ರವಿರಾಜ್ ಸಾಗರ್
ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ
- Home
- ಸಂಪಾದಕೀಯ
- ಮಕ್ಕಳು ಬರೆದ ಕತೆ /ಕವನಗಳು
- ನಮ್ಮೂರ ಸುದ್ದಿಗಳು
- ಮಕ್ಕಳ ಬರಹಗಳು
- ಬಾಲ ಸಾಧಕರು
- ಮಕ್ಕಳು ಬಿಡಿಸಿದ ಚಿತ್ರಗಳು
- ನಮ್ಮೂರ ಜಾನಪದ
- ಜ್ಞಾನ - ವಿಜ್ಞಾನ
- ಸಾಮಾನ್ಯ ಜ್ಞಾನ
- ನಮ್ಮ ಪತ್ರಿಕಾ ಅಭಿಯಾನಗಳು
- ಓದುಗರ ಓಲೆ
- ಅತಿಥಿ ಸಾಹಿತಿಗಳ ಅಂಕಣ
- ಮಕ್ಕಳ ಪುಸ್ತಕಗಳ ಪರಿಚಯ-ಆನ್ ಲೈನ್ ಬುಕ್ ಹೌಸ್
- ಶೈಕ್ಷಣಿಕ ಲೇಖನಗಳು
- ಶೈಕ್ಷಣಿಕ ಚಟುವಟಿಕೆಗಳು
- ಲಾಂಗ್ವೇಜ್ ಕಾರ್ನರ್
- 1ರಿಂದ -puc ತರಗತಿ ಈ ಶಾಲೆ
- ನನ್ನ ಶೈಕ್ಷಣಿಕ ವೀಡಿಯೋಗಳು
- ಸಾರ್ವಜನಿಕ ಶಿಕ್ಷಣ ಇಲಾಖೆ
- ಹಿಂದಿನ ಸಂಚಿಕೆಗಳು ಮತ್ತು ಪತ್ರಿಕೆ ಕುರಿತು ಮಾಧ್ಯಮ ವರದಿ ...
- ನಮ್ಮ ಕುರಿತು ಫೋಟೋ ಗ್ಯಾಲರಿ
- ಅಂಕಣ ಬರಹ- ಕನಸುಗಳೂರ ಶ್ರಮಿಕ
- ಆನ್ಲೈನ್ ಪುಸ್ತಕ ಮಳಿಗೆಗಳು
- ಪಿಡಿಎಫ್ ಪುಸ್ತಕಗಳು.
- Ravichandra
- ಆನ್ಲೈನ್ ಪಾಠಗಳು - ದೀಕ್ಷಾ ಪೊರ್ಟಲ್
- ಇನ್ನೋವೇಟಿವ್ ಎಜ್ಯುಕೇಶನ್
Saturday 2 September 2017
Saturday 5 August 2017
ಎಲ್ಲದಕ್ಕೂ ರಾಜಕಾರಣಿಗಳೇ ಹೊಣೆಯೇ....
ಈ ವ್ಯವಸ್ಥೆಯ ಬಗ್ಗೆ ಧನಿ ಎತ್ತಬೇಕಾದ ಚಿಂತಕರು ಬುದ್ಧಿಜೀವಿಗಳನ್ನು ಅಕಾಡೆಮಿಗಳ ಹುದ್ದೆಗಳಲ್ಲಿ ಬಂಧಿತರಾಗಿದ್ದರೆ..ಕೆಲವರು ಕೆಲವೇ ಸಿದ್ದಾಂತಗಳಿಗೆ ಅಂಟಿಕೊಂಡಿದ್ದಾರೆ... ಸಾಮಾನ್ಯರಿಗೆ ಈಗೀಗ ಸರಕಾರಿ ಸವಲತ್ತು ಕೊಡಿಸುವ ರಾಜಕಾರಣಿಗಳ ಸುತ್ತ ಸುತ್ತುವ ಅನಿವಾರ್ಯ. ಇನ್ನು ನೌಕರರಿಗೆ ತಿಂಗಳ ಸಂಬಳ ಹೆಚ್ಚಾದರೆ ಸಾಕು... ಎಲ್ಲ ಅಭಿವೃದ್ಧಿ ಅಥವಾ ಸಮಸ್ಯೆಗೆ ಮುಖ್ಯಮಂತ್ರಿ ಅತ್ವಾ ಪ್ರಧಾನ ಮಂತ್ರಿ ಪರಿಹಾರ ಕೊಡಲು ಸಾಧ್ಯವಿಲ್ಲ... ಅತ್ವಾ ಅಧಿಕಾರದಲ್ಲಿದ್ದವರೆ ಎಲ್ಲದಕ್ಕೂ ಹೊಣೆಗಾರರಲ್ಲ. ಎಲ್ಲರೂ ಬದಲಾವಣೆಗೆ ಸ್ಪಂದಿಸಬೇಕು...ಹಕ್ಕಿನ ಜೊತೆಗೆ ಕರ್ತ್ಯವ್ಯ ನಿಭಾಯಿಸಬೇಕು...
