ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Thursday 21 May 2020

ಆರ್ ಕೆ ನಾರಾಯಣ್ ಅವರ ಮಕ್ಕಳ ಕಾದಂಬರಿ ಸ್ವಾಮಿ ಮತ್ತು ಅವನ ಗೆಳೆಯರು

ಕೊರೋನಾ ವಿಪತ್ತಿನ ಸುದೀರ್ಘ ರಜೆಯಲ್ಲಿ ಮತ್ತೆ ಸೆಳೆದ ಸ್ವಾಮಿ ಮತ್ತು ಅವನ ಗೆಳೆಯರು. 

ಸೋಮವಾರ ಬೆಳಗ್ಗೆ ಹಾಸಿಗೆಯಿಂದೆದ್ದು ಕಣ್ಣು ಬಿಡುವುದಕ್ಕೆ ಕೂಡ ಸ್ವಾಮಿನಾಥನಿಗೆ ಇಷ್ಟ ಇರಲಿಲ್ಲ. ವಾರದಲ್ಲಿ ಅವನಿಗೆ  ಸೋಮವಾರ ಎಂದರೆ ಆಗದು.ಶನಿವಾರ ಭಾನುವಾರಗಳ ಸೊಗಸಾದ ಸುಖದ ಸ್ವಾತಂತ್ರವಾದ ಮೇಲೆ ಇದ್ದಕ್ಕಿದ್ದಂತೆ ಸೋಮವಾರದ ಶಿಸ್ತಿಗೆ ತಲೆಬಾಗುವುದು ಸುಲಭವೇ...?

ಇದು ಯಾವ ಕಾದಂಬರಿಯ ಆರಂಭದ ಸಾಲುಗಳು ಹೇಳಬಲ್ಲಿರಾ....?

"ಇಂಡಿಯಾ ದೇಶದ ಹವಾಗುಣದ ಬಗ್ಗೆ ನಿನಗೇನು ಗೊತ್ತು..?

"ಬೇಸಿಗೆಯಲ್ಲಿ ಶಕೆ ಚಳಿಗಾಲದಲ್ಲಿ ಚಳಿ ಸಾರ್.."

ಇಂತಹ ಕಚಗುಳಿ ಇಡುವ ಶಾಲಾ ಮಕ್ಕಳ ತರಲೆ  ಉತ್ತರಗಳ ಸಂಭಾಷಣೆಗಳಿರುವ ಆ ಕಾದಂಬರಿ ಕಿರುತೆರೆಗೆ ಲಗ್ಗೆ ಹಾಕಿ ಜಗತ್ತಿನ ಹಲವೆಡೆ ಮನೆಮಾತಾಗಿತ್ತು.

ನೆನಪಾಯಿತಲ್ಲ...ಹಾಂ .. ಅದೇ ಸ್ವಾಮಿನಾಥ , ಅವನ ಗೆಳೆಯರಾದ ಸೋಮು,ಮಣಿ, ಶಂಕರ್, ಸಾಮ್ಯುಯೆಲ್,
ಅವರ ಮಾಲ್ಗುಡಿ  ಶಾಲಾ ದಿನಗಳು..
ಅವರ ಅಜ್ಜಿ ರಾಜಂ, ಶಿಕ್ಷಕ ಎಬನೀಜರ್, ಡಿ.ಪಿಳ್ಳೆ, ವೇದ ನಾಯಗಂ, ಮತ್ತಿತರರು.

ಎಸ್, ಅದೇ..." ಸ್ವಾಮಿ ಅಂಡ್ ಫ್ರೆಂಡ್ಸ್ ' .  ಕನ್ನಡದ ನೆಲದ  ಸಾಹಿತಿಯಿಂದ ರಚನೆಯಾದ ಇಂಗ್ಲಿಷ್ ನಾವೆಲ್. ಮಕ್ಕಳ ಸಾಹಿತ್ಯಲೋಕದ ವಿನೂತನ  ಥ್ರಿಲ್ಲರ್ ಕಾದಂಬರಿ. ಹಲವು ಭಾಷೆಗಳಿಗೆ ಅನುವಾದವಾದ ಈ ಕೃತಿಯನ್ನು  ಹೆಚ್ ವೈ ಶಾರದಾಪ್ರಸಾದ್ ಅವರು  ಸ್ವಾಮಿನಾಥ- ಮತ್ತು ಅವನ ಸ್ನೇಹಿತರು ಎನ್ನುವ ಹೆಸರಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.
ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಹೊಸತನದ ಹುಡುಕಾಟಕ್ಕೆ ನಾಂದಿ ಹಾಡಿದ ಕೃತಿ. ಸ್ವಾಮಿನಾಥ- ಮತ್ತು ಅವನ ಗೆಳೆಯರ ಚಿತ್ರಣವೇ ಇಡೀ ಕೃತಿಯುದ್ದಕ್ಕೂ ತೆರೆದುಕೊಳ್ಳುತ್ತದೆ.  

ಸರಯೂ ನದಿ ತೀರದಲ್ಲಿ ತೆರೆದುಕೊಳ್ಳುವ ಮಾಲ್ಗುಡಿಯ ಶಾಲಾದಿನಗಳ  ಅಲ್ಲಿನ ಕಥಾ ಪರಿಸರವು  ಅದು ನಮಗೆ ಉತ್ತರ ಭಾರತದ್ದು ಎಂದು ಎನಿಸುವುದೇ ಇಲ್ಲ.
ಅಲ್ಲಿನ ಸಂಭಾಷಣೆಗಳು, ಕಥಾ ಪರಿಸರ ನಮ್ಮ ಮನಃಪಟಲದಲ್ಲಿ ಆವರಿಸಿ ಕಥಾ ಪಾತ್ರಗಳನ್ನು ಮೂಡಿಸಿ ಕಲ್ಪನೆಯನ್ನು ವಿಸ್ತರಿಸುತ್ತದೆಯಲ್ಲದೆ ಅದು ನಮ್ಮ,ಮೈಸೂರು, ಮಲೆನಾಡು ಭಾಗದ ಕತೆಯಾಗಿ ನಮ್ಮನ್ನು ಆವರಿಸಿಕೊಳ್ಳುತ್ತದೆ. ಆರ್ ಕೆ ನಾರಾಯಣ್ ಅವರು ಮೈಸೂರು ಭಾಗದವರು ಆಗಿರುವುದರಿಂದ ಅದು ಇಂಗ್ಲೀಷ್ ಭಾಷೆಯ ಕಾದಂಬರಿಯಾಗಿದ್ದರು ಸಹ ಕನ್ನಡ ನೆಲದ ಸಹಜ ಭಾಷಾ ಸೊಗಡು ಅಲ್ಲಿದೆ. ಅಲ್ಲದೆ ಶಂಕರ್ ನಾಗ್ ಅವರ ಕಲ್ಪನೆಯ ವಿಸ್ತರಣೆಯ ಮಾಲ್ಗುಡಿ ಡೇಸ್ ನಮ್ಮ ಕಣ್ಣಲ್ಲಿ ಇನ್ನು ಹಾಗೆ ಇರುವುದರಿಂದ ಈ ಕಾದಂಬರಿ ಓದುತ್ತ ಹೋದಂತೆ ಅದು ಇಂಗ್ಲೀಷ್ ಮೂಲ ಕಾದಂಬರಿ ಎಂದು ಅನಿಸುವುದೇ ಇಲ್ಲ.
ಈಗಂತೂ ಜಿ ಟೀವಿ  'ಮಾಲ್ಗುಡಿ ಡೇಸ್  "ಅನ್ನು ಕನ್ನಡ ಧಾರಾವಾಹಿಯಾಗಿಸಿ ಪ್ರಸಾರವನ್ನು ಮಾಡುತ್ತಿದೆ.
 
ಕನ್ನಡದವರಾಗಿ ಇಂಗ್ಲಿಷ್ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಸಾಹಿತ್ಯ ಕೃಷಿ ಮಾಡಿ ಹೆಸರು ಮಾಡಿದ ಭಾರತೀಯ ಸಾಹಿತ್ಯದಲ್ಲೇ   ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿಯೂ ವಿಶಿಷ್ಟ ಸಾಹಿತಿಯಾಗಿ ಬೆಳೆದ ಆರ್ ಕೆ ನಾರಾಯಣ್ ಅವರ ಹೆಸರು ಕೇಳದವರಿಲ್ಲ.
ಅವರ ಆರಂಭದ ಕೃತಿ ಸ್ವಾಮಿ ಅಂಡ್ ಫ್ರೆಂಡ್ಸ್  ನನ್ನನ್ನು ಹಲವು ಕಾರಣಕ್ಕೆ ಸೆಳೆದ ಕೃತಿಯಾಗಿತ್ತು. ಹಲವು ವರ್ಷಗಳ ನಂತರ ಮತ್ತೀಗ  ಕೋರೋನ ವಿಪತ್ತಿನಲ್ಲಿ ಲಾಕ್ ಆಗಿರುವ ಶಾಲಾಮಕ್ಕಳನ್ನು ನೆನೆಸಿಕೊಂಡು , ಮಕ್ಕಳ ಬದುಕಿನಲ್ಲಿ ಆಗುತ್ತಿರುವ ಪಲ್ಲಟಗಳನ್ನು ಗಮನಿಸುತ್ತಲೇ ಈ ಕಾದಂಬರಿಯನ್ನು ಮತ್ತೆ ಏಕೋ ಓದಬೇಕು ಎನಿಸಿತು.

ಮಕ್ಕಳ ಕಾದಂಬರಿಯೊಂದು ಹೇಗಿರಬೇಕು ಎಂಬುದರ ಹೊಸ ಸೂತ್ರ, ಕಥಾತಂತ್ರ, ಕಥಾ ನೇಯ್ಗೆಯ ದೃಷ್ಟಿಯಿಂದಲೂ ಅಂದೇ ಹೊಸ ಮಾರ್ಗ ತೋರಿಸಿದ್ದಾರೆ.

ಕಥೆಯ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಈಗಾಗಲೇ ಮಾಲ್ಗುಡಿ ಡೇಸ್ ಜನಪ್ರಿಯವಾಗಿ ಬಹುತೇಕರನ್ನು ತಲುಪಿಯಾಗಿದೆ.
ಆದರೆ ಪುಸ್ತಕವನ್ನು ಕೈಯಲ್ಲಿಟ್ಟುಕೊಂಡು ಓದುವ ಸುಖವೇ ಬೇರೆ. ಜಿ ಟೀವಿಯ ದಾರವಾಹಿಗಿಂತ
ನ್ಯಾಷನಲ್ ಬುಕ್ ಟ್ರಸ್ಟ್  ಇಂಡಿಯಾ
ಪ್ರಕಟಿಸಿರುವ ಕನ್ನಡ ಅವತರಣಿಕೆ ಪುಸ್ತಕ ಓದಿ.
ನಿಮ್ಮ ಮಕ್ಕಳಿಗೂ ಉಡುಗೊರೆಯಾಗಿ ನೀಡಿ.

ನಿಮ್ಮ ರವಿರಾಜ್ ಸಾಗರ್


 .

Friday 1 May 2020

ಭಾರತದ ಪ್ರಾಚೀನ ಇತಿಹಾಸ ಕುರಿತು ಟಿಪ್ಪಣಿ

ಭಾರತದ ಇತಿಹಾಸದ ಘಟ್ಟಗಳು :
ಮಗಧ ಸಾಮ್ರಾಜ್ಯ
ಮಗಧ ಸಾಮ್ರಾಜ್ಯ
ಪ್ರಾಚೀನ ಭಾರತದಲ್ಲಿ ಸ್ಥಾಪಿಸಲ್ಪಟ್ಟ ಐತಿಹಾಸಿಕ ಸಾಮ್ರಾಜ್ಯಗಳಲ್ಲಿ ಮೊಟ್ಟ ಮೊದಲನೆಯ ಸಾಮ್ರಾಜ್ಯ - ಮಗಧ ಸಾಮ್ರಾಜ್ಯ
ಮಗಧ ಸಾಮ್ರಾಜ್ಯವನ್ನು ಆಳಿದ ಮನೆತನಗಳ ಸಂಖ್ಯೆ - 8




ಪ್ರಮುಖ ಮಗಧ ಮನೆತನಗಳು
ಅಸುರರ ಮನೆತನ
ಶಿಶುನಾಗ ಮನೆತನ
ನಂದ ಮನೆತನ
ಮೌರ್ಯ ಮನೆತನ
ಗುಪ್ತ ಮನೆತನ

ಶಿಸುನಾಗ ಮನೆತನದ ಅರಸರು - ಬಿಂಬಸಾರ ,ಅಜಾತಶತೃ
ಮಹಾ ಪದ್ಮನಂದ ಈ ವಂಶದ ಅರಸ - ನಂದ ಮನೆತನ
ಮಗಧದ ಾರಂಭದ ರಾಜಧಾನಿ - ರಾಜಗೃಹ
ಮಗಧದ ನಂತರದ ರಾಜಧಾನಿ - ಪಾಟಲಿಪುತ್ರ

ಮಗಧ ಸಾಮ್ರಾಜ್ಯದ ಏಳಿಗೆಗೆ ಕಾರಣವಾದ ಅಂಶಗಳು
ಮಹಾತ್ವಾಕಾಂಕ್ಷಿ ಅರಸರು
ಫಲಭರಿತ ಪ್ರದೇಶ
ಆಯಕಟ್ಟಿನ ಪ್ರದೇಶದಲ್ಲಿದ್ದ ರಾಜಧಾನಿ
ವಿಪುಲ ಖನಿಜ ಸಂಪತ್ತು
ಮಗಧ ಅರಸರ ಆರ್ಥಿಕ ನೀತಿ
ಅಪಾರ ಗಜದಳ
ಉದಾರ ಧಾರ್ಮಿಕ ನೀತಿ
ಮಗಧ ಅರಸರ ಆಕ್ರಮಣಕಾರಿ ಧೋರಣಿ
ಕೌಟಿಲ್ಯನ ತಂತ್ರ

ಮಗಧದಲ್ಲಿ 16 ಜನಪದ ಅಥವಾ ಗಣರಾಜ್ಯವನ್ನು ಸೋಲಿಸಿ ಮಗಧದಲ್ಲಿ ಒಂದು ಪ್ರಬಲ ಸೈನ್ಯ ಕಟ್ಟಿದವರು - ಹರ್ಯಂಕ ವಂಶದವರು
ಹರ್ಯಂಕ ವಂಶದ ಪ್ರಮುಖ ಅರಸರು - ಬಿಂಬಸಾರ ಹಾಗೂ ಅಜಾತಶತೃ
ಬಿಂಬಸಾರನ ಇನ್ನೋಂದು ಹೆಸರು - ಶ್ರೇಣಿಕ
ಮಗಧದ ಗಣ್ಯ ಹಾಗೂ ಸಾಂಸ್ಕೃತಿಕ ನಗರಗಳು - ವಾರಣಾಸಿ , ಶ್ರಾವಸ್ತಿ , ರಾಜಗೃಹ , ಗಿರಿವ್ರಜ , ಕೋಸಲ ,ಆವಂತಿ , ಹಾಗೂ ತಕ್ಷಶಿಲೆ
ಹರ್ಯಂಕರ ನಂತರ ಮಗಧವನ್ನು ಆಳಿದವರು - ನಂದವಂಶ
ನಂದ ವಂಶದ ಸ್ಥಾಪಕ - ಮಹಾ ಪದ್ಮನಂದ
ಮಗಧ ಸಾಮ್ರಾಜ್ಯದ ನಿಜವಾದ ಸ್ಥಾಪಕ - ಬಿಂಬಸಾರ
ಬಿಂಬಸಾರನ ಮಗನ ಹೆಸರು - ಅಜಾತಶತೃ
ಮಗಧದ ಪ್ರಸಿದ್ದ ಅರಸ - ಅಜಾತಶತೃ
ನಂದರ ಕೊನೆಯ ಅರಸ - ಧನನಂದ
ಮಗಧದ ಅಧಿಪತ್ಯವನ್ನು ಕೊನೆಗಾಣಿಸಿದವರು - ಚಂದ್ರಗುಪ್ತ ಮೌರ್ಯ

ಮೌರ್ಯ ಸಾಮ್ರಾಜ್ಯ
ಭಾರತದಲ್ಲಿ ಏಳಿಗೆಗೆ ಬಂದ ಸಾಮ್ರಾಜ್ಯಗಳಲ್ಲಿ ಮೊತ್ತ ಮೊದಲನೆಯ ಸಾಮ್ರಾಜ್ಯ - ಮಾರ್ಯ ಸಾಮ್ರಾಜ್ಯ
ಅನೇಕ ಸಣ್ಣ ರಾಜ್ಯಗಳನ್ನು ಒಟ್ಟುಗೂಡಿಸಿ ಏಕ ಚಕ್ರಾಧಿಪತ್ಯವನ್ನು ಸ್ಥಾಪಿಸಿದವರು - ಮೌರ್ಯರು
ಶಾಂತಿ, ಅಹಿಂಸೆ , ದಯ , ಧರ್ಮ , ನೀತಿ ಮೊದಲಾದ ಮಾನವೀಯ ಮೌಲ್ಯಗಳನ್ನು ಮೊದಲ ಭಾರಿಗೆ ಪ್ರಪಂಚಕ್ಕೆ ಪರಿಚಯಿಸಿದವರು - ಮೌರ್ಯರು
ಮೌರ್ಯರ ಕಾಲದ ಭಾರತದ ಇತಾಹಾಸದಲ್ಲಿ ಇತಿಹಾಸಕಾರರನ್ನು ಕತ್ತಲೆಯಿಂದ ಬೆಳಕಿನತ್ತ ಒಯ್ಯುವ ಪೂರ್ವಕಾಲ ಎಂದವರು - ವಿ.ಎ.ಸ್ಮಿತ್
ಮೌರ್ಯರ ರಾಜಧಾನಿ - ಪಾಟಲಿಪುತ್ರ
ಆಧಾರಗಳು

ಕೌಟಿಲ್ಯನ - ಅರ್ಥಶಾಸ್ತ್ರ
ಮೆಗಸ್ತಾನಿಸ್ ನ - ಇಂಡಿಕಾ
ವಿಶಾಖದತ್ತನ - ಮುದ್ರಾರಾಕ್ಷಸ
ಮೇಗಸ್ತಾನಿಸ್ ಈ ದೇಶದವನು - ಗ್ರೀಕ್ 

ಮೌರ್ಯರ ಮೂಲಗಳು
ಮೌರ್ಯ ಸಾಮ್ರಾಜ್ಯದ ಸ್ಥಾಪಕ - ಚಂದ್ರಗುಪ್ತ ಮೌರ್ಯ
ವಿಷ್ಣು ಪುರಾಣದ ಪ್ರಕಾರ ನಂದ ಅರಸನ ಪತ್ನಿ ಮುರ ಎಂಬುವಳ ಪುತ್ರ - ಚಂದ್ರಗುಪ್ತ ಮೌರ್ಯ
ಅರ್ಥಶಾಸ್ತ್ರ ಕೃತಿಯ ಕರ್ತೃ - ಕೌಟಿಲ್ಯ
ಕೌಟಿಲ್ಯನಿಗಿದ್ದ ಇನ್ನೇರಡು ಹೆಸರು - ಚಾಣಕ್ಯ ಮತ್ತು ವಿಷ್ಣುಗುಪ್ತ
ಕೌಟಿಲ್ಯನು ಅಧ್ಯಯನ ಮಾಡಿದ ವಿ.ವಿ.ನಿಲಯ - ತಕ್ಷಶಿಲ
ಚಂದ್ರಗುಪ್ತ ಮೌರ್ಯನನ್ನು ಅಧಿಕಾರದಲ್ಲಿ ಕೂರಿಸಿದವನು - ಕೌಟಿಲ್ಯ
ಕೌಟಿಲ್ಯ ಈ ಅರಸನ ಮಂತ್ರಿಯಾಗಿದ್ದ - ಚಂದ್ರಗುಪ್ತ ಮೌರ್ಯ
ಅರ್ಥಶಾಸ್ತ್ರ ಕೃತಿ ಈ ಭಾಷೆಯಲ್ಲಿ ಬರೆಯಲಾಗಿದೆ - ಸಂಸ್ಕೃತ
ಅರ್ಥಶಾಸ್ತ್ರ ಇದು - ಸಂಪೂರ್ಮ ರಾಜ್ಯಾಡಳಿತದವನ್ನು ಕುರಿತುದ್ದಾಗಿದೆ 
The Prime ಗ್ರಂಥದ ಕರ್ತೃ - ಮೆಕೆವೆಲ್ಲಿ
ಅರ್ಥಶಾಸ್ತ್ರ ಕೃತಿಯನ್ನು ಈ ಗ್ರಂಥಕ್ಕೆ ಹೋಲಿಸಲಾಗಿದೆ - ಮೆಕೆವೆಲ್ಲಿಯ ದ ಪ್ರೈಮ್
ಬಾರತದ ಮೆಕೆವೆಲ್ಲಿ ಎಂದು ಕರೆಯಲ್ಪಟ್ಟವರು - ಕೌಟಿಲ್ಯ
ಅರ್ಥಶಾಸ್ತ್ರ ಕೃತಿಯು - ಐವತ್ತು ಅಧ್ಯಯನಗಳನ್ನು ಹೊಂದಿದೆ

