ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Saturday 13 November 2021

ಮಕ್ಕಳ ಮಂದಾರ 51ನೇ ಸಂಚಿಕೆ

ಹದಿಮೂರು ವರ್ಷಗಳ ನಿರಂತರ ಪಯಣ 51ನೇ ಸಂಚಿಕೆಯ ಸಂಭ್ರಮದಲ್ಲಿ ಮಕ್ಕಳ ಮಂದಾರ

ಕೆಳಗಿನ  ಲಿಂಕ್ ಕ್ಲಿಕ್ ಮಾಡಿ ಪತ್ರಿಕೆಯನ್ನು ಓದಿ ಬೆಂಬಲಿಸಿ ಶೇರ್ ಮಾಡಿ.

ನಿಮ್ಮ ಶಾಲಾ ಮಕ್ಕಳ ಬರಹಗಳು ಪ್ರಕಟವಾಗಲು ನಮ್ಮನ್ನು ಸಂಪರ್ಕಿಸಿ.
Makkalamandara@Gmail.com
9980952630.

Friday 20 August 2021

ತಾಯಿ ಮಮತೆಯ ಅಕ್ಷರಗಳ ಮಾಲೆ ಅಮ್ಮ ಕೊಟ್ಟ ಜಾಜಿ ದಂಡೆ

 ಮಮತೆಯ ಅಕ್ಷರಗಳ ಮಾಲೆ
"ಅಮ್ಮ ಕೊಟ್ಟ ಜಾಜಿದಂಡೆ"


ಜಾಜಿ ಹೂವಿನ ಘಮವೇ ಹಾಗೆ.ತನ್ನ ಇರುವಿಕೆಯಿಂದಲೇ ಸುತ್ತಲಿನವರನ್ನು ಬೇಡವೆಂದರೂ ಆವರಿಸಿಕೊಳ್ಳುತ್ತದೆ.ಪುಳಕ ನೀಡುತ್ತದೆ.ಅಬ್ಬಾ!ಘಮವೇ ಅನಿಸುತ್ತದೆ.ಹೆಂಗಳೆಯರ ಬಹು ಪ್ರೀತಿಯ ಸುವಾಸನೆಭರಿತ ಈ ಹೂವೆಂದರೆ ನನಗೆ ಬಹಳ ಪ್ರೀತಿ.ಅದರಲ್ಲೂ ಅಮ್ಮ ಹೆಣೆದುಕೊಟ್ಟ ಜಾಜಿ ದಂಡೆ ಎಂದರೆ ಮಗಳಿಗೇನೋ ವಿಶೇಷ ಅನುಭೂತಿ.ಈಗ ನಾನು ಹೇಳಹೊರಟಿದ್ದು ನಮ್ಮಮ್ಮನೋ,ನಾನೋ ಹೆಣೆದ,ಮುಡಿದ ಜಾಜಿದಂಡೆಯ ಬಗ್ಗೆಯೂ ಅಲ್ಲ,ಈಗ ನಮ್ಮನೆ ಅಂಗಳದಲ್ಲಿ ಅರಳಿ ಘಮ ನೀಡುತ್ತಿರುವ ಜಾಜಿ ಹೂ ಬಗ್ಗೆಯೂ ಅಲ್ಲ‌.ಹೇಳಹೊರಟಿದ್ದು ಕನ್ನಡದ ಅಪೂರ್ವ ಲೇಖಕರಾದ ಮಂಜುನಾಥ್ ಚಾಂದ್ ಅವರ "ಅಮ್ಮ ಕೊಟ್ಟ ಜಾಜಿದಂಡೆ" ಎಂಬ ಪುಟ್ಟ ಪುಸ್ತಕದ ಬಗ್ಗೆ.

ಹೌದು! ಇದು ಬರಿಯ ಘಮವಲ್ಲ.ನಮ್ಮನ್ನು ಆವರಿಸಿಕೊಂಡ,ಅಪ್ಪಿಕೊಂಡ,ಒಪ್ಪಿಕೊಂಡ ,ಬದುಕಾಗಿರುವ ಘಮ.ಈ ಘಮವನ್ನು ಆಸ್ವಾದಿಸುತ್ತಾ ಹೋದಂತೆ ಕಳೆದುಹೋಗುತ್ತೇವೆ.ಕಳೆದು ಹೋದ ಬದುಕಿನೆಡೆಗೆ ತಿರುಗಿ ಹೆಜ್ಜೆಗಳನ್ನೆಣಿಸುತ್ತಾ ಕಣ್ಣೀರಾಗುತ್ತೇವೆ.ಹೌದು! ಇದು ನಮ್ಮ ನಮ್ಮ ಅಮ್ಮನನ್ನು ಹುಡುಕಲು,ಇರುವ ಅಮ್ಮನನ್ನು ಮತ್ತಷ್ಟು ಪ್ರೀತಿಸಿ,ಗೌರವಿಸಿ ಜೋಪಾನಮಾಡಲು,ಕಳೆದುಕೊಂಡ ಅಮ್ಮನನ್ನು ನೆನೆದು "ಅಮ್ಮಾ,ಯೂ ಆರ್ ಗ್ರೇಟ್" ಎಂದು ಕೂಗಿ ಹೇಳುವಂತೆ ಮಾಡುವ ಶಕ್ತಿಯುಳ್ಳ 11 ಲೇಖನಗಳನ್ನು ಪ್ರೀತಿಯಿಂದ,ಶ್ರದ್ಧೆಯಿಂದ , ಪೋಣಿಸಿದ ಜಾಜಿ ಹೂಗಳ ಅಕ್ಷರ ಮಾಲೆಯೇ "ಅಮ್ಮ ಕೊಟ್ಟ ಜಾಜಿ ದಂಡೆ".

ಈ ಜಗತ್ತಿನಲ್ಲಿ " ತಾಯಿ"ಯನ್ನು ಇಷ್ಟೇ,ಹೀಗೆ ಎಂದು ಅವಳನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ.ಯಾಕೆಂದರೆ ಅಮ್ಮ ಜೀವಸೆಲೆ.
ನಮಗೆಲ್ಲಾ ಅಮ್ಮ ನಮ್ಮ ಬದುಕಿನಲ್ಲಿ ಸಿಗುವ ಪಾಪದ ಜೀವಿ.ಅಮ್ಮನಿಲ್ಲದಿದ್ದಾಗ ಅಮ್ಮನ ಇರುವಿಕೆಗಾಗಿ ಹಪಹಪಿಸುವ ನಾವುಗಳು, ಅಮ್ಮ ಇದ್ದಾಗ ಅವಳೊಂದಿಗೆ ಜಗಳ ಆಡಿದ್ದೇ ಜಾಸ್ತಿಯೆನಿಸುತ್ತದೆ,ಗೋಳಾಡಿಸಿದ್ದೇ ಜಾಸ್ತಿ .ಆದರೆ ಅಮ್ಮನಿಂದ ಅದೇ ನಿರ್ಲಿಪ್ತತೆ,ಅದೇ ಮುಗುಳ್ನಗೆ.ಯಾಕೆಂದರೆ ಅವಳು ಅಮ್ಮ...

ಈ ಜಾಜಿದಂಡೆ ಕೈ ಸೇರಿದ ದಿನವೇ ಅದೇನೋ ಮಧುರಭಾವ ನೀಡಿತು.ತಿಳಿಹಸಿರು ಬಣ್ಣದ ಮುಖಪುಟ ತಿರುವಿ ಹಾಕುತ್ತಾ ಓದುತ್ತಾ,ಓದುತ್ತಾ ಕಳೆದುಹೋದೆ.ನೆನಪುಗಳು ಹಸಿರಾಗಿದ್ದವು.ಜಾಜಿಯ ಘಮ ನನ್ನನ್ನು ಎಷ್ಟು ಆವರಿಸಿತ್ತೆಂದರೆ ಗಂಟಲುಬ್ಬಿ,ಕಣ್ಣಾಲಿಗಳು ತುಂಬಿ ಕಣ್ಣೀರು ಕೆನ್ನೆ ತೋಯಲು ಕಾಯುತ್ತಿತ್ತು.ಮಾಸ್ತಿಕಟ್ಟೆಯಲ್ಲಿ ಬಸ್ ಪ್ರಯಾಣಿಕರೆಲ್ಲಾ ಟೀ,ಕಾಪಿಗೆಂದು ಇಳಿದು ಹೋದಾಗ ಸಂಪೂರ್ಣ ಅತ್ತುಬಿಟ್ಟೆ.ದುಃಖ, ಸಂತೋಷ, ಎರಡೂ ಕಣ್ಣೀರಾಗಿ ಹೊರಬಂದ ಘಳಿಗೆ ಅದು.ಆ ಇಡೀ ದಿನ ನಾನು ಹಸಿರು ಪುಸ್ತಕ ನೀಡಿದ ಹಸಿರಾದ ಬಾಲ್ಯದ ದಿನಗಳ ನೆನಪಿನೊಂದಿಗೆ ಕಳೆದುಹೋದೆ.

ಒಂದು ಪುಸ್ತಕ ಹೀಗೆ ಮಾಡಿಸುತ್ತದಾ ಎಂದು ನೀವು ಭಾವಿಸಬಹುದು.ಇದು ಲೇಖಕರೊಬ್ಬರ "ಆತ್ಮಕತೆ" ಯಲ್ಲ.ನಮ್ಮ ನಮ್ಮ ಬದುಕು,ನಾವು ಕಳೆದು ಬಂದ ದಿನಗಳ ಮೆಲುಕು.ಚೆಂದದ ಬಾಲ್ಯ,ಬಡತನ,ಆ ಬಡತನದಲ್ಲಿ ಬದುಕು ನಡೆಸಲು ಅಮ್ಮ - ಅಪ್ಪನ ಜಂಜಾಟಗಳು,ಜೀವನಪ್ರೀತಿ,ಕಳೆದ ಪ್ರತೀ ಕ್ಷಣದಲ್ಲಿ ಅಮ್ಮ ಕಲಿಸುವ ಬದುಕಿನ ಪಾಠವನ್ನು ,"ಒಂದೇ ಲಾಟೀನಿನ ಕೆಳಗೆ"ಎಂಬ ಲೇಖನ ನಮ್ಮ ನಿಮ್ಮೆಲ್ಲರ ಬದುಕಿನ "ಚಿಮಣಿ ದೀಪ" ದ ಕತೆಯನ್ನು ಮೆಲುಕು ಹಾಕಿಸುತ್ತಾ ಅಮ್ಮ ಕಲಿಸಿದ ಬೆಳಕಿನ ಅರ್ಥ ವನ್ನು ಆಪ್ತವಾಗಿಸುತ್ತದೆ.
"ದೂರ ಕುಳಿತು ಬಿಡುವ ಅಮ್ಮನ ಆ ದಿನಗಳು" ಲೇಖನವು ಅಮ್ಮನ ಆ ದಿನಗಳನ್ನು ನೆನೆಸಿ ಕಣ್ಣೀರಾಗಿಸುತ್ತದೆ.ಅಲ್ಲೂ ಅಮ್ಮನಿಗೊಂದು "ರಿಲೀಫ್" ಸಿಗುವ ಭಾವವನ್ನು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ.ಹೊಸ ಸೀರೆ,ಅದನ್ನು ಉಡಲೂ ಕಾಯುವ ದಿನಗಳು,ಇರುವ ಮೂರು ನಾಲ್ಕು ಸೀರೆಗಳಲ್ಲಿ ನೂರು ಸೀರೆ ಇದೆಯೆಂಬಂತೆ ಸಂಭ್ರಮಿಸಿ ಹೊಸ ಸೀರೆ ನಿರಾಕರಿಸುವ ಅಮ್ಮನ ಆ ಗುಣದ ಮುಂದೆ ಇಂದು ನಾವು ತಲೆತಗ್ಗಿಸಬೇಕು.ಯಾಕೆಂದರೆ ಅವಳು ಅಮ್ಮ.

ಅಮ್ಮ ಕೊಟ್ಟ ಡೆಫಾಸಿಟ್ಟು,ಕೇಲ್ ಮಡಿಕೆಯೆಂಬ ಅಮ್ಮನ "ತಿಜೋರಿ" ಅದರ ಹಿಂದಿರುವ ಜೀವನ ಪಾಠ,ನಾಳಿನ ಭರವಸೆ,ಆ ಡೆಫಾಸಿಟ್ ಗೆ ಬಡ್ಡಿಕೊಟ್ಟು ಪೂರೈಸಲು ಸಾಧ್ಯವೇ ?ಎಂದು ನಾವು ನಮ್ಮನ್ನು ಪ್ರಶ್ನಿಸಿಕೊಂಡಾಗ ಗಂಟಲುಬ್ಬಿ ಬಾರದಿದ್ದರೆ ನಾವು ಹಾಗೂ ನಮ್ಮ ಬದುಕು ಶೂನ್ಯ.

ಅಮ್ಮನ ಹದೆಗೆಟ್ಟ ಆರೋಗ್ಯ, ಆಸ್ಪತ್ರೆವಾಸ,ಜೀವನ್ಮುಖಿಯಾದ ಅಮ್ಮ ಸಾವನ್ನು ಗೆದ್ದು ಬಂದಿದ್ದು,ಅಮ್ಮನೆಂಬ ಅಮ್ಮಳ ಬಗ್ಗೆ ಲೇಖಕರು ಎಷ್ಟು ಚೆಂದವಾಗಿ ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದ್ದಾರೆ.

ನಕ್ಷತ್ರಗಳನ್ನು ಹಾಸಿದವಳು ಅಮ್ಮನಾದರೆ ಲೇಖಕರ ಬದುಕಿನ ಆಕಾಶ ಅಪ್ಪ.ಅಪ್ಪ ಮಕ್ಕಳೆದುರು ತೆರೆದಿಡುತ್ತಿದ್ದ ಹೊಸ ಜಗತ್ತು ಎಂದರೆ ರಾಮಾಯಣ ಮತ್ತು ಮಹಾಭಾರತದ ಪ್ರವಚನ.ಇದು ಲೇಖಕರ ಬದುಕಿನ ಮೇಲೆ ಬಹಳಪ್ರಭಾವ ಬೀರಿದೆ ಎನಿಸಿದ್ದು ಸುಳ್ಳಲ್ಲ.ಇಲ್ಲಿ ಅಪ್ಪ-ಅಮ್ಮ ಇಬ್ಬರೂ ಸಮಾನ ಪಾಲನ್ನು ಹೊಂದಿರುವುದೇ ವಿಶೇಷ. ಈ ನಿಟ್ಟಿನಲ್ಲಿ ಲೇಖಕರು ಅದೃಷ್ಟವಂತರು.
ಅಪ್ಪ ವಿಶೇಷವಾಗಿ ಸಂತನಂತೆ ಕಾಣಿಸುವ ಕೊನೆಯ ದಿನಗಳು,ಅವರ ಕಣ್ಣಿನ ಬೆಳಕು,ಅಪಾರ ಧೈರ್ಯ,ಧೀಃ ಶಕ್ತಿ,ಜೀವನದಲ್ಲಿ ಅನುಭವಿಸಿದ ಪಲ್ಲಟಗಳು,ದೊಡ್ಡ ಹುದ್ದೆ ತೊರೆದು ಸಾಮಾನ್ಯರಂತೆ ಬಂದು ದೇವಿ ಆಲಯ ಕಟ್ಟಿ ಬದುಕಿದ್ದು ,ಕಷ್ಟದ ಬುಟ್ಟಿಯಲ್ಲಿ ಎಲ್ಲರನ್ನೂ ತಲೆಮೇಲೆ ಹೊತ್ತು ಸಾಗುವ ಅಪ್ಪ ಲೇಖಕರ ಲೇಖನಿಯಲ್ಲಿ ಆಕಾಶದಂತೆ ಹರವಿದ್ದಾರೆ.
ಹೆತ್ತವರ ಬಗೆಗೆ ಚೊಕ್ಕ ವಾಗಿ ಚಿತ್ರಿಸಿರುವ ಈ ಪುಸ್ತಕ ಸುಂದರವಾದ ಬದುಕೊಂದು  ಹೀಗಿದ್ದರೆ ಚೆಂದ ಎಂದು ಹೇಳಿದ್ದಾರೆ.ಅಕ್ಷರ  ಪ್ರಕಾಶನದ ಮೂಲಕ ಪ್ರಕಟವಾಗಿರುವ ಈ ಪುಸ್ತಕವನ್ನು ನೀವೂ ಓದಿ..
ಓದುಗರೇ ಓದುಗರನ್ನು ಹುಟ್ಟು ಹಾಕಬೇಕು ಎಂಬಂತೆ ಪುಸ್ತಕ ಓದೋಣ,ಬೇರೆಯವರಿಗೂ ಓದಲು ಪ್ರೇರಣೆಯಾಗೋಣ..

ರೇಖಾ.ಪಿ.ಕುಲಾಲ್

Sunday 2 May 2021

ನೀವು ಬಾಲ್ಯದಲ್ಲಿ ಓದಿದ್ದ ಮತ್ತೆ ಓದಬೇಕೆನಿಸುವ ಶಿಶು ಪ್ರಾಸಗಳು


ಚಿಕ್ಕಂದಿನಲ್ಲಿ ನಮಗೆ ಬರುತ್ತಿದ್ದ, ನಾವೆಲ್ಲಾ ಹಾಡುತ್ತಿದ್ದ ಮರೆಯಲಾಗದ ಪದ್ಯಗಳು.
ಸಂಗ್ರಹ:

*ಚಿಕ್ಕ ಮಕ್ಕಳ ಪದ್ಯಗಳು:

ನಾಯಿಮರಿ ನಾಯಿಮರಿ ತಿಂಡಿ ಬೇಕೆ
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು

ನಾಯಿಮರಿ ನಿನಗೆ ತಿಂಡಿ ಏಕೆ ಬೇಕು
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು

ನಾಯಿಮರಿ ಕಳ್ಳ ಬಂದರೇನು ಮಾಡುವೆ
ಲೊಳ್ ಲೊಳ್ ಎಂದು ಕೂಗಿ ಪಾಡುವೆ

ಜಾಣಮರಿ ತಾಳು ಹೋಗಿ ತಿಂಡಿ ತರುವೆನು
ತಾ ನಿನ್ನ ಮನೆಯ ನಾನು ಕಾಯುತಿರುವೆನು
*********************************************

ಆನಿ ಬಂತೊಂದು ಆನಿ, ಯಾವೂರು ಆನಿ, ಬಿಜಾಪೂರ ಆನಿ,
ಇಲ್ಲಿಗ್ಯಾಕ ಬಂತು, ಹಾದಿ ತಪ್ಪಿ ಬಂತು

ಹಾದಿಗೊಂದು ದುಡ್ಡು, ಬೀದಿಗೊಂದು ದುಡ್ಡು

ಅದೇ ದುಡ್ಡ ಕೊಟ್ಟು, ಸೇರ ಕೊಬ್ರಿ ತಂದು

ಲಟಲಟ ಮುರದು ಹುಡುಗರ ಕೈಯಾಗ ಕೊಟ್ಟು

ಆನಿ ಓಡೋಡೋಡ ಹೋಯ್ತು!

*********************************************


ಮಾಮ ಮಾಮ ಮಾತಾಡು...

ಮಾವಿನ ಗಿಡಕ್ಕ ಜೋತಾಡು...

ಮಾವಿನ ಗಂಟಿ ಮುರೀತ್..

ಮಾಮನ ಪಂಚೆ ಹರೀತ್!

********************************************

ಕಾಗಿ ಕಾಗಿ..ಕವ್ವ
ಯಾರ ಬಂದಾರವ್ವ
ಮಾಮಾ ಬಂದಾನವ್ವ
ಏನ ತಂದಾನವ್ವ
ಹಂಡೆದಂಥ*****
ಬಿಟ್ಕೊಂಡ್ ಹಂಗೇ ಬಂದಾನವ್ವ!

*********************************************

ಪಟ ಪಟ ಪಾರಿ
ಪಾರಿ ಗಂಡ ಪರೂತ್ ಕ ಹೋದ
ಏನ್ ತಂದ? ಕೋಳಿ ತಂದ
ಏನ್ ಮಾಡ್ದ...ಕೊಯ್ಕೊಂಡ್ ತಿಂದ!

*********************************************

ಕೈ ಕೈ ಎಲ್ಲಿಟ್ಟಿ?ಬಾಗಲಾಗ ಇಟ್ಟೆ,
ಬಾಗಲೇನ ಕೊಟ್ತು? ಕಸಬರಿಗಿ ಕೊಟ್ತು
ಕಸಬರಗಿಲೆ ಏನ ಮಾಡ್ದಿ? ಕಸಾ ಬಳದೆ
ಕಸಾ ಏನು ಮಾಡ್ದಿ? ತಿಪ್ಪಿಗೆ ಚಲ್ದೆ
ತಿಪ್ಪಿ ಏನು ಕೊಟ್ತು? ಗೊಬ್ಬರ ಕೊಟ್ತು
ಗೊಬ್ಬರ ಏನ ಮಾಡ್ದಿ? ಹೊಲಕ್ಕ ಹಾಕ್ದೆ
ಹೊಲ ಏನು ಕೊಟ್ತು? ಜ್ವಾಳ ಕೊಟ್ತು
ಜ್ವಾಳ ಏನು ಮಾಡ್ದಿ? ರೊಟ್ಟಿ ಮಾಡ್ದೆ
ರೊಟ್ಟಿ ಏನು ಮಾಡ್ದಿ? ಗಂಡಗ ಕೊಟ್ಟೆ..
ಹೊಹೊಹೊಹೊ...!!

*********************************************

ಹತ್ತಂಬಳ ಹಲಗಿ ಬಡದು,
ಹತ್ತಾರ ಆಳ ಡಂಗುರ ಸಾರಿ,
ಗೌಡನ ಹೆಂಡ್ತಿ ಏನ ಹಡದ್ಲು?
ಗಂಡನ ತಲೀಗೆ ಎಣ್ಣೀಲ್ಲೋ ಎಣ್ಣೀಲ್ಲೋ...
ಸುಂಬಳ ಹಚ್ಚಿ ಯರದಾರೋ ಯರದಾರೋ...!!!


*********************************************

ಅಚ್ಚಚ್ಚೋ....ಬೆಲ್ಲದಚ್ಚೋ
ಅಲ್ಲಿ ನೋಡು...ಇಲ್ಲಿ ನೋಡು
ಕೆಂಪತ್ತಿ ಮರದಲಿ ಗುಂಪು ನೋಡು
ಯಾವ ಗುಂಪು; ಕಾಗೆ ಗುಂಪು
ಯಾವ ಕಾಗೆ; ಕಪ್ಪು ಕಾಗೆ
ಯಾವ ಕಪ್ಪು; ಇದ್ದಿಲು ಕಪ್ಪು
ಯಾವ ಇದ್ದಿಲು; ಸೌದೆ ಇದ್ದಿಲು
ಯಾವ ಸೌದೆ;ಕಾಡು ಸೌದೆ
ಯಾವ ಕಾಡು;ಸುಡಗಾಡು
ಯಾವ ಸುಡು; ರೊಟ್ಟಿ ಸುಡು
ಯಾವ ರೊಟ್ಟಿ;ತಿನ್ನೋ ರೊಟ್ಟಿ
ಯಾವ ತಿನ್ನ; ಏಟು ತಿನ್ನಾ
ಯಾವ ಏಟು; ದೊಣ್ಣೆ ಏಟು..
ಯಾವ ದೊಣ್ಣೆ;ದಪ್ಪ ದೊಣ್ಣೆ
ಯಾವ ದಪ್ಪ; ಹೊಟ್ಟೆ ದಪ್ಪ
ಯಾವ ಹೊಟ್ಟೆ; ನಿನ್ನ ಹೊಟ್ಟೆ... ನಿನ್ನ ಹೊಟ್ಟೆ..

ಹೊಹೊಹೊಹೊ..!!

***************************************************

ಕ್ಕೋ..ಕ್ಕೋ...ಕೋಳಿ

ಬೆಳಗಾಯ್ತೇಳಿ...

ಅಂಬಾ ಅಂಬಾ ಕರುವೇ

ಹಾಲು ಕರೆಯ ಬರುವೇ

ಮಿಯಾಂವ್ ಮಿಯಾಂವ್ ಬೆಕ್ಕೇ

ಕದ್ದು ಹಾಲು ನೆಕ್ಕೇ

ಬೌ ಬೌ ನಾಯಿ

ಸಾಕು ಮುಚ್ಚು ಬಾಯಿ...!

