#ಮಕ್ಕಳ #ಮುಂದಾರ ಬಳಗ
ಗ್ರಾಮೀಣ ಸರ್ಕಾರಿ ಶಾಲೆಗಳಿಗೆ ಉಚಿತ ನೋಟ್ ಬುಕ್ ವಿತರಣೆ.
ರಾಮನಗರದ ನವಚೇತನ ಸಂಸ್ಥೆಯ ಮಂಜುನಾಥ ಅವರು ಮಕ್ಕಳ ಮಂದಾರ ಶಾಲಾ ಮಕ್ಕಳ ಪತ್ರಿಕೆಯ ಬರಹಗಳನ್ನು ಮೆಚ್ಚಿ ಕಳುಹಿಸಿದ 2500 ನೋಟ್ ಬುಕ್ ವಿತರಣೆ ಸಮಾರಂಭ ವನ್ನು ವಿಮುಕ್ತಿ ಸಂಸ್ಥೆ ಪೋತ್ನಾಳ್ ಸಹಯೋಗದಲ್ಲಿ ಮಕ್ಕಳ ಮಂದಾರ ಬಳಗ, ಮಲ್ಕಾಪುರ ಶಾಲಾ ಶಿಕ್ಷಕ ರವಿಚಂದ್ರ ಅವರು ವಿವಿಧ ಗ್ರಾಮೀಣ ಶಾಲೆಗಳಿಗೆ ನೋಟ್ ಬುಕ್ ವಿತರಣೆ ಸಮಾರಂಭ ಉದ್ಘಾಟಿಸಿದರು.
ಸ ಹಿ ಪ್ರಾ.ಶಾಲೆ. ಮಲ್ಕಾಪುರ, ಬಸಾಪುರ ಶಾಲೆಗಳಿಗೆ ವಿತರಿಸಿದ ಅವರು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ, ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಅಂಗವಾಗಿ ಇದುಒಂದು ಸಣ್ಣ ಸೇವೆಯಾಗಿದೆ. ಇಂತಹ ಸಣ್ಣ ಸೇವೆಗಳು ಮಕ್ಕಳಲ್ಲಿ ಮತ್ತು ಸಮಾಜದಲ್ಲಿ ಮತ್ತಷ್ಟು ಜನರಲ್ಲಿ ಸಮಾಜ ಸೇವಾ ಮನೋಭಾವ ಬೆಳೆಸಲು ಪ್ರೇರಣೆಯಾಗಲಿ ಎನ್ನುವುದು ಸಹ ನಮ್ಮ ಉದ್ದೇಶವೆಂದು ಮಕ್ಕಳ ಸಾಹಿತ್ಯ ಪರಿಷತ್ತಿನ ಮಸ್ಕಿ ಘಟಕದ ಅಧ್ಯಕ್ಷರಾದ ಶಿಕ್ಷಕ ರವಿಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಮೀಣ ಶಾಲೆಗಳ ಸಬಲೀಕರಣಕ್ಕೆ ಶಿಕ್ಷಕರೊಂದಿಗೆ ಸದಾ ಜೊತೆ ಇರುತ್ತೇವೆ ಎಂದು ಚಾರ್ಲಿ ಉದ್ಬಾಳ್ ನುಡಿದರು.
No comments:
Post a Comment