ಅರ್ಥಶಾಸ್ತ್ರದ ಪ್ರಮುಖ ಮೂರು ಭಾಗಗಳು
ರಾಜ ಅವನ ಸಮಿತಿ ಮತ್ತು ಸರಕಾರ ವಿವಧ ಶಾಖೆಗಳು
ಸಿವಿಲ್ ಮತ್ತು ಕ್ರಿಮಿನಲ್ ಕಾಯಿದೆ
ಅಂತರ ರಾಜ್ಯಗಳ ಕಾಯಿದೆ , ರಾಯಭಾರ ಮತ್ತು ಕದನ

ಚಂದ್ರಗುಪ್ತ ಮೌರ್ಯ
ಕೌಟಿಲ್ಯನನ್ನು ಕೂರೂಪಿ ಎಂದು ಹೊರ ಹಾಕಿದವರು - ಧನನಂದ
ಕೌಟಿಲ್ಯನ ಪ್ರಾರಂಭದ ವೃತ್ತಿ - ಧರ್ಮಶಾಲೆಯ ಅಧ್ಯಕ್ಷ
ಚಂದ್ರಗುಪ್ತ ಮೌರ್ಯನ ಪ್ರಾರಂಭದ ವೃತ್ತಿ ಜೀವನ - ದನ ಕಾಯುವವನು
ಚಂದ್ರಗುಪ್ತ ಮೌರ್ಯ ತರಭೇತಿ ಪಡೆದ ಶಾಲೆ - ತಕ್ಷಶಿಲೆ
ಚಂದ್ರಗುಪ್ತನಿಗೆ ತರಬೇತಿ ನೀಡಿದವನು - ಕೌಟಿಲ್ಯ
ಚಂದ್ರಗುಪ್ತ ಮೌರ್ಯನ ಏಳಿಗೆಯ ಅವಧಿಯಲ್ಲಿ ಭಾರತಕ್ಕೆ ಧಾಳಿ ಮಾಡಿದ ಮ್ಯಾಸಿಡೋನಿಯಾದ ದೊರೆ - ಅಲೆಗ್ಸಾಂಡರ್
ಅಲೆಗ್ಸಾಂಡರ್ ಗೆದ್ದ ಭಾರತದ ಪ್ತಾಂತ್ಯಕ್ಕೆ ದೊರೆಯಾಗಿ ಬಂದವನು - ಸೆಲ್ಯುಕಸ್
ಅಲೆಗ್ಸಾಂಡರ್ ನ ರಾಯಭಾರಿ ಸೇನಾಧಿಪತಿ - ಸೆಲ್ಯುಕಸ್ ನಿಕೆಟರ್
ಚಂದ್ರಗುಪ್ತ ಮೌರ್ಯನ ಆಸ್ಥಾನದಲ್ಲಿದ್ ಸೆಲ್ಯೂಕಸ್ ನ ರಾಯಭಾರಿ - ಮೆಗಸ್ತಾನಿಸ್
ಜೈನ ಗುರು ಭದ್ರಬಾಹುವಿನೊಂದಿಗೆ ದಕ್ಷಿಣದ ಶ್ರವಣಬೆಳಗೋಳದಲ್ಲಿ ಚಂದ್ರಗುಪ್ತ ಮೌರ್ಯನು ಕೈಗೊಂಡ ವ್ರತ - ಸಲ್ಲೇಖನ ವ್ರತ
ಉತ್ತರ ಭಾರತದಲ್ಲಿ ಕ್ಷಾಮದ ಕುರಿತು ಭವಿಷ್ಯ ನುಡಿದ ಜೈನ ಗುರು - ಭದ್ರಬಾಹು
ಚಂದ್ರಗುಪ್ತ ಮೌರ್ಯ ಮರಣ ಹೊಂದಿದ ವರ್ಷ - ಕ್ರಿ.ಪೂ.298
ಶ್ರವಣಬೆಳಗೊಳದಲ್ಲಿ ಚಂದ್ರಗುಪ್ತ ಬಸದಿಯ ನಿರ್ಮಾತೃ - ಚಂದ್ರಗುಪ್ತ ಮೌರ್ಯ
ಚಂದ್ರಗುಪ್ತ ಮೌರ್ಯ ಕೊನೆಯುಸಿರೆಳೆದ ಬೆಟ್ಟ - ಚಂದ್ರಗಿರಿ ಬೆಟ್ಟ
ಚಂದ್ರಗುಪ್ತ ಮೌರ್ಯನ ಮಗನ ಹೆಸರು - ಬಿಂದುಸಾರ
ಮೌರ್ಯರ ಶ್ರೇಷ್ಠ ಚಕ್ರವರ್ತಿ - ಅಶೋಕ
ಹರಿವಂಶ ಕೃತಿಯ ಕರ್ತೃ - ಜಿನಸೇನಾ
ಬೃಹತ್ ಕಥಾ ಕೋಶ ಕೃತಿಯ ಕರ್ತೃ - ಹರಿಷೇಣ
ಶ್ರವಣಬೆಳಗೋಳದ ಪ್ರಾಚೀನ ಹೆಸರು - ಕಾಥವಪುರಿ
ತಾರಾನಾಥ ಈ ದೇಶದ ಇತಿಹಾಸಕಾರ - ಟಿಬೆಟ್

ಅಶೋಕ
ಅಶೋಕನ ತಂದೆಯ ಹೆಸರು - ಬಿಂದುಸಾರ
ಅಧಿಕಾರವನ್ನು ಧರ್ಮದ ಕವಚದಿಂದ ಸುತ್ತಿಟ್ಟ ಮೌರ್ಯ ದೊರೆ - ಅಶೋಕ

ಆಧಾರಗಳು
ಅಶೋಕನ ಶಾಸನಗಳು ಈ ಲಿಪಿಯನ್ನು ಹೊಂದಿದೆ - ಬ್ರಾಹ್ಮಿಲಿಪಿ
ಅಶೋಕನ ಶಾಸನಗಳನ್ನು ಅರ್ಥೈಸಿ ವಿವರಣಿ ನೀಡಿದವರು - ಜೇಮ್ಸ್ ಪ್ರಿಸ್ಸೆಸ್
ಅಶೋಕನಿಗಿದ್ದ ಬಿರುದುಗಳು - ದೇವನಾಂಪ್ರಿಯ , ಪ್ರಿಯದರ್ಶಿ
ಮಸ್ಕಿ ಶಾಸನವನ್ನು ಶೋಧಿಸಿದ ವರ್ಷ - 1915
ಅಶೋಕನನ್ನು ಪ್ರಿಯದರ್ಶಿ ಅಶೋಕ ಎಂದು ಸಂಭೋದಿಸಿಲಾದ ಶಾಸನ - ಮಸ್ಕಿ ಶಾಸನ
ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ - ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನ
ನಿಟ್ಟೂರಿನ ಶಾಸನದ ರಚನಾಕಾರ - ಉಪಗುಪ್ತ
ನಿಟ್ಟೂರಿನ ಶಾಸನದ ಲಿಪಿಕಾರ - ಚಡಪ

ಅಶೋಕನ ಬಾಲ್ಯದ ಜೀವನ
ಅಶೋಕನ ಬಾಲ್ಯ ಜೀವನದ ಬಗೆಗೆ ಬೆಳಕು ಚೆಲ್ಲುವ ಬೌದ್ಧ ಗ್ರಂಥಗಳು - ದೀಪವಂಶ ಹಾಗೂ ಮಹಾ ವಂಶ
ಬಿಂದುಸಾರನ ಆಳ್ವಿಕೆಯಲ್ಲಿ ಅಶೋಕ ಈ ಪ್ರದೇಶದ ರಾಜ್ಯಪಾಲನಾಗಿದ್ದ - ಉಜ್ಜಯಿನಿ ಮತ್ತು ತಕ್ಷಶಿಲೆ
ಅಶೋಕನ ಸಂಸ್ಥಾನದ ಪಟ್ಟಧರಸಿ - ತಿಷ್ಷಮಿತ್ರೆ
ಅಶೋಕನು ಪ್ರೇಮ ವಿವಾಹ ಮಾಡಿಕೊಂಡ ಮಹಿಳೆ - ವಿದಿಶಾ ನಗರದ ಸುಪ್ರಸಿದ್ಧ ಶ್ರೇಷ್ಠಿಯ ಮಗಳಾದ - ಮಹಾದೇವಿ
ಅಶೋಕನ ಮಂತ್ರಿಯ ಹೆಸರು - ರಾಧಗುಪ್ತ
ಅಶೋಕನು ಸಿಂಹಾಸನಾ ರೂಢನಾದ ವರ್ಷ - ಕ್ರಿ.ಪೂ.269

ಅಶೋಕನ ದಿಗ್ವೀಜಯ
ಒರಿಸ್ಸಾದ ಪ್ರಾಚೀನ ಹೆಸರು - ಕಳಿಂಗ
ಅಶೋಕನು ನಡೆಸಿದ ಕೊನೆಯ ಯುದ್ಧ - ಕಳಿಂಗ ಯುದ್ಧ
ಕಳಿಂಗ ಯುದ್ಧ ನಡೆದ ಪ್ರದೇಶ - ಭುವನೇಶ್ವರದಿಂದ 150 ಕಿ.ಮೀ ಪ್ರದೇಶದಲ್ಲಿರುವ ಫೌಲಿ ಎಂಬಲ್ಲಿ ನಡೆಯಿತು
ಮೈಸೂರಿನ ಪ್ರಾಚೀನ ಹೆಸರು - ಮಹಿಷ ಮಂಡಳ

ಅಶೋಕ ಮತ್ತು ಬೌದ್ಧ ಧರ್ಮ
ಬೌದ್ಧಧರ್ಮ ಪ್ರಚಾರದಲ್ಲಿ ಅಗ್ರಗಣ್ಯ ಅರಸ - ಅಶೋಕ
ಪ್ರಪ್ರಥಮ ಬಾರಿಗೆ ಧರ್ಮದ ವಿಜಯವು ವಿದೇಶಗಳಲ್ಲಿ ಮೊಳಗಿದ್ದು - ್ಶೋಕನ ಕಾಲದಲ್ಲಿ
ಪಾಟಲಿಪುತ್ರದಲ್ಲಿ ಮೂರನೇ ಬೌದ್ಧ ಸಮ್ಮೇಳನ ನಡೆಸಿದವನು - ಅಶೋಕ
ಅಶೋಕನು ತೆರಿಗೆಯಿಂದ ಮಾಪಿ ಮಾಡಿದ ಪ್ರದೇಶ - ಲುಂಬಿಣಿ

ಅಶೋಕನ ಆಡಳಿತ
ಅಶೋಕನ ರಾಜ್ಯವನ್ನ ಈ ಹೆಸರಿನಿಂದ ಕರೆಯುವರು - ಧರ್ಮರಾಜ್ಯ ಅಥವಾ ಸುಖೀರಾಜ್ಯ
ಧರ್ಮವನ್ನು ಹರಡುವುದ ಮೂಲಕ ಭಾರತವನ್ನು ಏಕಾಧಿಪತ್ಯಕ್ಕೆ ಒಳಪಡಿಸಿದ ಅರಸ - ಅಶೋಕ
ಕಾನ್ ಸ್ಟಂಟೈನ್ ಅಥವಾ ಚಾರ್ಲ್ ಮನ್ ಅಥವಾ ನೆಪೋಲಿಯನ್ ಗೆ ಹೋಲಿಸಲಾದ ಅರಸ - ಅಶೋಕ
ವಿಜಯದಿಂದ ವೈರಾಗ್ಯಕ್ಕೆ ಬಂದ ಏಕಮೇವ ಅಧ್ವೀತಿಯ ಸಾಮ್ರಾಟ - ಅಶೋಕ

ಮೌರ್ಯರ ಪಥನ
ಮೌರ್ಯರ ಕೊನೆಯ ಅರಸ - ಬೃಹದ್ರತ
ಬೃಹದ್ರತನನ್ನ ಕೊಲೆಗೈದ ಶುಂಗ ಅರಸ - ಪುಷ್ಯಮಿತ್ರ ಶುಂಗ
ಮೌರ್ಯರ ಅಧಿಕಾರವನ್ನು ಕೊನೆಗೊಳಿಸಿದವರು - ಶುಂಗರು

ಮೌರ್ಯ ವಂಶಾವಳಿ
ಚಂದ್ರಗುಪ್ತ ಮೌರ್ಯ - ಕ್ರಿ.ಪೂ .320 -298
ಬಿಂದುಸಾರ - ಕ್ರಿ.ಪೂ.298 – 273
ಅಶೋಕ - ಕ್ರಿ.ಪೂ. 273 – 232
ದಶರಥ ಮೌರ್ಯ - ಕ್ರಿ.ಪೂ. 232 – 226
ಸಂಪ್ರತಿ - ಕ್ರಿ.ಪೂ. 226 – 215
ಕಾಲಶೋಕ - ಕ್ರಿ.ಪೂ.215 – 202
ಜೀವವರ್ಮ - ಕ್ರಿ.ಪೂ. 202 – 195
ಸುಧನ್ಯ ಮೌರ್ಯ - ಕ್ರಿ.ಪೂ. 195 – 181
ಬೃಹದ್ರತ ಮೌರ್ಯ - ಕ್ರಿ.ಪೂ. 181 – 180

ಕಲೆ ಮತ್ತು ವಾಸ್ತುಶಿಲ್ಪಕ್ಕೆ ಮೌರ್ಯರ ಕೊಡುಗೆ

ಅಶೋಕನು ತನ್ನ ಅಧಿಕಾರವದಿಯಲ್ಲಿ ನಿರ್ಮಿಸಿದ ಸ್ಥೂಪಗಳ ಸಂಖ್ಯೆ - 84000
ಸ್ತೂಪಗಳನ್ನು - ಕಲ್ಲು ಮತ್ತು ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ
ಸಾಂಚಿಯ ಸ್ತೂಪದ ಸ್ಥಾಪಕ - ಅಶೋಕ
ಸಾಂಚಿಯ ಸ್ತೂಪ ಪ್ರಸ್ತುತ ಈ ರಾಜ್ಯದಲ್ಲಿದೆ - ಮಧ್ಯಪ್ರದೇಶ
ಗೌತಮನ ಜೀವನಕ್ಕೆ ಸಂಬಂಧಿಸಿದ ಜಾತಕ ಕತೆಗಳ ದೃಶ್ಯವಳಿಯನ್ನು ಹೊಂದಿರುವ ಸ್ತೂಪದ ಹೆಸರು - ಬಾರ್ಹುತ ಸ್ತೂಪ
ಬಿಹಾರದ ರಾಜಧಾನಿ - ಪಾಟ್ನ
ಪಾಟ್ನದ ಹಿಂದಿನ ಹೆಸರು - ಪಾಟಲಿಪುತ್ರ
ಪಾಟಲಿಪುತ್ರಕ್ಕೆ ಬೇಟಿ ನೀಡಿದ ಗ್ರಕ್ ರಾಯಭಾರಿ - ಮೆಗಾಸ್ತಾನಿಸ್
ಕ್ರಿ.ಪೂ. 4ನೇ ಶತಮಾನದ ಕೊನೆಯಲ್ಲಿ ಭಾರತಕ್ಕೆ ಬಂದಿದ್ದು ಚೀನಿ ಪ್ರವಾಸಿ - ಫಾಹಿಯಾನ್
ಅಶೋಕನ ಕಾಲದ ಪ್ರಮುಖ ಗುಹಾಲಾಯಗಳು - ಸುಧಾಮ ಮತ್ತು ಕರ್ಣಚಾಪರ್
ಅಶೋಕನು ನಿರ್ಮಿಸಿದ ಸ್ತಂಭಗಳಲ್ಲಿ ಪ್ರಮುಖವಾದುದು - ಸಾರನಾಥದ ಸ್ತಂಭ

Extra Tips
ಭೀಮ ಮತ್ತು ವೇದಾವತಿ ನದಿಗಳ ನಡುವಣ ಪ್ರದೇಶ - ಕುಂತಲ
ಅಶೋಕನ ಕಾಲದ ಮಸ್ಕಿ ಶಾಸನದಲ್ಲಿರುವ ಲಿಪಿ - ಬ್ರಾಹ್ಮಿ
ಅಶೋಕನ ಮಸ್ಕಿ ಶಾಸನ ಈ ಭಾಷೆಯಲ್ಲಿ ಬರೆಯಲಾಗಿದೆ - ಪ್ರಾಕೃತ
ಅಶೋಕನನ್ನು ದೇವನಾಂಪ್ರಿಯ ಎಂದು ಸಂಭೋಧಿಸಿದ ಶಾಸನ - ಮಸ್ಕಿ
ಅಶೋಕನ ಕಾಲದ ರಾಜ್ಯದ ಅಧಿಕಾರಿಗಳು - ಧರ್ಮಾ ಮಹಾ ಮಾತ್ರರು
ಕೌಟಿಲ್ಯನ ಅರ್ಥಶಾಸ್ತ್ರದ ಮತ್ತೋಂದು ಹೆಸರು - - ಕೂಟನೀತಿಶಾಸ್ತ್ರ
ಕೌಟಿಲ್ಯನ ಅರಥಶಾಸ್ತ್ರವನ್ನು ಬೆಳಕಿದೆ ತಂದವರು - ಮೈಸೂರಿನ ಓರಿಯಂಟಲ್ ಲೈಬ್ರರಿಯ ಕ್ಯೂರೇಟರ್ ಆಗಿದ್ದ ಶ್ಯಾಮಾಶಾಸ್ತ್ರಿ
ಕೌಟಿಲ್ಯನ ಅರ್ಥಶಾಸ್ತ್ರ ಬೆಳಕಿಗೆ ಬಂದ ವರ್ಷ - 1909
ಇಂಡಿಕಾದ ಅಳಿದುಳಿದ ಚೂರುಗಳನ್ನು ಕೂಡಿಸಿ ನಮಗೆ ಅದರ ಪೂರ್ಣರ್ಥ ಒದಗಿಸಿವರು - ಡೈಡೋರಸ್
ಮಸ್ಕಿ ಶಾಸನವನ್ನು ಶೋಧಿಸಲಾದ ವರ್ಷ - 1915
ಅಲೆಗ್ಸಾಂಡರ್ ಕಾಲವಾದ ಪ್ರದೇಶ - ಬ್ಯಾಬಿಲಾನ್ .ಕ್ರಿ.ಪೂ. 323
ಅಹನಾನೂರು ಕೃತಿಯ ಕರ್ತೃ - ತಮಿಳು ಕವಿ , ಮಾಮುಲ್ನಾರ್
ಅಶೋಕನಿಗೆ ಬೌದ್ಧ ಧರ್ಮವನ್ನು ಧಾರೆ ಎರೆದ ಭಿಕ್ಷು - ಉಪಗುಪ್ತ
ಅಶೋಕನು ತನ್ನ ಆಡಳಿತದಲ್ಲಿ ಆರಂಭಿಸಿದ ಹೊಸ ಶಾಖೆ - ಧರ್ಮಾಮಹಾ ಮಾತೃ
ಅಶೋಕನ ಕಾಲದ ಕಂದಾಯ ಅಧಿಕಾರಿಗಳ ಹೆಸರು - ರಜ್ಜುಕ
ರಜ್ಜುಕರ ಮೇಲ್ವಿಚಾರಣಿಗೆ ನೇಮಕವಾಗಿದ್ದ ಅಧಿಕಾರಿಗಳು - ಯಾತ್ರ
ಮೌರ್ಯರ ಕಾಲದ ರಾಜ್ಯದ ಆಡಳಿತದ ಮುಖಂಡ - ರಾಜ
ಮೌರ್ಯರ ಆಡಳಿತದಲ್ಲಿ ರಾಜರಿಗೆ ಸಲಹೆಯನ್ನು ನೀಡುತ್ತಿದ್ದವರು - ಅಮಾತ್ಯರು
ಸರ್ವಲೋಹಹಿತ ಎಂಬ ಉದಾತ್ತ ದ್ಯೇಯ ಹೊಂದಿದ್ದವರು - ಅಶೋಕ
ಮೌರ್ಯರ ಆಡಳಿತದಲ್ಲಿ ಸಚಿವರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಅಮಾತ್ಯರು
ಅಶೋಕನ ಕಾಲದಲ್ಲಿ ಸಚಿವರನ್ನು ಈ ಹೆಸರಿನಿಂದ ಕರೆಯಲಾಗಿದೆ - ಧರ್ಮಮಹಾಮಾತ್ರರು
ಮೌರ್ಯರ ಹಣಕಾಸು ವಿಭಾಗದ ಅಧಿಕಾರಿ - ಕೋಶಾಧ್ಯಕ್ಷ
ಕೃಷಿ ವಿಭಾಗದ ಅಧ್ಯಕ್ಷನ ಹೆಸರು - ಸೀತಾಧ್ಯಕ್ಷ
ಅಬಕಾರಿ ವಿಭಾಗದ ಅಧ್ಯಕ್ಷ - ಸುರಾಧ್ಯಕ್ಷ
ಸೇನಾ ವಿಭಾಗದ ಅಧ್ಯಕ್ಷ - ಬಲಾಧ್ಯಕ್ಷ
ಲೆಕ್ಕ ಹಾಗೂ ತನಿಖೆ ವಿಭಾಗದ ಮುಖ್ಯಸ್ಥ - ಅಷ್ಯಪಟಲಾಧ್ಯಕ್ಷ
ಕೋಶದ ವಿಭಾಗದ ಮುಖ್ಯಸ್ಥ ಹೆಸರು - ಸನ್ಕಿದಾತ
ಉಗ್ರಾಣ ಮುಖ್ಯಸ್ಥನ ಹೆಸರು - ಸಮೂರ್ತ
ನ್ಯದ ಮುಖ್ಯಸ್ಥ - ಸೇನಾಪತಿ
ಕೋಟೆ ಕೊತ್ತಲದ ಅಧಿಕಾರಿ - ಮರ್ಗಪಾಲ

