ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Wednesday 10 October 2018

ಈವರೆಗಿನ ಕನ್ನಡ ಸಾಹಿತ್ಯ ಸಮ್ಮೇಳನ ಪಟ್ಟಿ

*ಕನ್ನಡ ಸಾಹಿತ್ಯ ಸಮ್ಮೇಳನಗಳು*

ಕ್ರಮಸಂಖ್ಯೆ
ವರ್ಷಸ್ಥಳಅಧ್ಯಕ್ಷತೆ
೦೧
೧೯೧೫ಬೆಂಗಳೂರುಎಚ್.ವಿ.ನಂಜುಂಡಯ್ಯ
೦೨
೧೯೧೬ಬೆಂಗಳೂರುಎಚ್.ವಿ.ನಂಜುಂಡಯ್ಯ
೦೩
೧೯೧೭ಮೈಸೂರುಎಚ್.ವಿ.ನಂಜುಂಡಯ್ಯ
೦೪
೧೯೧೮ಧಾರವಾಡಆರ್.ನರಸಿಂಹಾಚಾರ್
೦೫
೧೯೧೯ಹಾಸನಕರ್ಪೂರ ಶ್ರೀನಿವಾಸರಾವ್
೦೬
೧೯೨೦ಹೊಸಪೇಟೆರೊದ್ದ ಶ್ರೀನಿವಾಸರಾವ
೦೭
೧೯೨೧ಚಿಕ್ಕಮಗಳೂರುಕೆ.ಪಿ.ಪುಟ್ಟಣ್ಣ ಶೆಟ್ಟಿ
೦೮
೧೯೨೨ದಾವಣಗೆರೆಎಂ.ವೆಂಕಟಕೃಷ್ಣಯ್ಯ
೦೯
೧೯೨೩ಬಿಜಾಪುರಸಿದ್ಧಾಂತಿ ಶಿವಶಂಕರ ಶಾಸ್ತ್ರಿ
೧೦
೧೯೨೪ಕೋಲಾರಹೊಸಕೋಟೆ ಕೃಷ್ಣಶಾಸ್ತ್ರಿ
೧೧
೧೯೨೫ಬೆಳಗಾವಿಬೆನಗಲ್ ರಾಮರಾವ್
೧೨
೧೯೨೬ಬಳ್ಳಾರಿಫ.ಗು.ಹಳಕಟ್ಟಿ
೧೩
೧೯೨೭ಮಂಗಳೂರುಆರ್.ತಾತಾಚಾರ್ಯ
೧೪
೧೯೨೮ಕಲಬುರ್ಗಿಬಿ ಎಂ ಶ್ರೀ
೧೫
೧೯೨೯ಬೆಳಗಾವಿಮಾಸ್ತಿ ವೆಂಕಟೇಶ ಅಯ್ಯಂಗಾರ್
೧೬
೧೯೩೦ಮೈಸೂರುಆಲೂರು ವೆಂಕಟರಾಯರು
೧೭
೧೯೩೧ಕಾರವಾರಮುಳಿಯ ತಿಮ್ಮಪ್ಪಯ್ಯ
೧೮
೧೯೩೨ಮಡಿಕೇರಿಡಿ ವಿ ಜಿ
೧೯
೧೯೩೩ಹುಬ್ಬಳ್ಳಿವೈ.ನಾಗೇಶ ಶಾಸ್ತ್ರಿ
೨೦
೧೯೩೪ರಾಯಚೂರುಪಂಜೆ ಮಂಗೇಶರಾಯರು
೨೧
೧೯೩೫ಮುಂಬಯಿಎನ್.ಎಸ್.ಸುಬ್ಬರಾವ್
೨೨
೧೯೩೭ಜಮಖಂಡಿಬೆಳ್ಳಾವೆ ವೆಂಕಟನಾರಣಪ್ಪ
೨೩
೧೯೩೮ಬಳ್ಳಾರಿರಂಗನಾಥ ದಿವಾಕರ
೨೪
