ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Saturday 10 October 2020

ನಮ್ಮೂರ ಶಾಲೆಯ ಹಿರಿಯ ವಿದ್ಯಾರ್ಥಿಗಳಿಂದ ಹಸಿರು ಹಬ್ಬ

ನಮ್ಮೂರ ಶಾಲೆಯ ಹಿರಿಯ ವಿದ್ಯಾರ್ಥಿಗಳಿಂದ ಹಸಿರು ಹಬ್ಬ


ಅಯ್ಯಪ್ಪ ಮಲ್ಕಾಪುರ .ಹಿರಿಯ ವಿದ್ಯಾರ್ಥಿ


ಮಕ್ಕಳ ಮಂದಾರ ವರದಿ: ಮಲ್ಕಾಪುರ . ನಮ್ಮ ಮಲ್ಕಾಪುರ  ಶಾಲೆ ಅಂದರೆ  ಅದೇನೋ ಒಂದು ವಿಶೇಷತೆಯಿಂದ ಕೂಡಿದ ಹಲವು ಶೈಕ್ಷಣಿಕ ಪ್ರಯೋಗಗಳ ಶಾಲೆ ಅನಿಸುತ್ತದೆ. ಏಕೆಂದರೆ ಈ ಶಾಲೆಯಲ್ಲಿ ರವಿಚಂದ್ರ ಸರ್ ರೂಪಿಸುತ್ತಿರುವ ವೈವಿದ್ಯಮಯ ಕಾರ್ಯಕ್ರಮಗಳಾದ ''ಜಾನಪದ  ಪಠ್ಯಂತರ್ಗತ ಪ್ರಯೋಗಗಳು, ಮಕ್ಕಳಿಂದ ಜಾನಪದ ಕ್ಷೇತ್ರಕಾರ್ಯ, ಹಾಗು  ಹನ್ನೆರಡು ವರ್ಷ ಪೂರೈಸಿದ ಮಕ್ಕಳ ನೇತೃತ್ವದ ಮಕ್ಕಳ ಮಂದಾರ ಶಾಲಾಪತ್ರಿಕೆ ರಾಜ್ಯಮಟ್ಟದಲ್ಲಿ ಸಾಹಿತ್ಯ ವಲಯದಲ್ಲಿ, ಶೈಕ್ಷಣಿಕ ವಲಯದಲ್ಲಿ ಗಮನಸೆಳೆದಿದೆ. ನಮ್ಮೂರ  ಮಕ್ಕಳು ರಾಜ್ಯಮಟ್ಟದಲ್ಲಿ ಕಾರ್ಯಕ್ರಮಗಳನ್ನು ನೀಡಿ ಸೈ ಅನಿಸಿಕೊಂಡಿದ್ದಾರೆ.ಆಕಾಶವಾಣಿ ನಾಟಕಗಳನ್ನು,  ಜಾನಪದ ಕಾರ್ಯಕ್ರಮಗಳನ್ನು ನೀಡಿ ಮೆಚ್ಚುಗೆಗಳಿಸಿರುವುದು ನಮ್ಮೂರ ಹೆಮ್ಮೆಯಾಗಿದೆ.ಮಕ್ಕಳ ಸಾಹಿತ್ಯ ಸಮ್ಮೇಳನದ ಗೋಷ್ಟಿಗಳಲ್ಲಿ ಪ್ರತೀ ವರ್ಷ ನಮ್ಮೂರ ಮಕ್ಕಳು ಭಾಗಿಯಾಗುತ್ತಿದ್ದಾರೆ.ಈಗ ಮತ್ತೊಂದು ಹೊಸ ಹೆಜ್ಜೆಯಾಗಿ ಹಸಿರುಹಬ್ಬ ಕಾರ್ಯಕ್ರಮವೂ ಊರಿನ ಜನಮನ ಸೆಳೆದಿದೆ.

    ಈಗಾಗಲೇ ನಮ್ಮೂರ ಶಾಲೆಯಲ್ಲಿ ವಿವಿಧ ಸಸಿ ಬೆಳೆಸುವ ಸಣ್ಣ ನರ್ಸರಿಯೂ ಎರಡು ವರ್ಷಗಳಿಂದ ಪ್ರಾಯೋಗಿಕವಾಗಿ ಮಾಡಲಾಗಿದ್ದು ಈಗ ಹಿರಿಯ ವಿದ್ಯಾರ್ಥಿಗಳೆಲ್ಲ ಸೇರಿ ಈ ಹಬ್ಬಕ್ಕೆ ಸುಮಾರು ನೂರು ಸಸಿಗಳನ್ನು ತಂದು ಶಾಲೆಯಲ್ಲಿ, ಊರ ದೇವಾಲಯಗಳ ಜಾಗದಲ್ಲಿ ನೆಡಲಾಯಿತು. ಆಸಕ್ತ ಗ್ರಾಮಸ್ಥರಿಗೂ  ತಮ್ಮ ಮನೆಮುಂದೆ ನೆಡಲು ನೀಡಲಾಗಿದೆ. ಹಿರಿಯ ವಿದ್ಯಾರ್ಥಿಗಳ ಈ ಕಾರ್ಯದಿಂದ ನಮ್ಮ ಶಾಲಾ ಶಿಕ್ಷಕರು ಊರಿನ ಗ್ರಾಮಸ್ಥರು, ಶಿಕ್ಷಣ ಇಲಾಖೆಯ ಅಧಿಕಾರಿಗಳು , ಅರಣ್ಯ ಇಲಾಖೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
   ಈ ಹಸಿರು ಹಬ್ಬದ ಯೋಜನೆಯ ರುವಾರಿಗಳು ರವಿಚಂದ್ರ ಸರ್ ಮತ್ತು ಡಾ. ನಾಗಲಿಂಗಸ್ವಾಮಿ, ಅಯ್ಯಪ್ಪ , ನಿಂಗರಾಜ್, ನಾಗರಾಜ, ಬಸವನಾಯಕ್ ಮುಂತಾದ ಸ್ನೇಹಿತರೆಲ್ಲ ಸೇರಿ ಇದ್ದಕ್ಕಿದ್ದಂತೆ  ರವಿಚಂದ್ರ ಸರ್ ಸಲಹೆ ಮೇರೆಗೆ ನಿರ್ಧರಿಸಿ ಹಸಿರು ಹಬ್ಬವನ್ನು ಸಡಗರದಿಂದ ಗೆಳೆಯರೆಲ್ಲ ಕುದ್ದಾಗಿ ಗುಂಡಿ ತೆಗೆದು ಗಿಡಗಳನ್ನು ನಾಟಿಸಿದೆವು.ನಾವು ಓದಿದ ಶಾಲೆಗೆ ನಾವೂ ಏನಾದರೂ ಕೊಡುಗೆ ನೀಡಬೇಕೆಂದು ಈ ಕೆಲಸ ಮಾಡಿದೆವು.ನಮ್ಮ  ಕೆಲಸವನ್ನು  ಊರಿನ ಎಲ್ಲರೂ ಮೆಚ್ಚಿಕೊಂಡಿದ್ದು ಸಂತೋಷ ನೀಡಿತು.  ಊರಿನ ಹಲವು ಹಿರಿಯರು, ಎಸ್ ಡಿ ಎಂ ಸಿ ಅಧ್ಯಕ್ಷರು ,ಎಲ್ಲಾ ಶಿಕ್ಷಕರು ಸಹ ಭಾಗಿಯಾಗಿದ್ದರು. ಮುಂದೆ ಇಂತಹ ಹಲವು ಕಾರ್ಯಕ್ರಮಗಳನ್ನು  ಮಾಡುವ ಉದ್ದೇಶವಿದೆ. 





