ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Friday, 11 September 2015

ರೈತನ ಎದೆಯಿಂದ ಸಿಡಿಲು ಬಡಿವ ಮುನ್ನ. ..

ಬರೀ ಚಿಲ್ಲರೆ ದಕ್ಷಿಣೆ ಹಾಕೋ ರೈತರ ಮೇಲೆ ದೇವರಿಗಂತೂ ಕರುಣೆ ಇಲ್ಲ. ಕೇಳಿದಾಗೆಲ್ಲ ಪ್ರಶ್ನೆ ಮಾಡದೆ  ಕಣ್ಣು ಮುಚ್ಚಕೊಂಡು ಜಾತಿ ಮಗಾ ಅಂತಾ ಓಟು ಹಾಕೋ ಪ್ರಜೆಗಳ ಮೇಲೆ ಈ ರಾಜಕೀಯ ದೇವರುಗಳಿಗಾದರೂ ಕರುಣೆ ಬೇಡವೇ...?. ಈಚಿನ ದಶಕಗಳಲ್ಲಿ 15 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ದಾಖಲಾಗಿದೆ ..ಇನ್ನು ದಾಖಲಾಗದೆ ಉಳಿದವು ಅದೆಷ್ಟೋ. ..?
           ದೇವರು, ಧರ್ಮದ ಉಳಿಸುವಿಕೆಗೆ ,ಉತ್ಸವಕ್ಕೆ ಜಾತ್ರೆಗೆ  ಪಟ್ಟಿ ಎತ್ತೋಕೆ ಮನೆ ಮನೆ ಸುತ್ತೋ ಧರ್ಮಗಳ ಗುಂಪುಗಳ ಪಾಳೇಗಾರರೂ ಕೂಡ ರೈತನ ನೋವು ಆಲಿಸುತ್ತಿಲ್ಲ.. ಅವರೂ ಸಹ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಅಷ್ಟೇ. .!. ರೈತರ ನೋವಿಗೆ ಸ್ಪಂದಿಸದ ಧರ್ಮದ ಮುಖಂಡರು, ದೇವರು ಯಾಕೆ ಬೇಕು.? ಅವರಿಗೇಕೆ ರೈತ ಕಷ್ಟದಲ್ಲೂ ದೇವರಿಗಂತ ಹಣ ಕೊಡಬೇಕೂ...?
    ಎಲ್ಲೊ ಸುನಾಮಿ, ಭೂಕಂಪ ಆದಾಗ ದಾನ ಮಾಡುವ ..ಬಿಕ್ಷಗೆ ಇಳಿವವರು ನಮ್ಮ ರೈತರ ನೆರವಿಗೆ ಎಂದಾದರೂ ದಾವಿಸಿದ್ದಾರಾ....?   ಯೋಚಿಸಿ. .. ! ನೌಕರರ ಸಂಬಳ ಏರಿಸಿ ಅಂತಾ ಸ್ಟೈಕು ಬಂದ್ ಈ ದೇಶದಲ್ಲಿ ಸಹಜ. ಆದರೆ ರೈತರಿಗಾಗಿ ಯಾವ ಬಂದ್ ನಡೆದಿದೆ... ? ರೈತರೆಲ್ಲ ತಿರುಗಿ ಬಿದ್ದರೆ ರೈತರ  ರೋಷಾಗ್ನಿ ಜ್ವಾಲೆಗೆ ಇವರೆಲ್ಲ ಉಳಿದಾರೆಯೇ...?  ರೈತ ಸಿಡಿದರೆ ಸಿಡಿಲು. ಬಡಿಬಡವ ಮುಮುನ್ನ ಎಲ್ಲಾ ಎಚ್ಚರ ವಹಿಸಬೇಕು.  ಅವನಿಲ್ಲದೆರೆ  ನಿಮ್ಮ ಹಣ ನಿಮ್ಮ ಹೆಣದ ಮೇಲೆ ಕೇಕೆ ಹಾಕುವ ದಿನ ದೂರವಿಲ್ಲ... ಏನಂತೀರಿ. .?

Saturday, 5 September 2015

ದಿವ್ಯ ಜ್ಯೋತಿ.