********************************************

ಅಮ್ಮ ನೋಡೆ ಕಣ್ಬಿಟ್ಟು

ನಮ್ಮಯ ಶಾಲೆಯ ಉಪ್ಪಿಟ್ಟು

ನಮ್ಗೆ ಮಾತ್ರ ಇಷ್ಟೇ ಇಷ್ಟು

ಮಿಸ್ ಗಳಿಗ್ಮಾತ್ರ ಅಷ್ಟಷ್ಟು..!

********************************************

ನಾಗರಹಾವೇ ಹಾವೊಳು ಹೂವೇ
ಬಾಗಿಲ ಬಿಲದಲಿ ನಿನ್ನಯ ಠಾವೆ
ಕೈಯನು ಮುಗಿವೆ ಹಾಲನೀವೆ
ಬಾ ಬಾ ಬಾ

ಹಳದಿಯ ಹೆಡೆಯನು ಬಿಚ್ಚೋ ಬೇಗ
ಒಳಗಿನಿಂದಲೆ ಕೂಗೋ ರಾಗ
ಕೊಳಲನೂದುವೆ ಆಲಿಸು ರಾಗ
ನೀ ನೀ ನೀ ನೀ

ಎಲೆ ನಾಗಣ್ಣ ಹೇಳೆಲೋ ನಿನ್ನ
ತಲೆಯಲ್ಲಿರುವ ನಿಜವನ್ನ
ಬಡುಬಗ್ಗರಿಗೆ ಕೊಪ್ಪರಿಗೆಯ ಚಿನ್ನ 
ತಾ ತಾ ತಾ ತಾ ತಾ

ಬರೀ ಮೈ ಸಣ್ಣಗೆ ಮೊದದಲಿ ಬಿಸಿ ಹಗೆ
ಎರಡಲೆ ನಾಲಗೆ ಇಟ್ಟರೂ ಸುಮ್ಮಗೆ
ಎರಗುವೆ ನಿನಗೆ ಈಗಲೆ ಹೊರಗೆ
ಪೋ ಪೋ ಪೋ ಪೋ ಪೋ

****************************************

ಒಂದು ಎರಡು ಬಾಳೆಲೆ ಹರಡು

ಮೂರು ನಾಕು ಅನ್ನ ಹಾಕು

ಐದು ಆರು ಬೇಳೆ ಸಾರು

ಏಳು ಎಂಟು ಪಲ್ಯಕ್ಕೆ ದಂಟು

ಒಂಭತ್ತು ಹತ್ತು ಎಲೆ ಮುದುರೆತ್ತು

ಒಂದರಿಂದ ಹತ್ತು ಹೀಗಿತ್ತು

ಊಟದ ಆಟವು ಮುಗಿದಿತ್ತು!

***************************************

ಒಂದು ಎರಡು ಬೇಸನ್ ಲಾಡು

ಮೂರು ನಾಕು ಮೈಸೂರ್ ಪಾಕು

ಐದು ಆರು ಬಾದಾಮಿ ಖೀರು

ಏಳು ಎಂಟು ಪೆಪ್ಪರಮೆಂಟು

ಒಂಭತ್ತು ಹತ್ತು ಕೈ ತುಂಬಾ ಬಿಸ್ಕತ್ತು

ಒಂದರಿಂದ ಹತ್ತು ಹೀಗಿತ್ತು

ತಿಂಡಿಯ ಆಟವು ಮುಗಿದಿತ್ತು!

*******************************************

ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು

ಎತ್ತಿಕೊಳಲು ಹೋದರದಕೆ ಕೋಪ ಬರುವುದು

ಕೋಪ ಬರಲು ಗಟ್ಟಿಯಾಗಿ ಕಿರಿಚಿಕೊಳುವುದು

ಕಿರಿಚಿಕೊಂಡು ತನ್ನ ಮೈಯ ಪರಚಿಕೊಳುವುದು

ಪಾಪ ಅತ್ತರಮ್ಮ ತಾನು ಅತ್ತುಬಿಡುವಳು

ಅಯ್ಯೊ ಪಾಪ ಎಂದುಕೊಂಡು ಮುತ್ತು ಕೊಡುವಳು!

********************************************

ಉಂಡಾಡಿ ಗುಂಡ
ಮದ್ವೆ ಮನೆಗೋದ

ಹತ್ತು ಲಾಡು ತಿಂದ
ಇನ್ನು ಬೇಕು ಅಂದ

ಹೊಟ್ಟೆ ನೋವು ಅಂದ

ಅಮ್ಮ ಬೆಣ್ಣೆ ಕೊಟ್ಳು
ಇನ್ನೂ ಸ್ವಲ್ಪ ಅಂದ

ಅಪ್ಪ ದೊಣ್ಣೆ ತಂದ
ಕೈ ಕಟ್ ಬಾಯಿ ಮುಚ್ ಎಂದ.!

**********************************************

ನರಿಯು ತೋಟಕೆ ಹೋಯಿತು...ನರಿಯು ತೋಟಕೆ ಹೋಯಿತು

ತೋಟ ನೋಡಲು....ನೋಡಿತೇನದು...ನೋಡಿತೇನದು...

ಚಪ್ಪರದಿಂದ ಕೂಡಿದ...ಚಪ್ಪರದಿಂದ ಕೂಡಿದ

ಚಪ್ಪರದಿಂದ ಕೂಡಿದ ದ್ರಾಕ್ಷಿ ಗೊಂಚಲು

ಒಂದು ಸಲ ಹಾರಿತು....ಎರಡು ಸಲ ಹಾರಿತು

ಮೂರು ಸಲ ಹಾರಿತು....ಸೋತು ಹೋಯಿತು

ದ್ರಾಕ್ಷಿ ಹುಳಿ ಎಂದಿತು...ದ್ರಾಕ್ಷಿ ಹುಳಿ ಎಂದಿತು

ಸಪ್ಪೆ ಮುಖ ಮಾಡಿತು....ಓಡಿ ಹೋಯಿತು...

**********************************************

ಮಳೆ ಬಂತು ಮಳೆ

ಕೊಡೆ ಹಿಡಿದು ನಡೆ

ಜಾರಿ ಬಿದ್ದರೊಮ್ಮೆ,

ಬಟ್ಟೆಯೆಲ್ಲಾ ಕೊಳೆ

ಬಾವಿಯಿಂದ ನೀರು ಸೇದಿ

ಬಟ್ಟೆಯೆಲ್ಲಾ ಒಗೆ..!

*************************************************

ಇವನೇ ನೋಡು ಅನ್ನದಾತ

ಹೊಲದಿ ದುಡಿದೇ ದುಡಿವನು

ನಾಡ ಜನರು ಬದುಕಲೆಂದು

ದವಸ ಧಾನ್ಯ ಬೆಳೆವನು


ಮಳೆಯ ಗುಡುಗು ಚಳಿಯ ನಡುಗು

ಬಿಸಿಲ ಬೇಗೆಯ ಸಹಿಸುತಾ

ಬೆವರು ಸುರಿಸಿ ಕಷ್ಟ ಸಹಿಸಿ

ಒಂದೇ ಸಮನೆ ದುಡಿಯುತಾ


ಗಟ್ಟಿ ದೇಹ ದೊಡ್ಡ ಮನಸು

ದೇವನಿಂದ ಪಡೆವನು

ಯೋಗಿಯಾಗಿ ತ್ಯಾಗಿಯಾಗಿ 

ಅನ್ನ ನೀಡುತಿರುವನು


ಎತ್ತು ಎರಡು ಅವನ ಜೋಡು

ಕೂಡಿ ದುಡಿವ ಗೆಳೆಯರು

ಹಿಗ್ಗು ಕುಗ್ಗು ಏನೇ ಬರಲಿ

ಹೊಂದಿಕೊಂಡು ನಡೆವರು.

***************************************************

ಓಲೆಯ ಹಂಚಲು ಹೊರಡುವೆ ನಾನು

ತೋರಲು ಆಗಸದಲಿ ಬಿಳಿ ಬಾನು

ಮನೆಯಲಿ ನೀವು ಬಿಸಿಲಲಿ ನಾನು

ಕಾಗದ ಬಂತು ಕಾಗದವು


ಓಲೆಯ ಕೊಡುವಧಿಕಾರಿಯು ನಾನು

ಆದರೂ ಅದರಲಿ ಬರೆದುದು ಏನು

ಎಂಬುದನರಿಯೆ ಬಲು ಸುಖಿ ನಾನು

ಕಾಗದ ಬಂತು ಕಾಗದವು
************************************

ಏರುತಿಹುದು ಹಾರುತಿಹುದು 
ನೋಡು ನಮ್ಮ ಬಾವುಟ
ತೋರುತಿಹುದು ಹೊಡೆದು ಹೊಡೆದು 
ಬಾನಿನಗಲ ಪಟಪಟ

ಕೇಸರಿ ಬಿಳಿ ಹಸಿರು ಮೂರು
ಬಣ್ಣ ನಡುವೆ ಚಕ್ರವು
ಸತ್ಯ ಶಾಂತಿ ತ್ಯಾಗ ಮೂರ್ತಿ 
ಗಾಂಧಿ ಹಿಡಿದ ಚರಕವು

ಇಂತ ಧ್ವಜವು ನಮ್ಮ ಧ್ವಜವು 
ನೋಡು ಹಾರುತಿರುವುದು
ಧ್ವಜದ ಶಕ್ತಿ ನಮ್ಮ ಭಕ್ತಿ 
ನಾಡ ಸಿರಿಯ ಮೆರೆವುದು

ಕೆಂಪು ಕಿರಣ ತುಂಬಿ ಗಗನ
ಹೊನ್ನ ಬಣ್ಣವಾಗಿದೆ
ನಮ್ಮ ನಾಡ ಗುಡಿಯ ಬಣ್ಣ 
ನೋಡಿರಣ್ಣ ಹೇಗಿದೆ

************************************************

ರೊಟ್ಟಿ ಅಂಗಡಿ ಕಿಟ್ಟಪ್ಪ

ನಂಗೊಂದು ರೊಟ್ಟಿ ತಟ್ಟಪ್ಪ

ಪುಟಾಣಿ ರೊಟ್ಟಿ ಕೆಂಪಗೆ ಸುಟ್ಟು

ಒಂಭತ್ತು ಕಾಸಿಗೆ ತಟ್ಟಪ್ಪ

ಬಿಟ್ಟು ಹೋಗೆನು ಕಿಟ್ಟಪ್ಪ



ರೊಟ್ಟಿ ಅಂಗಡಿ ಕಿಟ್ಟಪ್ಪ

ರೊಟ್ಟಿಯ ನೋಡಿ ತಟ್ಟಪ್ಪ

ರೊಟ್ಟಿಯ ಸುತ್ತು ಹಸಿ ಹಸಿ ಹಿಟ್ಟು

ರೊಟ್ಟಿಯ ಬೇರೆ ತಟ್ಟಪ್ಪ

ನನಗಿದು ಬೇಡ ಕಿಟ್ಟಪ್ಪ

ರೊಟ್ಟಿ ಅಂಗಡಿ ಕಿಟ್ಟಪ್ಪ

ನಂಗೊಂದು ರೊಟ್ಟಿ ತಟ್ಟಪ್ಪ


ರೊಟ್ಟಿ ಅಂಗಡಿ ಕಿಟ್ಟಪ್ಪ

ಬೇರೆ ರೊಟ್ಟಿಯ ತಟ್ಟಪ್ಪ

ಕೊಂಡರೆ ರೊಟ್ಟಿ ಸುಡಬೇಕಪ್ಪ


ಟೂ.. ಟೂ.... ಸಂಗ ಬಿಟ್ಟೆಪ್ಪಾ


ಟೂ ಟೂ ಸಂಗ ಬಿಟ್ಟೆಪ್ಪ

ಬಿಟ್ಟರೆ ಪುನಹಾ ಕಟ್ಟೆಪ್ಪಾ

***********************************************

ಬೊಂಬೆ ಪೀಪೀ...ಬಣ್ಣದ ತುತ್ತೂರಿ

ಬಣ್ಣದ ತಗಡಿನ ತುತ್ತೂರಿ

ಕಾಸಿಗೆ ಕೊಂಡನು ಕಸ್ತೂರಿ

ಬಣ್ಣದ ತಗಡಿನ ತುತ್ತೂರಿ

ಕಾಸಿಗೆ ಕೊಂಡೆನು ನಾನೂರಿ


ಸರಿಗಮ ಪದನಿಸ ಊದಿದನು

ಸನಿದಮ ಮಗರಿಸ ಊದಿದನು

ತನಗೆ ತುತ್ತೂರಿ ಇದೆಯೆಂದ

ಬೇರಾರಿಗೂ ಅದು ಇಲ್ಲೆಂದ


ಕಸ್ತೂರಿ ನಡೆದನು ಬೀದಿಯಲಿ

ಜಂಭದ ಕೋಳಿಯ ರೀತಿಯಲಿ

ತುತ್ತೂರಿ ಊದುತ ಕೊಳದ ಬಳಿ

ನಡೆದನು ಕಸ್ತೂರಿ ಸಂಜೆಯಲಿ


ಜಾರಿತು ನೀರಿಗೆ ತುತ್ತೂರಿ

ಗಂಟಲು ಕಟ್ಟಿತು ನೀರೂರಿ

ಸರಿಗಮ ಊದಲು ನೋಡಿದನು

ಗಗ ಗಗ ಸದ್ದನು ಮಾಡಿದನು


ಬಣ್ಣವು ನೀರಿನ ಪಾಲಾಯ್ತು

ಬಣ್ಣದ ತುತ್ತೂರಿ ಬೋಳಾಯ್ತು

ಬಣ್ಣದ ತುತ್ತೂರಿ ಹಾಳಾಯ್ತು

ಜಂಭದ ಕೋಳಿಗೆ ಗೋಳಾಯ್ತು

************************************************

ಬಂದಿತು ರೈಲು 
ಬಿದ್ದಿತು ಕೈಮರ
ಹೊಡೆಯಿತು ಗಂಟೆ
ಊದಿತು ಸೀಟಿ
ಬೀಸಿತು ಬಾವುಟ 
ಹೊರಟಿತು ರೈಲು.

ಉರುಳಿತು ಚಕ್ರ
ಹಾಕಿತು ಸಿಳ್ಳು
ಉಗುಳಿತು ಧೂಮ, 
ದಾಟಿತು ಹೊಲಮನೆ
ಒಡಿತು ವೇಗದಿ
ಸೇರಿತು ಊರು.

*******************************************

ಬಾಳೆಯ ತೋಟದ ಪಕ್ಕದ ಕಾಡೊಳು ವಾಸಿಸುತ್ತಿದ್ದವು ಮಂಗಗಳು

ಮಂಗಗಳೆಲ್ಲವೂ ಒಟ್ಟಿಗೆ ಸೇರುತ ಒಂದುಪವಾಸವ ಮಾಡಿದವು


ಏನೂ ತಿನ್ನದೆ ಮಟಮಟ ನೋಡುತ ಇದ್ದವು ಮರದಲ್ಲಿ ಕುಳಿತಲ್ಲೇ

ನಾಳೆಗೆ ತಿಂಡಿಯ ಈಗಲೇ ಹುಡುಕುವ ಬನ್ನಿರಿ ಎಂದಿತು ಕಪಿಯೊಂದು 


ಹೌದಣ್ಣಾ ಎಂದೆನ್ನುತ ಎಲ್ಲವೂ ಬಾಳೆಯ ತೋಟಕೆ ಹಾರಿದವು 

ತೋಟದಿ ಬಾಳೆಯ ಹಣ್ಣನು ನೋಡಲು ಆಸೆಯು ಹೆಚ್ಚಿತು ನೀರೂರಿ


ಸುಲಿದೇ ಇಡುವ ಆಗದೆ ಎಂದಿತು ಆಸೆಯ ಮರಿಕಪಿಯೊಂದಾಗ 

ಹೌದೌದೆನ್ನುತ ಹಣ್ಣನು ಸುಲಿದವು ಕೈಯೊಳು ಹಿಡಿದು ಕುಳಿತಿರಲು


ಕೈಯಲ್ಲೇತಕೆ ಬಾಯೊಳಗಿಟ್ಟರೆ ಆಗದೇ ಎಂದಿತು ಇನ್ನೊಂದು

ಹಣ್ಣನು ಬಾಯಲಿ ಇಟ್ಟವು ಜಗಿದೇ ಇಡುವೆವು ಎಂದಿತು ಮತ್ತೊಂದು


ಜಗಿದೂ ಜಗಿದೂ ನುಂಗಿದವೆಲ್ಲಾ...ಆಗಲೇ ಮುಗಿಯಿತು ಉಪವಾಸ! 

******************************************************

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟಕ ದೇಶದೊ
ಳಿರುವ ಕಾಳಿಂಗನೆಂಬ ಗೊಲ್ಲನ
ಪರಿಯ ನಾನೆಂತು ಪೇಳ್ವೆನು?


ಗಿರಿಗಳೆಡೆಯಲಿ ಅಡವಿ ನಡುವೆ
ತುರುವ ದೊಡ್ಡಿಯ ಮಾಡಿಕೊಂಡು
ಮೆರೆವ ಕಾಳಿಂಗನೆಂಬ ಗೊಲ್ಲನ ಸಿರಿಯ
ನಾನೆಂತು ಪೇಳ್ವೆನು?


ಗೊಲ್ಲದೊಡ್ದಿಯೊಳಿರುವ ಹಸುಗಳು
ಎಲ್ಲ ಬೆಟ್ಟದ ಮೇಲೆ ಮೇಯುತ
ಹುಲ್ಲು ಒಳ್ಳೆಯ ನೀರ ಕುಡಿಯುತ
ಅಲ್ಲಿ ಮೆರೆದುವರಣ್ಯದಿ


ಕರುಗಳನ್ನು ನೆನೆನೆನೆದು ಹಸುಗಳು
ಕೊರಳ ಘಂಟೆ ಢಣಿರು ಢಣಿರೆನೆ
ಪರಿದು ಲಂಘಿಸಿ ಚಿಮ್ಮಿ ನೆಗೆಯುತ
ಮರಳಿ ಬಂದವು ದೊಡ್ಡಿಗೆ

ತಮ್ಮ ತಾಯನು ಕಂಡು ಕರುಗಳು
ಅಮ್ಮಾ ಎಂದು ಕೂಗಿ ನಲಿಯುತ
ಸುಮ್ಮಾನದೊಳು ಮೊಲೆಯನುಂಡು
ನಿರ್ಮಲದೊಳು ಇದ್ದವು

ಉದಯಕಾಲದೊಳೆದ್ದು ಗೊಲ್ಲನು
ನದಿಯ ಸ್ನಾನವ ಮಾಡಿಕೊಂಡು
ಮುದದಿ ತಿಲಕವ ಹಣೆಯೊಳಿಟ್ಟು
ಚಿದುರ ಶಿಖೆಯನು ಹಾಕಿದ

ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲಗೌಡನು
ಬಳಸಿ ನಿಂದ ತುರುಗಳನ್ನು
ಬಳಿಗೆ ಕರೆದನು ಹರುಷದಿ

ಗಂಗೆ ಬಾರೇ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಕಾಮಧೇನು ನೀನು ಬಾರೆಂದು
ಪ್ರೇಮದಲಿ ಗೊಲ್ಲ ಕರೆದನು

ಗೊಲ್ಲ ಕರೆದ ಧ್ವನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂತು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ

ಹಬ್ಬಿದಾ ಮಲೆ ಮಧ್ಯದೊಳಗೆ
ಅರ್ಭುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿ ಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು

ಸಿಡಿದು ರೋಷದಿ ಮೊರೊಯುತಾ ಹುಲಿ
ಘುಡು ಘುಡಿಸಿ ಭೋರಿಡುತ ಛಂಗನೆ
ತುಡುಕಲೆರಗಿದ ರಭಸಕಂಜಿ
ಚದುರಿ ಹೋದವು ಹಸುಗಳು

ಪುಣ್ಯಕೋಟಿ ಎಂಬ ಗೋವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನ್ನು ಕೊಡುವೆನೆನುತ
ಚೆನ್ನಾಗಿ ತಾ ಬರುತಿರೆ

ಇಂದೆನೆಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡ ಗಟ್ಟಿ
ನಿಂದನಾ ಹುಲಿರಾಯನು

ಮೇಲೆ ಬಿದ್ದು ನಿನ್ನನೀಗಲೆ
ಬೀಳ ಹೊಯ್ವೆನು ನಿನ್ನ ಹೊಟ್ಟೆಯ
ಸೀಳಿ ಬಿಡುವೆನು ಎನುತ ಕೋಪದಿ
ಖೂಳ ವ್ಯಾಘ್ರನು ಕೂಗಲು

ಒಂದು ಬಿನ್ನಹ ಹುಲಿಯೆ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ.


ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯನಾಡುವೆಯೆಂದಿತು

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕ್ಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು.


ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆಯಿತ್ತು
ಕಂದ ನಿನ್ನನು ನೋಡಿ ಹೋಗುವೆ
ನೆಂದು ಬಂದೆನು ದೊಡ್ಡಿಗೆ.

ಅಮ್ಮ ನೀನು ಸಾಯಲೇಕೆ?
ನಮ್ಮ ತಬ್ಬಲಿ ಮಾಡಲೇಕೆ?
ಸುಮ್ಮನಿಲ್ಲೆಯೆ ನಿಲ್ಲೆನುತ
ಅಮ್ಮನಿಗೆ ಕರು ಹೇಳಲು

ಕೊಟ್ಟ ಭಾಷೆಗೆ ತಪ್ಪಲಾರೆನು
ಕೆಟ್ಟ ಯೋಚನೆ ಮಾಡಲಾರೆನು
ನಿಷ್ಠೆಯಿಂದಲಿ ಪೋಪನಲ್ಲಿಗೆ
ಕಟ್ಟಕಡೆಗಿದು ಖಂಡಿತ.


ಆರ ಮೊಲೆಯನು ಕುಡಿಯಲಮ್ಮ
ಆರ ಸೇರಿ ಬದುಕಲಮ್ಮ
ಆರ ಬಳಿಯಲಿ ಮಲಗಲಮ್ಮಾ
ಆರು ನನಗೆ ಹಿತವರು?

ಅಮ್ಮಗಳಿರಾ ಅಕ್ಕಗಳಿರಾ
ನಮ್ಮ ತಾಯೊಡಹುಟ್ಟುಗಳಿರ
ನಿಮ್ಮ ಕಂದನೆಂದು ಕಾಣಿರಿ
ತಬ್ಬಲಿಯನೀ ಕರುವನು

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲೀಯನೀ ಕರುವನು


ಕಟ್ಟಕಡೆಯಲಿ ಮೇಯಬೇಡ
ಬೆಟ್ಟದೊತ್ತಿಗೆ ಹೋಗಬೇಡ
ದುಷ್ಟವ್ಯಾಘ್ರನು ಹೊಂಚುತಿರುವನು
ನಟ್ಟನಡುವಿರು ಕಂದನೆ

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ

ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿ ನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆ ಕೋ ಮಾಂಸವಿದೆ ಕೋ
ಗುಂಡಿಗೆಯ ಬಿಸಿ ರಕ್ತವಿದೆ ಕೋ
ಚಂಡ ವ್ಯಾಘ್ರನೆ ನೀನಿದೆಲ್ಲವ-
ನುಂಡು ಸಂತಸದಿಂದಿರು


ಪುಣ್ಯಕೋಟಿಯ ಮಾತ ಕೇಳಿ
ಕಣ್ಣನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ನಾನೇನ ಪಡೆವೆನು
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು!


************************************************

ನನ್ನ ಸ್ಲೇಟು ಕರಿಯದು

ಅದರ ಪಟ್ಟಿ ಬಿಳಿಯದು

ಬರಿಯಲಿಕ್ಕೆ ಬರುವುದು

ಬಹಳ ಚಂದ ಇರುವುದು

ಅಪ್ಪ ದುಡ್ಡು ಕೊಟ್ಟನು

ನಾನು ಬಳಪ ತಂದೆನು

ಅ ಆ ಇ ಈ ಬರೆದೆನು

ಅಮ್ಮ ನ ಮುಂದೆ ಇಟ್ಟೆನು

ಅಮ್ಮ ನೋಡಿ ನಕ್ಕಳು

ತಿನ್ನಲು ತಿಂಡಿ ಕೊಟ್ಟಳು

ಕುಣಿದು ಕುಣಿದು ತಿಂದೆನು

ತಿರುಗಿ ಶಾಲೆಗೆ ಹೋದೆನು

ಕಲಿತು ಜಾಣನಾದೆನು! 

