಿಯ ಪ್ರತಿ ಪುಟದ ಸಾಲಿನಲ್ಲೂ  ಬದುಕು ಮತ್ತು ಸಾವು ಎಂಬ ವಾಸ್ತವದ ಎದುರೇ ತನ್ನ  ಜೀವನದ ಕುರಿತು ಮಹತ್ವಾಕಾಂಕ್ಷೆಗಳೊಂದಿಗೆ ವೈದ್ಯಕೀಯ  ಹುಡುಕಾಟವಿದೆ, ಪ್ರಶ್ನೆಗಳಿವೆ, ಹತಾಶೆಗ

ಳಿವೆ .ಬದುಕಿನ ಬಗ್ಗೆ ಹಲವು ಮಹಾತ್ವಕಾಂಕ್ಷೆ ಹೊತ್ತ ನನಗೆ ಇಷ್ಟು ಬೇಗ ಸಾವೇಕೆ ಎನ್ನುವ ಆರ್ಥನಾದವಿದೆ. ಸಾವಿನ ಬಳಿ ಹೋಗುವ ವಯಸ್ಸಲ್ಲದ ವಯಸ್ಸಲ್ಲಿ  ಒಬ್ಬ ವೈದ್ಯನಾಗಿ ರೋಗಿಯಾಗಿ ಮಲಗಿ ಸಾವು ಸನಿಹದಲ್ಲೇ ಇರುವುದು ಖಾತ್ರಿಯಾದಾಗ ಹೆಂಡತಿ ,ಮಕ್ಕಳು , ತನ್ನ ಬದುಕಿನ ಮಹತ್ವಾಕಾಂಕ್ಷಿಗಳು ಕಣ್ಣ ಸುತ್ತ ಸುಳಿದಾಡಿದ ಹಲವು ಸಂಗತಿಗಳನ್ನು ಇಲ್ಲಿ  ಮುಚ್ಚುಮರೆಯಿಲ್ಲದೆ ಸಹಜ ಸರಳ ನಿರೂಪಣೆ ಶೈಲಿಯಲ್ಲಿಯೆ ಹಂಚಿಕೊಂಡಿದ್ದಾರೆ.

ವೈದ್ಯನಾಗಿ ಸಾಕಷ್ಟು ಸಾವುಗಳನ್ನು ಕಣ್ಣಾರೆ ಕಂಡಿದ್ದು, ಹಲವರನ್ನು ಸಾವಿನಿಂದ ಬದುಕಿಸಿದ್ದ ಪೌಲ್ ತಾನೇ ಸಾವಿನ ಮನೆಗೆ ಶರಣಾಗಿ ಮಲಗಿರುವಾಗಿನ  ಬರಹಗಳ ಪದ ಮಾಲೆಯಾಗಿ ಸಮರ್ಪಿಸಿರುವ ಈ ಕೃತಿಯ ಪ್ರತಿ ಪುಟದಲ್ಲೂ ಆರ್ಥನಾದಲಯ ಓದುಗನ ಭಾವಕೋಶ ತಟ್ಟಿ  ಎದೆ ನಡುಗಿಸುತ್ತದೆ, ಗಂಟಲು ಒಣಗಿಸುತ್ತದೆ, ಕಲ್ಲು ಹೃದಯದ ವನ ಕಣ್ಣನ್ನು ಸಹ ಒದ್ದೆಯಾಗಿಸುತ್ತದೆ. ಜೊತೆಗೆ ವೈದ್ಯಕೀಯ ಲೋಕದ  ಹಲವು ಮಜಲುಗಳ ಅರಿವನ್ನು, ಶಸ್ತ್ರಚಿಕಿತ್ಸೆಗಳ ಜ್ಞಾನವನ್ನು ಸಹ ನೀಡುವ ಈ ಕೃತಿ ವೈದ್ಯಲೋಕಕ್ಕೆ ಪ್ರವೇಶಿಸುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ಕೃತಿಯಾಗಿಯೂ ನಿಲ್ಲಬಲ್ಲದು. ವೈದ್ಯರಿಗೆ ಇರಬೇಕಾದ ಸೇವಾ ಸಮರ್ಪಣಾ ಮನೋಭಾವ, ದೈಹಿಕ ಮಾನಸಿಕ ಸೂಕ್ಷ್ಮತೆ, ಮಾನವೀಯತೆಯ ಹಲವು ಸಂಗತಿಗಳನ್ನು ತನ್ನದೇ ಬದುಕಿನ ಘಟನಾವಳಿಗಳ ಮೂಲಕ ತಿಳಿಸಿದ್ದಾರೆ.

ಪ್ರತಿ ಪುಟದತ್ತ ನೆಟ್ಟ ದೃಷ್ಟಿ  ನೆಟ್ಟಂತೆಯೆ  ಇರುವಂತೆ ಮಾಡಿ, ಮೆದುಳು ಭಾವಕೋಶಕ್ಕೆ ಪ್ರತಿ ಸಾಲು ಸಾಲು ಸನ್ನಿವೇಶವನ್ನೂ ಚಿತ್ರಿಸಿ ರವಾನಿಸಿ ಅವರ ಯಾತನೆ, ಅನುಭವ ಚಿತ್ರಣವನ್ನು  ಕಣ್ಣಮುಂದೆಯೇ ನೋಡುತ್ತಿರುವಷ್ಟರಮಟ್ಟಿಗೆ  ನನ್ನನ್ನು  ಎಳೆದುಕೊಂಡು  ಹೋಗಿ  ನನ್ನೊಳಗೆ ಓದುವ ಭಾವತೀವ್ರತೆ ಹೆಚ್ಚಿಸಿ ಉಸಿರು ಬಿಗಿಯಾಗಿಸಿ ಕೆಲವೇ ಪುಟ ಓದುತ್ತಲೇ  ಅವರನ್ನೇ ಆವಾಹಿಸಿಕೊಂಡಂತೆ ಭಾಸವಾಗಿ ವಾಸ್ತವಕ್ಕೆ ಎಚ್ಚೆತ್ತಾಗ  ಮನನೊಂದು ಓದುವುದನ್ನೇ ನಿಲ್ಲಿಸಿಬಿಟ್ಟಿದ್ದೆ. ಆದರಿಂದ ಹೊರಬರಲು ಬಹಳ ಕಷ್ಟಪಡಬೇಕಾಯಿತು.
ಆದರೂ ಪುಸ್ತಕವನ್ನು ಓದಿ ಮುಗಿಸಲೇಬೇಕೆಂಬ ಹಠದಿಂದ ಧೈರ್ಯ ಮಾಡಿ ಎರಡು ದಿನ ಬಿಟ್ಟು ಮತ್ತೆ ಓದಿ ಪೂರ್ಣಗೊಳಿಸಬೇಕಾಯಿತು.

