ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Saturday 10 October 2020

ನಮ್ಮೂರ ಶಾಲೆಯ ಹಿರಿಯ ವಿದ್ಯಾರ್ಥಿಗಳಿಂದ ಹಸಿರು ಹಬ್ಬ

ನಮ್ಮೂರ ಶಾಲೆಯ ಹಿರಿಯ ವಿದ್ಯಾರ್ಥಿಗಳಿಂದ ಹಸಿರು ಹಬ್ಬ


ಅಯ್ಯಪ್ಪ ಮಲ್ಕಾಪುರ .ಹಿರಿಯ ವಿದ್ಯಾರ್ಥಿ


ಮಕ್ಕಳ ಮಂದಾರ ವರದಿ: ಮಲ್ಕಾಪುರ . ನಮ್ಮ ಮಲ್ಕಾಪುರ  ಶಾಲೆ ಅಂದರೆ  ಅದೇನೋ ಒಂದು ವಿಶೇಷತೆಯಿಂದ ಕೂಡಿದ ಹಲವು ಶೈಕ್ಷಣಿಕ ಪ್ರಯೋಗಗಳ ಶಾಲೆ ಅನಿಸುತ್ತದೆ. ಏಕೆಂದರೆ ಈ ಶಾಲೆಯಲ್ಲಿ ರವಿಚಂದ್ರ ಸರ್ ರೂಪಿಸುತ್ತಿರುವ ವೈವಿದ್ಯಮಯ ಕಾರ್ಯಕ್ರಮಗಳಾದ ''ಜಾನಪದ  ಪಠ್ಯಂತರ್ಗತ ಪ್ರಯೋಗಗಳು, ಮಕ್ಕಳಿಂದ ಜಾನಪದ ಕ್ಷೇತ್ರಕಾರ್ಯ, ಹಾಗು  ಹನ್ನೆರಡು ವರ್ಷ ಪೂರೈಸಿದ ಮಕ್ಕಳ ನೇತೃತ್ವದ ಮಕ್ಕಳ ಮಂದಾರ ಶಾಲಾಪತ್ರಿಕೆ ರಾಜ್ಯಮಟ್ಟದಲ್ಲಿ ಸಾಹಿತ್ಯ ವಲಯದಲ್ಲಿ, ಶೈಕ್ಷಣಿಕ ವಲಯದಲ್ಲಿ ಗಮನಸೆಳೆದಿದೆ. ನಮ್ಮೂರ  ಮಕ್ಕಳು ರಾಜ್ಯಮಟ್ಟದಲ್ಲಿ ಕಾರ್ಯಕ್ರಮಗಳನ್ನು ನೀಡಿ ಸೈ ಅನಿಸಿಕೊಂಡಿದ್ದಾರೆ.ಆಕಾಶವಾಣಿ ನಾಟಕಗಳನ್ನು,  ಜಾನಪದ ಕಾರ್ಯಕ್ರಮಗಳನ್ನು ನೀಡಿ ಮೆಚ್ಚುಗೆಗಳಿಸಿರುವುದು ನಮ್ಮೂರ ಹೆಮ್ಮೆಯಾಗಿದೆ.ಮಕ್ಕಳ ಸಾಹಿತ್ಯ ಸಮ್ಮೇಳನದ ಗೋಷ್ಟಿಗಳಲ್ಲಿ ಪ್ರತೀ ವರ್ಷ ನಮ್ಮೂರ ಮಕ್ಕಳು ಭಾಗಿಯಾಗುತ್ತಿದ್ದಾರೆ.ಈಗ ಮತ್ತೊಂದು ಹೊಸ ಹೆಜ್ಜೆಯಾಗಿ ಹಸಿರುಹಬ್ಬ ಕಾರ್ಯಕ್ರಮವೂ ಊರಿನ ಜನಮನ ಸೆಳೆದಿದೆ.