********************************************

ಗೇರ್ ಗೇರ್ ಮಂಗಣ್ಣ
ಕಡಲೆ ಕಾಯಿ ನೋಡಣ್ಣ
ಓಡುತ ಓಡುತ ನೋಡಣ್ಣ
ಲಾಗ ಗೀಗ ಹಾಕಣ್ಣ

ಕಡಲೆ ಕಾಯಿ ಬೇಕಣ್ಣ
ಕಾಸುಗೀಸು ಬೇಡಣ್ಣ
ನನ್ನೊಡನಾಟ ಆಡಣ್ಣ
ಕಡಲೆ ಕಾಯಿ ತಿನ್ನಣ್ಣ

ಮಕ್ಕಳ ಕಾಡಬೇಡಣ್ಣ
ಮನೆಯವರೆಗೂ ಬಾರಣ್ಣ
ಹಣ್ಣು ಗಿಣ್ಣು ಬೇಕಣ್ಣ
ಹಾಗಾದರೆ ಲಾಗ ಹಾಕಣ್ಣ.

**********************************

ಹತ್ತು ಒಂದು ಹನ್ನೊಂದು
ಮೆತ್ತನ ಕಡುಬು ಇನ್ನೊಂದು

ಹತ್ತೂ ಎರಡು ಹನ್ನೆರಡು
ಉತ್ತಮ ತುಪ್ಪಾ ಮೇಲ್ಹರಡು

ಹತ್ತೂ ಮೂರು ಹದಿಮೂರು
ನೆತ್ತಿಗೆ ಹತ್ತಲಿ ಸುರಿ ಸಾರು

ಹತ್ತೂ ನಾಲ್ಕು ಹದಿನಾಲ್ಕು
ಮೆತ್ತನ ಕಡುಬು ಇನ್ನೂಬೇಕು

ಹತ್ತೂ ಐದು ಹದಿನೈದು
ಹೊತ್ತಗಿಲ್ಲ ಹೊಡಿ ಇನ್ನೈದು

ಹತ್ತೂ ಆರು ಹದಿನಾರು
ಉತ್ತಮಳಮ್ಮ ಸರಿ ನಿನಗಾರು?

ಹತ್ತು ಏಳು ಹದಿನೇಳು
ಮತ್ತೂ ಬಂದರೆ ಹೊಡಿಯೇಳು

ಹತ್ತೂ ಎಂಟು ಹನಿನೆಂಟು
ಚಿತ್ತಕೆ ಬಂದರೆ ಇನ್ನೂ ಉಂಟು

ಹತ್ತೂ ಒಂಭತ್ತು ಹತ್ತೊಂಭತ್ತು
ಹೆತ್ತುಪ್ಪಣ್ಣಾ ಹೊಟ್ಟೆಯು ತುಂಬಿತು

ಹತ್ತೂ ಹತ್ತೂ ಇಪ್ಪತ್ತು
ಮಾಡಿದ ಕಡುಬು ತೀರಿತ್ತು.

************************************
ತಿರುಕನೊರ್ವನೂರ ಮುಂದೆ
ಮುರುಕು ಧರ್ಮಶಾಲೆಯಲ್ಲಿ
ಒರಗಿರುತ್ತಲೊಂದು ಕನಸ ಕಂಡನೆಂತೆನೆ 
ಪುರದ ರಾಜ ಸತ್ತನವಗೆ
ವರಕುಮಾರರಿಲ್ಲದಿರಲು,
ಕರಿಯ ಕೈಗೆ ಕುಸುಮಮಾಲೆಯಿತ್ತು ಪುರದೊಳು


ನಡೆದು ಯಾರ ಕೊರಳಿನಲ್ಲಿ
ತೊಡರಿಸುವದೊ ಅವರ ಪಟ್ಟ
ಕೊಡೆಯರನ್ನು ಮಾಳ್ಪೆವೆಂದು ಬಿಟ್ಟರಲ್ಲಿಯೆ
ಒಡನೆ ತನ್ನ ಕೊರಳಿನಲ್ಲಿ
ತೊಡರಿಸಲ್ಕೆ ಕಂಡ ತಿರುಕ
ಪೊಡವಿಯಾಣ್ಮನಾದೆನೆಂದು ಹಿಗ್ಗುತಿರ್ದನು


ಪಟ್ಟವನ್ನು ಕಟ್ಟಿ ನೃಪರು
ಕೊಟ್ಟರವಗೆ ಕನ್ಯೆಯರನು
ನೆಟ್ಟನವನು ರಾಜ್ಯವಾಳ್ದ ಕನಸಿನಲ್ಲಿಯೇ
ಭಟ್ಟನಿಗಳ ಕೂಡಿ ನಲ್ಲ
ನಿಷ್ಟಸುಖದೊಳಿರಲವಂಗೆ
ಹುಟ್ಟಿ ಹೆಣ್ಣು ಗಂಡು ಮಕ್ಕಳಾದುವಾಗಲೇ


ಓಲಗದಲಿರುತ್ತ ತೊಡೆಯ
ಮೇಲೆ ಮಕ್ಕಳಾಡುತಿರಲು
ಲೀಲೆಯಿಂದ ಚಾತುರಂಗ ಬಲವ ನೋಡುತ
ಲೋಲನಾಗಿ ನುಡಿದನಿನಿತು
ಕೇಳು ಮಂತ್ರಿ, ಸುತರುಗಳಿಗೆ
ಬಾಲೆಯರನು ನೋಡಿ ಮದುವೆ ಮಾಡಬೇಕೆಲೆ


ನೋಡಿ ಬನ್ನಿರೆನಲು ಜೀಯ
ನೋಡಿ ಬಂದೆವೆನಲು ಬೇಗ
ಮಾಡು ಮದುವೆ ಮಂಟಪದೊಳು ಸಕಲ ಕಾರ್ಯವ
ಗಾಢವಾಗೆ ಸಂಭ್ರಮಗಳು
ಮಾಡುತಿದ್ದ ಮದುವೆಗಳನು
ಕೂಡಿದಖಿಳ ರಾಯರೆಲ್ಲ ಮೆಚ್ಚುವಂದದಿ


ಧನದ ಮದವು ರಾಜ್ಯ ಮದವು
ತನುಜ ಮದವು ಯುವತಿಮದವು
ಜನಿತಮಾಗಿ ಕನಸಿನಲ್ಲಿ ಹಿಗ್ಗುತಿರ್ದನು
ಅನಿತರೊಳಗೆ ನೃಪರ ದಂಡು
ಮನೆಯ ಮುತ್ತಿದಂತೆಯಾಗೆ
ಕನಸ ಕಾಣತಿರ್ದ ಹೆದರಿ ಕಣ್ಣ ತೆರೆದನು.

********************************************

ಹಸಿದ ಹೊಟ್ಟೆಯಿಂದ ನಾಯಿ
ರೊಟ್ಟಿಗಾಗಿ ತಿರುಗಿತು
ಊರ ದಾಟಿ ಹಳ್ಳದಾಚೆ
ಹುಡುಕಲೆಂದು ಹೊರಟಿತು ||೧||

ಅಲ್ಲಿ ಹೊಲದ ಗುಡಿಸಲಲ್ಲಿ
ಬುತ್ತಿ ಗಂಟು ದೊರಕಿತು
ರೊಟ್ಟಿಯೊಂದನೆತ್ತಿಕೊಂಡು
ಊಬ್ಬಿನಿಂದ ಮರಳಿತು ||೨||

ಹಳ್ಳ ದಾಟುವಾಗ ನೋಟ
ನೀರಿನಲ್ಲಿ ಬಿದ್ದಿತು
ರೊಟ್ಟಿ ಹಿಡಿದ ಬೇರೆ ನಾಯಿ
ಕಂಡು ರೊಚ್ಚಿಗೆದ್ದಿತು ||೩||

ಅದನು ಕಿತ್ತುಕೊಳ್ಳಲೆಂದು
ಬಾಯಿ ತೆರೆದು ಬೊಗಳಿತು
ರೊಟ್ಟಿ ಜಾರಿ ಹಳ್ಳದಲ್ಲಿ
ಬಿದ್ದುಬಿಡಲು ಮರುಗಿತು ||೪||

ಆಸೆಯಿಂದ ತನ್ನದನ್ನು
ಕಳೆದುಕೊಂಡ ತಪ್ಪಿಗೆ
ಡೊಂಕುಬಾಲ ಎತ್ತಿಕೊಂಡ್ದು
ಓಡಿತಾಗ ತೆಪ್ಪಗೆ ||೫||

*******************************************

ಬಹಳ ಒಳ್ಳೇರು ನಮ್ಮಿಸ್ಸು
ಏನ್ ಹೇಳಿದ್ರು ಎಸ್ಸೆಸ್ಸು...
ನಗ್ತಾ ನಗ್ತಾ ಮಾತಾಡಿಸ್ತಾರೆ 
ಸ್ಕೂಲಿಗೆಲ್ಲಾ ಪೇಮಸ್ಸು...ಸ್ಕೂಲಿಗೆಲ್ಲಾ ಪೇಮಸ್ಸು...

ಆಟಕ್ಕೆ ಬಾ ಅಂತಾರೆ 
ಆಟದ ಸಾಮಾನ್ ಕೊಡ್ತಾರೆ
ಆಟದ್ ಜೊತೆ ಗೊತ್ತಿಲ್ದಂಗೆ.. ಪಾಟನೂ ಕಲಿಸ್ತಾರೆ...

ನಮ್ಮಿಸ್ಸಂತ ಮಿಸ್ ಇಲ್ಲ
ನಮ್ ಸ್ಕೂಲ್ ಅಂತ ಸ್ಕೂಲ್ ಇಲ್ಲಾ
ಅಮ್ಮನ್ನಾಗೆ ಅವರನ್ನ ಬಿಟ್ಬರೋಕೆ ಮನಸಿಲ್ಲಾ....

***********************************

ಬಸ್ ಬಂತು ಬಸ್

ಗೌರ್ನಮೆಂಟ್ ಬಸ್

ಕೆಂಪು ಬಿಳಿ ಬಣ್ಣಾ

ನೋಡು ಬಾರಣ್ಣಾ


ಆರು ಚಕ್ರ ಇರುವುದು

ಎರಡು ಲೈಟ್ ಉರಿವುದು

ನಾ ಕಂಡಕ್ಟರ್ ಆಗುವೆ

ರೈಟ್ ರೈಟ್ ಹೇಳುವೆ

ಸೀಟಿಯನ್ನು ಊದುವೆ! 

***************************************

ಗೋಡೆ ಮೇಲಿನ ಗಡಿಯಾರಕ್ಕೆ

ಯಾಕೋ ತುಂಬಾ ನಿದ್ದೆ

ಟಿಕ್ ಟಿಕ್ ಎಂದು ಹಾಡಲು ಮರೆತು

ಗೊರಕೆ ಹೊಡಿದದ್ದೇ


ಗೊರಕೆ ಹೊಡಿಯೋ ಗಡಿಯಾರಕ್ಕೆ

ಹೊಕ್ಕಿತೊಂದು ಜೇಡ

ಹೊರಗೆ ಬರಕ್ಕೆ ಆಗಲೇ ಇಲ್ಲಾ

ಅದರ ಫಜೀತಿ ಬೇಡ! 

***********************************

ಕರಡಿ ಬೆಟ್ಟಕೆ ಹೋಯಿತು

ಕರಡಿ ಬೆಟ್ಟಕೆ ಹೋಯಿತು

ಕರಡಿ ಬೆಟ್ಟಕೆ ಹೋಯಿತೂ

ನೋಟ ನೋಡಲು


ನೋಡಿತೇನದು ನೋಡಿತೇನದು

ಬೆಟ್ಟದ ಇನ್ನೊಂದು ಭಾಗಾ

ಬೆಟ್ಟದ ಇನ್ನೊಂದು ಭಾಗ

ಕರಡಿ ನೋಡಿತು 

ಹಲಸು ತಂದಿತು...ಜೇನ ಕಲಸಿತು

ಮರಿಗಳಿಗೆ ತಿನ್ನಿಸಿ

ತಾನು ತಿಂದು ತೇಗಿತು!

*****************************************

ಪೆನ್ಸಿಲ್ಲಣ್ಣನ ಮೊದಲನೆ ಶತ್ರು

ಅಳಿಸೋ ರಬ್ಬರ್ರು

ತಪ್ಪು ಬರೆದರೆ ಒಪ್ಪೋದಿಲ್ಲಾ 

ಎನೇ ಹೇಳಿದ್ರೂ


ಪೆನ್ಸಿಲ್ಲಣ್ಣನ ಎರಡನೆ ಶತ್ರು

ಹೆರೆಯೋ ಮೆಂಡರ್ರು

ಮೊಂಡಾಗಿರಲು ಬಿಡೋದೇ ಇಲ್ಲಾ

ಎಷ್ಟೇ ಬಡ್ಕೊಂಡ್ರೂ!

**********************************

ಘಂಟೆಯ ನೆಂಟನೆ ಓ ಗಡಿಯಾರ

ಬೆಳ್ಳಿಯ ಬಣ್ಣದ ಗೋಳಾಕಾರ

ಹೊತ್ತನು ತಿಳಿಯಲು ನೀನಾಧಾರ

ಟಿಕ್ ಟಿಕ್ ಗೆಳೆಯಾ

ಟಿಕ್ ಟಿಕ್ ಟಿಕ್


ಹಗಲೂ ಇರಳೂ ಒಂದೇ ಬಾಳು

ನೀನಾವಾಗಲೂ ದುಡಿಯುವ ಆಳು

ಕಿವಿಯನು ಹಿಂಡಲು ನಿನಗದೇ ಕೂಳು

ಟಿಕ್ ಟಿಕ್ ಗೆಳೆಯಾ

ಟಿಕ್ ಟಿಕ್ ಟಿಕ್ 

*********************************


ಕಾಮನ ಬಿಲ್ಲು ಕಮಾನು ಕಟ್ಟಿದೆ

ಮೋಡದ ನಾಡಿನ ಬಾಗಿಲಿಗೆ

ಬಣ್ಣಗಳೇಳನು ತೋರಣ ಮಾಡಿದೆ

ಕಂದನ ಕಣ್ಣಿಗೆ ಚಂದನ ಮಾಡಿದೆ

ಹಣ್ಣಿನ ಹೂವಿನ ಹೊನ್ನನು ಕೂಡಿದೆ

ಮಕ್ಕಳಿಗೋಕುಳಿ ಆಟವನಾಡಿದೆ

ತೆಂಗಿನ ತೋಟದ ಬುಡದಲಿ ಮೂಡಿದೆ

ಭೂಮಿಗೆ ಬಾನಿಗೆ ಸೇತುವೆ ಮಾಡಿದೆ

***********************************

ಹತ್ತು ಹತ್ತು ಇಪ್ಪತ್ತು

ತೋಟಕೆ ಹೋದನು ಸಂಪತ್ತು

ಇಪ್ಪತ್ತು ಹತ್ತು ಮೂವತ್ತು

ಕೈಯಲಿ ಒಂದು ಕಲ್ಲಿತ್ತು

ಮೂವತ್ತು ಹತ್ತು ನಲವತ್ತು

ಎದುರಿಗೆ ಮಾವಿನ ಮರವಿತ್ತು

ನಲವತ್ತು ಹತ್ತು ಐವತ್ತು

ಮರದಲಿ ಕಾಯಿಯು ತುಂಬಿತ್ತು

ಐವತ್ತು ಹತ್ತು ಅರವತ್ತು

ಕಲ್ಲನು ಬೀರಿದ ಸಂಪತ್ತು

ಅರವತ್ತು ಹತ್ತು ಎಪ್ಪತ್ತು

ಕಾಯಿಯು ತಪತಪ ಉದುರಿತ್ತು

ಎಪ್ಪತ್ತು ಹತ್ತು ಎಂಭತ್ತು

ಮಾಲಿಯ ಕಂಡನು ಸಂಪತ್ತು

ಎಂಭತ್ತು ಹತ್ತು ತೊಂಭತ್ತು

ಕಾಲುಗಳೆರಡು ನಡುಗಿತ್ತು

ತೊಂಭತ್ತು ಹತ್ತು ನೂರು

ಮನೆಯನು ತಲುಪಿದ ಸಂಪತ್ತು
*********************************

ನಾನು ಒಬ್ಬ ಮಂಗಣ್ಣ

ನಂಗೆ ಉಂಟು ಬಾಲ

ಹಾಕುವೆ ನಾನು ಲಾಗ

ನಾನು ಒಬ್ಬ ಮಂಗಣ್ಣ

ಹಣ್ಣು ಗಿಣ್ಣು ತಿನ್ನುವೆ

ಸಿಪ್ಪೆ ಗಿಪ್ಪೆ ಎಸೆಯುವೆ

ಡಾನ್ಸ್ ಗೀನ್ಸ್ ಮಾಡುವೆ

ಟ್ವಿಸ್ಟ್ ಗಿಸ್ಟ್ ಮಾಡುವೆ

ಕುಂಟು ಕಾಲಲಿ ನಡೆಯುವೆ

ನಾಲ್ಕು ಕಾಲಲಿ ನಡೆಯುವೆ

ಲಾಗ ಗೀಗ ಹಾಕುವೆ 

ನಾನು ಒಬ್ಬ ಮಂಗಣ್ಣ
********************************

: ಬೊಮ್ಮನಹಳ್ಳಿಯ ಕಿಂದರಿಜೋಗಿ :


ತುಂಗಾ ತೀರದ ಬಲಗಡೆಯಲ್ಲಿ ಹಿಂದಲ್ಲಿದ್ದುದು ಬೊಮ್ಮನ ಹಳ್ಳಿ
ಅಲ್ಲೇನಿಲಿಗಳ ಕಾಟವೆ ಕಾಟ ಅಲ್ಲಿನ ಜನಗಳಿಗತಿಗೋಳಾಟ
ಇಲಿಗಳು ಬಡಿದವು ನಾಯಿಗಳ ಇಲಿಗಳು ಕಡಿದವು ಬೆಕ್ಕುಗಳ
ಕೆಲವನು ಕೊಂದವು ಕೆಲವನು ತಿಂದವು ಕೆಲವನು ಬೆದರಿಸಿ ಹಿಂಬಾಲಿಸಿದವು
ಅಲ್ಲಿಯ ಮೂಶಿಕ ನಿಕರವು ಸೊಕ್ಕಿ ಎಲ್ಲರ ಮೇಲೆಯು ಕೈಬಾಯಿಕ್ಕಿ
ಹೆದರಿಕೆಯಿಲ್ಲದೆ ಬೆದರಿಕೆಯಿಲ್ಲದೆ ಕುಣಿದವು ಯಾರನು ಲೆಕ್ಕಿಸದೆ
ಹಾಲಿನ ಮಡಕೆಯನೊಡೆದವು ಕೆಲವು ಅನ್ನದ ಗಡಿಗೆಯ ಪುಡಿ ಮಾಡಿದವು
ಬಡಿಸುವ ಅಡುಗೆಯ ಭಟ್ಟನ ತಡೆದು ಕೈಯಲ್ಲಿರುವಾ ಸಟ್ಟುಗವ
ಭೀತಿಯೆ ಇಲ್ಲದೆ ನೆಕ್ಕಿದವು ಈ ಪರಿ ತಿನ್ನುತ ಸೊಕ್ಕಿದವು
ಧಾನ್ಯವನೆಲ್ಲವ ಬಿಕ್ಕಿದವು
ಟೋಪಿಯ ಒಳಗಡೆ ಗೂಡನು ಮಾಡಿ ಹೆತ್ತವು ಮರಿಗಳನು
ಪೇಟದ ಒಳಗಡೆ ಆಟವನಾಡಿ ಕಿತ್ತವು ಸರಿಗೆಯನು
ಗೋಡೆಗೆ ತಗುಲಿಸಿದಂಗಿಯ ಜೇಬಿನ ದಿನವೂ ಜಪ್ತಿಯ ಮಾಡಿದವು
ಮಲಗಿರೆ ಹಾಸಿಗೆಯನ್ನೇ ಹರಿದವು ಕೇಶಛೇದನ ಮಾಡೀದವು
ಬೆಣ್ಣೆಯ ಕದ್ದವು ಬೆಲ್ಲವ ಮೆದ್ದವು ಎಣ್ಣೆಗೆ ಬಿದ್ದವು ದಿನದಿನವು
ಗೌಡರು ಮಾತಾಡುತ ಕುಳಿತಲ್ಲಿ ಬಹಳ ಗಲಾಟೆಯ ಮಾಡಿದವು
ಗರತಿಯರಾಡುವ ಹರಟೆಗೆ ತುಂಬಾ ತೊಂದರೆಯಿತ್ತು ಗಿಜಿಬಿಜಿ ಮಾಡಿ
ಊರಿನ ಮಕ್ಕಳ ಕೈಯಲ್ಲಿದ್ದಾ ತಿಂಡಿಯ ಕಸಿದವು ಧೈರ್ಯದಲಿ

ಇಲಿಗಳ ಕೊಲ್ಲಲು ಊರಿನ ಜನರು ತುಂಬಾ ಯತ್ನವ ಮಾಡಿದರು
ಕಡಿದರೆ ಮುರಿದುವು ಕತ್ತಿಗಳೆಲ್ಲ ಹೋಡೆದರೆ ಮಡಿದವು ಕೋಲುಗಳೆಲ್ಲ
ಇಲಿಗಳ ಬೇಟೆಯನಾಡುತಲಿರಲು ಮುರಿದವು ತಿಮ್ಮನ ಕಾಲುಗಳು
ಭೃಂಗಾಮಲಕದ ತೈಲವ ಹಚ್ಚಿದ ಶೇಶಕ್ಕನ ನುಣ್ಣನೆ ಫಣಿವೇಣಿ
ಬೆಳಗಾಗೇಳುತ ಕನ್ನದಿ ನೋಡೆ ಇಲಿಗಳಿಗಾಗಿತ್ತೂಟದ ಫೇಣಿ
ನುಗ್ಗುತ ಕೊಟ್ಟಿಗೆಗಿರುಳಿನ ಹೊತ್ತು ಉಂಡವು ತಿಂದವು ದನಗಳ ಕೆಚ್ಚಲು
ಹರಿದವು ಕರುಗಳ ಬಾಲಗಳ
ಸಿದ್ದೋಜೈಗಳು ಶಾಲೆಗೆ ಹೋಗಿ ಪಾಟವ ಬೊಧಿಸುತಿದ್ದಾಗ
ಅಂಗಿಯ ಜೇಬಿಂ ಹೆಳವಿಲಿಯೊಂದು ಛಂಗನೆ ನೆಗೆಯಿತು ತೂತನು ಮಾಡಿ
ಲೇವಡಿಯೆಬ್ಬಿಸೆ ಬಾಲಕರೆಲ್ಲ ಗುರುಗಳಿಗಾಯಿತು ಬಲುಗೇಲಿ
ಬೇಟೆಯನಾಡಲು ಅಡುಗೆಯ ಮನೆಯಲಿ ಬಿದ್ದಳು ಬಳೆಯೊಡೆದಚ್ಚಮ್ಮ
ಮೂಶಿಕ ಯಾಗವ ಮಾಡಿದರು ದೇವರ ಪೂಜೆಯ ಮಾಡಿದರು
ಹರಕೆಯ ಹೊತ್ತರು ಕಾಣಿಕೆ ತೆತ್ತೆರು ಮಂತ್ರವ ದಿನದಿನ ಹೇಳಿದರು
ನಿಶ್ಫಲವಾದವು ಮಂತ್ರಗಳೆಲ್ಲ ಬಾಯಿ ಬಾಯಿ ಕಳೆದರು ಶಾಸ್ತ್ರಿಗಳೆಲ್ಲ
ಕಣ್ ಕಣ್ ಬಿಟ್ಟರು ಪಂಡಿತರೆಲ್ಲ ಕಂಬನಿಗರೆದರು ಜನರೆಲ್ಲ

ಮುಂದಿನ ಮಾರ್ಗವ ಕಾಣದೆ ಜನರು ಗೌಡನ ಬಳಿ ಹೋದರು ಗುಂಪಾಗಿ
ಗೌಡನು ಜನರನು ಕುರಿತಿಂತೆಂದನು
ಇಲಿಗಳ ಕೊಲ್ಲಲು ದಾರಿಯನಾರು ತೋರಿಸಿಕೊಡುವಿರೊ ಅವರಿಗೆ ಆರು
ಸಾವಿರ ನಾಣ್ಯಗಳೀಯುವೆ ನಾನು ತಿಳಿದವರಿದ್ದರೆ ಬನ್ನಿರಿಯೇನು ?