ಸಾವು ಸನಿಹ ಬಂದಮೇಲೆಯೂ ಸಾಹಿತ್ಯದ ವಿದ್ಯಾರ್ಥಿಯಾದ ತಾನು ಏನೂ ಬರೆಯಲಾಗಲಿಲ್ಲವಾಲ್ಲ ಎಂದು ಕೊರಗುತ್ತ ತಾನು ಒಂದು ಪುಸ್ತಕ ಬರೆಯಬೇಕೆಂದು  ಡಾ.ಪೌಲ್ ಅಂತಿಮವಾಗಿ ತನ್ನದೇ ದುರಂತ ಕಥೆಯನ್ನು  ಬರೆಯುತ್ತಾ ಸಾಗಿದ್ದಾರೆ. ಇದನ್ನು ಒಂದು ಆತ್ಮಚರಿತ್ರೆ ಎಂದು ಸಾಮಾನ್ಯವಾಗಿ ಗ್ರಹಿಸಿದರೆ ಸಾಲದು. ಅವರ ಉದ್ದೇಶ ತನ್ನ ಆತ್ಮಚರಿತ್ರೆ  ಎನ್ನುವ ಸಾಮಾನ್ಯ ದೃಷ್ಟಿಕೋನದಿಂದ ಬರೆಯುವುದು ಆಗಿದ್ದರೆ  ಅವರು ಆರಂಭದಲ್ಲಿಯೇ ತನಗೆ ಕ್ಯಾನ್ಸರ್ ಇರುವ ವಿಷಯದೊಂದಿಗೆ ಬರಹ ಆರಂಭಿಸುತ್ತಿರಲಿಲ್ಲ. ತನ್ನ ಬದುಕಿನ ಸಿಹಿ ಸಂಗತಿಗಳನ್ನು ಹೆಚ್ಚಾಗಿ ಹಂಚಿಕೊಳ್ಳುತ್ತಾ ನೋವನ್ನು ಮರೆಯುತ್ತಾ ಬರೆಯಬಹುದಿತ್ತು. ಆದರೆ ಅವರಲ್ಲಿ ತನ್ನ ನೋವಿನ ಸಂಗತಿಗಳನ್ನೇ ಕೆದಕಿ ಕೆದಕಿ ಬರೆದಿದ್ದಾರೆ.ಓದುಗರ ಭಾವಕೋಶ ತಲುಪಿ ಹಿಡಿದಿಟ್ಟುಕೊಂಡು ಪ್ರತಿ ಪುಟವನ್ನು ಓದುವಂತೆ ಮಾಡುವ ಅವರ ಬರವಣಿಗೆಯ ತಂತ್ರ ಮತ್ತು ನಿರೂಪಣೆಯ ದೃಷ್ಟಿಯಿಂದ  ಸಾಹಿತ್ಯಕವಾಗಿ ಸಹ ವಿಶಿಷ್ಟ ಕ್ರಮ ಅನುಸರಿಸಿದ್ದಾರೆ.

ಮಾನವನ ದೇಹ ರಚನೆ,ನರರೋಗ , ವೈದ್ಯಕೀಯ ಲೋಕದ ತವಕ ತಲ್ಲಣಗಳು, ವೈದ್ಯಕೀಯ ಪರೀಕ್ಷೆಯ ಸವಾಲುಗಳು, ವೈದ್ಯರ ವೈಯಕ್ತಿಕ ಬದುಕು ಬವಣೆಗಳು , ವೈದ್ಯಕೀಯ ಲೋಕದ ಪ್ರಯೋಗಗಳ ಅಚ್ಚರಿಗಳು ಹೀಗೆ ಹಲವಾರು ವೈಚಾರಿಕ ಸಂಗತಿಗಳನ್ನು, ತನ್ನ ಬದುಕಿನ ಪುಟಗಳು ಸಹ ಆಗಿದ್ದ ವಿಚಾರಗಳೊಂದಿಗೆ ತಿಳಿಸುತ್ತಾ ಸಾಗುವ ಈ ಕೃತಿಯ ನಿರೂಪಣೆಯನ್ನು ಒಂದು ವಿಶಿಷ್ಟ ರೋಚಕ ಕಾದಂಬರಿಯಲ್ಲಿ ಬಂದು ಹೋಗುವ ತಿರುವುಗಳಷ್ಟೇ ವಿಶಿಷ್ಟ ಶೈಲಿಯಲ್ಲಿ ಹೆಣೆದಿದ್ದಾರೆ.

ಹಲವಾರು ಮಹಾನ್ ನಾಯಕರ ಆತ್ಮಚರಿತ್ರೆಗಳನ್ನು ಓದಿದ ನಮಗೆ ಕೊಡುವ ಅನುಭವಕ್ಕೂ ಒಬ್ಬ ವೈದ್ಯ  ಚಿಕ್ಕ ವಯಸ್ಸಿನಲ್ಲಿಯೆ ತನ್ನದೇ ದುರಂತ ದಿನಗಳನ್ನು ಆಸ್ಪತ್ರೆಯಲ್ಲಿ ಕಳೆಯುತ್ತ
ಬದುಕಿನ ಹಲವು ಮಜಲುಗಳನ್ನು, ಆತ್ಮ- ಆಧ್ಯಾತ್ಮವನ್ನು, ದೇಹರಚನೆ ,ಜೀವ - ಜೀವನ ಕ್ರಮ , ಉಸಿರಿನ ಕುರಿತು ತನ್ನದೆ ವೈಚಾರಿಕ ವೈದ್ಯಕೀಯ ಅನುಭವದ ನೆಲೆಯಲ್ಲಿ ವಿವರಿಸುತ್ತಾ ತನ್ನ ಘಟನೆಗಳೊಂದಿಗೆ ಓದುಗರಿಗೆ ಮುಖಾಮುಖಿಯಾಗಿ ನಿಂತು ವೈದ್ಯಕೀಯ ಅರಿವಿನ ಜೊತೆಗೆ ಭಾವಕೋಶಕ್ಕೆ ಈ ಕೃತಿ ಮೂಲಕ ಲಗ್ಗೆ ಹಾಕುವಲ್ಲಿ ಯಶಸ್ವಿಯಾಗುವುದು ಈ ಕೃತಿಯ ಹೆಚ್ಚುಗಾರಿಕೆ.

ಈವರೆಗಿನ ಹೆಸರಾಂತ ಆತ್ಮಚರಿತ್ರೆಗಳು  ಸಾಮಾಜಿಕ, ರಾಜಕೀಯ ಮಾದರಿ ಜೀವನ ವಿಧಾನ , ಹೋರಾಟದ ಘಟನಾವಳಿಗಳನ್ನು  ಸ್ವತಃ ಅವರೇ ವಿವರಿಸುವ ಕ್ರಮಗಳಾಗಿ ಕಂಡರೆ  ಈ ಕೃತಿ ಸಾವಿನ ಅಂಚಿನಲ್ಲಿರುವ ವ್ಯಕ್ತಿಯೊಬ್ಬನ ಅರ್ಥ ಧ್ವನಿಯಾಗಿಯೂ, ವೈದ್ಯಕೀಯ ಲೋಕದ ಹಲವು ಮಜಲುಗಳ ಪರಿಚಯ ಕೃತಿಯಾಗಿಯೂ ಗ್ರಹಿಸಬಹುದಲ್ಲದೆ ಇಲ್ಲಿ ದಂಪತಿಗಳಿಬ್ಬರು ಸಹ ಕೃತಿಕಾರರಾಗಿರುವುದು ವಿಶಿಷ್ಟ. ಪೌಲ್ ಅವರು ಸಾಕಷ್ಟು ಬರೆದು ನಿಲ್ಲಿಸಿದ್ದ ಅವರದೇ ಬದುಕಿನ ಅಂತಿಮ ದಿನಗಳ ಘಟನಾವಳಿಗಳನ್ನು ಅವರ ಮರಣದ ನಂತರ  ವಿಚ್ಛೇದನ ಬಯಸಿದ್ದ ಅವರ ಹೆಂಡತಿ ಡಾ.ಲೂಸೀ ಸಾವಿನ ಅಂಚಿನಲ್ಲಿರುವ ಗಂಡನನ್ನು  ಮಗನ ಕಾರಣದಿಂದಾಗಿ ಮತ್ತೆ ಜೊತೆಯಾಗಿ ಪ್ರೀತಿಯಿಂದ ನೋಡಿಕೊಳ್ಳುತ್ತಾ ಮರಣಾನಂತರ ಆಕೃತಿಯನ್ನು ಪೂರ್ಣಗೊಳಿಸಿ  ನಮ್ಮ ಕೈಗೆ when breath becomes air  ಎಂಬ ವಿಶಿಷ್ಟ ಕೃತಿಯನ್ನು ಇಟ್ಟು ಸಾಹಿತ್ಯಲೋಕದಲ್ಲಿ ಹೊಸ ಸಂಚಲನ ಹುಟ್ಟುಹಾಕಿದ್ದಾರೆ. ಜಗತ್ತಿನ ಹಲವಾರು ಭಾಷೆಗಳಿಗೆ ಅನುವಾದವಾದ ಈ ಕೃತಿ ಕನ್ನಡದಲ್ಲಿ ನಮಗೆ ಓದಲು  ಹಗಲಿರುಳು ಶ್ರಮಿಸಿದ ಡಾ.ಡಿ.ಸಿ ನಂಜುಂಡ ಅವರು "ಉಸಿರೇ ಗಾಳಿಯಾದಾಗ " ಎನ್ನುವ ಶೀರ್ಷಿಕೆ ಯೊಂದಿಗೆ ಸಶಕ್ತವಾಗಿ ಅನುವಾದಿಸಿದ್ದಾರೆ.ಇಂತಹ ವಿಶಿಷ್ಟ ವೈದ್ಯಕೀಯ ವ್ಯಕ್ತಿ ಚರಿತ್ರೆಯನ್ನು ನಾನು ಈವರೆಗೆ  ಓದಿರಲಿಲ್ಲ. ಕನ್ನಡದಲ್ಲಿ ಇದೇ ಮೊದಲ ಕೃತಿ ಇರಬಹುದು ಅನಿಸುತ್ತದೆ.