ಚಂದ್ರಗುಪ್ತ ಮೌರ್ಯನ ಯುದ್ಧ ಕಛೇರಿಯಲ್ಲಿದ್ದ 6 ಮಂಡಲಗಳು
ಒಂದನೇಮಂಡಲ - ನೌಕಡಳಿತ
2 ನೇ ಮಂಡಲ - ಸಾರಿಗೆ ಸಂಪರ್ಕ , ಮನರಂಡನೆ ವ್ಯವಸ್ಥೆ
3 ನೇ ಮಂಡಲ - ಕಾಲ್ದಳ
4 ನೇ ಮಂಡಲ - ಅಶ್ವದಳ
5 ನೇ ಮಂಡಲ - ರಥದಳ
6 ನೇ ಮಂಡಲ - ಗಜದಳ

ಮೌರ್ಯರ ಕಾಲದ ಎರಡು ನ್ಯಾಯಾಲಯಗಳು - ಧರ್ಮಸ್ಥೇಯ ಹಾಗೂ ಕಂಟಕ ಶೋಧನಾ
ಇಂದಿನ ಸಿವಿಲ್ ನ್ಯಾಯಾಲಯವನ್ನು ಹೋಲುತ್ತಿದ್ದ ನ್ಯಾಯಾಲಯ - ಧರ್ಮಸ್ಥೇಯ
ಇಂದಿನ ಕ್ರಿಮಿನಲ್ ನ್ಯಾಯಾಲಯವನ್ನು ಹೋಲುವ ನ್ಯಾಯಾಲಯ - ಕಂಟಕ ಶೋಧನಾ
ಸೌರಾಷ್ಟ್ರದ ಇನ್ನೋಂದು ಹೆಸರು - ಕಾಥೆವಾಡ
ಮೌರ್ಯರ ಕಾಲದಲ್ಲಿ ಜಿಲ್ಲೆಗಳನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಅಹಾರ ಅಥವಾ ವಿಷಯ
ಸ್ಟ್ರಾಬೋ ಈ ದೇಶದ ವಿದ್ವಾಂಸ - ಗ್ರೀಕ್
ಮೌರ್ಯರ ರಾಜ್ಯಾಡಳಿತ ಕ್ಷೇತ್ರದಲ್ಲಿ ಕಂಡು ಬರುವ ಪ್ರಥಮ ಘಟಕ - ಗ್ರಾಮ
ಗ್ರಾಮಗಳ ಮುಖಂಡರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಗ್ರಾಮಿಕ
ಗ್ರಾಮೀಕರ ಮೇಲಾಧಿಕಾರಿಯ ಹೆಸರು - ಗೋಪ
ಗೋಪನ ಮೇಲಾಧಿಕಾರಿಯ ಹೆಸರು - ಸ್ಥಾನಿಕ
ನಗರದ ಮುಖಂಡನ ಹೆಸರು - ನಗರಿಕ
ಹರಪ್ಪ ಸಂಸ್ಕೃತಿಯ ನಂತರ ಕಲೆ ಮತ್ತು ವಾಸ್ತು ಶಿಲ್ಪಕ್ಕೆ ಯೋಗ್ಯ ಕಾಲ - ಮೌರ್ಯರ ಕಾಲ
ಸಾಂಚಿ ಪದದ ಅರ್ಥ - ಶಾಂತಿಯ ಸ್ಥ ಳ
ಮೌರ್ಯರ ಪತನಾ ನಂತರ ದಕ್ಷಿಣ ಬಾರತದಲ್ಲಿ ಅಧಿಪತ್ಯಕ್ಕೆ ಬಂದವರು - ಶಾತವಾಹನರು
ಪ್ರಾಚೀನ ಭಾರತದ ಪ್ರಥಮ ಐತಿಹಾಸಿಕ ಸಾಮ್ರಾಜ್ಯ - ಮೌರ್ಯ ಸಾಮ್ರಾಜ್ಯ
ಪ್ರಾಚೀನ ಭಾರತದ ಅತ್ಯಂತ ದೊಡ್ಡ ಸಾಮ್ರಾಜ್ಯ - ಮೌರ್ಯ ಸಾಮ್ರಾಜ್ಯ
ಮೌರ್ಯರ ರಾಜ ಲಾಂಛನ - ಧರ್ಮಚಕ್ರ
ಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ - ಅಶೋಕ
ಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ - ಬ್ರಾಹ್ಮಿ ಹಾಗೂ ಖರೋಷ್ಠಿ
ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ - 13 ನೇ ಶಿಲಾ ಶಾಸನ
ಸುವರ್ಣಗಿರಿಯ ಇಂದಿನ ಹೆಸರು - ಕನಕಗಿರಿ ( ರಾಯಚೂರು ಜಿಲ್ಲೆ )
ಇಸಿಲದ ಇಂದಿನ ಹೆಸರು - ಬ್ರಹ್ಮಗಿರಿ ( ಚಿತ್ರದುರ್ಗ ಜಿಲ್ಲೆ )
ಚಂದ್ರಗುಪ್ತ ಮೌರ್ಯನು ಈತನನ್ನು ಕೊಂದು ಅಧಿಕಾರ ವಹಿಸಿಕೊಂಡನು - ನಂದರ ದೊರೆ ಧನನಂದ
ಭಾರತದ ಪ್ರಥಮ ಹಿಂದೂ ಸಾಮ್ರಾಜ್ಯದ ನಿರ್ಮಾಪಕ - ಚಂದ್ರಗುಪ್ತ ಮೌರ್ಯ
ಮಹಾಶಯ ಅಥವಾ The Great ಎಂದು ಕರೆಸಿಕೊಂಡ ಮೌರ್ಯ ದೊರೆ - ಅಶೋಕ
ಅಶೋಕನು ಸಿಂಹಾಸನಕ್ಕ ಬಂದಿದ್ದು - ಕ್ರಿ.ಪೂ.269 ರಲ್ಲಿ
ಕಳಿಂಗಾ ಯುದ್ಧದ ಸಮಯ ಕಳಿಂಗವನ್ನು ಆಳುತ್ತಿದ್ದ ಅರಸ - ಶುದ್ಧ ಧರ್ಮ
3 ನೇ ಬೌದ್ಧ ಸಮ್ಮೇಳನದ ಅಧ್ಯಕ್ಷ - ಮೊಗ್ಗಲಿಪುತ್ರ
ದಾರ್ಶನಿಕ ದೊರೆ ಎಂದು ಹೆಸರುವಾಸಿಯಾದ ದೊರೆ - ಅಶೋಕ
ಅಶೋಕನ ಕಾಲದಲ್ಲಿ ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತವಾಗಿದ್ದ ಪ್ರಾಚೀನ ನಗರ - ಪಾಟಲಿಪುತ್ರ
ಪ್ರಿಯದರ್ಶಿ ,ರಾಜರ್ಷಿ ಎಂದು ಹೆಸರನ್ನು ಪಡೆದ ಮೌರ್ಯರ ಅರಸ - ಅಶೋಕ
ಭಾರತದ ಪ್ರಥಮ ರಾಷ್ಟ್ರೀಯ ರಾಜ - ಅಶೋಕ
ಭಾರತದ ದ್ವೀತಿಯ ಬುದ್ಧ ಎಂದು ಕರೆಯಲ್ಪಟ್ಟವರು - ಅಶೋಕ
ಭಾರತದಲ್ಲಿ ದಕ್ಷ ಕೇಂದ್ರಿಕೃತ ಆಡಳಿತ ಪದ್ಧತಿಗೆ ಭದ್ರ ಬುನಾದಿಯನ್ನು ಹಾಕಿದವರು - ಮೌರ್ಯರು
ಮೌರ್ಯರ ಆಡಳಿತ ತಿಳಿಯಲು ಪ್ರಮುಖ ಆಧಾರಗಳು - ಕೌಟಿಲ್ಯನ ಅರ್ಥಶಾಸ್ತ್ರ ಹಾಗೂ ಮೆಗಸ್ತನೀಸ್ ನ ಇಂಡಿಕಾ ಗ್ರಂಥ
ರಾಜನಿಗೆ ಆಡಳಿತದಲ್ಲಿ ಸಲಹೆಯನ್ನು ನೀಡಲು ಇದ್ಧ ಸಲಹಾ ಸಮಿತಿಯ ಹೆಸರು - ಮಂತ್ರಿಪರಿಷತ್
ಮೌರ್ಯರು ಮಂತ್ರಿಗಳನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಅಮಾತ್ಯರು
ಮೌರ್ಯರ ಕಾಲಾವಧಿಯಲ್ಲಿ ಮೌರ್ಯರ ಮಂತ್ರಿಗಳಿದ್ದು ವಾರ್ಷಿಕ ವೇತನ - 48000 ಪಣ
ವಿವಿಧ ಇಲಾಖೆಗಳ ಆಡಲಿತ ಮುಖ್ಯಸ್ಥ - ಅಧ್ಯಕ್ಷ
ಮೌರ್ಯರ ಕಾಲವದಲ್ಲಿ ನಗರ ಮತ್ತು ಗ್ರಾಮಗಳಲ್ಲಿ ನ್ಯಾಯದಾನ ಮಾಡುತ್ತಿದ್ದವರು - ರಾಜುಕರು ಮತ್ತು ಮಹಾ ಮಾತ್ಯರು
ಮೌರ್ಯರ ಗ್ರಾಮ ಮಟ್ಟದಲ್ಲಿ ನ್ಯಾಯದಾನ ಮಾಡುತ್ತಿದ್ದವರು - ಪಂಚರು
ಮೌರ್ಯರ ಕಂದಾಯ ಸಂಗ್ರಹಾಧಿಕಾರಿಗಳು - ರಾಜುಕ , ಸಮಹರ್ತ ಹಾಗೂ ಸನ್ನಿದತರು
ಗಿರ್ನಾರದಲ್ಲಿ ಸುದರ್ಶನ ಎಂಬ ಸರೋವರವನ್ನು ನಿರ್ಮಿಸಿದವನು - ಚಂದ್ರಗುಪ್ತ ಮೌರ್ಯ
ಕೌಟಿಲ್ಯನು ಗೂಢಾಚಾರರನ್ನು ಈ ಹೆಸರಿನಿಂದ ಕರೆದಿದ್ದಾನೆ - ಗುದಪುರುಷರು
ಪ್ಲೀನಿ ಈ ದೇಶದ ವಿದ್ವಾಂಸ - ರೋಮನ್
ಮೌರ್ಯರು ಬಳಸುತ್ತಿದ್ದ ಯುದ್ಧ ತಂತ್ರ - ಕೂಟಯುದ್ಧ ತಂತ್ರ
ಪ್ರಪಂಚದಲ್ಲಿ ಮೊಟ್ಟ ಮೊದಲು ಜನಗಣತಿಯನ್ನು ಆರಂಭಿಸಿದ್ದು - ಕ್ರಿ.ಪೂ. 6 ನೇ ಶತಮಾನದಲ್ಲಿ
ಕ್ರಿ.ಪೂ.6 ನೇ ಶತಮಾನದಲ್ಲಿ ಮೊಟ್ಟ ಮೊದಲ ಜನಗಣತಿಯನ್ನು ಆಂಭಿಸಿದ ದೇಶ - ರೋಮ್
ಪ್ರಪಂಚದಲ್ಲಿ ಮೊಟ್ಟ ಮೊದಲು ಜನಗಣತಿಯನ್ನು ಆರಂಭಿಸಿದ ದೊರೆ - ರೋಮ್ ದೊರೆ ಸೆರ್ವಿಯನ್
ಪ್ರಪಂಚದಲ್ಲಿ ಜನಗಣತಿಯನ್ನು ಆರಂಭಿಸಿದ ಎರಡನೇ ದೇಶ - ಭಾರತ
ಪಾಟಲಿಪುತ್ರದ ಹಾಗೇ ನಗರಾಡಳಿತ ಹೊಂದಿದ್ದ ನಗರಗಲಳು - ತಕ್ಷಶಿಲಾ , ಉಜ್ಜಯಿನಿ

ಮೌರ್ಯರ ಪೌರಾಡಳಿತ ಮಂಡಳಿಗಳು
ಕೈಗಾರಿಕ ಮಂಡಳಿ
ವಿದೇಶಿಯರ ಮಂಡಳಿ
ಜನಗಣತಿ ದಾಖಾಲಾತಿ ಮಂಡಳಿ
ಅಳತೆ ಮತ್ತು ತೂಕ ಮಂಡಳಿ
ಸಿದ್ಧ ವಸ್ತುಗಳ ಮಂಡಳಿ
ತೆರಿಗೆ ಮಂಡಳಿ

ನಗರದಲ್ಲಿ ಮಾರುವ ವಸ್ತುಗಳ ಮೇಲೆ ಮೌರ್ಯರು ವಿಧಿಸುತ್ತಿದ್ದ ತೆರಿಗೆಯ ಹೆಸರು - ತೈತ್ಸ್
ಮೌರ್ಯರ ಕಾಲದ ಜಿಲ್ಲಾಧಿಕಾರಿ - ಸಮಹರ್ತಿ
ಶಿಲೆಯಿಂದ ವಾಸ್ತುಶಿಲ್ಪ ರಚಿಸಿದ ಮೊದಲಿಗರು - ಮೌರ್ಯರು
ಈ ಅರಸನ ಕಾಲದಲ್ಲಿ ಮೊಟ್ಟ ಮೊದಲು ಮರದ ಬದಲಿಗೆ ಕಲ್ಲನ್ನು ವಾಸ್ತುಶಿಲ್ಪಕ್ಕೆ ಬಳಸಲಾಯಿತು - ಅಶೋಕ
ಬುದ್ಧನ ಅವಶೇಷಗಳ ಮೇಲೆ ನಿರಮಿಸಿರುವ ಸ್ಮಾರಕಗಳು - ಸ್ತೂಪಗಳು
ಪಾಟಲಿ ಪುತ್ರದಲ್ಲಿ ವಿಶ್ವವಿಖ್ಯಾತಯನ್ನು ಪಡೆದ ಅರಮನೆ - ಚಂದ್ರಗುಪ್ತನ ಅರಮನೆ
ಮೌರ್ಯರ ಶಿಲ್ಪಕಲಾ ಚಾತುರ್ಯಕ್ಕೆ ಉತ್ತಮ ನಿದರ್ಶನ - ಸ್ತಂಭಗಳು
ಏಕಶಿಲೆಯಿಂದ ನಿರಮಾಣ ಮಾಡಿದ ಕಲ್ಲಿನ ಕಂಬಗಳು - ಸ್ತಂಭಗಳು
ಭಾರತೀಯತೆಯ ಸಾರಸಂಗ್ರಹವಾದ ಮೌರ್ಯರ ವಾಸ್ತುಶಿಲ್ಪ ಕೊಡುಗೆ - ಸಾರನಾಥದ ಅಶೋಕ ಸ್ತಂಭ
Oxford History of India ಕೃತಿಯ ಕರ್ತೃ - ವಿ.ಎ.ಸ್ಮಿತ್
ಬುದ್ಧ ಹಾಗೂ ಮಹಾವೀರ ಜನಿಸಿದ ಪ್ರದೇಶ - ಮಗಧ
ಮಗಧ ಪ್ರದೇಶವು ಇಂದಿನ ಈ ಬಾಗದಲ್ಲಿದೆ - ಬಿಹಾರ
ನಂದ ವಂಶದ ನಂತರ ಮಗಧದಲ್ಲಿ ಆಳ್ವಿಕೆಗೆ ಬಂದವರು - ಮೌರ್ಯರು
ಮೌರ್ಯ ಸಂತತಿಯ ಗಣ್ಯ ವ್ಯಕ್ತಿಗಳು - ಚಂದ್ರಗುಪ್ತ ಮೌರ್ಯ ಮತ್ತು ಅಶೋಕ
ಜೈನಧರ್ಮವನ್ನು ಸ್ವೀಕರಿಸಿದ ಮೌರ್ಯ ದೊರೆ - ಚಂದ್ರಗುಪ್ತ ಮೌರ್ಯ
ಗ್ರೀಕರ ಧಾಳಿಯಿಂದ ಅಸ್ತವ್ಯಸ್ಥಗೊಂಡ ಪ್ರದೇಶ - ಪಂಜಾಬ್
ಚಂದ್ರಗುಪ್ತ ಮೌರ್ಯ ಈ ಪ್ರದೇಶವನ್ನು ಗೊದ್ದುಕೊಂಡು ತನ್ನ ಮೊದಲ ಸಾಹಸಿ ಜೀವನ ಆರಂಭಿಸಿದ - ಪಂಜಾಬ್
ಸೌರಾಷ್ಟ್ರದಲ್ಲಿ ಸುದರ್ಶನ ಎಂಬ ಸರೋವರವನ್ನು ನಿರ್ಮಿಸಿದ ಚಂದ್ರಗುಪ್ತ ಮೌರ್ಯನ ಅಧಿಕಾರಿ - ಪುಷ್ಯಗುಪ್ತ
ಪ್ರೀತಿಯ ಮೂಲಕ ವಿಜಯ ಸಾಧಿಸಿದ ನವಯುಗದ ಪ್ರವರ್ತಕ - ಅಶೋಕ
ಮೌರ್ಯರ ಕಾಲದಲ್ಲಿ ಸಾರ್ವಜನಿಕ ಹಿತ ಗಮನಿಸುವ ಅದಿಕಾರಿಯನ್ನು ಈ ಹೆಸರಿನಿಂದ ಕರೆಯುವರು - ವಜ್ರಭೂಮಿಕ
ಅಶೋಕನ ಕಾಲದಲ್ಲಿ ಪ್ರಾಂತ್ಯಗಳ ಅಧಿಕಾರಿ - ಕುಮಾರ
ಪ್ರಾಂತಗಳ ಕೆಳಗಿದ್ ಮೌರ್ಯರ ಆಡಳಿತ ಪ್ರದೇಶ - ಜನಪದ
ಜನಪದವನ್ನು ನೋಡಿಕೊಳ್ಳುತ್ತಿದ್ದ ಅಧಿಕಾರಿ - ಸಮಹರತೃ
ಮೌರ್ಯರ ಕಾಲದಲ್ಲಿ ಕೈಗಾರಿಕೆಗಳ ಮೇಲ್ವಿಚಾರಣಿಯನ್ನು ನೋಡಿಕೊಳ್ಳುತ್ತಿದ್ದ ್ಧಿಕಾರಿ - ಸೂತ್ರಧ್ಯಕ್ಷ
ಭಾರತದಲ್ಲಿ ಮರದ ಮೇಲೆ ಉಣ್ಣಿ ಬೆಳೆಯುತ್ತದೆ ಎಂದು ಹೇಳಿದವರು - ಹೆರಡೋಟಸ್
ಮೌರ್ಯ ಸಾಮ್ರಾಜ್ಯದ ಅವನತಿಗೆ ಕಾರಣ
ಅರಸು ಮಕ್ಕಳಲ್ಲಿದ್ ಪ್ರತ್ಯೇಕತಾ ಭಾವನೆ
ಭಿನ್ನತೆಗಳಿಂದ ಕೂಡಿದ್ದ ಸಾಮ್ರಾಜ್ಯ
ದೂರದ ಪ್ರಾಂತ್ಯಕ್ಕೆ ಸಾರಿಗೆ ಸಂಪರ್ಕ ಕೊರತೆ
ಅತಿಯಾದ ಕೇಂದ್ರಿಕರಣ
ಅಶೋಕನು ಯುದ್ಧಗಳ ಕಡೆಗೆ ಗಮನ ಹರಿಸದಿದ್ದದ್ದು
ಅಶೋಕನು ಬೌದ್ಧ ಪರ ಧೋರಣಿ
ದುರ್ಬಲ ಹಾಗೂ ಅದಕ್ಷ ಉತ್ತರಾಧಿಕಾರಿಗಳು

ಸಲ್ಲೇಖನಾ ವ್ರತದ ಮೂಲಕ ತನ್ನ ್ಂತ್ಯವನ್ನು ಕಂಡುಕೊಂಡ ಮೊದಲ ಚಕ್ರವರ್ತಿ - ಚಂದ್ರಗುಪ್ತ ಮೌರ್ಯ
ಅಮಿತ್ರ ಘಾತ ಅಥವಾ ಶತೃಗಳ ಸಂಹಾರಕ ಎಂದು ಕರೆಯಲ್ಪಟ್ಟ ಅರಸ - ಚಂದ್ರಗುಪ್ತ ಮೌರ್ಯ ( ಬಿಂದುಸಾರ )
ಬಿಂದೂಸಾರನ ಆಸ್ಥಾನಕ್ಕೆ ಬಂದಿದ್ದ ಈಜಿಪ್ಟ್ ನ ರಾಯಭಾರಿ - ಡಿಯೋನಿಯಸ್
ಪ್ರಿಯದರ್ಶಿ ರಾಜ ಎಂದು ಕರೆಸಿಕೊಂಡವನು - ಅಶೋಕ
ಪ್ರಿಯದರ್ಶಿ ರಾಜ ಪದದ ಅರ್ಥ - ಆನಂದ ದಾಯಕ ರಾಜ
ಅಶೋಕನ ಕಾಲದ ಧರ್ಮ ಪ್ರಚಾರಕರು
ಮಜ್ಜಂಟಿಕ - ಕಾಶ್ಮೀರ ಮತ್ತು ಗಾಂಧಾರ
ಮಜ್ಜಮ - ಹಿಮಾಲಯ ದೇಶ
ಮಹಾ ರಕ್ಷಿತ - ಗ್ರೀಕ್ ದೇಶ
ಮಹಾ ಧರ್ಮರಕ್ಷಿತ - ಮಹಾರಾಷ್ಟ್ರ
ಮಹಾದೇವ - ಮಹಿಷಮಂಡಲ ( ಮೈಸೂರು )
ರಕ್ಷಿತ - ವನವಾಸಿ ( ಉತ್ತರ ಕನ್ನಡ )
ಸೋನ ಮತ್ತು ಉತ್ತರ - ಬರ್ಮಾ ( ದೂರ ಪ್ರಾಚ್ಯ )
ಮಹೇಂದ್ರ ಮತ್ತು ಸಂಘಮಿತ್ರೆ - ಶ್ರೀಲಂಕಾ ( ಸಿಲೋನ್ , ಸಿಂಹಳ )


