ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Saturday 10 October 2020

ಮಕ್ಕಳ ಶೈಕ್ಷಣಿಕ ತವಕ ತಲ್ಲಣಗಳ “ ಅಂಕಪಟ್ಟಿ ಬಾಲ್ಯ” ದೊಳಗೊಂದು ಸುತ್ತು - ಭವ್ಯಬಡಗೇರ

 

    ಮಕ್ಕಳ ಶೈಕ್ಷಣಿಕ ತವಕ ತಲ್ಲಣಗಳ   ಅಂಕಪಟ್ಟಿ ಬಾಲ್ಯದೊಳಗೊಂದು ಸುತ್ತು

 - ಭವ್ಯಬಡಗೇರ

         


ಹೀಗೊಂದು ದಿನ ಅಂಚೆಯಣ್ಣನ ಧ್ವನಿ ಪೋಸ್ಟ್……ಪೋಸ್ಟ್…….ಎಂದು ಕೇಳಿ ಅಚ್ಚರಿಯಾಯಿತು, ಆದರೂ ಅಂಚೆಯಲ್ಲಿ ಬಂದ ಸಾಹಿತ್ಯ ಕೃತಿ ನೋಡಿ ಮುಖದಲ್ಲಿ ಮಂದಹಾಸ ಮೂಡಿಸಿತು, ಲಕೋಟೆ ತೆರೆದು ಪುಟತಿರುಗಿಸಿದೆ ಕೃತಿ ರಚನೆಕಾರರಿಗೆ ಮನದಲ್ಲೇ ಅಭಿನಂದಿಸಿದೆ .ಕಾರಣ ಸಾಹಿತ್ಯ ಚಟುವಟಿಕೆಗಳೇ ಕಾಣಸಿಗದ ಡಿಜಿಟಲ್ ಯುಗದಲ್ಲಿ ಮಕ್ಕಳಿಗಾಗಿ ಒಂದಷ್ಟು ಸಮಯ, ತಾಳ್ಮೆ, ಪರಿಶ್ರಮ ಹಾಗು ತಮ್ಮ ಕವಿಮನವನ್ನು ಮುಡುಪಾಗಿಟ್ಟು ಮಕ್ಕಳ ಬಾಲ್ಯದ ಆನಂದ ಕುತೂಹಲಗಳನ್ನು ಕಾಪಾಡಿ ಎಲ್ಲರಿಗೂ ಪರಿಚಯಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿರುವ  ರವಿರಾಜ್ ಸಾಗರ್ಸರ್ ಅವರಿಗೆ ಅನಂತ ಧನ್ಯವಾದಗಳು.

              ಕೃತಿಯ ಬಗೆಗೆ ಹಾಳುವುದಾದರೆ ಅಂಕಪಟ್ಟಿಬಾಲ್ಯಐವತ್ಮೂರು ಮುದ್ದಾದ ವೈವಿಧ್ಯಪೂರ್ಣ ಬಾಲ ಪದ್ಯಗಳಪದ್ಯಗುಚ್ಛ ’.ಶೀರ್ಶಿಕೆ ಪದ್ಯವು ಇಂದಿನ ಪ್ರಸ್ತುತ ವ್ಯವಸ್ಥೆಯ ಅಂಕಾಧಾರಿತ ಶಿಕ್ಷಣ ವ್ಯವಸ್ಥೆಯನ್ನು ಅತ್ಯಂತ ಪಾರದರ್ಶಕವಾಗಿ ತೋರಿಸುತ್ತದೆ. ಅಂಕ- ಅಂಕ ಅಂಕದಾತಂಕ ಮಕ್ಕಳ ಬಾಲ್ಯವನ್ನೆ ಮಂಕಾಗಿಸಿರುವ ಪರಿಯನ್ನು ಅತ್ಯಂತ ನವಿರಾಗಿ ಅಷ್ಟೇ ತೀಕ್ಷ್ಣವಾಗಿ ಹೆಣೆಯಲಾಗಿದೆ.‘ಉತ್ತರಿಸಿನಮ್ಮ ಬಾಲ್ಯದಲ್ಲಿ ನಮಗೂ ಉತ್ತರಸಿಗದ  ಕೇಳುವ ಧೈರ್ಯವಿಲ್ಲದೇ ಅಡಗಿದ್ದ ಪ್ರಶ್ನೆಗಳನ್ನು  ನಮ್ಮ ಮಕ್ಕಳೂ ಕೇಳುತ್ತಿರುವರೇನೋ ಎಂಬಂತೆ ಭಾಸವಾಗುತ್ತಿದೆ. ಆದರೆ ಬಹುಶಃ ಅಂಕರಾಜರೂ ಸಹ ಇದಕ್ಕೆ ಉತ್ತರಿಸಲಾರರು.

          ಚಿಲಿಪಿಲಿ ಹಕ್ಕಿಗಳುನಮ್ಮ ಮಕ್ಕಳು ಅವರ ಕಲರವವನ್ನು ಕೇಳುವ ಕಿವಿಗಳೇ ನಮಗೆ ಇಲ್ಲದಂತಾಗಿದೆ, ಕಾರಣ ದುಡಿಯಲು ಹೊರನಡೆಯುವ ತಂದೆ ತಾಯಿಯರ ಸಮಯದ ಹಿಂದೆ ಓಡುವ ಆತುರದ ಬದುಕು , ಸಮಯಕ್ಕೆ ಹೊಂದಿಕೊಂಡು ಹಣದಹಿಂದೆ ಸುಧಾರಿತ ವೈವಸ್ಥೆಗಳ ಮೋಜುಗಳ ದಂದುವೆಚ್ಚಗಳನ್ನು ಭರಿಸಲು ತಮ್ಮ ಮಕ್ಕಳ ಬಾಲ್ಯದ ತುಂಟತನದ ಸುಸಮಯವನ್ನು ಅನುಭವಿಸುವಲ್ಲಿ ವಿಫಲರಾಗಿದ್ದೇವೆ ಹಾಗೆಯೇ ಮಕ್ಕಳನ್ನೂ ಡಿಜಿಟಲ್ ಗೇಮ್ಗಳಿಗೆ ದಾಸರನ್ನಾಗಿಸಿ   ಸಾರಹೀನ ಬಾಲ್ಯವನ್ನು ಅವರದಾಗಿಸಿದ್ದೇವೆ. ಸಾಮಾಜಿಕ ಹೊಂದಾಣಿಕೆಯಿಂದ ದೂರ ಉಳಿಸಿದ್ದೇವೆ, ಅಡ್ಡದಾರಿಯಲ್ಲಿ ಶೀಘ್ರ ಗುರಿಸೇರುವ ಮಾರ್ಗಗಳನ್ನೇ ಹುಡುಕಿ ಕೊಳ್ಳಲು ಪ್ರೇರೇಪಣೆಯಾಗಿದ್ದೇವೆ. ಎಲ್ಲದರಿಂದಲೂ ಬೇಗನೆ ಎಚ್ಚೆತ್ತುಕೊಳ್ಳಿ ಎಂಬ ಸಂದೇಶ ಪದ್ಯದಲ್ಲಿದೆ.

          ಎಲ್ಲರಿಗೂ ಹಕ್ಕುಗಳಿವೆ ನಮ್ಮ ಮಕ್ಕಳ ಹಕ್ಕುಗಳನ್ನು ನಾವು ಮರೆತಿದ್ದೇವೆ. ಪ್ರಶ್ನೆಕೇಳುವ ಹಕ್ಕನ್ನೂ ಸಹ ಅವರಿಂದ ಕಿತ್ತುಕೊಂಡಿದ್ದೇವೆ. ಆದರೆ ಪ್ರಶ್ನೆಕೇಳುವುದು ಅವರ ಜನ್ಮಸಿದ್ಧಹಕ್ಕು, ಬಾಲ್ಯದ ಜೀವಂತಿಕೆಯ ಸಂಕೇತ ಎಂಬುದನ್ನೇ ಮರೆತಿದ್ದೇವೆ ಹಕ್ಕುಗಳು ಪುಸ್ತಕ ಸೇರಿವೆ ಮನೆಗಳಲ್ಲಿಲ್ಲ,ಅನಾದಿಕಾಲದಿಂದಲೂ ನಡೆದು ಬಂದಿರುವ ಪುರುಷಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಮುಗ್ದ ಮಗಳೊಬ್ಬಳ ಮುದ್ದಾದ ಪ್ರಶ್ನೆಗಳು ಅಪ್ಪನ ಮೂಲಕ ಪುರುಷ ಸಮಾಜಕ್ಕೇ ಬಲಿಷ್ಠ ಗುದ್ದುಗಳನ್ನು ಹೇರಿದೆ.ಮಗಳ ಪ್ರಶ್ನೆಲಿಂಗತಾರತಮ್ಯಕ್ಕೆ ಹಿಡಿದ ಕನ್ನಡಿಯಾಗಿದೆ ನಾಗರೀಕ ಸಮಾಜ ಕಣ್ತೆರೆಯಬೇಕಿದೆ.

          ಆಲದಮರದಒಗ್ಗಟಿನ ಬದುಕು ಸಹಬಾಳ್ವೆಯ ಸಂಕೇತ ಎಲ್ಲರಿಗೂ ಆಶ್ರಯನೀಡಿ  ಮಹಾ ಆಲಯವಾಗಿದೆ. ಅವಿಭಕ್ತಕುಟುಂಬದ ಕಲ್ಪನೆ ಕಾಣೆಯಾಗುತ್ತಿರುವ  ಇಂದಿನ ದಿನಗಳಿಗೆ ಮಾದರಿಯಾಗಿದೆ.ಲೇಖಕರುಆಕಾಶದ ಕಡೆಗೂಒಮ್ಮೆ ದೃಷ್ಟಿ ಹಾಯಿಸಿ ಹೊಸಗ್ರಹದಲ್ಲೂ ಒಂದುದಿನ ಕಳೆದಿದ್ದಾರೆ, ದಿನ ಆಕಾಶದ ಟ್ರಾಫಿಕ್ ಫ್ರೀ ಸಂಚಾರದ ಮಜಾ ವಾಹನವಿಲ್ಲದೆ ಹಾರುವ ಲೋಕದಲ್ಲಿ ಸ್ನೇಹವೂ ಸಿಕ್ಕಿತು. ಇಲಿ,ಹಾವು,ಗರುಡ ಪರಸ್ಪರ ವೈರಿಗಳು ಭೂಲೋಕದಲ್ಲಿ  ಆದರೆ ಆಕಾಶದಲ್ಲಿ ಅನ್ಯೋನ್ಯವಾಗಿವೆ ದೇಶಭಾಷೆಗಳ ಹಂಗಿಲ್ಲದ ಸಹಬಾಳ್ವೆಯ ಸಿರಿ ಗ್ರಹವಿದು.