ವೈದ್ಯಕೀಯ ಕ್ಷೇತ್ರದಲ್ಲಿ , ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವವನ್ನು ಸಾಧಿಸುವ ಮಹತ್ವಾಕಾಂಕ್ಷೆ ಹೊತ್ತಿದ್ದ ಪೌಲ್ ಇಷ್ಟು ಬೇಗ ಸಾವಿನ ಅಂಚಿನಲ್ಲಿ ದಿನಗಣನೆ ಎಣಿಸುತ್ತಿರುವುದರ ಬಗ್ಗೆ ತಿಳಿದ ವಿಚ್ಛೇದನ ಬಯಸಿದ್ದ ಡಾ.ಲೂಸೀಗೆ  ಇಂತಹ ಸಂದಿಗ್ಧ ಕಾಲದಲ್ಲಿ ಅವನ ಜೊತೆಗೆ ಇರಬೇಕೆಂದು ಬಯಸಿ ಬಂದಮೇಲೆ ಮಕ್ಕಳನ್ನು ಪಡೆಯುವ ಆಸೆಪಟ್ಟ ಪೌಲ್   ತಂದೆಯಾಗಿ ತನ್ನ ಸಂಗತಿಗಳನ್ನು ಆಸೆಗಳನ್ನು ಜವಾಬ್ದಾರಿಗಳನ್ನು ವಿವರಿಸುವಾಗ ಕಣ್ಣೀರು ತರಿಸುತ್ತದೆ. ಸಾವಿನ ಅಂಚಿಗೆ ತಲುಪಿರುವ ವ್ಯಕ್ತಿಯ ಹತಾಶೆಯ ಸಂಗತಿಗಳನ್ನು ಓದುತ್ತಲೇ ಎದೆ ಭಾರವಾಗುತ್ತದೆ. ಮಗು ಹುಟ್ಟುವ ಮುನ್ನವೇ ಸಂಭ್ರಮಿಸಿದ ಪೌಲ್ ತನಗೆ ಮಗಳೇ ಹುಟ್ಟುವುದೇ ಎಂದು ಖಾತ್ರಿಮಾಡಿಕೊಂಡು ಎಲಿಜಬೆತ್ ಕ್ಯಾಂಡಿ ಎಂದು ನಾಮಕರಣವನ್ನೂ ಒಂದು ತಿಂಗಳು ಮೊದಲೇ ಮಾಡಿಬಿಡುತ್ತಾನೆ.  ಮಗಳು ಹುಟ್ಟುವುದು ಖಾತ್ರಿ ಆದ ಮೇಲೆ ಜೀವನದ ಪ್ರತಿ ಕ್ಷಣವನ್ನು ಸಂಭ್ರಮಿಸಲು ಆರಂಭಿಸುತ್ತಾನೆ. ಮಗಳು ಜನಿಸುವ ದಿನ ಹೆಂಡತಿಯ ಜೊತೆಗೆ ಇದ್ದು ಪ್ರತಿ ಸಂಗತಿಯನ್ನು ವೀಕ್ಷಿಸುತ್ತಾ ಜೊತೆ ಇರುತ್ತಾನೆ. ಪೌಲ್ ಒಬ್ಬ ಭಾವಜೀವಿಯಾಗಿ ಓದುಗನನ್ನು ಆವರಿಸುತ್ತಾನೆ. ಮಗಳಿಗೆ  ತನ್ನನ್ನು ನೆನಪಿಟ್ಟುಕೊಳ್ಳುವಷ್ಟು ನೆನಪಿನ ಶಕ್ತಿ ಬರುವವರೆಗೆ ಆದರೂ ತಾನು ಬದುಕಿರಬೇಕು ಎಂದು ಬಯಸುತ್ತಾನೆ. ಆದರೆ ಸಾವು ಸನಿಹದಲ್ಲಿದೆ ಎಂದು ಅನಿಸುತ್ತದೆ. "ಶಬ್ದಗಳು ಬಹಳ ವರ್ಷಗಳ ಕಾಲ ಬದುಕುತ್ತವೆ. ಆದರೆ ನಾನಲ್ಲ.. ಎನ್ನುವಲ್ಲಿಗೆ ಪೌಲ್ ಆತ್ಮಚರಿತ್ರೆ ಮುಗಿಯುತ್ತದೆ.

ಶ್ರೇಷ್ಠ ಕೃತಿಕಾರರ ಕೃತಿ ಎಂಬ ಕಾರಣಕ್ಕೆ, ಅಥವಾ ಹಲವು ಪ್ರಶಸ್ತಿ ಪಡೆದ ಕೃತಿ ಎಂಬ ಕಾರಣಕ್ಕೆ ಕೆಲವು ಪುಸ್ತಕಗಳನ್ನು ಓದಿರುತ್ತೇವೆ. ಅವು ಅಷ್ಟೇ ವೇಗವಾಗಿ ನಮ್ಮಿಂದ ಮರೆತು ಹೋಗಿರುತ್ತವೆ. ಆದರೆ ಈ ಕೃತಿ ಒಮ್ಮೆ ಓದಿದಮೇಲೆ ಮರೆಯುವ ಸಾಧ್ಯತೆಯೇ ಇಲ್ಲ. ಪ್ರತಿ ಪುಟಕ್ಕೂ ನಿಮ್ಮ ಭಾವಕೋಶದ ಆಳಕ್ಕೆ ಇಳಿದು ಹಾಗೆ ಕೂತುಬಿಡುವ ಗುಣವಿದೆ.

ಪೌಲ್ ಅವರ ನಿಧನದ ನಂತರವೂ ಅವರು ಬರೆದಿಟ್ಟ ಬರವಣಿಗೆಯನ್ನು ಅವನ ಹೆಂಡತಿ ಡಾಕ್ಟರ್ ಲೂಸಿ ಕಲಾನಿಧಿ ಅವರು ಮುಂದುವರಿಸಿ  ಬರೆದು ಈ ಕೃತಿಯನ್ನು ಪ್ರಕಟಿಸಿದ್ದು  ಸಾಹಿತ್ಯಲೋಕದ ಮತ್ತೊಂದು ವಿಶೇಷ ಪರಂಪರೆ. ಕ್ಯಾಡಿ ಹುಟ್ಟಿದ ನಂತರದ ದಿನಗಳಲ್ಲಿ ಪೌಲ್ ಅವರು ಬರೆಯುವುದನ್ನು ನಿಲ್ಲಿಸಿದಂತೆ ತೋರುತ್ತದೆ. ಹಾಗಾಗಿ ಕ್ಯಾಡಿಯೊಂದಿಗೆ ಕಳೆದ ಕೆಲವೇ ತಿಂಗಳುಗಳ ಸಂಗತಿಗಳನ್ನು  ಅವನ  ಹೆಂಡತಿ ಶ್ರೀಮತಿ ಲೂಸಿ ಅವರು ಬರೆದಿದ್ದಾರೆ. ಲೂಸಿಯವರು ಓದುಗರ ಭಾವಕೋಶಗಳಲ್ಲಿ ಮತ್ತಷ್ಟು ಭಾವಸ್ಪರ್ಶೀ ಮಾತುಗಳನ್ನು ಹಂಚಿಕೊಳ್ಳುತ್ತಾ  ಕ್ಯಾನ್ಸರ್ ತೀವ್ರವಾಗಿ ಸಾವಿನೂರಿಗೆ  ಕರೆದುಕೊಂಡು ಹೋದ  ಸಂಗತಿಯನ್ನು ಮನಸ್ಸು ಭಾರಮಾಡಿಕೊಂಡೇ ಎದೆಭಾರವಾಗುವಂತೆ ನಿರೂಪಿಸಿದ್ದಾರೆ.