೧೯೩೯ಬೆಳಗಾವಿಮುದವೀಡು ಕೃಷ್ಣರಾಯರು
೨೫
೧೯೪೦ಧಾರವಾಡವೈ.ಚಂದ್ರಶೇಖರ ಶಾಸ್ತ್ರಿ
೨೬
೧೯೪೧ಹೈದರಾಬಾದ್ಎ.ಆರ್.ಕೃಷ್ಣಶಾಸ್ತ್ರಿ
೨೭
೧೯೪೩ಶಿವಮೊಗ್ಗದ.ರಾ.ಬೇಂದ್ರೆ
೨೮
೧೯೪೪ರಬಕವಿಎಸ್.ಎಸ್.ಬಸವನಾಳ
೨೯
೧೯೪೫ಮದರಾಸುಟಿ ಪಿ ಕೈಲಾಸಂ
೩೦
೧೯೪೭ಹರಪನಹಳ್ಳಿಸಿ.ಕೆ.ವೆಂಕಟರಾಮಯ್ಯ
೩೧
೧೯೪೮ಕಾಸರಗೋಡುತಿ.ತಾ.ಶರ್ಮ
೩೨
೧೯೪೯ಕಲಬುರ್ಗಿಉತ್ತಂಗಿ ಚನ್ನಪ್ಪ
೩೩
೧೯೫೦ಸೊಲ್ಲಾಪುರಎಮ್.ಆರ್.ಶ್ರೀನಿವಾಸಮೂರ್ತಿ
೩೪
೧೯೫೧ಮುಂಬಯಿಗೋವಿಂದ ಪೈ
೩೫
೧೯೫೨ಬೇಲೂರುಎಸ್.ಸಿ.ನಂದೀಮಠ
೩೬
೧೯೫೪ಕುಮಟಾವಿ.ಸೀತಾರಾಮಯ್ಯ
೩೭
೧೯೫೫ಮೈಸೂರುಶಿವರಾಮ ಕಾರಂತ
೩೮
೧೯೫೬ರಾಯಚೂರುಶ್ರೀರಂಗ
೩೯
೧೯೫೭ಧಾರವಾಡಕುವೆಂಪು
೪೦
೧೯೫೮ಬಳ್ಳಾರಿವಿ.ಕೆ.ಗೋಕಾಕ
೪೧
೧೯೫೯*ಬೀದರ*ಡಿ.ಎಲ್.ನರಸಿಂಹಾಚಾರ್
೪೨
೧೯೬೦ಮಣಿಪಾಲಅ.ನ. ಕೃಷ್ಣರಾಯ
೪೩
೧೯೬೧ಗದಗಕೆ.ಜಿ.ಕುಂದಣಗಾರ
೪೪
೧೯೬೩ಸಿದ್ದಗಂಗಾರಂ.ಶ್ರೀ.ಮುಗಳಿ
೪೫
೧೯೬೫ಕಾರವಾರಕಡೆಂಗೋಡ್ಲು ಶಂಕರಭಟ್ಟ
೪೬
೧೯೬೭ಶ್ರವಣಬೆಳಗೊಳಆ.ನೇ.ಉಪಾಧ್ಯೆ
೪೭
೧೯೭೦ಬೆಂಗಳೂರುದೇ.ಜವರೆಗೌಡ
೪೮
೧೯೭೪ಮಂಡ್ಯಜಯದೇವಿತಾಯಿ ಲಿಗಾಡೆ
೪೯
೧೯೭೬ಶಿವಮೊಗ್ಗಎಸ್.ವಿ.ರಂಗಣ್ಣ
೫೦
೧೯೭೮ದೆಹಲಿಜಿ.ಪಿ.ರಾಜರತ್ನಂ
೫೧
೧೯೭೯ಧರ್ಮಸ್ಥಳಗೋಪಾಲಕೃಷ್ಣ ಅಡಿಗ
೫೨
೧೯೮೦ಬೆಳಗಾವಿಬಸವರಾಜ ಕಟ್ಟೀಮನಿ
೫೩
೧೯೮೧ಚಿಕ್ಕಮಗಳೂರುಪು.ತಿ.ನರಸಿಂಹಾಚಾರ್
೫೪
೧೯೮೧ಮಡಿಕೇರಿಶಂ.ಬಾ.ಜೋಶಿ
೫೫