    ಈಗಾಗಲೇ ನಮ್ಮೂರ ಶಾಲೆಯಲ್ಲಿ ವಿವಿಧ ಸಸಿ ಬೆಳೆಸುವ ಸಣ್ಣ ನರ್ಸರಿಯೂ ಎರಡು ವರ್ಷಗಳಿಂದ ಪ್ರಾಯೋಗಿಕವಾಗಿ ಮಾಡಲಾಗಿದ್ದು ಈಗ ಹಿರಿಯ ವಿದ್ಯಾರ್ಥಿಗಳೆಲ್ಲ ಸೇರಿ ಈ ಹಬ್ಬಕ್ಕೆ ಸುಮಾರು ನೂರು ಸಸಿಗಳನ್ನು ತಂದು ಶಾಲೆಯಲ್ಲಿ, ಊರ ದೇವಾಲಯಗಳ ಜಾಗದಲ್ಲಿ ನೆಡಲಾಯಿತು. ಆಸಕ್ತ ಗ್ರಾಮಸ್ಥರಿಗೂ  ತಮ್ಮ ಮನೆಮುಂದೆ ನೆಡಲು ನೀಡಲಾಗಿದೆ. ಹಿರಿಯ ವಿದ್ಯಾರ್ಥಿಗಳ ಈ ಕಾರ್ಯದಿಂದ ನಮ್ಮ ಶಾಲಾ ಶಿಕ್ಷಕರು ಊರಿನ ಗ್ರಾಮಸ್ಥರು, ಶಿಕ್ಷಣ ಇಲಾಖೆಯ ಅಧಿಕಾರಿಗಳು , ಅರಣ್ಯ ಇಲಾಖೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
   ಈ ಹಸಿರು ಹಬ್ಬದ ಯೋಜನೆಯ ರುವಾರಿಗಳು ರವಿಚಂದ್ರ ಸರ್ ಮತ್ತು ಡಾ. ನಾಗಲಿಂಗಸ್ವಾಮಿ, ಅಯ್ಯಪ್ಪ , ನಿಂಗರಾಜ್, ನಾಗರಾಜ, ಬಸವನಾಯಕ್ ಮುಂತಾದ ಸ್ನೇಹಿತರೆಲ್ಲ ಸೇರಿ ಇದ್ದಕ್ಕಿದ್ದಂತೆ  ರವಿಚಂದ್ರ ಸರ್ ಸಲಹೆ ಮೇರೆಗೆ ನಿರ್ಧರಿಸಿ ಹಸಿರು ಹಬ್ಬವನ್ನು ಸಡಗರದಿಂದ ಗೆಳೆಯರೆಲ್ಲ ಕುದ್ದಾಗಿ ಗುಂಡಿ ತೆಗೆದು ಗಿಡಗಳನ್ನು ನಾಟಿಸಿದೆವು.ನಾವು ಓದಿದ ಶಾಲೆಗೆ ನಾವೂ ಏನಾದರೂ ಕೊಡುಗೆ ನೀಡಬೇಕೆಂದು ಈ ಕೆಲಸ ಮಾಡಿದೆವು.ನಮ್ಮ  ಕೆಲಸವನ್ನು  ಊರಿನ ಎಲ್ಲರೂ ಮೆಚ್ಚಿಕೊಂಡಿದ್ದು ಸಂತೋಷ ನೀಡಿತು.  ಊರಿನ ಹಲವು ಹಿರಿಯರು, ಎಸ್ ಡಿ ಎಂ ಸಿ ಅಧ್ಯಕ್ಷರು ,ಎಲ್ಲಾ ಶಿಕ್ಷಕರು ಸಹ ಭಾಗಿಯಾಗಿದ್ದರು. ಮುಂದೆ ಇಂತಹ ಹಲವು ಕಾರ್ಯಕ್ರಮಗಳನ್ನು  ಮಾಡುವ ಉದ್ದೇಶವಿದೆ. 





No comments:

Post a Comment