ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Tuesday, 9 May 2017

ರಿಯಲ್ ಕನಸು

ರೀಯಲ್ ಕನಸು ಆರಾಮಾಗಿ ರೈಲಲ್ಲಿ ಕುಂತಿದ್ದೆ... ಟಿಕೆಟ್ ತಗೊಳ್ಳಿ ಅಂದ ಒಬ್ಬ. ಏನ್ರಿ ಇದು...? ಟಿಕೆಟ್ ತಗೊಂಡೆ ಹತ್ತಿರೋದು... ಮತ್ತ್ಯಾವ ಟಿಕೆಟ್ ಅಂದೆ. ಪ್ರಯಾಣ ಮಾಡೋಕೆ ತಗೊಂಡಿದೀರಿ... ಆರಾಮಾಗಿ ಪ್ರಯಾಣ ಮಾಡಬೇಕು ಅಂದ್ರೆ ನಮ್ಮ್ ಟಿಕೆಟ್ ತಗೊಂಡು ಸಹಕರಿಸಿ ಇಲ್ಲಾಂದ್ರೆ ರೈಲ್ ಎಲ್ಲಿ ನಿಲ್ಲುತ್ತೋ ಗೊತ್ತಿಲ್ಲ... ಅಲ್ಲ ರಿ...ತಾಲೂಕ್ ಆಫೀಸ್ .ಕೃಷಿ ಆಫೀಸ್ ಕಂದಾಯ ಇಲಾಖೆ ಎಲ್ಲ ಇಲಾಖೆ ಕ್ಲರ್ಕ್ ಇಂದಾ ಅಧಿಕಾರಿಗೂ ಒಂದಿಷ್ಟು ಕೊಟ್ಟು ಬರ್ತಿರಿ..ಶಾಲೆಲಿ ಕೇಳಿದಷ್ಟು ಪೀಜು ಕೊಡ್ತೀರಿ...ಅಸ್ಪತ್ರೆಲು ಕೇಳಿದಷ್ಟು ಕೊಡ್ತೀರಿ... ನಮ್ ರೈಲಲ್ಲಿ ಸುಖಾವಾಗಿ ಪ್ರಯಾಣ ಮಾಡೋ ನೀವು ಏನು ಕೊಡದೆ ಹೋಗ್ತೀರಿ ಅದಕೆ ರೈಲು ಹಳಿ ತಪ್ಪುತ್ತಾವೆ.. ಎಚ್ಚರ .. ತೆಗಿರಿ ಚಿಲ್ಲರೆ ...!! ಒಮ್ಮೆಲೇ ಶಾಕಾಗಿ ಕಣ್ ಬಿಟ್ಟೆ. .!! ನಂಬರ್ ಒನ್ ಬ್ರಷ್ಟಾಚಾರದ ರಾಜ್ಯದಲ್ಲಿ ಸದ್ಯ ಬಸ್ನಲ್ಲಿ ಪ್ರಾಯಣ ಮಾಡ್ತಾ ಇದ್ದೆ... ಹಾಡು ಹಗಲೇ ಈ ಕನಸು ಯಾಕೆ ಬಿತ್ತೋ ಗೊತ್ತಿಲ್ಲ.. ಮುಂದೆ ಹೀಗೂ ಭ್ರಷ್ಟ ಚಾರ ಹಬ್ಬಬಹುದೇ ಅಂತಾ ನೆನೆದು ಕಿಟಕಿ ಇಣುಕಿದೆ... ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣ ಹೋರಾಟದಲ್ಲು ದೊಡ್ಡ ದೊಡ್ಡ ರಾಜಕಾರಣಿಗಳಿದ್ದರು .ಜೊತೆಗೆ ಅವರಿಗೆ ಕಿಕ್ ಬ್ಯಾಕ್ ನೀಡೋ ಗುತ್ತಿಗೆದಾರರು ಇದ್ದರು..!!

No comments:

Post a Comment

ಮಕ್ಕಳ ಮನೆ ಮನೆಗೆ marks rigister app

📱 'ಮಾರ್ಕ್ಸ್ ರಿಜಿಸ್ಟರ್' (Marks Register) ಆ್ಯಪ್ !!   ಶಿಕ್ಷಕರ ಶ್ರಮಕ್ಕೆ ತಂತ್ರಜ್ಞಾನದ ಆಸರೆ! ಶಿಕ್ಷಕರ ಕೆಲಸ ಇಂದು ಮುಂಚಿನಂತಿಲ್ಲ. ಬದಲಾಗುತ್ತಿರುವ...