೧೯೮೨ಶಿರಸಿಗೊರೂರು ರಾಮಸ್ವಾಮಿ ಐಯಂಗಾರ್
೫೬
೧೯೮೪ಕೈವಾರಎ.ಎನ್.ಮೂರ್ತಿ ರಾವ್
೫೭
೧೯೮೫*ಬೀದರ*ಹಾ.ಮಾ.ನಾಯಕ
೫೮
೧೯೮೭ಕಲಬುರ್ಗಿಸಿದ್ದಯ್ಯ ಪುರಾಣಿಕ
೫೯
೧೯೯೦ಹುಬ್ಬಳ್ಳಿಆರ್.ಸಿ.ಹಿರೇಮಠ
೬೦
೧೯೯೧ಮೈಸೂರುಕೆ.ಎಸ್. ನರಸಿಂಹಸ್ವಾಮಿ
೬೧
೧೯೯೨ದಾವಣಗೆರೆಜಿ.ಎಸ್.ಶಿವರುದ್ರಪ್ಪ
೬೨
೧೯೯೩ಕೊಪ್ಪ್ಪಳಸಿಂಪಿ ಲಿಂಗಣ್ಣ
೬೩
೧೯೯೪ಮಂಡ್ಯಚದುರಂಗ
೬೪
೧೯೯೫ಮುಧೋಳಎಚ್ ಎಲ್ ನಾಗೇಗೌಡ
೬೫
೧೯೯೬ಹಾಸನಚನ್ನವೀರ ಕಣವಿ
೬೬
೧೯೯೭ಮಂಗಳೂರುಕಯ್ಯಾರ ಕಿಞ್ಞಣ್ಣ ರೈ
೬೭
೧೯೯೯ಕನಕಪುರಎಸ್.ಎಲ್.ಭೈರಪ್ಪ
೬೮
೨೦೦೦ಬಾಗಲಕೋಟೆಶಾಂತಾದೇವಿ ಮಾಳವಾಡ
೬೯
೨೦೦೨ತುಮಕೂರುಯು.ಆರ್. ಅನಂತಮೂರ್ತಿ
೭೦
೨೦೦೩ಬೆಳಗಾವಿಡಾ.ಪಾಟೀಲ ಪುಟ್ಟಪ್ಪ
೭೧
೨೦೦೪ಮೂಡುಬಿದಿರೆಕಮಲಾ ಹಂಪನಾ
೭೨
೨೦೦೬*ಬೀದರ*ಶಾಂತರಸ ಹೆಂಬೆರಳು
೭೩
೨೦೦೭ಶಿವಮೊಗ್ಗನಿಸಾರ್ ಅಹಮ್ಮದ್
೭೪
೨೦೦೮ಉಡುಪಿಎಲ್. ಎಸ್. ಶೇಷಗಿರಿ ರಾವ್
೭೫
೨೦೦೯ಚಿತ್ರದುರ್ಗಎಲ್. ಬಸವರಾಜು
೭೬
೨೦೧೦ಗದಗಡಾ. ಗೀತಾ ನಾಗಭೂಷಣ
೭೭
೨೦೧೧ಬೆಂಗಳೂರುಜಿ. ವೆಂಕಟಸುಬ್ಬಯ್ಯ
೭೮
೨೦೧೨ಗಂಗಾವತಿಸಿ.ಪಿ ಕೃಷ್ಣಕುಮಾರ್
೭೯
೨೦೧೩ವಿಜಯಪುರಕೋ.ಚನ್ನಬಸಪ್ಪ
೮೦
೨೦೧೪ಕೊಡಗುನಾ ಡಿಸೋಜ
೮೧
೨೦೧೫ಶ್ರವಣಬೆಳಗೊಳಡಾ. ಸಿದ್ದಲಿಂಗಯ್ಯ
೮೨
೨೦೧೬ರಾಯಚೂರುಬರಗೂರು ರಾಮಚಂದ್ರಪ್ಪ
೮೩
೨೦೧೭ಮೈಸೂರುಚಂದ್ರಶೇಖರ ಪಾಟೀಲ
೮೪
೨೦೧೮ *ಧಾರವಾಡ/ ಡಾ.ಚಂದ್ರಶೇಖರ ಕಂಬಾರ*

