ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Friday 28 August 2020

ಶಿಕ್ಷಕ ಮಿತ್ರ ಆಪ್.. ಡೌನ್ಲೋಡ್ ಮತ್ತು ಬಳಕೆಯ ಮಾಹಿತಿ


🙏💐 *ಶಿಕ್ಷಕಮಿತ್ರ ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ನಂತರ ನೀವು ಮಾಡಬೇಕಾದದ್ದು...*👇

*೧.ಮೊದಲು ನಿಮ್ಮ ಕೆ.ಜಿ.ಐ.ಡಿ ನಮೂದಿಸಿ*

*೨ ರಿಜಿಸ್ಟರ್ ನೌ ಮೇಲೆ ಕ್ಲಿಕ್ ಮಾಡಿ*

*೩ ಬಂದ ಒ.ಟಿ.ಪಿ ನಮೂದಿಸಿ*

*೪ ನಂತರ ಪಾಸ್ವರ್ಡ ಸೆಟ್ ಮಾಡಿಕೊಳ್ಳಿ ಪಾಸ್ವರ್ಡ ಕನಿಷ್ಠ ೮ ಅಕ್ಷರ ಹೊಂದಿರಬೇಕು ಅದರಲ್ಲಿ ಒಂದು ಕ್ಯಾಪಿಟಲ್ ಅಕ್ಷರ ಒಂದು ಸಂಖ್ಯೆ ಒಂದು ಕ್ಯಾರೆಕ್ಟರ್ ಹೊಂದಿರಬೇಕು*

*೫.ನಂತರ KGID NUM ಹಾಗೂ PASSWORD ಹಾಕಿದಾಗ ನಿಮ್ಮ ಮಾಹಿತಿ ತೆರೆದುಕೊಳ್ಳುತ್ತದೆ.*

*೬ ನಿಮ್ಮ ಭಾವ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಸಂಪೂರ್ಣ ಮಾಹಿತಿ ತೆರೆದುಕೊಳ್ಳುತ್ತದೆ..



Monday 24 August 2020

ನಲಿ ಕಲಿ 1_3 ನೇ ತರಗತಿ ವೀಡಿಯೋ ಪಾಠಗಳು

*https://www.youtube.com/channel/UCHL7pNOVt2ONpfAZdJz67pw*

*ಗುರು ಚೈತನ್ಯ ನಲಿಕಲಿ ಕಲಬುರಗಿ ಜಿಲ್ಲೆ*

*ನಲಿಕಲಿಯಲ್ಲಿ ತಂತ್ರಜ್ಞಾನ ಬಳಕೆ*

*1 ನೇ ಮೈಲಿಗಲ್ಲು ನಿಂದ 17 ಮೈಲಿಗಲ್ಲು ವರೆಗೆ ಎಲ್ಲಾ ಕಲಿಕಾಂಶ ಚಿತ್ರ ಸಹಿತ ವಿವರಣೆ*

*ವೀಡಿಯೋ ಪಾಠಗಳು ಮೈಲಿಗಲ್ಲುವಾರು ತರಗತಿ 1 ನೇ ಭಾಷೆ*

*https://youtu.be/fYSieqHRoFc*
👆ಮೈಲಿಗಲ್ಲು -1 ರ ಗ ಸ ದ ಅ

*https://youtu.be/9LhLth_gwzQ*
👆ಮೈಲಿಗಲ್ಲು - 2 ಜ ವ ಮ ಬ ನ.

*https://youtu.be/v2XV-dghsTE*
👆ಮೈಲಿಗಲ್ಲು - 3 ಪ ಯ ಉ ಡ ಟ ಚ.

*https://youtu.be/pd7ztuZz2kM*
👆 ಮೈಲಿಗಲ್ಲು - 4 ಲ ಷ ಈ ಊ ಕ 

*https://youtu.be/iGbHD5lJvu0*
👆ಮೈಲಿಗಲ್ಲು -5 ಎ ಏ ಇ ಆ ತ ಳ.

*https://youtu.be/nRudAv0wZuw*
👆ಮೈಲಿಗಲ್ಲು -6 ಓ ಔ ಹ ಶ

*https://youtu.be/NGHVe3r6jx0*
👆ಮೈಲಿಗಲ್ಲು - 7 ಐ ಋ ಣ ಛ ಒ

*https://youtu.be/jrGJrESo8eI*
👆 ಮೈಲಿಗಲ್ಲು - 8 ರಾ ಗಾ ಸಾ ದಾ ಜಾ ವಾ.......

*https://youtu.be/a3CP_WKNz4U*
👆ಮೈಲಿಗಲ್ಲು - 9 ರಿ ಗಿ ಸಿ ದಿ ಜಿ..........

*https://youtu.be/KXPI7PWc-2Y*
👆ಮೈಲಿಗಲ್ಲು - 10 ರೀ ಗೀ ಸೀ ದೀ ಜೀ ವೀ........

*ಮಗ್ಗಿಗಳ ಪರಿಚಯ*

*https://youtu.be/VxgeWM2-HC8*
👆2 ರಿಂದ 10 ರ ವರೆಗೆ ಗುಣಾಕಾರ ಮಗ್ಗಿಗಳು.

*ಕಥೆ*

*https://youtu.be/UaObAFe445o*
👆 ಜಾಣ ಕಾಗೆ

*ಪರಿಸರ ಅಧ್ಯಯನ*

*https://youtu.be/TmnztQl0-oI*
👆ತರಕಾರಿ ಅಭಿನಯ ಗೀತೆ

*https://youtu.be/BcgXPDgOSC0*
👆ಕುಟುಂಬ ಪರಿಸರ ಅಧ್ಯಯನ

*ಕಥೆ*

*https://youtu.be/0ac4HcYkQ3w*
👆ಸಿಂಹ ಮತ್ತು ಇಲಿ

*ಅಭಿನಯ ಗೀತೆ*
*https://youtu.be/Wplcl8hTe8o* ಕೈಯಲ್ಲಿ 👆ಕಿನ್ನೂರಿ......

*ಅಭಿನಯ ಗೀತೆ*
*https://youtu.be/u4FEqypDw_0* ಬಾನ 👆ಬಿಳಿ ಚಂದಿರನೆ.....

*ಪದ್ಯ*

*https://youtu.be/jdc4Jgcloo0*
👆 ಹಾವಿನ ಹೆಡೆ ಚಂದ..

*ಪರಿಸರ ಅಧ್ಯಯನ*

*https://youtu.be/Aq6Nl1SbKOU* ನೀರು


*https://youtu.be/U4eLZZL81k8*

👆ಮೈಲಿಗಲ್ಲು - 11 ರು ಗು ಸು ದು ಜು.....

*https://youtu.be/B35yz2MDfQM*

👆ಮೈಲಿಗಲ್ಲು - 12  ರೂ ಗೂ ಸೂ ದೂ ಜೂ......

*https://youtu.be/bUSuYYI-BBw*

👆 ಮೈಲಿಗಲ್ಲು - 13 ರೆ ಗೆ ಸೆ ದೆ ಜೆ......

*https://youtu.be/_4NXmS_CQIE*

👆ಮೈಲಿಗಲ್ಲು - 14 ರೇ ಗೇ ಸೇ ದೇ ಜೇ.....

*https://youtu.be/JYmpMFRT3Sk*

👆ಮೈಲಿಗಲ್ಲು  15 ಧ ಥ ಢ ಭ

*https://youtu.be/CVcEgLooU2E*

👆ಮೈಲಿಗಲ್ಲು - 16 ಠ ಘ ಫ ಝ ಖ

*https://youtu.be/CCrTQ5es0CE*

👆ಮೂಲಾಕ್ಷರಗಳ ಪರಿಚಯ.

*https://youtu.be/hDMoN2-DsXs*

ಮೈಲಿಗಲ್ಲು - 17  ಅಂ ಅಃ ಙ ಞ.