ಮಕ್ಕಳ ಶೈಕ್ಷಣಿಕ ತವಕ ತಲ್ಲಣಗಳ “ ಅಂಕಪಟ್ಟಿ ಬಾಲ್ಯ” ದೊಳಗೊಂದು ಸುತ್ತು - ಭವ್ಯಬಡಗೇರ

 

    ಮಕ್ಕಳ ಶೈಕ್ಷಣಿಕ ತವಕ ತಲ್ಲಣಗಳ   ಅಂಕಪಟ್ಟಿ ಬಾಲ್ಯದೊಳಗೊಂದು ಸುತ್ತು

 - ಭವ್ಯಬಡಗೇರ

         


ಹೀಗೊಂದು ದಿನ ಅಂಚೆಯಣ್ಣನ ಧ್ವನಿ ಪೋಸ್ಟ್……ಪೋಸ್ಟ್…….ಎಂದು ಕೇಳಿ ಅಚ್ಚರಿಯಾಯಿತು, ಆದರೂ ಅಂಚೆಯಲ್ಲಿ ಬಂದ ಸಾಹಿತ್ಯ ಕೃತಿ ನೋಡಿ ಮುಖದಲ್ಲಿ ಮಂದಹಾಸ ಮೂಡಿಸಿತು, ಲಕೋಟೆ ತೆರೆದು ಪುಟತಿರುಗಿಸಿದೆ ಕೃತಿ ರಚನೆಕಾರರಿಗೆ ಮನದಲ್ಲೇ ಅಭಿನಂದಿಸಿದೆ .ಕಾರಣ ಸಾಹಿತ್ಯ ಚಟುವಟಿಕೆಗಳೇ ಕಾಣಸಿಗದ ಡಿಜಿಟಲ್ ಯುಗದಲ್ಲಿ ಮಕ್ಕಳಿಗಾಗಿ ಒಂದಷ್ಟು ಸಮಯ, ತಾಳ್ಮೆ, ಪರಿಶ್ರಮ ಹಾಗು ತಮ್ಮ ಕವಿಮನವನ್ನು ಮುಡುಪಾಗಿಟ್ಟು ಮಕ್ಕಳ ಬಾಲ್ಯದ ಆನಂದ ಕುತೂಹಲಗಳನ್ನು ಕಾಪಾಡಿ ಎಲ್ಲರಿಗೂ ಪರಿಚಯಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿರುವ  ರವಿರಾಜ್ ಸಾಗರ್ಸರ್ ಅವರಿಗೆ ಅನಂತ ಧನ್ಯವಾದಗಳು.

              ಕೃತಿಯ ಬಗೆಗೆ ಹಾಳುವುದಾದರೆ ಅಂಕಪಟ್ಟಿಬಾಲ್ಯಐವತ್ಮೂರು ಮುದ್ದಾದ ವೈವಿಧ್ಯಪೂರ್ಣ ಬಾಲ ಪದ್ಯಗಳಪದ್ಯಗುಚ್ಛ ’.ಶೀರ್ಶಿಕೆ ಪದ್ಯವು ಇಂದಿನ ಪ್ರಸ್ತುತ ವ್ಯವಸ್ಥೆಯ ಅಂಕಾಧಾರಿತ ಶಿಕ್ಷಣ ವ್ಯವಸ್ಥೆಯನ್ನು ಅತ್ಯಂತ ಪಾರದರ್ಶಕವಾಗಿ ತೋರಿಸುತ್ತದೆ. ಅಂಕ- ಅಂಕ ಅಂಕದಾತಂಕ ಮಕ್ಕಳ ಬಾಲ್ಯವನ್ನೆ ಮಂಕಾಗಿಸಿರುವ ಪರಿಯನ್ನು ಅತ್ಯಂತ ನವಿರಾಗಿ ಅಷ್ಟೇ ತೀಕ್ಷ್ಣವಾಗಿ ಹೆಣೆಯಲಾಗಿದೆ.‘ಉತ್ತರಿಸಿನಮ್ಮ ಬಾಲ್ಯದಲ್ಲಿ ನಮಗೂ ಉತ್ತರಸಿಗದ  ಕೇಳುವ ಧೈರ್ಯವಿಲ್ಲದೇ ಅಡಗಿದ್ದ ಪ್ರಶ್ನೆಗಳನ್ನು  ನಮ್ಮ ಮಕ್ಕಳೂ ಕೇಳುತ್ತಿರುವರೇನೋ ಎಂಬಂತೆ ಭಾಸವಾಗುತ್ತಿದೆ. ಆದರೆ ಬಹುಶಃ ಅಂಕರಾಜರೂ ಸಹ ಇದಕ್ಕೆ ಉತ್ತರಿಸಲಾರರು.