ಮೋದಿ. ನೇಹರು ,ಇಂದಿರಾಗಾಂಧಿ ಎಲ್ಲರೂ ಅವರವರ ಶ್ರಮ ದೇಶಕ್ಕೆ ನೀಡಿದ್ದಾರೆ... ಶ್ರಮ ಸಾಮಾನ್ಯರು ಟೀಕಿಸುವಷ್ಟು ಕೆಳಮಟ್ಟದ್ದಲ್ಲ. ಎಲ್ಲ ಪ್ರಧಾನಿಗಳು ನಮ್ಮ ದೇಶದ ಏಳಿಗೆಗೆ ಒಂದಿಷ್ಟು ಶ್ರಮಿಸಿದ್ದಾರೆ... ಅವರವರ ರಾಜಕೀಯ ಭವಿಷ್ಯದ ಜೊತೆಗೆ ನಡೆದಿದ್ದಾರೆ... ಗಾಂಧಿಜಿಯಂತಹವರನ್ನು ಟೀಕಿಸುವ ಗುಂಪುಗಳಿವೆ.... ರಾಮನಲ್ಲೂ ದೋಷ ಹುಡುಕುವವರಿದ್ದಾರೆ..ಹೀಗಿರಲು ಸಾಮಾನ್ಯರು ಮತ್ತು ಅಸಮಾನ್ಯರು... ಅಧಿಕಾರಿಗಳು ಮತ್ತು ಆಡಳಿತ ಶಾಹಿಗಳು ಯಾರದು ಸರಿ ಯಾರದು ತಪ್ಪು...
Monday 31 July 2017
ಶಿಕ್ಷಣ ಇಲಾಖೆಯ ಸಂಪರ್ಕಕ್ಕೆ ದೂರವಾಣಿ ಕರೆ ಮಾಹಿತಿ
ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ಹೆಸರು ಮತ್ತು ಪದನಾಮ ಸಂಪರ್ಕ ಸಂಖ್ಯೆ ಮತ್ತು ಇ-ಮೇಲ್ ವಿಳಾಸ
01
ಶ್ರೀಮತಿ ಸೌಜನ್ಯ., ಭಾ.ಆ.ಸೇ.,
ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ,
ನೃಪತುಂಗ ರಸ್ತೆ, ಬೆಂಗಳೂರು.
ದೂರವಾಣಿ: +91-080-22214350.
ಫ್ಯಾಕ್ಷ್ : +91-080-22212137.
ಇ-ಮೇಲ್ : cpi.edu.sgkar@kar.nic.in
02
ಶ್ರೀ ವೀರಣ್ಣ ಜಿ.ತುರಮರಿ., ಕ.ಆ.ಸೇ.,
ಅಪರ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ,
ಧಾರವಾಡ.
ದೂರವಾಣಿ: +91-0836-2217062.
ಫ್ಯಾಕ್ಷ್ : +91-0836-2217067.
ಇ-ಮೇಲ್ : cpi.edu.kardwd@nic.in
03
ಶ್ರೀ ರಾಧಾಕೃಷ್ಣರಾವ್ ಮದನಕರ್., ಕ.ಆ.ಸೇ.,
ಅಪರ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ,
ಕಲಬುರಗಿ.
ದೂರವಾಣಿ: +91-08472-266963.
ಫ್ಯಾಕ್ಷ್ : +91-08472-255172.
ಇ-ಮೇಲ್ : cpi.edu.karglb@nic.in
04
ಶ್ರೀಮತಿ ಎಸ್.ಕಾತ್ಯಾಯನಿ ದೇವಿ, ಕ.ಆ.ಸೇ.,
ಜಂಟಿ ನಿರ್ದೇಶಕರು(ಆಡಳಿತ)
ದೂರವಾಣಿ:+91-080-22213129.
ಫ್ಯಾಕ್ಷ್ : +91-080-22211086.
ಇ-ಮೇಲ್ : jdadmin.edu.sgkar@kar.nic.in
05
ಸಾರ್ವಜನಿಕ ಸಂಪರ್ಕಾಧಿಕಾರಿ
ದೂರವಾಣಿ:+91-080-22484716.
ಫ್ಯಾಕ್ಷ್ : +91-080-22211086.
ಇ-ಮೇಲ್ : cpipro.edu.sgkar@kar.nic.in
ಕೇಂದ್ರೀಕೃತ ದಾಖಲಾತಿ ಘಟಕದ ಅಧಿಕಾರಿಗಳನ್ನು ಸಂಪರ್ಕಿಸಬೇಕಾದ ಮಾಹಿತಿ - ಬಿ.ಇಡಿ., ಡಿ.ಇಡಿ. ಕೌನ್ಸಿಲಿಂಗ್ ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಕರ ನೇಮಕಾತಿ ಕೌನ್ಸಿಲಿಂಗ್ ಇತ್ಯಾದಿ
06
ಶ್ರೀ ಡಿ.ಕೆ.ಶಿವಕುಮಾರ್,
ವಿಶೇಷಾಧಿಕಾರಿಗಳು ಹಾಗೂ ಸಹನಿರ್ದೇಶಕರು
ಕೇಂದ್ರೀಕೃತ ದಾಖಲಾತಿ ಘಟಕ[CAC]
ದೂರವಾಣಿ: +91-080-22228805, 22271866, 22483145.
ಮೊಬೈಲ್ : +91-9449823723.
ಇ-ಮೇಲ್ : cackarnataka@gmail.com
07
ಶ್ರೀ ಕೆ.ರತ್ನಯ್ಯ
ಉಪನಿರ್ದೇಶಕರು
ಕೇಂದ್ರೀಕೃತ ದಾಖಲಾತಿ ಘಟಕ[CAC]
ದೂರವಾಣಿ: +91-080-22228805, 22271866, 22483145.
ಮೊಬೈಲ್: +91-9483522744.
ಇ-ಮೇಲ್ : cackarnataka@gmail.com
ಪ್ರಾಥಮಿಕ ಶಿಕ್ಷಣ ನಿರ್ದೇಶನಾಲಯ ಅಧಿಕಾರಿಗಳನ್ನು ಸಂಪರ್ಕಿಸಬೇಕಾದ ಮಾಹಿತಿ - ನೇಮಕಾತಿ, ವರ್ಗಾವಣೆ ಇತ್ಯಾಧಿ.
08
ಶ್ರೀ ಕೆ.ಆನಂದ,
ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ,
ಪ್ರಾಥಮಿಕ ಶಿಕ್ಷಣ
ದೂರವಾಣಿ: +91-080-22210117
ಮೊಬೈಲ್: +91-9448999411.