          ಮಗುವಿನ ಮುದ್ದಾದ ಜಾಣ  ಪ್ರಶ್ನೆಗಳಿಗೆ ಪದ್ದು ಉತ್ತರಕೊಟ್ಟ ಅಪ್ಪನು ಮಗುವಿನ ಕೈಲಿ ಸಿಕ್ಕಿಹಾಕೊಳ್ಳುವ ರೀತಿ ಆಪ್ಯಾಯವಾಗಿದೆ.ಕಿರಿಕಿರಿ,ರಗಳೆಗಳು ಮಕ್ಕಳು ಪೋಷಕರ ನದುವೆ ಶತ್ರತ್ವವನ್ನೇ ಬೆಳೆಸಿಬಿಡುತ್ತದೆ. ಪರೀಕ್ಷೆಯ ಸೋಲಿಗೆ ಹೆಚ್ಚು ಮಹತ್ವ ನೀಡುವ ಬದಲು ಬದುಕಿನ ಗೆಲುವಿಗೆ ಪಾಠಕಲಿಸುವ ಅಗತ್ಯತೆಯನ್ನು ಪದ್ಯ ಎತ್ತಿ ಹಿಡಿದಿದೆ. ನಿನ್ನೆಯ ಮಕ್ಕಳೇ ಇಂದಿನ ಅಪ್ಪ-ಅಮ್ಮಂದಿರು ಎನ್ನುವುದನ್ನು ನಾವು ಮರೆತಿದ್ದೇವೆ ಎನ್ನುವದನ್ನುಚೂರು ಆಲಿಸಿ ನಮ್ಮಿಷ್ಟಪದ್ಯ ಮೊರೆಯಿಡುತ್ತಿದೆ.‘ಅಜ್ಜನ ತೋಟದ ಸೊಬಗನ್ನು ಮಲೆನಾಡಿನ ಹಸಿರನ್ನು ಮುದ್ದುಮಗುವೊಂದು ತನ್ನದನಿಯಲ್ಲಿ ಹಾಡಿದಂತಿದೆ.

          ಇಂದಿನ ಸಂಚಾರಿ ದೂರವಾಣಿಗಳ ಅಬ್ಬರಕ್ಕೆ ಎಲ್ಲೆಂದರಲ್ಲಿ  ನೆಟ್ವರ್ಕ್ ಟವರ್ ಗಳು ತಲೆಎತ್ತಿವೆ, ಹೀಗಾಗಿ ಹಲವುಜೀವ ಸಂಕುಲಗಳಿಗೆ ಕಂಟಕವಾಗಿದೆ ಅದರಲ್ಲೂ ಗುಬ್ಬಿಗಳಿಗಂತೂ ನೆಲೆಯೇ ಇಲ್ಲದಂತಾಗಿ ನಶಿಸುವಿಕೆಯ ಅಂಚಿನಲ್ಲಿವೆ, ಮಾನವನಿಗೆ ಅಪಾಯದ ಮುನ್ಸೂಚನೆ ನೀಡುತ್ತಿವೆ.ಮಕ್ಕಳ ಚೆಂದದ ಚಿಂತನೆಗಳು  ಅವರ ಮುಗ್ದ ಭಾವನೆಗಳು ಅದರೊಟ್ಟಿಗೆ ಅವರ ಚುರುಕು ಬುದ್ಧಿಯ ತೀಕ್ಷ್ಣತೆಮಕ್ಕಳ ಉಪಾಯದಲ್ಲಿಹೊಳೆದಿದೆ.

          ಒಬ್ಬ ಬಡತಾಯಿ ತನ್ನ ಶಾಣ್ಯಾ ಮಗಚೋಟ್ಯಾ ಸಕಲ ಗುಣಗಳನ್ನೂ ವರ್ಣಿಸಿ, ಬಡತನದಲ್ಲೂ ಯಾವ ಕೊರತೆಯನ್ನೂ ತೋರಿಸದೇ ಜಗಜ್ಯೋತಿ ಬಸವೇಶ್ವರರ ಹಾದಿಯಲ್ಲಿ ನಡೆಯುವಂತೆ ಹರಸುವ ಪರಿ ಯಾವ ಆದರ್ಶಮಾತೆಯರಿಗೂ ಕಡಿಮೆಯಿಲ್ಲ.ಮದುವೆ ಮನೇಲಿ ಮಕ್ಕಳನ್ನು ಹಾಡಿ ಕುಣಿಸಿರುವ ಲೇಖಕರು ವಿವಿಧ ವಾದ್ಯಗಳು ಜೋಡುನುಡಿಗಳು ಪ್ರಾಸಗಳೊಂದಿಗೆ ಮದುವೆಯ ಸರಳ ಆಚರಣೆಯನ್ನೂ ಬಿಂಬಿಸಿದ್ದಾರ      ಚಂದಾಮಾಮನನ್ನುಏಕೆ ಅಡಗುವೆ ಬಾನಲಿಎಂದು ಪ್ರಶ್ನಿಸುವ ಮಗು, ತನ್ನ ಅಮ್ಮನ ಹಾಡು, ತಂಗಿಯು ಹಠಮರೆಯುವ ಪರಿಯನ್ನು ವರ್ಣಿಸಿದೆ.ಮಕ್ಕಳಿಗಾಗಿ ಆಸ್ತಿಪಾಸ್ತಿ ಕೂಡಿಡುವ ಧಾವಂತದಲ್ಲಿ ಬದುಕಲು ಅಗತ್ಯವಾದ ಜೀವಜಲ ಜೀವವಾಯು,ಭೂಮಿಗಳನ್ನೇ ಮಲಿನಗೊಳಿಸುತ್ತಿದ್ಧೇವೆ. ಆಸ್ತಿಬೇಡ ಬದುಕಲು ಅಗತ್ಯ ಪರಿಸರವನ್ನು ಉಳಿಸಿ ಎಂದು ಮಕ್ಕಳು ಬೇಡುತ್ತಿದ್ದಾರೆ,ಇಂದಿನ ಹಲವು ಕುಟುಂಬಗಳ ನೈಜತೆಗೆ ಹತ್ತಿರವಿರಬಹುದಾದ ಪದ್ಯಮೊಬೈಲ್ ಪಪ್ಪ ಧಾರಾವಾಹಿ ಮಮ್ಮಿಮಕ್ಕಳನ್ನು ನಿರ್ಲಕ್ಷಿಸುವ ಪರಿಸ್ಥಿತಿಯನ್ನು ಚಿತ್ರಿಸಿದೆ.


          ಜಾದು ಕಲಿಸು ಎಂದು ಚಂದ್ರನ ಚೆಲುವಿಗೆ ಬೆರಗಾದ ಮಗುವೊಂದು ಹಾಡುತ್ತಾ ತನಗೂ ಜಾದೂ ಕಲಿಸು ಎನ್ನುತ್ತಿದೆ.ಸಾಕ್ಷರತೆಯ ಹರಿಕಾರ ಪೆನ್ಸಿಲಣ್ಣನಿಗೆ ಕೆತ್ತಿದರೂ ನೋವಾಗುವುದಿಲ್ಲ ಹೇಗೆ ಗೀಚಿದರೂ ಬೇಸರವಿಲ್ಲ, ತಪ್ಪನ್ನು ತಿದ್ದಿಕೊಳ್ಳಲು ರಬ್ಬರ್ ನಂತಹ ಮೃದುವಾದ ಗೆಳೆಯನಿದ್ದರೂ ತಪ್ಪನು ಮಾಡಿಸುವವರು ನಾವು, ಜಾಗ್ರತೆಯಿಂದಿದ್ದರೆ ತಪ್ಪೇ ಆಗುವುದಿಲ್ಲ.‘ಕನಸುಮಗುವಿನ ಮುಗ್ದಮನದ ಪರಿಶುದ್ಧ ಕನಸಿನಲ್ಲಿ ನಲಿವ ನವಿಲು,ಹಸು,ಸಿಹಿಮಾವಿನಹಣ್ಣು, ಪ್ರಶಸ್ತಿಗಳೆಲ್ಲವೂ ದೊರೆತಿತ್ತು.

          ಪಪ್ಪನ ಫೋನುಮಗುವಿಗೆ ಹಿಗ್ಗು ಆದರೆ ಅದರಲ್ಲಿ ಬಯಲಲಿ ಆಟವಾಡುವ ಆನಂದ, ಸಡಗರ, ಜೊತೆಗಾರರು ಯಾರೂ ಇಲ್ಲದೆ ಒಂಟಿ ಆಟಕೂ ಇಲ್ಲ ಜಗಳಕೂ ಇಲ್ಲದೆ ಬಲು ಬೇಸರ, ಯೂಟೂಬ್ನಲ್ಲಿ ಅಜ್ಜಿಯ ಹಾಡು ಕಥೆಗಳಿದ್ದರೂ ಮಡಿಲಲಿ ಕೇಳುವ  ಅನುಭವವಿಲ್ಲ, ಅಗತ್ಯವರಿತು ಇತಿಮಿತಿಯಲಿ ಮೊಬೈಲು ಬಳಸಿ ಎಂಬ ಸಂದೇಶ ಸಮಯೋಚಿತವಾಗಿದೆ. ‘ಮೋಡಗಳೂರಲಿ ಒಂದು ದಿನಮಗುವೊಂದು ಮೋಡಗಳೊಂದಿಗೆ ಮಾತನಾಡುತ್ತಾ  ಭೂಮಿ ಮೋಡಗಳ ಪರಿಶುದ್ಧತೆಯನ್ನು ಹೋಲಿಸುತ್ತದೆ.

