ಜಾಗತೀಕರಣ ನುಂಗಿದ ಹಳ್ಳಿಯ "ತಿಥಿ"
..........................................
ಈಗಾಗಲೇ 15 ರಾಷ್ಟ್ರೀಯ. .. ವಿವಿಧ ಅಂತರಾಷ್ಟೀಯ ಪ್ರಶಸ್ತಿ ಪಡೆದು ಜಗತ್ತಿನೆಲ್ಲೆಡೆ ಸುದ್ದಿಯಾಗುತ್ತಿರುವ "ತಿಥಿ"
ಕನ್ನಡ ಸಿನಿಮಾ ರಂಗದ ವಿಶಿಷ್ಟ ಪ್ರಯೋಗ ಎನ್ನುವುದು ದೊಡ್ಡ ಹೆಮ್ಮೆ. .
ಇಂದಿನ ಜಾಗತೀಕರಣದ ರಿಯಲ್ ಎಸ್ಟೇಟ್ ಉದ್ಯಮ, ಮೊಬೈಲ್, ಜನರನ್ನು ಮರುಳು ಮಾಡಿರುವ ಪರಿ ಹಾಗೂ ಅಗತ್ಯ ಎನಿಸುವ ದ್ವಂದ್ವ. . ಅಭಿರುಚಿ ತಪ್ಪಿದ ಜನಗಳ ಬದುಕು ಹಳ್ಳಿಗಳ ಬದಲಾವಣೆ ಎಲ್ಲವನ್ನೂ ಸರಳ ನಿರೂಪಣೆಯ ಸಹಜ ಕತೆಯ ಆಸಾಮಾನ್ಯ ಎನ್ನುವ ಪ್ರಯೋಗವಾಗಿಯೂ ಈ ಸಿನಿಮಾ ಅತಿ ವಿಶಿಷ್ಟವಾಗಿ ಪ್ರೇಕ್ಷಕರನ್ನು ಹತ್ತಿರ ಕರೆದು ಇದೂ ಒಂದು ಸಿನಿಮಾ ಹಾಗೂ ಅದರಾಚೆಯ ಪ್ರಯತ್ನ ಎನ್ನುವುದು ಮನದಟ್ಟು ಮಾಡಿ ಕಾಡುತ್ತದೆ.
ಕನ್ನಡ ಸಿನಿಮಾ ನೋಡದೆ ಕೊರಗುತ್ತ ಅನ್ಯ ಭಾಷೆಯ ಸಿನಿಮಾ ಹೊಗಳುವವರು ಇಂತಹ ವಿಶಿಷ್ಟ ಸಿನಿಮಾ ನೋಡಬೇಕು. ಅದರ ಜೊತೆಗೆ "ಯು ಟರ್ನ್" ಕರ್ವ, "ಗೋಧಿ ಬಣ್ಣ ಸಾಧಾರಣ ಮೈಕಟ್ಟು" ತುಂಬಾ ಚೆನ್ನಾಗಿದ್ದು ಕನ್ನಡ ಸಿನಿಮಾ ಉದ್ಯಮ ದತ್ತ ಎಲ್ಲ ನೋಡುವಂತೆ ಮಾಡಿವೆ. ಇನ್ನೂ ಸಂತೆಯಲ್ಲಿ ನಿಂತ ಕಬೀರ.. ರನ್ ಆಂಟನಿ , ತಮ್ಮ ವಿಶಿಷ್ಟತೆ ತೋರಿಸಲು ಸಿದ್ಧ ಆಗಿವೆ. ಇವೆಲ್ಲ ಸ್ವಮೇಕ್ ಆಗಿದ್ದು, ಹೊಸಬರವು ಎನ್ನುವುದು ವಿಶೇಷ. ಹೊಸಬರಿಗೆ ಮುಕ್ತ ಅವಕಾಶ ತೆರೆದಿಟ್ಟು ಡಬ್ಬಿಂಗ್ ಮಾರಿ ತಡೆದು ಚಿತ್ರರಂಗದ ಯಶಸ್ಸಿಗೆ ತೋಡೆ ತಟ್ಟಿನಿಂತ ಹಿರಿಯರು ಮತ್ತು ಶಿವಣ್ಣನ ನಾಯಕತ್ವದ ಪ್ರತಿಫಲ ಕೂಡ ಇಲ್ಲಿದೆ. ಹಲವು ತಂತ್ರಜ್ಞರ ಕನಸಿನ ಶ್ರಮ ಇದೆ. ಆದರೂ ನಮ್ಮ ಕನ್ನಡದ ಕೆಲವರು ಹಿತ್ತಲ ಗಿಡದ ಹೂವನ್ನು ಆಸ್ವಾದಿಸುವ ಉದಾರತೆಯ ಕೊರತೆ ತೋರಿಸುತಿದ್ದಾರೆ. ಪಕ್ಕದ ತೋಟದ ಬೇಲಿ ಹಾರುವುದನ್ನು ಕಡಿಮೆ ಮಾಡಿ ಕನ್ನಡ ಸಿನಿಮಾ. ಸಾಹಿತ್ಯ, ನಾಟಕ ನೋಡಿ ಪ್ರೋತ್ಸಾಹಿಸೋಣ.
#ರವಿರಾಜ್ ಸಾಗರ್.#