ಮೌರ್ಯರ ಸಾಮ್ರಾಜ್ಯದ ಸಪ್ತಾಂಗದ ಒಂದು ಅಂಗ - ಅರಸ
ಮೌರ್ಯರ ರಾಜ್ಯದ ಕಂದಾಯ ಮೂಲ - ಭೂಕಂದಾಯ
ಮೌರ್ಯರ ಆಡಲಿತದಲ್ಲಿನ ಶ್ರೇಣಿಪದ್ಧತಿಯನ್ನು ಈ ಹೆಸರಿನಿಂದ ಕರೆಯುವರು - ಗಿಲ್ಡ್
ಗಿಲ್ಡ್ ಗಳ ಮೇಲೆ ಹಿಡಿತವನ್ನು ಸಾಧಿಸಿದವನು - ಮಹಾಶೆಟ್ಟಿ
ಮೌರ್ಯರ ವಾಣಿಜ್ಯದ ಮೇಲ್ವಿಚಾರಕ - ಪನ್ಯಾಧ್ಯಕ್ಷ
ಮೌರ್ಯರ ಮಾರುಕಟ್ಟೆಯ ಮೇಲ್ವಿಚಾರಕ - ಸಂಸ್ಥಾಧ್ಯಕ್ಷ
ತೂಕ ಮತ್ತು ಅಳತೆಯ ಮೇಲ್ವಿಚಾರಕ - ಪಾತವಾಧ್ಯಕ್ಷ
ಮೌರ್ಯರ ಕಾಲಾವಧಿಯಲ್ಲಿ ಪಾಟಲಿ ಪುತ್ರದಿಂದ ಸಾಮ್ರಾಜ್ಯದ ಗಡಿಯವೆರೆಗೆ ಇದ್ದ ರಸ್ತೆಯನ್ನು ಈ ಹೆಸರಿನಿಂದ ಕರೆಯುವರು - Grand trunk road (ಪ್ರಧಾನ ರಸ್ತೆ )
ಮೌರ್ಯರು ಸರ್ಕಾರದಿಂದ ಟಂಕಿಸಲ್ಪಟ್ಟ ನಾಣ್ಯಗಳು - ಪಂಚ್ ಮಾರ್ಕಿನ ನಾಣ್ಯ
ಮೌರ್ಯರ ಕಾಲದ ಪಶ್ಚಿಮ ಬಂದರುಗಳು - ಏಡನ್ ( Broch and sopara )
ಮೌರ್ಯರು ಆಮದು ರಪ್ತು ಹಾಗೂ ಕರ ವಸೂಲಿಗಾಗಿ ಬಳಸಿದ ನಾಣ್ಯಗಳು - ಕಾನೂನು ಸಮ್ಮತ ನಾಣ್ಯಗಳು
ದಿನನಿತ್ಯದ ಸರಕುಗಳನ್ನು ಕೊಳ್ಳಲು ಬಳಸಿದ ನಾಣ್ಯಗಳು - ಸಾಂಕೇತಿಕ ನಾಣ್ಯ
ಮೌರ್ಯರ ಪ್ರಮುಖ ನಾಣ್ಯಗಳು - ನಿಖ್ಖ ( ಬಂಗಾರ ) ಪುರಾನ ( ಬೆಳ್ಳಿ ) ಕರ್ಪಪಣ ( ತಾಮ್ರ )
ಮೌರ್ಯರು ಶಿಕ್ಷಣವನ್ನು ಆರಂಭಿಸುವಾಗ ಬಳಸಿದ ಸಂಸ್ಕಾರ - ಚೌಲ ಸಂಸ್ಕಾರ
ಮೌರ್ಯರ ಆಡಳಿತದಲ್ಲಿ ಹೂವಿನ ವಿನ್ಯಾಸವನ್ನು ಹೊಂದಿದ್ದ ಬಟ್ಟೆ - ಮಸ್ಕಿನ್ ಬಟ್ಟೆ
ಕಲ್ಪಸೂತ್ರ ವನ್ನು ಬರೆದ ವ್ಯಕ್ತಿ - ಭದ್ರಬಾಹು
ಕಾಮಸೂತ್ರ ಕೃತಿಯ ಕರ್ತೃ - ವಾತ್ಸಾಯನ
ಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ ವರ್ಷ - 1950 ರಲ್ಲಿ
ಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ - ದೇವನಾಗರಿ
ಕರ್ನಾಟಕದ ಮೌರ್ಯರ ಲಾಂಛನ - ನವಿಲು
ಮೌರ್ಯರ ಆಡಲಿತದ ಭಾಷೆ - ಪ್ರಾಕೃತ
ಚಾಣಕ್ಯನ ಮೂಲ ಪ್ರದೇಶ - ತಕ್ಷಶಿಲೆ
ಚಾಣಕ್ಯನಿಂದ ವಿರಚಿತ ಅರ್ಥಶಾಸ್ತ್ರ ಕೃತಿಗೆ ಇರುವ ಇನ್ನೋಂದು ಹೆಸರು - ದಂಡನೀತಿ ಶಾಸ್ತ್ರ
ಮೌರ್ಯರ ಆಡಳಿತ ಕರ್ನಾಟಕದಲ್ಲಿ ಈ ಭಾಗದಲ್ಲಿತ್ತು - ಉತ್ತರ ಕರ್ನಾಟಕ
ಗ್ರೀಕ್ ದೊರೆ ಸೆಲ್ಯುಕಸ್ ನೊಂದಿಗೆ ವೈವಾಹಿಕ ಸಂಬಂಧವನ್ನು ಹೊಂದಿದ್ದ ಮೌರ್ಯ ದೊರೆ - ಚಂದ್ರಗುಪ್ತ ಮೌರ್ಯ
ಬಿಂದು ಸಾರನಿಗಿದ್ದ ಬಿರುದು - ಅಮಿತ್ರ ಘಾತ
ಅಶೋಕನು ಸಿಂಹಾಸನರೋಹಣ ಸಂಧರ್ಭದಲ್ಲಿ ತೊಡಕಾಗಿದ್ದ ದಾಯಾದಿ - ಸುಶೀಮ
ಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ - ಕೊಪ್ಪಳ
ಮೌರ್ಯರ ಕಾಲದ ಹಣದ ಹೆಸರು - ಪಮ , ನಿಷ್ಕ
ಮೌರ್ಯರ ಕಾಲದ ಪ್ರಸಿದ್ಧ ಬೌದ್ಧ ಹಾಗೂ ಜೈನ ಕೇಂದ್ರಗಳು - ಬನವಾಸಿ ಮತ್ತು ಶ್ರವಣಬೆಳಗೋಳ
ಅಶೋಕನ ತಾಯಿಯ ಹೆಸರು - ಸುಭದ್ರಾಂಗಿ
ಅಶೋಕನ ಇಷ್ಟ ದೇವತೆ - ಶಿವ
ಅಶೋಕನ ಕಾಲದ ದಕ್ಷಿಣ ಭಾಗದ ರಾಜಧಾನಿ - ಸುವರ್ಣಗಿರಿ ( ರಾಯಚೂರು )
ಭಾರತದ ಶಾಸನಗಳ ಪಿತಾಮಹಾ - ಅಶೋಕ
ಅಶೋಕನ ಕಾಲದಲ್ಲಿ ಸುವರ್ಣಗಿರಿಯನ್ನು ಆಳುತ್ತಿದ್ದ ಪ್ರಾಂತ್ಯಾಧಿಕಾರಿಯ ಹೆಸರು - ಆರ್ಯಪುತ್ರ
ಅಶೋಕನಿಗಿದ್ದ ಇತರ ಬಿರುದುಗಳು - ಕಾಳಾಶೋಕ ಹಾಗೂ ಚಂಡಾಶೋಕ
ಚಂದ್ರಗುಪ್ತ ಮೌರ್ಯ ಸುಮಾರು - 24 ವರ್ಷ ಆಳಿದ
ಅಶೋಕನು ಸಿಂಹಾಸನಕ್ಕೆ ಏರಿದ್ದು - ಕ್ರಿ.ಪೂ. 273 ರಲ್ಲಿ
ಕಳಿಂಗ ರಾಜ್ಯ ಎಂದರೇ - ಒರಿಸ್ಸಾ ಪ್ರಾಂತ್ಯ
ಮೌರ್ಯರ ಕಾಲದ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಯ ಬಗೆಗೆ ಬೆಳಕು ಚೆಲ್ಲುವ ಕೃತಿ - ಜಾತಕ ಕತೆಗಳು ( ಕೌಟಿಲ್ಯನ ಅರ್ಥಶಾಸ್ತ್ರ )
ಅಶೋಕನು ಶ್ರೀಲಂಕಾದಲ್ಲಿ ಬೌದ್ಧ ಧರ್ಮ ಪ್ರಚಾರಕ್ಕಾಗಿ ಕೈಗೊಂಡ ಕಾರ್ಯಗಳ ವರ್ಣನೆಯನ್ನು ತಿಳಿಸುವ ಕೃತಿಗಳು - ದೀಪವಂಶ ಹಾಗೂ ಮಹಾವಂಶ
ಅಶೋಕನು ಟಿಬೆಟ್ ನಲ್ಲಿ ಬೌದ್ಧ ಧರ್ಮ ಪ್ರಚಾರಕ ಮಾಡಿದುದರ ಬಗೆಗೆ ತಿಳಿಸುವ ಕೃತಿ - ದಿವ್ಯವದನ
ಪರಿಶಿಷ್ಟ ಪರ್ವಣ ಕೃತಿಯ ಕರ್ತೃ - ಹೇಮಚಂದ್ರ
ದೇಶೋದ್ಧಾರಕ ಎಂಬ ಪದದ ಬಿರುದುನ್ನು ಹೊಂದಿದ್ದ ಮೌರ್ಯ ಅರಸ - ಚಂದ್ರಗುಪ್ತ ಮೌರ್ಯ
ಚಂದ್ರಗುಪ್ತ ಮೌರ್ಯನು ಗ್ರೀಕರನ್ನು ಹೊಡೆದೊಡಿಸಿ ಪಡೆದುಕೊಂಡ ಬಿರುದು - ದೇಶೋದ್ದಾರಕ
ಚಂದ್ರಗುಪ್ತನು ನಂದರನ್ನು ಬಗ್ಗು ಬಡಿದು ಪಡೆದುಕೊಂಡ ಬಿರುದು - ಧರ್ಮೋದ್ಧಾರಕ
ಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ - ರುದ್ರದಾಮನ್
ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು - ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳು
ಧನನಂದ ಹಾಗೂ ಚಂದ್ರಗುಪ್ತ ಮೌರ್ಯರ ನಡುವಿನ ಯುದ್ಧದ ಕುರಿತು ಬೆಳಕು ಚೆಲ್ಲುವ ನಾಟಕ ಕೃತಿ - ವಿಶಾಖದತ್ತನ ಮುದ್ರಾರಾಕ್ಷಸ
ಚಂದ್ರಗುಪ್ತ ಮೌರ್ಯನು ಜೌನ ಧರ್ಮಕ್ಕೆ ಮತಾಂತರ ಗೊಳ್ಳುವ ಕುರಿತಾಗಿ ತಿಳಿಸುವ ಜೈನ ಕೃತಿ - ಭದ್ರಬಾಹುವಿನ ಪರಿಶಿಷ್ಟ ಪರ್ವನ್
ಬಿಂದುಸಾರನ ಸಮಕಾಲಿನ ಸಿರಿಯಾದ ಅರಸ - ಏಂಟಿಯೋಕಸ್
ಅಸೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು - 1837 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯಾ ಜೇಮ್ಸ್ ಪ್ರಿನ್ಸಸ್
ಅಶೋಕನನನ್ನು ಅನುಕರಣಿ ಮಾಡಿದ ಸಿಂಹಳದ ಅರಸ - ತಿಪ್ಪ
ಕಳಿಂಗ ಯುದ್ಧ ನಡೆದು ಎಷ್ಟು ವರ್ಷಗಳ ಬಳಿಕ ಅಶೋಕ ಬೌದ್ಧ ಧರ್ಮ ಸ್ವೀಕರಿಸಿದ - ಎರಡೂವರೆ
ಮೌರ್ಯರು ನಾಲ್ಕು ವಿಭಾಗಳಾಗಿ ವಿಭಜಿಸಿದ ರಾಜ್ಯಗಳು - ತಕ್ಷಶಿಲಾ , ಉಜ್ಜಯಿನಿ .ತೋಪಾಲಿ ಹಾಗೂ ಸುವರ್ಣಗಿರಿ
ಮೌರ್ಯರು ಅದಿಕಾರಿಗಳಿಗೆ ಈ ರೂಪದಲ್ಲಿ ವೇತನವನ್ನು ನೀಡುತ್ತಿದದ್ದು - ನಗದು ರೂಪದಲ್ಲಿ
ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು ತಿಳಿಸುವ ಶಾಸನ - ಬಬ್ರುಶಾಸನ
ಬಲಿ ಎಂಬ ತೆರಿಗೆಯಿಂದ ವಿನಾಯಿತಿ ಪಡೆದ ಗ್ರಾಮ - ಲುಂಬಿನಿ
ಲುಂಬಿನಿಯನ್ನು ಈ ಹೆಸರಿನಿಂದಲು ಕರೆಯುವರು - ರುಮ್ಮಿಂದೇಯ
ಅಶೋಕನು ಬೌದ್ಧ ಧರ್ಮವನ್ನು ಸ್ವೀಕರಿಸಿದ ನಂತರ ಮೊಟ್ಟ ಮೊದಲು ದರ್ಶಿಸಿದ ಪ್ರಾಂತ್ಯ - ಲುಂಬಿನಿ ಗ್ರಾಮ
ಅಶೋಕನ ಆಸ್ಥಾನದಲ್ಲಿದ್ದ ಗ್ರೀಕ್ ರಾಯಭಾರಿ - ತಿಹಾಪ
ಮೌರ್ಯರ ಕಾಲದ ಪ್ರಸಿದ್ಧ ವಿ.ವಿ.ನಿಲಯ - ತಕ್ಷಶಿಲ
ಅಶೋಕನ ಪ್ರಧಾನ ಮಂತ್ರಿಯ ಹೆಸರು - ರಾಧಗುಪ್ತ
ಬಿಂದುಸಾರನ ಪ್ರಧಾನ ಮಂತ್ರಿ - ಬಿಲ್ಲಾಟಕ
ಸಂಗ್ರಹಾ ಎಂದರೆ - 10 ಗ್ರಾಮಗಳಿಗೆ ಒಂದು ನ್ಯಾಯಸ್ಥಾನ
ದ್ರೋಣಮುಖಿ ಎಂದರೆ - 400 ಗ್ರಾಮಗಳಿದ್ದ ಒಂದು ನ್ಯಾಯಸ್ಥಾನ
ಫಿರೋಜ್ ಷಾ ತುಘಲಕ್ ,ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು - ಮಿರತ್ ಶಾಸನ ಹಾಗೂ ತೋಪ್ರ ಶಾಸನ
ಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ - ಕಂದಾಹಾರ್
ಚಂದ್ರಗುಪ್ತ ಮೌರ್ಯನ ತಂದೆಯ ಹೆಸರು - ಶಕುನಿ
ಅಶೋಕನನ್ನು ಮಗಧ ರಾಜ ನೆಂದು ಸಂಭೋದಿಸಲಾದ ಶಾಸನ - ಬಬ್ರೂಶಾಸನ
ಅಶೋಕನ ಪಟ್ಟದ ರಾಣಿ - ಅಸಂಧಿ ಮಿತ್ರೆ
ರಂದ್ರದ ಗುರುತು ನಾಣ್ಯಗಳ ಮೇಲೆ ಇದ್ಧ ಪ್ರಧಾನ ಚಿಹ್ನೆಗಳು - ನವಿಲು ,ಬೆಟ್ಟ ,ಕ್ರೆಸೆಂಟ್
ಮೌರ್ಯರ ಕಾಲದಲ್ಲಿ ಬೃಹತ್ ಅರಮನೆಯನ್ನು ಕಟ್ಟಿಸಿದ ದೊರೆ - ಚಂದ್ರಗುಪ್ತಮೌರ್ಯ
ಕಳಿಂಗಾ ಪ್ರದೇಶವು ಈ ಎರಡು ನದಿಗಳ ಮಧ್ಯದಲ್ಲಿನ ಪ್ರದೇಶವಾಗಿದೆ - ಮಹಾನದಿ ಮತ್ತು ಗೋದಾವರಿ
ಕಳಿಂಗ ಯುದ್ಧದ ಮೇಲೆ ಬೆಳಕು ಚೆಲ್ಲುವ ಶಾಸನ - 12 ನೇ ಬಂಡೆಕಲ್ಲು ಶಾಸನ
ಅಶೋಕನ ಶಾಸನದ ಬಗೆಗಳು
ಬಂಡೆ ಕಲ್ಲಿನ ಶಾಸನ
ಕಿರು ಬಂಡೆ ಕಲ್ಲಿನ ಶಾಸನ
ಸ್ತಂಭ ಶಾಸನ
ಗುಹಾ ಶಾಸನ

ಮೌರ್ಯರ ಆಡಳಿತದಲ್ಲಿ ಸರಕಾರಕ್ಕೆ ಕೊಡಬೆಕಾಗಿದ್ದ ಕಂದಾಯ ಭಾಗ - 1/6 ಭಾಗ
ಮೌರ್ಯರ ಆಡಳಿತದಲ್ಲಿ ವಿನಿಮಯ ವ್ಯವಹಾರ ನೋಡಿಕೊಳ್ಳುತ್ತಿದ್ದವನು - ಸನ್ನಿಧಾತೃ
ಮೌರ್ಯರ ಕಾಲದ ವಿವಾಹ ಪದ್ಧತಿ

ಬ್ರಹ್ಮ - ವಜ್ರ ವೈಡೂರ್ಯಗಳೊಂದಿಗೆ ಕನ್ಯಾಧಾನ
ಪ್ರಜಾಪತ್ಯ - ಸ್ತ್ರೀಪುರುಷ ಪವಿತ್ರ ಕರ್ತವ್ಯಕ್ಕಾಗಿ ವಿವಾಹವಾಗುವುದು
ಅರ್ಷ - ಒಂದು ಜೊತೆ ಹಸುವನ್ನು ನೀಡಿ ಕನ್ಯೆಯನ್ನು ಪಡೆಯುವುದು
ದೈವ - ಯಾಜ್ಞಿಕ ಪುರೋಹಿತರೊಂದಿಗಿನ ಮದುವೆ
ಗಾಂಧರ್ವ - ಪ್ರೇಮ ವಿವಾಹ
ರಾಕ್ಷಸ - ಬಲತ್ಕಾರವಾಗಿ ವಿವಾಹವಾಗುವುದು
ಅಸುರ - ಹಣಕ್ಕಾಗಿ ಆದ ವಿವಾಹ
ಪೈಶಾಚ - ಕನ್ಯೆ ನಿದ್ರೆ ಅಥವಾ ಅಮಲಿನಲ್ಲಿದ್ದಾಗ ಅಪಹರಿಸಿ ಬಲತ್ಕಾರದಿಂದ ವಿವಾಹವಾಗುವುದು

ಅಲೆಗ್ಸಾಂಡರ್ ಬಗೆಗಿನ ಮಾಹಿತಿ
ಗುರು - ಅರಿಸ್ಟಾಟಲ್
ತಂದೆ ಹಾಗೂ ತಾಯಿ - ಎರಡನೇ ಫಿಲಿಪ್ಸ್ ಹಾಗೂ ಓಲಿಂಪಿಯಸ್
ಭಾರತಕ್ಕೆ ಆಹ್ವಾನವಿತ್ತ ಭಾರತದ ರಾಜ - ತಕ್ಷಶಿಲೆಯ ರಾಜ ಅಂಬಿ
ಹೋರಾಟ - ಪುರುರವನೊಡನೆ
ಭಾರತದಲ್ಲಿ ಗೆದ್ದ ಪ್ರದೇಶಗಳಿಗೆ ನೇಮಿಸಿದ ಅಧಿಕಾರಿಗಳು - ಸತ್ರೆಪ