ಸಂಗ್ರಹ

Saturday 6 October 2018

ಯಾಕ ಕಾಡತಾವ ಕಬ್ಬಕ್ಕಿ

ಏನ ಕಾಡತಾವ ಕಬ್ಬಕ್ಕಿ
ಹೊಲದಾಗ ಇರುವಾಕೀ
ನಾ ಒಬ್ಬಾಕೀ||

ಅತ್ತಲಿಂದ ಬರುತಾವ
ಮೂರಕ್ಕೀ
ಇತ್ತಲಿಂದ ಬರುತಾವ
ಆರಕ್ಕೀ
ಸಾಲು ಸಾಲಾಗೀ
ಕವಣಿಯ ಬೀಸಿ ಬೀಸೀ
ಬೇಸರಕೀ||

ಬೆಳಸಿಯ ತಿನ್ನುತ
ಡುರಕೀಯ ಹೊಡೆಯುತ
ಶಿಶುನಾಳಧೀಶನ
ಮುದಿಹಕ್ಕಿ||

ವಸುಧೆಯೊಳಗೆ
ನಮ್ಮ ಶಿಶುನಾಳಧೀಶನ
ಪಾದವ ಹಿಡಿಯೋಣ ಬಾ||

**  ಮತ್ತೊಂದು ಭಜನೀ ಪದಾ
( ಹೇಳಿದ್ದು- ಬಾಬು ಚಕ್ಕಡಿ)

Tuesday 2 October 2018

ವಿಶ್ವ ಕನ್ನಡ ಸಮ್ಮೇಳನ ಬಗ್ಗೆ ಒಂದಿಷ್ಟು ತಿಳಿಯಿರಿ

ವಿಶ್ವ ಕನ್ನಡ ಸಮ್ಮೇಳನವು ಜಗತ್ತಿನಾದ್ಯಂತ ಹರಡಿರುವ ಕನ್ನಡಿಗರನ್ನು ಒಗ್ಗೂಡಿಸಿ ಕನ್ನಡ ನಾಡು-ನುಡಿಗೆ ಸಂಬಂಧಿಸಿದ ವಿಷಯಗಳನ್ನು ಕುರಿತು ನಡೆಸುವ ಸಮ್ಮೇಳನ. ಈವರೆಗೆ ವಿಶ್ವ ಕನ್ನಡ ಸಮ್ಮೇಳನವು ಎರಡು ಬಾರಿ ನಡೆದಿದೆ. ಇನ್ನು ಮುಂದೆ ಐದು ವರ್ಷಗಳಿಗೊಮ್ಮೆ ನಡೆಸುವ ಯೋಜನೆಯನ್ನು ಎರಡನೆಯ ಸಮ್ಮೇಳನದಲ್ಲಿ ಘೋಷಿಸಲಾಗಿದೆ.