          ಗುಡುಗು ಮಿಂಚು ಮಳೆಒಮ್ಮೆ ಕದನಕಿಳಿದು ಮೂವರೂ ನಾನು ನಾನು ಎಂದು ಪೈಪೋಟಿ ನಡೆಸಿದವು. ಕದನದಲ್ಲಿ ವಿಜ್ಞಾನದ ತತ್ವ ಶಬ್ದ,ಬೆಳಕು.ಹಾಗೂ ನೀರಿನ ವೇಗಗಳ ಅರಿವೂ ಅಡಗಿದೆ.‘ಕಾಗೆ ಹೇಳಿದ ಪಾಠಬದುಕಿನ ವಿಭಿನ್ನತೆ, ವೈವಿಧ್ಯತೆಯೊಂದಿಗೆ ಪರಸ್ಪರರನ್ನು ಸಮಾನವಾಗಿ ಕಾಣುತ್ತಾ ಗೌರವಿಸುತ್ತಾ ಸ್ವಂತಿಕೆಯೊಂದಿಗೆ ಸಹಬಾಳ್ವೆಯಿಂದ ಬದುಕುವ ಪಾಠಕಲಿಸುತ್ತದೆ.‘ಒಗ್ಗಟ್ಟಿನ ಇರುವೆಶಿಸ್ತು, ಸಂಯನ, ಪರಿಶ್ರಮ, ಅವಿರತದುಡಿಮೆ, ಆತ್ಮವಿಶ್ವಾಸದಿಂದ ಜೀವನ ಸಾಗಿಸುವ ಇರುವೆ ಜೀವನಕ್ಕೊಂದು ಶ್ರೇಷ್ಠ ಸಂದೇಶವನ್ನು ನೀಡುತ್ತದೆ.ಅರಿತು ಬಾಳಿದರೆ ಎಲ್ಲರೂ ಸಹ ಜೀವನದಲ್ಲಿ ಯಶಸ್ಸು ಪಡೆಯತ್ತಾರೆ ಎಂಬುದು ನೀತಿ.

          ಅಂತಿಮ ಕ್ಷಮೆನದಿಯೊಂದ ಕಂಡು ಅನ್ಯ ಜೀವಿಗಳು ತಮ್ಮ ಅಗತ್ಯವನ್ನು ಪೂರೈಸಿಕೊಂಡು ಇತರರಿಗೂ ಉಪಕಾರ ಮಾಡಿದರೆ ಸ್ವಾರ್ಥಿ ಮಾನವ ಕಾಡುಕಡಿದು ಜೀವಿಗಳ ನೆಲೆಯನ್ನು ಕಿತ್ತುಕೊಂಡು ಕಡೆಗೆ ತನಗೂ ಅನ್ನಕ್ಕೂ ಗತಿಇಲ್ಲದಂತೆ ಮಾಡಿಕೊಂಡು ತಪ್ಪಿನ ಅರಿವಾಗಿ ಗಿಡ ಬೆಳೆಸಿ ಮಳೆ ತರುವ ವಾಗ್ದಾನ ನೀಡಿದ್ದಾನೆ.‘ನನಗೊಂದಿಷ್ಟು ಕನಸಿವೆಯಮ್ಮಾಎಂದು ಮುದ್ದು ಕಂದ ತನ್ನ ಅಮ್ಮನ ಬಳಿ ಇರುವೆಯ ಶಿಸ್ತಿಗೆ ತಾನೆಷ್ಟು ಮಾರುಹೋಗಿದ್ದೇನೆ ಎನ್ನುವ ವಾಂಛೆಯನ್ನು ವ್ಯಕ್ತಪಡಿಸಿದೆ. ಹುಲಿಯ ಘಾಂಭೀರ್ಯ, ಹಲ್ಲಿಯ ಮಾಧುರ್ಯ, ಮೋಡದ ಸಾಮರ್ಥ್ಯ, ಸಹಬಾಳ್ವೆಯ ಸಾಮರಸ್ಯವನ್ನು ಒಟ್ಟಾಗಿಸಿ ಸಾರಿದೆ.

          ಇವರು  ಎಲ್ಲಿಯೇ ಹೋದರೂ ತಮ್ಮ ಮಲೆನಾಡಿನ ಸಿರಿಯನ್ನು ಮೆಲುಕುಹಾಕುವುದನ್ನು ಮಾತ್ರ ಮರೆಯುವುದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ನಮ್ಮೂರ ಹಸಿರು ಸಿರಿಪದ್ಯ. ಮಲೆನಾಡಿನ ಸೊಬಗು ವರ್ಣನಾತೀತ.ಅಡುಗೆ ಮನೆ ಆಟಗಾರ ಪುಟ್ಟನ ತುಂಟಾಟ, ತೊದಲು ನುಡಿ, ಆಡುವ ಜಾಣ್ಮೆ, ಎಲ್ಲರ ಗಮನ ಸೆಳೆಯುವ ಆಕರ್ಶಣೆ ಅತ್ಯಂತ ನವಿರಾಗಿ ಹೆಣೆಯಲ್ಪಟ್ಟಿದೆ. ‘ಪುಟ್ಟನ ದೀಪಾವಳಿಮನೆಯ ಪುಟ್ಟ ಮಗುವೊಂದು ತನ್ನ ಮೊದಮೊದಲ ದೀಪಾವಳಿ ಹಬ್ಬವನ್ನು ಸಂಭ್ರಮಿಸುತ್ತಿರುವ ರೀತಿಯನ್ನು , ಮಲೆನಾಡಿನ ಅಂಟಿಗೆ-ಪಿಂಟಿಗೆಯನ್ನು ನೆನಪಿಸುತ್ತಾ ಪರಿಸರ ಕಾಳಜಿಯನ್ನೂ. ಕಳವಳವನ್ನೂ ವ್ಯಕ್ತಪಡಿಸಿದ್ದಾರೆ.

ಮಕ್ಕಳ ಮನವಿಯಲ್ಲಿ  ಪ್ರಸ್ತುತ ಮಾಧ್ಯಮಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿ ಮಕ್ಕಳ ವಿದ್ಯಾಭಾಸ, ಸಾಮಾಜಿಕ ಸಾಮರಸ್ಯವನ್ನು ಉಳಿಸಿ, ಮಕ್ಕಳಿಗೆ ಹೊರೆಯಾಗುವ ವಿಷಯಗಳನ್ನು ತುಸು ಹಗುರಾಗಿಸೋಣ ಎಂದಿದ್ದಾರೆ. ಮಕ್ಕಳ ಮೂಲಕ ಪದ್ಯದಲ್ಲಿ ಮನವಿ ಮಾಡಿಕೊಂಡಿದ್ದಾರೆ.‘ವೃಕ್ಷಪ್ರಿಯ ಚೋಟುಅತ್ಯಂತ ತರಲೆ, ತುಂಟ, ಚಾಣಾಕ್ಷ ಅದರೂ  ವೃಕ್ಷಪ್ರಿಯತೆಯೇ ಗುಣಗಾನಕ್ಕೆ ಕಾರಣವಾಗಿದೆ. ಇಲ್ಲಿ.‘ಚೋರ ಇಲಿಪ್ರಾಸದ ಹಂದರದಲ್ಲಿ ಇಲಿಯೊಂದಿಗೆ ಮಗು ಆಡುವ ಮಾತಿನ ಆಟ ಚೆನ್ನಾಗಿದೆ, ಹಾಗೆಯೇ ಇಲಿಗೆ ಹೇಳುವ ನೀತಿಯು  ಎಲ್ಲರಿಗೂ ಒಂದು ಪಾಠವೇ ಸರಿ.‘ಕಾಗೆಯ ಸಂದೇಶಎಷ್ಟುಚೆಂದ ಕಾಗೆಯ ಸಂದೇಶ , ಒಂದು ಅಗುಳ ಕಂಡರೂ ಇಡೀ ಬಳಗವನ್ನೇ ಕರೆಯುವ ಗುಣ ಕಾಗೆಯದು, ಮನುಜ ಕಾಗೆಗಿಂತಲೂ ಕೀಳೇ? ಅರಿಯೋ ಮನುಜ ಎನುತಿದೆ ಪದ್ಯ.

          ಪುಟ್ಟ ಬಾಲಕನೊಬ್ಬ ಮೋಡವನ್ನು ಬೇಡುವ ಪರಿ ಅತ್ಯಂತ ಮನೋಜ್ಞವಾಗಿದೆ, ಕಡೆಗೆ ಬೇಡಿಕೆಯ ಎಲ್ಲೆ ಮೀರಿ ಮೋಡಕೇ ಚೂರಿಹಾಕುವ ಕ್ರೌರ್ಯತೆಗೆ ತಿರುಗುವ ಭಾವ ಬಿಸಿಲಿನ ಧಗೆಯ ತೀಕ್ಷತೆಯನ್ನು ಬಿಂಬಿಸುತ್ತದೆ.ಚಳಿಗಾಲದ ಸಮಯವಿರಬಹುದು ಮಕ್ಕಳು ಸೂರ್ಯದೇವನ್ನು ಅತ್ಯಂತ ವಿನಯದಿಂದ ಕೈಜೋಡಿಸಿ ಕೊಂಡು ಕರೆಯುತ್ತಿದ್ದಾರೆ. ಚಳಿಯನೋಡಿಸಿ ಬಿಸಿಲ ಬೆಚ್ಚನೆ ಹೊಡಿಕೆಯನ್ನು ನೀಡೆಂದು.


               ಮಕ್ಕಳು ಮನವಿ ಮಾಡುವ ಪದ್ಯವನ್ನು ಬಹುಶಃ ಲೇಖಕರು ಉತ್ತರ ಕರ್ನಾಟಕದ  ಬಿಸಿಲ ಧಗೆಯನ್ನು ಕುರಿತೇ ರಚಿಸಿರಬೇಕೆನಿಸುತ್ತದೆ. ಬೇಸಿಗೆಯ ರಜೆಯ ಮಜವೆಲ್ಲಾ ಸೂರ್ಯನ ತಾಪಕ್ಕೇ ಬೆಂದು ಹೋಗುತ್ತಿದೆ, ಹಸಿರೆಲ್ಲಾ ಒಣಗಿದೆ, ನದಿಗಳೆಲ್ಲಾ ಬತ್ತಿವೆ, ಮೋಡಕ್ಕೆ ದಯೆ ಮಾಡಿ ಮಳೆ ಸುರಿಸು ಎಂದು  ಬೇಡುವಂತಿದೆ.‘ಬಾ ಬಾ ಮಂಗಣ್ಣಪುಟ್ಟ ಮಗುವೊಂದು ಮಗನ ಚೇಷ್ಟೆಗಳಿಂದ ಬೇಸತ್ತು ಅತ್ಯಂತ ವಿನಯ ಹಾಗೂ ಜಾಣ್ಮೆಯಿಂದ ಮಂಗನೊಂದಿಗೆ ನಡೆಸುವ ಸಂವಾದವಿದು.