ಇಂತಹ ವಿಶಿಷ್ಟ ಕೃತಿ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಗೆ ಮತ್ತು ವೆಲ್ಕಮ್ ಬುಕ್ ಪ್ರೈಸ್ ಎರಡಕ್ಕೂ ನಾಮನಿರ್ದೇಶನಗೊಂಡದ್ದು ಈ ಕೃತಿಯ ಹೆಚ್ಚುಗಾರಿಕೆ.
ಕನ್ನಡಕ್ಕೆ  ಡಾ ಡಿ.ಸಿ ನಂಜುಂಡ ಅವರು ಕನ್ನಡದ್ದೇ ಕೃತಿ ಎನಿಸುವಷ್ಟು ಶಕ್ತವಾಗಿ ಅನುವಾದಿಸಿದ್ದಾರೆ. ಭಾವನೆಗಳು ಭಾಷಾತೀತ. ಪೌಲ್ ಅವರು ಇಂಗ್ಲಿಷ್ನಲ್ಲಿ ತಮ್ಮ ಭಾವನೆಗಳನ್ನು ಆತ್ಮಚರಿತ್ರೆ ರೂಪದಲ್ಲಿ ಪ್ರಕಟಿಸಿದರು ಸಹ ಕನ್ನಡದಲ್ಲಿ ಅದನ್ನು ಅಷ್ಟೇ ಅಚ್ಚುಕಟ್ಟಾಗಿ ಮೂಲ ಭಾವಕ್ಕೆ , ಭಾವನೆಗಳ ಓಟಕ್ಕೆ ಧಕ್ಕೆ, ಆಗದಂತೆ ಪೌಲ್ ಅವರ ಮನದ ಭಾಷೆಯಂತೆಯೆ ಭಾಸವಾಗುವಂತೆ ಮನತಟ್ಟುವ ಪದಪುಂಜಗಳನ್ನು ಬಳಸಿ ಅನುವಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಅನುವಾದಿತ ಈ ಕೃತಿಯನ್ನು ಪ್ರಕಟಿಸಿದ್ದು ದೀಕ್ಷಾ ಪ್ರಕಾಶನ ಮೈಸೂರು. ಬೆಲೆ 200.
ಪುಸ್ತಕಕ್ಕಾಗಿ ಈ ಕೃತಿಯ ಅನುವಾದಕರಾದ
ಡಾ.ಡಿ.ಸಿ ನಂಜುಂಡ ಅವರನ್ನು ಸಹ ಸಂಪರ್ಕಿಸಬಹುದು.

ರವಿರಾಜ್ ಸಾಗರ್ .ಮಂಡಗಳಲೆ
ಹವ್ಯಾಸಿ ಬರಹಗಾರರು
9980952630.

Wednesday 2 September 2020

ಮಕ್ಕಳ ಸಂರಕ್ಷಣೆ, ಸೈಬರ್ ಕ್ರೈಮ್ ಕುರಿತು ಪೊಲೀಸ್ ಪ್ರಕಟಣೆ, ಸಾರ್ವಜನಿಕ ಸಂದೇಶಗಳು

*ಶಿವಮೊಗ್ಗ ಜಿಲ್ಲಾ ಪೊಲೀಸ್* 
*ಸಿ.ಇ.ಎನ್, ಮತ್ತು ಅಪರಾಧ ಪೋಲೀಸ್ ಠಾಣೆ ಶಿವಮೊಗ್ಗ ಜಿಲ್ಲೆ*
             *ಸಾರ್ವಜನಿಕ ಸಂದೇಶಗಳು*
1.
ಸುಂದರ ಯುವತಿಯರ ಫೋಟೋ ಹಾಕಿಕೊಂಡು ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ನಂತರ ಪೋನ್ ನಂಬರ್ ಪಡೆದುಕೊಂಡು ವೀಡಿಯೋ ಕಾಲ್ ಮಾಡಿ, ಬಟ್ಟೆ ತೆಗೆದು ನಗ್ನವಾಗಿ ಮಾತಾಡಿ ನಂತರ ಸದರಿ ವೀಡಿಯೋವನ್ನು ಪೇಸ್ ಬುಕ್ ನಲ್ಲಿ ಶೇರ್ ಮಾಡುವುದಾಗಿ ಹೆದರಿಸಿ ಹಣ ಕೀಳುವವರ ಬಗ್ಗೆ ಎಚ್ಚರಿಕೆಯಿಂದಿರಿ. ( ಸೆಕ್ಸ್ ಟಾರ್ಷನ್ ) ಅಪರಿಚಿತ ವ್ಯಕ್ತಿ ಗಳ ಪ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಬೇಡಿ.

2.
ಆರೋಪಿಗಳು  ಬ್ಯಾಂಕ್ ಮಾನೇಜರ್ ಎಂದು 

 ನಿಮ್ಮ ATM BLOCK
ಆಗಿದೆ ಎಂದು ಫೋನ್ ಮಾಡಿ CARD NO/CVV NO/ OTP ಅನ್ನು ಪಡೆದು ಮೋಸ ಮಾಡುವರು.
ಈ ಬಗ್ಗೆ ಎಚ್ಚರ ಇರಲಿ, ಯಾರಿಗೂ ಯಾವುದೇ ಕಾರಣಕ್ಕೂ OTP ಅನ್ನು ನೀಡಬೇಡಿ. .!

3.
ಗೂಗಲ್ ನಲ್ಲಿ ಮತ್ತು ಟ್ರೂ  ಕಾಲರ್ ನಲ್ಲಿ ಸಿಗುವ ಎಲ್ಲಾ ಮಾಹಿತಿಗಳು ನಿಜವೆಂದು
ನಂಬಬೇಡಿ. ಗೂಗಲ್ ಪೇ,ಪೋನ್ ಪೇ ಇತ್ಯಾದಿಗಳ ಬಗ್ಗೆ ಅರಿವಿಲ್ಲದೇ ಅವುಗಳನ್ನು ಹಣ ವರ್ಗಾವಣೆಗೆ ಬಳಸಬೇಡಿ.
 ಯಾವುದೆ ಲಿಂಕ್ ಸಂದೇಶಗಳನ್ನು ಕ್ಲಿಕ್ ಮಾಡಬೇಡಿ & ಫಾರವರ್ಡ ಮಾಡಬೇಡಿ.

4, 
ಕ್ಲಬ್ ಫ್ಯಾಕ್ಟರಿ ಮತ್ತು ಇತರೆ ಸೈಟ್ ಗಳ ನಕಲಿ ಕಸ್ಟಮರ್ ಕೇರ್ ನಂಬರ್‌ಗಳಿಗೆ ಕಾಲ್ ಮಾಡಿ
ಮೋಸ ಹೋಗಬೇಡಿ.