          ಚಿಲಿಪಿಲಿ ಹಕ್ಕಿಗಳುನಮ್ಮ ಮಕ್ಕಳು ಅವರ ಕಲರವವನ್ನು ಕೇಳುವ ಕಿವಿಗಳೇ ನಮಗೆ ಇಲ್ಲದಂತಾಗಿದೆ, ಕಾರಣ ದುಡಿಯಲು ಹೊರನಡೆಯುವ ತಂದೆ ತಾಯಿಯರ ಸಮಯದ ಹಿಂದೆ ಓಡುವ ಆತುರದ ಬದುಕು , ಸಮಯಕ್ಕೆ ಹೊಂದಿಕೊಂಡು ಹಣದಹಿಂದೆ ಸುಧಾರಿತ ವೈವಸ್ಥೆಗಳ ಮೋಜುಗಳ ದಂದುವೆಚ್ಚಗಳನ್ನು ಭರಿಸಲು ತಮ್ಮ ಮಕ್ಕಳ ಬಾಲ್ಯದ ತುಂಟತನದ ಸುಸಮಯವನ್ನು ಅನುಭವಿಸುವಲ್ಲಿ ವಿಫಲರಾಗಿದ್ದೇವೆ ಹಾಗೆಯೇ ಮಕ್ಕಳನ್ನೂ ಡಿಜಿಟಲ್ ಗೇಮ್ಗಳಿಗೆ ದಾಸರನ್ನಾಗಿಸಿ   ಸಾರಹೀನ ಬಾಲ್ಯವನ್ನು ಅವರದಾಗಿಸಿದ್ದೇವೆ. ಸಾಮಾಜಿಕ ಹೊಂದಾಣಿಕೆಯಿಂದ ದೂರ ಉಳಿಸಿದ್ದೇವೆ, ಅಡ್ಡದಾರಿಯಲ್ಲಿ ಶೀಘ್ರ ಗುರಿಸೇರುವ ಮಾರ್ಗಗಳನ್ನೇ ಹುಡುಕಿ ಕೊಳ್ಳಲು ಪ್ರೇರೇಪಣೆಯಾಗಿದ್ದೇವೆ. ಎಲ್ಲದರಿಂದಲೂ ಬೇಗನೆ ಎಚ್ಚೆತ್ತುಕೊಳ್ಳಿ ಎಂಬ ಸಂದೇಶ ಪದ್ಯದಲ್ಲಿದೆ.

          ಎಲ್ಲರಿಗೂ ಹಕ್ಕುಗಳಿವೆ ನಮ್ಮ ಮಕ್ಕಳ ಹಕ್ಕುಗಳನ್ನು ನಾವು ಮರೆತಿದ್ದೇವೆ. ಪ್ರಶ್ನೆಕೇಳುವ ಹಕ್ಕನ್ನೂ ಸಹ ಅವರಿಂದ ಕಿತ್ತುಕೊಂಡಿದ್ದೇವೆ. ಆದರೆ ಪ್ರಶ್ನೆಕೇಳುವುದು ಅವರ ಜನ್ಮಸಿದ್ಧಹಕ್ಕು, ಬಾಲ್ಯದ ಜೀವಂತಿಕೆಯ ಸಂಕೇತ ಎಂಬುದನ್ನೇ ಮರೆತಿದ್ದೇವೆ ಹಕ್ಕುಗಳು ಪುಸ್ತಕ ಸೇರಿವೆ ಮನೆಗಳಲ್ಲಿಲ್ಲ,ಅನಾದಿಕಾಲದಿಂದಲೂ ನಡೆದು ಬಂದಿರುವ ಪುರುಷಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಮುಗ್ದ ಮಗಳೊಬ್ಬಳ ಮುದ್ದಾದ ಪ್ರಶ್ನೆಗಳು ಅಪ್ಪನ ಮೂಲಕ ಪುರುಷ ಸಮಾಜಕ್ಕೇ ಬಲಿಷ್ಠ ಗುದ್ದುಗಳನ್ನು ಹೇರಿದೆ.ಮಗಳ ಪ್ರಶ್ನೆಲಿಂಗತಾರತಮ್ಯಕ್ಕೆ ಹಿಡಿದ ಕನ್ನಡಿಯಾಗಿದೆ ನಾಗರೀಕ ಸಮಾಜ ಕಣ್ತೆರೆಯಬೇಕಿದೆ.

          ಆಲದಮರದಒಗ್ಗಟಿನ ಬದುಕು ಸಹಬಾಳ್ವೆಯ ಸಂಕೇತ ಎಲ್ಲರಿಗೂ ಆಶ್ರಯನೀಡಿ  ಮಹಾ ಆಲಯವಾಗಿದೆ. ಅವಿಭಕ್ತಕುಟುಂಬದ ಕಲ್ಪನೆ ಕಾಣೆಯಾಗುತ್ತಿರುವ  ಇಂದಿನ ದಿನಗಳಿಗೆ ಮಾದರಿಯಾಗಿದೆ.ಲೇಖಕರುಆಕಾಶದ ಕಡೆಗೂಒಮ್ಮೆ ದೃಷ್ಟಿ ಹಾಯಿಸಿ ಹೊಸಗ್ರಹದಲ್ಲೂ ಒಂದುದಿನ ಕಳೆದಿದ್ದಾರೆ, ದಿನ ಆಕಾಶದ ಟ್ರಾಫಿಕ್ ಫ್ರೀ ಸಂಚಾರದ ಮಜಾ ವಾಹನವಿಲ್ಲದೆ ಹಾರುವ ಲೋಕದಲ್ಲಿ ಸ್ನೇಹವೂ ಸಿಕ್ಕಿತು. ಇಲಿ,ಹಾವು,ಗರುಡ ಪರಸ್ಪರ ವೈರಿಗಳು ಭೂಲೋಕದಲ್ಲಿ  ಆದರೆ ಆಕಾಶದಲ್ಲಿ ಅನ್ಯೋನ್ಯವಾಗಿವೆ ದೇಶಭಾಷೆಗಳ ಹಂಗಿಲ್ಲದ ಸಹಬಾಳ್ವೆಯ ಸಿರಿ ಗ್ರಹವಿದು.