               ಅಪ್ಪನ ಹೊಲದಲಿ ಪದ್ಯವು ಅನ್ನದಾತನ ನಿಸ್ವಾರ್ಥ ಶ್ರಮ ಲೋಕಕ್ಕೆ ಉಣಬಡಿಸುವ ಅವನ ಕಾಯಕವು ಅತ್ಯುನ್ನತ ಸ್ಥಾನದಲ್ಲಿದೆ. ಆತನ ಪರಿಶ್ರಮವನ್ನು ಗೌರವಿಸುವ ಆತನ ಮಗನೂ ಸಹ ದುಡಿಯುವ ಪಣತೊಟ್ಟು ವೈಜ್ಞಾನಿಕ ಪದ್ದತಿ ಅನುಸರಿಸಿ ಸಫಲತೆಯ ಸಾಧಿಸುವ ಹಾದಿಯಲ್ಲಿ ನಿಷ್ಟೆಯಿಂದ ದುಡಿಯುವೆ ಎಂದು ಹೇಳಿದ್ದಾನೆ.‘ಇನ್ನೂ ಎಷ್ಟು ಓದಲಪ್ಪಾ’ ? ಪುಸ್ತಕದೊಳಗೇ ಮಕ್ಕಳನ್ನು ಹೂತುಬಿಡುವ ಪೋಷಕರಿಗೆ ಕಣ್ತೆರೆಸುವ ಪ್ರಯತ್ನವಾಗಿದೆ ಪದ್ಯ.

          ರೋಬೋಟಣ್ಣಾಯಂತ್ರಾವೃತ ಪ್ರಪಂಚದಲ್ಲಿ ರೋಬೋಟ್ ಗಳ ಪಾತ್ರವೂ ಅತ್ಯಂತ ವಿಸ್ಮಯವಾಗಿದೆ ಇಂದು.ಅಂತಹುದರಲ್ಲಿ ಇಲ್ಲಾ ಕಾರ್ಯಗಳನ್ನು ಅತ್ಯಂತ ಚಾಕುಚಕ್ಯತೆಯಿಂದ ಮಾಡುವ ರೋಬೋಟ್ಗೆ ಶಕ್ತಿತುಂಬಲು ಚಾಲನೆ ನೀಡಲು ಮನುಷ್ಯನೇ ಬೇಕು.“ನಮ್ಮಯಶಾಲೆಮಕ್ಕಳೆಲ್ಲರೂ ಕೂಡಿನಲಿಯುವ ಮಂದಿರ ಗುರುಶಿಷ್ಯರ ಸಮಾಗಮದ ತಾಣ. ಮಕ್ಕಳ ಶಾಲೆಯ ಸಂಭ್ರಮ ಬಿಂಬಿತವಾಗಿದೆ.“ಮಗನ ಪ್ರಶ್ನೆಅಮ್ಮನಿಗೆ ಕಷ್ಟ ಆದರೂ ಅಮ್ಮ ಮುದ್ದಾಗಿ ತಿದ್ದಿ ಹೇಳಿದ ಬುದ್ದಿಮಾತು ಅತ್ಯಂತ ಮುಕ್ತ. ಅದಕೂ ಹಾಕಿದ ಮರುಪ್ರಶ್ನೆಯ ಬೇಡಿ ವಿಚಲಿತಳಾಗದೆ ಅಮ್ಮ ಸ್ರಷ್ಟಿಯ ನಿಯಮಗಳ ತಿಳಿಹೇಳಿದಳು. ಜಾಣಮರಿ ಎಂದು ಮಗನನು ಉಬ್ಬಿಸಿ ಪ್ರಶ್ನೆಗಳಿಗೆ ವಿರಾಮ ಹಾಕಿದಳು.‘ಮೊಬೈಲ್ ಗೀಳಿನಿಂದ ಹೊರನಡೆದ ಮಗು ಹೊ ಪ್ರಪಂಚವನ್ನು ಕಾಣುವ ಹಂಬಲವನ್ನು ತಾಯಿಯ ಬಳಿ ಹಂಚಿಕೊಂಡಿದೆ.

          ನನ್ನ ಸಂತೆಮಗುವೊಂದು ಅಮ್ಮನೊಟ್ಟಿಗೆ ಸಂತೆಗೆ ಹೋಗಿ ಶಾಲೆಯ ವಿಜ್ನಾನದಪಾಠವ ನೆನಪಿಸಿಕೊಂಡು ತರತರದ ಸತ್ವಯುತ ತರಕಾರಿ,ಹಣ್ಣು,ದ್ವಿದಳಧಾನ್ಯಗಳನ್ನು ಕೊಂಡುಕೊಂಡು ಬೆಲೆಗಿಂತಲೂಆರೋಗ್ಯವೇ ಭಾಗ್ಯಎಂದು ಬೀಗುತ್ತಾ ಮನೆಗೆ ಹಿಂದಿರುಗಿದೆ.‘ಯುದ್ಧಗಳೇಕೆ ಬೇಕಪ್ಪಾಯುದ್ಧ ಎಂದರೇನು ಎಂಬುದರ ಹೊಸ ಪರಿಚಯವಾದಾಗ ತನ್ನ ಸರಳಪ್ರಶ್ನೆಯೊಂದಿಗೆ ತಂದೆಯೊಡನೆ ನಡೆಸುವ ಸಂವಾದ ಹಾಗೂ ಯುದ್ಧದ ಭಯ ಮಗುವನ್ನೂ ಭಯಭೀತವಾಗಿಸಿದ್ದು ಅತ್ಯಂತ ಭೀಕರವಾಗಿದೆ. ವಿಶ್ವಶಾಂತಿಯ ಮಂತ್ರ ಮಗುವಿಗೂ ಅರಿವಿದೆ ಆದರೆ ರಾಷ್ಟ್ರನಾಯಕರಿಗಿಲ್ಲವಾಗಿದೆ.

          ಭೀಮಲೀಲೆಡಾ|ಬಿ.ಆರ್.ಅಂಬೇಡ್ಕರ್ ಅವರ ಜೀವನ ಬಹಿಷ್ಕತ ಬದುಕು,ಬಡತನದ ಬೇಗೆ, ಅಜ್ಞಾನದ ಅಂಧಕಾರಗಳಿಂದ ತುಂಬಿದ್ದರೂ ಅವೆಲ್ಲವನ್ನೂ ಮುಟ್ಟಿನಿಂತ ದಿಟ್ಟ ಬಾಲಕನ ಕತೆಯನ್ನು ಮಕ್ಕಳಿಗೆ ಮನಮುಟ್ಟುವಂತೆ ಚಿತ್ರಿಸಿದ್ದಾರೆ ಲೇಖಕರು. ಮಗುವೊಂದು ಅಮ್ಮಅಮ್ಮನ ನಡುವಿನ ಇರಿಸು ಮುರಿಸುಗಳನ್ನು ಗಮನಿಸಿ ತನ್ನಭಾವದಲ್ಲಿ ಅಪ್ಪನಿಗೆ ತನ್ನ ತಪ್ಪಿನ ಅರಿವುಮೂಡಿಸುವಂತಿದೆ.ಬಸವನ ಓದು ಶಾಲೆಯ ಬಗೆಗಿನ ನಿರಾಸಕ್ತಿ ಹಾಗೂ ಊರಿಗೆ ಉಪಕಾರಮಾಡುವ ಉದಾರಗುಣ ಇಲ್ಲಿ ಪಾರದರ್ಶಕವಾಗಿದೆ, ಅಂತೆಯೇ ಅವನ ಅಜ್ಞಾನದಿಂದಾಗಬಹುದಾದ ಅನಾಹುತಗಳ ಚಿತ್ರಣವೂ ಇದೆ.ಇದರಿಂದ ನಾಳಿನ ಒಳಿತಿಗೆ ಇಂದು ಶಾಲೆಗೆ ಬನ್ನಿ ಮಕ್ಕಳೇ…… ಎಂದು ಕರೆ ನೀಡಿದ್ದಾರೆ.ಕಾಡಿನ ಹಣ್ಣುಗಳ ಪರಿಚಯ, ವಿಭಿನ್ನ ರುಚಿಗಳನ್ನು ವಿವರಿಸುತ್ತಾ ಲೇಖಕರು ಕರ್ನಾಟಕದ ವಿವಿಧ ಸೀಮೆಗಳನ್ನು ಪರಿಚಯಿಸಿದ್ದಾರೆ.

          ಜೀವ ವ್ಯವಸ್ಥೆಯಲ್ಲಿ ಒಂದನ್ನೊಂದು ತಿಂದು ಬದುಕುವ ಪರಿಯಿದೆ. ಆದರೆ ವಿವೇಚನಾಶೀಲ ಮಾನವನಿಗೆ ಇದು ಅನಿವಾರ್ಯವಲ್ಲ ಜೀವಿಸು ಜೀವಿಸಲು ಬಿಡು ಎಂಬ ನುಡಿ ಇಲ್ಲಿ ಪ್ರಸ್ತುತವಾಗಿದೆ.ಪ್ರಮಾಣ ಪತ್ರದ ಗೀಳಿನಲ್ಲಿ ಮಕ್ಕಳನ್ನು ಮುಳುಗಿಸಿರುವ ಪೋಷಕರಿಗೆ ನೊಂದ ಮಕ್ಕಳು ಅಳಲು ತೋಡಿಕೊಳ್ಳುತಿದ್ದಾರೆ. ಪ್ರಮಾಣಪತ್ರವಿರದೆ ಬದುಕಲಾಗದೇ ಎಂದು ಪ್ರಶ್ನಿಸಿದ್ದಾರೆ.ಬಾಲಸಾಹಿತ್ಯ ಎಂಬುದು ಹೆಸರಿಗಷ್ಟೆ, ಆದರೆ ಬಾಲ ಪದ್ಯಸಾಹಿತ್ಯದ ಮೂಲಕ ಲೇಖಕರು ಮುಗ್ದ ಮಕ್ಕಳಿಗೆ ಅರ್ಥವಾಗುವ ಸರಳಸುಂದರ ಭಾಷೆಯಲ್ಲಿ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದ್ದಾರೆ. ಮಕ್ಕಳಲ್ಲಿ ಸಾಮಾಜಿಕ ಕಳಕಳಿಯ ಬಾವನೆಯು ಮೊಳೆಯಲು ಕಾರಣರಾಗಿದ್ದಾರೆ ಎಂದರೆ  ತಪ್ಪಾಗಲಾರದು.