5, 
ಕೌನ್ ಬನೇಗಾ ಕರೋಡ್ ಪತಿ ,ಭಾರಿ ಮೊತ್ತದ ಲಾಟರಿ ↑ ದಿನಪತ್ರಿಕೆ, ಟಿವಿ ಮಾಧ್ಯಮಗಳ
ಮೂಲಕ ಜಾಹೀರಾತು ನೀಡಿ ಆಮಿಷಗಳ ಮೂಲಕ ಟ್ರಾನ್ಸ್‌ಪೋರ್ಟ್ ಫಿ, ಇತ್ಯಾದಿ
ಫೀಗಳೆಂದು ಅವರ ಖಾತೆಗಳಿಗೆ ಹಣ ಹಾಕಿಸಿಕೊಳ್ಳುವ ವಂಚಕರಿಂದ ದೂರವಿರಿ.!

6. 
ಸೈನಿಕರ/ಯೋಧರ ಹೆಸರಿನಲ್ಲಿ ಆನ್ ಲೈನ್ ಮೂಲಕ OLX ಹಾಗೂ ಇತರೆ ವೆಬ್ ಸೈಟ್ ಗಳ
ಮೂಲಕ ಕಡಿಮೆ ಬೆಲೆಗೆ ಬೈಕ್, ಕಾರು ಇತ್ಯಾದಿ ಕೊಡುವುದಾಗಿ ನಂಬಿಸಿ ಮೋಸ
ಮಾಡುವವರಿದ್ದಾರೆ ಹುಷಾರಾಗಿರಿ.

7, 
ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಪೋಟೋ/ವೀಡಿಯೋ ಕಳುಹಿಸುವವರ ಮತ್ತು ನಕಲಿ
- ಅಕೌಂಟ್ ಕ್ರಿಯೇಟ್ ಮಾಡುವವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು.

8. 
ಎಟಿಎಂ ಕಾರ್ಡಗಳನ್ನು ಬಳಸದೇ ಇದ್ದಾಗ ಅವುಗಳನ್ನು SWITCH OFF / SWITCH ON ಮಾಡುವ ಹಾಗೂ ಎಟಿಎಂ ಕಾರ್ಡನ ದಿನದ ವ್ಯವಹಾರದ ಮಿತಿಯನ್ನು ನಿಗದಿಗೊಳಿಸುವ ಸುರಕ್ಷತಾ
ಆ್ಯಪ್ ಗಳನ್ನು ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ ಸಲಹೆ ಪಡೆದು ಬಳಸಿ. 
ಎಟಿಎಂ ಸೆಂಟರ್‌ನಲ್ಲಿ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡಗಳನ್ನು ನಿಮಗೆ
ಗೊತ್ತಿಲ್ಲದಂತೆ ಬದಲಿಸಿ ಮೋಸ ಮಾಡುವವರ ಬಗ್ಗೆ ಎಚ್ಚರವಿರಲಿ

9, 
ಮಕ್ಕಳ ಅಶ್ಲೀಲ, ಲೈಂಗಿಕ ದೃಶ್ಯದ ಫೋಟೋ  ವೀಡಿಯೋಗಳನ್ನು ವೀಕ್ಷಿಸುವುದು, ಡೌನ್
- ಲೋಡ್ ಮಾಡುವುದು, ಶೇಖರಣೆ ಮಾಡುವುದು ಹಾಗೂ ಫಾರ್‌ವರ್ಡ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ,
10, ಸಾರ್ವಜನಿಕರು ಸೈಬರ್ ಕ್ರೈಂಗೆ ಸಂಬಂಧಪಟ್ಟ ದೂರುಗಳನ್ನು ಆನ್ ಲೈನ್
- ಮೂಲಕವೂ ದಾಖಲಿಸಬಹುದು. ವಿಳಾಸ:www.cybercrime.gov.in
- ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
ಜಿಲ್ಲಾಪೋಲೀಸ್ ಕಂಟ್ರೋಲ್‌ರೂಂ ನಂ. 100/08182-261413
ಸಿ.ಇ.ಎಫ್. ಕೈಂ ಪೊಲೀಸ್ ಠಾಣೆ ನಂ. 08182-261426,ಮೊ: 9480803383

Friday 28 August 2020

ಶಿಕ್ಷಕ ಮಿತ್ರ ಆಪ್.. ಡೌನ್ಲೋಡ್ ಮತ್ತು ಬಳಕೆಯ ಮಾಹಿತಿ


🙏💐 *ಶಿಕ್ಷಕಮಿತ್ರ ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ನಂತರ ನೀವು ಮಾಡಬೇಕಾದದ್ದು...*👇

*೧.ಮೊದಲು ನಿಮ್ಮ ಕೆ.ಜಿ.ಐ.ಡಿ ನಮೂದಿಸಿ*

*೨ ರಿಜಿಸ್ಟರ್ ನೌ ಮೇಲೆ ಕ್ಲಿಕ್ ಮಾಡಿ*

*೩ ಬಂದ ಒ.ಟಿ.ಪಿ ನಮೂದಿಸಿ*

*೪ ನಂತರ ಪಾಸ್ವರ್ಡ ಸೆಟ್ ಮಾಡಿಕೊಳ್ಳಿ ಪಾಸ್ವರ್ಡ ಕನಿಷ್ಠ ೮ ಅಕ್ಷರ ಹೊಂದಿರಬೇಕು ಅದರಲ್ಲಿ ಒಂದು ಕ್ಯಾಪಿಟಲ್ ಅಕ್ಷರ ಒಂದು ಸಂಖ್ಯೆ ಒಂದು ಕ್ಯಾರೆಕ್ಟರ್ ಹೊಂದಿರಬೇಕು*

*೫.ನಂತರ KGID NUM ಹಾಗೂ PASSWORD ಹಾಕಿದಾಗ ನಿಮ್ಮ ಮಾಹಿತಿ ತೆರೆದುಕೊಳ್ಳುತ್ತದೆ.*

*೬ ನಿಮ್ಮ ಭಾವ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಸಂಪೂರ್ಣ ಮಾಹಿತಿ ತೆರೆದುಕೊಳ್ಳುತ್ತದೆ..



Monday 24 August 2020

ನಲಿ ಕಲಿ 1_3 ನೇ ತರಗತಿ ವೀಡಿಯೋ ಪಾಠಗಳು

*https://www.youtube.com/channel/UCHL7pNOVt2ONpfAZdJz67pw*

*ಗುರು ಚೈತನ್ಯ ನಲಿಕಲಿ ಕಲಬುರಗಿ ಜಿಲ್ಲೆ*

*ನಲಿಕಲಿಯಲ್ಲಿ ತಂತ್ರಜ್ಞಾನ ಬಳಕೆ*

*1 ನೇ ಮೈಲಿಗಲ್ಲು ನಿಂದ 17 ಮೈಲಿಗಲ್ಲು ವರೆಗೆ ಎಲ್ಲಾ ಕಲಿಕಾಂಶ ಚಿತ್ರ ಸಹಿತ ವಿವರಣೆ*

*ವೀಡಿಯೋ ಪಾಠಗಳು ಮೈಲಿಗಲ್ಲುವಾರು ತರಗತಿ 1 ನೇ ಭಾಷೆ*

*https://youtu.be/fYSieqHRoFc*
👆ಮೈಲಿಗಲ್ಲು -1 ರ ಗ ಸ ದ ಅ

*https://youtu.be/9LhLth_gwzQ*
👆ಮೈಲಿಗಲ್ಲು - 2 ಜ ವ ಮ ಬ ನ.

*https://youtu.be/v2XV-dghsTE*
👆ಮೈಲಿಗಲ್ಲು - 3 ಪ ಯ ಉ ಡ ಟ ಚ.

*https://youtu.be/pd7ztuZz2kM*
👆 ಮೈಲಿಗಲ್ಲು - 4 ಲ ಷ ಈ ಊ ಕ 

*https://youtu.be/iGbHD5lJvu0*
👆ಮೈಲಿಗಲ್ಲು -5 ಎ ಏ ಇ ಆ ತ ಳ.