          ಮಗುವಿನ ಮುದ್ದಾದ ಜಾಣ  ಪ್ರಶ್ನೆಗಳಿಗೆ ಪದ್ದು ಉತ್ತರಕೊಟ್ಟ ಅಪ್ಪನು ಮಗುವಿನ ಕೈಲಿ ಸಿಕ್ಕಿಹಾಕೊಳ್ಳುವ ರೀತಿ ಆಪ್ಯಾಯವಾಗಿದೆ.ಕಿರಿಕಿರಿ,ರಗಳೆಗಳು ಮಕ್ಕಳು ಪೋಷಕರ ನದುವೆ ಶತ್ರತ್ವವನ್ನೇ ಬೆಳೆಸಿಬಿಡುತ್ತದೆ. ಪರೀಕ್ಷೆಯ ಸೋಲಿಗೆ ಹೆಚ್ಚು ಮಹತ್ವ ನೀಡುವ ಬದಲು ಬದುಕಿನ ಗೆಲುವಿಗೆ ಪಾಠಕಲಿಸುವ ಅಗತ್ಯತೆಯನ್ನು ಪದ್ಯ ಎತ್ತಿ ಹಿಡಿದಿದೆ. ನಿನ್ನೆಯ ಮಕ್ಕಳೇ ಇಂದಿನ ಅಪ್ಪ-ಅಮ್ಮಂದಿರು ಎನ್ನುವುದನ್ನು ನಾವು ಮರೆತಿದ್ದೇವೆ ಎನ್ನುವದನ್ನುಚೂರು ಆಲಿಸಿ ನಮ್ಮಿಷ್ಟಪದ್ಯ ಮೊರೆಯಿಡುತ್ತಿದೆ.‘ಅಜ್ಜನ ತೋಟದ ಸೊಬಗನ್ನು ಮಲೆನಾಡಿನ ಹಸಿರನ್ನು ಮುದ್ದುಮಗುವೊಂದು ತನ್ನದನಿಯಲ್ಲಿ ಹಾಡಿದಂತಿದೆ.

          ಇಂದಿನ ಸಂಚಾರಿ ದೂರವಾಣಿಗಳ ಅಬ್ಬರಕ್ಕೆ ಎಲ್ಲೆಂದರಲ್ಲಿ  ನೆಟ್ವರ್ಕ್ ಟವರ್ ಗಳು ತಲೆಎತ್ತಿವೆ, ಹೀಗಾಗಿ ಹಲವುಜೀವ ಸಂಕುಲಗಳಿಗೆ ಕಂಟಕವಾಗಿದೆ ಅದರಲ್ಲೂ ಗುಬ್ಬಿಗಳಿಗಂತೂ ನೆಲೆಯೇ ಇಲ್ಲದಂತಾಗಿ ನಶಿಸುವಿಕೆಯ ಅಂಚಿನಲ್ಲಿವೆ, ಮಾನವನಿಗೆ ಅಪಾಯದ ಮುನ್ಸೂಚನೆ ನೀಡುತ್ತಿವೆ.ಮಕ್ಕಳ ಚೆಂದದ ಚಿಂತನೆಗಳು  ಅವರ ಮುಗ್ದ ಭಾವನೆಗಳು ಅದರೊಟ್ಟಿಗೆ ಅವರ ಚುರುಕು ಬುದ್ಧಿಯ ತೀಕ್ಷ್ಣತೆಮಕ್ಕಳ ಉಪಾಯದಲ್ಲಿಹೊಳೆದಿದೆ.

          ಒಬ್ಬ ಬಡತಾಯಿ ತನ್ನ ಶಾಣ್ಯಾ ಮಗಚೋಟ್ಯಾ ಸಕಲ ಗುಣಗಳನ್ನೂ ವರ್ಣಿಸಿ, ಬಡತನದಲ್ಲೂ ಯಾವ ಕೊರತೆಯನ್ನೂ ತೋರಿಸದೇ ಜಗಜ್ಯೋತಿ ಬಸವೇಶ್ವರರ ಹಾದಿಯಲ್ಲಿ ನಡೆಯುವಂತೆ ಹರಸುವ ಪರಿ ಯಾವ ಆದರ್ಶಮಾತೆಯರಿಗೂ ಕಡಿಮೆಯಿಲ್ಲ.ಮದುವೆ ಮನೇಲಿ ಮಕ್ಕಳನ್ನು ಹಾಡಿ ಕುಣಿಸಿರುವ ಲೇಖಕರು ವಿವಿಧ ವಾದ್ಯಗಳು ಜೋಡುನುಡಿಗಳು ಪ್ರಾಸಗಳೊಂದಿಗೆ ಮದುವೆಯ ಸರಳ ಆಚರಣೆಯನ್ನೂ ಬಿಂಬಿಸಿದ್ದಾರ      ಚಂದಾಮಾಮನನ್ನುಏಕೆ ಅಡಗುವೆ ಬಾನಲಿಎಂದು ಪ್ರಶ್ನಿಸುವ ಮಗು, ತನ್ನ ಅಮ್ಮನ ಹಾಡು, ತಂಗಿಯು ಹಠಮರೆಯುವ ಪರಿಯನ್ನು ವರ್ಣಿಸಿದೆ.ಮಕ್ಕಳಿಗಾಗಿ ಆಸ್ತಿಪಾಸ್ತಿ ಕೂಡಿಡುವ ಧಾವಂತದಲ್ಲಿ ಬದುಕಲು ಅಗತ್ಯವಾದ ಜೀವಜಲ ಜೀವವಾಯು,ಭೂಮಿಗಳನ್ನೇ ಮಲಿನಗೊಳಿಸುತ್ತಿದ್ಧೇವೆ. ಆಸ್ತಿಬೇಡ ಬದುಕಲು ಅಗತ್ಯ ಪರಿಸರವನ್ನು ಉಳಿಸಿ ಎಂದು ಮಕ್ಕಳು ಬೇಡುತ್ತಿದ್ದಾರೆ,ಇಂದಿನ ಹಲವು ಕುಟುಂಬಗಳ ನೈಜತೆಗೆ ಹತ್ತಿರವಿರಬಹುದಾದ ಪದ್ಯಮೊಬೈಲ್ ಪಪ್ಪ ಧಾರಾವಾಹಿ ಮಮ್ಮಿಮಕ್ಕಳನ್ನು ನಿರ್ಲಕ್ಷಿಸುವ ಪರಿಸ್ಥಿತಿಯನ್ನು ಚಿತ್ರಿಸಿದೆ.


