ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Monday 1 October 2018

ಗಾಂಧೀಜಿಯವರ 15 ಸ್ಮಾರಕಗಳು ಎಲ್ಲೆಲ್ಲಿವೆ ಗೊತ್ತೇ...

ಗಾಂಧೀಜಿಯವರ ಚಿತಾಭಸ್ಮದಿಂದ ಸ್ಥಾಪಿತವಾದ ಗಾಂಧೀ ಸ್ಮಾರಕಗಳು ದೇಶದ 15 ಕಡೆಗಳಲ್ಲಿವೆ. ವಿಶೇಷವೆಂದರೆ ಅವುಗಳಲ್ಲಿ 12 ಕರ್ನಾಟಕದಲ್ಲಿಯೇ ಇವೆ. ಇನ್ನೂ ವಿಶೇಷವೆಂದರೆ 10 ಸ್ಮಾರಕಗಳು ಉತ್ತರ ಕರ್ನಾಟಕ ಭಾಗದಲ್ಲಿವೆ.

•ಹುಬ್ಬಳ್ಳಿಯ ಅಯೋಧ್ಯಾನಗರ,
•ಹುಬ್ಬಳ್ಳಿಯ ಮಹಿಳಾ ವಿದ್ಯಾಪೀಠ,
•ಧಾರವಾಡದ ಆಝಾದ್ ಉಪವನ,
•ಬೆಳಗಾವಿಯ ಮುಗಟಖಾನ ಹುಬ್ಬಳ್ಳಿ,
•ರಾಮದುರ್ಗ ತಾಲೂಕಿನ ಸುರೇಬಾನ,
•ಬಳ್ಳಾರಿಯ ಕೌಲಪೇಟ, ಕೂಡ್ಲಗಿ,
•ಹಾಸನದ ಅರಸಿಕೇರಿ,
•ಗದಗನ ಬೆಟಗೇರಿ,
•ಹಾವೇರಿಯ ಸಂಗೂರ, ಕರ್ಜಗಿ
ಹಾಗೂ ಮಡಿಕೇರಿ
ಸೇರಿದಂತೆ 12 ಸ್ಥಳಗಳಲ್ಲಿಯೇ ಚಿತಾಭಸ್ಮ ಸ್ಮಾರಕವಿರುವುದು ವಿಶೇಷ. ಅದರಲ್ಲಿಯೂ ಗಾಂಧೀಜಿಯವರಿಗೆ ಪ್ರಿಯವಾದ ದಲಿತಕೇರಿಯಲ್ಲಿ ಸ್ಥಾಪಿತವಾದ ಗಾಂಧಿ ಸ್ಮಾರಕ ಎಂಬ ಹೆಗ್ಗಳಿಕೆ ಹುಬ್ಬಳ್ಳಿ ಅಯೋಧ್ಯಾನಗರ ಸ್ಮಾರಕಕ್ಕಿದೆ. ( ಮಾಹಿತಿ: ಪ್ರಕಾಶ .ಎಸ್. ಶೇಟ್ ) ಗಾಂಧಿ ಜೀವಂತಿಕೆಯ ತಾಣಗಳೆನಿಕೊಂಡಿರುವ ಈ ಸ್ಮಾರಕಗಳು, ಇತಿಹಾಸ ಸೇರುವ ಹಂತದಲ್ಲಿವೆ.

*ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು*

No comments:

Post a Comment