*https://youtu.be/nRudAv0wZuw*
👆ಮೈಲಿಗಲ್ಲು -6 ಓ ಔ ಹ ಶ

*https://youtu.be/NGHVe3r6jx0*
👆ಮೈಲಿಗಲ್ಲು - 7 ಐ ಋ ಣ ಛ ಒ

*https://youtu.be/jrGJrESo8eI*
👆 ಮೈಲಿಗಲ್ಲು - 8 ರಾ ಗಾ ಸಾ ದಾ ಜಾ ವಾ.......

*https://youtu.be/a3CP_WKNz4U*
👆ಮೈಲಿಗಲ್ಲು - 9 ರಿ ಗಿ ಸಿ ದಿ ಜಿ..........

*https://youtu.be/KXPI7PWc-2Y*
👆ಮೈಲಿಗಲ್ಲು - 10 ರೀ ಗೀ ಸೀ ದೀ ಜೀ ವೀ........

*ಮಗ್ಗಿಗಳ ಪರಿಚಯ*

*https://youtu.be/VxgeWM2-HC8*
👆2 ರಿಂದ 10 ರ ವರೆಗೆ ಗುಣಾಕಾರ ಮಗ್ಗಿಗಳು.

*ಕಥೆ*

*https://youtu.be/UaObAFe445o*
👆 ಜಾಣ ಕಾಗೆ

*ಪರಿಸರ ಅಧ್ಯಯನ*

*https://youtu.be/TmnztQl0-oI*
👆ತರಕಾರಿ ಅಭಿನಯ ಗೀತೆ

*https://youtu.be/BcgXPDgOSC0*
👆ಕುಟುಂಬ ಪರಿಸರ ಅಧ್ಯಯನ

*ಕಥೆ*

*https://youtu.be/0ac4HcYkQ3w*
👆ಸಿಂಹ ಮತ್ತು ಇಲಿ

*ಅಭಿನಯ ಗೀತೆ*
*https://youtu.be/Wplcl8hTe8o* ಕೈಯಲ್ಲಿ 👆ಕಿನ್ನೂರಿ......

*ಅಭಿನಯ ಗೀತೆ*
*https://youtu.be/u4FEqypDw_0* ಬಾನ 👆ಬಿಳಿ ಚಂದಿರನೆ.....

*ಪದ್ಯ*

*https://youtu.be/jdc4Jgcloo0*
👆 ಹಾವಿನ ಹೆಡೆ ಚಂದ..

*ಪರಿಸರ ಅಧ್ಯಯನ*

*https://youtu.be/Aq6Nl1SbKOU* ನೀರು


*https://youtu.be/U4eLZZL81k8*

👆ಮೈಲಿಗಲ್ಲು - 11 ರು ಗು ಸು ದು ಜು.....

*https://youtu.be/B35yz2MDfQM*

👆ಮೈಲಿಗಲ್ಲು - 12  ರೂ ಗೂ ಸೂ ದೂ ಜೂ......

*https://youtu.be/bUSuYYI-BBw*

👆 ಮೈಲಿಗಲ್ಲು - 13 ರೆ ಗೆ ಸೆ ದೆ ಜೆ......

*https://youtu.be/_4NXmS_CQIE*

👆ಮೈಲಿಗಲ್ಲು - 14 ರೇ ಗೇ ಸೇ ದೇ ಜೇ.....

*https://youtu.be/JYmpMFRT3Sk*

👆ಮೈಲಿಗಲ್ಲು  15 ಧ ಥ ಢ ಭ

*https://youtu.be/CVcEgLooU2E*

👆ಮೈಲಿಗಲ್ಲು - 16 ಠ ಘ ಫ ಝ ಖ

*https://youtu.be/CCrTQ5es0CE*

👆ಮೂಲಾಕ್ಷರಗಳ ಪರಿಚಯ.

*https://youtu.be/hDMoN2-DsXs*

ಮೈಲಿಗಲ್ಲು - 17  ಅಂ ಅಃ ಙ ಞ.

*ಹುಸೇನ್ ವಡಗೇರಿ ಸಹ ಶಿಕ್ಷಕ. ಸ.ಹಿ.ಪ್ರಾ.ಶಾಲೆ ಬಸನಾಳ ಕಲಬುರಗಿ ದಕ್ಷಿಣ ವಲಯ*

*ದೂರವಾಣಿ : 9916394885*

🙏🏻  ಧನ್ಯವಾದಗಳು🙏🏻

Sunday 23 August 2020

ಅಂತರಂಗದ ಅರಿವಿನ ಮಾರ್ಗಗಳು

ಅಂತರಂಗದ  ಅರಿವಿನ ಮಾರ್ಗಗಳು

ಉದಾಹರಣೆಯೊಂದಿಗೆ ಅಂತರಂಗ ಪ್ರವೇಶ:
 ಕೆಲವರ ಉತ್ತಮ  ಕೆಲಸ ಖುಷಿ ನೀಡುತ್ತದೆ, ಅವರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತೀರಿ.ಅದರಿಂದ ನಿಮ್ಮೊಳಗೂ  ಒಂದು ಆಂತರಿಕ ಸಂತಸದ ಸಂಚಲನ ಆಗುತ್ತದೆ. ನಿಮ್ಮ ಮೆಚ್ಚುಗೆಯಿಂದ ಅವರು ಇನ್ನೂ ಹೆಚ್ಚು ಒಳ್ಳೆಯ ಕೆಲಸ ಮಾಡಬಹುದು , ಮಾಡಿದೆ ಇರಬಹುದು ಆದರೆ ನಿಮ್ಮ ಬಗ್ಗೆ ಗೌರವ ತಾಳುತ್ತಾರೆ. ನಿಮ್ಮ ಮೇಲೆ ಹೆಚ್ಚು ವಿಶ್ವಾಸ ಇಡುತ್ತಾರೆ.ನಿಮ್ಮ ಮೆಚ್ಚುಗೆ, ಅಭಿನಂದನೆ ಪರಸ್ಪರ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ನಿಮ್ಮ  ಅಂತರಂಗವನ್ನು  ಧನಾತ್ಮಕವಾಗಿ  ಸಕ್ರಿಯವಾಗಿ 
ಇಟ್ಟುಕೊಳ್ಳಲು ಸಹಾಯವಾಗುತ್ತದೆ. ನಿಮ್ಮ ಅಂತರಂಗ ಶುದ್ಧತೆಯತ್ತ ಸಾಗಿದಷ್ಷೂ   ಸದಾ ಉತ್ಸಾಹದಿಂದ ಇರುವ ನಿಮ್ಮ ಮನಸ್ಸು  ನೆಮ್ಮದಿಯಿಂದ  ಇದ್ದಷ್ಟು ನೀವು ಬೆಳೆಯುತ್ತೀರಿ. ನಿಮ್ಮ ಆರೋಗ್ಯ ಸದಾ ಉತ್ತಮವಾಗಿರುತ್ತದೆ.

ಆದರೆ ಅಸೂಹೆ ... ತೂತು ಬಿದ್ದ ಮಡಿಕೆ.  ನಿಮ್ಮ ಅಂತರಂಗದ ಮಡಿಕೆಯೋಳಗಿದ್ದ ಎಲ್ಲವೂ ಸೋರುತ್ತಾ ಹೋಗುತ್ತದೆ.