ಏನಿದು ಗುಜುಗುಜು ಗುಂಪಿನಲಿ ? ನೋಡಿದರೇನಾಶ್ಚರ್ಯವನು
ಆಲಿಸಿ ದೂರದ ಕಿಂದಿರಿನಾದ ಬರುವನು ಯಾರೋ ಕಿಂದರಿ ಜೋಗಿ
ಹತ್ತಿರ ಹತ್ತಿರಕವನೈತಂದ ಬಂದಿತು ಜನರಿಗೆ ಬಲು ಆನಂದ
ನೋಡಿರಿ ನೋಡಿರಿ ಕಿಂದರಿ ಜೋಗಿ ನೋಡಿದರೆಲ್ಲರು ಬೆರಗಾಗಿ
ಬಂದನು ಬಂದನು ಕಿಂದರಿ ಜೋಗಿ ಕೆದರಿದ ಕೂದಲ ಗಡ್ಡದ ಜೋಗಿ
ನಾನಾ ಬಣ್ಣದ ಬಟ್ಟೆಯ ಜೋಗಿ ಕೈಯಲಿ ಕಿಂದರಿ ಹಿಡಿದಾ ಜೋಗಿ
ಜೋಗಿಯು ಹತ್ತಿದ ಗೌಡನ ಕಟ್ಟೆಯ ಗೌಡನ ಹೃದಯವು ಬಾಯಿಗೆ ಬಂದಿತು
ಗಡಗಡ ನಡುಗಿದನು
ತೊದಲುತ ಬೆದರುತ ಕಂಪಿತ ಕಂಠದಿ ನೀನಾರೆಂದನು ಜೋಗಿಯ ಕುರಿತು
ಅದಕಾ ಜೋಗಿಯು ಇಂತೆಂದ ಕೇಳಿದರೆಲ್ಲರು ಬಾಯಿಬಿಟ್ಟು
ಹಿಮಗಿರಿಯಲ್ಲಿಹ ಜೋಗಿಯು ನಾನು ಪರಮೇಶ್ವರನಿಗೆ ಗೆಳೆಯನು ನಾನು
ನಿಮ್ಮೀ ಗೋಳನು ಕೇಳಿದ ಶಿವನು ನನ್ನನ್ನಿಲ್ಲಿಗೆ ಕಳುಹಿದನು
ಇಲಿಗಳನೆಲ್ಲಾ ಕೊಂದರೆ ಆರು ಸಾವಿರ ನಾಣ್ಯಗಳೀಯುವೆಯೇನು ?

ಉಬ್ಬಿತು ಉಕ್ಕಿತು ಗೌಡನ ಸಂತಸ ಶಹಭಾಸೆಂದರು ಜನರೆಲ್ಲ
ಗೌಡನು ಜೋಗಿಯ ಕುರಿತಿಂತೆಂದನು ಜನರದನೆಲ್ಲಾ ಕೇಳಿದರು
ಬೇಕಾದುದ ನಾ ಕೊಡುವೆನು ಜೋಗಿ ಆರೇಕಿನ್ನೆರಡಾದರು ಕೊಡುವೆನು
ಬೇಕಾದುದನೆಲ್ಲವ ನೀ ಕೇಳು ಊರೇ ನಿನ್ನದು ನಾ ನಿನ್ನಾಳು

ಮರು ಮಾತಾಡದೆ ಕಿಂದರಿ ಜೋಗಿ ಕಟ್ಟೆಯನಿಳಿದನು ಬೀದಿಗೆ ಹೋಗಿ
ಗಡ್ಡವ ನೀವುತ ಸುತ್ತಲು ನೋಡಿ ಮಂತ್ರವ ಬಾಯಲಿ ಮಣಮಣ ಹಾಡಿ
ಕಿಂದರಿ ಬಾರಿಸತೊಡಗಿದನು ಜಗವನೆ ಮೋಹಿಸಿತಾ ನಾದ !
ಏನಿದು ? ಏನಿದು ಗಜಿಬಿಜಿಯೆಲ್ಲಿ ? ಊರನೆ ಮುಳುಗಿಪ ನಾದವಿದೆಲ್ಲಿ ?
ಇಲಿಗಳೂ ! ಇಲಿಗಳೂ ! ಇಲಿಗಳ ಹಿಂಡು ಬಳಬಳ ಹರಿದವು ಇಲಿಗಳ ದಂಡು
ಅನ್ನದ ಮಡಕೆಯನಗಲಿದವು ಟೋಪಿಯ ಗೂಡನು ತ್ಯಜಿಸಿದವು
ಬಂದವು ಅಂಗಿಯ ಜೇಬನು ಬಿಟ್ಟು ಮಕ್ಕಳ ಕಾಲಿನ ಚೀಲವ ಬಿಟ್ಟು
ಹಾರುತ ಬಂದವು ಓಡುತ ಬಂದವು ನೆಗೆಯುತ ಬಂದವು ಕುಣಿಯುತ ಬಂದವು
ಜೋಗಿಯು ಬಾರಿಸೆ ಕಿಂದರಿಯ ಸಣ್ಣಿಲಿ, ದೊಡ್ಡಿಲಿ, ಮೂಗಿಲಿ, ಸುಂಡಿಲಿ
ಅಣ್ಣಿಲಿ, ತಮ್ಮಿಲಿ, ಅವ್ವಿಲಿ, ಅಪ್ಪಿಲಿ, ಮಾವಿಲಿ, ಭಾವಿಲಿ, ಅಕ್ಕಿಲಿ, ತಂಗಿಲಿ,
ಗಂಡಿಲಿ, ಹೆಣ್ಣಿಲಿ, ಮುದುಕಿಲಿ, ಹುಡುಗಿಲಿ ಎಲ್ಲಾ ಬಂದವು ಓಡೋಡಿ
ಜೋಗಿಯು ಬಾರಿಸೆ ಕಿಂದರಿಯ ! ಬಂದವು ನಾನಾ ಬಣ್ಣದ ಇಲಿಗಳು
ಕೆಂಪಿನ ಇಲಿಗಳು, ಹಳದಿಯ ಇಲಿಗಳು, ಬೆಳ್ಳಿಲಿ, ಕರಿಯಿಲಿ, ಗಿರಿಯಿಲಿ, ಹೊಲದಿಲಿ,
ಕುಂಕುಮ ರಾಗದ, ಚಂದನ ರಾಗದ, ಹಸುರಿನ ಬಣ್ಣದ, ಪಚ್ಚೆಯ ವರ್ಣದ,
ಸಂಜೆಯ ರಾಗದ, ಗಗನದ ರಾಗದ ನಾನಾ ವರ್ಣದ ಇಲಿಗಳು ಬಂದವು
ಕುಣಿಯುತ ನಲಿಯುತ ಸಂತಸದಿ ಜೋಗಿಯು ಬಾರಿಸೆ ಕಿಂದರಿಯ
ನೋಡಿರಿ ! ಕಾಣಿರಿ ! ಬರುತಿಹವಿನ್ನೂ ಅಟ್ಟದ ಮೇಲಿಂ ಬರುವುವು ಕೆಲವು,
ಕಣಜದ ಕಡೆಯಿಂ ಬರುವುವು ಹಲವು, ಓಹೋ ! ಬಂದವು ಹಿಂಡಿಂಡಾಗಿ !
ಕುಂಟಿಲಿ, ಕಿವುಡಿಲಿ, ಹೆಳವಿಲಿ, ಮೂಗಿಲಿ ಚೀ ಪೀ ಎನ್ನುತ ಕೂಗುತಲೋಡಿ
ಗಹಗಹಿಸುತ ನೆರೆ ನೆರೆನಲಿದಾಡಿ ಬಂದಿತು ಮೂಶಿಕ ಸಂಕುಲವು
ಜೋಗಿಯು ಬಾರಿಸೆ ಕಿಂದರಿ ನಾದ !

ಬೊಮ್ಮನ ಹಳ್ಳಿಯ ಕಿಂದರಿ ಜೋಗಿ ಹೊರಟನು ತುಂಗಾ ನದಿಯೆಡೆಗಾಗಿ
ಕಿಂದರಿ ನಾದವು ಗಗನಕ್ಕೇರಿತು ಇಲಿಗಳನೆಲ್ಲಾ ಮನಮೋಹಿಸಿತು
ಕಿಂದರಿ ಜೋಗಿಯ ಹಿಂಬಾಲಿಸಿದರು ಜನಗಳು ನೋಡಲು ಕೌತುಕವ
ಜೋಗಿಯು ನಡೆದನು, ಇಲಿಗಳು ನಡೆದವು ಸೇರಿದರೆಲ್ಲರು ನದಿಯೆಡೆಯ
ಹೊಳೆಯಾ ಮರಳಿನ ಗುಡ್ಡೆಯ ತುಂಬಾ ನೋಡಿದರೆಲ್ಲೆಲ್ಲಿಯು ಇಲಿ-ಇಲಿ ಗುಂಪೆ !
ಉಸಿರಾಡದೆ ನಿಂತರು ಜನರೆಲ್ಲಾ ಮುಂದೇನಾಗುವುದೆಂದಲ್ಲಿ
ದಿವಿಜರು ಕವಿದರು ಗಗನದಲಿ ಹೂಮಳೆ ಕರೆದರು ಹರುಶದಲಿ
ದುಂದುಭಿ ನಾದವ ಮಾಡಿದರು ಕಾಣದ ಬೆರಗನು ನೋಡಿದರು
ಸುತ್ತಲು ನೋಡಿಮ್ ಕಿಂದರಿ ಜೋಗಿ ನಡೆದನು ಹೊಳೆಯ ನೀರಿನ ಮೇಲೆ
ಸೇರಿದ ಜನರೆಲ್ಲರು ಬೆರಗಾಗಿ ಜಯಜಯ ಜೋಗಿ ಎಂದರು ಕೂಗಿ
ಇಲಿಗಳು ಒಂದರ ಮೇಲೊಂದು ಹಿಂಬಾಲಿಸಿದವು ಜೋಗಿಯನು
ಬುಳುಬುಳು ನೀರೊಳು ಮುಳುಗಿದವೆಲ್ಲಾ ಹೆಣವಾಗಲ್ಲಿಯೆ ತೇಲಿದವು
ಕಿಂದರಿ ಜೋಗಿಯು ಹಿಂದಕೆ ಬಂದು ಗೌಡನೆ ನಾಣ್ಯಗಳನು ಕೊಡು ಎಂದ
ಗೌಡನು ನೋಡಿದ ಬೆರಗಾಗಿ ! ಸಾವಿರ ಆರೂ ಎಂದನು ಜೋಗಿ !
ಗೌಡನು ನಿಂತನು ತಲೆತೂಗಿ ! ಕಿಂದರಿ ಜೋಗಿಯೆ ಹೇಳುವೆ ಕೇಳು
ಸಾವಿರ ಆರನು ನಾ ಕೊಡಲಾರೆನು ನೀ ಮಾಡಿದ ಕೆಲಸವು ಹೆಚ್ಚಲ್ಲ
ಸುಮ್ಮನೆ ಕಿಂದರಿ ಬಾರಿಸಿದೆ ಇಲಿಗಳ ಹೊತ್ತೆಯ ನೀನೇನು ?
ಅವುಗಳು ತಮ್ಮಷ್ಟಕೆ ತಾವೇ ಬಿದ್ದವು ಹೊಳೆಯಲಿ ಮುಳುಗಿದವು
ಕೊಡುವೆ ನೀ ಪಟ್ಟಿಹ ಶ್ರಮಕಾಗಿ ಕಾಸೈದಾರನು ಕೊಡುವೆನು ಜೋಗಿ
ಪುರಿಗಡಲೆಯನು ಕೊಂಡುಕೊ ಹೋಗಿ !
ಗೌಡನು ಈ ಪರಿ ನುಡಿಯಲು ಜೋಗಿಯು ಕಂಗಳ ಕೆರಳಿಸುತಿನ್ತೆಂದ
ಆಡಿದ ಭಾಶೆಯ ತಪ್ಪುವೆಯ ? ಸಾವಿರ ಆರನು ಕೊಡದಿರೆ ನೀನು
ಮತ್ತೀ ಕಿಂದರಿ ಬಾರಿಸುವೆ ! ನಿಮ್ಮೀ ಹಳ್ಳಿಯನಾರಿಸುವೆ !
ಸಾವಿರವಾರನು ಕೊಡುವವರಾರು ಅಪ್ಪನ ಗಂಟೇ ? ಹೊಗೋ ಜೋಗಿ
ನೀ ಮಾಡುವುದೇನನು ನೋಡುವೆನು ಮರುಮಾತಾಡದೆ ತೊಲಗಿಲ್ಲಿಂದ !
ಹೆಚ್ಚಿಗೆ ಮಾತೇನಾದರು ನೀನಾಡಿದರೆ ಕಿಂದರಿಯೊಡೆಸುವೆ ಗಡ್ಡವ ಸುಡಿಸುವೆ
ನಿನ್ನೀ ತಲೆಯನು ಬೋಳಿಸುವೆ ಕಿಂದರಿ ತಂತಿಯು ಹರಿಯುವವರೆಗೂ
ಬಾರಿಸು ! ಬೇಡೆಂದವರಾರು ? ಬಲ್ಲೆಯ ನಾನಾರೆಂಬುದನು ?
ಊರ ಪಟೇಲ ಹಳ್ಳಿಗೆ ಗೌಡ ! ನಡೆನಡೆ ಮರುಮಾತಾಡದಿರು

ಗೌಡನ ನುಡಿಯನು ಕೇಳಿದ ಜೋಗಿ ಕಿಂದರಿ ಬಾರಿಸತೊಡಗಿದನು
ನಾದವು ಉಬ್ಬಿತು ಊರೊಳಗೆಲ್ಲ ಕರೆಯಿತು ಊರಿನ ಹುಡುಗರನೆಲ್ಲ
ಓಡುತ ಬಂದರು ಬಾಲಕರು ಕೇಳದೆ ಹಿರಿಯರ ಮಾತುಗಳ
ಬೊಮ್ಮನ ಹಳ್ಳಿಯ ಕಿಂದರಿ ಜೋಗಿ ಕಿಂದರಿ ಬಾರಿಸಿದನು ಇಂಪಾಗಿ
ಟಿಂಗ್ ಟಿಂಗ್ ಟಿಂಗ್ ಟಿಂಗ್ ನಾದವ ಕೇಳಿ ಚಂಗ್ ಚಂಗ್ ನೆಗೆದರು ಬಾಲಕರಾದಿ
ಕಿಂದರಿ ಜೋಗಿಯು ಹೊರಟನು ಮುಂದೆ ಬಾಲಕರೆಲ್ಲರು ಹರಿದರು ಹಿಂದೆ
ಊರಿನ ಜನರೆಲ್ಲರು ಭಯದಿಂದ ಎಂದರು ಮಕ್ಕಳ ಗೌಡನೆ ಕೊಂದ
ಹಾಳಾದೆವು ಗೌಡನ ದೆಸೆಯಿಂದ ಗೌಡನು ಕೂಗಿದ ಹೆದರಿಕೆಯಿಂದ
ಜೋಗಿ, ಜೋಗಿ, ಹಿಂದಿರುಗೆಂದ ಕಿಂದರಿ ಜೋಗಿಯು ನಡೆದನು
ಮುಂದೆಮಕ್ಕಳು ಓಡುತ ಹೋದರು ಹಿಂದೆ
ಕುಂಟರು ಭರದಿಂದೋಡಿದರು ಕುರುಡರು ನೋಟವ ನೋಡಿದರು
ಮೂಗರು ಸವಿ ಮಾತಾಡಿದರು ಕಿವುಡರು ನಾದವ ಕೇಳಿದರು
ಜನರೆಲ್ಲಾ ಗೋಳಾಡಿದರು ಬೊಮ್ಮನ ಹಳ್ಳಿಯ ಕಿಂದರಿ ಜೋಗಿ
ಮಕ್ಕಳ ಹೊಳೆಯೊಳಗಿಳಿಸುವನೆಂದು ಓಡಿದರೆಲ್ಲರು ಜೋಗಿಯ ಹಿಂದೆ
ಬೆಟ್ಟದ ಬುಡವನು ಸೇರಿದ ಜೋಗಿ ನಿಲ್ಲುವನೆಂದೆಲ್ಲಾ ಬಯಸಿದರು

ಏನಿದು ನಿಂತರು ಜನರೆಲ್ಲ ? ಅಯ್ಯೋ ಮಕ್ಕಳೆ ಎಂದೆನುತ !
ಜೋಗಿಯು ಬಾರಿಸೆ ಕಿಂದರಿಯ ಬಂಡೆಯು ದವಡೆಯನಾಕಳಿಸುತ್ತ
ಬಾಯನು ತೆರೆಯಿತು ಆ ಗಿರಿಯ ! ಜೋಗಿಯು ನುಗ್ಗಿದನದರಲ್ಲಿ
ಹಿಂದೆಯೆ ಹೋದರು ಬಾಲಕರು ! ಬೆಟ್ಟವು ಹಾಕಿತು ಬಾಗಿಲ ಬೇಗ
ಹಿಂದಕ್ಕುಳಿದವನೊಬ್ಬನೆ ಕುಂಟ ಅಲ್ಲಿಗೆ ಬಂದರು ಜನರೋಡಿ
ಕುಂಟನ ಕಂಡರು ಒಂಟಿಯಲಿ ಕುಂಟನು ಉಳಿದವರೆಲ್ಲೆಂದು
ಕೇಳಲು ಬೆಟ್ಟವ ತೋರಿದನು ಕಂಬನಿಗರೆದರು ಗೋಳಾಡಿದರು
ಉಳಿದಾ ಕುಂಟನು ಅಳುತಿಂತೆಂದ
ಅಯ್ಯೋ ಹೋಯಿತೆ ಆ ನಾಕ ! ಅಯ್ಯೋ ಬಂದಿತೆ ಈ ಲೋಕ !

🙏🙏🙏🙏

Friday 2 April 2021

ಸೊರಬದಲ್ಲಿ ಸೃಜನಶೀಲ ಬರವಣಿಗೆ ಕಾರ್ಯಗಾರ

ಮಕ್ಕಳಿಗಾಗಿ ಸೃಜನಶೀಲ ಬರವಣಿಗೆ ಕಾರ್ಯಗಾರ


ಮಕ್ಕಳಲ್ಲಿಯೂ ತಮ್ಮದೇ ಆದ ಕಲ್ಪನೆ, ಪರಿಕಲ್ಪನೆಗಳು, ಕೌಶಲಗಳು ಇರುತ್ತವೆ.ಅವುಗಳನ್ನು ಬರಹರೂಪಕ್ಕೆ ಇಳಿಸಲು ಅವರಿಗೆ ಅಭ್ಯಾಸ ಬೇಕಾಗುತ್ತದೆ. ಅಂತಹ ಅಭ್ಯಾಸದ ಅವಕಾಶ , ಮಾರ್ಗದರ್ಶನ ಸಿಕ್ಕಾಗ ಅವರಲ್ಲಿಯೂ ಸೃಜನಶೀಲ ಬರವಣಿಗೆ ಸಾಧ್ಯವಾಗುತ್ತದೆ.
ಅದಕ್ಕಾಗಿ ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ, ಮಕ್ಕಳ ಮಂದಾರ ಪತ್ರಿಕಾ ಬಳಗ ವತಿಯಿಂದ ಜಿಲ್ಲೆಯಾದ್ಯಂತ ಸೃಜನಶೀಲ ಬರವಣಿಗೆಯ ಕಾರ್ಯಗಾರ ಏರ್ಪಡಿಸಲಾಗುತ್ತಿದೆ ಎಂದು ಸೊರಬದ ಮೆಟ್ರಿಕ್ ಪೂರ್ವ  ಎಸ್ ಸಿ ಎಸ್ಟಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ  ಹಮ್ಮಿಕೊಂಡಿದ್ದ ತರಬೇತಿಯಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ರವಿರಾಜ್  ಮಂಡಗಳಲೆ ಅವರು ಹೇಳಿದರು.

ಮಕ್ಕಳಲ್ಲಿ ಸೃಜನಶೀಲ ಬರವಣಿಗೆ ಸಾಮರ್ಥ್ಯ ಹೆಚ್ಚಿಸಲು ಮಕ್ಕಳ ಸಾಹಿತಿಗಳೂ ಆದ ರವಿರಾಜ್ ಅವರು ರೂಪಿಸಿರುವ ಸಾಹಿತ್ಯ ಅಧ್ಯಯನ ಸಾಮಗ್ರಿಗಳನ್ನು ಮಕ್ಕಳಿಗೆ ನೀಡಿ  ಸುಮಾರು 40 ಸಾಹಿತ್ಯ ಆಸಕ್ತ  ಪ್ರತಿಭಾವಂತ ಮಕ್ಕಳಿಗೆ ತರಬೇತಿ ನೀಡಿದರು.ಮಕ್ಕಳು ಕ್ರಿಯಾಶೀಲವಾಗಿ ಆರು ತಂಡಗಳಾಗಿ ತೊಡಗಿಕೊಂಡು ಸ್ಥಳದಲ್ಲಿಯೇ ಕಥೆ,ಕವನ,ಕಿರುನಾಟಕ ಸಹ ರಚಿಸಿದರು. ಸಂಜೆ ವೇಳೆಗೆ ಸ್ಥಳದಲ್ಲಿಯೇ  ಮಕ್ಕಳ ಮಂದಾರ ಕೈಬರಹ  ಪತ್ರಿಕೆ ಸಿದ್ದಪಡಿಸಿ ಗಮನ ಸೆಳೆದರು.
ಉಚಿತವಾಗಿ  ಜಿಲ್ಲೆಯಾದ್ಯಂತ ಕಾರ್ಯಾಗಾರ ಏರ್ಪಡಿಸಲು ಸಹಯೋಗಕ್ಕಾಗಿ 9980952630 ಗೆ ಕರೆ ಮಾಡಲು ಕೋರಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಉಮೇಶ್ ಭದ್ರಾಪುರ ಅವರು ಉಪನ್ಯಾಸ ನೀಡಿದರು. ನಿಲಯ ಪಾಲಕರಾದ ಉಮೇಶ್ ಮಂಡಗಳಲೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ತಿನ ಖಜಾಂಚಿ ರವೀಂದ್ರ ಅವರು ಕಾರ್ಯಕ್ರಮ ನಿರ್ವಹಿಸಿದರು.ನಿಲಯದ ಸಿಬ್ಬಂದಿ ಸಹ ತರಬೇತಿಯಲ್ಲಿ ಪಾಲ್ಗೊಂಡಿದ್ದರು.

Saturday 20 March 2021

ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ ವತಿಯಿಂದ ವಿವಿಧ ದತ್ತಿ ಪುರಸ್ಕಾರಕ್ಕೆ ಆಹ್ವಾನ

ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ.

1.ಕೊಡಕ್ಕಲ್ ಶಿವಪ್ರಸಾದ್   ಪುರಸ್ಕಾರಕ್ಕೆ ಅರ್ಜಿ ಆಹ್ವಾನ
2.ಎಸ್. ಮಾಲತಿ ಸಾಗರ್ ಪುರಸ್ಕಾರ.

ಮಕ್ಕಳ ಹಕ್ಕುಗಳು, ಅಂಗವಿಕಲರ ಸಬಲೀಕರಣಕ್ಕೆ, ಅನಾಥ ಮಕ್ಕಳ ಸಂರಕ್ಷಣೆಗೆ, ಅವಕಾಶ ವಂಚಿತ ಮಕ್ಕಳ ಕ್ಷೇಮಾಭಿವೃದ್ಧಿ, ಮಕ್ಕಳ ಶಿಕ್ಷಣ ಕ್ಷೇತ್ರಕ್ಕೆ  ಜೀವನವಿಡಿ  ಶ್ರಮಸಿರುವರನ್ನು ಗುರುತಿಸಿ ರಾಜ್ಯಮಟ್ಟದ ಪುರಸ್ಕಾರಕ್ಕೆ  ನಾಮನಿರ್ದೇಶನ ಆಹ್ವಾನಿಸಲಾಗಿದೆ.
ಸಾಧನೆ ಮತ್ತು ಪೂರ್ಣ ವಿಳಾಸ, ಮತ್ತಿತರ ಅಗತ್ಯ ದಾಖಲೆ ವಿವರಗಳೊಂದಿಗೆ  ಸಾಧಕರು ಅಥವಾ ಸಂಸ್ಥೆ, ಇನ್ನಿತರರು ನಾಮನಿರ್ದೇಶನ ಮಾಡಬಹುದು.
ಸಂಬಂಧಿತ ಪಿಡಿಎಫ್ ಫೈಲ್ ಅನ್ನು ಈ ಕೆಳಗಿನ ಈಮೇಲ್ ಗೆ ಕಳುಹಿಸಬಹುದು.