ಕುಶಾನರು
ಮೌರ್ಯರ ನಂತರ ಮಗಧ ಸಾಮ್ರಾಜ್ಯವನ್ನಾಳಿದವರು - ಶುಂಗರು
ಶುಂಗರ ನಂತರ ಮಗಧದಲ್ಲಿ ಅಧಿಕಾರಕ್ಕೆ ಬಂದವರು - ಕಣ್ವರು
ಶುಂಗರು ಮತ್ತು ಕಣ್ವರು ಮಗಧ ರಾಜ್ಯವನ್ನು - 150 ವರ್ಷಗಳ ಕಾಲ ಆಲಿದರು
ಕಣ್ವರ ಕಾಲದ ಪ್ರಮುಖ ಜೈನರ ಕೇಂದ್ರ - ಮಥುರಾ ಪಟ್ಟಣ
ಯೋಗ ಸೂತ್ರ ಕೃತಿಯ ಕರ್ತೃ - ಪತಂಜಲಿ
ವ್ಯಾಕರಮ ಶಾಸ್ತ್ರದ ಪಂಡಿತ - ಪಾಣಿನಿ
ಕುಶಾನರು ಈ ಬುಡಕಟ್ಟಿಗೆ ಸೇರಿದವರಾಗಿದ್ದಾರೆ - ಚೀನಾದ ಯು-ಚಿ ಎಂಬ ಬುಡಕಟ್ಟಿಗೆ ಸೇರಿದವರು
ಕುಶಾನರು ಭಾರತದ ಮೇಲೆ ಧಾಳಿ ಮಾಡಿದ್ದು - ಕ್ರಿ.ಶ.1 ನೇ ಶತಮಾನ
ಕುಶಾನರು ತಮ್ಮ ಅಧಿಕಾರವನ್ನು ಮೊದಲು ಸ್ಥಾಪಿಸಿಕೊಂಡ ಪ್ರದೇಶ - ಪಂಜಾಬ್
ಕುಶಾನರ ರಾಜಧಾನಿ - ಪೇಷಾವರ ಅಥವಾ ಪುರುಷಪುರ
ಪೇಷಾವರ ಈಗ ಈ ಭಾಗದಲ್ಲಿದೆ - ಪಾಕಿಸ್ತಾನ ಭಾಗವಾಗಿದೆ
ಕುಶಾನರಲ್ಲಿ ಹೆಚ್ಚು ಪ್ರಸಿದ್ದಿಯಾದವನು - ಕಾನಿಷ್ಕ

ಮೌರ್ಯ ಸಾಮ್ರಾಜ್ಯದ ನಂತರ ಆಳಿದ ಸಣ್ಣ ರಾಜವಂಶಗಳು
ಶುಂಗರು
ಕಣ್ವರು
ಚೇರರು
ಶಾತವಾಹನರು , ಇವೆಲ್ಲ ಅಲೆಮಾರಿ ಪಂಗಡಗಳು
ಈ ರಾಜ್ಯದ ಮೇಲೆ ಆಕ್ರಮಣವೆಸಗಿದ ವಿದೇಶಿಯರು
a. ಇಂಡೋ - ಬ್ಯಾಕ್ಟ್ರಿಯನ್ನರು ( ಇಂಡೋ - ಗ್ರೀಕರು )
b. ಶಕರು - ಸಿಥಿಯನ್ನರು
c. ಇಂಡೋ ಪಾರ್ಥಿಯನ್ನರು ( ಪಲ್ಲವರು )
d. ಕುಶಾನರು 
ಮೌರ್ಯರ ನಂತರ ಪ್ರಪ್ರಥಮವಾಗಿ ಸವಿಸ್ತಾರವಾದ ಸಾಮ್ರಾಜ್ಯವನ್ನು ಸ್ಥಾಪಿಸಿದವರು - ಕುಶಾನರು
ಕುಶಾನರು ಮೂಲತಃ ಈ ಪ್ರಾಂತ್ಯದವರು - - ಚೀನಾದ ಕುನ್ - ಸು ( ಆಧುನಿಕ ಚೀನಾ )

ಕುಶಾನರ ಐತಿಹಾಸಿಕ ಹಿನ್ನಲೆ
ಇವರು ಮೂಲತಃ ಯೂ -ಚಿ. ಪಂಗಡದವರು
ಇವರು ಆಧುನಿಕ ಚೀನಾ ಅಥವಾ ಕನ್ - ಸೂ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದರು
ಸುಮಾರು ಕ್ರಿ.ಪೂ.165 ರಲ್ಲಿ ಹುಂಗ್ - ನು ಬುಡಕಟ್ಟು (ಹೂಣರು ) ನವರಿಂದ ಆಕ್ರಮಣಕ್ಕೆ ತುತ್ತಾಗಿ ಸೋಲನ್ನು ಅನುಭವಿಸಿದರು
ಈ ಆಕ್ರಮಣದಲ್ಲಿ ಇವರು ತಮ್ಮ ಮುಖಂಡನನ್ನು ಕೆಳೆದುಕೊಂಡರು
ತದ ನಂತರ ಮುಖಂಡನ ಪತ್ನಿಯ ನೇತೃತ್ವದಲ್ಲಿ ಆ ಪ್ರದೇಶದಿಂದ ಪಲಾಯನ ಮಾಡಿದರು
ಪಲಾಯನ ಸಂದರ್ಭದಲ್ಲಿ ವೂ - ಸನ್ ರನ್ನು ಸೋಲಿಸಿ ಇವರ ಮುಖ್ಯಸ್ಥರನ್ನು ಸಂಹರಿಸಿದರು
ಈ ಸಂದರ್ಭದಲ್ಲಿ ಒಂದು ಗುಂಪು ಪಶ್ಚಿಮಾಭಿಮುಖವಾಗಿ ಮುಂದುವರೆದು ಓಕ್ಸಾರ್ಟಸ್ ಪ್ರದೇಶದಲ್ಲಿದ್ದ ಶಕರನ್ನು ಸೋಲಿಸಿ ಅಲ್ಲಿಯೇ ನೆಲೆನಿಂತರು
ಆದರೆ ಅದು ಬಹಳ ಕಾಲ ನೆಲೆ ನಿಲ್ಲಲು ಸಾಧ್ಯವಾಗಲಿಲ್ಲ ಕಾರಣ ವೂ - ಸನ್ ರ ಮುಖ್ಯಸ್ಥನ ಮಗ ಪ್ರಾಬಲ್ಯಕ್ಕೆ ಬಂದು ನೆಲೆ ನಿಂತಿದ್ದ ಯೂಚಿಗಳನ್ನು ಸೋಲಿಸಿದರು
ತದ ನಂತರ ಯೂಚಿಗಳು ಆಕ್ಸಸ್ ಅಥವಾ ಆಮುದರ್ಯ ಕಣಿವೆಯ ಪಶ್ಚಿಮ ಮತ್ತು ದಕ್ಷಿಣದತ್ತ ಮುಂದುವರಿದು ಶಕರನ್ನು ಪುನಃ ಸೋಲಿಸಿ ಬ್ಯಾಕ್ಟ್ರಿಯಾ ಎಂದು ಗುರುತಿಸ್ಪಟ್ಟಿರುವ ತಾ - ಹಿಯಾ ದಲ್ಲಿ ಕ್ರಿ.ಪೂ. 1 ನೇ ಶತಮಾನದಲ್ಲಿ ಆರಂಭದಲ್ಲಿ ನೆಲೆನಿಂತರು
ಪ್ರಾರಂಭದಲ್ಲಿ ವ್ಯಾಪಾರದಲ್ಲಿ ತೊಡಗಿಕೊಂಡಿದ್ದು ಸ್ಥಳೀಯರನ್ನು ಆಕರ್ಷಿಸಿಕೊಂಡು ಆಕ್ಸಸ್ ನ ಉತ್ತರದಲ್ಲಿ ಆಧುನಿಕ ಬೊಖಾರ ಅಥವಾ ಸೋಗ್ಡಿಯಾನದಲ್ಲಿ ರಾಜಧಾನಿಯನ್ನು ಸ್ಥಾಪಿಸಿದರು . ಇಲ್ಲಿಗೆ ಅವರ ಅಲೆಮಾರಿ ಜೀವನ ಕೊನೆಗೊಂಡು ಸಾಮ್ರಾಜ್ಯ ಸ್ಥಾಪನಾ ಕಾರ್ಯ ಪ್ರಾರಂಭವಾಯಿತು .ಪ್ರಾರಂಭದಲ್ಲಿ ತಾವು ಸ್ಥಾಪಿಸಿದ್ದ ಐದು ಪ್ರಾಂತ್ಯಗಳಾಗಿ ವಿಭಜಿಸಿದ ಪ್ರತಿಯೊಂದನ್ನು ಮುಖ್ಯಸ್ಥನ ಆಳ್ವಿಕೆಗೆ ಒಳಪಡಿಸಿದವರು ಅವುಗಳಲ್ಲಿ ಕಿ - ಷಾಂಗ್ ಎನ್ನುವುದು ಕೂಡ ಒಂದು ಹೀಗೆ 100 ವರ್ಷಗಳು ಉರುಳಿದ ನಂತರ ಕಿ - ಷಾಂಗ್ ನ ಮುಖ್ಯಸ್ಥನಾಗಿದ್ದ 1 ನೇ ಕುಜುಲ ಕಡ್ ಫೀಸಸ್ ಎಲ್ಲಾ ಪ್ರಾಂತ್ಯಗಳನ್ನು ಏಕೀಕೃತ ಸಾಮ್ರಾಜ್ಯವನ್ನು ಸ್ಥಾಪಿಸಿದನು .ಇದೇ ಕುಶಾನರ ಸಾಮ್ರಾಜ್ಯ
ಕುಶಾನರ ಸಾಮ್ರಾಜ್ಯದ ಸ್ಥಾಪಕ - 1ನೇ ಕುಜುಲ ಕಡ್ ಫೀಸಿಸ್
1ನೇ ಕುಜುಲ ಕಡ್ ಫೀಸಿಸ್ ನ ನಂತರ ಅಧಿಕಾರಕ್ಕೆ ಬಂದ ಕುಶಾನ್ ಅರಸ - ವಿಮಾ ಕಡ್ ಫೀಸಸ್
ಕುಶಾನರ ಪ್ರಸಿದ್ದ ಅರಸ - ಕಾನಿಷ್ಕ
ಕಾನಿಷ್ಕನ ಈ ಧರ್ಮದ ಅನುಯಾಯಿಯಾಗಿದ್ದ - ಬೌದ್ಧ ಧರ್ಮ
2 ನೇ ಅಶೋಕ ಎಂದು ಕರೆಸಿಕೊಂಡ ಕುಶಾನರ ದೊರೆ - ಕಾನಿಷ್ಕ
4 ನೇ ಬೌದ್ಧ ಸಮ್ಮೇಳನ ನಡೆದ ಸ್ಥಳ - ಶ್ರೀನಗರದ ಕುಂಡಲಿವನ
4 ನೇ ಬೌದ್ಧ ಸಮ್ಮೇಳನವನ್ನು ವ್ಯವಸ್ಥೆಗೊಳಿಸಿದವನು - ಕಾನಿಷ್ಕ
4 ನೇ ಬೌದ್ಧ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದವರು - ವಸುಮಿತ್ರ
ತ್ರಿಪಿಟಕಗಳ ಮೇಲೆ ಬರೆದ ಮಹಾಭಾಷ್ಯವನ್ನು ಈ ಹೆಸರಿನಿಂದ ಕರೆಯಲಾಗಿದೆ - ಮಹಾವಿಭಾಷ
ಕಾನಿಷ್ಕನ ಕಾಲವಧಿಯಲ್ಲಿ ಕಂಡುಬಂದ ಬೌದ್ಧಧರ್ಮದ ಪಂಥಗಳು - ಹೀನಾಯಾನ ಮತ್ತು ಮಹಾಯಾನ
ಕಾನಿಷ್ಕನು ಈ ಪಂಥವನ್ನ ಅನುಸರಿಸಿದನು - ಮಹಾಯಾನ
ಕಾನಿಷ್ಕನ ಕಾಲವಧಿಯಲ್ಲಿ ಹೆಚ್ಚು ಪ್ರಚಾರಕ್ಕೆ ಬಂದ ಪಂಥ - ಮಹಾಯಾನ ಪಂಥ
ಬೋದಿ ಸತ್ವರು ಎಂದರೆ - ಬುದ್ಧನ ಗುಣಗಳನ್ನು ಮೈಗೂಡಿಸಿಕೊಂಡವ
ಪಾಲಿ ಭಾಷೆಗೆ ಮಹತ್ವವನ್ನು ಕೊಟ್ಟ ಪಂಥ - ಹೀನಾಯಾನಗಳು
ಅಶ್ವಘೋಷ ಕವಿ ಈತನ ಆಸ್ಥಾನದಲ್ಲಿದ್ದ - ಕಾನಿಷ್ಕ

ಅಶ್ವಘೋಷ ಕವಿಯ ಪ್ರಮುಖ ಕೃತಿಗಳು
ಬುದ್ಧ ಚರಿತ - ಬುದ್ಧನ ಜೀವನ ಚರಿತ್ರೆಯನ್ನು ಒಳಗೊಂಡಿದೆ
ಸೌಂದರನಂದ ಕಾವ್ಯ - ಬುದ್ಧನ ಜೀವನದ ಪ್ರಮುಖ ಘಟನೆ ಒಳಗೊಂಡಿದೆ
ವಜ್ರಾಶುಚಿ ಅಥವಾ ವಜ್ರದ ಸೂಚಿ - ಅಂದಿನ ಜಾತಿ ವ್ಯವಸ್ಥೆಯ ಬಗೆಗಿನ ವಿವರ
ಸರಿಪುತ್ರ ಪ್ರಕರಣ - ಮತಾಂತರ ಹಾಗೂ ಸಮಾನತೆಯ ಸಿದ್ಧಾಂತ
ಭಾರತದ ಮಾರ್ಟಿನ್ ಲೂಥರ್ ಹಾಗೂ ಐನ್ ಸ್ಟೀನ್ ಎಂದು ಕರೆಯಲ್ಪಡುವ ಕವಿ ಅಥವಾ ತತ್ವಜ್ಞಾನಿ - ನಾಗಾರ್ಜುನ
ನಾಗಾರ್ಜನ ಎಂಬ ತತ್ವಜ್ಞಾನಿ ಈತನ ಆಸ್ಥಾನದಲ್ಲಿದ್ದ - ಕಾನಿಷ್ಕ
ಮಾಧ್ಯಮಿಕ ಸೂತ್ರ ಎಂಬ ಕೃತಿಯ ಕರ್ತೃ - ನಾಗಾರ್ಜುನ
ಮಾಧ್ಯಮಿಕ ಸೂತ್ರ ಈ ಸಿದ್ಧಾಂತವನ್ನು ಒಳಗೊಂಡಿದೆ - ಸಾಪೇಕ್ಷ ಸಿದ್ಧಾಂತ

ನಾಗಾರ್ಜುನ ಕವಿಯ ಪ್ರಮುಖ ಕೃತಿಗಳು

ಪ್ರಾಜ್ಞಪರ ಮಿತ್ರ ಸೂತ್ರ - ವೇದಾಂತ ಕೃತಿಯಾಗಿರುವ ಇದು ಮಾಧ್ಯಮಿಕ ಸೂತ್ರದ ಇನ್ನೋಂದು ಹೆಸರು
ಸುಹೃಲ್ಲೇಖ ಅಥವಾ ಮಿತ್ರನಿಗೊಂದು ಪತ್ರ - ಇದು ನಾಲ್ಕು ಆರ್ಯ ಸತ್ಯಗಳು ಹಾಗೂ ಅಷ್ಟಾಂಗ ಮಾರ್ಗವನ್ನು ಕುರಿತು ತಿಳಿಸುತ್ತದೆ
ಚರಕ ಕವಿ ಈ ರಾಜನ ಆಸ್ಥಾನದಲ್ಲಿದ್ದನು - ಕಾನಿಷ್ಕ
ಚರಕ ಸಂಹಿತೆ ಕೃತಿಯ ಕರ್ತೃ - ಚರಕ
ಆರ್ಯುವೇದ ಔಷದ ಶಾಸ್ತ್ರದ ಕುರಿತು ತಿಳಿಸುವ ಚರಕ ಕವಿಯ ಕೃತಿ - ಚರಕ ಸಂಹಿತೆ
ಚರಕ ಸಂಹಿತೆ ಈ ಭಾಷೆಗಳಿಗೆ ತರ್ಜುಮೆಗೊಂಡಿದೆ - 7 ನೇ ಶತಮಾನದಲ್ಲಿ ಪರ್ಶಿಯನ್ ಹಾಗೂ 8ನೇ ಶತಮಾನದಲ್ಲಿ ಅರೇಬಿಕ್ ಭಾಷೆಗೆ
ಕಾನಿಷ್ಕನ ಕಾಲದ ಪ್ರಮುಖ ವಿದ್ವಾಂಸರು - ವಸುಮಿತ್ರ ಹಾಗೂ ಪಾರ್ಶ್ವ ( 4 ನೇ ಬೌದ್ಧ ಸಮ್ಮೇಳನದಲ್ಲಿ ಪ್ರಮುಖ ಪಾತ್ರ ವಹಿಸಿದರು )
ಕುಶಾನರ ಕಾಲ ಗುಪ್ತರ ಯುಗಕ್ಕೆ ಅಥ್ಯುತ್ತಮ ಪೀಠಿಕೆ ಎಂದವರು - ಡಾ//.ಹೆಚ್.ಜಿ.ರಾಲಿನ್ ಸನ್
ಆಧುನಿಕ ಪೇಷವರ ಎಂದು ಕರೆಯಲ್ಪಡುವ ಪ್ರದೇಶ - ಗಾಂಧಾರ
ಕುಶಾನರ ಪ್ರಮುಖ ಕಲಾ ಕೇಂದ್ರ - ಗಾಂಧಾರ
ಗ್ರೀಕ್ ಹಾಗೂ ಭಾರತೀಯ ಕಲಾ ಲಕ್ಷಣಗಳನ್ನು ಒಳಗೊಂಡಿರುವ ಕಲೆ - ಗಾಂಧಾರ ಕಲೆ
ಗಾಂಧಾರ ಕಲೆಯನ್ನು ಈ ಹೆಸರಿನಿಂದಲೂ ಕರೆಯುವರು - ಇಂಡೋ - ಗ್ರೀಕ್ ಕಲೆ ಅಥವಾ ಗ್ರೀಕ್ ಬೌದ್ಧ ಕಲೆ ಅಥವಾ ಗ್ರೀಕ್ ರೋಮನ್ ಕಲೆ

ಕಾನಿಷ್ಕನ ಕಾಲದ ವಿವಿಧ ಕಲಾ ಪಂಥಗಳು
ಗಾಂಧಾರ ಕಲಾ ಪಂಥ
ಮಥುರಾ ಕಲಾ ಪಂಥ
ಸಾರನಾಥ ಕಲಾ ಪಂಥ

ಬುದ್ಧನ ಬೃಹದಾಕಾರದ ಮೂರ್ತಿ ಈ ಕಲೆಯನ್ನು ಹೊಂದಿದೆ - ಗಾಂಧಾರ ಕಲೆ
ಬುದ್ಧನು ಪ್ರಪ್ರಥಮ ವಿಗ್ರಹ ರಚನೆ ಈ ಕಲೆಯನ್ನು ಹೊಂದಿದೆ - ಮಥುರಾ ಶಿಲ್ಪಕಲೆ
ಏಜಿಸಿಲಾಸ್ ಎಂಬ ಗ್ರೀಕ್ ವಾಸ್ತು ಶಿಲ್ಪಯ ಆಶ್ರಯದಾತ - ಕಾನಿಷ್ಕ
ಪೇಷಾವರದಲ್ಲಿ ಅವಶೇಷಗಳ ಗೋಪುರಗಳನ್ನು ಕಟ್ಟಿಸಿದವರು - ಕಾನಿಷ್ಕ
ಕುಶಾನರ ಕಾಲದಲ್ಲಿ ಮಹಾನ್ ವ್ಯಕ್ತಿಗಳ ಹೆಣವನ್ನು ಸುಟ್ಟು ಬರುವ ಬೂದಿಯನ್ನು ಸಂರಕ್ಷಿಸಿಡುತ್ತಿದ್ದ ಪೆಟ್ಟಿಗೆಯ ಹೆಸರು - ಕಾನಿಷ್ಕ
ಕಾಶ್ಮೀರದಲ್ಲಿ ಕಾನಿಷ್ಕಪುರ ಎಂಬ ನಗರ ನಿರ್ಮಾತೃ - ಕಾನಿಷ್ಕ
ತಕ್ಷಶಿಲೆಯ ಸಿರ್ ಸುರ್ ನಗರಕ್ಕೆ ಅಡಿಗಲ್ಲು ಹಾಕಿದವನು - ಕಾನಿಷ್ಕ
ಕುಶಾನರ ಕಾಲದಲ್ಲಿ ಚೀನಾಕ್ಕೆ ಹೋಗಿ ಬೌದ್ಧ ಕೃತಿಯನ್ನು ಚೀನಿ ಭಾಷೆಗೆ ಭಾಷಂತರಿಸಿದವರು - ಕಶ್ಯಾಪ ಮಾತಾಂಗ
ಗಾಂಧಾರ ಬುದ್ಧನ ವಿಶಿಷ್ಟ ಲಕ್ಷಣ - ದಪ್ಪ ಹೊದಿಕೆ ಮತ್ತು ಮಡಿಕೆ ಗೆರೆಗಳು
ಗಾಂಧಾರ ಶಿಲ್ಪ ಕಲೆಯು ಸಂಪ್ರದಾಯವು ಈ ದೇಶದ ಬೌದ್ಧ ಕಲೆಯ ಹುಟ್ಟಿಗೆ ಕಾರಣವಾಯಿತು - ಜಪಾನ್
ಕನಿಷ್ಕನ ಪ್ರಸಿದ್ದ ಆಸ್ಥಾನದ ಕವಿ - ಅಶ್ವಘೋಷ
ಕಾನಿಷ್ಕನ ರಾಜಧಾನಿ - ಪುರುಷಪುರ
ಕಾಶ್ಗರ , ಯಾರ್ಖಂಡ್ ,ಖೋಟಾನಗಳ ಮೇಲೆ ಪ್ರಭುತ್ವ ಸಾಧಿಸಿದ ಮೊದಲ ಇಂಡೋ - ಏಷಿಯಾಟಿಕ್ ದೊರೆ - ಕಾನಿಷ್ಕ
ಬುದ್ಧನು ಆಕೃತಿಯನ್ನು ತನ್ನ ನಾಣ್ಯಗಳಲ್ಲಿ ಮುದ್ರಿಸಿದ ಮೊದಲ ರಾಜ - ಕಾನಿಷ್ಕ
ಕಾನಿಷ್ಕನ ಅದಿಕಾರದ ಅವಧಿ - ಕ್ರಿ.ಶ. 78 ರಿಂದ 120