          ಜಾದು ಕಲಿಸು ಎಂದು ಚಂದ್ರನ ಚೆಲುವಿಗೆ ಬೆರಗಾದ ಮಗುವೊಂದು ಹಾಡುತ್ತಾ ತನಗೂ ಜಾದೂ ಕಲಿಸು ಎನ್ನುತ್ತಿದೆ.ಸಾಕ್ಷರತೆಯ ಹರಿಕಾರ ಪೆನ್ಸಿಲಣ್ಣನಿಗೆ ಕೆತ್ತಿದರೂ ನೋವಾಗುವುದಿಲ್ಲ ಹೇಗೆ ಗೀಚಿದರೂ ಬೇಸರವಿಲ್ಲ, ತಪ್ಪನ್ನು ತಿದ್ದಿಕೊಳ್ಳಲು ರಬ್ಬರ್ ನಂತಹ ಮೃದುವಾದ ಗೆಳೆಯನಿದ್ದರೂ ತಪ್ಪನು ಮಾಡಿಸುವವರು ನಾವು, ಜಾಗ್ರತೆಯಿಂದಿದ್ದರೆ ತಪ್ಪೇ ಆಗುವುದಿಲ್ಲ.‘ಕನಸುಮಗುವಿನ ಮುಗ್ದಮನದ ಪರಿಶುದ್ಧ ಕನಸಿನಲ್ಲಿ ನಲಿವ ನವಿಲು,ಹಸು,ಸಿಹಿಮಾವಿನಹಣ್ಣು, ಪ್ರಶಸ್ತಿಗಳೆಲ್ಲವೂ ದೊರೆತಿತ್ತು.

          ಪಪ್ಪನ ಫೋನುಮಗುವಿಗೆ ಹಿಗ್ಗು ಆದರೆ ಅದರಲ್ಲಿ ಬಯಲಲಿ ಆಟವಾಡುವ ಆನಂದ, ಸಡಗರ, ಜೊತೆಗಾರರು ಯಾರೂ ಇಲ್ಲದೆ ಒಂಟಿ ಆಟಕೂ ಇಲ್ಲ ಜಗಳಕೂ ಇಲ್ಲದೆ ಬಲು ಬೇಸರ, ಯೂಟೂಬ್ನಲ್ಲಿ ಅಜ್ಜಿಯ ಹಾಡು ಕಥೆಗಳಿದ್ದರೂ ಮಡಿಲಲಿ ಕೇಳುವ  ಅನುಭವವಿಲ್ಲ, ಅಗತ್ಯವರಿತು ಇತಿಮಿತಿಯಲಿ ಮೊಬೈಲು ಬಳಸಿ ಎಂಬ ಸಂದೇಶ ಸಮಯೋಚಿತವಾಗಿದೆ. ‘ಮೋಡಗಳೂರಲಿ ಒಂದು ದಿನಮಗುವೊಂದು ಮೋಡಗಳೊಂದಿಗೆ ಮಾತನಾಡುತ್ತಾ  ಭೂಮಿ ಮೋಡಗಳ ಪರಿಶುದ್ಧತೆಯನ್ನು ಹೋಲಿಸುತ್ತದೆ.

          ಗುಡುಗು ಮಿಂಚು ಮಳೆಒಮ್ಮೆ ಕದನಕಿಳಿದು ಮೂವರೂ ನಾನು ನಾನು ಎಂದು ಪೈಪೋಟಿ ನಡೆಸಿದವು. ಕದನದಲ್ಲಿ ವಿಜ್ಞಾನದ ತತ್ವ ಶಬ್ದ,ಬೆಳಕು.ಹಾಗೂ ನೀರಿನ ವೇಗಗಳ ಅರಿವೂ ಅಡಗಿದೆ.‘ಕಾಗೆ ಹೇಳಿದ ಪಾಠಬದುಕಿನ ವಿಭಿನ್ನತೆ, ವೈವಿಧ್ಯತೆಯೊಂದಿಗೆ ಪರಸ್ಪರರನ್ನು ಸಮಾನವಾಗಿ ಕಾಣುತ್ತಾ ಗೌರವಿಸುತ್ತಾ ಸ್ವಂತಿಕೆಯೊಂದಿಗೆ ಸಹಬಾಳ್ವೆಯಿಂದ ಬದುಕುವ ಪಾಠಕಲಿಸುತ್ತದೆ.‘ಒಗ್ಗಟ್ಟಿನ ಇರುವೆಶಿಸ್ತು, ಸಂಯನ, ಪರಿಶ್ರಮ, ಅವಿರತದುಡಿಮೆ, ಆತ್ಮವಿಶ್ವಾಸದಿಂದ ಜೀವನ ಸಾಗಿಸುವ ಇರುವೆ ಜೀವನಕ್ಕೊಂದು ಶ್ರೇಷ್ಠ ಸಂದೇಶವನ್ನು ನೀಡುತ್ತದೆ.ಅರಿತು ಬಾಳಿದರೆ ಎಲ್ಲರೂ ಸಹ ಜೀವನದಲ್ಲಿ ಯಶಸ್ಸು ಪಡೆಯತ್ತಾರೆ ಎಂಬುದು ನೀತಿ.

          ಅಂತಿಮ ಕ್ಷಮೆನದಿಯೊಂದ ಕಂಡು ಅನ್ಯ ಜೀವಿಗಳು ತಮ್ಮ ಅಗತ್ಯವನ್ನು ಪೂರೈಸಿಕೊಂಡು ಇತರರಿಗೂ ಉಪಕಾರ ಮಾಡಿದರೆ ಸ್ವಾರ್ಥಿ ಮಾನವ ಕಾಡುಕಡಿದು ಜೀವಿಗಳ ನೆಲೆಯನ್ನು ಕಿತ್ತುಕೊಂಡು ಕಡೆಗೆ ತನಗೂ ಅನ್ನಕ್ಕೂ ಗತಿಇಲ್ಲದಂತೆ ಮಾಡಿಕೊಂಡು ತಪ್ಪಿನ ಅರಿವಾಗಿ ಗಿಡ ಬೆಳೆಸಿ ಮಳೆ ತರುವ ವಾಗ್ದಾನ ನೀಡಿದ್ದಾನೆ.‘ನನಗೊಂದಿಷ್ಟು ಕನಸಿವೆಯಮ್ಮಾಎಂದು ಮುದ್ದು ಕಂದ ತನ್ನ ಅಮ್ಮನ ಬಳಿ ಇರುವೆಯ ಶಿಸ್ತಿಗೆ ತಾನೆಷ್ಟು ಮಾರುಹೋಗಿದ್ದೇನೆ ಎನ್ನುವ ವಾಂಛೆಯನ್ನು ವ್ಯಕ್ತಪಡಿಸಿದೆ. ಹುಲಿಯ ಘಾಂಭೀರ್ಯ, ಹಲ್ಲಿಯ ಮಾಧುರ್ಯ, ಮೋಡದ ಸಾಮರ್ಥ್ಯ, ಸಹಬಾಳ್ವೆಯ ಸಾಮರಸ್ಯವನ್ನು ಒಟ್ಟಾಗಿಸಿ ಸಾರಿದೆ.