ದಿವ್ಯ ಜ್ಯೋತಿ
,,,,,,,,,,,,,,,,,,,,,
ಕತ್ತಲೂ ಸುತ್ತಲೂ
  ಹಿಂಬಾಲಿಸಿದೆ ಎತ್ತಲೂ...
ಹಣವಿದ್ದಾಗ ಮಾತ್ರ ಸುಳಿದಾಡುವ ಬಂಧು ಬಳಗದಂತೆ
ಬೆಳಕಿದ್ದಾಗ  ಮಾತ್ರ ಜೊತೆ ಇಣುಕುವ
ನೆರಳು ಕೂಡ ಮಾಯ....!
ಕತ್ತಲು ನುಂಗಿದ ನನ್ನ ಸಹಾಯಕ್ಕೆ
ಬೆಳಕು ಕೂಡ ವಿಧಿ ಜೊತೆಸೇರಿ ಬೆದರಿ ನಿಂತಿತ್ತು.
ಆದರೆ. ...
       ಅದ್ಯಾವುದೋ  ಮಾಯಾ ಶಿಖರದಿಂದ
       ಬಂದಳು  ಸಿಂಹಿಣಿ....!
        ಕತ್ತಲನು ಬೆನ್ನಟ್ಟಿ ಬೇಟಿಯಾಡಿದಳು ನನ್ನ.
       ನಾನೀಗ ಅವಳ ಪಾಲು...!
          ಅವಳ ಕಣ್ಣ ವಜ್ರ ಶೋಭೆಗೆ
          ಆಂಗ್ಲರಂತೆ ನಡುರಾತ್ರಿಯೇ ಇದ್ದಕಿದ್ದಂತೆ
           ನಮಗೆ ಸ್ವತಂತ್ರ ನೀಡಿ ಓಡಿತು.
          ಅವಳು ನನಗೆ ದಿವ್ಯ ಜ್ಯೋತಿ,
           ಬದುಕಿಗೆಲ್ಲ ಅವಳೇ ಸ್ಪೂರ್ತಿ.
ಅವಳು  ಕಾಂತಿ
ಕತ್ತಲಲಿದ್ದ ನನಗೆ ನವ ಬರವಸೆಯ ಕ್ರಾಂತಿ.

Tuesday, 25 August 2015

ಸತ್ಯವತಿ

ಸತ್ಯವತಿ
...........
ನನಗೆ ಅವಳ ಕೆಣಕುವ ಹಠ
ಅವಳಿಗೆ ಸುಳ್ಳುಗಳ ಪೋಣಿಸುವ ಚಟ
ಹೆಸರು ಸತ್ಯವತಿ. ..!
          ಇಷ್ಟು ಹೊತ್ತು ಹೋಗಿದ್ದು ಎಲ್ಲಿಗೆ ಎಂದರೆ....
          ಅವಳು ಅಂತಾಳೆ.....
          ನೀಲ ಗಗನದಲಿ ಹರಿದು  ಮುರಿದು
        ಹಪ್ಪಳ ವಾಗಿರುವ ಮೋಡಗಳ ಎಳೆದು ತಂದು
ಜೇಡರ ಬಲೆಯ ನೂಲಲಿ ಹೊಲೆದು
ಬಿರಿದ ನಮ್ಮ ಹೊಲದಲ್ಲಿ ಕಟ್ಟಿ ಹಾಕಿ
ಕೆಳಗೆ ಬೆಂಕಿ ಮಾಡಿ  ಕಾಯಿಸಿ
ಮೋಡಗಳೆಲ್ಲ ನಮ್ಮ ಹೊಲದಲ್ಲಿ ಕರಗಿ ಮಳೆ ಸುರಿವವರೆಗೆ  ಬಿಡುಗಡೆ  ಮಾಡದಂತೆ
ಗಾಳಿಗೆ ಹೇಳಿ ಬರಲು ಹೋಗಿದ್ದೆ ಎಂದಳು...

Sunday, 2 August 2015

ಮೌನ ಮೋಹಿ ಅವಳು

ಮೌನ ಮೋಹಿ ಅವಳು. .
"""""""""""""
ನಾನು ಜಾಲಿಯಲ್ಲ ...
ಅವಳು ಪೋಲಿಯಲ್ಲ.
ನಾವಿಬ್ಬರೂ  ಮೌನ ಮೋಹಿ..!
      ಮೌನ ಮೌನ ನುಂಗಿ
       ಮಾತಿಲ್ಲದೇ   ಪ್ರೀತಿ ಕಡಲು ಕಂಪಿಸಿ
      ತೀರದಲ್ಲಿ ತೀರದ ಪ್ರೇಮ
      ಆವರಿಸಿತು  ಹುಣ್ಹಿಮೆ ರಾತ್ರಿ.
ನನ್ನ ಖಾಲಿ ಎದೆಗೆ ಕಲ್ಲು ಹೊಡೆದು
ಮಜ ನೋಡುವ ಲಗೋರಿ ಚಲಾಕಿ.
ಮತ್ತೆ ಅವಳೇ ಒಲವ ಕನಸಿನ ಕಲ್ಲು ಜೋಡಿಸಿ
ಒಲವ ಲಗೋರಿ ಗೆಲ್ಲುವಾಕೆಯೂ ಅವಳೆ..!
    ಮಾತು ಮೀರಿದ ಮೌನ ಮೋಹ
   ಹೆಚ್ಚಿದೆ ಒಲವ ದಾಹ
   ಕುಡಿಸಿದಳು  ಕೇಳದೇ...!
    ನಾನೀಗ  ಅಮಲು ಪರ್ವತದಲಿ ಅಲೆಯುತಿರುವೆ.
    ನಾ..ಒಲವ ಬಲೆಯಲಿ ಬಂದಿ
    ಆದರೂ ಅಲ್ಲಿದೆ ಸುಖ ಸಮೃದ್ಧಿ.    