ಅಸೂಹೆಯ ಕಣ್ಣಿನಿಂದ ನೀವು  ಯಾರನ್ನು ನೋಡುತ್ತೀರೋ ಅವರ  ಒಳ್ಳೆಯ ಕೆಲಸವೂ ಅಸೂಯೆ ತರುತ್ತದೆ. ಇದರಿಂದ ವೈಯಕ್ತಿಕವಾಗಿ ನಿಮಗೆ ಯಾವ ಲಾಭವಾಗದಿದ್ದರೂ ಅವರಿಗೆ ತೊಂದರೆ ಕೊಡುವುದರಿಂದ ನಿಮ್ಮ ಮನಸ್ಸಿನಲ್ಲಿ ಒಂದು ರೀತಿಯ ವಿದ್ರೋಹಿ ಸಂತಸ ಮನೆ ಮಾಡಬಹುದು. ಆದರೆ ಅದು ನಿಮ್ಮ ಮನಸ್ಸನ್ನು ಕೆಟ್ಟ ಮಾರ್ಗದತ್ತ ಕೊಂಡೊಯ್ಯುತ್ತದೆ. ನಿಮ್ಮ ಮಾನಸಿಕ ನೆಮ್ಮದಿಯನ್ನು ಸದಾ ಕದಡುತ್ತದೆ. ನಿಮ್ಮ ಎದುರಾಳಿ ಎಂದುಕೊಂಡವರ ಬೆಳವಣಿಗೆಯಿಂದ ನಿಮ್ಮ ನಿದ್ದೆ ಕದಡುತ್ತದೆ. ಅಂತರಂಗ  ಅಸೂಯೆಯಿಂದ ಕುದಿಯುತ್ತದೆ. ಅಸೂಯೆಯ ಬಿಸಿ ಮೊದಲು ಸುಡುವುದು ನಿಮ್ಮ ದೇಹ ಮತ್ತು ಮನಸ್ಸನ್ನೇ ಹೊರತು ವೈಯಕ್ತಿಕವಾಗಿ ನಿಮಗೆ ಯಾವ ಉಪಯೋಗವೂ ಆಗದು. ನಿಮ್ಮ ಅಂತರಂಗ ಧನಾತ್ಮಕ ಅರಿವಿನತ್ತ ಸಾಗದು. ನಿಮ್ಮ ಕ್ರಿಯಾಶೀಲತೆ, ನಿಮ್ಮ ಜೀವನ ಉತ್ಸಾಹ ಕಡಿಮೆಯಾಗಿ ವಿಕೃತ ಸಂತೋಷದತ್ತ ಹೆಜ್ಜೆ ಹಾಕಬಹುದು. ಹಾಗಾಗಿ ಅಂತರಂಗದ ಅರಿವು ಅತಿ ಅಗತ್ಯ. ಅಂತರಂಗದೊಳಗೆ ಅಸೂಹೆಯನ್ನು ದೂರ ಇಡುವುದು ಒಳಿತು. ಒಳಹೊಕ್ಕ ಅಸೂಹೆ ಓಡಿಸಿ ಪರಸ್ಪರ ಮೆಚ್ಚುಗೆ ಅಭಿಮಾನ ಬೆಳೆಸಿಕೊಳ್ಳುತ್ತಾ ನಿಮ್ಮನ್ನು ನೀವು ಒಳ್ಳೆಯ ಕೆಲಸಗಳತ್ತ ಸಕ್ರಿಯಗೊಳಿಸಿ ಕೊಳ್ಳಲು ಸಾಗುವ ಮಾರ್ಗ ಕಂಡುಕೊಳ್ಳಬೇಕು. ನಿಮ್ಮ ಅಂತರಂಗದ ಅರಿವು ನಿಮ್ಮ ಕೈಯಲ್ಲೇ ಇರಬೇಕು.ಯಾರದೋ   ಮಾತಿಗೆ ಕಿವಿ ಆಗಬಾರದು

ನಾವು ಮಾಡುವ ಕೆಲಸ ಹೇಗಿರಬೇಕು...

ಋಣಾತ್ಮಕ ಮಾತು ಅಥವಾ ಕೆಟ್ಟತನ ಅಥವಾ ಇನ್ನೊಬ್ಬರಿಗೆ ತೊಂದರೆ ಕೊಡುವ ಕೆಲಸ ನಿರಂತರವಾಗಿ ಮತ್ತು ಅದೇ ಉತ್ಸಾಹದಲ್ಲಿ ಬಹಳ ಕಾಲ ಮಾಡುವುದು ಸಾಧ್ಯವಿಲ್ಲ.

ಅದೇ ರೀತಿ,
ಧನಾತ್ಮಕತೆ ಅಥವಾ ಒಳ್ಳೆಯತನ ಅಥವಾ ಇನ್ನೊಬ್ಬರಿಗೆ ಸಹಾಯ ಮಾಡುವ ಕೆಲಸವನ್ನು ಜೀವನ ಪರ್ಯಂತ ಅದೇ ಉತ್ಸಾಹದಲ್ಲಿ ಮಾಡಬಹುದು.

ಏಕೆಂದರೆ,
ಅಸೂಯೆಯಿಂದಲೋ ಕೋಪದಿಂದಲೋ ಇನ್ನೊಬ್ಬರಿಗೆ ನಾವು ತೊಂದರೆ ಕೊಡಲು ಪ್ರಾರಂಭಿಸಿದರೆ ಆ ವಿರೋಧಿಗೆ ಅದರಿಂದ ತೊಂದರೆಯಾಗಬಹುದು ಅಥವಾ ಆಗದೇ ಇರಬಹುದು. ಆದರೆ ನಮಗೆ ಅದರಿಂದ ಲಾಭವಾಗುವ ಸಾಧ್ಯತೆ ಕಡಿಮೆ. ನಮ್ಮ ಮನಸ್ಥಿತಿ ಕೂಡ ಮಲಿನವಾಗುತ್ತಾ, ನರಮಂಡಲದ ದುರ್ಬಲವಾಗುತ್ತಾ ಸಾಗುತ್ತದೆ. ಇತರರಿಂದ ಅದಕ್ಕೆ ಸಿಗುವ ಬೆಂಬಲ ಕೂಡ ಕಡಿಮೆಯಾಗುತ್ತಾ ಕೊನೆಗೆ ನಮ್ಮ ಬಗ್ಗೆಯೇ ಅವರಲ್ಲಿ ತಿರಸ್ಕಾರ ಮೂಡತೊಡಗುತ್ತದೆ.  ಇದರಿಂದ ಆತ್ಮತೃಪ್ತಿಯೂ ಸಿಗುವುದಿಲ್ಲ. ಜೊತೆಗೆ ನೆಗೆಟಿವ್ ಕೆಲಸ ಮಾಡುವಾಗ ನಮ್ಮ ವಿರೋಧಿಗೆ ತೊಂದರೆಯಾದಾಗ ಮೇಲ್ನೋಟಕ್ಕೆ ನಮ್ಮಲ್ಲಿ ಸ್ವಲ್ಪ ಖುಷಿ ಕಾಣಿಸಿದರು ಆಳದಲ್ಲಿ ಮತ್ತು ದೀರ್ಘಕಾಲದಲ್ಲಿ ಅದರ ಪರಿಣಾಮ ನಮ್ಮ ವಿನಾಶಕ್ಕೆ ಕಾರಣವಾಗುತ್ತದೆ. ನಮಗರಿವಿಲ್ಲದೆ ನಮ್ಮ ಕೆಟ್ಟ ನಡವಳಿಕೆಗೆ ಕಾರಣವಾಗುತ್ತದೆ.

ಅದಕ್ಕೆ ವಿರುದ್ಧವಾಗಿ ನೀವು ಯಾರಿಗಾದರೂ ಒಳ್ಳೆಯದನ್ನು ಮಾಡಲು ಪ್ರಯತ್ನಿಸಿ. ಆಗ ನಿಮ್ಮ ಮಾನಸಿಕ ವ್ಯಕ್ತಿತ್ವವೇ ವಿಭಿನ್ನವಾಗಿ ಇಡೀ ವಾತಾವರಣ ಚೇತೋಹಾರಿಯಾಗಿರುತ್ತದೆ. ನೀವು ಎಷ್ಟೇ ಸಹಾಯ ಮಾಡಿದರೂ ಧಣಿವಾಗುವುದಿಲ್ಲ. ಸಹಾಯ ಮಾಡುವಾಗ ಏನಾದರೂ ನಿರೀಕ್ಷೆ ಇದ್ದರೆ ಅಥವಾ ಸಹಾಯ ಮಾಡಿದವರು ಉಪಕಾರವನ್ನು ಸ್ಮರಿಸದಿದ್ದರೆ ಒಂದಷ್ಟು ಬೇಸರವಾಗಬಹುದೇ ಹೊರತು ಅದಕ್ಕಿಂತ ಹೆಚ್ಚಿನದೇನೂ ಆಗುವುದಿಲ್ಲ.