ಇ-ಮೇಲ್ : prydirector.edu.sgkar@nic.in
09
ಶ್ರೀ ಹಸನ್ ಮೊಹಿದ್ದೀನ್,
ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ,
ಪ್ರಾಥಮಿಕ ಶಿಕ್ಷಣ
Phone: +91-080-22215219
ಇ-ಮೇಲ್ : ddpiprimary.edu.sgkar@nic.in
ಪ್ರೌಢ ಶಿಕ್ಷಣ ನಿರ್ದೇಶನಾಲಯ ಅಧಿಕಾರಿಗಳನ್ನು ಸಂಪರ್ಕಿಸಬೇಕಾದ ಮಾಹಿತಿ - ನೇಮಕಾತಿ, ವರ್ಗಾವಣೆ ಇತ್ಯಾಧಿ.
10
ಶ್ರೀಮತಿ ಫಿಲೋಮಿನಾ ಲೋಬೋ.,
ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ,
ಪ್ರೌಢ ಶಿಕ್ಷಣ
ದೂರವಾಣಿ: +91-080-22212873
ಮೊಬೈಲ್: +91-9448999421.
ಇ-ಮೇಲ್ : secdirector.edu.sgkar@nic.in
11
ಶ್ರೀ ಹೆಚ್.ಕೆ.ಲಿಂಗರಾಜು,
ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ,
ಪ್ರೌಢ ಶಿಕ್ಷಣ
ದೂರವಾಣಿ: +91-080-22246976
ಮೊಬೈಲ್: ddpisecondary.edu.sgkar@nic.in
ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯದ ಅಧಿಕಾರಿಗಳನ್ನು ಸಂಪರ್ಕಿಸಬೇಕಾದ ಮಾಹಿತಿ - ನೇಮಕಾತಿ, ವರ್ಗಾವಣೆ ಇತ್ಯಾಧಿ.
12
ಶ್ರೀಮತಿ ಜೋಹರ್ ಜಬೀನ್,
ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ,
ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ,
ದೂರವಾಣಿ: +91-080-22213766 ಫ್ಯಾಕ್ಷ್ :+91-22238718
ಮೊಬೈಲ್: +91-9448999442.
ಇ-ಮೇಲ್ : mindirector.edu.sgkar@nic.in
13
ಶ್ರೀ ಗಂಗಾಧರ್,
ಮುಖ್ಯ ಲೆಕ್ಕಾಧಿಕಾರಿಗಳು,
ದೂರವಾಣಿ: +91-080-22214352
ಇ-ಮೇಲ್ : cao.edu.karbng@nic.in
14
ಶ್ರೀ ಕಮಲಾಕರ ಟಿ ಎನ್
ಹಿರಿಯ ಸಹಾಯಕ ನಿರ್ದೇಶಕರು,
ಸಿಬ್ಬಂದಿ ಶಾಖೆ(ಅಧಿಕಾರಿಗಳು)
ದೂರವಾಣಿ: +91-080-22246975
ಇ-ಮೇಲ್ : soest1.edu.sgkar@nic.in
r
Sunday 23 July 2017
ಪುಸ್ತಕ ಪ್ರಕಟಣೆಗೆ ಮುಂದಾಗುವ ಮುನ್ನ ಗಮನಿಸಿ....
ಇತರ ಬರಹಗಳು ಆದರೆ ನಿಮಗೆ ಸೂಕ್ತವೆನಿಸಿದ ಅನುಕ್ರಮದಲ್ಲಿ ಬರಹಗಳನ್ನು ಸಿದ್ದಪಡಿಸಿಕೊಳ್ಳಿ.
ನಿಮ್ಮ ಬರಹಗಳನ್ನು ಬಿಡುವಾದಾಗ ಟೈಪ್ ಮಾಡಿ ಅನುಕ್ರಮವಾಗಿ ಒಂದು ಫೈಲ್ ಮಾಡಿಟ್ಟುಕೊಳ್ಳಿ. ಹೀಗೆ ಟೈಪ್ ಮಾಡುವಾಗ ನುಡಿ -ಶ್ರೀಲಿಪಿ - ಬರಹಗಳನ್ನೇ ಹೆಚ್ಚು ಬಳಸಿ ಸಾಧ್ಯವಾಗದೇ ಇದ್ದಲ್ಲಿ ಯುನಿಕೋಡ್ ನಲ್ಲೇ ( ಸಾಮಾನ್ಯವಾಗಿ ನಾವು ಬಳಸುವ ಗೂಗುಲ್ ಕನ್ನಡ ಟೈಪ್ ಮತ್ತು ಮೊಬೈಲ್ ನ ಜಸ್ಟ್ ಕನ್ನಡ ಟೈಪ್ ಗಳು ) ಟೈಪಿಸಿಕೊಳ್ಳಿ. ಆಮೇಲೆ ಅದನ್ನು ASCI ಆಗಿ ಕನ್ವರ್ಟ್ ಮಾಡಿಕೊಳ್ಳಬೇಕು.
ಉದಾ: 70 GSM Maplitho ಕಾಗದ, ಮ್ಯಾಟ್ ಫಿನಿಷಿಂಗ್ ಇರುವ Multicolor ಮುಖಪುಟವನ್ನು ಮಾಡಿಸಿಕೊಳ್ಳಿ. ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಗುಣಮಟ್ಟದ ಕಾಗದಕ್ಕೆ ಹೋಗಬಹುದು ಆದರೆ ಖರ್ಚು ಜಾಸ್ತಿಯಾಗುತ್ತದೆ.