ಕೊನೆ ದಿನಾಂಕ-ಮಾರ್ಚ್ 20.

ಈ ಪುರಸ್ಕಾರವು ನಗದು ಬಹುಮಾನ ಸನ್ಮಾನ ಪ್ರಶಸ್ತಿ ಪತ್ರ ಒಳಗೊಂಡಿದೆ. ಶಿವಮೊಗ್ಗದಲ್ಲಿ ನಡೆಯಲಿರುವ ಮಕ್ಕಳ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ  ಪ್ರಶಸ್ತಿ ವಿತರಿಸಲಾಗುತ್ತದೆ.

*
2.ಎಸ್ .ಮಾಲತಿ ಸಾಗರ್   ದತ್ತಿ ಪುರಸ್ಕಾರಕ್ಕೆ ಅರ್ಜಿ ಆಹ್ವಾನ.

ಮಕ್ಕಳ ನಾಟಕ , ಹೆಣ್ಣು ಮಕ್ಕಳ ಸಬಲೀಕರಣ, ಮಹಿಳಾ ಕಲಾವಿದರಿಗೆ  ಜೀವನವಿಡಿ  ಶ್ರಮಿಸಿದ  ಸೇವೆ ಗುರುತಿಸಿ ರಾಜ್ಯಮಟ್ಟದ ದತ್ತಿ ಪುರಸ್ಕಾರಕ್ಕೆ  ನಾಮನಿರ್ದೇಶನ ಆಹ್ವಾನಿಸಲಾಗಿದೆ.
ಸಾಧನೆ ಮತ್ತು ಪೂರ್ಣ ವಿಳಾಸ, ಮತ್ತಿತರ ಅಗತ್ಯ ದಾಖಲೆ ವಿವರಗಳೊಂದಿಗೆ  ಸಾಧಕರು ಅಥವಾ ಸಂಸ್ಥೆ, ಇನ್ನಿತರರು ನಾಮನಿರ್ದೇಶನ ಮಾಡಬಹುದು.
ಸಂಬಂಧಿತ ಪಿಡಿಎಫ್ ಫೈಲ್ ಅನ್ನು ಈ ಕೆಳಗಿನ ಈಮೇಲ್ ಗೆ ಕಳುಹಿಸಬಹುದು.

ಕೊನೆ ದಿನಾಂಕ-ಮಾರ್ಚ್ .22

ಶಿವಮೊಗ್ಗದಲ್ಲಿ ನಡೆಯಲಿರುವ ಮಕ್ಕಳ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ  ಈ ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ.

rvc.md8@gmail.com.
ವಾಟ್ಸಪ್.
9980952630.

ರವಿರಾಜ್ ಸಾಗರ್
ಜಿಲ್ಲಾ ಅಧ್ಯಕ್ಷರು
ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ

Saturday 13 February 2021

ಮಕ್ಕಳ ಮಂದಾರ .50 ನೆ ಸಂಚಿಕೆ ಬಿಡುಗಡೆ

ಆತ್ಮೀಯರೇ ನಮಸ್ಕಾರ
ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ ಪತ್ರಿಕೆ.ಓದಿ.

ರಾಜ್ಯದ  ಪ್ರತಿಭಾವಂತ ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳೇ ಬರೆದಿರುವ ಬರಹಗಳ ಪತ್ರಿಕೆಯಾಗಿ 12 ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಿರುವ ರಾಜ್ಯದ ಏಕೈಕ ಶಾಲಾ ಮಕ್ಕಳ ಪತ್ರಿಕೆ  ಮಕ್ಕಳ ಮಂದಾರ 
50 ನೇ ಸಂಚಿಕೆ.

ನಮ್ಮ  ಪತ್ರಿಕಾ ಬಳಗ ಸೇರಿಕೊಂಡು ಬೆಂಬಲಿಸಿ.
ನಿಮ್ಮ ಬರಹ, ಮಕ್ಕಳ ಬರಹ, ನಿಮ್ಮ  ವರದಿ  ನೀಡಿ ಪೋಷಿಸಿ.

ಹಿಂದಿನ ಸಂಚಿಕೆಗಳಿಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
 ವರದಿ  ನೀಡಿ ಪೋಷಿಸಿ.

Wednesday 3 February 2021

ಮಲೆನಾಡಿನಲ್ಲಿ ಗಜಲ್ ಕಾವ್ಯ'ವಾಣಿ' ನುಡಿಸಿದ ವಾಣಿ ಭಂಡಾರಿಯವರ' ಸಂತನೊಳಗಿನ ಧ್ಯಾನ'.

ರವಿರಾಜಮಾರ್ಗ: ಪುಸ್ತಕ ಪರಿಚಯ

 *ಮಲೆನಾಡಿನಲ್ಲಿ ಗಜಲ್ ಕಾವ್ಯ'ವಾಣಿ'ಯ ಹೊಸ ದನಿ  ವಾಣಿ ಭಂಡಾರಿಯವರ 'ಸಂತನೊಳಗಿನ ಧ್ಯಾನ* 
ಶಾಂತರಸರಿಂದ ಆರಂಭವಾಗಿ ಇಂದಿನ ಅಲ್ಲಾಗಿರಿರಾಜ್, ಚಿದಾನಂದ ಸಾಲಿ, ಆರಿಫ್ ರಾಜಾ ಮುಂತಾದ ಹಲವರೆಲ್ಲರೂ ಸೇರಿದಂತೆ ಗಜಲ್ ಸಾಹಿತ್ಯಕೃಷಿ ಹೆಚ್ಚಾಗಿ ನಡೆದದ್ದು ಉತ್ತರ ಕರ್ನಾಟಕ ಭಾಗದಲ್ಲಿ. ನಮ್ಮ ಮಲೆನಾಡಿನಲ್ಲಿ ಗಜಲ್ ಸಾಹಿತ್ಯ ಕೃಷಿ ನಡೆದದ್ದು ವಿರಳ.
ಇತ್ತೀಚಿನ ಕೆಲವು ಯುವಕರು ರಾಜ್ಯದ ಹಲವೆಡೆ ಗಜಲ್ ಧ್ಯಾನ ಆರಂಭಿಸಿದ್ದಾರೆ. ಅಂಥವರ ಸಾಲಿಗೆ ಹೊಸ ಸೇರ್ಪಡೆ ನಮ್ಮ ಶಿವಮೊಗ್ಗದ ಮಲೆನಾಡಿನ  ಆತ್ಮೀಯ ವಾಣಿ ಭಂಡಾರಿಯವರು.
ಅವರು ತಮ್ಮ ಚೊಚ್ಚಲ ಕೃತಿಯಲ್ಲಿಯೇ ಗಜಲ್ ಗಾನ ಆರಂಭಿಸಿರುವುದು ಅವರ ಹೆಚ್ಚುಗಾರಿಕೆ. 

ಬಹುಮುಖ ಪ್ರತಿಭೆಯಾದ ಇವರು ಸದಾ ಹಸನ್ಮುಖಿ ಕ್ರಿಯಾಶೀಲ ಶಿಕ್ಷಕಿಯಾಗಿ, ಕ್ರಿಯಾಶೀಲ ಅದ್ಯಾಪಕಿಯಾಗಿ ಹಲವು ವಿದ್ಯಾರ್ಥಿಗಳಿಗೆ ಮಾದರಿಯಾಗಿ ಸಹ ಕರ್ತವ್ಯ ನಿರ್ವಹಿಸುತ್ತಲೇ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಕೊಂಡು ಆರಂಭದಲ್ಲೇ ಗಂಭೀರವಾಗಿ ಗಜಲ್ ಧ್ಯಾನ ಆರಂಭಿಸಿ  ಮಲೆನಾಡಿನಲ್ಲಿ ಹೊಸ ಗಜಲ್ ಗಾಳಿ ಬೀಸುವಂತೆ ಕಾವ್ಯ"ವಾಣಿ" ನುಡಿಸಿದ್ದಾರೆ.

"ನನ್ನ ಯಾರು ಹಿಂಬಾಲಿಸಬೇಡಿ, ನೆರಳು ಹಿಂದೆ ನಿಂತಿದೆ
ಸುಮ್ಮನೆ ಮರುಗಬೇಡಿ, ಕತ್ತಲು ಕರಗುವುದಿದೆ ಬೆಳಕು ಕಾಯುತ್ತಿದೆ" 

"ಸಂತನೊಳಗಿನ ಧ್ಯಾನ ಕಂಡು ಬಯಲು ಮಾತು ನಿಲ್ಲಿಸಿದೆ.
ಬಡವರ ಕನಸಿನ ಚೀಲಗಳು ರಸ್ತೆಬದಿ ಬಿದ್ದು ನರಳುತ್ತಿವೆ"

"ದೀಪ ಹಚ್ಚುವ ಬದಲಿಗೆ ಪಟಾಕಿ ಕುಣಿದು ಕುಪ್ಪಳಿಸಿದವು
ಏನೆಂದು ಹೇಳಲಿ ಹಸಿದ ಮೈ ಬೆವರಿಗೆ ಬೇಸರ ಬಂದಿದೆ ನೋಡು"

ಎಂದು ಗಜಲ್ ಗಾನವನ್ನು ತುಸು ಬಿರುಸಾಗಿಯೇ  ನುಡಿಸುವ ಅವರು ಶೃಂಗಾರ, ವಿರಹ ,ರೌದ್ರ ,ಶಾಂತ ಮೌನಗಾನದಲ್ಲೂ ಗಜಲ್ ನೇಯ್ದಿದ್ದಾರೆ. ಬದುಕಿನ ಅನುಭವಕ್ಕೆ ನಿಲುಕಿದ ,ಅಂತರಂಗದ ಸುತ್ತಲೇ ಸುತ್ತುತ್ತಿರುವ ವಿಷಯವಸ್ತುವನ್ನು ಕೇಂದ್ರಿಕರಿಸಿದಂತೆ ಹಲವೆಡೆ ಕಾಣುತ್ತದೆ. ಮನದ ತಳವಳ, ತುಮುಲಗಳೆಲ್ಲ ಗಜಲ್ ಆಗಿಸಲು ಪದಗಳನ್ನು ಕಾವ್ಯದ ನೂಲಿನಲ್ಲಿ ಪೋಣಿಸಿದ್ದಾರೆ.

"ಮುಂಗುರುಳಿಗೆ ಬೇಸರ ಅವನ ಹೆಜ್ಜೆ ಸಪ್ಪಳವಿಲ್ಲದೆ
ಮನಸ್ಸಿಗೆ ಖೇದವಿದೆ ಬಯಕೆಯ ಜ್ವಾಲೆ ತಣಿಯದೆ.

"ರಾತ್ರಿ ರಾಣಿಯ ಮಲ್ಲಿಗೆದಂಡೆ ಮೌನವಾಗಿ ಮಗ್ಗುಲಾಗಿದೆ
ಸೋರಿದ ಕನಸು ಬಿಸ್ತಾರ್ನಲಿ ಮಕಾಡೆ ಮಲಗಿದೆ.
ಎಂದೂ ಹೇಳುವ ಅವರ ಗಜಲ್ ಹಲವು ಕಡೆ ಸ್ತ್ರೀಸಂವೇದನೆಯ ದನಿ ಮೊಳಗಿಸಿದೆ.ಗಜಲ್ ನಂತಹ ಗಜಲ್ ಸಾಹಿತ್ಯ ಕೃಷಿಗೆ ಇಳಿದ ಆರಂಭದಲ್ಲಿಯೇ ತಮ್ಮ ಅಭಿವ್ಯಕ್ತಿಯನ್ನು ಗಜಲ್ ಆಗಿಸಲು ಶ್ರಮಿಸಿರುವುದು ಪ್ರತಿ ಗಜಲ್ ನಲ್ಲಿ ಕಂಡುಬರುತ್ತದೆ. 
ಕೆಲವೆಡೆ ಇವರ ಗಜಲ್ ಗಾನ ಬಹುತೇಕ  ವಾಚ್ಯವಾಗಿವೆ ಎನಿಸಬಹುದಾದ ಗಜಲ್ ಆಗಿದ್ದರೂ ಇದು ಅವರ ಮೊದಲ ಪ್ರಯೋಗ ಆಗಿರುವುದರಿಂದ ಮುಂದೆ ಮತ್ತಷ್ಟು ಸಮೃದ್ಧ ಗಜಲ್ ಕೃಷಿ ಅವರಿಂದ ನಿರೀಕ್ಷಿಸಬಹುದು.
ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟವಾದ ಇವರ ಕೃತಿ ಭಂಡಾರಿ ಪ್ರಕಾಶನ ಶಿವಮೊಗ್ಗ ಕೃತಿಯ ಬೆಲೆ ನೂರು ರೂಪಾಯಿ. ಪ್ರೋತ್ಸಾಹಿಸಲು ಕೃತಿಯನ್ನು ಕೊಂಡು ಇವರ ಗಜಲ್  ಸಾಹಿತ್ಯ ಕೃಷಿಗೆ ನೀವೂ ಒಂದಿಷ್ಟು ಸಹಕರಿಸಬಹುದು. 

ರವಿರಾಜ್ ಸಾಗರ್.ಮಂಡಗಳಲೆ.

ಸರ್ಕಾರದ ವಿವಿಧ ಸೌಲಭ್ಯಗಳು, ಯೋಜನೆಗಳ ಮಾಹಿತಿ

ಅಂಜಲಿ.
ಸ್ನೇಹಿತರ wall ನಿಂದ * ಸಂಗ್ರಹ

*ಸಂಧ್ಯಾಸುರಕ್ಷ*
 ತಿಂಗಳಿಗೆ 1,000 / - ( ಪಿಂಚನಿ ಯೋಜನೆ )

*ವಯೋಮಿತಿ* :- 65 ರಿಂದ 80 ರ ಒಳಗೆ
ಬೇಕಾಗುವ ದಾಖಲೆಗಳು : 
1 ) ಆಧಾರ್‌ ಕಾರ್ಡ್ ಮತ್ತು ಅದರಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್ 
2 ) ರೇಷನ್ ಕಾರ್ಡ್
3 ) ಬ್ಯಾಂಕ್ ಪಾಸ್‌ಬುಕ್
4 ) ಫೋಟೋ ಒಂದು 

*ಸೀನಿಯರ್ ಸಿಟಿಝನ್ ಕಾರ್ಡ್* 
1 ) ಆಧಾರ್‌ ಕಾರ್ಡ್ ಮತ್ತು ಅದರಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್ 
2 ) ಸಮುದಾಯ ಡಾಕ್ಟರ್ ಬ್ಲಡ್ ರಿಪೋರ್ಟ್ 
3 ) ಫೋಟೋ ಒಂದು

*ಕಿಸಾನ್ ಸನ್ಯಾನ್ ಯೋಜನೆ*
ರೈತರಿಗೆ ವಾರ್ಷಿಕ 6,000 / - ಪಿಂಚನಿ 
( 15 ಸೆನ್ಸ್ ಗಿಂತ ಹೆಚ್ಚು ಜಾಗ ಹೊಂದಿರುವ ರೈತರಿಗೆ )
1 ) ಆಧಾರ್ ಕಾರ್ಡ್ 
2 ) RTC
3 ) ಬ್ಯಾಂಕ್ ಪಾಸ್‌ಬುಕ್

*PF Claim ( ಭವಿಷ್ಯ ನಿಧಿ )*
1 ) ಆಧಾರ್ ಕಾರ್ಡ್ 
2 ) ಬ್ಯಾಂಕ್ ಪಾಸ್‌ಬುಕ್
3 ) UAN Number 
4 ) ಆಧಾರ್‌ನಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್

*ರೇಷನ್ ಕಾರ್ಡ್ ಹೊಸತು ಮತ್ತು ಸೇರ್ಪಡೆ*
*APL*
1 ) ಆಧಾರ್ ಕಾರ್ಡ್
*BPL*
1 )ಆಧಾರ್ ಕಾರ್ಡ್
2 ) ಆದಾಯ ಪ್ರಮಾಣ ಪತ್ರ

*ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್*
1 ) ಆಧಾರ್ ಕಾರ್ಡ್ 
2 ) ರೇಷನ್ ಕಾರ್ಡ್

*ಪಾನ್ ಕಾರ್ಡ್*
1 ) ಆಧಾರ್ ಕಾರ್ಡ್ 
2 ) 2 ಫೋಟೊ

*ಪಾಸ್‌ಪೋರ್ಟ್*
1 ) ಆಧಾರ್ ಕಾರ್ಡ್
2 ) 10 ಮಾಕ್ಸ್ ಕಾರ್ಡ್ ಅಥವ ಟಿಸಿ 
3 ) ಬ್ಯಾಂಕ್ ಪಾಸ್ ಬುಕ್

 
*ಕಟ್ಟಡ ಕಾರ್ಮಿಕರ ನೋಂದಾಣಿ ಮತ್ತು ರಿನೆವಲ್*
1 ) ಆಧಾರ್‌ ಕಾರ್ಡ್ ಮತ್ತು ಅದರಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್
2 ) ರೇಷನ್ ಕಾರ್ಡ್
3 ) ಬ್ಯಾಂಕ್ ಪಾಸ್ ಬುಕ್
4 ) ಫೋಟೊ ಒಂದು
5 ) ವೋಟರ್ ಐಡಿ
6 ) ಫಾರ್ಮ್ ನಮ್ಮಲ್ಲಿ ಲಭ್ಯವಿದೆ
7 ) ನಾಮಿನಿ ಆಧಾರ್ 
8 ) ಕಟ್ಟಡ ಕಾರ್ಮಿಕರ ಮಕ್ಕಳ ಸ್ಥಾಲರ್‌ಶಿಪ್
9 ) ಮಕ್ಕಳ ಆಧಾರ್ ಕಾರ್ಡ್
10 ) ೨ ಪೋಟೊ

 *ದಯವಿಟ್ಟು ಈ ಯೋಜನೆಯ ಬಗ್ಗೆ  ಜಾಗೃತಿ ಮೂಡಿಸಿ**

*ಬಂಧುಗಳೇ ಹಾಗೂ ಎಲ್ಲಾ ಏಜೆನ್ಸಿ ಯವರಿಗೆ  ಈ ಸುದ್ದಿಯನ್ನ ದಯವಿಟ್ಟು  ನಿಮ್ಮ ಊರಿನ, ತಾಲೂಕಿನ ಎಲ್ಲರಿಗೂ ತಿಳಿಸಿ* 

       *ಕಾರ್ಮಿಕ ಕಾರ್ಡ್*

ಸೆಂಟ್ರಿಂಗ್ ಕೆಲಸ, ಗಾರೆ ಕೆಲಸ, ಸಿಮೆಂಟ್ ಕೆಲಸ, ಎಲೆಕ್ಟ್ರಿಷಿಯನ್ ಮತ್ತು ಎಲೆಕ್ಟ್ರಿಕಲ್ ಕೆಲಸ, ಪೆಂಟಿಂಗ್ ಕೆಲಸ, ಪ್ಲಮ್ಬರ್ ಕೆಲಸ, ಬಾರ ಬೆಂಡರ್ ಕೆಲಸ, ಟೆಲ್ಸ್ (Tails ) ಕೆಲಸ, ಬಡಗಿ ಕೆಲಸ, ವಯರಿಂಗ ಕೆಲಸ, ಟವರ್ ನಿರ್ಮಾಣ ಕಾರ್ಮಿಕರು, ಕೊಳವೆ ಮಾರ್ಗ, ಒಳ ಚರಂಡಿ, ಮೋರಿ ಸೇತುವೆ, ರಸ್ತೆ ನಿರ್ಮಾಣ, ಡಾಮಾರಿಕರಣ ಕಾರ್ಮಿಕರು   ಮುಂತಾದ ಕೆಲಸ ಕಾರ್ಮಿಕರಿಗೆ ಸರ್ಕಾರದ ಕಾರ್ಮಿಕ ಕಾರ್ಡ್ ನ್ನು ನೀಡುತ್ತಿದೆ

 *ಉಪಯೋಗಗಳು*
1) ಕೆಲಸ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಪಡೆಯಲು ವಿಶೇಷ ಸ್ಕಾಲರ್ಶಿಪ್ 2000 ದಿoದ 30000 ವರೆಗೆ  ಸಿಗುತ್ತದೆ. (ಕಲಿಕೆ ಭಾಗ್ಯ)
2) ಕಾರ್ಮಿಕರು ಮದುವೆ ಅಥವಾ ಅವರ ಮಕ್ಕಳು ಮದುವೆ ಸಮಯದಲ್ಲಿ ರೂ 50,000/- ದಷ್ಟು ಮೊತ್ತ ಸಹಾಯ ಧನ ಸಿಗುತ್ತದೆ.
3) ಕಾರ್ಮಿಕರಿಗೆ 60 ವರ್ಷ ಆದ ಮೇಲೆ ಪಿಂಚಣಿ ಸೌಲಭ್ಯ ಸಿಗಲಿದೆ.
4) ಕಾರ್ಮಿಕರಿಗೆ  ಕಾರ್ಮಿಕ ಆರೋಗ್ಯ ಭಾಗ್ಯ ಮತ್ತು ಕಾರ್ಮಿಕ ಚಿಕಿತ್ಸೆ ಭಾಗ್ಯಸಿಗಲಿದೆ.
 5) ಕೆಲಸ ನಿರ್ವಹಿಸುವಾಗ ಮರಣ ಹೊಂದಿದಲ್ಲಿ 5,00,000/-
 ಸಂಪೂರ್ಣ ಶಾಶ್ವತ ದುರ್ಬಲತೆ ಗೆ 2,00,000/-, ಭಾಗಶಃ ಶಾಶ್ವತ ದುರ್ಬಲತೆ ಗೆ 1,00,000/- 
 
ಹೀಗೆ ಮುಂತಾದ ಪ್ರಯೋಜನಗಳನ್ನು ಕಾರ್ಮಿಕ ಕಾರ್ಡ್ ನಲ್ಲಿ ಪಡೆಯಬಹುದಾಗಿದೆ ..

ವಯಸ್ಸಿನ ಮಿತಿ 18 ರಿಂದ 55 ವರ್ಷ.

