ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Friday 11 September 2015

ರೈತನ ಎದೆಯಿಂದ ಸಿಡಿಲು ಬಡಿವ ಮುನ್ನ. ..

ಬರೀ ಚಿಲ್ಲರೆ ದಕ್ಷಿಣೆ ಹಾಕೋ ರೈತರ ಮೇಲೆ ದೇವರಿಗಂತೂ ಕರುಣೆ ಇಲ್ಲ. ಕೇಳಿದಾಗೆಲ್ಲ ಪ್ರಶ್ನೆ ಮಾಡದೆ  ಕಣ್ಣು ಮುಚ್ಚಕೊಂಡು ಜಾತಿ ಮಗಾ ಅಂತಾ ಓಟು ಹಾಕೋ ಪ್ರಜೆಗಳ ಮೇಲೆ ಈ ರಾಜಕೀಯ ದೇವರುಗಳಿಗಾದರೂ ಕರುಣೆ ಬೇಡವೇ...?. ಈಚಿನ ದಶಕಗಳಲ್ಲಿ 15 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ದಾಖಲಾಗಿದೆ ..ಇನ್ನು ದಾಖಲಾಗದೆ ಉಳಿದವು ಅದೆಷ್ಟೋ. ..?
           ದೇವರು, ಧರ್ಮದ ಉಳಿಸುವಿಕೆಗೆ ,ಉತ್ಸವಕ್ಕೆ ಜಾತ್ರೆಗೆ  ಪಟ್ಟಿ ಎತ್ತೋಕೆ ಮನೆ ಮನೆ ಸುತ್ತೋ ಧರ್ಮಗಳ ಗುಂಪುಗಳ ಪಾಳೇಗಾರರೂ ಕೂಡ ರೈತನ ನೋವು ಆಲಿಸುತ್ತಿಲ್ಲ.. ಅವರೂ ಸಹ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಅಷ್ಟೇ. .!. ರೈತರ ನೋವಿಗೆ ಸ್ಪಂದಿಸದ ಧರ್ಮದ ಮುಖಂಡರು, ದೇವರು ಯಾಕೆ ಬೇಕು.? ಅವರಿಗೇಕೆ ರೈತ ಕಷ್ಟದಲ್ಲೂ ದೇವರಿಗಂತ ಹಣ ಕೊಡಬೇಕೂ...?
    ಎಲ್ಲೊ ಸುನಾಮಿ, ಭೂಕಂಪ ಆದಾಗ ದಾನ ಮಾಡುವ ..ಬಿಕ್ಷಗೆ ಇಳಿವವರು ನಮ್ಮ ರೈತರ ನೆರವಿಗೆ ಎಂದಾದರೂ ದಾವಿಸಿದ್ದಾರಾ....?   ಯೋಚಿಸಿ. .. ! ನೌಕರರ ಸಂಬಳ ಏರಿಸಿ ಅಂತಾ ಸ್ಟೈಕು ಬಂದ್ ಈ ದೇಶದಲ್ಲಿ ಸಹಜ. ಆದರೆ ರೈತರಿಗಾಗಿ ಯಾವ ಬಂದ್ ನಡೆದಿದೆ... ? ರೈತರೆಲ್ಲ ತಿರುಗಿ ಬಿದ್ದರೆ ರೈತರ  ರೋಷಾಗ್ನಿ ಜ್ವಾಲೆಗೆ ಇವರೆಲ್ಲ ಉಳಿದಾರೆಯೇ...?  ರೈತ ಸಿಡಿದರೆ ಸಿಡಿಲು. ಬಡಿಬಡವ ಮುಮುನ್ನ ಎಲ್ಲಾ ಎಚ್ಚರ ವಹಿಸಬೇಕು.  ಅವನಿಲ್ಲದೆರೆ  ನಿಮ್ಮ ಹಣ ನಿಮ್ಮ ಹೆಣದ ಮೇಲೆ ಕೇಕೆ ಹಾಕುವ ದಿನ ದೂರವಿಲ್ಲ... ಏನಂತೀರಿ. .?

No comments:

Post a Comment