70 GSM Maplitho - 4 color - 98/108 page - 1/8 ಡೆಮಿ = ಕನಿಷ್ಠ ದರ ರೂ.25000
70 GSM Maplitho - 4 color - 98/108 page - 1/9 ಡೆಮಿ = ಕನಿಷ್ಠ ದರ ರೂ.23000
70 GSM Maplitho - 4 color - 98/108 page - 1/6 ಡೆಮಿ = ಕನಿಷ್ಠ ದರ ರೂ.30000
ISBN ನಂಬರು ನಿಮಗೆ ಸಿಕ್ಕ ಮೇಲೆ ಅದನ್ನು ಪುಸ್ತಕದ ಮುಖಪುಟ ಮತ್ತು ಒಳಪುಟದಲ್ಲಿ ನಮೂದಿಸಿ.
70 GSM Maplitho - 4 color - 108 page - 1/8 ಡೆಮಿ ಪುಸ್ತಕದ ಒಂದು ಪುಟಕ್ಕೆ 0.60 ಪೈಸೆ ಅಂದುಕೊಂಡರೆ ರೂ. 64.80 ಯಂತೆ
Sunday 25 June 2017
ಕೆಲವರಿಗೆ ಸಮಾಜ ಸುಧಾರಕರು, ಚಿಂತಕರೇಕೆ ಶತ್ರುಗಳಾಗುತ್ತಾರೆ....?
ಇಲ್ಲಿ ಪ್ರಮುಖ ವಿಷ್ಯ ಏನೆಂದರೆ ಈ ತರ ಧರ್ಮದ ಹೆಸರಲ್ಲಿ ಕಸುಬು ಮಾಡಿಕೊಂಡವರೆಲ್ಲ ಆಯಾ ದೇಶದ ಪ್ರಬಲ ಮೇಲ್ವರ್ಗಗಳು. ಪ್ರತಿ ದೇಶದಲ್ಲಿ ಇರುವ ಇಂಥ ಮನಸ್ಥಿತಿಯ 10 % ಜನ ಜಗತ್ತನ್ನು ಧರ್ಮದ ಹೆಸರಲ್ಲಿ ಹಿಡಿದಿಟ್ಟು ಒಡೆದು ಆಳುವ ದೂರಾಲೋಚನೆ ಜೊತೆಗೆ ಕಾಲಕಾಲಕ್ಕೆ ಬೇಕಾದ ತಂತ್ರ ಕುತಂತ್ರ ಮೂಲಕ ದುರಂತ ಇತಿಹಾಸ ಸನ್ನೀವೇಶ ಸೃಷ್ಟಿಗೆ ಕಾರಣರಾಗಿದ್ದಾರೆ.
ಅವರಿಗೆ ಸದಾ ಸಾಮಾನ್ಯರ ಮೇಲೆ ಅಭಿಪ್ರಾಯ ಹೇರುವ, ಧರ್ಮ ಭಯ ಬಿತ್ತುವ ಶಾಸ್ತ್ರ ,ಕಾನೂನು ಮಾಡುವ ಕೆಲಸವನ್ನು ಜನಸಾಮಾನ್ಯರ ಅರಿವಿಗೆ ಭಾರದಂತೆ ವ್ಯವಸ್ಥಿತವಾಗಿ ಮಾಡುವ ಚಾಲಾಕಿ ಶಾಹಿಗಳು.ಈ ಭೂ ಜಗತ್ತಿನ ಎಲ್ಲ ದೇಶಗಳು ಇಂಥವರ ಹಿಡಿತದಲ್ಲೇ ಇವೆ. ಹಾಗಾಗಿಯೇ ಧರ್ಮ ಜಾತಿ ದೇಶ ಗೋಡೆಗಳಾಚೆ ವಿಶ್ವ ಮಾನವತೆಯ ವಿಶಾಲ ಮನಸ್ಸಿನ ಮನುಕುಲ ಬೆಳೆಸಲಾಗುತ್ತಿಲ್ಲ.ಇಂತ ಮನಸ್ಥಿತಿಯವರಿಗೆ ಕಾರ್ಲ್ ಮಾರ್ಕ್ಸ್, ಲೋಹಿಯಾ,ಬುದ್ಧ, ಬಸವ, ಗಾಂಧಿ ಅಂಬೇಡ್ಕರ್ ,ಕುವೆಂಪು, ಟಾಗುರ್ ಮುಂತಾದ ಚಿಂತಂಕರೆಲ್ಲ ಶತ್ರು ಗಳಂತೆ ಕಾಣುತ್ತಾರೆ. ಇಂದಿನ ಯುವ ಸಾಕ್ಷರರಿಗೂ ಈ ಐತಿಹಾಸಿಕ ಸತ್ಯ, ತಾತ್ವಿಕ ದರ್ಶನ ಆಗದೆ ಪ್ರಚೋದಿತರಾಗಿ ಮೇಲು ಸ್ತರದ ಸಾಮಾಜಿಕ ಸರಪಳಿಯ ಉದ್ಯಮಾದಿಪತಿಗಳು, ಗುಡಿ, ಚರ್ಚು ಮಸೀದಿಗಳ ಪಾಳೆಗಾರರು,ರಾಜಕಾರಣಿಗಳ ಕುಟಿಲ ತಂತ್ರಗಳಿಗೆ ಬಲಿಯಾಗುತ್ತಿದ್ದಾರೆ. ಹಾಗೂ ಅಂತವರೊಂದಿಗೆ ಗುರುತಿಸಿಕೊಳ್ಳುವ ಹಂಬಲವುಳ್ಳವರ ಸಂಖ್ಯೆಯೂ ಜಗದ ಎಲ್ಲೆಡೆ ಇದ್ದಾರೆ. ಹಾಗಾಗಿ ಬದಲಾವಣೆಯೇ ಜಗದ ನಿಯಮ ಆಗಿದ್ದರು ಅದು ಜಗತ್ತಿನ ಕೇವಲ 10 % ಜನ ಮೇಲು ಸ್ತರದ ಸಾಮಾಜಿಕ ಸರಪಳಿಯ ನಿರ್ದಾರದಂತೆಯೇ ನಡೆಯುತ್ತಿದೆ. ಈ ಅಮೆರಿಕಾವಂತೂ ಹಠಕ್ಕೆ ಬಿದ್ದು ಜಗತ್ತನ್ನು ನಿಯಂತ್ರಿಸಲು ಹವಣಿಸುತ್ತಿದೆ. ಇವರ ಮನಸ್ಥಿತಿಯ ಅಚ್ಚು ಜಗದ ಎಲ್ಲ ದೇಶಗಳಲ್ಲೂ ಇದ್ದಾರೆ. ಹಾಗಾಗಿ ಯಾವ ದೇಶದ ಯಾವುದೇ ಧರ್ಮದ ಮೂಲಭೂತ ವಾದಿಗಳು ಕಡಿಮೆ ಏನಿಲ್ಲ. ಈ ಬೆಳವಣಿಗೆ ಜೀವಂತ ಇರೋವರೆಗೂ ವಿಶ್ವ ಮಾನವೀಯತೆ ಸಾದ್ಯವಿಲ್ಲ. ದೇಶಗಳ ನಡುವೆ ಗಡಿ ತಂಟೆ, ಭಯೋತ್ಪಾದನೆ ಉಗ್ರವಾದ ಎಲ್ಲ ಇದ್ದೆ ಇರುತ್ತದೆ. ಜಗತ್ತು ಎಷ್ಟೇ ಮುಂದುವರಿದರು ಆತಂಕ ತಪ್ಪದು.