*ಹುಸೇನ್ ವಡಗೇರಿ ಸಹ ಶಿಕ್ಷಕ. ಸ.ಹಿ.ಪ್ರಾ.ಶಾಲೆ ಬಸನಾಳ ಕಲಬುರಗಿ ದಕ್ಷಿಣ ವಲಯ*

*ದೂರವಾಣಿ : 9916394885*

🙏🏻  ಧನ್ಯವಾದಗಳು🙏🏻

Sunday 23 August 2020

ಅಂತರಂಗದ ಅರಿವಿನ ಮಾರ್ಗಗಳು

ಅಂತರಂಗದ  ಅರಿವಿನ ಮಾರ್ಗಗಳು

ಉದಾಹರಣೆಯೊಂದಿಗೆ ಅಂತರಂಗ ಪ್ರವೇಶ:
 ಕೆಲವರ ಉತ್ತಮ  ಕೆಲಸ ಖುಷಿ ನೀಡುತ್ತದೆ, ಅವರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತೀರಿ.ಅದರಿಂದ ನಿಮ್ಮೊಳಗೂ  ಒಂದು ಆಂತರಿಕ ಸಂತಸದ ಸಂಚಲನ ಆಗುತ್ತದೆ. ನಿಮ್ಮ ಮೆಚ್ಚುಗೆಯಿಂದ ಅವರು ಇನ್ನೂ ಹೆಚ್ಚು ಒಳ್ಳೆಯ ಕೆಲಸ ಮಾಡಬಹುದು , ಮಾಡಿದೆ ಇರಬಹುದು ಆದರೆ ನಿಮ್ಮ ಬಗ್ಗೆ ಗೌರವ ತಾಳುತ್ತಾರೆ. ನಿಮ್ಮ ಮೇಲೆ ಹೆಚ್ಚು ವಿಶ್ವಾಸ ಇಡುತ್ತಾರೆ.ನಿಮ್ಮ ಮೆಚ್ಚುಗೆ, ಅಭಿನಂದನೆ ಪರಸ್ಪರ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ನಿಮ್ಮ  ಅಂತರಂಗವನ್ನು  ಧನಾತ್ಮಕವಾಗಿ  ಸಕ್ರಿಯವಾಗಿ 
ಇಟ್ಟುಕೊಳ್ಳಲು ಸಹಾಯವಾಗುತ್ತದೆ. ನಿಮ್ಮ ಅಂತರಂಗ ಶುದ್ಧತೆಯತ್ತ ಸಾಗಿದಷ್ಷೂ   ಸದಾ ಉತ್ಸಾಹದಿಂದ ಇರುವ ನಿಮ್ಮ ಮನಸ್ಸು  ನೆಮ್ಮದಿಯಿಂದ  ಇದ್ದಷ್ಟು ನೀವು ಬೆಳೆಯುತ್ತೀರಿ. ನಿಮ್ಮ ಆರೋಗ್ಯ ಸದಾ ಉತ್ತಮವಾಗಿರುತ್ತದೆ.

ಆದರೆ ಅಸೂಹೆ ... ತೂತು ಬಿದ್ದ ಮಡಿಕೆ.  ನಿಮ್ಮ ಅಂತರಂಗದ ಮಡಿಕೆಯೋಳಗಿದ್ದ ಎಲ್ಲವೂ ಸೋರುತ್ತಾ ಹೋಗುತ್ತದೆ.

ಅಸೂಹೆಯ ಕಣ್ಣಿನಿಂದ ನೀವು  ಯಾರನ್ನು ನೋಡುತ್ತೀರೋ ಅವರ  ಒಳ್ಳೆಯ ಕೆಲಸವೂ ಅಸೂಯೆ ತರುತ್ತದೆ. ಇದರಿಂದ ವೈಯಕ್ತಿಕವಾಗಿ ನಿಮಗೆ ಯಾವ ಲಾಭವಾಗದಿದ್ದರೂ ಅವರಿಗೆ ತೊಂದರೆ ಕೊಡುವುದರಿಂದ ನಿಮ್ಮ ಮನಸ್ಸಿನಲ್ಲಿ ಒಂದು ರೀತಿಯ ವಿದ್ರೋಹಿ ಸಂತಸ ಮನೆ ಮಾಡಬಹುದು. ಆದರೆ ಅದು ನಿಮ್ಮ ಮನಸ್ಸನ್ನು ಕೆಟ್ಟ ಮಾರ್ಗದತ್ತ ಕೊಂಡೊಯ್ಯುತ್ತದೆ. ನಿಮ್ಮ ಮಾನಸಿಕ ನೆಮ್ಮದಿಯನ್ನು ಸದಾ ಕದಡುತ್ತದೆ. ನಿಮ್ಮ ಎದುರಾಳಿ ಎಂದುಕೊಂಡವರ ಬೆಳವಣಿಗೆಯಿಂದ ನಿಮ್ಮ ನಿದ್ದೆ ಕದಡುತ್ತದೆ. ಅಂತರಂಗ  ಅಸೂಯೆಯಿಂದ ಕುದಿಯುತ್ತದೆ. ಅಸೂಯೆಯ ಬಿಸಿ ಮೊದಲು ಸುಡುವುದು ನಿಮ್ಮ ದೇಹ ಮತ್ತು ಮನಸ್ಸನ್ನೇ ಹೊರತು ವೈಯಕ್ತಿಕವಾಗಿ ನಿಮಗೆ ಯಾವ ಉಪಯೋಗವೂ ಆಗದು. ನಿಮ್ಮ ಅಂತರಂಗ ಧನಾತ್ಮಕ ಅರಿವಿನತ್ತ ಸಾಗದು. ನಿಮ್ಮ ಕ್ರಿಯಾಶೀಲತೆ, ನಿಮ್ಮ ಜೀವನ ಉತ್ಸಾಹ ಕಡಿಮೆಯಾಗಿ ವಿಕೃತ ಸಂತೋಷದತ್ತ ಹೆಜ್ಜೆ ಹಾಕಬಹುದು. ಹಾಗಾಗಿ ಅಂತರಂಗದ ಅರಿವು ಅತಿ ಅಗತ್ಯ. ಅಂತರಂಗದೊಳಗೆ ಅಸೂಹೆಯನ್ನು ದೂರ ಇಡುವುದು ಒಳಿತು. ಒಳಹೊಕ್ಕ ಅಸೂಹೆ ಓಡಿಸಿ ಪರಸ್ಪರ ಮೆಚ್ಚುಗೆ ಅಭಿಮಾನ ಬೆಳೆಸಿಕೊಳ್ಳುತ್ತಾ ನಿಮ್ಮನ್ನು ನೀವು ಒಳ್ಳೆಯ ಕೆಲಸಗಳತ್ತ ಸಕ್ರಿಯಗೊಳಿಸಿ ಕೊಳ್ಳಲು ಸಾಗುವ ಮಾರ್ಗ ಕಂಡುಕೊಳ್ಳಬೇಕು. ನಿಮ್ಮ ಅಂತರಂಗದ ಅರಿವು ನಿಮ್ಮ ಕೈಯಲ್ಲೇ ಇರಬೇಕು.ಯಾರದೋ   ಮಾತಿಗೆ ಕಿವಿ ಆಗಬಾರದು

ನಾವು ಮಾಡುವ ಕೆಲಸ ಹೇಗಿರಬೇಕು...

ಋಣಾತ್ಮಕ ಮಾತು ಅಥವಾ ಕೆಟ್ಟತನ ಅಥವಾ ಇನ್ನೊಬ್ಬರಿಗೆ ತೊಂದರೆ ಕೊಡುವ ಕೆಲಸ ನಿರಂತರವಾಗಿ ಮತ್ತು ಅದೇ ಉತ್ಸಾಹದಲ್ಲಿ ಬಹಳ ಕಾಲ ಮಾಡುವುದು ಸಾಧ್ಯವಿಲ್ಲ.

ಅದೇ ರೀತಿ,
ಧನಾತ್ಮಕತೆ ಅಥವಾ ಒಳ್ಳೆಯತನ ಅಥವಾ ಇನ್ನೊಬ್ಬರಿಗೆ ಸಹಾಯ ಮಾಡುವ ಕೆಲಸವನ್ನು ಜೀವನ ಪರ್ಯಂತ ಅದೇ ಉತ್ಸಾಹದಲ್ಲಿ ಮಾಡಬಹುದು.

ಏಕೆಂದರೆ,
ಅಸೂಯೆಯಿಂದಲೋ ಕೋಪದಿಂದಲೋ ಇನ್ನೊಬ್ಬರಿಗೆ ನಾವು ತೊಂದರೆ ಕೊಡಲು ಪ್ರಾರಂಭಿಸಿದರೆ ಆ ವಿರೋಧಿಗೆ ಅದರಿಂದ ತೊಂದರೆಯಾಗಬಹುದು ಅಥವಾ ಆಗದೇ ಇರಬಹುದು. ಆದರೆ ನಮಗೆ ಅದರಿಂದ ಲಾಭವಾಗುವ ಸಾಧ್ಯತೆ ಕಡಿಮೆ. ನಮ್ಮ ಮನಸ್ಥಿತಿ ಕೂಡ ಮಲಿನವಾಗುತ್ತಾ, ನರಮಂಡಲದ ದುರ್ಬಲವಾಗುತ್ತಾ ಸಾಗುತ್ತದೆ. ಇತರರಿಂದ ಅದಕ್ಕೆ ಸಿಗುವ ಬೆಂಬಲ ಕೂಡ ಕಡಿಮೆಯಾಗುತ್ತಾ ಕೊನೆಗೆ ನಮ್ಮ ಬಗ್ಗೆಯೇ ಅವರಲ್ಲಿ ತಿರಸ್ಕಾರ ಮೂಡತೊಡಗುತ್ತದೆ.  ಇದರಿಂದ ಆತ್ಮತೃಪ್ತಿಯೂ ಸಿಗುವುದಿಲ್ಲ. ಜೊತೆಗೆ ನೆಗೆಟಿವ್ ಕೆಲಸ ಮಾಡುವಾಗ ನಮ್ಮ ವಿರೋಧಿಗೆ ತೊಂದರೆಯಾದಾಗ ಮೇಲ್ನೋಟಕ್ಕೆ ನಮ್ಮಲ್ಲಿ ಸ್ವಲ್ಪ ಖುಷಿ ಕಾಣಿಸಿದರು ಆಳದಲ್ಲಿ ಮತ್ತು ದೀರ್ಘಕಾಲದಲ್ಲಿ ಅದರ ಪರಿಣಾಮ ನಮ್ಮ ವಿನಾಶಕ್ಕೆ ಕಾರಣವಾಗುತ್ತದೆ. ನಮಗರಿವಿಲ್ಲದೆ ನಮ್ಮ ಕೆಟ್ಟ ನಡವಳಿಕೆಗೆ ಕಾರಣವಾಗುತ್ತದೆ.