          ಇವರು  ಎಲ್ಲಿಯೇ ಹೋದರೂ ತಮ್ಮ ಮಲೆನಾಡಿನ ಸಿರಿಯನ್ನು ಮೆಲುಕುಹಾಕುವುದನ್ನು ಮಾತ್ರ ಮರೆಯುವುದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ನಮ್ಮೂರ ಹಸಿರು ಸಿರಿಪದ್ಯ. ಮಲೆನಾಡಿನ ಸೊಬಗು ವರ್ಣನಾತೀತ.ಅಡುಗೆ ಮನೆ ಆಟಗಾರ ಪುಟ್ಟನ ತುಂಟಾಟ, ತೊದಲು ನುಡಿ, ಆಡುವ ಜಾಣ್ಮೆ, ಎಲ್ಲರ ಗಮನ ಸೆಳೆಯುವ ಆಕರ್ಶಣೆ ಅತ್ಯಂತ ನವಿರಾಗಿ ಹೆಣೆಯಲ್ಪಟ್ಟಿದೆ. ‘ಪುಟ್ಟನ ದೀಪಾವಳಿಮನೆಯ ಪುಟ್ಟ ಮಗುವೊಂದು ತನ್ನ ಮೊದಮೊದಲ ದೀಪಾವಳಿ ಹಬ್ಬವನ್ನು ಸಂಭ್ರಮಿಸುತ್ತಿರುವ ರೀತಿಯನ್ನು , ಮಲೆನಾಡಿನ ಅಂಟಿಗೆ-ಪಿಂಟಿಗೆಯನ್ನು ನೆನಪಿಸುತ್ತಾ ಪರಿಸರ ಕಾಳಜಿಯನ್ನೂ. ಕಳವಳವನ್ನೂ ವ್ಯಕ್ತಪಡಿಸಿದ್ದಾರೆ.

ಮಕ್ಕಳ ಮನವಿಯಲ್ಲಿ  ಪ್ರಸ್ತುತ ಮಾಧ್ಯಮಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿ ಮಕ್ಕಳ ವಿದ್ಯಾಭಾಸ, ಸಾಮಾಜಿಕ ಸಾಮರಸ್ಯವನ್ನು ಉಳಿಸಿ, ಮಕ್ಕಳಿಗೆ ಹೊರೆಯಾಗುವ ವಿಷಯಗಳನ್ನು ತುಸು ಹಗುರಾಗಿಸೋಣ ಎಂದಿದ್ದಾರೆ. ಮಕ್ಕಳ ಮೂಲಕ ಪದ್ಯದಲ್ಲಿ ಮನವಿ ಮಾಡಿಕೊಂಡಿದ್ದಾರೆ.‘ವೃಕ್ಷಪ್ರಿಯ ಚೋಟುಅತ್ಯಂತ ತರಲೆ, ತುಂಟ, ಚಾಣಾಕ್ಷ ಅದರೂ  ವೃಕ್ಷಪ್ರಿಯತೆಯೇ ಗುಣಗಾನಕ್ಕೆ ಕಾರಣವಾಗಿದೆ. ಇಲ್ಲಿ.‘ಚೋರ ಇಲಿಪ್ರಾಸದ ಹಂದರದಲ್ಲಿ ಇಲಿಯೊಂದಿಗೆ ಮಗು ಆಡುವ ಮಾತಿನ ಆಟ ಚೆನ್ನಾಗಿದೆ, ಹಾಗೆಯೇ ಇಲಿಗೆ ಹೇಳುವ ನೀತಿಯು  ಎಲ್ಲರಿಗೂ ಒಂದು ಪಾಠವೇ ಸರಿ.‘ಕಾಗೆಯ ಸಂದೇಶಎಷ್ಟುಚೆಂದ ಕಾಗೆಯ ಸಂದೇಶ , ಒಂದು ಅಗುಳ ಕಂಡರೂ ಇಡೀ ಬಳಗವನ್ನೇ ಕರೆಯುವ ಗುಣ ಕಾಗೆಯದು, ಮನುಜ ಕಾಗೆಗಿಂತಲೂ ಕೀಳೇ? ಅರಿಯೋ ಮನುಜ ಎನುತಿದೆ ಪದ್ಯ.

          ಪುಟ್ಟ ಬಾಲಕನೊಬ್ಬ ಮೋಡವನ್ನು ಬೇಡುವ ಪರಿ ಅತ್ಯಂತ ಮನೋಜ್ಞವಾಗಿದೆ, ಕಡೆಗೆ ಬೇಡಿಕೆಯ ಎಲ್ಲೆ ಮೀರಿ ಮೋಡಕೇ ಚೂರಿಹಾಕುವ ಕ್ರೌರ್ಯತೆಗೆ ತಿರುಗುವ ಭಾವ ಬಿಸಿಲಿನ ಧಗೆಯ ತೀಕ್ಷತೆಯನ್ನು ಬಿಂಬಿಸುತ್ತದೆ.ಚಳಿಗಾಲದ ಸಮಯವಿರಬಹುದು ಮಕ್ಕಳು ಸೂರ್ಯದೇವನ್ನು ಅತ್ಯಂತ ವಿನಯದಿಂದ ಕೈಜೋಡಿಸಿ ಕೊಂಡು ಕರೆಯುತ್ತಿದ್ದಾರೆ. ಚಳಿಯನೋಡಿಸಿ ಬಿಸಿಲ ಬೆಚ್ಚನೆ ಹೊಡಿಕೆಯನ್ನು ನೀಡೆಂದು.