ಎಲ್ಲಕು ಒಂದೇ ಪರಿಹಾರ ಭೂ ಜಗತ್ತೇ ಒಂದು ದೇಶ ಆಗಬೇಕು. ಎಲ್ಲ ಗಡಿ ನಿಷೇಧ ಆಗಬೇಕು. ಕೇವಲ ಜೀವಿಗಳು ಬದುಕುವ ಜೀವಮಂಡಲ ಈ ವಸುಂದರೆ ಆಗಬೇಕು. ಎಲ್ಲ ಹೇಳಿದಷ್ಟು ಸುಲಭ ಅಲ್ಲ. ಕನಸು ಅಲ್ಲ. ಎಲ್ಲದಕ್ಕೂ ಎಲ್ಲರ ಸಹಕಾರವೂ ಸಿಗದು. ಹಾಗಾಗಿ ಪರಿಹಾರ ಸಿಗದು. ಆದರೂ ಈ ಬಗ್ಗೆ ಯುವ ಮನಸುಗಳು ಹೆಚ್ಚು ಯೋಚಿಸಿ ಜಾಗತಿಕ ವಿಶಾಲ ಮಾನವ ಸರಪಳಿ ,ಮಾನಾವೀಯ ಮನುಕುಲ ಬೆಳೆಸಲು ಶ್ರಮಿಸಬೇಕು.
Wednesday 17 May 2017
K a s .ಪಾಸು ಮಾಡುವವರಿಗಾಗಿ
ಪತ್ರಿಕೆ -1
ಭಾಗ 1: ಕನ್ನಡ ಭಾಷಾ ಚರಿತ್ರೆ
ಈ ಭಾಗಕ್ಕೆ ಸಂಗಮೇಶ ಸವದತ್ತಿಮಠ,ಧಾರವಾಡಕರ ಮತ್ತು ಸಾ.ಶಿ.ಮರುಳಯ್ಯ ಅವರು ಬರೆದಿರುವ ಕನ್ನಡ ಭಾಷಾ ಅಧ್ಯಯನದ ಪುಸ್ತಕಗಳು ನೆರವಾಗುತ್ತವೆ.
ಸಾ.ಶಿ.ಮರುಳಯ್ಯ ಅವರ class notes ಸಿಕ್ಕರೆ ಓದಬಹುದು.
ಅಲ್ಲದೆ ಕ ಕನ್ನಡ ಸಾಹಿತ್ಯ ಐಚ್ಛಿಕ ವಿಷಯದ ಕುರಿತು ಮಾಲಿ ಮದ್ದಣ್ಣ, ಸಿ.ಬಿ.ಹೊನ್ನಯ್ಯ,ಚಿ.ಸಿ.ನಿಂಗಣ್ಣ ಅವರ ಪುಸ್ತಕಗಳಲ್ಲಿ ಈ ಭಾಗದ ಅಧ್ಯಾಯಗಳಿವೆ.
ಪತ್ರಿಕೆ-1 ರ ಒಟ್ಟು 250 ಅಂಕಗಳಲ್ಲಿ 50-60 ಅಂಕಗಳಿಗ ಈ ಭಾಗದಿಂದ ಪ್ರಶ್ನೆಗಳನ್ನು
ಕೇಳಬಹುದು.
ಭಾಗ-I
ಕನ್ನಡ ಭಾಷೆಯ ಚರಿತ್ರೆ.
— ಭಾಷೆ ಎಂದರೇನು? ಭಾಷೆಯ ಸಮಾನ್ಯ ಲಕ್ಷಣಗಳು,
— ಭಾಷೆಯ ವ್ಯಾಕರಣ, ದ್ರಾವಿಡ ಭಾಷೆಗಳ ತೌಲನಿಕ ಮತ್ತು ವೈದೃಶ್ಯ ಲಕ್ಷಣಗಳು,
— ಕನ್ನಡ ಅಕ್ಷರಮಾಲೆ,
— ಕನ್ನಡ ವ್ಯಾಕರಣದ ಕೆಲುವು ಪ್ರಧಾನ ಲಕ್ಷಣಗಳು:
— ಲಿಂಗ, ವಚನ, ವಿಭಕ್ತಿ, ಕ್ರಿಯಾಪದ, ಧಾತೃ ಮತ್ತು ಸರ್ವನಾಮ.
