ಕತ್ತಲೆ ಕರೆದಾಗ..
"""""""""""""""
ಹಗಲು ಓಡಿ ಬಂತು
ಕತ್ತಲೆ ಕರೆದಾಗ...
ಪಾಪ..ಕತ್ತಲೆ ಮಾಯವಾದಳು.
ಕನವರಿಕೆಯಲಿ ಕತ್ತಲೆ..
ಹಗಲುಗನಸು ಕಂಡಳು.
ರವಿ-ಚಂದ್ರರು ಸ್ಪರ್ಧೆಗೆ ಇಳಿದರು.
ಧರಣಿ ನಗದೆ ಅಳದೆ...
ಮಳೆ. ಚಳಿ.ಬಿಸಿಲಿಗೆ ಮೈವೂಡ್ಡಿ
ಹಸಿರಾದಳು.
ಕತ್ತಲೆ ಕರೆದಾಗೆಲ್ಲ
ಬೆಳಕು ಕದ್ದು ಓಡಿ ಬಂದರೂ ..
ಇನ್ನೂ ಸೇರಲಾಗಿಲ್ಲ. .
ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ
- Home
- ಸಂಪಾದಕೀಯ
- ಮಕ್ಕಳು ಬರೆದ ಕತೆ /ಕವನಗಳು
- ನಮ್ಮೂರ ಸುದ್ದಿಗಳು
- ಮಕ್ಕಳ ಬರಹಗಳು
- ಬಾಲ ಸಾಧಕರು
- ಮಕ್ಕಳು ಬಿಡಿಸಿದ ಚಿತ್ರಗಳು
- ನಮ್ಮೂರ ಜಾನಪದ
- ಜ್ಞಾನ - ವಿಜ್ಞಾನ
- ಸಾಮಾನ್ಯ ಜ್ಞಾನ
- ನಮ್ಮ ಪತ್ರಿಕಾ ಅಭಿಯಾನಗಳು
- ಓದುಗರ ಓಲೆ
- ಅತಿಥಿ ಸಾಹಿತಿಗಳ ಅಂಕಣ
- ಮಕ್ಕಳ ಪುಸ್ತಕಗಳ ಪರಿಚಯ-ಆನ್ ಲೈನ್ ಬುಕ್ ಹೌಸ್
- ಶೈಕ್ಷಣಿಕ ಲೇಖನಗಳು
- ಶೈಕ್ಷಣಿಕ ಚಟುವಟಿಕೆಗಳು
- ಲಾಂಗ್ವೇಜ್ ಕಾರ್ನರ್
- 1ರಿಂದ -puc ತರಗತಿ ಈ ಶಾಲೆ
- ನನ್ನ ಶೈಕ್ಷಣಿಕ ವೀಡಿಯೋಗಳು
- ಸಾರ್ವಜನಿಕ ಶಿಕ್ಷಣ ಇಲಾಖೆ
- ಹಿಂದಿನ ಸಂಚಿಕೆಗಳು ಮತ್ತು ಪತ್ರಿಕೆ ಕುರಿತು ಮಾಧ್ಯಮ ವರದಿ ...
- ನಮ್ಮ ಕುರಿತು ಫೋಟೋ ಗ್ಯಾಲರಿ
- ಅಂಕಣ ಬರಹ- ಕನಸುಗಳೂರ ಶ್ರಮಿಕ
- ಆನ್ಲೈನ್ ಪುಸ್ತಕ ಮಳಿಗೆಗಳು
- ಪಿಡಿಎಫ್ ಪುಸ್ತಕಗಳು.
- Ravichandra
- ಆನ್ಲೈನ್ ಪಾಠಗಳು - ದೀಕ್ಷಾ ಪೊರ್ಟಲ್
- ಇನ್ನೋವೇಟಿವ್ ಎಜ್ಯುಕೇಶನ್
Sunday 2 August 2015
ಕತ್ತಲೆ ಕರೆದಾಗ
Friday 31 July 2015
Monday 20 July 2015
ಪ್ರೇಮ ಚಿಕಿತ್ಸೆ
ಪ್ರೇಮ ಚಿಕಿತ್ಸೆ
'''''''''"""""'''
ಬನದ ತುಂಬಾ
ಬಣ್ಣ ಬಣ್ಣದ ಹೂವು. ..
ವಿಧವಿಧದ ದುಂಬಿ .