               ಮಕ್ಕಳು ಮನವಿ ಮಾಡುವ ಪದ್ಯವನ್ನು ಬಹುಶಃ ಲೇಖಕರು ಉತ್ತರ ಕರ್ನಾಟಕದ  ಬಿಸಿಲ ಧಗೆಯನ್ನು ಕುರಿತೇ ರಚಿಸಿರಬೇಕೆನಿಸುತ್ತದೆ. ಬೇಸಿಗೆಯ ರಜೆಯ ಮಜವೆಲ್ಲಾ ಸೂರ್ಯನ ತಾಪಕ್ಕೇ ಬೆಂದು ಹೋಗುತ್ತಿದೆ, ಹಸಿರೆಲ್ಲಾ ಒಣಗಿದೆ, ನದಿಗಳೆಲ್ಲಾ ಬತ್ತಿವೆ, ಮೋಡಕ್ಕೆ ದಯೆ ಮಾಡಿ ಮಳೆ ಸುರಿಸು ಎಂದು  ಬೇಡುವಂತಿದೆ.‘ಬಾ ಬಾ ಮಂಗಣ್ಣಪುಟ್ಟ ಮಗುವೊಂದು ಮಗನ ಚೇಷ್ಟೆಗಳಿಂದ ಬೇಸತ್ತು ಅತ್ಯಂತ ವಿನಯ ಹಾಗೂ ಜಾಣ್ಮೆಯಿಂದ ಮಂಗನೊಂದಿಗೆ ನಡೆಸುವ ಸಂವಾದವಿದು.

               ಅಪ್ಪನ ಹೊಲದಲಿ ಪದ್ಯವು ಅನ್ನದಾತನ ನಿಸ್ವಾರ್ಥ ಶ್ರಮ ಲೋಕಕ್ಕೆ ಉಣಬಡಿಸುವ ಅವನ ಕಾಯಕವು ಅತ್ಯುನ್ನತ ಸ್ಥಾನದಲ್ಲಿದೆ. ಆತನ ಪರಿಶ್ರಮವನ್ನು ಗೌರವಿಸುವ ಆತನ ಮಗನೂ ಸಹ ದುಡಿಯುವ ಪಣತೊಟ್ಟು ವೈಜ್ಞಾನಿಕ ಪದ್ದತಿ ಅನುಸರಿಸಿ ಸಫಲತೆಯ ಸಾಧಿಸುವ ಹಾದಿಯಲ್ಲಿ ನಿಷ್ಟೆಯಿಂದ ದುಡಿಯುವೆ ಎಂದು ಹೇಳಿದ್ದಾನೆ.‘ಇನ್ನೂ ಎಷ್ಟು ಓದಲಪ್ಪಾ’ ? ಪುಸ್ತಕದೊಳಗೇ ಮಕ್ಕಳನ್ನು ಹೂತುಬಿಡುವ ಪೋಷಕರಿಗೆ ಕಣ್ತೆರೆಸುವ ಪ್ರಯತ್ನವಾಗಿದೆ ಪದ್ಯ.

          ರೋಬೋಟಣ್ಣಾಯಂತ್ರಾವೃತ ಪ್ರಪಂಚದಲ್ಲಿ ರೋಬೋಟ್ ಗಳ ಪಾತ್ರವೂ ಅತ್ಯಂತ ವಿಸ್ಮಯವಾಗಿದೆ ಇಂದು.ಅಂತಹುದರಲ್ಲಿ ಇಲ್ಲಾ ಕಾರ್ಯಗಳನ್ನು ಅತ್ಯಂತ ಚಾಕುಚಕ್ಯತೆಯಿಂದ ಮಾಡುವ ರೋಬೋಟ್ಗೆ ಶಕ್ತಿತುಂಬಲು ಚಾಲನೆ ನೀಡಲು ಮನುಷ್ಯನೇ ಬೇಕು.“ನಮ್ಮಯಶಾಲೆಮಕ್ಕಳೆಲ್ಲರೂ ಕೂಡಿನಲಿಯುವ ಮಂದಿರ ಗುರುಶಿಷ್ಯರ ಸಮಾಗಮದ ತಾಣ. ಮಕ್ಕಳ ಶಾಲೆಯ ಸಂಭ್ರಮ ಬಿಂಬಿತವಾಗಿದೆ.“ಮಗನ ಪ್ರಶ್ನೆಅಮ್ಮನಿಗೆ ಕಷ್ಟ ಆದರೂ ಅಮ್ಮ ಮುದ್ದಾಗಿ ತಿದ್ದಿ ಹೇಳಿದ ಬುದ್ದಿಮಾತು ಅತ್ಯಂತ ಮುಕ್ತ. ಅದಕೂ ಹಾಕಿದ ಮರುಪ್ರಶ್ನೆಯ ಬೇಡಿ ವಿಚಲಿತಳಾಗದೆ ಅಮ್ಮ ಸ್ರಷ್ಟಿಯ ನಿಯಮಗಳ ತಿಳಿಹೇಳಿದಳು. ಜಾಣಮರಿ ಎಂದು ಮಗನನು ಉಬ್ಬಿಸಿ ಪ್ರಶ್ನೆಗಳಿಗೆ ವಿರಾಮ ಹಾಕಿದಳು.‘ಮೊಬೈಲ್ ಗೀಳಿನಿಂದ ಹೊರನಡೆದ ಮಗು ಹೊ ಪ್ರಪಂಚವನ್ನು ಕಾಣುವ ಹಂಬಲವನ್ನು ತಾಯಿಯ ಬಳಿ ಹಂಚಿಕೊಂಡಿದೆ.

          ನನ್ನ ಸಂತೆಮಗುವೊಂದು ಅಮ್ಮನೊಟ್ಟಿಗೆ ಸಂತೆಗೆ ಹೋಗಿ ಶಾಲೆಯ ವಿಜ್ನಾನದಪಾಠವ ನೆನಪಿಸಿಕೊಂಡು ತರತರದ ಸತ್ವಯುತ ತರಕಾರಿ,ಹಣ್ಣು,ದ್ವಿದಳಧಾನ್ಯಗಳನ್ನು ಕೊಂಡುಕೊಂಡು ಬೆಲೆಗಿಂತಲೂಆರೋಗ್ಯವೇ ಭಾಗ್ಯಎಂದು ಬೀಗುತ್ತಾ ಮನೆಗೆ ಹಿಂದಿರುಗಿದೆ.‘ಯುದ್ಧಗಳೇಕೆ ಬೇಕಪ್ಪಾಯುದ್ಧ ಎಂದರೇನು ಎಂಬುದರ ಹೊಸ ಪರಿಚಯವಾದಾಗ ತನ್ನ ಸರಳಪ್ರಶ್ನೆಯೊಂದಿಗೆ ತಂದೆಯೊಡನೆ ನಡೆಸುವ ಸಂವಾದ ಹಾಗೂ ಯುದ್ಧದ ಭಯ ಮಗುವನ್ನೂ ಭಯಭೀತವಾಗಿಸಿದ್ದು ಅತ್ಯಂತ ಭೀಕರವಾಗಿದೆ. ವಿಶ್ವಶಾಂತಿಯ ಮಂತ್ರ ಮಗುವಿಗೂ ಅರಿವಿದೆ ಆದರೆ ರಾಷ್ಟ್ರನಾಯಕರಿಗಿಲ್ಲವಾಗಿದೆ.