ಮೊದಲನೆಯ ವಿಶ್ವ ಕನ್ನಡ ಸಮ್ಮೇಳನ

ಮೊದಲನೆಯ ವಿಶ್ವ ಕನ್ನಡ ಸಮ್ಮೇಳನವು ೧೯೮೫ರಲ್ಲಿಮೈಸೂರಿನಲ್ಲಿ ನಡೆಯಿತು. ಸಾಹಿತಿ ಶಿವರಾಮ ಕಾರಂತರಅಧ್ಯಕ್ಷತೆಯಲ್ಲಿ ರಾಷ್ಟ್ರಕವಿ ಕುವೆಂಪುರವರು ಈ ಸಮ್ಮೇಳನವನ್ನು ಉದ್ಘಾಟಿಸಿದರು.

ಎರಡನೆಯ ವಿಶ್ವ ಕನ್ನಡ ಸಮ್ಮೇಳನ

ಎರಡನೆಯ ವಿಶ್ವ ಕನ್ನಡ ಸಮ್ಮೇಳನವು ೨೦೧೧ರಮಾರ್ಚ್ ೧೧, ೧೨, ೧೩ರಂದು ಬೆಳಗಾವಿಯಲ್ಲಿನಡೆಯಿತು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಅಧ್ಯಕ್ಷತೆಯಲ್ಲಿ ಇನ್ಫೋಸಿಸ್ ಸಂಸ್ಥೆಯ ಸ್ಥಾಪಕ ಎನ್ ಆರ್ ನಾರಾಯಣಮೂರ್ತಿಯವರು ಈ ಸಮ್ಮೇಳನವನ್ನು ಉದ್ಘಾಟಿಸಿದರು. ವಿಶೇಷ ಅತಿಥಿಯಾಗಿ ಶ್ರೀಮತಿ ಐಶ್ವರ್ಯಾ ರೈ ಬಚ್ಚನ್ ಭಾಗವಹಿಸಿದ್ದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನಾಡೋಜ ದೇ ಜವರೇಗೌಡರು ವಹಿಸಿದ್ದರು. ಈ ಸಮ್ಮೇಳನಕ್ಕಾಗಿ ಸಾವಿರಾರು ಜನ ದೇಶ ವಿದೇಶಗಳಿಂದ ಆಗಮಿಸಿದ್ದರು.

Monday 1 October 2018

ಗಾಂಧೀಜಿಯವರ 15 ಸ್ಮಾರಕಗಳು ಎಲ್ಲೆಲ್ಲಿವೆ ಗೊತ್ತೇ...

ಗಾಂಧೀಜಿಯವರ ಚಿತಾಭಸ್ಮದಿಂದ ಸ್ಥಾಪಿತವಾದ ಗಾಂಧೀ ಸ್ಮಾರಕಗಳು ದೇಶದ 15 ಕಡೆಗಳಲ್ಲಿವೆ. ವಿಶೇಷವೆಂದರೆ ಅವುಗಳಲ್ಲಿ 12 ಕರ್ನಾಟಕದಲ್ಲಿಯೇ ಇವೆ. ಇನ್ನೂ ವಿಶೇಷವೆಂದರೆ 10 ಸ್ಮಾರಕಗಳು ಉತ್ತರ ಕರ್ನಾಟಕ ಭಾಗದಲ್ಲಿವೆ.