          ಲೇಖಕರ ಪರಿಶ್ರಮ ನಿಜಕ್ಕೂ ಶ್ಲಾಘನೀಯ ಅದಕ್ಕೆ ಪೂರಕವಾಗಿ ನಾವು ನಮ್ಮ ಮಕ್ಕಳನ್ನು ಸಾಹಿತ್ಯ ಓದಲು ಹಾಗೂ ಬರೆಯಲು ತೊಡಗುವಂತೆ ಪ್ರೇರೇಪಿಸುವ ವಾಗ್ದಾನದೊಂದಿಗೆ ನನ್ನ ಸಾಲುಗಳನ್ನು ಮುಗಿಸುತಿದ್ದೇನೆ.

ವಂದನೆಗಳೊಂದಿಗೆ

ಭವ್ಯಬಡಗೇರ

shivamogga

         

Tuesday 22 September 2020

ಶಾಲಾ ಮಕ್ಕಳಿಂದ ಜಾನಪದ ಕ್ಷೇತ್ರಕಾರ್ಯ, ವಿಶೇಷ ಜಾನಪದ ಪ್ರಯೋಗ.ವೈಚಾರಿಕ ಜಾನಪದಗಳ ಮರುಸೃಷ್ಟಿ, ಹಾಗೂ ಜಾನಪದ ಪಠ್ಯಂತರ್ಗತ ಪ್ರಯೋಗದ ಶಾಲೆ ಮಲ್ಕಾಪುರ

ನಮ್ಮ ಶಾಲಾ ಮಕ್ಕಳ ನೇತೃತ್ವದ
ನಮ್ಮೂರ ಜನಪದ ಬಳಗ
 ತಂಡದ ಜಾನಪದ
 ಪಠ್ಯಂತರ್ಗತ ಪ್ರಯೋಗಗಳ ಹಲವು ವಿಡಿಯೋ ವೀಕ್ಷಿಸಿ. ಡೊಳ್ಳಿನ ಪದ , ಬೀಸೋ ಪದ,ಸೋಬಾನೆ ಪದ ಸಂಪ್ರದಾಯದ ಪದಗಳು , ಜಾನಪದಗಳನ್ನು ಮರು ಸೃಷ್ಟಿಸಿದ  ಪಠ್ಯ ರೂಪಾಂತರ ಜಾನಪದ ಇಲ್ಲಿವೆ. ಕೆಳಗಿನ ಲಿಂಕ್ ಗಳನ್ನು ಕ್ಲಿಕ್ ಮಾಡಿ.

ನಮ್ಮ ಶಾಲಾ ಮಕ್ಕಳ ಜಾನಪದ ಪಠ್ಯಂತರ್ಗತ ಪ್ರಯೋಗ ಕುರಿತು ಸಾಕ್ಷ್ಯಚಿತ್ರ 

https://youtu.be/SbF7FvBQgBY

ಶಾಲೆ ಬಿಟ್ಟ ಮಕ್ಕಳನ್ನು ಕರೆತರುವ ಜಾನಪದ ಹಾಡು

https://youtu.be/n8BHS01cS40

ಬಂಗಾರದ ಬಳಿಯವ್ವ
 https://youtu.be/UcaBJhXfS2w

ಉಡಿ ತುಂಬುವ ಹಾಡು
https://youtu.be/YgLUqVyqhJQ

ಬೀಸೋ ಪದ
https://youtu.be/m3oBQ10rChw

ಡೊಳ್ಳಿನ ಪದ

https://youtu.be/XCZisnshPGI

ಸಾಂಪ್ರದಾಯಿಕ ಪದ

https://youtu.be/imEjgSoAzpg

ಸೋಬಾನೆ ಪದ
https://youtu.be/TJIoagCfsbY

ಮೈಲಾರ್ ಮಾದೇವನ ಕುರಿತು ಒಂದು ಜನಪದ

https://youtu.be/pUDFTTdl3bo

ಸಾಂಪ್ರದಾಯಿಕ ಪದ

https://youtu.be/qB1iRypmOlE

ಅಕ್ಕಿಯನ್ನು ಅಳಸಿಕೊಂಡು

https://youtu.be/7TdmJ96CS_M

ಗುರುವೇ ನಮ್ಮ ಯ್

https://youtu.be/XCZisnshPGI
ಅಕ್ಕಿ ತಂದಾರಾ ಜಗ್ಗಿ

https://youtu.be/33epaEahlVA

ಬಂಗಾರದ ಬಳಯವ್ವ

https://youtu.be/UcaBJhXfS2w

ಒಂದು ಅಂಬುದು ಏನ ಜಾಣ

https://youtu.be/ttVGtOTqTYM

ಯಾರ್ ಏನಂದಾರೆ ಎಲ್ಲಮ್ಮನ ಮಾರಿ ಯಾಕೆ ಬಾಡ್ಯಾವೆ

https://youtu.be/UcaBJhXfS2w


ಮೇ 10 . ಆಕಾಶವಾಣಿ ರಾಯಚೂರಿನಲ್ಲಿ ಪ್ರಸಾರವಾದ
ನಮ್ಮ ಶಾಲಾ ಮಕ್ಕಳ ನಾಟಕ

https://youtu.be/wKXUbyCgH1c

ನಿಮ್ಮ ಪ್ಲಾಸ್ಟಿಕ್ ಕಸ ನಿಮ್ಮದು ಅಭಿಯಾನದ ಕುರಿತು ಸಾಕ್ಷ್ಯಚಿತ್ರ

https://youtu.be/j38ms2vlg78

12 ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಿರುವ ಶಾಲಾ ಮಕ್ಕಳ ನೇತೃತ್ವದ ಮಕ್ಕಳ ಮಂದಾರ ಪತ್ರಿಕೆಯ ಫಲಶ್ರುತಿ ಕುರಿತು ಸಾಕ್ಷ್ಯಚಿತ್ರ 

https://youtu.be/1PvX-rs6RPQ

ಇನ್ನೂ ಹೆಚ್ಚಿನ ಜಾನಪದ ಕಥೆಗಳು ಜಾನಪದ ಕ್ರೀಡೆಗಳು, ಜಾನಪದ ಹಾಡುಗಳು , ಶೈಕ್ಷಣಿಕ ಪಾಠಗಳು,ಯುಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಿ. ಚಾನೆಲ್ ಸಬ್ಸ್ಕ್ರೈಬ್ ಆಗಿ ಪ್ರೋತ್ಸಾಹಿಸಿ.

ನಿಮ್ಮ ರವಿಚಂದ್ರ /ರವಿರಾಜ ಸಾಗರ್
 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
 ಮಲ್ಕಾಪುರ ಮಾನ್ವಿ ತಾಲೂಕು 
 ರಾಯಚೂರು
9980952630



ನಮ್ಮ ಚಟುವಟಿಕೆಗಳನ್ನು ಬೆಂಬಲಿಸಲು ನಿಮ್ಮ ಮಿತ್ರ ಬಳಗಕ್ಕೆ ಶೇರ್ ಮಾಡಿ

ಅಜಿಮ್ ಪ್ರೇಮ್ ಜಿ ಶಾಲೆ ಯಾದಗಿರಿ ಶಾಲಾ ಮಕ್ಕಳ ಬರಹಗಳ ಸಂಕಲನ

ಈ ಲಿಂಕ್ ಕ್ಲಿಕ್ ಮಾಡಿ ಮಕ್ಕಳ ಬರಹ ಓದಿ

 ಸೃಜನಶೀಲತೆ ಅವರ ಕಲ್ಪನಾ ಶೀಲತೆಯ ವಿಶಿಷ್ಟ ಉದಾಹರಣೆಗಳನ್ನು ಈ ಮೇಲಿನ ಸಂಕಲನದಲ್ಲಿ ಗಮನಿಸಬಹುದು. ಅಜಿಮ್ ಪ್ರೇಮ್ಜಿ ಶಾಲೆ ಯಾದಗಿರಿ ಅಲ್ಲಿನ ಕ್ರಿಯಾಶೀಲ ಶಿಕ್ಷಕರಾದ ಕಲಂದರ್ ಅವರ ಮಾರ್ಗದರ್ಶನದ ಮೂಲಕ ಮಕ್ಕಳು ಬರೆದ ಸೃಜನಶೀಲ ಬರಹಗಳ ಸುಂದರ ಸಂಕಲನ ಇದಾಗಿದೆ.

Sunday 20 September 2020

ಮೂರನೇ ತರಗತಿಯಲ್ಲಿ ರಾಷ್ಟ್ರ ಮಟ್ಟದ ಸಾಧನೆ ಮಾಡಿದ ಮಹಾಲಕ್ಷ್ಮಿ ಕುರಿತು ಸಾಕ್ಷ್ಯಚಿತ್ರ ವೀಕ್ಷಿಸಿ

ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ.

 *ಸರ್ಕಾರಿ ಶಾಲೆಯ ಗ್ರಾಮೀಣ ಪ್ರತಿಭೆ ಮಹಾಲಕ್ಷ್ಮಿ*ಕುರಿತು ಸಾಕ್ಷಚಿತ್ರ. 

ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ

ಮಕ್ಕಳ ಮಂದಾರ ಪತ್ರಿಕಾ ಬಳಗದ ಪ್ರಸ್ತುತಿ ಯೊಂದಿಗೆ

ಬಾಲ ಸಾಧಕಿ ಮಹಾಲಕ್ಷ್ಮಿಯ ಸಾಕ್ಷಚಿತ್ರ ನಿರ್ಮಾಣ

ವೀಕ್ಷಿಸಿ ಪ್ರೋತ್ಸಾಹಿಸಿ.


ಏಳನೇ ವಯಸ್ಸಿಗೆ ರಾಜ್ಯ, ರಾಷ್ಟ್ರ ಮಟ್ಟದ ಸಾಧನೆ ಮಾಡಿದ ಪುಟ್ಟ ಬಾಲಕಿಯ ಸಾಧನೆಯ ಪಯಣ ನೋಡಿ.
ತೆಲುಗು ಮತ್ತು ಕನ್ನಡ ಚಾನೆಲ್ ಗಳಲ್ಲಿ ಡ್ಯಾನ್ಸ್ ಶೋಗಳಲ್ಲಿ  ಜನ ಮನ ಗೆದ್ದು ವಿನ್ನರ್ ಆದ  ಮಲೆನಾಡಿನ ಮಹಾಲಕ್ಷ್ಮಿ ಕುರಿತಾದ ಸಾಕ್ಷಚಿತ್ರ ಬಿಡುಗಡೆ ಆಗಿದೆ ವೀಕ್ಷಿಸಿ. ನಿಮ್ಮ ಮಕ್ಕಳಿಗೆ ತಪ್ಪದೆ ತೋರಿಸಿ. ಪ್ರೋತ್ಸಾಹಿಸಿ. ಶೇರ್ ಮಾಡಿ.