          ಭೀಮಲೀಲೆಡಾ|ಬಿ.ಆರ್.ಅಂಬೇಡ್ಕರ್ ಅವರ ಜೀವನ ಬಹಿಷ್ಕತ ಬದುಕು,ಬಡತನದ ಬೇಗೆ, ಅಜ್ಞಾನದ ಅಂಧಕಾರಗಳಿಂದ ತುಂಬಿದ್ದರೂ ಅವೆಲ್ಲವನ್ನೂ ಮುಟ್ಟಿನಿಂತ ದಿಟ್ಟ ಬಾಲಕನ ಕತೆಯನ್ನು ಮಕ್ಕಳಿಗೆ ಮನಮುಟ್ಟುವಂತೆ ಚಿತ್ರಿಸಿದ್ದಾರೆ ಲೇಖಕರು. ಮಗುವೊಂದು ಅಮ್ಮಅಮ್ಮನ ನಡುವಿನ ಇರಿಸು ಮುರಿಸುಗಳನ್ನು ಗಮನಿಸಿ ತನ್ನಭಾವದಲ್ಲಿ ಅಪ್ಪನಿಗೆ ತನ್ನ ತಪ್ಪಿನ ಅರಿವುಮೂಡಿಸುವಂತಿದೆ.ಬಸವನ ಓದು ಶಾಲೆಯ ಬಗೆಗಿನ ನಿರಾಸಕ್ತಿ ಹಾಗೂ ಊರಿಗೆ ಉಪಕಾರಮಾಡುವ ಉದಾರಗುಣ ಇಲ್ಲಿ ಪಾರದರ್ಶಕವಾಗಿದೆ, ಅಂತೆಯೇ ಅವನ ಅಜ್ಞಾನದಿಂದಾಗಬಹುದಾದ ಅನಾಹುತಗಳ ಚಿತ್ರಣವೂ ಇದೆ.ಇದರಿಂದ ನಾಳಿನ ಒಳಿತಿಗೆ ಇಂದು ಶಾಲೆಗೆ ಬನ್ನಿ ಮಕ್ಕಳೇ…… ಎಂದು ಕರೆ ನೀಡಿದ್ದಾರೆ.ಕಾಡಿನ ಹಣ್ಣುಗಳ ಪರಿಚಯ, ವಿಭಿನ್ನ ರುಚಿಗಳನ್ನು ವಿವರಿಸುತ್ತಾ ಲೇಖಕರು ಕರ್ನಾಟಕದ ವಿವಿಧ ಸೀಮೆಗಳನ್ನು ಪರಿಚಯಿಸಿದ್ದಾರೆ.

          ಜೀವ ವ್ಯವಸ್ಥೆಯಲ್ಲಿ ಒಂದನ್ನೊಂದು ತಿಂದು ಬದುಕುವ ಪರಿಯಿದೆ. ಆದರೆ ವಿವೇಚನಾಶೀಲ ಮಾನವನಿಗೆ ಇದು ಅನಿವಾರ್ಯವಲ್ಲ ಜೀವಿಸು ಜೀವಿಸಲು ಬಿಡು ಎಂಬ ನುಡಿ ಇಲ್ಲಿ ಪ್ರಸ್ತುತವಾಗಿದೆ.ಪ್ರಮಾಣ ಪತ್ರದ ಗೀಳಿನಲ್ಲಿ ಮಕ್ಕಳನ್ನು ಮುಳುಗಿಸಿರುವ ಪೋಷಕರಿಗೆ ನೊಂದ ಮಕ್ಕಳು ಅಳಲು ತೋಡಿಕೊಳ್ಳುತಿದ್ದಾರೆ. ಪ್ರಮಾಣಪತ್ರವಿರದೆ ಬದುಕಲಾಗದೇ ಎಂದು ಪ್ರಶ್ನಿಸಿದ್ದಾರೆ.ಬಾಲಸಾಹಿತ್ಯ ಎಂಬುದು ಹೆಸರಿಗಷ್ಟೆ, ಆದರೆ ಬಾಲ ಪದ್ಯಸಾಹಿತ್ಯದ ಮೂಲಕ ಲೇಖಕರು ಮುಗ್ದ ಮಕ್ಕಳಿಗೆ ಅರ್ಥವಾಗುವ ಸರಳಸುಂದರ ಭಾಷೆಯಲ್ಲಿ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದ್ದಾರೆ. ಮಕ್ಕಳಲ್ಲಿ ಸಾಮಾಜಿಕ ಕಳಕಳಿಯ ಬಾವನೆಯು ಮೊಳೆಯಲು ಕಾರಣರಾಗಿದ್ದಾರೆ ಎಂದರೆ  ತಪ್ಪಾಗಲಾರದು.

          ಲೇಖಕರ ಪರಿಶ್ರಮ ನಿಜಕ್ಕೂ ಶ್ಲಾಘನೀಯ ಅದಕ್ಕೆ ಪೂರಕವಾಗಿ ನಾವು ನಮ್ಮ ಮಕ್ಕಳನ್ನು ಸಾಹಿತ್ಯ ಓದಲು ಹಾಗೂ ಬರೆಯಲು ತೊಡಗುವಂತೆ ಪ್ರೇರೇಪಿಸುವ ವಾಗ್ದಾನದೊಂದಿಗೆ ನನ್ನ ಸಾಲುಗಳನ್ನು ಮುಗಿಸುತಿದ್ದೇನೆ.

ವಂದನೆಗಳೊಂದಿಗೆ

ಭವ್ಯಬಡಗೇರ

shivamogga

         

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...