•ಹುಬ್ಬಳ್ಳಿಯ ಅಯೋಧ್ಯಾನಗರ,
•ಹುಬ್ಬಳ್ಳಿಯ ಮಹಿಳಾ ವಿದ್ಯಾಪೀಠ,
•ಧಾರವಾಡದ ಆಝಾದ್ ಉಪವನ,
•ಬೆಳಗಾವಿಯ ಮುಗಟಖಾನ ಹುಬ್ಬಳ್ಳಿ,
•ರಾಮದುರ್ಗ ತಾಲೂಕಿನ ಸುರೇಬಾನ,
•ಬಳ್ಳಾರಿಯ ಕೌಲಪೇಟ, ಕೂಡ್ಲಗಿ,
•ಹಾಸನದ ಅರಸಿಕೇರಿ,
•ಗದಗನ ಬೆಟಗೇರಿ,
•ಹಾವೇರಿಯ ಸಂಗೂರ, ಕರ್ಜಗಿ
ಹಾಗೂ ಮಡಿಕೇರಿ
ಸೇರಿದಂತೆ 12 ಸ್ಥಳಗಳಲ್ಲಿಯೇ ಚಿತಾಭಸ್ಮ ಸ್ಮಾರಕವಿರುವುದು ವಿಶೇಷ. ಅದರಲ್ಲಿಯೂ ಗಾಂಧೀಜಿಯವರಿಗೆ ಪ್ರಿಯವಾದ ದಲಿತಕೇರಿಯಲ್ಲಿ ಸ್ಥಾಪಿತವಾದ ಗಾಂಧಿ ಸ್ಮಾರಕ ಎಂಬ ಹೆಗ್ಗಳಿಕೆ ಹುಬ್ಬಳ್ಳಿ ಅಯೋಧ್ಯಾನಗರ ಸ್ಮಾರಕಕ್ಕಿದೆ. ( ಮಾಹಿತಿ: ಪ್ರಕಾಶ .ಎಸ್. ಶೇಟ್ ) ಗಾಂಧಿ ಜೀವಂತಿಕೆಯ ತಾಣಗಳೆನಿಕೊಂಡಿರುವ ಈ ಸ್ಮಾರಕಗಳು, ಇತಿಹಾಸ ಸೇರುವ ಹಂತದಲ್ಲಿವೆ.

*ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು*

Saturday 22 September 2018

ಮಹಾಕವಿಯ ಮಕ್ಕಳ ನಾಟಕ

ಮಕ್ಕಳ ನಾಟಕಗಳೆಂದರೆ ಅವರ ಸಮಸ್ಯೆ , ನೋವು, ಕಲಿಕೆ, ಸಮಾಜದ ವಾಸ್ತವ ಸಮಸ್ಯೆಗಳ ಉದ್ದುದ್ದ ಸಂಬಾಷಣೆ, ಹಿಂದಿನ ಯಾವುದೋ ವ್ಯಕ್ತಿ  ಚರಿತ್ರೆ ಅಭಿನಯ , ಇನ್ನಿತರೆ ಅಂಶಗಳತ್ತಲೇ ವಾಲುತ್ತಿರುವ ನಾಟಕಕಾರರಿಗಿಂತ ಕೊಂಚ ವಿಭಿನ್ನವಾಗಿ ಯೋಚಿಸಿ ಕುವೆಂಪು ಅವರು ಬರೆದ ವಿಶಿಷ್ಟ ಗೀತ ನಾಟಕ ಈ ಮೋಡಣ್ಣನ ತಮ್ಮ. ಬಹಳಷ್ಟು ವಿಷಯ , ವಸ್ತು ಸಂಭಾಷಣೆ ,ಭಾಷೆಯ ಬಳಕೆ ಮಕ್ಕಳ ಆಸಕ್ತಿ ಮತ್ತಿತರ ಅಂಶ ದತ್ತ ಗಮನವಿಟ್ಟು ಬರೆದ ವಿಶೇಷ ಪ್ರಯೋಗದ ನಾಟಕ ವಾಗಿ ಇದು ಗಮನ ಸೆಳೆಯಿತು. ಮಹಾಕಾವ್ಯ ಬರೆದರೂ ಮಕ್ಕಳ ಕಾವ್ಯ, ನಾಟಕಕ್ಕೂ ಕುವೆಂಪು ಅವರು ಅಂದೆ ತೊಡಗಿಕೊಂಡು ವಿಶಿಷ್ಟ ನಾಟಕ ಕವಿತೆ ಬರೆದು   ಮಕ್ಕಳ ಸಾಹಿತ್ಯ ವಿಸ್ತಾರಗೊಳಿಸಿದ್ದಾರೆ.ಕೆಲವರಿಂದ ಮಕ್ಕಳ ಸಾಹಿತ್ಯ ಚರ್ಚೆ  ನಿರ್ಲಕ್ಷೆ ಗೋಳಗಾದದ್ದೂ ಮಾತ್ರ ಗಂಭೀರ ವಿಷಯ.