— ಕನ್ನಡ ಭಾಷೆಯ ಕಾಲಗಣನಾ ಹಂತಗಳು.
— ಕನ್ನಡ ಭಾಷೆಯ ಮೇಲೆ ಇತರ ಭಾಷೆಗಳ ಪ್ರಭಾವ.
— ಕನ್ನಡ ಭಾಷೆಗಳಲ್ಲಿರುವ ಉಪಭಾಷೆಗಳು. - ಕನ್ನಡ ಭಾಷಾ ಬೆಳವಣಿಗೆಯ ವಿವಿಧ ಪ್ರಾದೇಶಿಕ ಮತ್ತು ಸಾಮಾಜಿಕ ಅಂಶಗಳು.
— ಭಾಷಾ ಸ್ವೀಕರಣ ಮತ್ತು ಸ್ವರ ಭೇಧ - ಕನ್ನಡ ಭಾಷೆ ಮತ್ತು ಅದರ ಒಳಭೇಧಗಳು.
— ಕನ್ನಡ ಸಾಹಿತ್ಯಿಕ ಮತ್ತು ಆಡುಮಾತಿನ ಶೈಲಿ.
ಭಾಗ-II
A. ಕನ್ನಡ ಸಾಹಿತ್ಯ ಚರಿತ್ರೆ
* ಪ್ರಾಚೀನ ಕನ್ನಡ ಸಾಹಿತ್ಯ
— ಪ್ರಾಚೀನ ಕನ್ನಡ ಸಾಹಿತ್ಯದ ಉದಯ, ಅದರ ಪ್ರವ್ರತ್ತಿ, ಪ್ರಭಾವ, ಬೆಳವಣಿಗೆಗಳು
* ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಹಿನ್ನೆಲೆಯಲ್ಲಿ 10, 12, 16, 17, 19 ಮತ್ತು 20ನೇಯ ಶತಮಾನದ ಸಾಹಿತ್ಯದ ಅಧ್ಯಯನ ಹಾಗೂ ಕೆಳಗೆ ಪಟ್ಟಿ ಮಾಡಲಾಗಿರುವ ಕವಿಗಳಿಗೆ ಸಂಭಂಧಿಸಿದ ಸಾಹಿತ್ಯ ರೂಪಗಳ ಹಿನ್ನೆಲೆಯಲ್ಲಿ ಅವುಗಳ ಮೂಲ, ಬೆಳವಣಿಗೆ ಮತ್ತು ಸಾಧನಗಳೊಂದಿಗೆ ವಿಮರ್ಷಾತ್ಮಕವಾಗಿ ಅಧ್ಯಯನ ಮಾಡುವುದು.
* ಚಂಪೂ ಸಾಹಿತ್ಯ : ಪಂಪ, ಜನ್ನ, ನಾಗಚಂದ್ರ.
* ವಚನ ನಾಹಿತ್ಯ : ಬಸವಣ್ಣ, ಅಕ್ಕ ಮಹಾದೇವಿ .
* ಮಧ್ಯಕಾಲಿನ ಕನ್ನಡ ಸಾಹಿತ್ಯ- ಅದರ ಪ್ರವ್ರತ್ತಿ, ಪ್ರಭಾವ,
* ಮಧ್ಯಕಾಲಿನ ಕಾವ್ಯ :
— ಹರಿಹರ, ರಾಘವಾಂಕ, ಕುಮಾರವ್ಯಾಸ.
* ದಾಸ ಸಾಹಿತ್ಯ:
— ಪುರಂದರ ದಾಸ ಮತ್ತು ಕನಕದಾಸ
* ಸಾಂಗತ್ಯ:
— ರತ್ನಾಕರವರ್ಣಿ.
C. ಆಧುನಿಕ ಕನ್ನಡ ಸಾಹಿತ್ಯ :
— ಪ್ರಭಾವ , ಪ್ರವೃತ್ತಿಗಳು.
— ನವೋದಯ, ಪ್ರಗತಿಶೀಲ, ನವ್ಯ, ದಲಿತ ಮತ್ತು ಬಂಡಾಯ ಸಾಹಿತ್ಯ.
ಭಾಗ - III
A. ಕಾವ್ಯ ಮತ್ತು ಸಾಹಿತ್ಯಿಕ ವಿಮರ್ಶೆಗಳು
- ಕಾವ್ಯ ಮೀಮಾಂಸೆ ಮತ್ತು ವಿಮರ್ಶೆಯ ಔಪಚಾರಿಕ ಭೇದಗಳು,
- ಕಾವ್ಯದ ವ್ಯಾಖ್ಯೆಗಳು ಮತ್ತು ಗುರಿಗಳು.
- ಹಲವಾರು ಕಾವ್ಯ ಪಂಥಗಳ ಪ್ರತಿಪಾದನೆಯ ನಿರೂಪಣೆ.
- ಅಲಂಕಾರ, ರೀತಿ, ರಸ, ವಕ್ರೋಕ್ತಿ, ಧ್ವನಿ ಮತ್ತು ಔಚಿತ್ಯ,
- ರಸ ಸೂತ್ರದ ಅರ್ಥವಿವರಣೆ.
- ಕನ್ನಡ ಸಾಹಿತ್ಯಿಕ ವಿಮರ್ಶೆಯ ಇತ್ತೀಚಿನ ರೂಪಗಳು, ಪ್ರವೃತ್ತಿಗಳು, ಔಪಚಾರಿಕ, ಐತಿಹಾಸಿಕ, ಮಾರ್ಕ್ಸವಾದಿ, ಮಹಿಳಾಪರ, ಪೂರ್ವ ವಸಾಹತುಶಾಹಿ ವಿಮರ್ಶೆಗಳು.