 *ವಿದ್ಯಾವಂತ ಯುವಕರೆ ದಯವಿಟ್ಟು ಈ ಕೆಲಸ ಮಾಡಿರಿ* 

*ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿಧ್ಯಾರ್ಥಿ ವೇತನ*

ನೊಂದಾಯಿತ ಕಟ್ಟಡ ಕಾರ್ಮಿಕರ ಎರಡು  ಮಕ್ಕಳಿಗೆ ದೊರೆಯುವ  ವಿಧ್ಯಾರ್ಥಿ ವೇತನ 
      👇👇👇
• 1ನೇ ತರಗತಿ ಉತ್ತೀರ್ಣರಾದವರಿಗೆ 2000/-
• 2ನೇ ತರಗತಿ ಉತ್ತೀರ್ಣರಾದವರಿಗೆ 2000/-
• 3ನೇ ತರಗತಿ ಉತ್ತೀರ್ಣರಾದವರಿಗೆ 2000/-
• 4ನೇ ತರಗತಿ ಉತ್ತೀರ್ಣರಾದವರಿಗೆ 3000/-
• 5ನೇ ತರಗತಿ ಉತ್ತೀರ್ಣರಾದವರಿಗೆ 3000/-
• 6ನೇ ತರಗತಿ ಉತ್ತೀರ್ಣರಾದವರಿಗೆ 3000/-
• 7ನೇ ತರಗತಿ ಉತ್ತೀರ್ಣರಾದವರಿಗೆ 4000/-
• 8ನೇ ತರಗತಿ ಉತ್ತೀರ್ಣರಾದವರಿಗೆ 4000/-
• 9ನೇ ತರಗತಿ ಉತ್ತೀರ್ಣರಾದವರಿಗೆ 6000/-
• 10ನೇ ತರಗತಿ ಉತ್ತೀರ್ಣರಾದವರಿಗೆ 6000/-
• ಪ್ರಥಮ ಪಿಯುಸಿ ಉತ್ತೀರ್ಣರಾದವರಿಗೆ 6000/-
• ದ್ವಿತೀಯ ಪಿಯುಸಿ ಉತ್ತೀರ್ಣರಾದವರಿಗೆ 8000/-
• ಐಟಿಐ ಮತ್ತು ಡಿಪ್ಲೊಮೊ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ 7000/-
• ಪದವಿ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ 10,000/-
• ಇಂಜಿನಿಯರಿಂಗ್ ಕೋರ್ಸ್ ಸೇರ್ಪಡೆಗೆ ರೂ.25,000/- ಹಾಗು ಪ್ರತಿ ವರ್ಷ ತೇರ್ಗಡೆಗೆ ರೂ.20,000/-
• ವೈದ್ಯಕೀಯ ಕೋರ್ಸ್ ಸೇರ್ಪಡೆಗೆ ರೂ.30,000/- ಹಾಗು ಪ್ರತಿ ವರ್ಷ ತೇರ್ಗಡೆಗೆ ರೂ.25000/-
• ಸ್ನಾತಕೋತ್ತರ ಪದವಿ ಸೇರ್ಪಡೆಗೆ ರೂ.20,000/- ಹಾಗು ಪ್ರತಿ ವರ್ಷ ರೂ.10,000/- ಗಳಂತೆ (ಎರಡು ವರ್ಷಗಳಿಗೆ)
• ಪಿಹೆಚ್.ಡಿ ಕೋರ್ಸ್ ಪ್ರತಿ ವರ್ಷಕ್ಕೆ ರೂ.20000/- (ಗರಿಷ್ಠ ಎರಡು ವರ್ಷಗಳು) ಮತ್ತು ಪಿ.ಹೆಚ್.ಡಿ ಪ್ರಭಂಧ ಸ್ವೀಕಾರದ ನಂತರ ಹೆಚ್ಚುವರಿಯಾಗಿ ರೂ.20,000/-

ಪ್ರತಿಭಾವಂತ ಮಕ್ಕಳಿಗಾಗಿ

1. ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75 ಅಂಕ ಪಡೆದವರಿಗೆ ರೂ.5000/-
2. ಪಿಯುಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75 ಅಂಕ ಪಡೆದವರಿಗೆ ರೂ.7000/-
3. ಪದವಿ ಅಥವಾ ತತ್ಸಮಾನ ಕೋರ್ಸ್ ನಲ್ಲಿ ಶೇ.75 ಅಂಕ ಪಡೆದವರಿಗೆ ರೂ.10,000/-
4. ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಕೋರ್ಸ್ ನಲ್ಲಿ ಶೇ.75 ಅಂಕ ಪಡೆದವರಿಗೆ ರೂ.15,000/-

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:

*ಆಧಾರ್ ಕಾರ್ಡ್ (ಮೊಬೈಲ್ ನಂ. ಲಿಂಕ್ ಆಗಿರಬೇಕು)
*ರೇಷನ್ ಕಾರ್ಡ್ (ಇದ್ದರೆ)
*ಚುನಾವಣೆ ಗುರುತಿನ ಚೀಟಿ (ಇದ್ದರೆ)
*ಫೋಟೊ (ಒಂದು)
*ಬ್ಯಾಂಕ್ ಪಾಸ್ ಪುಸ್ತಕ
*ಗುತ್ತಿಗೆದಾರು/ಗಾರೆ ಕೆಲಸ ಮೇಸ್ತ್ರಿಯಿಂದ ಪಡೆದ ಅರ್ಜಿ ನಮೂನೆ

*ಅರ್ಜಿ ನಮೂನೆಯನ್ನು*

♻️ ಲಹರಿ ಡಿಜಿಟಲ್ ಸೇವಾ ಕೇಂದ್ರ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಎದುರಿಗೆ ಜೋಗಯ್ಯ ಹಾರ್ಡ್ವೇರ್ ಹಿಂದುಗಡೆ ಬಾದಾಮಿ

ದೂರವಾಣಿ ಸಂಖ್ಯೆ : 8073209423/7795370740
[13/10, 18:09] Muttanna yaragoppa: *ವಿಧವೆಯಾರಿಗಾಗಿ*
*(ಕೇಂದ್ರ ಸರ್ಕಾರ ಸ್ಕೀಮ್)*
********************
ರಾಷ್ಟ್ರೀಯ ಕುಟುಂಬ  ಸಹಾಯಧನ ಯೋಜನೆ
ವಿಧವೆ ಸ್ರೀಯರಿಗೆ  20000/-ರೂಪಾಯಿ ಧನಸಹಾಯ ಯೋಜನೆ.

*ಅರ್ಜಿ ಹಾಕಬೇಕಾಗಿರೋದು ಅವರವರ ಊರಿನ ಗ್ರಾಮಲೆಕ್ಕಿಗರಿಗೆ(VA).*

*ಅರ್ಜಿಯೊಂದಿಗೆ :*
•ಆಧಾರ್ ಕಾರ್ಡ್(ಗಂಡ & ಹೆಂಡತಿ ಇಬ್ಬರ ಆಧಾರ್ ಕಾರ್ಡ್)
•ರೇಷನ್ ಕಾರ್ಡ್
•ಬ್ಯಾಂಕ್ ಖಾತೆ
•ಗಂಡನ ಡೆತ್ ಸರ್ಟಿಫಿಕೇಟ್
 xerox ಕಾಪಿ ಸೇರಿಸಿ ಕೊಡಬೇಕು.

🛑ಸೂಚನೆ‼
*ಮರಣ ಹೊಂದಿದ ವ್ಯಕ್ತಿ 60ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು ಮರಣ ಹೊಂದಿದ 6 ತಿಂಗಳ ಒಳಗೆ ಅರ್ಜಿಹಾಕತಕ್ಕದ್ದು*

ಈ ಸಂದೇಶವನ್ನು ಎಲ್ಲರಿಗೂ ಮುಟ್ಟಿಸಿ ವಿದವೆಯರಾದ ಸ್ತ್ರೀಯರಿಗೆ ಮನೆ ಕಟ್ಟಲು 2.7 ಲಕ್ಷ ಹಣ ಮತ್ತು ಸರಕಾರದಿಂದ ಜಾಗ*

*ಅರ್ಜಿ ಸಲ್ಲಿಸಲು ಕಚೇರಿಯಲ್ಲಿ  ವಿಚಾರಗಳನ್ನು ತಿಳಿಯಬಹುದು.

*1.ಮನೆ ನಿರ್ಮಾಣಕ್ಕೆ ಸಹಾಯಧನ:*

*a)* ಹಳೆ ಮನೆ / ಖಾಲಿ ಜಾಗ ಇದ್ದವರಿಗೆ ನಗರ ಪ್ರದೇಶದವರಿಗೆ:
ವಾಜಪೇಯಿ ವಸತಿ ಯೋಜನೆ 2.7 ಲಕ್ಷ (1.2  state Govt + 1.5 Central Govt)ಹಂತ ಹಂತದಲ್ಲಿ ಹಣ ಬಿಡುಗಡೆ.

*b)* ಹಳೆ ಮನೆ / ಖಾಲಿ ಜಾಗ ಇದ್ದ  ಗ್ರಾಮೀಣ ಪ್ರದೇಶದವರಿಗೆ: (ಮಹಿಳಾ ಅರ್ಜಿದಾರರಿಗೆ)
ಬಸವ ವಸತಿ ಯೋಜನೆ 1.2 ಲಕ್ಷ + 20000 (ನರೇಗಾ ಜಾಬ್ ಕಾರ್ಡ್ ಮಾಡಿದ್ದಲ್ಲಿ ಮಾತ್ರ)
ಹಂತ ಹಂತದಲ್ಲಿ ಹಣ ಬಿಡುಗಡೆ.

*ಅರ್ಜಿ ಸಲ್ಲಿಸುವುದು*: ಗ್ರಾಮ ಪಂಚಾಯತ್/ ಮುನ್ಸಿಪಾಲ್ಟಿ / ನಗರ ಪಂಚಾಯತ್ / ನಗರ ಪಾಲಿಕೆ /Self in Online  (ಪ್ರಧಾನ ಮಂತ್ರಿ ಆವಾಸ್ ಯೋಜನೆಯ http://pmaymis.gov.in/  ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಲ್ಲಿ ಅದು ಆಯಾ ವ್ಯಾಪ್ತಿಯ ಗ್ರಾಮ ಪಂ/ ನಗರಪಾಲಿಕೆಗಳಿಗೆ ರವಾನೆಯಾಗುತ್ತದೆ)

*ಬೇಕಾದ ದಾಖಲೆಗಳು* 
1. ಆರ್ ಟಿ ಸಿ. Copy.
2.ಒಪ್ಪಿಗೆ ಪತ್ರದ.
3.ಖಾತೆ ಪತ್ರದ copy.
4 Aadar Card copy.
5.Ration Card.
6. Voter Id copy.
7.Bank PassBook Copy
8.Income & Caste Certificate copy
9.Passport size photo-1
(ಅರ್ಜಿದಾರರು ಅಲ್ಲದ ಮನೆಯ ಇತರ ಸದಸ್ಯರ ಹೆಸರಿನಲ್ಲಿ ಆರ್ ಟಿ ಸಿ ಇದ್ದಲ್ಲಿ ಅವರಿಂದ ಒಪ್ಪಿಗೆ ಪತ್ರ)

*2.ಜಾಗ ಇಲ್ಲದವರು ನಿವೇಶನಕ್ಕಾಗಿ ಅರ್ಜಿ*
ಈ ಕೆಳಗಿನ ದಾಖಲೆಗಳೊಂದಿಗೆ ಗ್ರಾಮ ಪಂಚಾಯತ್/ ಮುನ್ಸಿಪಾಲ್ಟಿ / ನಗರ ಪಂಚಾಯತ್ / ನಗರ ಪಾಲಿಕೆಗಳಲ್ಲಿ ಅರ್ಜಿ ಸಲ್ಲಿಸುವುದು.
1.Aadar Card copy
2.Ration Card
3.Voter Id copy
4.Bank PassBook Copy
5.Income & Caste Certificate copy

*ನಿವೇಶನ (ಜಾಗ) ಮಂಜೂರಾದಲ್ಲಿ ವಾಜಪೇಯಿ ವಸತಿ ಯೋಜನೆ / ಬಸವ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಧನಸಹಾಯ ಕೂಡ ಪಡೆಯಬಹುದು*

*3.ಮನೆ ನಿರ್ಮಾಣಕ್ಕೆ ಬ್ಯಾಂಕ್ ಲೋನ್:*
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬ್ಯಾಂಕುಗಳಲ್ಲಿ ಆರು ಲಕ್ಷ ಲೋನ್ ಪಡೆದಲ್ಲಿ ಬಡ್ಡಿ ಮೊತ್ತ 6 % ರಂತೆ ಸುಮಾರು ಎರಡು ಲಕ್ಷದವರೆಗೆ ಸಬ್ಸಿಡಿ ಕೇಂದ್ರ ಸರಕಾರದಿಂದ ಖಾತೆಗೆ ಬೀಳಲಿದ್ದು, ಉಳಿದ ಹಣ ಪಾವತಿಮಾಡಬೇಕು. ಯೋಜನೆಗೆ ಅರ್ಜಿಯನ್ನು ಬ್ಯಾಂಕ್ ಮೂಲಕವೇ ಸಲ್ಲಿಸುವುದು.

*4.* ಗ್ರಾಮೀಣ ಪ್ರದೇಶದವರಿಗೆ ನರೇಗಾ ಯೋಜನೆ ಅಡಿಯಲ್ಲಿ ಬಾವಿ ತೋಡಲು ಸುಮಾರು 1 ಲಕ್ಷದ ವರೆಗೂ & ದನದ ಕೊಟ್ಟಿಗೆ ಗೆ 16000 ವರೆಗೂ ಸಹಾಯಧನವಿದೆ.

*ಮಂಜುರಾತಿ*: 
ಅರ್ಜಿಯು ಯೋಜನಾ ಸಮಿತಿಗಳಲ್ಲಿ /ಬ್ಯಾಂಕ್ ನಲ್ಲಿ  ಮಂಜೂರಾದಲ್ಲಿ ಮಾತ್ರ ಈ ಹಣ ಲಭ್ಯವಾಗಲಿದೆ.

         ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ.), 

ಮತೀಯ ಅಲ್ಪಸಂಖ್ಯಾತ ವರ್ಗದವರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಪಾರ್ಸಿ, ಸಿಖ್ಖರು, ಬೌದ್ಧ ಜನಾಂಗದವರು  ನಿಗಮದಿಂದ ಅನುಷ್ಟನಗೊಳ್ಳುತ್ತಿರುವ ವಿವಿಧ ಯೋಜನೆಗಳು.

1) *ಸ್ವಯಂ ಉದ್ಯೋಗ ಯೋಜನೆ*
2) *ಸ್ವಯಂ ಉದ್ಯೋಗ ಯೋಜನೆ*
3) *ಶ್ರಮಶಕ್ತಿ ಯೋಜನೆ* 
4)    *ಅರಿವು (ವಿದ್ಯಾಭ್ಯಾಸ) ಸಾಲ ಯೋಜನೆ*
5)    *ಕಿರುಸಾಲ ಯೋಜನೆ*
6)    *ಕೃಷಿ ಯಂತ್ರೋಪಕರಣ ಖರೀದಿ ಯೋಜನೆ*
7)    *ಗಂಗಾಕಲ್ಯಾಣ ಯೋಜನೆ* 
8)    *ಪಶು ಸಂಗೋಪನಾ ಯೋಜನೆ*
9)    *ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿ ಯೋಜನೆ* 

1) *ಸ್ವಯಂ ಉದ್ಯೋಗ ಯೋಜನೆ*: 

  ವ್ಯಾಪಾರ, ಸಣ್ಣ ಕೈಗಾರಿಕೆ, ಕೃಷಿ ಮತ್ತು ಕೃಷಿ ಅವಲಂಬಿತ ಚಟುವಟಿಕೆಗಳು ಸೇವಾ ವಲಯದಲ್ಲಿ ಬರುವ ಚಟುವಟಿಕೆಗಳಿಗೆ ಬ್ಯಾಂಕ್ಗವಳು/ಹಣಕಾಸು ಸಂಸ್ಥೆಗಳ ಸಹಯೋಗದೊಂದಿಗೆ ಗರಿಷ್ಠ 5.00 ಲಕ್ಷ ರೂವರೆಗೆ ಆರ್ಥಿಕ ನೆರವು ಒದಗಿಸುವುದು. ಘಟಕ ವೆಚ್ಚ 5,00,000/- ರೂಗಳವರೆಗೆ ನಿಗಮದಿಂದ ಘಟಕ ವೆಚ್ಚದ ಶೇ.33 ಅಥವಾ ಗರಿಷ್ಠ ಮಿತಿ ರೂ.1,65,000/-ಗಳ ಸಹಾಯಧನ ಹಾಗೂ ಘಟಕವೆಚ್ಚದ ರೂ.1,00,000/-ರೂಗಳ ಒಳಗೆ ಇರುವ ಚಟುವಟಿಕೆಗಳಿಗೆ ಶೇಕಡಾ 50% ಅಥವಾ ಗರಿಷ್ಟ ಮಿತಿ ರೂ. 35,000/- ಸಹಾಯಧನ ಮಂಜೂರು ಮಾಡುವುದು. ಉಳಿಕೆ ಮೊತ್ತವನ್ನು ಬ್ಯಾಂಕ್ಗಿಳು ಭರಿಸುವುದು. 
ಬೇಕಾಗುವ ದಾಖಲಾತಿಗಳು : 

1)ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ. 81,000/-, ನಗರ ಪ್ರದೇಶದವರಿಗೆ ರೂ. 1,03,000/-ಗಳ ಒಳಗಿರಬೇಕು. 
2)ಅರ್ಜಿದಾರರ ಮತ್ತು ಜಾಮೀನುದಾರರ ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್. 
3)ಕೊಟೇಶನ್/ಯೋಜನಾವರದಿ ಮತ್ತು ಲೈಸಸ್ಸ್ 
4.)ಅರ್ಜಿದಾರರ ಮತ್ತು ಜಾಮೀನುದಾರರ ತಲಾ ಮೂರು ಭಾವಚಿತ್ರ. 
5) ಬ್ಯಾಂಕ್ ಪಾಸ್ ಪುಸ್ತಕದ ಜರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡ್ನ್ನುಾ ಬ್ಯಾಂಕಿನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು. 
6)ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಾಗಿರಬೇಕು.(ವಾಸ್ತವ್ಯ ದೃಡೀಕರಣ  ಪತ್ರ) 
7) ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 55ವರ್ಷಗಳು 
8)ಅರ್ಜಿದಾರರು ಬ್ಯಾಂಕ್ ಪ್ರಭಂದಕರನ್ನು ಸಂರ್ಪಕಿಸಿ ಸಾಲ ನಿಡುವ ಬಗ್ಗೆ ಕಚಿತಪಡಿಸುವುದು.

2) *ಶ್ರಮಶಕ್ತಿ ಯೋಜನೆ*
 
ಈ ಯೋಜನೆಯಲ್ಲಿ ಅಲ್ಪಸಂಖ್ಯಾತರ ಸಮುದಾಯದ ಕಡು ಬಡವರು ಸಾಂಪ್ರದಾಯಿಕ ಕುಶಲಕರ್ಮಿಗಳು ಹಾಗೂ ವೃತ್ತಿಕುಲಕಸುಬುದಾರರು ಆಧುನಿಕತಂತ್ರಜ್ಞಾನ ಬಳಕೆಯಿಂದಾಗಿ ತಮ್ಮ ಸಾಂಪ್ರದಾಯಿಕ ಮಾರುಕಟ್ಟೆಯನ್ನು ಹಾಗೂ ವೃತ್ತಿಕೌಶಲತೆಗೆ ಅನುಗುಣವಾಗಿ ಅಭಿವೃದ್ಧಿ ಪಡಿಸಿಕೊಳ್ಳಲು ಮತ್ತು ಆದಾಯಾ ಹೆಚ್ಚಿಸುವ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಅಗತ್ಯವಿರುವ ಆರ್ಥಿಕ ನೆರವನ್ನು ಕಲ್ಪಿಸುವ ಉದ್ದೇಶದಿಂದ, „ಶ್ರಮಶಕ್ತಿ‟ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ನೀಡಲಾಗುವುದು ಹಾಗೂ ಸಾಂಪ್ರದಾಯಿಕ ವೃತ್ತಿ ಕುಲಕಸುಬುಗಳಾದ ಅಟೋಮೊಬೈಲ್ರಿಿಪೇರಿ ಮತ್ತು ಸರ್ವಿಸಿಂಗ್, ಗ್ಯಾಸ್ ಅಂಡ್ ಅರ್ಕ್ ವೆಲ್ಡಿಂಗ್, ಬೆಡ್ ಮೇಕಿಂಗ್, ವಲ್ಕನೈಸಿಂಗ್ ಮರದಕೆತ್ತನೆ ಕೆಲಸ, ಬಡಗಿ, ಟೈಲರಿಂಗ್, ಬಟ್ಟ ಮೇಲೆ ಬಣ್ಣಗಾರಿಕೆ ಮತ್ತು ಮುದ್ರಣಗಾರಿಕೆ, ಬೆತ್ತದ ಕೆಲಸ ಸಿಲ್ಕ್ ರೀಲಿಂಗ್ ಮತ್ತು ಟ್ವಸ್ಟಿಂಗ್ ಕೆಲಸ, ಗೊಂಬೆ ತಯಾರಿಕೆ ಮತ್ತು ಕೆತ್ತನೆ ಕೆಲಸ, ಮರದ ಆಟಿಕೆ ತಯಾರಿಕೆ ಮಂಡಕ್ಕೆ ಬಟ್ಟಿ, ಅವಲಕ್ಕೆ ಬಟ್ಟಿ, ಬಿದರಿ ವರ್ಕ್, ಕುಮ್ಮಾರಿಕೆ, ಎಲೆಕ್ಟೀಕಲ್ ವೈರಿಂಗ್ ಅಂಡ್ ರೀವೈಡಿಂಗ್ ಆಫ್ ಮೋಟಾರ್ಸ್, ಮೀನುಗಾರಿಕೆ ಸಲಕರಣೆ ಖರೀದಿ, ಹ್ಯಾಂಡಿಕ್ರಾಪ್ಟ್, ಹೈನುಗಾರಿಕೆ, ಕಲ್ಲುಕತ್ತನೆ ಕೆಲಸ, ಪಾತ್ರೆ ತಯಾರಿಕೆ, ಕಲಾಯಿ ಕೆಲಸ, ಸುಣ್ಣದಕಲ್ಲು ಸುಡುವಿಕೆ, ಗಾಜಿನ ಅಲಂಕಾರಿಕ ವಸ್ತುಗಳ ತಯಾರಿಕೆ, ಅಡಿಕೆತಟ್ಟೆ ಕಾಗದ ತಟ್ಟೆ ತಾಯಾರಿಕೆ, ಕಿರಾಣಿ ಅಂಗಡಿ, ಫಾಸ್ಟ್ ಪುಡ್ ಸೆಂಟರ್, ಬೇಕರಿ ಮತ್ತು ಕಾಂಡಿಮೆಂಟ್ಸ್, ತಂಪು ಪಾನೀಯ, ಕಬ್ಬಿನರಸ, ರೇμÉ್ಮ/ಹತ್ತಿ ನೇಕಾರಿಕೆ, ಏಲಕ್ಕಿ ಹಾರತಯಾರಿಕೆ, ಮೇಣದ ಬತ್ತಿ ತಯಾರಿಕೆ, ತೆಂಗಿನ ನಾರಿನ ವಸ್ತುಗಳ ತಯಾರಿಕೆ, ಪೊರಕೆ ತಯಾರಿಕೆ, ಸೋಫಾ ಸೆಟ್ ತಯಾರಿಕೆ, ಬ್ಯೂಟಿ ಪಾರ್ಲರ್, ಎಲೆಕ್ಟಿಕಲ್ ಲಾಂಡ್ರಿ ಎ.ಸಿ/ಪ್ರಿಡ್ಜ್ರಿಪೇರಿ, ಜರ್ಡೋಸಿ/ಎಂಬ್ರಾಯಿಡರಿ, ಫೋಟೋ ಫ್ರೇಮಿಂಗ್ ಮುಂತಾದ ಅವಶ್ಯಕತೆಗೆ ಇರುವ ಯಂತರೋಪಕರಣಗಳು/ಸಲಕರಣೆಗಳು ಹಾಗೂ ಕಚ್ಚಾ ಸಾಮಾಗ್ರಿಗಳನ್ನು ಖರೀದಿಸಲು ರೂ. 50,000/- ದವರೆಗೆ ಸಾಲ:ಸಹಾಯಧನ ಸೌಲಭ್ಯವನ್ನು ನೀಡಲಾಗುವುದು. ಘಟಕ ವೆಚ್ಚ ರೂ. 50,000/-ಗಳ ಸಾಲದ ಮಂಜೂರಾತಿಯು ಸಾಂಪ್ರದಾಯಿಕ (ಪರಂಪರಾಗತ ಕುಶಲಕಮಿಗಳು/ವೃತ್ತಿ ಕುಲಕಸುಬುದಾರರಿಗೆ ಅನ್ವಯವಾಗುತ್ತದೆ. ಇತರೆ ವೃತ್ತಿಗಳಿಗೆ ಯೋಜನೆಯ ಲಾಭದಾಯಕೆತೆ ಮತ್ತು ಆದಾಯಗಳಿಕಗೆ ಅನುಗುಣವಾಗಿ ರೂ.25,000/-ಕ್ಕೆ ಮೀರದಂತೆ ಸಾಲವನ್ನು ಮಂಜೂರು ಮಾಡಲಾಗುವುದು. ಈ ಸಾಲಕ್ಕೆ ಶೇಕಡಾ 50% ರಷ್ಟು ಸಹಾಯಧನವನ್ನು ಬ್ಯಾಕ್ ಎಂಡ್ ಸಬ್ಸಿಡಿಯಾಗಿ ಪರಿಗಣಿಸಲಾಗುವುದು ನಿಗಮದಿಂದ ಬಿಡುಗಡೆ ಮಾಡಿದ ಸಾಲಕ್ಕೆ ಶೇಕಡಾ 4%ರ ಬಡ್ಡಿ ದರದಲ್ಲಿ ಮರುಪಾವತಿ ಪಡೆಯಲಾಗುತ್ತದೆ. ಒಂದು ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಸಾಲ ಮಂಜೂರು ಮಾಡಲಾಗುವುದು. 