ಯಾವ ಹೂವಿಗೆ
ಯಾವ ದುಂಬಿಯೋ...
ಯಾವ ದುಂಬಿಗೆ
ಎಲ್ಲಿಯ ಹೂವೋ....!
ಬೆಸೆದವರಾರೋ...ಹೊಸೆದವರಾರೊ....?
ಆದಿ ಅಂತ್ಯ ಅರಿಯದ ಮುಗ್ಧ ಪ್ರೇಮ ಸಂಬಂಧ.
ನೂರು ಬಣ್ಣದ ಹೂ ಚೆಲುವು
ಮೈದುಂಬಿದೆ ನನ್ನ ಮನವು..
ಎಲ್ಲ ಹೇಗೆ ಹೇಳಲಿ...
ಹೂ ದುಂಬಿಯ
ಒಲವ ಸೆಳೆತ
ಬಾವ ಮಿಳಿತ...
ಅಂಟು ರೋಗ ನನಗೂ... ತಗುಲಿದೆ.!
ಪ್ರೇಮ ಚಿಕಿತ್ಸೆ ಬೇಕಿದೆ.
ಮನವಿ ಮಾಡುವೆ
ಅನುಮತಿಸಿ....
ಒಲವ ವೈಧ್ಯಾಲಯದ ವಿಳಾಸ ತಿಳಿಸಿ.
( ನನ್ನ " ರವಿರಾಜಮಾರ್ಗ " ಬಾವ ಸಂಕಲನ ದಿಂದ)
Wednesday 22 April 2015
ಹೇಳಲಾರೆ ಕಾರಣ. .!
..........
ತೆರೆದಿದೆ ಬಯಕೆಯ ಬಾಗಿಲು
ಸೆಳೆಯುತಿದೆ ತಾರೆಗಳ ಮುಗಿಲು
ಕೆಣಕುತಿದೆ ಕಣ್ಣೊಳಗೆ...
ಆಸೆಯ ಕಡಲು
.... ಕ್ಷಮಿಸಿ ..!
ಎಲ್ಲ ಹೇಳಲು
ಕೊಂಚ ದಿಗಿಲು. .!
ಜಾಲದೊಳಗೆ ಜಾಲಿ ನಾನು
ಜಾರಿ ಬೀಳುವ ಮುನ್ನ
ಜಿಗಿದು ಮಬ್ಬು ಕೊಡವಿದೆ.
ಬುದ್ಧಿ ಹೇಳಿದೆ
ಮನಸಿಗೆ...!
..................
ಏಸೊಂದು ಕನಸುಗಳೊಂದಿಗೆ ಈಜಿದೆ....
ಆಕಾಶವ ಮುಟ್ಟಿ ಬಿಡಲೆಂದು
ಅವಕಾಶಗಳ ಸೃಷ್ಟಿಸಿಕೊಂಡು ...
ಕನಸುಗಳ ಮುಂಗಾರಲಿ ವರ್ಷವಿಡೀ ನೆನೆದೆ.
ಶ್ರಮದ ವೃಕ್ಷದಡಿ
ಛಲ ನನ್ನದು...
ಫಲ ... ಪರಿಣಾಮದ ಚಿಂತೆಯಿಲ್ಲ..!
ಗೆಲ್ಲುವ ಹಂಬಲ...ಚಫಲ...
ಹೂಮಾಲೆಯೂ ಇದೆ.
ನನ್ನ ಪ್ರೇಮ ಪತ್ರಕೆ
ಕಣ್ಣೀರ ಉತ್ತರ ಸಿಗಬಹುದೆಂದು...!
ಕಾರಣ ಕೇಳಿದರೆ ಅವಳಂದಳು...
ಕಣ್ಣೀರಲ್ಲ... ಪನೀರಿದು......
ನನಗೀಗ ನಿನ್ನದು
ನೂರನೆಯ ಪ್ರೇಮ ಪತ್ರ. ....!
ಅಂದಾಗ ಜೋಗ ಜಲಧಾರೆ ಹರಿಯಿತು
ನನ್ನ ಕಣ್ಣಲ್ಲಿ. .,!
Monday 20 April 2015
ಚಿನ್ನದ ಗೋರಿಯಲಿ ಮಲಗಿದಾರೆ ಮಾರ್ರೇ..!
ಚಿನ್ನದ ಗೋರಿಯಲಿ ಮಲಗಿದಾರೆ.....!