Thursday 20 September 2018

ಕಾಗುಣಿತಗಳಿಲ್ಲದ ಪದ್ಯ

ಕಾಗುಣಿತಾಕ್ಷರಗಳೇ ಇಲ್ಲದ ಪದ್ಯ!

ಘನರಸಶಯನತನಯ ಮದಮಥನ ಧವಳಘನ
ಘನವರದ ಶತದಳನಯನ ನಯನಪದಕಮಳ
ವನದಗಮನಧವ ಶತದಳವರತಪನದ ದಹನ ನಯನಪರತರ ಗದಧರ
ಸನಕನತ ಸಮದಶಯನ ಶಮನಶಮನ ಭವರ
ಮನಭಯ ಶಮನ ಗರಳಧರ ಗರಳಧರ ಪರಗ
ಮನತನಯ ಶಶಧರಧರ ಧರವರಭವನ ಕನದನಘ ಭವಹರಪರಮವ

(ಅರ್ಥ- ಸಮುದ್ರಶಯನನಾದ ವಿಷ್ಣುವಿನ ಮಗ ಮನ್ಮಥನ ಗರ್ವಭಂಗ ಮಾಡಿದವ, ಬೆಳ್ಳಗಿನ ಮೈಯವ, ಶ್ರೇಷ್ಠ ವರಗಳನ್ನು ನೀಡುವವ, ವಿಷ್ಣುವಿನ ಕಣ್ಣಿನಿಂದ ಅರ್ಚಿಸಲ್ಪಟ್ಟ ಪಾದಪದ್ಮವುಳ್ಳವ, ಚಂದ್ರ ಸೂರ್ಯ ಮತ್ತು ಅಗ್ನಿಗಳನ್ನೇ ಕಣ್ಣಾಗಿ ಉಳ್ಳವ, ಶ್ರೇಷ್ಠ, ರೋಗನಿವಾರಕ, ಸನಕನಿಂದ ನಮಸ್ಕೃತನಾದವ, ಯಮನನ್ನು ನಿಗ್ರಹಿಸಿದವ, ಜನ್ಮ ಹಿಂಗಿಸಿದವ, ಭಯ ಹೋಗಲಾಡಿಸಿದವ, ವಿಷಕಂಠ, ಚಂದ್ರಶೇಖರ, ಕೈಲಾಸವಾಸಿ, ಪಾಪರಹಿತ, ಭವನೆಂದೂ ಹರನೆಂದೂ ಕೀರ್ತಿತ ಈಶ್ವರ). 

ಪದ್ಮಣಾಂಕ ಎಂಬ ಕವಿಯ ಪದ್ಮರಾಜಪುರಾಣದಲ್ಲಿನ ಪದ್ಯ

Friday 14 September 2018

bhumi butti chittara- raviraj sagar/ಭೂಮಿ ಬುಟ್ಟಿ ಚಿತ್ತಾರ ಹಾಗು ಹಸೆಗೋಡೆ ಚ...



ನಮ್ಮ ಜನಪದರ ಹಸೆಗೋಡೆ ಹಾಗು ಭೂಮಿ ಬುಟ್ಟಿ ಚಿತ್ತಾರ ಕಲೆ ಪರಿಚಯ - ನಮ್ಮೂರ ಜಾನಪದ ಅನುಸಂಧಾನದಲ್ಲಿ ..

ಈ ಲಿಂಕ್ ಕ್ಲಿಕ್ ಮಾಡಿ ..ಸಬ್ ಸ್ಕ್ರೈಬ್ / subscraibe ಬಟನ್ ಒತ್ತಿ ಹೆಚ್ಚು ಜಾನಪದ ವಿಡಿಯೋಗಳಿಗಾಗಿ ಬೆಂಬಲಿಸಿ