ಗಾಂಧಾರ ಶಿಲ್ಪಕಲೆಯ ಲಕ್ಷಣಗಳು
ಕಂದು ಬಣ್ಣದ ಪದರ ಶಿಲೆಯಲ್ಲಿ ಮೂಡಿದೆ
ಬಾಹ್ಯ ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ
ವಿಗ್ರಹಳಲ್ಲಿ ಮೀಸೆಯನ್ನು ತೋರಿಸಲಾಗಿದೆ
ತಲೆಗೂದಲುಗಳು ಮೆಟ್ಟಿಲು ಮೆಟ್ಟಿಲುಗಳಾಗಿ ಮೇಲಿರುತ್ತದೆ
ಧರಿಸಿರುವ ಉಡುಪು ಗ್ರೀಕರ ಟೋಗ ಮಾದರಿ

ದೇವಪುತ್ರ ಎಂಬ ಬಿರುದನ್ನು ಹೊಂದಿದ್ದ ಕುಶಾನರ ಅರಸ - 2 ನೇ ಕಾಡ್ ಪೈಸಸ್
2 ನೇ ಕಾಡ್ ಪೈಸಸ್ ಧರಿಸಿದ್ದ ದೇವಪುತ್ರ ಎಂಬ ಬಿರುದನ್ನು ಹೊಂದಿದ್ದ ಕುಶಾನರ ದೊರೆ - ಕಾನಿಷ್ಕ
ಕ್ರಿ.ಶ.78 ಹೊಸ ಶಕ ವರ್ಷವನ್ನು ಆರಂಭಿಸಿದ ದೊರೆ - ಕಾನಿಷ್ಕ
ಕುಶಾನರು ಈ ಸಾಮ್ರಾಜ್ಯದೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದರು - ರೋಮ್ ಸಾಮ್ರಾಜ್ಯ
ಮೌರ್ಯರ ಸಾಮ್ರಾಜ್ಯ ನಂತರ ಭಾರತೀಯ ಸಂಸ್ಕೃತಿಗೆ ಮೆರುಗು ನೀಡಿದವರು - ಕುಶಾನರು
ಮಹಾಯುದ್ಧ ಪಂಥದ ಉದಯವಾದದ್ದು ಇವರ ಕಾಲದಲ್ಲಿ - ಕುಶಾನರು
ಮೊದಲನೇ ಕುಜುಲ ಕಡ್ ಪೀಸಸ್ ನ ಇನ್ನೋಂದು ಹೆಸರು - ಕುಸುಲುಕ
ಚಿನ್ನದ ನಾಣ್ಯಗಳನ್ನು ಬಳಕೆಗೆ ತಂದ ಮೊದಲ ಕುಶಾನ ದೊರೆ - ವೀಮ ಕಡ್ ಪೀಸಸ್
ಕ್ಷತ್ರಪರೆಂಬ ಪ್ರಾಂತ್ಯಾಧಿಕಾರಿಗಳನ್ನು ನೇಮಿಸಿದ ಕುಶಾನ ದೊರೆ - ಕಾನಿಷ್ಕ
ಕಾನಿಷ್ಕನು ಬೌದ್ಧ ಧರ್ಮವನ್ನು ಸ್ವೀಕರಿಲು ಕಾರಣನಾದವನು - ಅಶ್ವಘೋಷ ಹಾಗೂ ವಿಶ್ವಮಿತ್ರ
ಕಾನಿಷ್ಕನ ಕಾಲದ ಮಹತ್ವ ಘಟನೆ - 4 ನೇ ಬೌದ್ಧ ಸಮ್ಮೇಳನ
4 ನೇ ಬೌದ್ಧ ಸಮ್ಮೇಳನದ ಕುರಿತಾದ ಮಾಹಿತಿಯನ್ನು ಇಲ್ಲಿ ಸಂಗ್ರಹಿಸಲಾಗಿದೆ - ಶಿಲಾಕೋಶ ಹಾಗೂ ಸ್ತೂಪಗಳಲ್ಲಿ
ಕಾನಿಷ್ಕನ ನಂತರ ಸಾಮ್ರಾಜ್ಯವನ್ನಾಳಿದ ಕುಶಾನ ದೊರೆಗಳು - ಹುವಿಷೈ ಹಾಗೂ ವಾಸುದೇವ
ಕಾನಿಷ್ಕನು ಪಟ್ಟಕ್ಕೆ ಬಂದ ವರ್ಷ - ಕ್ರಿ.ಶ.78
ರಾಜ ತರಂಗಿಣಿ ಕೃತಿಯ ಕರ್ತೃ - ಕಲ್ಹಣ
ಸಾಹಿತ್ಯ ಸಂಸ್ಕೃತಿಯ ಮುನ್ನಡೆಯ ಕಾಲ ಎಂದು ಕರೆಯಲ್ಪಡುವ ಕಾಲ - ಕುಶಾನರ ಕಾಲ
ಕಾನಿಷ್ಕನ ಆಸ್ಥಾನದಲ್ಲಿದ್ದ ವೈದ್ಯ ಶಾಸ್ತ್ರದ ಪಂಡಿತರು - ಚರಕ ಹಾಗೂ ಸುಶೃತ
ಅರಬ್ಬರ ಯೂನಾನಿ ಪದ್ದತಿ ಇವರಿಂದ ಪ್ರಭಾವಿತವಾಗಿದೆ - ಚರಕ ಹಾಗೂ ಸುಶೃತ
ಕುಶಾನರ ಕಾಲದಲ್ಲಿ ನಾಣ್ಯಗಳಲ್ಲಿ ಬರವಣಿಗೆ ಈ ಲಿಪಿಯನ್ನು ಹೊಂದಿದ - ಗ್ರೀಕ್ ಹಾಗೂ ಖರೋಷ್ಠಿ
ಪ್ಲೀನಿ ಈ ದೇಶದ ಇತಿಹಾಸಕಾರ - ರೋಮ್
ಕುಶಾನರ ಕಾಲದ ದೇಶಿಯ ಶಿಲ್ಪ ಕಲೆಯ ಕೇಂದ್ರ - ಮಥುರಾ
ಮಥುರಾ ಶೈಲಿಗೆ ಆಧಾರ - ಜಾನಪದ ಕಥಾ ಶೈಲಿ
ಆಸ್ಥಾನದ ಕವಿಗಳನ್ನು ಪೋಷಿಸಿದ ಉತ್ತರ ಭಾರತದ ಅರಸರಲ್ಲಿ ಮೊದಲಿಗರು - ಕುಶಾನರು
ಕಣ್ವರ ಆಳ್ವಿಕೆಯ ಕಾಲದ ಪ್ರಸಿದ್ದ ಜೈನ ಕೇಂದ್ರ - ಮಥುರಾ ಪಟ್ಟಣ
ಕುಶಾನರು ಯೂಚಿ ಪಂಗಢದ ಈ ಗುಂಪಿಗೆ ಸೇರಿದವರಾಗಿದ್ದಾರೆ - ತಿಷಾಂಗ ಬಣದವರು
ಬುದ್ದನ ವಿಗ್ರಹರಾಧನೆಯನ್ನು ಪ್ರಾರಂಭಿಸಿದ್ದು ಈ ರಾಜನ ಕಾಲದಲ್ಲಿ - ಕಾನಿಷ್ಕ
ಕಾನಿಷ್ಕನ ಕಾಲಾನಂತರ - ಶಾಲಿವಾಹನ ಶಕ ಪ್ರಾರಂಭವಾಯಿತು
ಮಿಹಿರ್ ಎಂದರೇ - ಸೂರ್ಯ
ಮೊದಲ ದೊರೆ - ಕಡ್ ಪೀಸಿಸ್
ಕಡ್ ಪೀಸಿಸ್ ನ ಇನ್ನೋಂದು ಹೆಸರು - ವೀಮಾ ಕಡ್ ಪೀಸಿಸ್
ಎರಡನೇ ದೊರೆ - 2 ನೇ ಕ್ಯಾಡ್ ಪೀಸಿಸ್
2 ನೇ ಕ್ಯಾಡ್ ಪೀಸಿಸ್ ನ ಇನ್ನೋಂದು ಹೆಸರು - ಕೂಸಿಲ ಕ್ಯಾಡ್ ಪೀಸಿಸ್
2 ನೇ ಕ್ಯಾಡ್ ಪೀಸಿಸ್ ಈತನ ಅವಧಿ - ಕ್ರಿ.ಶ.65 – 78
ಕಾನಿಷ್ಕ ಪುರದ ಬಗೆಗೆ ಮಾಹಿತಿಯನ್ನು ಒಳಗೊಂಡಿರುವ ಕೃತಿ - ಕಲ್ಹಣನ ರಾಜ ತರಂಗಿಣಿ
ಕಾನಿಷ್ಕಪುರ ಈ ರಾಜ್ಯದಲ್ಲಿ ನಿರ್ಮಾಣವಾಯಿತು - ಕಾಶ್ಮೀರ
ಕುಶಾನರ ನಂತರ ಭಾರತದಲ್ಲಿ ಏಳಿಗೆಗೆ ಬಂದವರು - ನಾಗರು
ಭಾರತದಲ್ಲಿ ಮೊದಲು ಬೆಳ್ಳಿ ನಾಣ್ಯಗಳನ್ನು - ಹೊರತಂದವರು - ಕುಶಾನರು

Saturday 18 April 2020

ಮಕ್ಕಳ ಸಾಹಿತ್ಯ ಪರಿಷತ್ ಪ್ರತಿಭಾನ್ವೇಷಣ ಅರ್ಜಿ

https://drive.google.com/open?id=1cmQeVUbFPhRFhFcFbWPZoPAvwEERH2_B
https://drive.google.com/open?id=1cmQeVUbFPhRFhFcFbWPZoPAvwEERH2_B
   

ಮಕ್ಕಳ ಸಾಹಿತ್ಯ ಪರಿಷತ್ ಪ್ರತಿಭಾನ್ವೇಷಣ ಅರ್ಜಿ ಈ ಲಿಂಕಲ್ಲಿ ಲಭ್ಯ
   https://drive.google.com/open?id=1cmQeVUbFPhRFhFcFbWPZoPAvwEERH2_B   

Tuesday 14 April 2020

ಅಂತರ್ಜಾಲದ ಅಂಗಳದಲ್ಲಿ ಶಿಕ್ಷಕರಿಂದ ಮಕ್ಕಳ ಸಾಹಿತ್ಯ ಸಂಭ್ರಮ

ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್  (ರಿ) ಮೈಸೂರು

ಮಕ್ಕಳ ಸಾಹಿತ್ಯ ಸಮಿತಿ ವತಿಯಿಂದ ಆಯೋಜಿಸಿದ್ದ 

ಅಂತರ್ಜಾಲದ ಅಂಗಳದಲ್ಲಿ ಶಿಕ್ಷಕ ಸಾಹಿತಿಗಳ ಮಕ್ಕಳ ಸಾಹಿತ್ಯ ಸಂಭ್ರಮ.

ಕಾರ್ಯಕ್ರಮವು ದಿನಾಂಕ 12- 4- 2020. ರಂದು ಬೆಳಗ್ಗೆ 9ರಿಂದ ಸಂಜೆ 7.30 ರವರೆಗೆ ಯಶಸ್ವಿಯಾಗಿ ನೆರವೇರಿತು.

ರಾಜ್ಯದ ಎಲ್ಲ ಜಿಲ್ಲೆಗಳ ಶಿಕ್ಷಕ ಸಾಹಿತಿಗಳ 2 ವಾಟ್ಸಪ್ ಗುಂಪುಗಳಲ್ಲಿ 256+176 ಶಿಕ್ಷಕರಿದ್ದು   130 ಜನ ಶಿಕ್ಷಕ ಸಾಹಿತಿಗಳು ಮಕ್ಕಳ ಸಾಹಿತ್ಯ ಸ್ಪರ್ಧೆಯಲ್ಲಿ ತಮ್ಮ ಕವಿತೆ ರಚನೆ ಮಾಡಿ  ಮಕ್ಕಳ ಸಾಹಿತ್ಯ ಸಂವಾದ, ಮಕ್ಕಳ ಸಾಹಿತ್ಯದ ಆಡಿಯೋ-ವಿಡಿಯೋ ವಾಚನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. 51 ಶಿಕ್ಷಕಿರು   79 ಶಿಕ್ಷಕರು ಅಂತರ್ಜಾಲವನ್ನು ಬಳಸಿಕೊಂಡು  ಹೆಚ್ಚಾಗಿ ಪಾಲ್ಗೊಂಡಿದ್ದು ಗಮನ ಸೆಳೆಯಿತು.


ಶಿಕ್ಷಕ ಸಾಹಿತಿಗಳ ವಾಟ್ಸಾಪ್ ಬಳಗದ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಸಾಹಿತಿಗಳಾಗಿ, ಅಂದು ತಾವು ವಾಟ್ಸಾಪ್ ಗ್ರೂಪ್ಗೆ  ಬೆಳಗ್ಗೆಯಿಂದ ಸಂಜೆವರೆಗೆ ಜೊತೆಯಾಗಿದ್ದು  ಸ್ಪರ್ಧೆಯ ತೀರ್ಪುಗಾರರಾಗಿ ಭಾಗವಹಿಸಿದ್ದ ಹಿರಿಯ ಸಾಹಿತಿ ಡಾ. ಕವಿತಾಕೃಷ್ಣ . ತುಮಕೂರ.ಗಣೇಶ್ ನಾಡೋರ.ಯಲ್ಲಾಪುರ ,ಲಕ್ಷ್ಮಣ್ ಚೌರಿ ಅವರು ಮಕ್ಕಳ ಸಾಹಿತ್ಯ ಸಂವಾದ ನಡೆಸಿದರು.

ಕಾರ್ಯಕ್ರಮದ ಉದ್ದೇಶ ಮತ್ತು ಆಯಾಮಗಳು

ಕೊರೋನಾದ ವಿಪತ್ತಿನ ಸಂದಿಗ್ಧ ಕಾಲದಲ್ಲಿ  ರಜೆಯಲ್ಲಿರುವ ಶಿಕ್ಷಕ ಮಿತ್ರರು ರಜೆಯ ಸದುಪಯೋಗಕ್ಕಾಗಿ , ಶಾಲಾ ಮಕ್ಕಳಿಗೆ ಹೊಸ ಬಗೆಯಲ್ಲಿ ಸಾಹಿತ್ಯ ರಚನೆಗೆ ತೊಡಗಿಕೊಳ್ಳಲು , ಮಕ್ಕಳನ್ನು ಪಾಲಕರನ್ನು ಸಾಹಿತ್ಯಕವಾಗಿ ತಲುಪಲು ಹಾಗೂ ಬದಲಾದ ಅಂತರ್ಜಾಲ ತಾಂತ್ರಿಕ ಯುಗಕ್ಕೆ  ತಮ್ಮನ್ನು ತೆರೆದುಕೊಳ್ಳಲು  ಈ ಬಳಗವನ್ನು ಸದುಪಯೋಗ ಮಾಡಿಕೊಳ್ಳಲಾಗುತ್ತಿದೆ.

ಈ ವಾಟ್ಸಪ್ ಬಳಗ ಮೂರು ಆಯಾಮಗಳಲ್ಲಿ ಸಕ್ರಿಯವಾಗಿದೆ.

ಮಕ್ಕಳ ಸಾಹಿತ್ಯ ರಚನೆ, ಮಕ್ಕಳ ಸಾಹಿತ್ಯ ಸಂವಾದ, ಮಕ್ಕಳ ಸಾಹಿತ್ಯ ವಾಚನ .ನಿನ್ನೆ ನಡೆದ ಕಾರ್ಯಕ್ರಮದ ಪ್ರಮುಖ ಅಂಶಗಳಾಗಿತ್ತು.

ಅಲ್ಲದೆ ಈ ವಾಟ್ಸಪ್ ಬಳಗವು ಮಕ್ಕಳಿಗಾಗಿ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಮಕ್ಕಳಿಗಾಗಿ ನೂತನ ಸಾಹಿತ್ಯರಚನೆ, ತರಗತಿ ಕೋಣೆಯಲ್ಲಿ ನಾವಿನ್ಯತೆ ಆವಿಷ್ಕಾರ, ಮಕ್ಕಳಿಗಾಗಿ ವಿಶೇಷ ಶಿಬಿರ, ಮಕ್ಕಳು ಹಾಗೂ ಪಾಲಕರಿಗಾಗಿ ಅಂತರ್ಜಾಲದಲ್ಲಿ ವಿಶೇಷ ಶೈಕ್ಷಣಿಕ ಜಾಗೃತಿ ಅಭಿಯಾನ, ಮಕ್ಕಳ ಸಾಹಿತ್ಯ ಅಭಿಯಾನ ಮತ್ತಿತರ ಯೋಜನೆಗಳನ್ನು ರೂಪಿಸಿಕೊಂಡಿದೆ.


ಶಿಕ್ಷಕರ ಪ್ರತಿಭಾ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಶ್ರೀ ಪಿ ಮಹೇಶ್ ಅವರು  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿ ಮಕ್ಕಳ ಸಾಹಿತ್ಯ ಸಮಿತಿ ರಾಜ್ಯಮಟ್ಟದಲ್ಲಿ ಮಕ್ಕಳಿಗಾಗಿ ಜವಾಬ್ದಾರಿಯುತ ಕಾರ್ಯಕ್ರಮವನ್ನು ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮಾತನಾಡಿದರು.

ಮಕ್ಕಳ ಸಾಹಿತ್ಯ ಸಮಿತಿಯ ರಾಜ್ಯ ನಿರ್ದೇಶಕರಾದ ಮಕ್ಕಳ ಸಾಹಿತಿ ರವಿರಾಜ ಸಾಗರ್ ಅವರು ಈ ಕಾರ್ಯಕ್ರಮದ ಪರಿಕಲ್ಪನೆ ರೂಪಿಸಿದ್ದು  ಶಿಕ್ಷಕರು ಸದಾ ಹೊಸ ನಾವಿನ್ಯತೆಯತ್ತ  ತೆರೆದುಕೊಳ್ಳಬೇಕು, ಇಂದಿನ ಜಾಗತಿಕ ಆವಿಷ್ಕಾರಗಳ ಬಗ್ಗೆ , ಅಂತರ್ಜಾಲದ ಸಾಧ್ಯತೆಗಳ ಬಗ್ಗೆ ತಿಳಿದುಕೊಂಡು ಶಿಕ್ಷಕರು ವೃತ್ತಿಪರವಾಗಿ ಅಭಿವೃದ್ಧಿಗೊಳ್ಳುತ್ತಾ ಶೈಕ್ಷಣಿಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ಅವರು  ಶಿಕ್ಷಕ ಸಾಹಿತಿಗಳಿಂದ ರಾಜ್ಯಮಟ್ಟದಲ್ಲಿ  ನಡೆದ ಮೊದಲ ಅಂತರ್ಜಾಲ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಇದಾಗಿದೆ ಎಂದರು.

 
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ  ಮಕ್ಕಳ ಸಾಹಿತ್ಯ ಡಾ. ಕವಿತಾಕೃಷ್ಣ ಅವರು ರಾಜ್ಯಮಟ್ಟದಲ್ಲಿ ಶಿಕ್ಷಕರು ಅಂತರ್ಜಾಲದ ತಾಂತ್ರಿಕ ವಿಷಯ ತಿಳಿದುಕೊಂಡು ಸದುಪಯೋಗಪಡಿಸಿಕೊಳ್ಳುವುದು ಹೆಮ್ಮೆಯ ವಿಷಯ ಎಂದರು,ಶಿಕ್ಷಕರು ಮನೆ ಮನೆಗೆ ಮಕ್ಕಳಸಾಹಿತ್ಯ ತಲುಪಿಸಬೇಕು ಎಂದರು. 

 ಮತ್ತೊಬ್ಬ ಮಕ್ಕಳ ಸಾಹಿತಿ ಗಣೇಶ್ ನಾಡೂರ  ರವರು ಇದು ರಾಜ್ಯದ ಮಟ್ಟದಲ್ಲಿಯೇ ಮೊದಲ ಬಾರಿಗೆ ಇದು ಶಿಕ್ಷಕರ ನೂತನ ಪ್ರಯತ್ನ ಎಂದು ಶ್ಲಾಘಿಸಿದರು. ಶಿಕ್ಷಕರು ಮಕ್ಕಳಿಗೆ ಮತ್ತು ಪಾಲಕರಿಗೆ ಮಕ್ಕಳ ಸಾಹಿತ್ಯ ತಲುಪಿಸಬೇಕು ಅದು ಅವರ ಜವಾಬ್ದಾರಿ ಎಂದರು.