ಬೇಕಾಗುವ ದಾಖಲಾತಿಗಳು: 

1.)ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ  ರೂ. 81,000/-, ನಗರ ಪ್ರದೇಶದವರಿಗೆ ರೂ. 1,03,000/-ಗಳ ಒಳಗಿರಬೇಕು. 
2).ಅರ್ಜಿದಾರರ ಮತ್ತು ಜಾಮೀನುದಾರರ ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್. 
3) ಕೊಟೇಶನ್ ಅಥವಾ ಯೋಜನಾವರದಿ ಮತ್ತು ಲೈಸಸ್ಸ್ 
4)ಅರ್ಜಿದಾರರ ಮತ್ತು ಜಾಮೀನುದಾರರ ತಲಾ ಮೂರು ಭಾವಚಿತ್ರ. 
5)ಬ್ಯಾಂಕ್ ಪಾಸ್ ಪುಸ್ತಕದ ಜರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡ್ನ್ನು  ಬ್ಯಾಂಕಿನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು. 
6)ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಾಗಿರಬೇಕು.(ವಾಸ್ತವ್ಯ ದೃಡೀಕರ ಪತ್ರ) 
7)ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 55ವರ್ಷಗಳು.

3) *ಅರಿವು (ವಿದ್ಯಾಭ್ಯಾಸ) ಸಾಲ ಯೋಜನೆ*
 
ಈ ಯೋಜನೆಯ ಅಡಿಯಲ್ಲಿ ವೃತ್ತಿನಿರತ ವಿದ್ಯಾಭ್ಯಾಸಕ್ಕಾಗಿ ಅಂದರೆ ಎಂ.ಬಿ.ಬಿ.ಎಸ್, ಇಂಜಿನಿಯರಿಂಗ್, ಎಂ.ಬಿ.ಎ, ಎಂ.ಸಿ.ಎ, ಎಂ.ಟೆಕ್, ಪಿ.ಎಚ್.ಡಿ, ಎಂ.ಇ, ಎಂ.ಎಸ್(ಎಗ್ರಿ), ಎಂ.ಡಿ, ಎಂ.ಎಫ್.ಎ, ಎಂ.ಡಿ.ಎಸ್, ಎಂ.ಟಿ.ಎ, ಎಂ.ಐ.ಬಿ, ಬಿ.ಎ, ಬಿ.ಕಾಂ, ಡಿ.ಎಡ್, ಐ.ಟಿ.ಐ, ಡಿಪ್ಲೋಮಾ, ನರ್ಸಿಂಗ್, ಬಿ.ಡಿ.ಎಸ್, ಎಂ.ಎ, ಬಿ.ಎಸ್ಸಿ ಬಿ.ಎ, ಬಿ.ಕಾಂ, ಏರ್ ಕ್ರಾಫ್ಟ್ ಮೈಂಟನೆನ್ಸ್ ಇಂಜಿನಿಯರಿಂಗ್, ಟೆಕ್ನಕಲ್ ಮ್ಯಾನೆಜ್ಮೆಂ ಟ್ ಇತ್ಯಾದಿ ವಿದ್ಯಾಭ್ಯಾಸಕ್ಕಾಗಿ ಅಭ್ಯರ್ಥಿಗಳಿಗೆ ಅವರು ವ್ಯಾಸಂಗ ಪೂರ್ಣಗೊಳಿಸುವವರಿಗೆ ಪ್ರತಿ ವರ್ಷಕ್ಕೆ ರೂ. 10,000/- ದಿಂದ ರೂ.75,000/-ದವರೆಗೆ ವಿವಿಧ ವ್ಯಾಸಂಗಕ್ಕೆ ಅನುಗುಣವಾಗಿ ನಿಗಮದಿಂದ ಸಾಲ ಸೌಲಭ್ಯವನ್ನು ಕಲ್ಪಿಸುವ ಉದ್ದೇಶ ಹೊಂದಿದೆ. ಬಿ.ಇ, ಎಂ.ಬಿ.ಬಿ.ಎಸ್, ಬಿ.ಡಿ.ಎಸ್, ಬಿ.ಯು.ಎಂ.ಎಸ್ ಹಾಗೂ ಬಿ.ಎ.ಎಂ.ಎಸ್ ವ್ಯಾಸಾಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಸಿ.ಇ.ಟಿಯವರು ನಿಗದಿಪಡಿಸಿದ ಶುಲ್ಕದಂತೆ ಸಾಲ ಬಿಡುಗಡೆ ಮಾಡಲಾಗುವುದು. ಇದಕ್ಕೆ ವಾರ್ಷಿಕವಾಗಿ ಶೇಕಡಾ 2% ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ ಹಾಗೂ ವ್ಯಾಸಂಗ ಮುಗಿಸಿದ ಒಂದು ವರ್ಷದ ನಂತರ ಫಲಾನುಭವಿಯು ನಿಗಮಕ್ಕೆ ಮರುಪಾವತಿಯನ್ನು ಮಾಡಬೇಕಾಗಿದೆ. 

‘ಅರಿವು’ (CET) ಯೋಜನೆ
 
ಸಾಮಾನ್ಯ ಪ್ರವೇಶ ಪರೀಕ್ಷೆಗೆ (CET) ಹಾಜರಾದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಯು ರ್ಯಾಕಿಂಗ್ ಪಡೆದು ವೃತ್ತಿಪರಶಿಕ್ಷಣಕ್ಕೆ ಸೀಟನ್ನು ಆಯ್ಕೆಮಾಡಿಕೊಂಡ ಕೂಡಲೇ ನಿಗಮವು ಅಂತಹ ವಿದ್ಯಾರ್ಥಿಗೆ ಮುಂಚಿತವಾಗಿ ಸಾಲವನ್ನು ಮಂಜೂರು ಮಾಡುತ್ತದೆ. ಅಂತಹ ವಿದ್ಯಾರ್ಥಿಯು ಸಂಬಂಧ ಪಟ್ಟ ಕಾಲೇಜಿಗೆ ಪಾವತಿಸಬೇಕಾದ ಬೋಧನ ಶುಲ್ಕವನ್ನು ನಿಗಮವು ನೇರವಾಗಿ ಏಇಂ ಮೂಲಕ ಪಾವತಿಸುತ್ತದೆ.
 
‘ಅರಿವು’ (NEET) ಯೋಜನೆ 

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಮಾಡಬಯಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು NEET ಪರೀಕ್ಷೆಗೆ ಹಾಜರಾದಲ್ಲಿ, ಅವರ ಬೋಧನಾ ಶುಲ್ಕದ ಸರ್ಕಾರಿ ಸೀಟ್ನಂ ಶೇ.100ರಷ್ಟು ಅಥವಾ ಖಾಸಗಿ ಸೀಟ್ನಹ ಶೇ.50ರಷ್ಟು ಸಾಲವನ್ನಾಗಿ ಮಂಜೂರು ಮಾಡಲಾಗುತ್ತದೆ. 

ಬೇಕಾಗುವ ದಾಖಲಾತಿಗಳು: 

1)ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ 6,00,000/-ರೂಗಳ ಒಳಗಿರಬೇಕು. 
2) ವಿದ್ಯಾರ್ಥಿಯ 4 ಭಾವಚಿತ್ರ ಮತ್ತು ತಂದೆ ಅಥವಾ ತಾಯಿಯ 2 ಭಾವಚಿತ್ರ. 
3)ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್. 
4) ಎಸ್.ಎಸ್.ಎಲ್.ಸಿ, ಡಿಪ್ಲೋಮಾ, ಪಿಯುಸಿ, ಡಿಗ್ರಿ ಮತ್ತು ಸೆಮಿಸ್ಟರ್ ಮಾಕ್ರ್ಸ್ ಕಾರ್ಡ್(ದೃಡಿಕರಿಸಿದ ಪ್ರತಿ)
5) ಸ್ಟಡಿ ಸರ್ಟಿಫಿಕೇಟ್ ಮೂಲ ಪ್ರತಿ
6)ಫೀಸ್ ಸ್ಟ್ರಕ್ಚರ್ (ಒಟ್ಟು ವ್ಯಾಸಂಗದ ಅವಧಿ). 
7) ಸಿಇಟಿ/ನೀಟ್ ಪ್ರಮಾಣ ಪತ್ರದ ಜರಾಕ್ಸ್. 
8) 50 ರೂಪಾಯಿಯ ಛಾಪಾ ಕಾಗದ (Indemnity Bond) ತಂದೆ ಅಥವಾ ತಾಯಿಯ ಹೆಸರಿನಲ್ಲಿ (ನೋಟರಿಯೊಂದಿಗೆ) 2nd Party DM KMDC  ಎಂದು ನಮೂದಿಸಬೇಕು. 
9) ವಿದ್ಯಾರ್ಥಿಯು ಅಭ್ಯಾಸ ಮಾಡುವ ಕಾಲೇಜಿನ ಬ್ಯಾಂಕ್ ಖಾತೆ, (Bank name, Account payee name, Account number, ifsc code) ಮತ್ತು ಇಮೇಲ್ ಐಡಿ.

4) *ಕಿರುಸಾಲ ಯೋಜನೆ*. 

ಈ ಯೋಜನೆಯಡಿಯಲ್ಲಿ ನಗರ ಪ್ರದೇಶದಲ್ಲಿ ಮತ್ತು ಗ್ರಾಮಗಳಲ್ಲಿ ವಾಸವಾಗಿರುವ ಮತೀಯ ಅಲ್ಪಸಂಖ್ಯಾತರು ಸಾಮನ್ಯಾವಾಗಿ ಅನಕ್ಷರಸ್ಥರಾಗಿದ್ದು, ಅಂತಹ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಕುಶಲ ಅಥವಾ ಕುಶಲಯಲ್ಲದ ವ್ಯಕ್ತಿಗಳ ಅಭಿವೃದ್ಧಿಗಾಗಿ ಸಣ್ಣ ಪ್ರಮಾಣದ ವ್ಯಾಪಾರವನ್ನು ಮಾಡಲು ಸಾಲ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. 
ನಿಗಮದಿಂದ ಫಲಾನುಪೇಕ್ಷಿಗಳು ಸ್ವ-ಸಹಾಯ ಗುಂಪುಗಳನ್ನು ಇತರೆ ಇಲಾಖೆಗಳ ಅಥವಾ ಸರ್ಕಾರೇತರ ಸಂಸ್ಥೆಗಳ ಮೂಲಕ ಸಂಘಟನೆ ಮಾಡಿ ಸ್ವ ಸಹಾಯ ಗುಂಪುಗಳು ಮೂಲಕ ಯೋಜನೆಯನ್ನು ಸಿದ್ದಪಡಿಸಿ ಅನುμÁ್ಠನಗೊಳಿಸಬುದಾಗಿದೆ. ಸ್ವ-ಸಹಾಯ ಸಂಘವು ಆರ್ಥಿಕ ಚಟುವಟಿಕೆಗಳಲ್ಲಿ ಲಾಭದಲ್ಲಿರಬೇಕು. ಸ್ವ-ಸಹಾಯ ಗುಂಪಿನ ಸದಸ್ಯರಾಗಿರುವ ಫಲಾನುಭವಿ ಜಮೀನು ಹೊಂದಿದ್ದಲ್ಲಿ ಅಥವಾ ಸರ್ಕಾರಿ/ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿದ್ದಲ್ಲಿ ಅವರಿಗೆ ಸಣ್ಣ ಪ್ರಮಾಣದ ಆರ್ಥಿಕ ಸಾಲ ಯೋಜನೆಯಡಿಯಲ್ಲಿ ಸಾಲ ಮಂಜೂರು ಮಾಡತಕ್ಕದ್ದಲ್ಲ. ಮೈಕ್ರೋ ಕ್ರೆಡಿಟ್ ಹಣಕಾಸು ಯೋಜನೆಯಡಿ ಮತ್ತು ಸ್ವಯಂ ಉದ್ಯೋಗ ಯೋಜನೆಯಡಿ ಶೇಕಡ 50 ರಷ್ಟು ಸಹಯಾಧನ, ಗರಿಷ್ಟ ರೂ.5,000/-ಗಳು ಪ್ರತಿ ಫಲಾನುಭವಿಗೆ ಫಲಾನುಭವಿಯ ಹೆಸರಿನಲ್ಲಿ ಮಂಜೂರು ಮಾಡಿ ಬಿಡುಗಡೆ ಮಾಡಿರುವ ಸಾಲವನ್ನು ಸ್ವ-ಸಹಾಯ ಗುಂಪುಗಳಿಗೆ ಬ್ಯಾಂಕಿನಲ್ಲಿ ತೆರೆದಿರುವ ಖಾತೆಯ ಸಂಖ್ಯೆ ನಮೂದಿಸಿ ಚೆಕ್ಕುಗಳನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಬಹುದಾಗಿದೆ. ಸ್ವ ಸಹಾಯ ಸಂಘಗಳು ಸಾಲವನ್ನು ಫಲಾನುಭವಿಗೆ ಶೇಕಡ 5ರಬಡ್ಡಿ ದರದಲ್ಲಿ ನೀಡಬೇಕು. 

ಬೇಕಾಗುವ ದಾಖಲಾತಿಗಳು : 

1)ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ. 81,000/-, ನಗರ ಪ್ರದೇಶದವರಿಗೆ ರೂ. 1,03,000/-ಗಳ ಒಳಗಿರಬೇಕು. 
2)ಅರ್ಜಿದಾರರ ಮತ್ತು ಜಾಮೀನುದಾರರ ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್. 
3) ಕೊಟೇಶನ್ ಅಥವಾ ಯೋಜನಾವರದಿ 
4) ಅರ್ಜಿದಾರರ ಮತ್ತು ಜಾಮೀನುದಾರರ ತಲಾ ಮೂರು ಭಾವಚಿತ್ರ. 
5) ಸಂಘದ ಹೆಸರಿನ ರಾಷ್ಟ್ರೀಕೃತ ಬ್ಯಾಂಕಿನ ಪಾಸ್ ಪುಸ್ತಕದ ಜರಾಕ್ಸ್ ಪ್ರತಿ. ಮತ್ತುssಸಂಘ ರಚನೆಯಾಗಿ  ಕನಿಷ್ಟ 1 ವರ್ಷ ಆಗಿರಬೇಕು 
6) ಬ್ಯಾಂಕ್ ಬೇ ಬಾಕಿ ಪ್ರಮಾಣ ಪತ್ರ. 
7) ಸಂಘದ ನಡಾವಳಿ ಪುಸ್ತಕ. 
8) ಸ್ವಸಹಾಯ ಗುಂಪಿನ ಗಾತ್ರ ಕನಿಷ್ಟ 10 ರಿಂದ ಗರಿಷ್ಟ 20 ಸದಸ್ಯರ ಮಿತಿಯಲ್ಲಿರಬೇಕು.
9)ಪ್ರತಿ ಸದಸ್ಯರ ಬ್ಯಾಂಕ್ ಖಾತೆಯ ಪಾಸ್ ಪುಸ್ತಕದ ಜರಾಕ್ಸ್ಪ್ರರತಿ. 
10)ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಾಗಿರಬೇಕು. (ವಾಸ್ತವ್ಯ ದೃಡೀಕರಣ ಪತ್ರ) 10) ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 55ವರ್ಷಗಳು. 

5) *ಕೃಷಿ ಯಂತ್ರೋಪಕರಣ ಖರೀದಿ ಯೋಜನೆ*  (Minoritys Farmers Scheme) :

ಅಲ್ಪಸಂಖ್ಯಾತರ ಸಮುದಾಯಗಳ ಸಣ್ಣ ಮತ್ತು ಅತಿ ಸಣ್ಣ ರೈತರಿಗಾಗಿ ಟಿಲ್ಲರ್, ಉಕ್ಕಿನ ನೇಗಿಲು, ಡ್ರಿಲ್ಸ್, ಕಳೆ ಕೀಳುವ ಯಂತ್ರ, ಪಂಪ್ಸೆ ಟ್, ಟ್ರಾಕ್ಟರ್, ಮುಂತಾದ ನೂತನ ಕೃಷಿ ಸಲಕರಣಿಗಳನ್ನು sಶೇ.50 ರಷ್ಟು ಸಹಾಯಧನ ಸೇರಿ ಗರಿಷ್ಟ 1 ಲಕ್ಷ ರೂ. ಘಟಕ ವೆಚ್ಚದಲ್ಲಿ ನೀಡಲಾಗುವುದು.

ಬೇಕಾಗುವ ದಾಖಲಾತಿಗಳು: 

1.)ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ  ರೂ. 81,000/-, ನಗರ ಪ್ರದೇಶದವರಿಗೆ ರೂ. 1,03,000/-ಗಳ ಒಳಗಿರಬೇಕು.
2)ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು (ವಾಸ್ತವ್ಯ ದೃಡೀಕರಣ ಪತ್ರ)
3) ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 45ವರ್ಷಗಳು.
4) ಅರ್ಜಿದಾರರ ಮತ್ತು ಜಾಮೀನುದಾರರ ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್
5) ಅರ್ಜಿದಾರರ ಮತ್ತು ಜಾಮೀನುದಾರರ ತಲಾ ಮೂರು ಭಾವಚಿತ್ರ. 
6) ಬ್ಯಾಂಕ್ ಪಾಸ್ ಪುಸ್ತಕದ ಜರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡ್ನ್ನು್ ಬ್ಯಾಂಕಿನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು.
7) )ಆರ್.ಟಿ.ಸಿಯ ಮೂಲಪ್ರತಿ  
8) ಕೊಟೇಶನ್  
9) ಫಲಾನುಭವಿ ಅಥವಾ ಅವರ ಕುಟುಂಬ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರದ ನೌಕರರಲ್ಲದ ಬಗ್ಗೆ ದೃಢೀಕರಣ ಪತ್ರ(Affidavit).
10) ಈ ಯೋಜನೆಯಡಿ ಪಡೆದ ಸಾಲ ಸೌಲಭ್ಯವನ್ನು ಯಾರಿಗೂ ಪರಭಾರೆ ಮಾಡದಿರುವ ಬಗ್ಗೆ ಧೃಢೀಕರಣ ಪತ್ರ (Affidavit).

6) *ಗಂಗಾಕಲ್ಯಾಣ ಯೋಜನೆ*
 
ಈ ಯೋಜನೆಯಲ್ಲಿ ಪ್ರಮುಖವಾಗಿ ವೈಯಕ್ತಿಕ ನೀರಾವರಿ ಯೋಜನೆಯಗಳಲ್ಲಿ ಉಚಿತವಾಗಿ ನೀರಾವರಿ ಸೌಲಭ್ಯ ಒದಗಿಸುವುದು. ಮತೀಯ ಅಲ್ಪಸಂಖ್ಯಾತ ವರ್ಗಗಳ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರು ಒಂದೇ ಕಡೆ ಕನಿಷ್ಠ 1 ಎಕರೆ ಒಣ ಜಮೀನಿಗೆ 2.00 ಲಕ್ಷ ರೂಗಳ ಘಟಕ ವೆಚ್ಚದಲ್ಲಿ ಕೊಳವೆ ಬಾವಿ/ತೆರೆದ ಬಾವಿ ಕೊರೆಯಿಸಿ ಪಂಪ್ಸೆ ಟ್ ಮತ್ತು ಇತರ ಉಪಕರಣಗಳನ್ನು ಸರಬರಾಜು ಮಾಡಿ ಹಾಗೂ ಬೆಸ್ಕಾಂಗಳಿಗೆ ವೈಎಂಡಿ ಮತ್ತು ಇಎಂಡಿ ಹಣ ಪಾವತಿಸಿ ನೀರಾವರಿ ಸೌಲಭ್ಯ ಒದಗಿಸುವುದು.
ಬೇಕಾಗುವ ದಾಖಲಾತಿಗಳು : 

1. ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರೂ. 81,000/
2) ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್. 
3)ಆರ್.ಟಿ.ಸಿಯ ಮೂಲಪ್ರತಿ ಹಾಗೂ ಅರ್ಜಿದಾರರ 4 ಭಾವಚಿತ್ರ 
4) ಇಸಿ, ಭೂ ನಕ್ಷೆ, ವಂಶವೃಕ್ಷ(ಸಂತತಿ ನಕ್ಷೆ) ಮತ್ತು ಕಂದಾಯ ರಶೀದಿ ಮೂಲ ಪ್ರತಿ 
5) ಸಣ್ಣ ಹಿಡುವಳಿದಾರರ ಪ್ರಮಾಣಪತ್ರ.(ತಹಶೀಲ್ದಾರರಿಂದ) 
6).ಕೃಷಿ ಅವಲಂಬಿತರಾಗಿರುವ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಯವರಿಂದ ದೃಢೀಕರಣ ಪತ್ರ. 
7) ಬೇರೆ ನೀರಾವರಿ ಸೌಲಭ್ಯ ಇಲ್ಲದ ಬಗ್ಗೆ ಸ್ವಯಂ ಘೋಷಣಾ ಪತ್ರ. 
8) ಕೊಳವೆ ಬಾವಿ ಕೊರೆಯುವ ಬಗ್ಗೆ ಗ್ರಾಮ ಪಂಚಾಯತ್ನ  ಪಿ.ಡಿ.ಒ ರಿಂದ ಪಡೆದ ಆಕ್ಷೇಪಣಾ ರಹಿತ ಪ್ರಮಾಣ ಪತ್ರ. 9)ಮೆಸ್ಕಾಂನಿಂದ ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ಪ್ರಮಾಣ ಪತ್ರ. 
10) ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಾಗಿರಬೇಕು. (ವಾಸ್ತವ್ಯ ದೃಡೀಕರಣ ಪತ್ರ) 11)ಅರ್ಜಿದಾರರ ವಯಸ್ಸು  ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 55ವರ್ಷಗಳು.

7) *ಪಶು ಸಂಗೋಪನಾ ಯೋಜನೆ*
 
ಈ ಯೋಜನೆಯಡಿ ಪಶುಸಂಗೋಪನೆಗೆ ಉತ್ತೇಜನ ನೀಡಿ ಗ್ರಾಮೀಣ ಪ್ರದೇಶದ ಅಲ್ಪಸಂಖ್ಯಾತರು ನಿರಂತರ ಆದಾಯ ಹೊಂದುವ ಸಲುವಾಗಿ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಮುಂತಾದ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ನಡೆಸಲು ಶೇ.50 ರಷ್ಟು ಸಹಾಯಧನ ಸೇರಿ ರೂ.40,000 ಘಟಕ ವೆಚ್ಚದಲ್ಲಿ ಸಹಾಯ ನೀಡಲಾಗುವುದು. ಈ ಯೋಜನೆಯಡಿ ಶೇ.100ರಷ್ಟು ಮಹಿಳೆಯರಿಗೆ ಮೀಸಲಾತಿಯನ್ನು ನೀಡಲಾಗುವುದು. 

ಬೇಕಾಗುವ ದಾಖಲಾತಿಗಳು: 
1) ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ರೂ. 1,03,000/- ಒಳಗಿರಬೇಕು. 
2) ಅರ್ಜಿದಾರರ ಮತ್ತು ಜಾಮೀನುದಾರರ ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್. 
3) ಜಾನುವಾರು ಮೌಲ್ಯ ಬಗ್ಗೆ ಪಶು ವೈದ್ಯಾದಿಕಾರಿಯಿಂದ ಪ್ರಮಾಣ ಪತ್ರ 
4) ಅರ್ಜಿದಾರರ ಮತ್ತು ಜಾಮೀನುದಾರರ ತಲಾ ಮೂರು ಭಾವಚಿತ್ರ. 
5) ಬ್ಯಾಂಕ್ ಪಾಸ್ ಪುಸ್ತಕದ ಜರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡ್ನ್ನು  ಬ್ಯಾಂಕಿನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು. 
6)ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು (ವಾಸ್ತವ್ಯ ದೃಡೀಕರಣ ಪತ್ರ). 
7) ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 45ವರ್ಷಗಳು. 
8) ಫಲಾನುಭವಿ ಅಥವಾ ಅವರ ಕುಟುಂಬ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರದ ನೌಕರರಲ್ಲದ ಬಗ್ಗೆ ದೃಢೀಕರಣ ಪತ್ರ
9) ಕಳೆದ 05 ವರ್ಷಗಳಲ್ಲಿ ಪಶುಪಾಲನಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಯಾವುದೇ ಯೋಜನೆಗಳಿಂದ ಸಾಲ ಸೌಲಭ್ಯ ಪಡೆದಿಲ್ಲದಿರುವುದರ ಬಗ್ಗೆ ಧೃಢೀಕರಣ ಪತ್ರ. 
10) ಈ ಯೋಜನೆಯಡಿ ಪಡೆದ ಸಾಲ ಸೌಲಭ್ಯವನ್ನು ಯಾರಿಗೂ ಪರಭಾರೆ ಮಾಡದಿರುವ ಬಗ್ಗೆ ಧೃಢೀಕರಣ ಪತ್ರ.