ಅದಕ್ಕೆ ವಿರುದ್ಧವಾಗಿ ನೀವು ಯಾರಿಗಾದರೂ ಒಳ್ಳೆಯದನ್ನು ಮಾಡಲು ಪ್ರಯತ್ನಿಸಿ. ಆಗ ನಿಮ್ಮ ಮಾನಸಿಕ ವ್ಯಕ್ತಿತ್ವವೇ ವಿಭಿನ್ನವಾಗಿ ಇಡೀ ವಾತಾವರಣ ಚೇತೋಹಾರಿಯಾಗಿರುತ್ತದೆ. ನೀವು ಎಷ್ಟೇ ಸಹಾಯ ಮಾಡಿದರೂ ಧಣಿವಾಗುವುದಿಲ್ಲ. ಸಹಾಯ ಮಾಡುವಾಗ ಏನಾದರೂ ನಿರೀಕ್ಷೆ ಇದ್ದರೆ ಅಥವಾ ಸಹಾಯ ಮಾಡಿದವರು ಉಪಕಾರವನ್ನು ಸ್ಮರಿಸದಿದ್ದರೆ ಒಂದಷ್ಟು ಬೇಸರವಾಗಬಹುದೇ ಹೊರತು ಅದಕ್ಕಿಂತ ಹೆಚ್ಚಿನದೇನೂ ಆಗುವುದಿಲ್ಲ.

ವ್ಯಾವಹಾರಿಕ ಮತ್ತು ವೈಯಕ್ತಿಕ ದ್ವೇಷ -  ವಂಚನೆಯ ವಿಷಯಗಳಲ್ಲಿ ಇದು ಹೆಚ್ಚಾಗಿ ಅನ್ವಯಿಸುವುದಿಲ್ಲ. ಆದರೆ ಭಿನ್ನ ಅಭಿಪ್ರಾಯ ಮತ್ತು ಅಸೂಯಾಪರ ಗುಣಗಳಲ್ಲಿ ಇದರ ಪರಿಣಾಮ ಹೆಚ್ಚಾಗಿರುತ್ತದೆ.

ನಾವು ನಿಯಂತ್ರಣ ಸಾಧಿಸಬೇಕಾಗಿರುವುದೇ ಇಲ್ಲಿ. ಇನ್ನು ಮುಂದಾದರು ಇನ್ನೊಬ್ಬರ ಬಗ್ಗೆ ಕೆಟ್ಟ ಮಾಹಿತಿ ಹಂಚುವುದಕ್ಕಿಂತ ಸಾಧ್ಯವಾದರೆ ಒಳ್ಳೆಯದನ್ನು ಹಂಚಿಕೊಳ್ಳೋಣ. ನಾವು ಯಾರೂ ಪರಿಪೂರ್ಣರಲ್ಲ. ಒಂದಲ್ಲ ಒಂದು ಸಂದರ್ಭದಲ್ಲಿ ನಾವು ಕೂಡ ಯಾವುದೋ ರೂಪದ ತಪ್ಪೆಸಗಿರುವ ಸಾಧ್ಯತೆ ಇದ್ದೇ ಇರುತ್ತದೆ. 

ಅಂತರಂಗದ ಆಶಯ

ಯಾರು ಹೇಗೆ ಇದ್ದರು  ಅವರವರ ಆತ್ಮಾವಲೋಕನಕ್ಕೆ ಬಿಟ್ಟು ನಾವು ಮಾತ್ರ ಸಾಧ್ಯವಾದಷ್ಟು ಧನಾತ್ಮಕ ಅರಿವಿನತ್ತ ಸಾಗುವ ಗುಣ ಬೆಳೆಸಿಕೊಳ್ಳೋಣ . ಪರಸ್ಪರ ಒಳ್ಳೆಯ ಕೆಲಸಗಳನ್ನು ಅಭಿನಂದಿಸೋಣ. ಪ್ರೋತ್ಸಾಹಿಸೋಣ. ಪರಸ್ಪರರ ಅಂತರಂಗವನ್ನು ಅರಿಯೋಣ ಎಂಬ ಆಶಯದೊಂದಿಗೆ.

ರವಿರಾಜ್ ಸಾಗರ್.

ನಿಮ್ಮ ಮಕ್ಕಳಿಗೆ ವಿವಿಧ ಸ್ಕಾಲರ್ಶಿಪ್ ಮಾಹಿತಿ ಹಾಗೂ ಸಂಬಂಧಿತ ವೆಬ್ ಸೈಟ್ ನೋಡಿ

ಸಂಪೂರ್ಣ ವಿವರ ಮಾಹಿತಿ ಓದಿ..

ನಿಮಗೆ ಪರಿಚಯವಿರುವ ಬಡ ವಿದ್ಯಾರ್ಥಿಗಳಿಗೆ ಈ  ಕೆಳಗಿನ ವಿದ್ಯಾರ್ಥಿ ವೇತನಗಳ ಬಗ್ಗೆ ದಯವಿಟ್ಟು ಮಾಹಿತಿ ನೀಡಿ.. ಯಾಕೆಂದರೆ  ಮುಂದಿನ ತಿಂಗಳಲ್ಲಿ ಎಲ್ಲಾ ವಿದ್ಯಾರ್ಥಿ ವೇತನಗಳ ಅರ್ಜಿಗಳನ್ನು ಕರೆಯಲಾಗುತ್ತದೆ.

1) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ -
www.karepass.cgg.gov.in

೨) ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ   ವಿದ್ಯಾರ್ಥಿಗಳಿಗೆ 
www.sw.kar.nic.in

೩) ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ -www.gokdom.kar.nic.in

೪) ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ವಿದ್ಯಾರ್ಥಿ ವೇತನ (Ministry of Human Resource Development)  ಪ್ರತಿ ವರ್ಷವು ಡಿಗ್ರಿ ಪ್ರವೇಶ ಪಡೆಯುವ  ಎಲ್ಲಾ ಜಾತಿಯಾ ಬಡ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ - 
www.kar.nic.in/pue

೫) ನಮ್ಮ ರಾಜ್ಯದ ಹೆಮ್ಮೆಯ ಐ.ಟಿ ಕಂಪನಿ ಇನಪೋಸ್ಸಿಸ್ ನೀಡುವ ವಿದ್ಯಾರ್ಥಿ ವೇತನ - www.vidyaposhak.org

೬)ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿ ವೇತನ - 
www.kar.nic.in/pue/

೭) ದೀರುಬಾಯಿ ಅಂಬಾನಿ ವಿದ್ಯಾರ್ಥಿ ವೇತನ ಅಂಗವಿಕಲ ವಿದ್ಯಾರ್ಥಿಗಳಿಗೆ - 
www.kar.nic.in/pue

೮) ಅಂಬೇಡ್ಕರ್ ನ್ಯಾಶನಲ್ ಮೆರಿಟ್ ಅರ್ವಾಡ್ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ - 
www.kar.nic.in/pue

೯) ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಮೂಲ ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ (Inspire Scholarship) - 
www. kar.nic.in/pue

೧೦) ಮೆರಿಟ್ ಸ್ಕಾಲರಶಿಪ್ - ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ಶೇ.೮೦ ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಬಡ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ(ಇಂಜಿನಿಯರಿಂಗ್, ವೈದ್ಯಕೀಯ, ಕೃಷಿ) ಶುಲ್ಕವನ್ನು ಸರ್ಕಾರ ನೀಡುತ್ತದೆ – 
www. kar.nic.in/pue

೧೧) ನಮ್ಮ ರಾಜ್ಯದ ಹೆಮ್ಮೆಯ ಇನ್ನೊಂದು ಐ.ಟಿ ಕಂಪನಿ  ವೀಪ್ರೊ ಅವರ  ಅಜೀಮ್ ಪ್ರೇಮಜೀ ಫೌಂಡೇಷನ್ -www.azimpremjifoundation.org