B. ಕರ್ನಾಟಕ ಸಾಂಸ್ಕೃತಿಕ ಚರಿತ್ರೆ
ಭಾರತೀಯ ಹಿನ್ನೆಲೆಯಲ್ಲಿ ಕರ್ನಾಟಕ ಸಂಸ್ಕೃತಿ,
- ಕರ್ನಾಟಕ ಸಂಸ್ಕೃತಿಯ ಪುರಾತನತೆ.
ಕರ್ನಾಟಕ ರಾಜಮನೆತನಗಳ ವಿಸ್ತೃತ ಅಧ್ಯಯನ
- ಬಾದಾಮಿಯ ಚಾಲುಕ್ಯರು ಮತ್ತು ಕಲ್ಯಾಣದ ಚಾಲುಕ್ಯರು ,
- ರಾಷ್ಟ್ರಕೂಟರು,
- ಹೊಯ್ಸಳರು,
- ವಿಜಯ ನಗರದ ದೊರೆಗಳು ಮತ್ತು ಅವರ ಸಾಹಿತ್ಯಿಕ ಸ್ಥಿತಿಗತಿಗಳು.
ಕರ್ನಾಟಕದ ಪ್ರಮುಖ ಧರ್ಮಗಳು ಮತ್ತು ಅವುಗಳ ಸಾಂಸ್ಕೃತಿಕ ಕೊಡುಗೆಗಳು.
ಧಾರ್ಮಿಕ ಚಳುವಳಿಗಳು, ಸಾಮಾಜಿಕ ಸ್ಥಿತಿಗತಿಗಳು.
ಕರ್ನಾಟಕದ ಕಲೆ ಮತ್ತು ವಾಸ್ತುಶಿಲ್ಪ :
- ಸಾಹಿತ್ಯಿಕ ಸಂಧರ್ಭದಂತೆ ಶಿಲ್ಪಕಲೆ , ವಾಸ್ತುಶಿಲ್ಪ, ಚಿತ್ರಕಲೆ, ಸಂಗೀತ, ನೃತ್ಯ.
ಕರ್ನಾಟಕ ಸ್ವಾತಂತ್ರ ಚಳುವಳಿ . ಕರ್ನಾಟಕದ ಏಕೀಕರಣ - ಕನ್ನಡ ಸಾಹಿತ್ಯದ ಮೇಲೆ ಅದರ ಪ್ರಭಾವ.
ಪತ್ರಿಕೆ-II
Section-A.
A. ಹಳೆಗನ್ನಡ ಸಾಹಿತ್ಯ
1. ಪಂಪನ ವಿಕ್ರಮಾರ್ಜುನ ವಿಜಯ (cantos 12 & 13), ( ಪ್ರಕಾಶಕರು ಮೈಸೂರು ವಿಶ್ವವಿದ್ಯಾಲಯ )
2. ವಡ್ಡಾರಾಧನೆ ( ಸುಕುಮಾರ ಸ್ವಾಮಿಯ ಕಥೆ, ವಿದ್ದ್ಯುಚ್ಛೋರನ ಕಥೆ)
B. ಮಧ್ಯಕಾಲಿನ ಕನ್ನಡದ ಸಾಹಿತ್ಯ :
1. ವಚನ ಕಮ್ಮಟ,
Ed: ಕೆ. ಮರುಳ ಸಿದ್ದಪ್ಪ , ಕೆ. ಆರ್. ನಾಗರಾಜ್.
(ಪ್ರಕಾಶಕರು: ಬೆಂಗಳೂರು ವಿಶ್ವವಿದ್ಯಾಲಯ )
2. ಜನಪ್ರೀಯ ಕನಕ ಸಂಪುಟ,
Ed. ಡಾ| ಜವರೇಗೌಡ ( ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ, ಬೆಂಗಳೂರು )
3. ನಂಬಿಯಣ್ಣನ ರಗಳೆ,
Ed., ಟಿ.ಎನ್. ಶ್ರೀಕಂಠಯ್ಯ (ಟ.ವೆಂ. ಸ್ಮಾರಕ ಗ್ರಂಥ ಮಳಿಗೆ, ಮೈಸೂರು )
4. ಕುಮಾರವ್ಯಾಸ ಭಾರತ : ಕರ್ಣ ಪರ್ವ (ಮೈಸೂರು ವಿಶ್ವವಿದ್ಯಾಲಯ)
5. ಭರತೇಶ ವೈಭವ ಸಂಗ್ರಹ
Ed. ತ. ಸು. ಶಮಾ ರಾವ್
(ಮೈಸೂರು ವಿಶ್ವವಿದ್ಯಾಲಯ )
Section-B
A. ಆಧುನಿಕ ಕನ್ನಡ ಸಾಹಿತ್ಯ.
1. ಕಾವ್ಯ :
ಹೊಸಗನ್ನಡ ಕವಿತೆ
Ed :ಜಿ.ಎಚ್. ನಾಯಕ್
(ಕನ್ನಡ ಸಾಹಿತ್ಯ ಪರಿಷತ್ತು , ಬೆಂಗಳೂರು )
2. ಕಾದಂಬರಿ :
ಬೆಟ್ಟದ ಜೀವ-ಶಿವರಾಂ ಕಾರಂತ.
ಮಾಧವಿ -ಅರುಪಮಾ ನಿರಂಜನ.
ಒಡಲಾಳ -ದೇವನೂರ ಮಹಾದೇವ.
3. ಚಿಕ್ಕ ಕಥೆ:
ಕನ್ನಡದ ಸಣ್ಣ ಕಥೆಗಳು,
Ed :ಜಿ.ಎಚ್. ನಾಯಕ್
(ಕನ್ನಡ ಸಾಹಿತ್ಯ ಪರಿಷತ್ತು , ನವ ದೆಹಲಿ)
4. ನಾಟಕ :
ಶೂದ್ರ ತಪಸ್ವಿ - ಕುವೆಂಪು.