...................................
ಚಿನ್ನದ ಕಣಗಳ ರಾಸಿಯ
ಮರುಭೂಮಿಯಲಿ...
ನೀರಿಗಾಗಿ ಅಲೆದೆ..!
ನೀರಿರಲಿ... ಮರೀಚಿಕೆಯೂ ಕಾಣಲಿಲ್ಲ. ...!
ಮಡಿದ ಹಲವರ ಅಸ್ಥಿಗಳು
ಆ ಚಿನ್ನದ ರಾಶಿಯ ಮೇಲೆಯೇ ಇವೆ.
ಧರೆಯ ಬಗೆದು
ಚಿನ್ನ ಕೂಡಿಟ್ಟ
ಕೋಟಿ ಕೋಟಿ ಕುಳದವರ ಅಸ್ಥಿಗಳೂ
ಸಾಮಾನ್ಯ ಅನಾಥರ ಅಸ್ಥಿಗಳ ನಡುವೆಯೇ ನರಳುತಿವೆ.
ಕೋಟಿ ಪಾಪಗಳೂಂದಿಗೆ ಕೊರಗುತ....!
ಎಂತಹ ಅದೃಷ್ಟ. .!
ಚಿನ್ನದ ಗೋರಿಯಲಿ ಮಲಗಿದಾರೆ ಮಾರ್ರೇ....!
Wednesday 1 April 2015
ಚಂದ್ರ ಮತ್ತು ತಾವರೆ
ಚಂದ್ರ ಮತ್ತು ತಾವರೆ
.....................
ಮಲಗಬೇಕು. ....
ಆದ್ರೆ ನಿದ್ರೆ ಬರದು ಕಣೇ. ..
ಮುಂಜಾವಲಿ ಕವಿದ
ಒಂಚೂರು ನಿದಿರೆಯಲಿ
ಮತ್ತೆ ನೀನೇ ಕಣೇ. ..
ಕನಸಲೆಲ್ಲಾ ಆವರಿಸಿ
ಕಾಯಕ ಮರೆಸಿ
ಕಾಡುವ ನೀನು
ಕಾದಿದ್ದು ನನಗೇ ತಾನೇ...?
ಎಂದು ರಾತ್ರಿಯೆಲ್ಲ ಅಲೆದ ಚಂದ್ರ
ತಾವರೆಯ ಕೇಳಿದ. !..
ಕೆಸರಲರಳಿದ ತಾವರೆ
ನೀರಲೆಗಳ ನಡುವೆ ನಾಚಿ
ಕೆಂಪೇರಿತು....!
ಧರೆಗಿಳಿದು ಬರುವಂತೆ
ಸಂದೇಶ ಕಳುಹಿಸಿದ್ದ ಕಂಡು
ಚಂದ್ರ ನಲಿದು ಬೆಳದಿಂಗಳ ಸುರಿದನು.
Saturday 28 February 2015
ಮೈತ್ರಿ
-
ಚಿಕ್ಕಂದಿನಲ್ಲಿ ನಮಗೆ ಬರುತ್ತಿದ್ದ, ನಾವೆಲ್ಲಾ ಹಾಡುತ್ತಿದ್ದ ಮರೆಯಲಾಗದ ಪದ್ಯಗಳು.. ಇವುಗಳಲ್ಲಿ ನಿಮಗೆಷ್ಟು ಗೊತ್ತು.. ತಿಳಿಸಿ..* ❤️❤️❤️...
-
ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಶಾಲಾಮಾಹಿತಿ ಸಲ್ಲಿಸಿ. ಈ ಮೇಲಿನ ಲಿಂಕ್ ಮಾಡಿ ಬೇಡಿಕೆ ಮಾಹಿತಿ ಸಲ್ಲಿಸಲು ಕೋರುವೆವು.
-
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಳೂರು ಶಾಲಾ ಮಕ್ಕಳ ಮಂತ್ರಿಮಂಡಲದಿಂದ ಶಾಲೆಯಲ್ಲಿ ಆಟದ ಮೈದಾನ, ವಿವಿಧ ಕ್ರೀಡಾಂಗಣ, ಶಾಲಾ ಪ್ರಾರ್ಥನ ಅಂಕಣದಲ್ಲಿ ಸಿಮೆಂಟ್ ಬ್ರಿಕ್...