12. ​ವಿದ್ಯಸಿರಿ​ ​ಮತ್ತು ಶುಲ್ಕ​ ​ವಿನಾಯಿತಿ​
http://backwardclasses.kar.nic.in/BCWD/Website/backwardclassesMain.html 

    http://backwardclasses.kar.nic.in/BCWD/Website/Educational_Scholarships.html

    Information ::

   http://www.scholarshipx.in/2015/10/karnataka-scholarship-onlline-last-date.html

13. ​ಸರ್ಕಾರದ​ ​ಧನಸಹಾಯಗಳ​ ​ವೆಬ್ ವಿಳಾಸ​

http://karepass.cgg.gov.in/ 

14. ​ಜಿಂದಾಲ್ scholarship​

 http://www.sitaramjindalfoundation.org/scholarships.php 

15. ​B.L ಹೇಮವತಿ ಧನಸಹಾಯ​

 http://www.blhtrust.org/schpro.html 

16. ​ಕೇಂದ್ರ ಸರ್ಕಾರದ ಧನಸಹಾಯಗಳು​

Central Govt Scholarship

     http://mhrd.gov.in/ 

17.  ​Indian Oil Scholarship​

     https://www.iocl.com/AboutUs/AcademicScholarships.   

Tuesday 18 August 2020

ಬಹುಮುಖ ಪ್ರತಿಭೆ ಬಾಲಸಾಹಿತಿ ಅನೀಶ್

 ಬಹುಮುಖ ಪ್ರತಿಭೆ ಬಾಲ ಸಾಹಿತಿಯಾಗಿ ಭರವಸೆ ಮೂಡಿಸಿದ ಅನೀಶ್ ಕುರಿತು ಕಿರು ಪರಿಚಯ:

ಅಂಕಗಳ ಬೆನ್ನು ಹತ್ತಿದವರ  ಸಾಲಿನಲ್ಲಿ ನಿಲ್ಲದೆ  ಶಾಲಾ ಕಲಿಕೆಯ ಜೊತೆಗೆ ಸಾಹಿತ್ಯ-ಸಾಂಸ್ಕೃತಿಕ , ಸಹಪಠ್ಯ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ತೊಡಗಿಸಿಕೊಳ್ಳುತ್ತ  ಶಿಕ್ಷಕಿ ತಾಯಿ ಭಾರತಿ ಅವರ ಮಾರ್ಗದರ್ಶನದೊಂದಿಗೆ ನಿಂದು ವಿಶಿಷ್ಟ ಸಾಧನೆಯತ್ತ ಸಾಗುತ್ತಿರುವ ಅನಿಶ್ ಬಗ್ಗೆ ಬರೆಯಲು ಸಾಕಷ್ಟು ವಿಚಾರವಿದೆ..

ನಮ್ಮ ಮಕ್ಕಳ ಮಂದಾರ ಪತ್ರಿಕಾ ಬಳಗದಲ್ಲಿ ವಿದ್ಯಾರ್ಥಿಯ ಸಂಪಾದಕನಾಗಿ ತೊಡಗಿಸಿಕೊಂಡ ವಿಶಿಷ್ಟ ಪ್ರತಿಭೆ.

10 ನೇ ತರಗತಿ ಓದುತ್ತಿರುವ  ಅನೀಶ್    ಬಿಜಿಎಸ್ ಶ್ರೀ ವೆಂಕಟೇಶ್ವರ ವಿದ್ಯಾಮಂದಿರ, ಕೊಪ್ಪದಲ್ಲಿ ಪಠ್ಯ ಕಲಿಕೆಯ ಆಚೆ ಭರವಸೆ ಮೂಡಿಸಿದ್ದಾನೆ.     

*ಸಾಂಸ್ಕೃತಿಕ ಸಾಧನೆಗಳು:*  

* *"ಹೂರಣ" ಸ್ವರಚಿತ ಕವನ ಸಂಕಲನ- ಹಾಸನದಲ್ಲಿ ರಾಷ್ಟ್ರ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಬಿಡುಗಡೆ .*

* ಹಾಸನದಲ್ಲಿ ನಡೆದ ಪ್ರಥಮ ಅಖಿಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನದ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

 * ಶ್ರೀ ಕ್ಷೇತ್ರ ಆದಿಚುಂಚನಗಿರಿ ,ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ, ಇಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.ದೂರದರ್ಶನ ಚಂದನ ವಾಹಿನಿಯ " ಥಟ್ ಅಂತ ಹೇಳಿ " ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾನೆ.  ಚಂದನ ವಾಹಿನಿಯ 'ಥಟ್ ಅಂತ ಹೇಳಿ' ಕಾರ್ಯಕ್ರಮದಲ್ಲಿ  ಸ್ಪರ್ಧಿಗಳಿಗೆ ' ಹೂರಣ ' ಪುಸ್ತಕವನ್ನು ಬಹುಮಾನವಾಗಿ ಕೊಡಲಾಗುತ್ತಿದೆ.ಕರಾವಳಿಯ ಸ್ಥಳೀಯ ವಾಹಿನಿ " ಮುಕ್ತ "  ವಾಹಿನಿಯ *"ಅನ್ವೇಷಣ್"* ಕಾರ್ಯಕ್ರಮದಲ್ಲಿ ಪ್ರತಿಭೆಗಳ ಅನಾವರಣದಲ್ಲಿ ಪರಿಚಯಾತ್ಮಕ ಸಂದರ್ಶನ ಮಾಡಲಾಗಿದೆ 

 ಸೃಜನ ಟ್ರಸ್ಟ್(ರಿ.)., ಶಿವಮೊಗ್ಗ ಮತ್ತು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು, ಶಿವಮೊಗ್ಗ ,ಇವರ ವತಿಯಿಂದ ನಡೆಸಿದ ರಾಜ್ಯ ಮಟ್ಟದ ಮಕ್ಕಳ ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.ರಾಜ್ಯ ಯುವ ಬರಹಗಾರರ ಒಕ್ಕೂಟ (ರಿ.) ಬೆಂಗಳೂರು , ಇವರು ಕನ್ನಡ ಭವನ ತುಮಕೂರಿನಲ್ಲಿ ನಡೆಸಿದ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿ ಪುರಸ್ಕಾರ ದೊರೆತಿದೆ.

ವಿಜಯ ಕರ್ನಾಟಕ ಪತ್ರಿಕೆಯ ಮಕ್ಕಳ ದಿನಾಚರಣೆ ರಾಜ್ಯ ಮಟ್ಟದ ಮಕ್ಕಳ *' ಪುಟ್ಟ ಮರಿ ಪದ್ಯ ಬರಿ '* ಸ್ಪರ್ಧೆಯಲ್ಲಿ *ಡಾ.ಹೆಚ್.ಎಸ್.ವೆಂಕಟೇಶ ಮೂರ್ತಿ* ಅವರ *ಮೆಚ್ಚುಗೆ ಪಡೆದ* ಟಾಪ್ 5 ಕವನಗಳಲ್ಲಿ *ಪ್ರಥಮ ಸ್ಥಾನ.*


* ರಾಷ್ಟ್ರೀಯ ಗ್ರಾಮೀಣ ಮಾಹಿತಿ ತಂತ್ರಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲೆಯನ್ನು ಮೈಸೂರು ವಿಭಾಗ ಮಟ್ಟದಲ್ಲಿ ಪ್ರತಿನಿಧಿಸಿದ್ದಾನೆ.  ರಾಜ್ಯ ಮಟ್ಟದ ವಿಜ್ಞಾನ ಮೇಳ ರಸಪ್ರಶ್ನೆ ಪ್ರಥಮ.ಸರ್ ಫೌಂಡೇಷನ್,ಮಹಾರಾಷ್ಟ್ರ ಮತ್ತು ಮಕ್ಕಳ ಸಾಹಿತ್ಯ ಪರಿಷತ್ತು,ಮಹಾರಾಷ್ಟ್ರ ಘಟಕದ ವತಿಯಿಂದ ಹಮ್ಮಿಕೊಂಡಿದ್ದ *ರಾಷ್ಟ್ರ ಮಟ್ಟದ ' ಕಥಾಕಥನ '* ಸ್ಪರ್ಧೆಯಲ್ಲಿ *ತೃತೀಯ* ಸ್ಥಾನ.