ತುಘಲಕ್ - ಗಿರೀಶ್ ಕಾರ್ನಾಡ್.
5. ವಿಚಾರ ಸಾಹಿತ್ಯ :
ದೇವರು - ಎ.ಎನ್. ಮೂರ್ತಿರಾವ್
( ಪ್ರಕಾಶಕರು: ಡಾ| ವಿ.ಕೆ. ಮೂರ್ತಿ, ಮೈಸೂರು)
B. ಜಾನಪದ ಸಾಹಿತ್ಯ :
1. ಜನಪದ ಸ್ವರೂಪ - ಡಾ| ಎಚ್.ಎಮ್. ನಾಯಕ (ಟ.ವೆಂ. ಸ್ಮಾರಕ ಗ್ರಂಥ ಮಳಿಗೆ , ಮೈಸೂರು )
2. ಜಾನಪದ ಗೀತಾಂಜಲಿ -
Ed. ಡಾ| ಜವರೇಗೌಡ. ( ಪ್ರಕಾಶಕರು: ಸಾಹಿತ್ಯ ಅಕಾಡೆಮಿ, ನವ ದೆಹಲಿ)
3. ಕನ್ನಡದ ಜನಪದ ಕಥೆಗಳು -
Ed. ಜಿ.ಎಸ್. ಪರಮಶಿವಯ್ಯ.
(ಮೈಸೂರು ವಿಶ್ವವಿದ್ಯಾಲಯ )
4. ಬೀದಿ ಮಕ್ಕಳು ಬೆಳೆದೂ
Ed. ಕಳೆಗೌಡ ನಾಗವರ.
(ಪ್ರಕಾಶಕರು: ಬೆಂಗಳೂರು ವಿಶ್ವವಿದ್ಯಾಲಯ )
5. ಸಾವಿರದ ಒಗಟುಗಳು -
Ed : ಎಸ್.ಜಿ. ಇಮ್ರಾಪುರ.
Tuesday 16 May 2017
ಭಕ್ತಿ ಬಜಾರು
ಭಕ್ತಿ ಬಜಾರು
ಯಾರೋ ಹೆಣೆದ ಬಲೆಯಲ್ಲಿ _ _ಬಿದ್ದಿರುವೆ
ಬಿಡಿಸಲು ಬಂದಿರೇನು...?
ಕತ್ತಲೂರ ಪರಂಪರೆಯ ಆಲದ _ಮರಕ್ಕೆ
ಭಯಭಕ್ತಿಯಿಂದ ಜೋತುಬಿದ್ದಿರುವೆ
ಹೊಟ್ಟೆಪಾಡಿಗೆ ಹೊಸಹಾದಿ ತುಳಿಯಲು
ಸ್ಪಂದಿಸುತ್ತಿಲ್ಲ ಜನ ಮನ
ವಿಜ್ಞಾನ ಸೂರ್ಯನೂರಿಗೆ _ ಕರೆದುಕೊಂಡು ಹೋಗುವಿರೇನು...?
ಪೈಸೆ ಹಾಕಿ ಪಲಾಯನ ಮಾಡಬೇಡಿ
ನಾನು ನಿಮ್ಮ ಮನುಕುಲದವನೆ.
ಭಕ್ತಿ ಬಜಾರಿನ ಸತ್ಯ ಗೊತ್ತೇನು....?
ಲೋಕದ ಚೋರ ಬಜಾರಿನಲ್ಲಿ
ದೇವ ದೇವತೆಗಳನೂ ಪಾಲುದಾರರಾಗಿರಿಸಿಹರಿಲ್ಲಿ
ಹೊಟ್ಟೆಪಾಡಿನ ಪಾತ್ರದಾರಿಗಳೇ ಎಲ್ಲ.
ಬೆಳಕಿನೊಡನೆ ರಾಜಿಯಾದ ಭಕ್ತಿ
ಭಕ್ತರನ್ನು ಕತ್ತಲೆ ಸುತ್ತಿಕೊಂಡರು ಸುಮ್ಮನಾಗಿದೆ
ಭಕ್ತಿ ಬಜಾರಿನ ಭವ ಬಂಧನದಿಂದ ಮುಕ್ತಿ ನೀಡುವಿರೇನು....?
ರವಿರಾಜ್ ಸಾಗರ್
9980952630
-
ಚಿಕ್ಕಂದಿನಲ್ಲಿ ನಮಗೆ ಬರುತ್ತಿದ್ದ, ನಾವೆಲ್ಲಾ ಹಾಡುತ್ತಿದ್ದ ಮರೆಯಲಾಗದ ಪದ್ಯಗಳು.. ಇವುಗಳಲ್ಲಿ ನಿಮಗೆಷ್ಟು ಗೊತ್ತು.. ತಿಳಿಸಿ..* ❤️❤️❤️...
-
ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಶಾಲಾಮಾಹಿತಿ ಸಲ್ಲಿಸಿ. ಈ ಮೇಲಿನ ಲಿಂಕ್ ಮಾಡಿ ಬೇಡಿಕೆ ಮಾಹಿತಿ ಸಲ್ಲಿಸಲು ಕೋರುವೆವು.
-
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಳೂರು ಶಾಲಾ ಮಕ್ಕಳ ಮಂತ್ರಿಮಂಡಲದಿಂದ ಶಾಲೆಯಲ್ಲಿ ಆಟದ ಮೈದಾನ, ವಿವಿಧ ಕ್ರೀಡಾಂಗಣ, ಶಾಲಾ ಪ್ರಾರ್ಥನ ಅಂಕಣದಲ್ಲಿ ಸಿಮೆಂಟ್ ಬ್ರಿಕ್...