8) *ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿ ಯೋಜನೆ*
 
ಈ ಯೋಜನೆಯಡಿ ಅಲ್ಪಸಂಖ್ಯಾತ ಸಮುದಾಯದವರು ನಗರಗಳಲ್ಲಿ ಹಾಗೂ ಗ್ರಾಮೀಣ ಮಟ್ಟದಲ್ಲೂ ಸಹ ಹೆಚ್ಚಿನ ವಿಧ್ಯಾಭ್ಯಾಸವನ್ನು ಪೂರೈಸಲು ಸಾಧ್ಯವಾಗದೇ ವಾಹನ ಚಾಲಕರಾಗಿ ತಮ್ಮ ನಿತ್ಯ ಜೀವನವನ್ನು ಸಾಗಿಸುತ್ತಿದ್ದಾರೆ ಇಂತಹ ಆರ್ಥಿಕವಾಗಿ ಹಿಂದುಳಿದ ಫಲಾನುಭವಿಗಳನ್ನು ಆಯ್ಕೆ ಮಾಡಿ ಇವರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಉದ್ದೇಶದೊಂದಿಗೆ ರಾಷ್ಟ್ರೀಕೃತ ಬ್ಯಾಂಕುಗಳ ಸಹಯೋಗದೊಂದಿಗೆ ಟ್ಯಾಕ್ಸಿ/ಗೂಡ್ಸ್ ವಾಹನಗಳನ್ನು ಖರೀದಿಸಲು ಗರಿಷ್ಟ 3.00ಲಕ್ಷಗಳ ಸಹಾಯಧನವನ್ನು ನೀಡಲಾಗುವುದು. ಈ ಯೋಜನೆಯಡಿಯಲ್ಲಿ ಖರೀದಿಸುವ ವಾಹನದ ಮೌಲ್ಯವು ಕನಿಷ್ಟ ರೂ. 4.00 ಲಕ್ಷಗಳಿಂದ ಗರಿಷ್ಟ ರೂ. 7.50ಲಕ್ಷಗಳಾಗಿರತಕ್ಕದ್ದು (ತೆರಿಗೆಯನ್ನು ಹೊರತುಪಡಿಸಿ). 

ಬೇಕಾಗುವ ದಾಖಲಾತಿಗಳು: 
1.)ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ  ರೂ. 81,000/-, ನಗರ ಪ್ರದೇಶದವರಿಗೆ ರೂ. 1,03,000/-ಗಳ ಒಳಗಿರಬೇಕು.
 2. ಅರ್ಜಿದಾರರ ಮತ್ತು ಜಾಮೀನುದಾರರ ಪಡಿತರ ಚೀಟಿ ಜರಾಕ್ಸ್ ಮತ್ತು ಆಧಾರ ಕಾರ್ಡ್ ಜರಾಕ್ಸ್.
3ಕೊಟೇಶನ್ ಮತ್ತು ಲೈಸಸ್ಸ್ ಬ್ಯಾಡ್ಜ್ನೊಂ.ದಿಗೆ. 
4. ಅರ್ಜಿದಾರರ  ತಲಾ ಮೂರು ಭಾವಚಿತ್ರ. 
5. ಅರ್ಜಿದಾರರ ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಪ್ರತಿ. 
6. ಬ್ಯಾಂಕ್ ಪಾಸ್ ಪುಸ್ತಕದ ಜರಾಕ್ಸ್ ಪ್ರತಿ ಮತ್ತು ಆಧಾರ್ ಕಾರ್ಡ್ನ್ನು  ಬ್ಯಾಂಕಿನ ಉಳಿತಾಯ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು. 
7.ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು (ವಾಸ್ತವ್ಯ ದೃಡೀಕರಣ  ಪತ್ರ) 
8. ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 45ವರ್ಷಗಳು. 
9. ಫಲಾನುಭವಿ ಅಥವಾ ಅವರ ಕುಟುಂಬ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರದ ನೌಕರರಲ್ಲದ ಬಗ್ಗೆ ದೃಢೀಕರಣ ಪತ್ರ. 
10. ಕಳೆದ 05 ವರ್ಷಗಳಲ್ಲಿ ಟ್ಯಾಕ್ಸಿ/ಗೂಡ್ಸ್ ವಾಹನವನ್ನು ಖರೀದಿಗೆ ಸಂಬಂಧಿಸಿದಂತೆ ಸರ್ಕಾರದ ಯಾವುದೇ ಯೋಜನೆಗಳಿಂದ ಸಾಲ ಸೌಲಭ್ಯ ಪಡೆದಿಲ್ಲದಿರುವುದರ ಬಗ್ಗೆ ಧೃಢೀಕರಣ ಪತ್ರ. 
11. ಈ ಯೋಜನೆಯಡಿ ಪಡೆದ ಸಾಲ ಸೌಲಭ್ಯವನ್ನು ಯಾರಿಗೂ ಪರಭಾರೆ ಮಾಡದಿರುವ ಬಗ್ಗೆ ಧೃಢೀಕರಣ ಪತ್ರ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 
*ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ.)*
[09/07, 9:32 AM] Nizam Pa: ಎಲ್ಲಾ ಸಮಸ್ತ ನಾಗರೀಕ ಬಾಂಧವರಲ್ಲಿ ತಿಳಿಸುವುದೇನೆಂದರೆ,
ನಮ್ಮ ಭಾರತ ದೇಶದಲ್ಲಿ ಅತೀ ಮುಂಚೂಣಿಯಲ್ಲಿರುವ ಮಹತ್ವಾಕಾಂಕ್ಷಿ ಯೋಜನೆಯಾದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ.

 ಇದರ ಅಡಿಯಲ್ಲಿ ತಮ್ಮ ಹತ್ತಿರದ  ಗ್ರಾಮ ಪಂಚಾಯ್ತಿಗೆ ಬೇಟಿ ನೀಡಿ ಉದ್ಯೋಗ ಚೀಟಿ (job card) ಮಾಡಿಸಿ ಕೊಳ್ಳಲು ವಿನಂತಿ.  

ಒಂದು ಕುಟುಂಬಕ್ಕೆ 150 ದಿನಗಳ ಉದ್ಯೋಗ ಖಾತರಿ,ಒಂದು ದಿನಕ್ಕೆ 249/-ಕೂಲಿ ದರವನ್ನಾಗಿ ನಿಗದಿ ಪಡಿಸಲಾಗಿದೆ. 

ಇದರ ಮುಖ್ಯ ಉದ್ದೇಶ ಗ್ರಾಮೀಣ ಬಡ ಜನರಿಗೆ ಆಧಾರವಾಗಿ ನೈಸಗ೯ಕ ಸಂಪನ್ಮೂಲ ಬಲಪಡಿಸುವುದು, ವಲಸೆ ತಡೆಗಟ್ಟುವುದು, ಆಥಿ೯ಕ ಭದ್ರತೆ ಒದಗಿಸುವುದು ಮತ್ತು ಆಸ್ತಿ ಸೃಜನೆ ಮಾಡುವುದಾಗಿದೆ.

 ಇದರಿಂದಾಗುವ ಪ್ರಯೋಜನಗಳು:-

1.ಸಕಾ೯ರದಿಂದ ವಸತಿ ಮಂಜೂರಾದರೆ ಈ ಯೋಜನೆಯ ಅಡಿಯಲ್ಲಿ ಕೂಲಿ ಹಣ 22,410 ರೂ/- ದೊರೆಯುತ್ತದೆ.

2.ದನದ ಕೊಟ್ಟಿಗೆ ,ಕುರಿ ಶೆಡ್,ಮೇಕೆ ಶೆಡ್,ಕೋಳಿ ಶೆಡ್,ಹಂದಿ ಶೆಡ್ ನಿಮಾ೯ಣಕ್ಕೆ 43,000/- ದೊರೆಯುತ್ತದೆ.

3. ಜಮೀನು ಸಮತಟ್ಟು ಮಾಡಲು 10,000/- ದೊರೆಯುತ್ತದೆ.

4. ಜಮೀನಿನಲ್ಲಿ ತಡೆ ಗೋಡೆ( ರಿವೀಟ್ ಮೆಂಟ್ ) ಕಟ್ಟಲು ಪ್ರತೀ ರೈತರಿಗೆ 1 ಲಕ್ಷ ರೂ/- ವರೆಗೆ ದೊರೆಯುತ್ತದೆ.

5.ಜಮೀನಿನಲ್ಲಿ ಕೃಷಿ ಹೊಂಡ ನಿಮಾ೯ಣ ಮಾಡಲು 43.000/- ದೊರೆಯುತ್ತದೆ.

6.ಜಮೀನಿನಲ್ಲಿ ಕೊಳವೆ ಬಾವಿಗೆ ಹಿಂಗು ಗುಂಡಿ ನಿಮಾ೯ಣ ಮಾಡಲು 19.000/- ದೊರೆಯುತ್ತದೆ.

7. ಮನೆಗಳಿಗೆ ಮಳೆ ನೀರು ಕೊಯ್ಲು ಕಾಮಗಾರಿಗೆ 30.000/- ದೊರೆಯುತ್ತದೆ.

8. ತಮ್ಮ ಜಮೀನುಗಳಲ್ಲಿ ವಿವಿಧ ಜಾತಿಯ ತೋಟಗಾರಿಕಾ ಬೆಳೆಗಳು

   ಬೆಳೆ         ಹೆಕ್ಟೇರ್ ಗೆ

a. ತೆಂಗು   - 62.496/-
b. ಗೇರು    - 72.048/-
c. ಮಾವು,ಸಪೋಟ  - 101957 
d. ದಾಳಿಂಬೆ - 59879/-
e. ಸೀಬೆ  -  94704/-
f.  ಸಿಟ್ರಸ್ - 71316/-
g. ಹುಣಸೆ - 94704/-
h.ಸೀತಾಫಲ  -  53330/-
i. ನುಗ್ಗೆ     -    116996/-
j. ಬಾಳೆ   -    211656/-
k. ಪಪ್ಪಾಯ - 205498/- 

9. ತೇಗ, ವನ್ನೆ, ಬೀಟೆ, ಶ್ರೀಗಂಧ,ಅಕೇಶಿ, ರಕ್ತಚಂಧನ, ಸಿಲ್ವರ್, ಟೇಕ್ ಇತರೆ ಜಾತಿಯ ಸಸಿಗಳನ್ನು ತಮ್ಮ ಜಮೀನುಗಳಲ್ಲಿ ಬೆಳೆಸಲು MGNREGA  ಯೋಜನೆಯಲ್ಲಿ ಸಹಾಯ ಧನ  ದೊರೆಯುತ್ತದೆ.

10. ಹಿಪ್ಪುನೇರಳೆ ಹೊಸ ನಾಟಿ ಮತ್ತು ಹಿಪ್ಪುನೇರಳೆ ಮರದ ಕಡ್ಡಿ ನೆಡಲು ಸಹಾಯ ಧನ ದೊರೆಯುತ್ತದೆ.

11. ಮೀನು ಸಾಕಾಣಿಕೆ ತೊಟ್ಟಿ ನಿಮಿ೯ಸಲು ಸಹಾಯ ಧನ ದೊರೆಯುತ್ತದೆ.

12. ಎರೆ ಹುಳು ಗೊಬ್ಬರ ತಯಾರಿಸುವ ತೊಟ್ಟಿ ನಿಮಾ೯ಣಕ್ಕೆ ಸಹಾಯ ಧನ  ದೊರೆಯುತ್ತದೆ.

ಇನ್ನೂ ಆನೇಕ ಅನುಕೂಲಗಳು MGNREGA ಯೋಜನೆಯಲ್ಲಿ ನೆರವಾಗುತ್ತಿವೆ.

ಹೆಚ್ಚಿನ ಮಾಹಿತಿಗಾಗಿ :-
ನಿಮ್ಮ ಗ್ರಾ*ಸರಕಾರದಿಂದ  ತಿಂಗಳಿಗೆ ಇಮಾಮ್ ಗೆ 4000 & ಮುಹಝಿನ್ ಗೆ 3000 ರೂಪಾಯಿ ಸಹಾಯಧನ*

ವಕ್ಫ್ ಬೋರ್ಡಿನಲ್ಲಿ ರಿಜಿಸ್ಟರ್ ಆಗಿರುವ ಮದರಸ ಮತ್ತು ಮಸೀದಿಗಳ ಇಮಾಮ್ & ಮುಹಝಿನ್ ಇಬ್ಬರಿಗೆ ತಿಂಗಳಿಗೆ 4000 & 3000 ರೂಪಾಯಿಯಂತೆ ದೊರೆಯುವುದು. ವಾರ್ಷಿಕ 3 ಲಕ್ಷಕಿಂತ ಕಡಿಮೆ ಆದಾಯ ಇರುವ ಮಸೀದಿಗಳು ಈ ಯೋಜನೆಯ ಲಾಭ ಪಡೆಯಬಹುದು.

*ಇಮಾಮ್ & ಮುಹಝಿನ್ ರವರ ಬೇಕಾದ ದಾಖಲೆಗಳು*:
1.Passport size photo-3
2.Sanad Copy
3.Cancelled cheque 
4.Aadar Card / Residence proof for 3 years

*ಮಸೀದಿ ಮದರಸ ದಿಂದ  ಬೇಕಾದ ದಾಖಲೆಗಳು*:
1.Photo of masjid/ Madarasa
2.Registration copy
3.Statement of Account for previous year.

*ಅರ್ಜಿ ದೊರೆಯುವ ಸ್ಥಳ*: 
ಜಿಲ್ಲಾ ವಕ್ಫ್ ಅಫ ನಿಮಗೆ ಪರಿಚಯವಿರುವ ವಿದ್ಯಾರ್ಥಿಗಳಿಗೆ ಈ  ಕೆಳಗಿನ ವಿದ್ಯಾರ್ಥಿ ವೇತನಗಳ ಬಗ್ಗೆ ದಯವಿಟ್ಟು ಮಾಹಿತಿ ನೀಡಿ.. ಯಾಕೆಂದರೆ  ಮುಂದಿನ ತಿಂಗಳಲ್ಲಿ ಎಲ್ಲಾ ವಿದ್ಯಾರ್ಥಿ ವೇತನಗಳ ಅರ್ಜಿಗಳನ್ನು ಕರೆಯಲಾಗುತ್ತದೆ.

1) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ -
www.karepass.cgg.gov.in

೨) ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ   ವಿದ್ಯಾರ್ಥಿಗಳಿಗೆ 
www.sw.kar.nic.in

೩) ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ -www.gokdom.kar.nic.in

೪) ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ವಿದ್ಯಾರ್ಥಿ ವೇತನ (Ministry of Human Resource Development)  ಪ್ರತಿ ವರ್ಷವು ಡಿಗ್ರಿ ಪ್ರವೇಶ ಪಡೆಯುವ  ಎಲ್ಲಾ ಜಾತಿಯಾ ಬಡ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ - 
www.kar.nic.in/pue

೫) ನಮ್ಮ ರಾಜ್ಯದ ಹೆಮ್ಮೆಯ ಐ.ಟಿ ಕಂಪನಿ ಇನಪೋಸ್ಸಿಸ್ ನೀಡುವ ವಿದ್ಯಾರ್ಥಿ ವೇತನ - www.vidyaposhak.org

೬)ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿ ವೇತನ - 
www.kar.nic.in/pue/

೭) ದೀರುಬಾಯಿ ಅಂಬಾನಿ ವಿದ್ಯಾರ್ಥಿ ವೇತನ ಅಂಗವಿಕಲ ವಿದ್ಯಾರ್ಥಿಗಳಿಗೆ - 
www.kar.nic.in/pue

೮) ಅಂಬೇಡ್ಕರ್ ನ್ಯಾಶನಲ್ ಮೆರಿಟ್ ಅರ್ವಾಡ್ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ - 
www.kar.nic.in/pue

೯) ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಮೂಲ ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ (Inspire Scholarship) - 
www. kar.nic.in/pue

೧೦) ಮೆರಿಟ್ ಸ್ಕಾಲರಶಿಪ್ - ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ಶೇ.೮೦ ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಬಡ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ(ಇಂಜಿನಿಯರಿಂಗ್, ವೈದ್ಯಕೀಯ, ಕೃಷಿ) ಶುಲ್ಕವನ್ನು ಸರ್ಕಾರ ನೀಡುತ್ತದೆ – 
www. kar.nic.in/pue

೧೧) ನಮ್ಮ ರಾಜ್ಯದ ಹೆಮ್ಮೆಯ ಇನ್ನೊಂದು ಐ.ಟಿ ಕಂಪನಿ  ವೀಪ್ರೊ ಅವರ  ಅಜೀಮ್ ಪ್ರೇಮಜೀ ಫೌಂಡೇಷನ್ -www.azimpremjifoundation.org

12. ​ವಿದ್ಯಸಿರಿ​ ​ಮತ್ತು ಶುಲ್ಕ​ ​ವಿನಾಯಿತಿ​
http://backwardclasses.kar.nic.in/BCWD/Website/backwardclassesMain.html 

    http://backwardclasses.kar.nic.in/BCWD/Website/Educational_Scholarships.html

    Information ::

   http://www.scholarshipx.in/2015/10/karnataka-scholarship-onlline-last-date.html

13. ​ಸರ್ಕಾರದ​ ​ಧನಸಹಾಯಗಳ​ ​ವೆಬ್ ವಿಳಾಸ​

http://karepass.cgg.gov.in/ 

14. ​ಜಿಂದಾಲ್ scholarship​

 http://www.sitaramjindalfoundation.org/scholarships.php 

15. ​B.L ಹೇಮವತಿ ಧನಸಹಾಯ​

 http://www.blhtrust.org/schpro.html 

16. ​ಕೇಂದ್ರ ಸರ್ಕಾರದ ಧನಸಹಾಯಗಳು​

Central Govt Scholarship

     http://mhrd.gov.in/ 

17.  ​Indian Oil Scholarship​

     https://www.iocl.com/AboutU*ಕಂಪ್ಯೂಟರ್ ಶಿಕ್ಷಣದೊಂದಿಗೆ ಮದರಸ ಆಧುನೀಕರಣಕ್ಕೆ  ಸರಕಾರ ದಿಂದ 10 ಲಕ್ಷ*

ಅನುದಾನ 1:- 5 lakhs
ಮದರಸಾದಲ್ಲಿ ಹೆಚ್ಚುವರಿ ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್ ಕೊಠಡಿ, ಶೌಚಾಲಯ, ಮೈದಾನದ ದುರಸ್ತಿ ಇತ್ಯಾದಿಗಳಿಗೆ 5 ಲಕ್ಷ ರುಪಾಯಿ. ಈ ಅನುದಾನ ಬಂದಾಗ ಈ  ಕೆಲಸ ಪೂರ್ತಿಗೊಳಿಸಿ ವರದಿ ಸಲ್ಲಿಸಿ ಎರಡನೇ ಅನುದಾನ ಪಡೆಯುವುದು

ಅನುದಾನ-2:
1. ಗ್ರಂಥಾಲಯ ಮತ್ತು ಪ್ರಯೋಗಾಲಯದ ಉಪಕರಣಗಳ ಖರೀದಿಗೆ 1 lakh.
2. 25ಕ್ಕಿಂತ ಹೆಚ್ಚು ಮಕ್ಕಳಿರುವ ಮಾದರಸಕ್ಕೆ 2 ಕಂಪ್ಯೂಟರ್,  1 UPS & 1 Printer, 50 ಕ್ಕಿಂತ ಹೆಚ್ಚು ಮಕ್ಕಳಿರುವ ಮಾದರಸಕ್ಕೆ 3 ಕಂಪ್ಯೂಟರ್,  1 UPS & 1 Printer
3. ಮದರಸದಲ್ಲಿ ಇಂಗ್ಲಿಷ್ ಗಣಿತ ಕನ್ನಡ ಸಮಾಜಶಾಸ್ತ್ರ ವಿಜ್ಞಾನ ಕಲಿಸುವ ಅಧ್ಯಾಪಕನಿಗೆ  60,000 ಅನುದಾನ (6000 ×10 Months)
4. ಮದರಸದಲ್ಲಿ ಹಿಫ್ಝ್ ಕಲಿಸುವ ಅಧ್ಯಾಪಕನಿಗೆ  60,000 ಅನುದಾನ (6000 ×10 Months)

*ಮಸೀದಿ ಮದರಸ ದಿಂದ  ಬೇಕಾದ ದಾಖಲೆಗಳು*:
1. ಅರ್ಜಿ.
2. Waqf Registration copy.
3. Audit  ಆದ ಹಿಂದಿನ 2 ವರ್ಷಗಳ ಲೆಕ್ಕಪತ್ರದ copy
4. ವಿದ್ಯಾರ್ಥಿಗಳ 2 ತಿಂಗಳ Attendance list- copy.
5. ವಿದ್ಯಾರ್ಥಿಗಳ ವಿವರ pp photos & Adress.
6. ಅಧ್ಯಾಪಕರ ವಿವರ pp photos & Adress
7. ಆಡಳಿತ ಸಮಿತಿ ಸದಸ್ಯರ ವಿವರ pp photos & Adress
8. ವ್ಯವಸ್ಥೆಗಳ ವಿವರ  photo ಸಹಿತ- class rooms, ground, toilet, bathroom, kitchen (if)
9. ಮದರಸ syllabus ಅಂಗೀಕಾರದ copy.
10. ವಕ್ಫ್ ಬೋರ್ಡ್ ಅನುಮೋದಿಸಿದ ಬೈಲಾ copy.
11. ಮದರಸ ಆಧುನೀಕರಣಕ್ಕೆ ಸರಕಾರದ ಅನುದಾನ ಪಡೆದಿಲ್ಲ ಎಂಬ ಜಿಲ್ಲಾ ವಕ್ಫ್ ನೀಡಿರುವ *ಹಿಂಬರಹ*
12. ಕಂಪ್ಯೂಟರ್ ಲ್ಯಾಬ್ ಹೊಂದಿಲ್ಲ ಎಂದು ಮದರಸದಿಂದ ಲೆಟರ್ ಹೆಡ್ ಮೂಲಕ ದೃಢೀಕರಣ.
13. ಗ್ರಂಥಾಲಯ / ಲ್ಯಾಬ್ ಹೊಂದಿಲ್ಲ ಎಂದು ಮದರಸದಿಂದ ಲೆಟರ್ ಹೆಡ್ ಮೂಲಕ ದೃಢೀಕರಣ.
14. ಮದರಸದ ಬ್ಯಾಂಕ್ ಪಾಸ್ ಬುಕ್ copy.
15. ಮದರಸದ RTC /9-11 Copy

ವಿ.ಸೂ:  ಈ  ಮೇಲಿನ 15 ದಾಖಲೆಗಳನ್ನು 1 set & 1 set xrox ಮಾಡಿ, original ಗೆ ಮದರಸ stamp ಹಾಕಿ, ಉಳಿದ ಎಲ್ಲಾ ದಾಖಲೆಗಳಿಗೂ Notary attestation ಮಾಡಿ ಅನುದಾನ-1 ಕ್ಕಾಗಿ ಸಲ್ಲಿಸುವುದು.

*ಅರ್ಜಿ ದೊರೆಯುವ ಸ್ಥಳ*: 
ಅಲ್ಪಸಂಖ್ಯಾತರ  ಕಲ್ಯಾಣ ಇಲಾಖೆ 
 https://gokdom.kar.nic.in/Documents/Schemes/Madarasa%20Schemes/Modernization_of_Madarasa_2017-18.pdf

Tuesday 12 January 2021

ಸೌರಮಂಡಲ ಮತ್ತು ಗ್ರಹಗಳ ಚಲನೆ

https://youtu.be/peq5Kn5ycYM

ನಮ್ಮ ಸೌರಮಂಡಲ. ಗ್ರಹಗಳ ಚಲನೆ. ಕುರಿತು ವಿಡಿಯೋ ಪಾಠ ವೀಕ್ಷಿಸಿ.

ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್ ಅಭಿಯಾನದ ವಿಶೇಷ ಚಟುವಟಿಕೆ.

ರವಿಚಂದ್ರ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಕಾಪುರ ಮಾನ್ವಿ ತಾಲೂಕು.
9980952630

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...