ಲಾಕ್ ಡೌನ್ ಅವಧಿಯಲ್ಲಿ* ವಿವಿಧ ಸಂಸ್ಥೆಗಳು ಏರ್ಪಡಿಸಿದ್ದ *ಅಂತರ್ಜಾಲ ಆಧಾರಿತ ರಾಜ್ಯ ಮಟ್ಟದ ವಿವಿಧ ಸ್ಪರ್ಧೆ* ಗಳಲ್ಲಿ ಭಾಗವಹಿಸಿ, *೧೫ ಕ್ಕೂ ಹೆಚ್ಚಯ ಬಹುಮಾನ* ಗಳನ್ನು ಪಡೆದಿದ್ದಾರೆ.ರಾಜ್ಯ ಮಟ್ಟದ ಚುಂಚಾದ್ರಿ ಕಲೋತ್ಸವ ರಸಪ್ರಶ್ನೆ ದ್ವಿತೀಯ.*2018 ಮೇ ತಿಂಗಳಲ್ಲಿ ಕುಪ್ಪಳಿಯಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಕಮ್ಮಟದ ಕವನ ವಿಭಾಗದಲ್ಲಿ ರಚಿಸಿದ ಸ್ವರಚಿತ ಕವನ ಪ್ರಥಮ ಸ್ಥಾನದಲ್ಲಿ ಆಯ್ಕೆ.ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ರಸಪ್ರಶ್ನೆ ಸ್ಪರ್ಧೆ ಅನೀಶ್ ನಾಯಕತ್ವದಲ್ಲಿ ಸತತ 2 ವರ್ಷ ಪ್ರಥಮ ಸ್ಥಾನ ಪಡೆದಿದೆ.


* ಜಿಲ್ಲಾ ಮಟ್ಟದ *'ಸ್ವಚ್ಛ ಕ್ವಿಜ಼್'* ನಲ್ಲಿ *ದ್ವಿತೀಯ.*

* ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ "ಚಿಕ್ಕಮಗಳೂರು ಜಿಲ್ಲಾ ಮಟ್ಟದ ಯುವ ಕವಿ ಗೋಷ್ಠಿ"ಯಲ್ಲಿ ಕಿರಿಯ ವಯಸ್ಸಿನ ಯುವ ಕವಿಯಾಗಿ ಕವನ ವಾಚನ.ಶಾಂತಿವನ ಟ್ರಸ್ಟ್(ರಿ.)ಧರ್ಮಸ್ಥಳ , ಇವರು ನಡೆಸಿದ ನೈತಿಕ ಶಿಕ್ಷಣ ಆಧಾರಿತ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.


*_ಪ್ರಶಸ್ತಿಗಳು :_*


* ಸಾಂಸ್ಕೃತಿಕ ಪ್ರತಿಭೆಯನ್ನು ಗುರುತಿಸಿ ಚಿಕ್ಕಮಗಳೂರು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸಮಿತಿಯಿಂದ ಸನ್ಮಾನ.(2019-20).


* ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ವತಿಯಿಂದ *' ರಾಜ್ಯ ಮಟ್ಟದ ಬಾಲ ಪರಿಸರ ಪ್ರೇಮಿ '* ಪುರಸ್ಕಾರ.


* 2018 ರಲ್ಲಿ *ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ* ಯಿಂದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕ್ಷೇತ್ರದ *ಅಸಾಧಾರಣ ಪ್ರತಿಭೆ ಪುರಸ್ಕಾರ.*2017 ರಲ್ಲಿ ಹಾಸನದಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚನಕ್ಕೆ ಪುರಸ್ಕಾರ.


2018 ನವೆಂಬರ್ ನಲ್ಲಿ *ವಿಜಯ ಕರ್ನಾಟಕ - ಹಾರ್ಲಿಕ್ಸ್ ಜ್ಯೂನಿಯರ್ ಸಾಧಕರು ಪುರಸ್ಕಾರ.*

ಚಿಕ್ಕಮಗಳೂರು *ಜಿಲ್ಲಾ  ಕಲಾಶ್ರೀ ಪ್ರಶಸ್ತಿ- ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ.*ಸಿರಿಗನ್ನಡ ರಾಷ್ಟ್ರೀಯ ಶ್ರೇಷ್ಠ  ಬಾಲ ಕಲಾ ರತ್ನ"* ಪ್ರಶಸ್ತಿ- ಕರ್ನಾಟಕ ಕಲಾ ಪೋಷಕ ಸಂಘ (ರಿ) ಬೆಂಗಳೂರು. ಕಿರಿಯ  ಬರಹಗಾರ"* ರಾಜ್ಯ ಪ್ರಶಸ್ತಿ - ರಾಯಚೂರು ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ವತಿಯಿಂದ.


ಹೀಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದು ವಿಶಿಷ್ಟ ಪ್ರತಿಭೆಯಾಗಿ ಬೆಳೆಯುತ್ತಿರುವ ಅನಿಶ್ ವಿದ್ಯಾರ್ಥಿಗೆ ಮಕ್ಕಳ ಮಂದಾರ ಪತ್ರಿಕೆ ಬಳಗ ಶುಭಾಶಯಗಳನ್ನು ತಿಳಿಸುತ್ತದೆ.

*__________________________*

Monday 17 August 2020

ಒಂದು ಮತ್ತು ಎರಡನೇ ತರಗತಿ ಮಕ್ಕಳಿಗಾಗಿ ಶೈಕ್ಷಣಿಕ ವಿಡಿಯೋಗಳು

 *ಗುರು ಚೈತನ್ಯ ನಲಿಕಲಿ ಮಿಡಿಯಾ ಕಲಬುರಗಿ*


*ನಲಿಕಲಿಯಲ್ಲಿ ತಂತ್ರಜ್ಞಾನ ಬಳಕೆ*


*ವೀಡಿಯೋ ಪಾಠಗಳು ಮೈಲಿಗಲ್ಲುವಾರು ತರಗತಿ 1 ನೇ ಭಾಷೆ*

*https://youtu.be/fYSieqHRoFc*

👆ಮೈಲಿಗಲ್ಲು -1 ರ ಗ ಸ ದ ಅ

*https://youtu.be/9LhLth_gwzQ*

👆ಮೈಲಿಗಲ್ಲು - 2 ಜ ವ ಮ ಬ ನ.


*https://youtu.be/v2XV-dghsTE*

👆ಮೈಲಿಗಲ್ಲು - 3 ಪ ಯ ಉ ಡ ಟ ಚ.


*https://youtu.be/pd7ztuZz2kM*

👆 ಮೈಲಿಗಲ್ಲು - 4 ಲ ಷ ಈ ಊ ಕ 


*https://youtu.be/iGbHD5lJvu0*

👆ಮೈಲಿಗಲ್ಲು -5 ಎ ಏ ಇ ಆ ತ ಳ.


*https://youtu.be/nRudAv0wZuw*

👆ಮೈಲಿಗಲ್ಲು -6 ಓ ಔ ಹ ಶ


*https://youtu.be/NGHVe3r6jx0*

👆ಮೈಲಿಗಲ್ಲು - 7 ಐ ಋ ಣ ಛ ಒ


*https://youtu.be/jrGJrESo8eI*

👆 ಮೈಲಿಗಲ್ಲು - 8 ರಾ ಗಾ ಸಾ ದಾ ಜಾ ವಾ.......


*https://youtu.be/a3CP_WKNz4U*

👆ಮೈಲಿಗಲ್ಲು - 9 ರಿ ಗಿ ಸಿ ದಿ ಜಿ..........


*https://youtu.be/KXPI7PWc-2Y*

👆ಮೈಲಿಗಲ್ಲು - 10 ರೀ ಗೀ ಸೀ ದೀ ಜೀ ವೀ........


*ಮಗ್ಗಿಗಳ ಪರಿಚಯ*


*https://youtu.be/VxgeWM2-HC8*

👆2 ರಿಂದ 10 ರ ವರೆಗೆ ಗುಣಾಕಾರ ಮಗ್ಗಿಗಳು.


*ಕಥೆ*


*https://youtu.be/UaObAFe445o*

👆 ಜಾಣ ಕಾಗೆ


*ಪರಿಸರ ಅಧ್ಯಯನ*


*https://youtu.be/TmnztQl0-oI*

👆ತರಕಾರಿ ಅಭಿನಯ ಗೀತೆ

*https://youtu.be/BcgXPDgOSC0*

👆ಕುಟುಂಬ ಪರಿಸರ ಅಧ್ಯಯನ

*ಕಥೆ*


*https://youtu.be/0ac4HcYkQ3w*

👆ಸಿಂಹ ಮತ್ತು ಇಲಿ


*ಅಭಿನಯ ಗೀತೆ*

*https://youtu.be/Wplcl8hTe8o* ಕೈಯಲ್ಲಿ 👆ಕಿನ್ನೂರಿ......


*ಅಭಿನಯ ಗೀತೆ*

*https://youtu.be/u4FEqypDw_0* ಬಾನ 👆ಬಿಳಿ ಚಂದಿರನೆ.....

*ಪದ್ಯ*

*https://youtu.be/jdc4Jgcloo0*

👆 ಹಾವಿನ ಹೆಡೆ ಚಂದ..


