ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Friday 13 May 2016

ನಿಸರ್ಗ ನಿಯಮ

ನಿಸರ್ಗ ನಿಯಮ ಕೋಗಿಲೆಯೊಂದು ಕರೆದಿದೆ ಕೂಗಿ ಹಾಡಲು ತನ್ನೊಂದಿಗೆ ವಯ್ಯಾರದ ನವಿಲು ಕೈಹಿಡಿದೆಳೆದಿದೆ ಕುಣಿಯಲು ಜೂತೆಯಾಗಿದೆ. ಮಲ್ಲಿಗೆ ಮೆಲ್ಲಗೆ ಮಾತಿಗೆಳೆದಿದೆ ಸುಗಂಧವಾ ಹರಡಲೂ ಜೋಗದಿ ದುಮುಕುತ ಶರಾವತಿ ಕರೆದಳು ಸಾಗರವಾ ಸೇರಲೂ ಕತ್ತಲ ಕರಗಿಸೋ ಜ್ಯೋತಿ ಸೆಳೆದಳು ಶೃಂಗಾರ ಸಡಗರ ಸಮಯದ ಸಾಕ್ಷಿಗೇ; ಸಂತಸ ಹಂಚಿ ಸುಂದರ ಬದುಕು ಎನ್ನುವ ನಿಸರ್ಗ ನಿಯಮವೇ ಚೆಂದ ಒಣ ವೇದಾಂತ ಕಿವಿಗೂ ಹಿತವಲ್ಲ.. ಆಸೆಗಳೂರಲಿ ಅಲೆದರೆ ತಪ್ಪಲ್ಲ. ಸಂತಸ ಹಂಚಿರಿ ಧರೆಯೆಲ್ಲ.. # ರವಿರಾಜ್ ಸಾಗರ್

ಕೇಳೇ ಸಖೀ

ಕೇಳೇ ಸಖೀ... ಕನಸುಗಳೂರಿನ ಪರಿಶ್ರಮಿ ನಾನು ಮನಸಿದ್ದರೆ ಸಹಬಾಳ್ವೆಗೆ ಜೊತೆಯಾಗು ನೀನೂ ಮಿತಿಯಿಲ್ಲದ ಆಸೆಗಳ ಬೆನ್ನೇರೆನು ನಾನೂ ಸರಳ ಬದುಕಲ್ಲೇ ಸಂತೋಷ ಇಲ್ಲವೇನು..? ಕೊಂಡಷ್ಟೂ ಮುಗಿಯದ ಮಾರುಕಟ್ಟೆ ಒಡಲು ಕೊನೆಗಾಣದ ಅಸೆಗಳ ಮುಗಿಲು ಯಾಕೊ ಏನೂ ಈಗೀಗ ದಿಗಿಲು ಶಾಂತವಾಗುತಿಲ್ಲ ಮನದ ಕಡಲು. ಕತ್ತಲಲಿ ಕರಿಮಣಿಯ ಕಟ್ಟಿದವ ನಾನಲ್ಲ ಕತ್ತುಒಡ್ಡಿದ ಮೇಲೆಯೇ ಕಿರುಬೆರಳು ಹಿಡಿದೆನಲ್ಲೇ.. ಕಾಯಾ ವಾಚಾ ಮನಸಾ ನೀನೆ ನನ್ನ ನಲ್ಲೇ ಸಮಯ ಕೆಟ್ಟರೂನು ಇರುವೆ ನಿನ್ನಲ್ಲೇ ಬದುಕಿನ ಫರೀಕ್ಷೆಗಳಲಿ ಪಾಸಾಗು ಬಾ ನಲ್ಲೇ ಹಗಲಿಗಂಜಿದ ಚುಕ್ಕಿಗಳು ನಲಿದಿವೆ ಕತ್ತಲಾ ಬಾನಲ್ಲೇ ಒಲವೇ ಜೀವನ ಸಾಕ್ಷಾತ್ಕಾರ ಸ್ವಲ್ಪ ಇರಲಿ ಲೆಕ್ಕಾಚಾರ. ಒಲವಿಗೂ ತಪ್ಪೊಲ್ಲ ಗ್ರಹಚಾರ ನಾವೇ ಅರಿಯಬೇಕು ವಿಚಾರ-ಆಚಾರ ನಾಳೆ ಅನ್ನೊದು ಅಗೋಚರ ಆದರೂ ಕಟ್ಟೋಣ ಕನಸುಗಳ ಗೋಪುರ ಅಲ್ಲಿ ರಾಜಾ ರಾಣಿ ಪಟ್ಟ ನಮಗೆ ನಿರಂತರ ಸಹನೆಯಿಂದಲೇ ಸಹಬಾಳ್ವೆಯ ಸಂಸಾರ. ಕೊನೇ ಮಾತು ಕೇಳೇ ಸಖೀ ನಿನ್ನಿಂದಲೇ ನಾನು ಪರಮಸುಖೀ. ( " ಅವಳ ಡೈರಿಯ ಗೆದ್ದಲು ನೆಕ್ಕಿದ ಸಾಲುಗಳು".. ಕವನ ಸಂಕಲನ ದಿಂದ )

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...