ಲಕ್ಷ್ಮಣ್ ಚೌರಿ ಅವರು ಮಕ್ಕಳ ಸಾಹಿತ್ಯ ಬೆಳವಣಿಗೆ ಶಿಕ್ಷಕರ ಮುಂದೆ ನಿಲ್ಲಬೇಕು. ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಬೇಕು ಎಂದರು.ಮುಂದೆ ಮತ್ತಷ್ಟು ಹೊಸ ಯೋಜನೆಗಳು ಶಿಕ್ಷಕರಿಂದ ಬರಲಿ ಎಂದು ಆಶಿಸಿದರು


ಕಾರ್ಯಾಧ್ಯಕ್ಷರಾದ ವಿ ಜಿ ಅಗ್ರಹಾರ ಅವರು ನಿರ್ವಹಿಸಿದರು, ಉಪಾಧ್ಯಕ್ಷರಾದ ಶಿವಾರೆಡ್ಡಿ ಅವರು ಸ್ವಾಗತಿಸಿದರು, ಶಂಕರ್ ಕ್ಯಾಸ್ತಿ ಯವರು ಸಮಾರೋಪದ ನುಡಿಗಳನ್ನು ಆಡಿದರು, ಮಕ್ಕಳ ಸಾಹಿತ್ಯ ಸಮಿತಿಯ ರವಿರಾಜ್ ಸಾಗರ್ ,ಸುಜಾತ, ಮಂಗಳ, ಸಂತೋಷ್ ಬಿದರಗದ್ದೆ ಅಂತರ್ಜಾಲ ಕಾರ್ಯಕ್ರಮದ ತಾಂತ್ರಿಕ ನಿರ್ವಹಣೆ ಮಾಡಿದರು.

Wednesday 8 April 2020

ಮೇ 10 ಮಕ್ಕಳ ಶೈಕ್ಷಣಿಕ ನಾಟಕ ವೀಕ್ಷಿಸಿ

https://youtu.be/wKXUbyCgH1c
ಮಕ್ಕಳ ಶೈಕ್ಷಣಿಕ ಸಮಸ್ಯೆ, ಪಾಲಕರ ಒತ್ತಡ, ಪರೀಕ್ಷಾ ಪೊಬಿಯಾ , ಖಿನ್ನತೆ ವಸ್ತುವಿಷಯ ಕೇಂದ್ರಿತ ಮಕ್ಕಳ ನಾಟಕ ಈ ಮೇಲಿನ  ನೀಲಿ ಲಿಂಕ್ ಕ್ಲಿಕ್ ಮಾಡಿ ನೋಡಿ.

ಹೆಚ್ಚಿನ ಶೈಕ್ಷಣಕ, ಕಲೆ-ಸಾಹಿತ್ಯ ವಿಡಿಯೋಗಳಿಗೆ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ

Thursday 26 March 2020

ನೋಡಲೇಬೇಕಾದ ಸಿನಿಮಾಗಳ ಲಿಂಕ್

ಮನೇಲಿರಿ , ಸಿನಿಮಾ ನೋಡಿ!
ಮನೇಲಿರಿ , ಕ್ಷೇಮವಾಗಿರಿ. ಬೋರಾದ್ರೆ ಇಲ್ಲಿ ಒಂದಷ್ಟು ಒಳ್ಳೆಯ ಸಿನಿಮಾಗಳಿವೆ ಗಮನಿಸಿ. ಕ್ಲಾಸಿಕ್'ಗಳೆನಿಸಿದ, ವಸ್ತು, ವಿಷಯ, ನಿರೂಪಣೆಯ ದೃಷ್ಟಿಯಿಂದ ವಿಶೇಷವೆನಿಸಿದ ಆಯ್ದ 60 ಕನ್ನಡ ಸಿನಿಮಾಗಳಿವು. ಲಿಂಕ್ ಕ್ಲಿಕ್ಕಿಸಿ ನೀವು ಸಿನಿಮಾ ನೋಡಬಹುದು. ಲಿಂಕ್ ಕಾಪಿ ಮಾಡಿ ಒಂದ್ಕಡೆ ಇಟ್ಕಳಿ. ಸಾಧ್ಯವಾದರೆ ಪೋಸ್ಟ್ ಶೇರ್ ಮಾಡಿ, ಸಿನಿಮಾಸಕ್ತರಿಗೆ ಅನುಕೂಲವಾಗಬಹುದು.
---------
ಸಂಸ್ಕಾರ
https://youtu.be/yNKcP0yMKHw
---------------------------------------
ಕಾಡು
https://youtu.be/yS4TgOi4P1E
---------------------------------------
ಬೂತಯ್ಯನ ಮಗ ಅಯ್ಯು
https://youtu.be/aRJkkpOC12s
---------------------------------------
ಹಂಸಗೀತೆ
https://youtu.be/OwZu9W2qemU
---------------------------------------
ಬ್ಯಾಂಕರ್ ಮಾರ್ಗಯ್ಯ
https://youtu.be/_xS1HaWlAmc
---------------------------------------
ಭೂದಾನ
https://youtu.be/ADwtKDeuIR0
---------------------------------------
ವಂಶವೃಕ್ಷ
https://youtu.be/LoKh2Rjzx6U
---------------------------------------
ಕಾಕನ ಕೋಟೆ
https://youtu.be/DbJnCFab6Bc
---------------------------------------
ಗೆಜ್ಜೆಪೂಜೆ
https://youtu.be/Bw1SWdU-euY
---------------------------------------
ಕವಿರತ್ನ ಕಾಳಿದಾಸ
https://youtu.be/dmLSeye1KBY
---------------------------------------
ಚೋಮನ ದುಡಿ
https://youtu.be/Aqe1bp6WWn4
---------------------------------------
ಕಿತ್ತೂರು ರಾಣಿ ಚೆನ್ನಮ್ಮ
https://youtu.be/oaFfYLTNKrQ
---------------------------------------
ಒಂದಾನೊಂದು ಕಾಲದಲ್ಲಿ
https://youtu.be/91RkBA_BD48
---------------------------------------
ಬಂಗಾರದ ಮನುಷ್ಯ
https://youtu.be/Quvvj0Dw3tI
---------------------------------------
ಫಣಿಯಮ್ಮ
https://youtu.be/cvVEEEH9ErY
---------------------------------------
ಉಯ್ಯಾಲೆ
https://youtu.be/6vFyCSEtNmM
---------------------------------------
ಚಿತೆಗೂ ಚಿಂತೆ
https://youtu.be/O2KQ6Ryg-kM
---------------------------------------
ತಬರನ ಕತೆ
https://youtu.be/yqP4yJbx7dA
--------------------------------------
ಬರ
https://youtu.be/lnkkis1mz0Y
--------------------------------------
ತಬ್ಬಲಿಯು ನೀನಾದೆ ಮಗನೆ
https://youtu.be/Hj2199MGN-Q
--------------------------------------
ನಾಗರಹಾವು
https://youtu.be/8ou_5ozSqdQ
-------------------------------------
ಹೇಮಾವತಿ
https://youtu.be/rPVRzpzF6yc
-------------------------------------
ರಂಗನಾಯಕಿ
https://youtu.be/ezcoDEWrmEY
--------------------------------------
ಬೆಸುಗೆ
https://youtu.be/2jhz6kBEdAs
---------------------------------------
ಉದ್ಭವ
https://youtu.be/hzgqV6ujauo
----------------------------------------
ಸನಾದಿ ಅಪ್ಪಣ್ಣ
https://youtu.be/LIGU2GhkRbc
---------------------------------------
ಬೆಟ್ಟದ ಹೂವು
https://youtu.be/CVdPsgHz0aU
---------------------------------------
ಆಕ್ಸಿಡೆಂಟ್
https://youtu.be/7ZRBU0I6Oqg
--------------------------------------
ಸಂಗ್ಯಾ ಬಾಳ್ಯಾ
https://youtu.be/Iq8NlxJsG8g
--------------------------------------
ಕನಸೆಂಬೋ ಕುದುರೆಯನೇರಿ
https://youtu.be/rg2LiydJ0RI
--------------------------------------
ಮುನ್ನುಡಿ
https://youtu.be/waalUMouZ4g
--------------------------------------
ಮುತ್ತಿನ ಹಾರ
https://youtu.be/uM48tkAnNL0
--------------------------------------
ಗುಲಾಬಿ ಟಾಕೀಸ್
https://youtu.be/XnCsEs7OOYk
--------------------------------------
ಮೈಸೂರು ಮಲ್ಲಿಗೆ
https://youtu.be/2WpnzORm9gU
--------------------------------------
ಉಲ್ಟಾ ಪಲ್ಟಾ
https://youtu.be/N5-Q6luL6-k
--------------------------------------
ಚಿನ್ನಾರಿ ಮುತ್ತ
https://youtu.be/JacAbPfWKqA
--------------------------------------
ಅವಳೇ ನನ್ನ ಹೆಂಡ್ತಿ
https://youtu.be/nFY8SKej3pk
--------------------------------------
ಪ್ರೇಮಲೋಕ
https://youtu.be/mUa9yn62sco
--------------------------------------
ಚೈತ್ರದ ಪ್ರೇಮಾಂಜಲಿ
https://youtu.be/lHUglz4f03E
---------------------------------------
ಗಣೇಶನ ಮದುವೆ
https://youtu.be/kQu7yg-5VxQ
----------------------------------------
ನಾಗರ ಹೊಳೆ
https://youtu.be/b5nuJg4b734
----------------------------------------
ಪಂಚಮವೇದ
https://youtu.be/bhtDS46e5FY
----------------------------------------
ಬೆಳದಿಂಗಳ ಬಾಲೆ
https://youtu.be/W6qLG_EDB2M
----------------------------------------
ಜನುಮದ ಜೋಡಿ
https://youtu.be/fJ1lEU5XG4I
----------------------------------------
ಸಂತ ಶಿಶುನಾಳ ಶರೀಫ
https://youtu.be/340bQgYvbw4
----------------------------------------
ಓ ಮಲ್ಲಿಗೆ
https://youtu.be/J6tvRquhXIs
----------------------------------------
ದ್ವೀಪ
https://youtu.be/EY-qzjFtda8
----------------------------------------
ದುನಿಯಾ
https://youtu.be/pK9jPP045aE
----------------------------------------
ಸ್ಪರ್ಶ
https://youtu.be/dlL3ueXvmO0
----------------------------------------
ಕಾನೂರು ಹೆಗ್ಗಡತಿ
https://youtu.be/s06qNCLX54s
----------------------------------------
ಆಸ್ಫೋಟ
https://youtu.be/ONoiuWtsQwY
-----------------------------------------
ಸಯನೈಡ್
https://youtu.be/ae2sluNXbeQ
-----------------------------------------
ಪುಟ್ಟಕ್ಕನ ಹೈವೇ
https://youtu.be/rk5D3cS_rBg
-----------------------------------------
ಶ್!!!
https://youtu.be/OYGD_wRWYX8
-----------------------------------------
ಮಠ
https://youtu.be/vVx6W9tbyOc
-----------------------------------------
ಗಾಳಿಪಟ
https://youtu.be/UymDv8OjMvE
-----------------------------------------
ಜಟ್ಟ
https://youtu.be/UzDPQHuNsWg
-----------------------------------------
ಒಲವೇ ಮಂದಾರ
https://youtu.be/dkixoi5Gdxo
-----------------------------------------
ಕೆಂಡ ಸಂಪಿಗೆ
https://youtu.be/NwraFXKoMVU
-----------------------------------------
ಹರಿವು 
https://youtu.be/f4D3aOsAgvo

Wednesday 25 March 2020

ನಾಗೇಶ್ ಹೆಗಡೆಯವರ ಲೇಖನ-ಅಜ್ಞಾನಾಲಜಿ

*"ಅರಿವನ್ನು ಮರೆಮಾಚುವ ಮಾಯಾ ಪರದೆ"* 
 *_ಅಜ್ಞಾನಾಲಜಿ_* 
                             -ನಾಗೇಶ ಹೆಗಡೆ

 *(ಮೌಢ್ಯ ಬಿತ್ತನೆಯ ಈ ಕಾಲದಲ್ಲಿ ಕಣ್ತೆರೆಸುವ ಒಂದು ಅರ್ಥಪೂರ್ಣ ಬರಹ)* 


ಈಚೆಗೆ ಒಬ್ಬ ಟ್ಯಾಕ್ಸಿ ಚಾಲಕ ತನ್ನ ಕಾರನ್ನು ಹೊರಡಿಸುತ್ತಲೇ ಕಲ್ಕಿ ಭಗವತೇ ನಮಃ ಎಂಬ ಮಂತ್ರದ ಕಾರ್ಡನ್ನು ಒಳಗೆ ಕೂತ ನನ್ನ ಕೈಗೆ ಕೊಟ್ಟ. ನನಗೆ ರೇಗಿತು. ಈತನಲ್ಲೇ ಅಲ್ವೇನ್ರೀ ₹ 500 ಕೋಟಿ ಕಪ್ಪುಹಣ ಸಿಕ್ಕಿದ್ದು? ಎಂದು ಕೇಳಿದೆ. ಅದು ಆಶ್ರಮದ ಅಕೌಂಟ್ಸ್ ವಿಭಾಗದವರು ಮಾಡಿದ ತಪ್ಪು ಸಾರ್. ಭಗವಾನ್‌ಗೂ, ಅದಕ್ಕೂ ಸಂಬಂಧ ಇಲ್ಲ ಅಂದ. ಕಲ್ಕಿಯೇ ಎಲ್ಲಾ ದೇವರ, ಅಲ್ಲಾ-ಏಸುಗಳ ಮೂರ್ತರೂಪ ಎಂದೆಲ್ಲ ಆತ ಕೊಂಡಾಡುತ್ತಿದ್ದ. ನಮ್ಮಿಬ್ಬರ ಮಧ್ಯೆ ಜಟಾಪಟಿ ಶುರುವಾಯ್ತು. ಹಾಗಿದ್ದರೆ ಕೊರೊನಾ ವೈರಸ್ ಯಾಕೆ ಬಂತ್ರೀ? ಎಂದು ಕೇಳಿಬಿಟ್ಟೆ.

ಆಗ ನನಗೆ ಅಚ್ಚರಿ ಕಾದಿತ್ತು. ಅಖಿಲ ಭಾರತ ಹಿಂದೂ ಮಹಾಸಭಾದ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮೂರು ದಿನಗಳ ಹಿಂದಷ್ಟೇ ದಿಲ್ಲಿಯಲ್ಲಿ ಹೇಳಿದ ಉತ್ತರವೇ ಈತನ ಬಾಯಲ್ಲೂ ಬಂತು: ಮೂಕಜೀವಿಗಳ ಸಂರಕ್ಷಣೆಗೆಂದೇ ದೇವರು ಅದನ್ನು ಸೃಷ್ಟಿಸಿದ್ದು. ಚೀನಿಯರು ಎಷ್ಟೊಂದು ವನ್ಯಜೀವಿಗಳನ್ನು ಕೊಂದು ತಿನ್ನುತ್ತಾರೆ. ಅವರಿಗೆ ಪಾಠ ಕಲಿಸಬೇಕಲ್ವಾ! ಎಂದ.

ದೇವರ ಅಸ್ತಿತ್ವ ಕುರಿತ ಎಲ್ಲಾ ಪ್ರಶ್ನೆಗಳಿಗೂ ಆತ ಉತ್ತರಗಳನ್ನು ಕಂಠಪಾಠ ಮಾಡಿಕೊಂಡಂತಿತ್ತು. ತೆರಿಗೆ ವಂಚಿಸುವ ಶತಕೋಟ್ಯಧೀಶರತ್ತ, ನೆರೆ ಪರಿಹಾರಕ್ಕೆ ಕಾದಿರುವ ಕೋಟ್ಯಂತರ ಬಡವರತ್ತ ದೇವರು ಯಾಕೆ ಕಣ್ಣು ಬಿಡ್ತಿಲ್ಲ? ಎಂದು ನಾನು ಕೇಳಿದಾಗ ಕೂಡ ಆತನಲ್ಲಿ ನುಣುಚು ಮಾತುಗಳಿದ್ದವು. ಶ್ಲೋಕಗಳನ್ನು ಪಟಪಟ ಉದುರಿಸುತ್ತಿದ್ದ. ಎಲ್ಲಿಂದ ಬಂತು ಈತನಿಗೆ ಅಷ್ಟೆಲ್ಲ ಮಾಹಿತಿ? ಅದೇನೋ ಸತ್ಸಂಗದ ಚಾನೆಲ್ ಇದೆಯಂತೆ. ಅದನ್ನು ಎಂದು ಬೇಕಾದರೂ, ಎಲ್ಲಿಂದ ಬೇಕಾದರೂ ಆಲಿಸಬಹುದಂತೆ. ಫಾರ್ವರ್ಡ್ ಮಾಡ್ಲಾ ಸಾರ್? ಕೇಳಿದ.

ಮೌಢ್ಯವನ್ನು ಅಥವಾ ಅಜ್ಞಾನವನ್ನು ವೈರಸ್ಸಿನಂತೆ ಪಸರಿಸುವ ಇಂಥ ತಂತ್ರಗಳ ಅಧ್ಯಯನಕ್ಕೆ ಅಗ್ನಾಥಾಲಜಿ ಎನ್ನುತ್ತಾರೆ. ಬೇಕಿದ್ದರೆ ನೀವದಕ್ಕೆ ಅಜ್ಞಾನಾಲಜಿ ಎನ್ನಿ. ವಿಜ್ಞಾನದ ಬಹುತೇಕ ಎಲ್ಲ ಪದಗಳ ಹಾಗೆ ಇದೂ ಗ್ರೀಕ್ ಭಾಷೆಯ ಅಗ್ನೊಸಿಸ್ (agnosis ಅಂದರೆ ಅಜ್ಞಾನ, ಗೊತ್ತಿಲ್ಲದ್ದು) ಎಂಬ ಮೂಲದಿಂದಲೇ ಬಂದಿದೆ. ಜನರನ್ನು ಬೇಕಂತಲೇ ದಾರಿ ತಪ್ಪಿಸುವುದು, ಭಯ-ಸಂಶಯ ಹುಟ್ಟಿಸುವ ವಿಧಾನಗಳು ಈಗೀಗ ವಿರಾಟ್ ರೂಪ ಪಡೆಯುತ್ತಿವೆ. ಚಿಂತಕರು ಇದನ್ನೊಂದು ಅಕಾಡೆಮಿಕ್ ಅಧ್ಯಯನದ ವಿಷಯವಾಗಿ ಕೈಗೆತ್ತಿಕೊಳ್ಳಲು ಒಂದು ಹಿನ್ನೆಲೆ ಇದೆ:

90ರ ದಶಕದಲ್ಲಿ ಪಶ್ಚಿಮದ ದೇಶಗಳಲ್ಲಿ ತಂಬಾಕಿನ ನಿಷೇಧಕ್ಕೆ ಸಿದ್ಧತೆ ನಡೆಸಿದಾಗ ಸಿಗರೇಟ್ ಕಂಪನಿಗಳು ತತ್ತರಿಸಿದವು. ವಿಜ್ಞಾನಿಗಳ ಸಂಶೋಧನೆಗಳೂ ತಂಬಾಕಿನ ಅಪಾಯಗಳ ಬಗ್ಗೆ ಸಾಕ್ಷ್ಯಗಳನ್ನು ಮುಂದಿಡುತ್ತಿದ್ದವು. ಆಗ ಖ್ಯಾತ ಸಿಗರೇಟ್ ಕಂಪನಿಯ ರಹಸ್ಯ ದಾಖಲೆಯೊಂದು ಸೋರಿಕೆಯಾಯಿತು. ನಾವು ಸಿಗರೇಟನ್ನಷ್ಟೇ ಅಲ್ಲ, ಸಂಶಯವನ್ನೂ ಉತ್ಪಾದಿಸಬೇಕು ಎಂಬ ಸುತ್ತೋಲೆಯನ್ನು ಕಂಪನಿ ತನ್ನ ಅಧಿಕಾರಿಗಳಿಗೆ ಕಳಿಸಿತ್ತು. ವಿಜ್ಞಾನಿಗಳ ಪ್ರಯೋಗ ಸರಿ ಇಲ್ಲ. ಅದರಲ್ಲಿ ದೋಷಗಳಿವೆ ಎನ್ನಬಲ್ಲ ಕೆಲವು ವಿಜ್ಞಾನಿಗಳನ್ನೇ ಎತ್ತಿಕಟ್ಟಿ, ಸರಣಿ ಜಾಹೀರಾತು ಪ್ರಕಟಿಸಿ, ದು-ಭಾರೀ ವಕೀಲರ ಮೂಲಕ ಖಟ್ಲೆ ಹಾಕಿಸಿ, ಸಂಸತ್ತಿನಲ್ಲಿ ಕೂಡ ಗಲಾಟೆ ಎಬ್ಬಿಸಿ, ಒಟ್ಟಾರೆ ಗೊಂದಲ ಹುಟ್ಟಿಸುವ ಪಿತೂರಿ ನಡೆಯಿತು.

