ಇಲ್ಲದವರು....
ಕಪ್ಪು ಮಣ್ಣಿನ ಜನ ನಾವು
ಕತ್ತಲಲ್ಲೇ ಉಳಿದಿಹೆವು
ಆಳಾಗಿ ದುಡಿದರೂ...
ಅರಸಾಗಲೇ ಇಲ್ಲ. ..
ಕೂನೆಗೂ ಒಂದು ರೂ ಕೆಜೆ ಅಕ್ಕಿ ಗತಿಯಾಯಿತಲ್ಲಾ...
ಕೂಲಿಗಾದರೂ ಉಳಿಯಲೆಂದು
ಉಳಿಸಿಕೊಂಡಿಹರೇನೋ......!!
ನಾ ಬೆಳೆದ ಬೆಳೆಗೆ ಬೆಲೆಯ ಕೊಡದೇ..!
ಊದುತಿಹರು ಉದ್ಯೋಗ ಖಾತ್ರಿ
ಪಂಚಾಯಿತಿಯವರ ಕೈಲಿ ನಗುತಿದೆ ಕತ್ತರಿ..
ಸರ್ಕಾರಗಳ ಹಳಿದರೇನುಂಟು....
ಎಲ್ಲಾ ಉಳ್ಳವರ ಅಟ್ಟಹಾಸ...
ಅಧಿಕಾರ ಬಯಕೆ
ಕಿತ್ತು ತಿನ್ನುತಿಹರು ನೂರು ಜಾತಿ ,ಧರ್ಮಗಳ ಒಡೆದು ಆಳುತಾ...
ಆಳುವವರೆಲ್ಲರೊಂದೆ ಒಂದೇ ದೋಣಿ ಕಳ್ಳರು...
ಆಡಿಕೊಳ್ಬೇಡಿ ...ನಾವು ಇಲ್ಲದವರು.
ಉಳಿದೀತೇ ಜಗ ಇಲ್ಲದವರು ಎಗರಿ ಸಿಡಿದರೇ.?
ಧನಿಯ ನೀಡಿ ನಮ್ಮ ಪರ
ನಾವು ಧನವಿಲ್ಲದವರು..
ಶತಮಾನಗಳ ಧಮನಿತರು
ಧಣಿಗಳಾಗೋ ಕನಸು ಹೊತ್ತ ಶ್ರಮಿಕರು.
#ರವಿರಾಜ್ ಸಾಗರ್.
No comments:
Post a Comment