ವ್ಯಾವಹಾರಿಕ ಮತ್ತು ವೈಯಕ್ತಿಕ ದ್ವೇಷ -  ವಂಚನೆಯ ವಿಷಯಗಳಲ್ಲಿ ಇದು ಹೆಚ್ಚಾಗಿ ಅನ್ವಯಿಸುವುದಿಲ್ಲ. ಆದರೆ ಭಿನ್ನ ಅಭಿಪ್ರಾಯ ಮತ್ತು ಅಸೂಯಾಪರ ಗುಣಗಳಲ್ಲಿ ಇದರ ಪರಿಣಾಮ ಹೆಚ್ಚಾಗಿರುತ್ತದೆ.

ನಾವು ನಿಯಂತ್ರಣ ಸಾಧಿಸಬೇಕಾಗಿರುವುದೇ ಇಲ್ಲಿ. ಇನ್ನು ಮುಂದಾದರು ಇನ್ನೊಬ್ಬರ ಬಗ್ಗೆ ಕೆಟ್ಟ ಮಾಹಿತಿ ಹಂಚುವುದಕ್ಕಿಂತ ಸಾಧ್ಯವಾದರೆ ಒಳ್ಳೆಯದನ್ನು ಹಂಚಿಕೊಳ್ಳೋಣ. ನಾವು ಯಾರೂ ಪರಿಪೂರ್ಣರಲ್ಲ. ಒಂದಲ್ಲ ಒಂದು ಸಂದರ್ಭದಲ್ಲಿ ನಾವು ಕೂಡ ಯಾವುದೋ ರೂಪದ ತಪ್ಪೆಸಗಿರುವ ಸಾಧ್ಯತೆ ಇದ್ದೇ ಇರುತ್ತದೆ. 

ಅಂತರಂಗದ ಆಶಯ

ಯಾರು ಹೇಗೆ ಇದ್ದರು  ಅವರವರ ಆತ್ಮಾವಲೋಕನಕ್ಕೆ ಬಿಟ್ಟು ನಾವು ಮಾತ್ರ ಸಾಧ್ಯವಾದಷ್ಟು ಧನಾತ್ಮಕ ಅರಿವಿನತ್ತ ಸಾಗುವ ಗುಣ ಬೆಳೆಸಿಕೊಳ್ಳೋಣ . ಪರಸ್ಪರ ಒಳ್ಳೆಯ ಕೆಲಸಗಳನ್ನು ಅಭಿನಂದಿಸೋಣ. ಪ್ರೋತ್ಸಾಹಿಸೋಣ. ಪರಸ್ಪರರ ಅಂತರಂಗವನ್ನು ಅರಿಯೋಣ ಎಂಬ ಆಶಯದೊಂದಿಗೆ.

ರವಿರಾಜ್ ಸಾಗರ್.

ನಿಮ್ಮ ಮಕ್ಕಳಿಗೆ ವಿವಿಧ ಸ್ಕಾಲರ್ಶಿಪ್ ಮಾಹಿತಿ ಹಾಗೂ ಸಂಬಂಧಿತ ವೆಬ್ ಸೈಟ್ ನೋಡಿ

ಸಂಪೂರ್ಣ ವಿವರ ಮಾಹಿತಿ ಓದಿ..

ನಿಮಗೆ ಪರಿಚಯವಿರುವ ಬಡ ವಿದ್ಯಾರ್ಥಿಗಳಿಗೆ ಈ  ಕೆಳಗಿನ ವಿದ್ಯಾರ್ಥಿ ವೇತನಗಳ ಬಗ್ಗೆ ದಯವಿಟ್ಟು ಮಾಹಿತಿ ನೀಡಿ.. ಯಾಕೆಂದರೆ  ಮುಂದಿನ ತಿಂಗಳಲ್ಲಿ ಎಲ್ಲಾ ವಿದ್ಯಾರ್ಥಿ ವೇತನಗಳ ಅರ್ಜಿಗಳನ್ನು ಕರೆಯಲಾಗುತ್ತದೆ.

1) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ -
www.karepass.cgg.gov.in

೨) ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ   ವಿದ್ಯಾರ್ಥಿಗಳಿಗೆ 
www.sw.kar.nic.in

೩) ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ -www.gokdom.kar.nic.in

೪) ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ವಿದ್ಯಾರ್ಥಿ ವೇತನ (Ministry of Human Resource Development)  ಪ್ರತಿ ವರ್ಷವು ಡಿಗ್ರಿ ಪ್ರವೇಶ ಪಡೆಯುವ  ಎಲ್ಲಾ ಜಾತಿಯಾ ಬಡ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ - 
www.kar.nic.in/pue

೫) ನಮ್ಮ ರಾಜ್ಯದ ಹೆಮ್ಮೆಯ ಐ.ಟಿ ಕಂಪನಿ ಇನಪೋಸ್ಸಿಸ್ ನೀಡುವ ವಿದ್ಯಾರ್ಥಿ ವೇತನ - www.vidyaposhak.org

೬)ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿ ವೇತನ - 
www.kar.nic.in/pue/

೭) ದೀರುಬಾಯಿ ಅಂಬಾನಿ ವಿದ್ಯಾರ್ಥಿ ವೇತನ ಅಂಗವಿಕಲ ವಿದ್ಯಾರ್ಥಿಗಳಿಗೆ - 
www.kar.nic.in/pue

೮) ಅಂಬೇಡ್ಕರ್ ನ್ಯಾಶನಲ್ ಮೆರಿಟ್ ಅರ್ವಾಡ್ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ - 
www.kar.nic.in/pue

೯) ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಮೂಲ ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ (Inspire Scholarship) - 
www. kar.nic.in/pue

೧೦) ಮೆರಿಟ್ ಸ್ಕಾಲರಶಿಪ್ - ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ಶೇ.೮೦ ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಬಡ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ(ಇಂಜಿನಿಯರಿಂಗ್, ವೈದ್ಯಕೀಯ, ಕೃಷಿ) ಶುಲ್ಕವನ್ನು ಸರ್ಕಾರ ನೀಡುತ್ತದೆ – 
www. kar.nic.in/pue

೧೧) ನಮ್ಮ ರಾಜ್ಯದ ಹೆಮ್ಮೆಯ ಇನ್ನೊಂದು ಐ.ಟಿ ಕಂಪನಿ  ವೀಪ್ರೊ ಅವರ  ಅಜೀಮ್ ಪ್ರೇಮಜೀ ಫೌಂಡೇಷನ್ -www.azimpremjifoundation.org

12. ​ವಿದ್ಯಸಿರಿ​ ​ಮತ್ತು ಶುಲ್ಕ​ ​ವಿನಾಯಿತಿ​
http://backwardclasses.kar.nic.in/BCWD/Website/backwardclassesMain.html 

    http://backwardclasses.kar.nic.in/BCWD/Website/Educational_Scholarships.html

    Information ::

   http://www.scholarshipx.in/2015/10/karnataka-scholarship-onlline-last-date.html

13. ​ಸರ್ಕಾರದ​ ​ಧನಸಹಾಯಗಳ​ ​ವೆಬ್ ವಿಳಾಸ​

http://karepass.cgg.gov.in/ 

14. ​ಜಿಂದಾಲ್ scholarship​

 http://www.sitaramjindalfoundation.org/scholarships.php 

15. ​B.L ಹೇಮವತಿ ಧನಸಹಾಯ​

 http://www.blhtrust.org/schpro.html 

16. ​ಕೇಂದ್ರ ಸರ್ಕಾರದ ಧನಸಹಾಯಗಳು​

Central Govt Scholarship

     http://mhrd.gov.in/ 

17.  ​Indian Oil Scholarship​

     https://www.iocl.com/AboutUs/AcademicScholarships.