ವೈದ್ಯಕೀಯ ಜ್ಞಾನದ ಬೆಳಕಿಗೆ ತಡೆ ಒಡ್ಡುವ, ಸಂಶಯದ ಬೀಜ ಬಿತ್ತುವ, ಕಾನೂನಿನ ದಾರಿ ತಪ್ಪಿಸುವ ಈ ಪ್ರಕರಣದ ಕೂಲಂಕಷ ಅಧ್ಯಯನ ನಡೆಸಿ, ಕಾರ್ನೆಲ್ ವಿಶ್ವವಿದ್ಯಾಲಯದ ವಿಜ್ಞಾನಿ ಡೇವಿಡ್ ಡನ್ನಿಂಗ್ ಎಂಬಾತ ಮೊದಲ ಬಾರಿಗೆ ಅಜ್ಞಾನ ಪ್ರಸಾರದ ಹೊಸ ಪರಿಕಲ್ಪನೆಗಳನ್ನು ಬೆಳಕಿಗೆ ತಂದ. ಧರ್ಮಪ್ರಸಾರಕ್ಕೆ ಮಾತ್ರ ಸೀಮಿತವಾಗಿದ್ದ ಈ ತಂತ್ರ ಹೇಗೆ ಈಗಿನ ಡೇಟಾ ಯುಗದಲ್ಲಿ ಉದ್ಯಮ ವಲಯಕ್ಕೆ, ರಾಜಕೀಯಕ್ಕೆ ಮತ್ತು ಸಾಂಸ್ಕೃತಿಕ ರಂಗಕ್ಕೆ ಲಗ್ಗೆ ಇಡುತ್ತಿದೆ ಎಂಬುದನ್ನು ವಿವರಿಸಿದ. ಅಜ್ಞಾನ ವಿತರಣಾ ತಂತ್ರಗಳ ಬಗ್ಗೆ ಈಗಂತೂ ವಿಜ್ಞಾನಿಗಳು, ಸಮಾಜ ವಿಜ್ಞಾನಿಗಳು, ರಾಜ್ಯಶಾಸ್ತ್ರ ಪರಿಣತರು ಅಧ್ಯಯನ ನಡೆಸುತ್ತಿದ್ದಾರೆ. ಇದರ ಹಾವಳಿ ಚರ್ಚಿಸಲು ಜಾಗತಿಕ ಸಮ್ಮೇಳನವೂ ನಡೆದಿದೆ.

ಯಾವುದೇ ಸಮಾಜದಲ್ಲಿ ಅಜ್ಞಾನ ಹಾಸು ಹೊಕ್ಕಾಗಿರಲು ಅನೇಕ ಕಾರಣಗಳಿರುತ್ತವೆ. ಚಾರಿತ್ರಿಕ ಮರೆವು ಒಂದು ಕಾರಣ ಇರಬಹುದು. ತಂಜಾವೂರಿನ ಬೃಹದೇಶ್ವರ ದೇಗುಲದ ಶಿಖರಕ್ಕೆ ಅಂದಿನ ಜನರು 180 ಟನ್ ತೂಕದ ಶಿಲೆಯನ್ನು ಹೇಗೆ ಏರಿಸಿದರು ಎಂಬುದು ಚರಿತ್ರೆಯಲ್ಲಿ ಮರೆತು ಹೋಗಿದೆ. ದೈವೀಶಕ್ತಿಯೇ ಭಕ್ತಿಯೇ ಮಹಾಶಕ್ತಿ ಎಂಬ ಅಜ್ಞಾನ ಮಾತ್ರ ಉಳಿದು ಬಂದಿದೆ.

ಅಪಾಯದ ಅತಿ ಎಚ್ಚರಿಕೆಯೂ ಅಜ್ಞಾನ ಪ್ರಸಾರಕ್ಕೆ ಕಾರಣವಾಗಿದೆ. ಹಾವಿನ ನಾಗದೋಷದ ಭಯ, ವಾಸ್ತುದೋಷದ ಭಯ, ಪಾಪದ ಭಯ ಹುಟ್ಟಿಸಿ ಅದೆಷ್ಟು ಜನ ಉದ್ಧಾರವಾಗುತ್ತಿಲ್ಲ? ಇತ್ತೀಚಿನ ಕೊರೊನಾ ವೈರಸ್ಸನ್ನೇ ನೋಡಿ (ವಿಶ್ವ ಆರೋಗ್ಯ ಸಂಸ್ಥೆ ಇದಕ್ಕೆ ಇನ್ಫೋಡೆಮಿಕ್=ಸುದ್ದಿಮಾರಿ ಎಂಬ ಪದವನ್ನೇ ಕೊಟ್ಟಿದೆ): ಭಯವನ್ನು, ಮುಖವಾಡಗಳನ್ನು, ಜ್ವರದ ಮಾತ್ರೆಗಳನ್ನು ಮಾರುವ ವಾಣಿಜ್ಯ ಶಕ್ತಿಗಳು ಅಪಾಯದ ಅತಿಪ್ರಚಾರಕ್ಕೆಂದೇ ಮಾಧ್ಯಮಗಳನ್ನು ಬಳಸಿಕೊಳ್ಳುತ್ತವೆ. ಭಯದ ಪ್ರಸಾರಕ್ಕೆಂದು ಅಜ್ಞಾನಿಗಳ ಸೈನ್ಯವನ್ನೇ ಸೃಷ್ಟಿಸುತ್ತವೆ. ಅತ್ತ ಗಡಿಯಲ್ಲಿನ ಸೈನಿಕರಿಗೆ ಸರಿಯಾದ ಬೂಟು-ಬಂದೂಕು ಇಲ್ಲದಿದ್ದರೂ ಪರವಾಗಿಲ್ಲ, ದೇಶಕ್ಕೆ ಅಪಾಯ ಬಂತೆಂದು ಗುಲ್ಲೆಬ್ಬಿಸಿ ಬಹುಕೋಟಿ ಫೈಟರ್ ಜೆಟ್‌ಗಳನ್ನು ಮಾರುವ ದಲ್ಲಾಳಿಗಳು ಮಜವಾಗಿರುತ್ತಾರೆ.

ಈ ವಿಶ್ವದ ಬಹಳಷ್ಟು ವಿದ್ಯಮಾನಗಳ ಬಗ್ಗೆ ನಮಗೆ ಅಜ್ಞಾನವಿದೆ, ಒಪ್ಪಿಕೊಳ್ಳೋಣ. ಜ್ಞಾನದ ಅಂಗಳ ದೊಡ್ಡದಾದಷ್ಟೂ ಅಜ್ಞಾನದ ಕ್ಷಿತಿಜ ವಿಸ್ತರಿಸುತ್ತಲೇ ಇರುತ್ತದೆ.

ಆದರೆ ತಮಾಷೆ ಎಂದರೆ, ಹಿಂದಿನ ಕಾಲದ ಜ್ಞಾನಿಗಳಿಗೆ ಎಲ್ಲವೂ ಗೊತ್ತಿತ್ತು! ಎಲ್ಲವನ್ನೂ ಆ ದೇವರೇ ಸೃಷ್ಟಿ ಮಾಡಿದ್ದು ಎಂದು ಹೇಳಿ ನಮ್ಮ ಬಾಯಿ ಮುಚ್ಚಿಸುತ್ತಿದ್ದರು. ಎಳೆ ಮಗುವೊಂದು ಸಿಡುಬು (ಮೈಲಿ) ರೋಗದಿಂದ ನರಳಿ ಸತ್ತರೆ, ಅದು ಪೂರ್ವಜನ್ಮದ ಪಾಪದ ಫಲ ಎಂದುಬಿಡುತ್ತಿದ್ದರು. ಪ್ರಶ್ನಿಸುವ ಮನೋಭಾವವೇ ಇರುತ್ತಿರಲಿಲ್ಲ. ಈಗ ಜೀವಾಣುಗಳ ಬಗ್ಗೆ ಸಾಕಷ್ಟು ಗೊತ್ತಾಗಿದೆ. ಇನ್ನೂ ಗೊತ್ತಾಗಬೇಕಾಗಿದ್ದು ತುಂಬಾ ಇದೆ ಎಂಬುದೂ ಗೊತ್ತಾಗಿದೆ. ವಿಜ್ಞಾನದ ದೊಡ್ಡ ರಗಳೆ ಏನೆಂದರೆ, ಒಂದು ಪ್ರಶ್ನೆಗೆ ಉತ್ತರ ಹುಡುಕಲು ಹೋಗಿ ಹತ್ತಾರು ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತದೆ. ಧರ್ಮದ ಮಟ್ಟಿಗೆ ಈ ರಗಳೆಯೇ ಇಲ್ಲ. ದೇವರು ದೊಡ್ಡವನು! ಗೋಮಾತೆಯಲ್ಲೂ ಆತ ಅವಿತು ಕೂತು, ಅದರ ಉಸಿರಿನಲ್ಲಿ ಆಮ್ಲಜನಕವನ್ನೂ, ಚಿನ್ನದ ಬಣ್ಣದ ಮೂತ್ರದಲ್ಲಿ ಕ್ಯಾನ್ಸರ್ ನಿವಾರಕ ಔಷಧವನ್ನೂ ಹಂಚುವವನು.

ಹಿಂದೆಲ್ಲ ಅಜ್ಞಾನ ಅಥವಾ ಮೌಢ್ಯ ಅನ್ನೋದು ಜ್ಞಾನದ ಕೊರತೆ ಎಂದಿಷ್ಟೇ ಆಗಿತ್ತು. ಈಗ ಅದು ಉದ್ದೇಶಪೂರ್ವಕವಾಗಿ ಉತ್ಪಾದಿಸಬಹುದಾದ, ಸಮಾಜದ ಮೇಲೆ ಹಾಸಿ ಹೊದೆಸಬಹುದಾದ ಮಾಯಾ ಪರದೆ ಆಗುತ್ತಿದೆ ಎನ್ನುತ್ತಾರೆ ಸ್ಟಾನ್‌ಫರ್ಡ್ ವಿವಿಯ ವಿಜ್ಞಾನ ಚರಿತ್ರೆಗಾರ್ತಿ ಲಿಂಡಾ ಶ್ಕೀಬಿಂಗರ್. ರಾಜಕೀಯ ಚಾಣಕ್ಯರು ಮತ್ತು ಕಾರ್ಪೊರೇಟ್ ತಂತ್ರಿಗಳು ಅದನ್ನು ಹೇಗೆಲ್ಲ ಬಳಸತೊಡಗಿದ್ದಾರೆ ಎಂಬ ಬಗ್ಗೆ ಈಕೆ ಒಂದು ಗ್ರಂಥವನ್ನೇ ಬರೆದಿದ್ದಾರೆ.

ಹವಾಗುಣ ಬದಲಾಗುತ್ತಿದೆ ಎಂದು ವಿಜ್ಞಾನಿಗಳು ಅದೆಷ್ಟೇ ಸಾಕ್ಷ್ಯವನ್ನು ಒದಗಿಸಿದರೂ ಅವೆಲ್ಲವೂ ಸಂಶಯಾತೀತವಲ್ಲ, ಅದರಲ್ಲಿ ಪಟ್ಟಭದ್ರರ ವ್ಯೂಹವಿದೆ ಎಂದೆಲ್ಲ ಶಂಕಾಪ್ರಚಾರ ನಡೆಸಿ, ಸಮಾಜವನ್ನೇ ಇಬ್ಭಾಗಿಸಬಲ್ಲ ಜಾಣ ಹುನ್ನಾರಗಳನ್ನು ಎತ್ತಿ ತೋರಿಸಿದ್ದಾರೆ.

ಸಂಶಯದ ಹೊಗೆ ಎಬ್ಬಿಸಿ, ಮೌಢ್ಯದ ಪರದೆಯನ್ನು ಬೀಸುವಲ್ಲಿ ವಾಣಿಜ್ಯಶಕ್ತಿಗಳ ಜೊತೆ ಸಾಂಸ್ಕೃತಿಕ, ರಾಜಕೀಯ ತಂತ್ರಗಾರರು ಪೈಪೋಟಿಗೆ ನಿಂತಿದ್ದಾರೆ. ಒಬಾಮ ಅಮೆರಿಕದಲ್ಲಿ ಹುಟ್ಟಲೇ ಇಲ್ಲ ಎಂತಲೋ, ರಾಹುಲ್ ಗಾಂಧಿ ಇಟಲಿಯ ಪ್ರಜೆ ಎಂತಲೋ, ದೊರೆಸ್ವಾಮಿ ಫೇಕ್ ಎಂತಲೋ ಎಷ್ಟೊಂದು ಜನರನ್ನು ಆಗಲೇ ನಂಬಿಸಿಯಾಗಿದೆ. ನೆಹರೂ ಒಬ್ಬ ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಮುತ್ಸದ್ದಿ ಆಗಿದ್ದರು ಎಂಬುದನ್ನು ಈಗಿನ ವಾಟ್ಸ್ಆ್ಯಪ್‌ ವಿವಿಯ ಬಹುತೇಕ ಯುವಜನರು ನಂಬುತ್ತಿಲ್ಲ. ಗಾಂಧೀಜಿಯ ಗೊಂಬೆಗೆ ಪಿಸ್ತೂಲಿನಿಂದ ಗುಂಡಿಕ್ಕಿ ನಕಲಿ ನೆತ್ತರಿನ ಹೊಳೆ ಹರಿಸಿದಾಕೆಯೇ ಅಸಲೀಗಂಡು ಎನ್ನುವಂತಾಗಿದೆ.

ಸ್ಥಾಪಿತ ಮೌಲ್ಯಗಳನ್ನೆಲ್ಲ ಪಲ್ಟಿ ಹೊಡೆಸಿ, ಪುರಾತನ ಜ್ಞಾನವೇ ಶ್ರೇಷ್ಠ ಎಂಬುದನ್ನು ಬಿತ್ತಲಾಗುತ್ತಿದೆ. ಹಿಂದೊಂದು ಕಾಲದಲ್ಲಿ ನಮಗೆ ಎಲ್ಲವೂ ಗೊತ್ತಿತ್ತು- ರಾಕೆಟ್ ಇತ್ತು, ವಿಮಾನಗಳಿದ್ದವು, ಸುರೂಪಿ ಚಿಕಿತ್ಸೆ ಗೊತ್ತಿತ್ತು, ಬೆಳಕಿನ ವೇಗ ಗೊತ್ತಿತ್ತು, ಸಾಪೇಕ್ಷ ಸಿದ್ಧಾಂತ ಗೊತ್ತಿತ್ತು ಎಂಬಿತ್ಯಾದಿ ಬುರುಡೆಗಳನ್ನು ವಿಜ್ಞಾನ ಸಮ್ಮೇಳನದಲ್ಲೇ ಹಾರಿಬಿಡುವ ತಜ್ಞರು ಜಾಸ್ತಿ ಫಾರ್ವರ್ಡ್‌ಗಳನ್ನು ಗಿಟ್ಟಿಸುತ್ತಾರೆ. ಜ್ಞಾನ ವಿಸ್ತರಣೆಗಿಂತ ಅಜ್ಞಾನ ವಿತರಣೆಗೇ ಹೆಚ್ಚಿನ ಪ್ರಾಮುಖ್ಯ ಸಿಗತೊಡಗಿದೆ. ಹಳತಿಗೆ ಹೊಳಪು ಕೊಟ್ಟು ಮೆರವಣಿಗೆ ನಡೆಸುವವರೇ ಮೆರೆಯತೊಡಗಿದ್ದಾರೆ.

ಅರಿವನ್ನು ಮರೆಮಾಚುವುದೂ ಅಂಧಃಕಾರವನ್ನು ಪಸರಿಸುವ ಒಂದು ತಂತ್ರವೇ ಆಗಿರುತ್ತದೆ. ಆಧಾರ್‌ನಲ್ಲಿ ಶೇಖರವಾಗಿರುವ ಖಾಸಗಿ ವಿವರಗಳೆಲ್ಲ ಲಾಭಕೋರ ಕಂಪನಿಗಳ ತೆಕ್ಕೆಗೆ ಸೇರುತ್ತಿರುವ ಬಗ್ಗೆ ಸರಣಿ ತನಿಖಾ ವರದಿಗಳನ್ನು ಪ್ರಕಟಿಸುತ್ತಿದ್ದ ಟ್ರಿಬ್ಯೂನ್ ಸಂಪಾದಕ ಹರೀಶ್ ಖರೆ ತನ್ನ ಹುದ್ದೆಗೆ ರಾಜೀನಾಮೆ ಕೊಡಬೇಕಾಯಿತು. ಆದಿವಾಸಿ ಮಕ್ಕಳನ್ನು ಪಾಲಕರಿಂದ ಬೇರ್ಪಡಿಸಿ ಒಯ್ದು ಸಂಸ್ಕಾರ ಕೊಡಿಸುವ ಜಾಲದ ಬಗ್ಗೆ ಔಟ್‌ಲುಕ್ ಪತ್ರಿಕೆ ಸರಣಿ ವರದಿಗಳನ್ನು ಪ್ರಕಟಿಸುತ್ತಿದ್ದಾಗಲೇ ಅದರ ಸಂಪಾದಕ (ಕನ್ನಡಿಗ) ಕೃಷ್ಣಪ್ರಸಾದ್ ರಾಜೀನಾಮೆ ಕೊಡಬೇಕಾಯಿತು. ಹೀಗೆ ಕೆಲಸ ಬಿಟ್ಟು ಮನೆಗೆ ಹೋಗಬೇಕಾದ ಅಥವಾ ಮಸಿ ಬಳಿಸಿಕೊಳ್ಳಬೇಕಾದ ಖ್ಯಾತ ಪತ್ರಕರ್ತರ ಪಟ್ಟಿ ದಿನದಿನಕ್ಕೆ ಉದ್ದವಾಗುತ್ತಿದೆ. ಕರಣ್ ಥಾಪರ್, ಬಾಬ್ಬಿ ಘೋಷ್, ಪರಂಜಯ್ ಗುಹಾ ಠಾಕುರ್ತಾ, ಪ್ರಣೊಯ್ ರಾಯ್, ರವೀಶ್ ಕುಮಾರ್, ಆತಿಷ್ ತಸ್ಸೀರ್ ಒಬ್ಬಿಬ್ಬರೆ?

ಮಾಯಾ ಪರದೆಯ ಎದುರಿನ ನಾಟಕವನ್ನು ಮಾತ್ರ ನೋಡುತ್ತಿರಿ, ನೇಪಥ್ಯದ ಕತ್ತಲತ್ತ ಇಣುಕಬೇಡಿ ಎಂಬ ಎಚ್ಚರಿಕೆ ಎಲ್ಲೆಡೆ ಸೂಸುತ್ತಿದೆ. ಪ್ರಭುತ್ವದ ಕುಣಿತಕ್ಕೆ ತಾಳ ಹಾಕುವ ಮಡಿಲು ಮಾಧ್ಯಮಗಳು ಮಾತ್ರ ವಿಜೃಂಭಿಸುತ್ತಿವೆ.

ಅಜ್ಞಾನ ವಿತರಣೆಯ ಜಾಗತಿಕ ಆಯಾಮ ಹೇಗೂ ಇರಲಿ, ಲಂಗುಲಗಾಮಿಲ್ಲದ ಸಾಮಾಜಿಕ ಮಾಧ್ಯಮಗಳಿಂದಾಗಿ ಪ್ರತಿ ವ್ಯಕ್ತಿಯೂ ತನಗೆ ತಾನೇ ತಜ್ಞ ಆಗಿಬಿಡುತ್ತಾನೆ/ಳೆ. ತೂಕ ತಗ್ಗಿಸುವ ವಿಧಾನಗಳ ಬಗ್ಗೆ ಯೂಟ್ಯೂಬ್ ವಿಡಿಯೊಗಳನ್ನು ನೋಡುತ್ತ ಯಾರು ಬೇಕಾದರೂ ಪೋಷಕಾಂಶಗಳ ಎಕ್ಸ್‌ಪರ್ಟ್ ಆಗಿಬಿಡಬಹುದು; ಆಗುತ್ತಿದ್ದಾರೆ. ಅಂಥವರು ಯಾವ ಅರ್ಹತೆ ಇಲ್ಲದಿದ್ದರೂ ತಮ್ಮದೇ ಯೂಟ್ಯೂಬ್ ಚಾನೆಲ್ಲನ್ನು ಆರಂಭಿಸಬಹುದು; ಆರಂಭಿಸುತ್ತಿದ್ದಾರೆ. ಆರೋಗ್ಯ ವಿಜ್ಞಾನದ ಬಗ್ಗೆ ಅಆಇಈ ಗೊತ್ತಿಲ್ಲದವನೂ ಕೊರೊನಾ ವೈರಸ್ಸಿಗೆ ಗಿಡಮೂಲಿಕೆಗಳನ್ನು ಶಿಫಾರಸು ಮಾಡುತ್ತಾನೆ. ಜಿಮ್‌ಗೆ ಹೋಗುವ ಟೆಕಿಯೊಬ್ಬ ತನಗೆ ನೆಟ್‌ನಲ್ಲಿ ಸಿಗುವ ಅರೆಬರೆ ಮಾಹಿತಿಗಳನ್ನು ಸೇರಿಸಿ ತನ್ನದೇ ಫಾರ್ಮುಲಾವನ್ನು ಮಾರಾಟ ಮಾಡುವ ತಜ್ಞನಾಗುತ್ತಾನೆ. ಕಾಫಿಗೆ ಕಾಸಿಲ್ಲದವನೂ ಹಣ ಹೂಡಿಕೆಯ ಸಲಹಾಕಾರ ಆಗಿಬಿಡುತ್ತಾನೆ. ಟ್ಯಾಕ್ಸಿ ಚಾಲಕನೂ ಅಧ್ಯಾತ್ಮದ ಪಾಠ ಹೇಳುವ ಪಂಡಿತನಾಗುತ್ತಾನೆ.

 *ಹೊಳಪಿನ ಹೊಸಯುಗವನ್ನು ತೋರಿಸುವ ಬದಲು ಈಗಿನ ಬಹುತೇಕ ಮಾಧ್ಯಮಗಳು ಕೊರಕಲು ಪ್ರಪಾತದ ಅಂಧಯುಗಕ್ಕೆ ನಮ್ಮನ್ನು ಕೊಂಡೊಯುತ್ತಿವೆ.*