*ಪರಿಸರ ಅಧ್ಯಯನ*


*https://youtu.be/Aq6Nl1SbKOU* ನೀರು


*ಅವಶ್ಯಕತೆ ಇದ್ದಲ್ಲಿ ಬಳಸಬಹುದು*


*1 ನೇ ಮೈಲಿಗಲ್ಲು ನಿಂದ 10 ನೇ ಮೈಲಿಗಲ್ಲು ವರೆಗೆ ಮೈಲಿಗಲ್ಲು ವಾರು ಅಕ್ಷರಗಳ ಪರಿಚಯ ಮತ್ತು ಉಚ್ಚಾರಣೆ, ಎರಡು ಅಕ್ಷರ ಪದ,ಮೂರು ಅಕ್ಷರ ಪದ,ನಾಲ್ಕು ಅಕ್ಷರ ಪದ ,ಮತ್ತು ವಾಕ್ಯ ರೂಪ ಚಿತ್ರ ಸಹಿತ ನೀಡಲಾಗಿದೆ*


ಮುಂದಿನ ಮೈಲಿಗಲ್ಲುಗಳು ಮುಂದುವರೆಯಲಿದೆ.


*ಪ್ರಸ್ತುತಿ : ಹುಸೇನ್ ವಡಗೇರಿ ಸಹ ಶಿಕ್ಷಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸನಾಳ .ಹಾಗೂ ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿ ಕಲಬುರಗಿ ಜಿಲ್ಲೆ*

*ದೂರವಾಣಿ : 9916394885*

🙏🏻🙏🏻🙏🏻🙏🏻🙏🏻🙏🏻

Thursday 13 August 2020

ನಿಮ್ಮ ಮಕ್ಕಳ ಬರಹಗಳಿಗೆ ಆಹ್ವಾನ

 ನಿಮ್ಮ ಮಕ್ಕಳ ಬರಹಗಳಿಗೆ ಸುಂದರ ವೇದಿಕೆ

ನೀವು ನಮ್ಮ ಪತ್ರಿಕೆಯ ಸಹ ಭಾಗಿಗಳಾಗಲು ಸ್ವಾಗತ.

ಆತ್ಮೀಯರೇ ನಮಸ್ಕಾರ

ನಿಮ್ಮ ಮಕ್ಕಳು ಬರೆದ ಯಾವುದೇ ರೀತಿಯ ಬರಹಗಳನ್ನು, ಕಥೆ ಕವನ ಪ್ರಬಂಧ ಚುಟುಕು, ಪ್ರವಾಸ ಬರಹ, ಅನುಭವ ಲೇಖನ,ಸಂಗ್ರಹಿಸಿದ ಜಾನಪದಗಳನ್ನು, ಚಿತ್ರಗಳನ್ನು ಕಳುಹಿಸಬಹುದು.

Makkalamandara@Gmail.com ಗೆ ಕಳುಹಿಸಿ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿನನ್ನ ವಾಟ್ಸಪ್ 9980952630.

12 ವರ್ಷಗಳ ನಿರಂತರ ಪಯಣದ ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳೆ ಬರೆದ ಬರಹಗಳ "ಮಕ್ಕಳ ಮಂದಾರ "ಪತ್ರಿಕೆಯ ಮೇ-ಜೂನ್ ಸಂಚಿಕೆ ಸಿದ್ದವಾಗುತ್ತಿದೆ.ಇದು ಮಕ್ಕಳ  ಸೃಜನಾತ್ಮಕ ಆಂತರಿಕ ಸಂವಹನಕ್ಕಾಗಿ ಉಚಿತ ಪತ್ರಿಕೆಯಾಗಿ ಮುನ್ನಡೆಯುತ್ತಿದೆ.ಈ ಪತ್ರಿಕೆಗೆ ಮಕ್ಕಳೇ ವರದಿಗಾರರು ಮಕ್ಕಳೇ ಬರಹಗಾರರು ಮಕ್ಕಳೇ  ವಿದ್ಯಾರ್ಥಿ ಸಂಪಾದಕರು ಆಗಿರುತ್ತಾರೆ.ಹಿರಿಯರಾದ ತಾವುಗಳು ಸಹ ನಮ್ಮ ಸಂಪಾದಕೀಯ ಮಂಡಳಿ ಜೊತೆಗೂಡಬಹುದು. ಮಕ್ಕಳಿಗಾಗಿ ಪತ್ರಿಕೆಯೊಂದಿಗೆ ಕೈಜೋಡಿಸಬಹುದು. ಪತ್ರಿಕೆಯ ಸದಸ್ಯರಾಗಬಹುದು. ನಿಮ್ಮ ಪ್ರೋತ್ಸಾಹ ಬಯಸುತ್ತೇವೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ.ನನ್ನ ವಾಟ್ಸಪ್ 9980952630.

ನಿಮ್ಮ ರವಿರಾಜ್ ಸಾಗರ್.

Sunday 9 August 2020

may - 10 children educational drama-''ಮೇ -೧೦'' ಮಕ್ಕಳ ಶೈಕ್ಷಣಿಕ ನಾಟಕ





ನಮ್ಮ ಶಾಲಾ ಮಕ್ಕಳಿಂದ ರಾಯಚೂರಿನ ಆಕಾಶವಾಣಿಯಲ್ಲಿ ನಾಟಕ

ನನ್ನ ರಚನೆ ಮತ್ತು ನಿರ್ಧೆಶನದಲ್ಲಿ  may - 10,  children educational drama-''ಮೇ -೧೦'' ಮಕ್ಕಳ ಶೈಕ್ಷಣಿಕ ನಾಟಕ

ಗುಡುಗು ಮಿಂಚು-ಮಳೆ- ವೈಜ್ಞಾನಿಕ ಕತೆ





ಗುಡುಗು ಮಿಂಚು-ಮಳೆ- ವೈಜ್ಞಾನಿಕ  ಕತೆ

ನಲಿ ಕಲಿ ಗೀತೆ ಮಕ್ಕಳಿಂದ - nali kali songs



ನಲಿ ಕಲಿ  ಗೀತೆ ಮಕ್ಕಳಿಂದ - nali kali  songs

ಹಬ್ಬಗಳು - ಪರಿಸರ ಪಾಠ.3 ನೇತರಗತಿ.





ಹಬ್ಬಗಳು - ಪರಿಸರ ಪಾಠ.3 ನೇತರಗತಿ.

Wednesday 5 August 2020

ಆಂದ್ರದಲ್ಲಿ ರಾಷ್ಟ್ರಮಟ್ಟದ ಡ್ಯಾನ್ಸ್ ಶೋನಲ್ಲಿ ಗೆದ್ದ ಕರುನಾಡ ಸರ್ಕಾರಿ ಶಾಲೆ ಬಾಲಕಿ

ಆಂಧ್ರದಲ್ಲಿ ರಾಷ್ಟ್ರಮಟ್ಟದ ಡ್ಯಾನ್ಸ್ ಶೋನಲ್ಲಿ  ಗೆದ್ದ ಕರುನಾಡ ಸರ್ಕಾರಿ ಶಾಲೆ ಬಾಲಕಿ.



ಟೀವಿ ನೋಡುತ್ತಲೇ   ನೃತ್ಯ ಮಾಡುವುದನ್ನು ಅಭ್ಯಾಸ ಮಾಡಿಕೊಂಡ   ಹಳ್ಳಿಯೊಂದರ ಪುಟ್ಟ  ಬಾಲಕಿಯ ಆಸಕ್ತಿ ಪ್ರತಿಭೆ ಕಂಡು ಪಾಲಕರು ಸೊರಬ ತಾಲೂಕಿನ ಸ್ಥಳೀಯ ನೃತ್ಯಶಾಲೆಯಲ್ಲಿ  ಅಭ್ಯಾಸಕ್ಕೆಂದು ಕಳಿಸಿದ ಮೂರನೇ ತಿಂಗಳಲ್ಲಿಯೇ  ಏಳನೇ ವಯಸ್ಸಿಗೆ  ಕರ್ನಾಟಕ ಮಾಸ್ಟರ್ ಡ್ಯಾನ್ಸರ್ ರಿಯಾಲಿಟಿ ಶೋಗೆ ಆಡಿಷನ್ ಗೆ ಹಾಜರಾಗಿ ಬಿಡುತ್ತಾಳೆ. ಸರ್ಕಾರಿ ಶಾಲೆಯ ಗ್ರಾಮೀಣ ಪ್ರತಿಭೆಯಾಗಿದ್ದ ಆ ಪುಟ್ಟ ಬಾಲಕಿಗೆ ಏನಾದರೂ ಸಾಧಿಸಬೇಕೆಂಬ ಆಸಕ್ತಿ ಹೊರತುಪಡಿಸಿ ಬೇರೇನೂ ಇರಲಿಲ್ಲ. 


