ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Tuesday 16 May 2017

ಭಕ್ತಿ ಬಜಾರು

ಭಕ್ತಿ ಬಜಾರು

ಯಾರೋ ಹೆಣೆದ ಬಲೆಯಲ್ಲಿ _ _ಬಿದ್ದಿರುವೆ
ಬಿಡಿಸಲು ಬಂದಿರೇನು...?
ಕತ್ತಲೂರ ಪರಂಪರೆಯ ಆಲದ _ಮರಕ್ಕೆ

ಭಯಭಕ್ತಿಯಿಂದ ಜೋತುಬಿದ್ದಿರುವೆ
ಹೊಟ್ಟೆಪಾಡಿಗೆ ಹೊಸಹಾದಿ ತುಳಿಯಲು
ಸ್ಪಂದಿಸುತ್ತಿಲ್ಲ ಜನ ಮನ
ವಿಜ್ಞಾನ ಸೂರ್ಯನೂರಿಗೆ _ ಕರೆದುಕೊಂಡು ಹೋಗುವಿರೇನು...?

ಪೈಸೆ ಹಾಕಿ ಪಲಾಯನ ಮಾಡಬೇಡಿ
ನಾನು ನಿಮ್ಮ ಮನುಕುಲದವನೆ.

ಭಕ್ತಿ ಬಜಾರಿನ ಸತ್ಯ ಗೊತ್ತೇನು....?
ಲೋಕದ ಚೋರ ಬಜಾರಿನಲ್ಲಿ
ದೇವ ದೇವತೆಗಳನೂ ಪಾಲುದಾರರಾಗಿರಿಸಿಹರಿಲ್ಲಿ

ಹೊಟ್ಟೆಪಾಡಿನ ಪಾತ್ರದಾರಿಗಳೇ ಎಲ್ಲ.

ಬೆಳಕಿನೊಡನೆ ರಾಜಿಯಾದ ಭಕ್ತಿ
ಭಕ್ತರನ್ನು ಕತ್ತಲೆ ಸುತ್ತಿಕೊಂಡರು ಸುಮ್ಮನಾಗಿದೆ

ಭಕ್ತಿ ಬಜಾರಿನ ಭವ ಬಂಧನದಿಂದ ಮುಕ್ತಿ ನೀಡುವಿರೇನು....?

ರವಿರಾಜ್ ಸಾಗರ್
9980952630

No comments:

Post a Comment