ನಿಮ್ಮ 
ರವಿರಾಜ್ ಸಾಗರ್
,9980952630

Saturday 19 September 2020

ನಲಿ ಕಲಿ ಗಣಿತ ತರಗತಿಗಳ ಕಲಿಕಾಂಶಗಳು

ನಲಿಕಲಿ ಒಂದರಿಂದ ಮೂರನೇ ತರಗತಿಯವರೆಗೆ ಮಕ್ಕಳು ಗಣಿತದಲ್ಲಿ ಏನೆಲ್ಲ ಕಲಿಯುತ್ತಾರೆ ನೋಡಿ.
 *ನಲಿಕಲಿಯಲ್ಲಿ ಅಳವಡಿಸಿರುವ ಗಣಿತದ ಪರಿಕಲ್ಪನೆಗಳು*

*1ನೇ ತರಗತಿ*

1. ಸಂಖ್ಯೆಗಳು 0-19
ಹಂತ-1 1 ರಿಂದ 5 
ಹಂತ-2 6 ರಿಂದ 9
ಹಂತ-3 0 ಯ ಕಲ್ಪನೆ
ಹಂತ-4 ಸ್ಥಾನ ಬೆಲೆ
ಹಂತ-5 11 ರಿಂದ 19

2. ಹೆಚ್ಚು-ಕಡಿಮೆ-ಸಮ

3. ಹಿಂದೆ-ಮುಂದೆ-ಮಧ್ಯೆ

4. ಏರಿಕೆ-ಇಳಿಕೆ

5. ದಶಕ ರಹಿತ ಸಂಕಲನ

6. ದಶಕ ರಹಿತ ವ್ಯವಕಲನ

7. ದಶಕ ರಹಿತ ಮಿಶ್ರಕ್ರಿಯೆ

8. ಅನೌಪಚಾರಿಕ ಅಳತೆಗಳು

9. ಆಕಾರಗಳು

10.ಹಣ

11.ಸಮಯ

12.‘0’ ರಿಂದ 99ರವರೆಗೆ ಎಣಿಕೆ ಬರವಣಿಗೆ

13.ದತ್ತಾಂಶಗಳ ಸಂಗ್ರಹಣೆ.

*2ನೇ ತರಗತಿ*

1. ಸಂಖ್ಯೆಗಳು 0 ಯಿಂದ 99
ಹಂತ-1 20 ರಿಂದ 50
ಹಂತ-2 51 ರಿಂದ 99

2. ಹೆಚ್ಚು - ಕಡಿಮೆ - ಸಮ

3. ಹಿಂದೆ - ಮುಂದೆ - ಮಧ್ಯೆ

4. ಕನಿಷ್ಠ - ಗರಿಷ್ಠ

5. ಸರಿ -ಬೆಸ

6. ಏರಿಕೆ- ಇಳಿಕೆ

7. ಕ್ರಮವಾಚಕಗಳು

8. ಸಂಕಲನ -ದಶಕ ರಹಿತ ಹಾಗೂ 
ದಶಕ ಸಹಿತ

9. ವ್ಯವಕಲನ-ದಶಕ ರಹಿತ ಹಾಗೂ ದಶಕ ಸಹಿತ

10.ಮಿಶ್ರಕ್ರಿಯೆ -ದಶಕ ರಹಿತ ಹಾಗೂ 
ದಶಕ ಸಹಿತ

11.ಗುಣಾಕಾರ

12.ಭಾಗಾಕಾರ

13.ಅನೌಪಚಾರಿಕ ಅಳತೆಗಳು

14.ಆಕಾರಗಳು

15.ಹಣ

16.ಸಮಯ

17.ದತ್ತಾಂಶಗಳ ಸಂಗ್ರಹಣೆ & ವಿಶ್ಲೇಷಣೆ 

*3ನೇ ತರಗತಿ*

1. ಸಂಖ್ಯೆಗಳು 0 ಯಿಂದ 999
ಹಂತ-1 0 ರಿಂದ 500
ಹಂತ-2 501 ರಿಂದ 999

2. ಹೆಚ್ಚು - ಕಡಿಮೆ - ಸಮ

3. ಹಿಂದೆ - ಮುಂದೆ - ಮಧ್ಯೆ

4. ಏರಿಕೆ -ಇಳಿಕೆ

5. ಸಂಕಲನ ದಶಕ ಸಹಿತ ಹಾಗೂ ದಶಕ ಸಹಿತ

6. ವ್ಯವಕಲನ -ದಶಕ ರಹಿತ ಹಾಗೂ ದಶಕ ಸಹಿತ

7. ಮಿಶ್ರಕ್ರಿಯೆ - ದಶಕ ರಹಿತ ಹಾಗೂ ದಶಕ ಸಹಿತ 

8. ಗುಣಾಕಾರ 

9. ಭಾಗಾಕಾರ

10.ಭಿನ್ನರಾಶಿಗಳು

11.ಸರಿ -ಬೆಸ

12.ಔಪಚಾರಿಕ ಅಳತೆಮಾನಗಳು

13.ಹಣ

14.ಸಮಯ

15.ರೇಖಾಕೃತಿಗಳು & ಘನಾಕೃತಿಗಳು

16.ಸುತ್ತಳತೆ & ವಿಸ್ತೀರ್ಣ

17.ದತ್ತಾಂಶಗಳ ಸಂಗ್ರಹಣೆ,ವಿಶ್ಲೇಷಣೆ ಮತ್ತು 
ಸ್ಥಂಭಲೇಖ

18.ಸಮಮಿತಿ ವಿನ್ಯಾಸಗಳು ಮತ್ತು

Tuesday 15 September 2020

ಕೆ.com. ಕನ್ನಡದ ಎಲ್ಲ ವಿವಿಧ ಉದ್ದೇಶಿತ ಮಾಹಿತಿ ವೆಬ್ ಗಳು ಒಂದೆಡಿ ನಿಮಗಾಗಿ

*ಬಂದಿದೆ ಕನ್ನಡಿಗರ ವೆಬ್‌ಸೈಟ್ ಕನ್ನಡದಲ್ಲಿ*
www.ಕ.com

ನೋಡಿ ಕೋವಿಡ್-19 ಮಾಹಿತಿ ಕನ್ನಡದಲ್ಲಿ
ಕ.com/ಕೋವಿಡ್-19/

ನೋಡಿ ಎಲ್ಲಾ ಕನ್ನಡ ಚಲನಚಿತ್ರಗಳು
ಕ.com/ಚಲನಚಿತ್ರ/

ನೋಡಿ ಕನ್ನಡ ಲೈವ್ ಟಿವಿ ಚಾನಲ್‌ಗಳು
ಕ.com/ಟಿವಿ-ಚ್ಯಾನೆಲ್/

ಓದಿ ಕನ್ನಡ ನ್ಯೂಸ್ ಪೇಪರ್‌ಗಳು
ಕ.com/ಇ-ಪತ್ರಿಕೆ/

ಕೇಳಿ ಕನ್ನಡ ರೇಡಿಯೊ ಚಾನಲ್‌ಗಳು
ಕ.com/ರೇಡಿಯೊ/

ಮತ್ತು ಇನ್ನು ಹಲವಾರು ಸೇವೆಗಳಿಗಾಗಿ
ಕ.com ವೆಬ್‌ಸೈಟ್ ಅನ್ನು ಬ್ರೌಸ್ ಮಾಡಿ

ಈ ಮಾಹಿತಿಯನ್ನು ಫಾರ್ವರ್ಡ್ ಮಾಡಿ, ಎಲ್ಲಾ ಕನ್ನಡಿಗರ ಜೊತೆ ಹಂಚಿಕೊಳ್ಳಿ, ಧನ್ಯವಾದಗಳು.