ಗೆಲ್ಲಲೇಬೇಕೆಂಬ ಛಲದಿಂದ ನಿರಂತರ ಪರಿಶ್ರಮ ಹಾಕಿದವರಿಗೆ ಪ್ರತಿಭೆ ಮೈಗೂಡಿ ಗೆಲುವಿನ ಮೈಲಿಗಲ್ಲು ಸಿಕ್ಕೆ ಸಿಗುತ್ತದೆ . ಆದರೆ ಕೆಲವೇ ಪ್ರತಿಭೆಗಳನ್ನು ಮಾತ್ರ ಮಾಧ್ಯಮಗಳು ಮತ್ತು ಸಮಾಜ ಹೊತ್ತುಕೊಂಡು ಮೆರೆಯುತ್ತದೆ. ಇನ್ನು ಕೆಲವರು ಪ್ರತಿಭೆಯಿದ್ದು ಪರಿಶ್ರಮಪಟ್ಟರೂ ಎಲೆಮರೆಯಂತೆ ಉಳಿಯಬೇಕಾಗುತ್ತದೆ. ಇಂದಿನ ಮಾಧ್ಯಮಗಳಂತೂ  ಕಂಟೆಂಟ್ ಗಿಂತ ಕಾಂಟ್ಯಾಕ್ಟ್ ಇದ್ದವರನ್ನು  ಮತ್ತಷ್ಟು ಮೆರೆಸುತ್ತವೆ. 

ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ  ಉಳವಿ ಗ್ರಾಮದ ಅಪ್ಪಟ ಗ್ರಾಮೀಣ ಪ್ರತಿಭೆ   ಮಹಾಲಕ್ಷ್ಮಿಯ ವಿಷಯದಲ್ಲಿ ಇದು ಅಪ್ಪಟ ಸತ್ಯ ಎನಿಸಿಬಿಟ್ಟಿದೆ. ಈ ಮಹಾ ಪ್ರತಿಭೆಯ  ಅದ್ಭುತ ಡ್ಯಾನ್ಸ್ ನೀವು ಸಹ ನೋಡಿರಬಹುದು. ಪ್ರತಿಯೊಂದು ಸಂಗೀತದ ಮಟ್ಟುಗಳನ್ನು ಕಿವಿಯಲ್ಲಿ ಹಾಗೆ ಹಿಡಿದಿಟ್ಟುಕೊಂಡು ಮಿಂಚಿನಂತೆ ಹೆಜ್ಜೆಹಾಕುವ , ಹಾಡಿಗೆ ಬೇಕಾದ ಭಾವವನ್ನು ತುಂಬುವ ವಿಶಿಷ್ಟ ನೃತ್ಯ ಪ್ರತಿಭೆ. ಯಾವ ನಗರದಲ್ಲಿಯು ವರ್ಷಾನುಗಟ್ಟಲೆ ತರಬೇತಿ ಪಡೆದಿಲ್ಲ. ಮನೆಯಲ್ಲಿ ಟಿವಿಯನ್ನು ನೋಡಿ ಪ್ರೇರಿತಳಾಗಿ ನಾಟ್ಯ ದೇವಿಯೇ ಮೈಮೇಲೆ ಬಂದವಳಂತೆ ನೃತ್ಯ ಮಾಡುವ ಇವಳನ್ನು ಕಂಡ ಮನೆಯ ಪೋಷಕರು ಮೂರು ತಿಂಗಳು ಸ್ಥಳೀಯ ನೈತ್ಯ ಶಾಲೆಯಲ್ಲಿ ಒಂದಿಷ್ಟು ತರಬೇತಿ ಪಡೆದು  ಏಳನೇ ವಯಸ್ಸಿಗೆ  ನೇರವಾಗಿ ಕನ್ನಡ ಕಲರ್ಸ್  ವಾಹಿನಿಯ ಕರ್ನಾಟಕ ಮಾಸ್ಟರ್ ಡ್ಯಾನ್ಸರ್ ಆಡಿಷನ್ನಿಗೇ ಬಾಗಿಲು ತಟ್ಟಿ ಧುಮುಕಿ ಬಿಟ್ಟಳು. ಪಾಲಕರು ಹಳ್ಳಿಯವರಾದರೂ  ಮಹಾಲಕ್ಷ್ಮಿ ನೃತ್ಯ ಆಸಕ್ತಿ ಕಂಡು ಉಳವಿಯ  ಸಣ್ಣಬೈಕ್ ಮೆಕಾನಿಕ್ ಆದ  ತಂದೆ ಉಮೇಶ್ ಹಾಗೂ ಅವರ ಮಾವ ಕಭಿ ಅವಳ ಪ್ರತಿಭೆಯನ್ನು ಪೋಷಿಸುವ ಕನಸು ಕಂಡರು.
    
   ಹೇಳಿಕೊಳ್ಳಲು ಯಾವ ಕಾಂಟ್ಯಾಕ್ಟ್ ಇಲ್ಲದ ಸರ್ಕಾರಿ ಶಾಲೆ ಹಳ್ಳಿ ಹುಡುಗಿ ಇನ್ನೂ ಎರಡನೇ ತರಗತಿಯ   ಲ್ಲಿದ್ದಾಗಲೇ    ಕಲರ್ಸ್ ಚಾನೆಲ್ನಲ್ಲಿನಾ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋಗೆ   ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಈ ಮೊದಲು ಡ್ಯಾನ್ಸ್ ಮಾಡಿದವರಿಗಿಂತ ಭರ್ಜರಿ ಎಂಟ್ರಿ ಕೊಟ್ಟು  ಎಲ್ಲರಿಂದ ಶಭಾಷ್ ಗಿಟ್ಟಿಸಿದ್ದರೂ  ರನ್ನರ್ ಆಗಿ  ಆಯ್ಕೆಯಾಗಿ ತೃಪ್ತಿ ಪಡಬೇಕಾಯಿತು.
   
     ಆದರೂ ಅಪ್ಪಟ ಪ್ರತಿಭೆಯಾಗಿದ್ದ ಅವಳನ್ನು ತೆಲುಗಿನ ಜಿ ಟೀವಿ ಆಟ ಎನ್ನುವ ರಾಷ್ಟ್ರೀಯ ಮಟ್ಟದ ಡ್ಯಾನ್ಸ್ ರಿಯಾಲಿಟಿ ಶೋಗೆ  ಅವಳಿನ್ನೂ ಮೂರನೇ ತರಗತಿ ಇದ್ದಾಗಲೇ  ಕೈಬೀಸಿ ಕರೆಸಿಕೊಂಡಿತ್ತು. ಅಲ್ಲಿ ಅವಳು ನೀಡಿದ ಪ್ರತಿಯೊಂದು  ಡ್ಯಾನ್ಸ್  ಶೋ ಎಲ್ಲಾ ತೆಲುಗು ಸಿನಿ ಪ್ರಿಯರಿಂದ ಮೆಚ್ಚುಗೆಗಳಿಸಿ ಸರಿಯಾಗಿ ತೆಲುಗು ಭಾಷೆ ಮಾತನಾಡಲು ಬಾರದ ಕರ್ನಾಟಕದ  ಹಳ್ಳಿಯ  ಕುವರಿ ತೆಲುಗು ನಾಡಿನ ಮನೆಮಗಳಾಗಿ ಮನೆಮನೆ ಮಾತಾದಳು. ಸ್ವತಹ ಚಿರಂಜೀವಿ ಶೋ ಒಂದಕ್ಕೆ ಬಂದು ಅವಳಿಗೆ ಬಹುಮಾನ ನೀಡಿದರು. ಆಟ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ವಿನ್ನರ್ ಆಗಿ ಗೆಲುವಿನ ಮಹಾಲಕ್ಷ್ಮಿ ಆದಳು. ಆನಂತರ  ತೆಲುಗು ನಾಡಲ್ಲಿ ಡ್ಯಾನ್ಸ್ ನ್ಸ್ ಜೋಡಿ ಡ್ಯಾನ್ಸ್ ಸೆಲೆಬ್ರಿಟಿ ಡ್ಯಾನ್ಸ್  ಶೋನಲ್ಲೂ  ಮಿಂಚಿದ್ದಳು. ಅವಳ ಡ್ಯಾನ್ಸ್ ಶೋ ತೆಲುಗು ಜೀ ಚಾನೆಲ್ ಗೆ ಬರೋಬ್ಬರಿ ಟಿ ಆರ್ ಪಿಯನ್ನು ತಂದುಕೊಟ್ಟಿತ್ತು. ಹೀಗಿದ್ದರೂ ನಮ್ಮ  ಕನ್ನಡ ನೆಲದ ಗ್ರಾಮೀಣ ಪ್ರತಿಭೆಯನ್ನು ಕನ್ನಡದ ಯಾವ ಚಾನೆಲ್ ಸಹ ಕರೆಸಿಕೊಂಡು ಅವಳನ್ನು ಅಭಿನಂದಿಸಲಿಲ್ಲ. ಅವಳಿಗೆ ಬೇರೆ ಬೇರೆ ಅವಕಾಶ ಕೊಡುವುದಿರಲಿ ,ಅವಳ ಕುರಿತು ಒಂದು ವಿಶೇಷ ಸಂದರ್ಶನ ಕೂಡ ಮಾಡಲಿಲ್ಲ. ಮುದ್ರಿಣ ಮಾಧ್ಯಮದಲ್ಲೂ ಅವಳ ಬಗ್ಗೆ  ವಿಶೇಷ ವರದಿ ಬಂದಿಲ್ಲ.
     