ಕತ್ತಲೆ ಕರೆದಾಗ

ಕತ್ತಲೆ ಕರೆದಾಗ..
"""""""""""""""
ಹಗಲು ಓಡಿ ಬಂತು
ಕತ್ತಲೆ ಕರೆದಾಗ...
ಪಾಪ..ಕತ್ತಲೆ ಮಾಯವಾದಳು.
         ಕನವರಿಕೆಯಲಿ ಕತ್ತಲೆ..
          ಹಗಲುಗನಸು ಕಂಡಳು.
           ರವಿ-ಚಂದ್ರರು ಸ್ಪರ್ಧೆಗೆ ಇಳಿದರು.
             ಧರಣಿ ನಗದೆ ಅಳದೆ...
             ಮಳೆ. ಚಳಿ.ಬಿಸಿಲಿಗೆ ಮೈವೂಡ್ಡಿ
             ಹಸಿರಾದಳು.
ಕತ್ತಲೆ ಕರೆದಾಗೆಲ್ಲ
  ಬೆಳಕು ಕದ್ದು ಓಡಿ ಬಂದರೂ ..
ಇನ್ನೂ ಸೇರಲಾಗಿಲ್ಲ. .

Monday, 20 July 2015

ಪ್ರೇಮ ಚಿಕಿತ್ಸೆ

ಪ್ರೇಮ ಚಿಕಿತ್ಸೆ
'''''''''"""""'''
ಬನದ ತುಂಬಾ
ಬಣ್ಣ ಬಣ್ಣದ ಹೂವು. ..
ವಿಧವಿಧದ  ದುಂಬಿ .
ಯಾವ ಹೂವಿಗೆ
ಯಾವ ದುಂಬಿಯೋ...
ಯಾವ ದುಂಬಿಗೆ
ಎಲ್ಲಿಯ ಹೂವೋ....!
ಬೆಸೆದವರಾರೋ...ಹೊಸೆದವರಾರೊ....?
ಆದಿ ಅಂತ್ಯ ಅರಿಯದ ಮುಗ್ಧ ಪ್ರೇಮ ಸಂಬಂಧ.
            ನೂರು ಬಣ್ಣದ ಹೂ ಚೆಲುವು
            ಮೈದುಂಬಿದೆ ನನ್ನ ಮನವು..
             ಎಲ್ಲ ಹೇಗೆ ಹೇಳಲಿ...
       ಹೂ ದುಂಬಿಯ
       ಒಲವ ಸೆಳೆತ
        ಬಾವ ಮಿಳಿತ...
       ಅಂಟು ರೋಗ ನನಗೂ... ತಗುಲಿದೆ.!
       ಪ್ರೇಮ ಚಿಕಿತ್ಸೆ ಬೇಕಿದೆ.
       ಮನವಿ  ಮಾಡುವೆ
        ಅನುಮತಿಸಿ....
        ಒಲವ ವೈಧ್ಯಾಲಯದ ವಿಳಾಸ ತಿಳಿಸಿ.
( ನನ್ನ " ರವಿರಾಜಮಾರ್ಗ " ಬಾವ ಸಂಕಲನ ದಿಂದ)

ಜಾನಪದ ವಿಶ್ವವಿದ್ಯಾಲಯದ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ ..

 ಜಾನಪದ ವಿಶ್ವವಿದ್ಯಾಲಯದ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ . ಹಸೆ ಚಿತ್ತಾರ , ನಾಟಿ ವೈದ್ಯ ,ವಿವಿಧ ಜಾನಪದ ನಿಕಾಯಗಳಲ್ಲಿ ಸ್ನಾತಕೋತ್ತರ ಡಿಪ್ಲೋಮಾ ,ಡಿಪ್ಲೋಮಾ ...