Friday 11 September 2020

ಮಕ್ಕಳ ಕೋಪ ಶಮನ ಮಾಡಲು ಸರಳ ಮಾರ್ಗಗಳು

ದಿವ್ಯಾಂಕಣ     

                 
 ಪುಟ್ಟ ಮಕ್ಕಳ  ಹಠ ಕೆಲವೊಮ್ಮೆ ಪೋಷಕರಿಗೆ ಕಿರಿಕಿರಿ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಅವರಿಗೆ ಅತೀ ಬೇಸರ ಹಾಗೂ ಮನಸ್ಸಿಗೆ ತುಂಬಾ ನೋವು ಉಂಟಾಗುತ್ತದೆ. ಆದಾಗಿಯೂ ಈ ಸಮಸ್ಯೆಯನ್ನು ಯೋಗ್ಯ ರೀತಿಯಲ್ಲಿ ನಿರ್ವಹಿಸುವುದರ ಮೂಲಕ ನೀವು ಓರ್ವ ನುರಿತ ಪೋಷಕರು ಎಂಬುದನ್ನು ಸಾಬೀತು ಪಡಿಸಲೂ ಸಹ ಇಂತಹ ಸನ್ನಿವೇಶವು ಪೂರಕವಾಗಿರುತ್ತದೆ. ಇತ್ತೀಚೆಗೆ ಕೈಗೊಳ್ಳಲಾದ ಸಮೀಕ್ಷೆಯೊಂದರ ವರದಿಯ ಪ್ರಕಾರ, ಮಕ್ಕಳ ಕುರಿತಾದ ಪೋಷಕರ ಈ ಮೇಲಿನ ಸಮಸ್ಯೆಯ  ವಿಚಾರದಲ್ಲಿ ಯಶಸ್ಸಿನ ದರವು ಸಾಕಷ್ಟು ಕಡಿಮೆ ಇದೆ. ವಾಸ್ತವವಾಗಿ, ಅರ್ಧಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಪೋಷಕರು ಈ ಸಮಸ್ಯೆಯನ್ನು ಎದುರುಗೊಂಡಾಗ ಮಕ್ಕಳತ್ತ ಕಿರುಚುವುದು, ವಿಪರೀತವಾಗಿ ಮಕ್ಕಳಿಗೆ ಬೈಯ್ಯುವುದು, ಮತ್ತು ಮಕ್ಕಳನ್ನು ಹೆದರಿಸುವುದು ಹಾಗೂ ತಮ್ಮ ಬೇಸರವನ್ನು ಹೊರಹಾಕಲು ಬಾಗಿಲುಗಳನ್ನು  ಮುಚ್ಚುವುದು ಇವೇ ಮೊದಲಾದ ಕ್ರಿಯೆಗಳಲ್ಲಿ ತೊಡಗಿದ್ದುದನ್ನು ಒಪ್ಪಿಕೊಳ್ಳುತ್ತಾರೆ.ದೈಹಿಕ ಮತ್ತು ಹಿಂಸಾತ್ಮಕ್ಕ ಕ್ರಿಯೆಗಳೂ ಸಹ ಸಾಮಾನ್ಯ. ಮನೋರೋಗಗಳ ಕುರಿತಾದ ನಿಯತಕಾಲಿಕೆಯೊಂದರಲ್ಲಿ ಪ್ರಕಟಗೊಂಡ ಅಂಕಣವೊಂದು, ಸುಮಾರು ಶೇ. 85% ರಷ್ಟು ಹದಿಹರೆಯದ ಮಕ್ಕಳು ತಮ್ಮ ತಪ್ಪು ವರ್ತನೆಗಾಗಿ ಪೋಷಕರಿಂದ ಶಿಕ್ಷೆಗೆ ಒಳಗಾದ ಅಥವಾ ಹೊಡೆಯಲ್ಪಟ್ಟ ಬಗ್ಗೆ ವಿವರಿಸಲ್ಪಟ್ಟಿದೆ. ಹದಿಹರೆಯದ ಮಕ್ಕಳ ಅತೀ ಸಿಡುಕು, ಕೋಪ, ಮತ್ತು ಚಿಕ್ಕ ಮಕ್ಕಳ ಹಠಮಾರಿತನಗಳನ್ನು ನಿಭಾಯಿಸುವುದರ ಕುರಿತ  ಮಾರ್ಗದರ್ಶಿಯ ಬಗ್ಗೆ ಈ ಕೆಳಗೆ ನೀಡಲಾಗಿದೆ.                         
                    ೧)ಶಾಂತಚಿತ್ತರಾಗಿರುವುದು ಮತ್ತು ಮಕ್ಕಳ ನೈಜ ಸಮಸ್ಯೆಗೆ ಕಿವಿಯಾಗುವುದು. 

ಹೆಚ್ಚಿನ ಪೋಷಕರು ಮಕ್ಕಳ ವರ್ತನೆಯ ಕುರಿತು  ಬೇಗನೇ ತಾಳ್ಮೆಯನ್ನು ಕಳೆದುಕೊಳ್ಳುತ್ತಾರೆ ಆದ್ದರಿಂದ, ಅವರು ಮಕ್ಕಳ ಕುರಿತು ಬಹು ಬೇಗ ಕೋಪಗೊಳ್ಳುತ್ತಾರೆ.   ಕೆಲವೊಮ್ಮೆಯಂತೂ ಮಕ್ಕಳು ದೈಹಿಕ ಹಿಂಸೆಯ ಕುರಿತೂ ಸಹ ಪೋಷಕರನ್ನು ಭಯಗೊಳಿಸುತ್ತಾರೆ. ಆದರೆ, ಈ ಎಲ್ಲಾ ಸಂದರ್ಭಗಳಲ್ಲಿಯೂ ಪೋಷಕರ ಕೋಪಭರಿತ ಪ್ರತಿಕ್ರಿಯೆಯು ಉರಿಯುವ ಬೆಂಕಿಗೆ ತುಪ್ಪ ಸುರಿದoತಾಗುತ್ತದೆ ಮತ್ತು ನೆಮ್ಮದಿ ಎಂಬುದು ಮರೀಚಿಕೆಯಾಗುತ್ತದೆ. ಇದಕ್ಕೆ ಬದಲಾಗಿ, ಪೋಷಕರು ಇಂತಹ ಸನ್ನಿವೇಶಗಳಲ್ಲಿ ಶಾಂತಚಿತ್ತತೆಯನ್ನು ಕಾಪಾಡಿಕೊಳ್ಳುವಂತೆ ತಜ್ಞರು ಶಿಪಾರಸು ಮಾಡುತ್ತಾರೆ. ಏಕೆಂದರೆ, ಮಕ್ಕಳಂತೆಯೇ ಪೋಷಕರೂ ಕೂಡ ಇಂತಹ ಸಂದರ್ಭದಲ್ಲಿ ಕೋಪೋದ್ರಿಕ್ತರಾಗಿ ವರ್ತಿಸತೊಡಗಿದರೆ, ಅದು ಅನವಶ್ಯಕವಾಗಿ ಪರಿಸ್ಥಿತಿಯೂ ದು:ಖಾಂತವಾಗಬಹುದು. ಇಷ್ಟಕ್ಕೂ, ತಾಳ್ಮೆ ಹಾಗೂ ಸಮಾಧಾನದಿಂದ ಕೂಡಿದ ಪೋಷಕರ ವರ್ತನೆಯು ಮಕ್ಕಳ ಪಾಲಿಗೆ "ಬಿರುಗಾಳಿಯ ನಡುವೆ ಸಿಕ್ಕ ಸ್ವರ್ಗ" ದಂತೆ ಅಪ್ಯಾಯಮಾನವಾಗಬಹುದು. ಬಹುತೇಕ ತಜ್ಞರ ಅಭಿಮತದ ಪ್ರಕಾರ ಮಕ್ಕಳ ಅಂತಹ ವರ್ತನೆಯನ್ನು ಸಂಪೂರ್ಣವಾಗಿ ಹೊರಹರಿಯಲು ಅವಕಾಶ ಕಲ್ಪಿಸಿಕೊಡಬೇಕು. ಹೀಗೆ ಮಾಡುವುದರಿಂದ ಮಗುವಿನ ನೈಜ ಸಮಸ್ಯೆಯನ್ನು ಅರಿತಂತಾಗುತ್ತದೆ ಹಾಗೂ ತನ್ಮೂಲಕ ಮಗುವೂ ಸಹ ನಿರ್ಲಕ್ಷ್ಯಕ್ಕೆ ಒಳಗಾದ ಅಥವಾ ಮನಸ್ಸಿಗೆ ಅಘಾತವಾದ ಭಾವನೆಗೆ ಈಡಾಗುವುದಿಲ್ಲ.        

  ೨.ಯಾವುದೇ ಕಾರಣಕ್ಕೂ ಸಹ ಮಕ್ಕಳ ಮೇಲೆ ದೈಹಿಕ ಹಲ್ಲೆಯನ್ನು ಮಾಡಬೇಡಿ.                    ಮಗುವಿಗೆ ಕೋಪಬಂದಾಗ ಮಗುವು ಪೀಠೋಪಕರಣವನ್ನೋ ಅಥವಾ ಕೆಲವೊಮ್ಮೆ ತನ್ನ ಸಹೋದರನ್ನೋ ಅಥವಾ ಇನ್ನೂ ಕೆಲವೊಮ್ಮೆ ತನ್ನ ಹೆತ್ತವರನ್ನೇ ಹೊಡೆಯಲು ಮುಂದಾದಾಗ, ಆ ಮಗುವಿನ ವರ್ತನೆಯೂ ಸಹಿಸಲು ಅಸಾಧ್ಯ ಅನಿಸುತ್ತದೆ   ಇಂತಹ ಸನ್ನಿವೇಶದಲ್ಲಿ ಹೆತ್ತವರು, ದೈಹಿಕವಾಗಿ ಶಿಕ್ಷಿಸಿದರೇ  ಮಗುವಿನೊಂದಿಗೆ ವ್ಯವಹರಿಸುವುದು ಅವರಿಗೆ ಕಷ್ಟವಾಗುತ್ತದೆ. ಮಗುವಿನ ಮನಸ್ಸಿನಲ್ಲಿ ಅದಾಗಲೇ ದ್ವೇಷವು ಮನೆಮಾಡಿರುತ್ತದೆ ಹಾಗೂ ಅದರ ಪರಿಣಾಮವಾಗಿ ಮಗುವನ್ನು ಶಾಂತ ಮನಸ್ಥಿತಿಗೆ ತರುವುದು ಮತ್ತಷ್ಟೂ ಜಟಿಲವಾಗುತ್ತದೆ. ಪೋಷಕರ ವತಿಯಿಂದ ದೈಹಿಕ ಪ್ರತಿಕ್ರಿಯೆಯು ಮಕ್ಕಳ ವರ್ತನೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ ಮತ್ತು ಇದು ನಿಜಕ್ಕೂ ಹೆತ್ತವರಿಗೆ ಅನಪೇಕ್ಷಣೀಯವಾಗಿರುತ್ತದೆ. ಹೆತ್ತವರ ಕಡೆಯಿಂದ ಇಂತಹ ವರ್ತನೆಯು ಖಂಡಿತವಾಗಿಯೂ ಒಳ್ಳೆಯದಲ್ಲ ಯಾಕೆಂದರೆ, ಇದು ಪರಿಸ್ಥಿಯನ್ನು ತಿಳಿಗೊಳಿಸುವುದರ ಬದಲಾಗಿ ತೊಂದರೆಯನ್ನು ಉಂಟುಮಾಡುತ್ತದೆ.  
           3.ಸಿಟ್ಟಿನ ಸಂದರ್ಭದಲ್ಲಿ ಸರಿಯಾದ ವರ್ತನೆಯ ಕುರಿತು ತಿಳಿಹೇಳುವುದು:                    
 ಒಮ್ಮೆ ಪರಿಸ್ಥಿತಿ ತಿಳಿಯಾದ ನಂತರ  ಈ ಹಿಂದೆ ಸಂಭವಿಸಿದ ಕಹಿ ಸನ್ನಿವೇಶದ ಕುರಿತು ಮಕ್ಕಳಲ್ಲಿ ಪ್ರಸ್ತಾಪಿಸುವುದು ಅತೀ ಅಗತ್ಯ. ಇದು ಯಾವ ರೀತಿಯಾಗಿರಬೇಕೆಂದರೆ ಆ ಮಗುವಿಗೆ ತನ್ನ ತಂದೆ ತಾಯಿಯು ಪರಿಸ್ಥಿಯನ್ನು ಅರ್ಥಮಾಡಿಕೊಂಡಿದ್ದಾರೆ ಎಂಬುದು ಅರಿವಾಗುವoತಿರಬೇಕು. ಕೋಪವನ್ನುoಟು ಮಾಡುವ ಸಂದರ್ಭದಲ್ಲಿ  ಸರಿಯಾದ ರೀತಿಯಲ್ಲಿ ವರ್ತಿಸಲು ಇರುವ ಇತರ ಅನೇಕ ಮಾರ್ಗೋಪಾಯಗಳ ಬಗ್ಗೆ ಮಕ್ಕಳಿಗೆ ಅರಿವಾಗುವಂತೆ ತಿಳಿ ಹೇಳುವುದು ಒಂದು ಅತ್ಯುತ್ತಮ ಆರಂಭ. ಮೊದಲು, ನಿಜವಾಗಿಯಾದರೂ ನಡೆದದ್ದೇನು ಎಂಬುದರ ಬಗ್ಗೆ ಮಕ್ಕಳಿಂದ ವಿವರಣೆಯನ್ನು ಪಡೆಯಬೇಕು. ಆದರೆ, ಹೆಚ್ಚಿನ ಹೆತ್ತವರು ಇದರ ಗೋಜಿಗೇ ಹೋಗುವುದಿಲ್ಲ. ಕಾರಣ, ಅವರು ಅವರದ್ದೇ ಅದ ನಿರಾಶೆ, ಹತಾಶೆಗಳಿಂದ ಬಳಲುತ್ತಿರುತ್ತಾರೆ ಮತ್ತು ಸ್ವಭಾವತಃ ಕೋಪಿಷ್ಟರಾಗಿರುತ್ತಾರೆ. ಇದಾದ ನಂತರ, ಕೋಪದ ಸನ್ನಿವೇಶಗಳಲ್ಲಿ ಹೇಗೆ ಬೇರೆ ಬೇರೆ ಉತ್ತಮ ಮಾರ್ಗೊಪಾಯಗಳಿಂದ ಪರಿಸ್ಥಿತಿಯನ್ನು ನಿಭಾಯಿಸಬಹುದು ಎಂಬುದನ್ನು ಮಕ್ಕಳಿಂದಲೇ ಕೇಳಿ ಉತ್ತರ ಪಡೆಯಿರಿ. ಚಿಕ್ಕ ಮಕ್ಕಳಿಗಂತೂ ಇವೆಲ್ಲವನ್ನೂ ಸ್ವತಃ ಹೆತ್ತವರೇ ಸರಳವಾಗಿ ಅವರಿಗೆ ಮನದಟ್ಟಾಗುವಂತೆ ತಿಳಿಸಿಹೇಳಬೇಕಾಗುತ್ತದೆ.     ಕೋಪದ ಮತ್ತು ಬೇಸರದ ಸಂದರ್ಭಗಳಲ್ಲಿ ವ್ಯವಹರಿಸಬೇಕಾದ ಸ್ವೀಕಾರಾರ್ಹ ಮಾರ್ಗಗಳ ಕುರಿತು ಮಕ್ಕಳೊಂದಿಗೆ ಚರ್ಚಿಸಿರಿ.              