ಈಗಿನ ರಿಯಾಲಿಟಿ ಶೋಗಳೇ ಹೀಗೆ ,ದಿಡೀರನೆ  ಪ್ರಸಿದ್ಧಿ ಸಿಗುವುದಾದರೂ ಆನಂತರ ಬಾಲಪ್ರತಿಭೆ ದಾರಿ ಸುಲಭವೇನೂ ಆಗಿರುವುದಿಲ್ಲ. ಮಕ್ಕಳ ಪ್ರತಿಭೆಗಳನ್ನು ಬಳಸಿಕೊಂಡ ರಿಯಾಲಿಟಿ ಶೋಗಳ ಚಾನೆಲ್ ನವರು   ಹೊಸ ಅವಕಾಶವಾಗಳ ಬಾಗಿಲು ತೆರೆಯುವುದಿಲ್ಲ. ದಿಡೀರನೆ ಬಂದ ಪ್ರಸಿದ್ಧಿಯಿಂದ ಹಿಗ್ಗಿದ ಮಕ್ಕಳು ಮುಂದೆ  ಅದನ್ನೇ ತಲೆಯಲ್ಲಿಟ್ಟುಕೊಂಡು  ಯಾವ ಅವಕಾಶಗಳು ಸಿಗದಿದ್ದಾಗ ಖಿನ್ನರಾದ ಉದಾಹರಣೆಗಳನ್ನು ಕಂಡಿದ್ದೇವೆ. ಆದರೆ ನಿಜವಾದ ಪ್ರತಿಭೆಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ  ಜವಾಬ್ದಾರಿಯುತ ವ್ಯವಸ್ಥೆ  ನಮ್ಮದಾಗಬೇಕು. 

ಮಾಧ್ಯಮಗಳಲ್ಲಿ  ಯಾರನ್ನೋ  ಕರೆದುಕೊಂಡು ಕೂರಿಸಿ ಮೆರೆಸಿ ಅದನ್ನೇ ಮನರಂಜನೆಯ ಸರಕನ್ನಾಗಿ ನೀಡಿದರೂ ಅನಿವಾರ್ಯ ಪ್ರೇಕ್ಷಕರಾಗಿ  ನಾವು ಕೈಚೆಲ್ಲಿ ಕೂತಿದ್ದೇವೆ. ಹಲವಾರು ನೈಜ ಪ್ರತಿಭೆಗಳು ಇನ್ನು ಎಲೆಮರೆಯಲ್ಲಿವೆ.

ಇತ್ತೀಚೆಗೆ ಮಹಾಲಕ್ಷ್ಮಿ  ದಂತಪುರಾಣ ಎನ್ನುವ ಸಿನಿಮಾವೊಂದರಲ್ಲಿ ಅಭಿನಯಿಸಿ ಬಂದಿದ್ದಾಳೆ. ಕನಸು ಮನಸಿನಲ್ಲೂ ನೃತ್ಯವನ್ನು ಉಸಿರಾಡುವ ಅವಳು ಹೊಸ ಅವಕಾಶಗಳ ನಿರೀಕ್ಷೆಯಲ್ಲಿದ್ದಾಳೆ. ಸಾಹಿತ್ಯ, ಕಲೆ ಸಂಸ್ಕೃತಿ, ಮಲೆನಾಡಿನ ಹಸಿರು ಸಿರಿಗೆ ಹೆಸರಾದ ಶಿವಮೊಗ್ಗ ಜಿಲ್ಲೆಯ ಈ  ಬಾಲ ಪ್ರತಿಭೆ ಈಗಿನ್ನೂ 5 ನೇ ತರಗತಿ. ಕನ್ನಡ ಮಾಧ್ಯಮಗಳು ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಅವಳಿಗೆ ಸೂಕ್ತ ಅವಕಾಶ ನೀಡಲಿ ಎಂಬುದೇ ಅವಳ ಅಭಿಮಾನಿಗಳ ಆಶಯ.


 ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಗೆದ್ದ ವಿಶಿಷ್ಟವಾದ ಪ್ರತಿಭೆಯನ್ನು  ಕನ್ನಡದ ಮಾಧ್ಯಮಗಳು ಇನ್ನು ಸರಿಯಾಗಿ ಬಳಸಿಕೊಂಡಿಲ್ಲ.  ಯಾಕೆ ಹೀಗಾಯ್ತು ಎನ್ನುವ ಕೊರಗು ಅವಳ ನೃತ್ಯ ಪ್ರತಿಭೆ ಕಂಡ ನಮ್ಮಲ್ಲಿ ಹಾಗೆ ಉಳಿದಿದೆ. ಇಂತಹ ಹಲವಾರು  ಬೇರೆ ಬೇರೆ ಕ್ಷೇತ್ರದ ಪ್ರತಿಭೆಗಳು ಹಳ್ಳಿಗಳಲ್ಲಿ ನಗರಗಳಲ್ಲಿ ಇದ್ದಾರೆ.
 ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತೇವೆ  ಎನ್ನುವ  ಮಕ್ಕಳ ಕಲ್ಯಾಣ ಇಲಾಖೆಗಳು , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಳು,ಬಾಲವಿಕಾಸ ಅಕಾಡೆಮಿಗಳು ಇಂತಹ  ಅಪ್ಪಟ ಬಾಲಪ್ರತಿಭೆಗಳಿಗೆ  ವಿಶೇಷ ಗಮನಹರಿಸಿ ವಿಶೇಷ ಪ್ರೋತ್ಸಾಹ ಯೋಜನೆಗಳನ್ನು ರೂಪಿಸಿದಲ್ಲಿ ಅಂಥವರು ನಾಡಿಗೆ ದೊಡ್ಡ ಆಸ್ತಿ ಆಗುವುದರಲ್ಲಿ ಅನುಮಾನವಿಲ್ಲ.  ಹಿಂದೆ ಸಾಧಿಸಿದ ಸಾಧಕರನ್ನು ಸ್ಮರಿಸಲು , ಆಚರಣೆಗಳನ್ನು ಮಾಡಲು, ಪ್ರತಿಮೆಗಳನ್ನು ನಿರ್ಮಿಸಲು  ಕೋಟಿ ಕೋಟಿ ಹಣ ವ್ಯಯಿಸುವ ಸರ್ಕಾರಿ ಇಲಾಖೆಗಳು, ಹೇಳಿದ್ದೆ ಹೇಳಿ ಮೆರೆಸುವ ಮಾಧ್ಯಮಗಳು ಇಂದು ನಮ್ಮ ಜೊತೆ ಇರುವ ಪ್ರತಿಭೆಗಳನ್ನು ಸಾಧಕರನ್ನಾಗಿಸಲು ಶ್ರಮಿಸಬೇಕು . ನೇರವಾಗಿ ಪ್ರತಿಭೆಗಳನ್ನು ಗುರುತಿಸಿ , ಮಾಧ್ಯಮಗಳು,
 ಇಲಾಖೆಗಳು ಪ್ರತಿಭೆಗಳ ಮನೆಗೆ ಹೋಗುವಂತಾಗಬೇಕು.
 ಇಲಾಖೆಯ ಹಿಂದೆ ಮುಂದೆ ಅಲೆದವರಿಗೆ ಮಾತ್ರ ಸರ್ಕಾರಿ ಸೇವೆ ಸೀಮಿತವಾಗದೆ ಇಲಾಖೆಯತ್ತ ಬರಲು ಆಗದ ಪ್ರತಿಭೆಗಳತ್ತ ಇಲಾಖೆ ಸಾಗಬೇಕು. ಯಾವ ಮಾಧ್ಯಮಗಳನ್ನು ಬಲ್ಲವರಲ್ಲದ ತಲುಪರವರನ್ನೂ  ತಲುಪುವಲ್ಲಿ ಮಾಧ್ಯಮಗಳು ಸಾಮಾಜಿಕ ಇಚ್ಚಾಶಕ್ತಿ ಪ್ರದರ್ಶಿಸಬೇಕು.

ರವಿರಾಜ್ ಸಾಗರ್.ಮಂಡಗಳಲೆ.
ಜಿಲ್ಲಾಧ್ಯಕ್ಷರು.
 ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ
 9980952630
 rvc.md8@gmail.com.

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...