   4.ಕೋಪವನ್ನು ಕಡಿಮೆ ಮಾಡಲು ದೈಹಿಕ ಚಟುವಟಿಕೆಗಳು:   ಕೋಪವನ್ನು ಹಾನಿಕಾರಕವಲ್ಲದ ರೀತಿಯಲ್ಲಿ ಹೊರಹಾಕಬಹುದು.ಇದಕ್ಕೆ ಸಂಬಂಧಿಸಿದಂತೆ ಒಂದು ಸರಳವಾದ ಆಟವು ಈ ರೀತಿ ಇದೆ. ಇದಕ್ಕೆ ಬೇಕಾಗಿರುವುದು ಬಯಲಲ್ಲಿ ಒಂದು ಗೋಡೆ ಮತ್ತು ಕೆಲವು ಒದ್ದೆ ಬಟ್ಟೆಗಳು. ಮಕ್ಕಳು, ಅವರಿಗೆ ಬೇಸರವನ್ನುಂಟು ಮಾಡುವ ಅಥವಾ ಅವರನ್ನು ಕೆರಳಿಸುವ ಸನ್ನಿವೇಶಗಳು ಮತ್ತು ಜನರ ಕುರಿತಾಗಿ ಈ ಗೋಡೆಯ ಮೇಲೆ ಅವರು ಬರೆಯಬೇಕು. ನಂತರ ಅವರು ಒದ್ದೆ ಬಟ್ಟೆಗಳನ್ನು ತಮ್ಮ ಬರವಣಿಗೆಗಳ ಮೇಲೆ ಎಸೆಯಲು ಅವಕಾಶ ಒದಗಿಸಬೇಕು. ಇದೊಂದು ಹಾನಿಕಾರಕವಲ್ಲದ ಕ್ರಿಯೆಯಾಗಿದ್ದು, ಕೋಪವನ್ನು ಮನಸ್ಸಿನಿಂದ ಹೊರಹಾಕಲು ಒಂದು ಸರಳ ಮಾರ್ಗೋಪಾಯ. ಇಂತಹ ಒಂದು ಕ್ರೀಡೆಯನ್ನು ಮಕ್ಕಳಿಗೆ ತಿಳಿಸುವುದರ ಮೂಲಕ ಪೋಷಕರು ಮಕ್ಕಳಿಗೆ ಕೋಪದೊಂದಿಗೆ ವ್ಯವಹರಿಸುವ ಪರಿಣಾಮಕಾರಿ ಮಾರ್ಗಗಳ ಇರುವಿಕೆಯ ಬಗ್ಗೆ ತಿಳಿಸಿದಂತಾಗುವುದು. 
5.ಕೋಪದೊಂದಿಗೆ ನೀವು ಹೇಗೆ ವ್ಯವಹರಿಸುತ್ತೀರಿ ಎಂಬುದನ್ನು ಸ್ವತಃ ನೀವೇ ಅವರಿಗೆ ತೋರಿಸಿಕೊಡಿ: ಮಕ್ಕಳು ಇತರರ ವರ್ತನೆಯನ್ನು ಅನುಸರಿಸುವುದರಲ್ಲಿ ಬಹಳ ನಿಸ್ಸೀಮರು. ಈ ಕಾರಣಕ್ಕಾಗಿಯೇ, ಪೋಷಕರು ತಾವು ಕೋಪದೊಂದಿಗೆ ಸ್ವತಹ ಹೇಗೆ ವರ್ತಿಸುತ್ತಾರೆ ಎಂಬುದನ್ನು ತೋರಿಸಿಕೊಡಬೇಕಾಗುತ್ತದೆ. ನಿಮಗಿರುವ ಬೇಸರ ಮತ್ತು ನಿಮಗೆ ಕೋಪ ತರಿಸುವ ಸನ್ನಿವೇಶಗಳ ಬಗ್ಗೆ ಮಾತನಾಡಿರಿ ಹಾಗೂ ಅಂತಹ ಸಂದರ್ಭಗಳಲ್ಲಿ ನೀವು ಹೇಗೆ ವರ್ತಿಸುವಿರಿ ಎಂಬುದನ್ನು ತೋರಿಸಿ ಕೊಡಿ. ಹಾ ನೆನಪಿರಲಿ, ಈ ಸಂದರ್ಭದಲ್ಲಿ ನೀವು ತಾಳ್ಮೆ ಕಳೆದುಕೊಳ್ಳಬಾರದು ಅಥವಾ ಕುರ್ಚಿ ಮೇಜುಗಳನ್ನು ಎತ್ತಿ ಎಸೆಯಬಾರದು. ಹಾಗೆಯೇ ನೀವು ತಿಳಿಹೇಳಿದ್ದು ಸಮoಜಸವಾದುದಾಗಿದ್ದರೆ ಅದನ್ನು ಅನುಮೋದಿಸಲು ನಿಮ್ಮ ಮಗುವನ್ನು ಪ್ರೋತ್ಸಾಹಿಸಿರಿ. ಅಂತೆಯೇ, ನಿಮಗೂ ಕೂಡ ಸ್ವಲ್ಪ ಮಾನಸಿಕ ನೆಮ್ಮದಿಯ ಅವಶ್ಯಕತೆಯಿದೆ ಎಂಬುದನ್ನು ಅವರಿಗೆ ತೋರಿಸಲು ಹೆದರಬೇಡಿ. ಕೆಲವು ಹೆತ್ತವರು ಕಾರಿನಂತಹ ತಮ್ಮ ಖಾಸಗಿ ವಾಹನದಲ್ಲಿ ತಮ್ಮ ಸಿಟ್ಟೆಲ್ಲವನ್ನೂ ಹೊರಹಾಕಿದರೆ, ಮತ್ತೆ ಕೆಲವರು ತಲೆದಿಂಬಿಗೆ ಬಾರಿಸುತ್ತಲೋ ತಮ್ಮ ಕೋಪವನ್ನು ಹೊರಗೆಡವುತ್ತಾರೆ, ಅದೂ ಕೂಡ ಖಾಸಗಿಯಾಗಿ. ನಿಜಕ್ಕೂ ಅತ್ಯಂತ ಕಠಿಣತಮ ಸವಾಲು ಯಾವುದೆಂದರೆ ಪೋಷಕರು ತಮ್ಮ ತಾಳ್ಮೆಯ ಕಟ್ಟೆಯೊಡೆದು, ಮಕ್ಕಳ ಮೇಲೆ ಸಿಕ್ಕಾಪಟ್ಟೆ ಸಿಟ್ಟಿಗೇಳುವ ಸಂದರ್ಭ. ಇದು ನಿಜಕ್ಕೂ ಹೆತ್ತವರ ಪಾಲಿಗೆ ಅಗ್ನಿಪರೀಕ್ಷೆ. ಆದರೆ, ಈ ಮೇಲೆ ಸೂಚಿಸಿದ ಪಂಚ ಸೂತ್ರಗಳನ್ನು ಅನುಸರಿಸುವುದರ ಮೂಲಕ ಪೋಷಕರು ಸ್ವತಹ ತಮ್ಮ ಕೋಪವನ್ನು ಹಾಗೂ ತಮ್ಮ ಮಕ್ಕಳ ಕೋಪವನ್ನೂ ಸಹ ಪರಿಣಾಮಕಾರಿಯಾಗಿ ನಿಭಾಯಿಸಬಲ್ಲರು.

ಡಾ.ದಿವ್ಯಾ ವಿನಯ್