ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Thursday 16 January 2020

ಮಕ್ಕಳ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ

ಮಕ್ಕಳ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ

ಮಕ್ಕಳ ಸಾಹಿತ್ಯವು ತಾಯಿಯ ಜೋಗುಳ ಹಾಡುಗಳಿಂದಲೇ ಆರಂಭವಾಗಿದೆ. ಜನಪದರ ಜೋಗುಳಗಳಲ್ಲಿ  ಚಂದಮಾಮನ ಕುರಿತಾದ ಪ್ರಾಣಿ-ಪಕ್ಷಿಗಳ ಹಾಡುಗಳು ಸಾಕಷ್ಟಿವೆ. ಅವೆಲ್ಲವೂ ಅವರ ಪರಿಸರ ಪ್ರಜ್ಞೆಯನ್ನು ಸಾರುತ್ತದೆ. ಸಹಜವಾಗಿ ಮಕ್ಕಳು ಕುತೂಹಲದ ಕಣ್ಮಣಿಗಳು .ಅವರು ಪರಿಸರವನ್ನು ಕುತೂಹಲದಿಂದ ವೀಕ್ಷಿಸುತ್ತಾರೆ. ಹಾಗಾಗಿ ಅವರಿಗೆ ಪರಿಸರದ ಕುರಿತಾದ ಶಿಶುಪ್ರಾಸಗಳು  ಹತ್ತಿರವಾಗುತ್ತವೆ.

ಇಂದಿನ ಆಧುನಿಕ ಮಕ್ಕಳ ಸಾಹಿತ್ಯದಲ್ಲು ಪರಿಸರದ ಕುರಿತಾದ ಶಿಶುಪ್ರಾಸಗಳು ಹೆಚ್ಚಾಗಿವೆ . ಕುವೆಂಪು ಅವರ ಬೊಮ್ಮನಹಳ್ಳಿ ಕಿಂದರಜೋಗಿ, ಜಿ.ಪಿ.ರಾಜರತ್ನಮ್ ಅವರ ನಾಗರಹಾವೆ ಹಾವೊಳು ಹೂವೆ, ಸಿದ್ದಯ್ಯ ಪುರಾಣಿಕರು, ಶಿವರಾಮಕಾರಂತರು, ನಾ ಡಿಸೋಜ, ಸಹ ಪರಿಸರ ಮತ್ತು ವಿಜ್ಞಾನದ ವಿಷಯ ವಸ್ತುವಿನ  ಮಕ್ಕಳ ಸಾಹಿತ್ಯ ರಚನೆ ಮಾಡಿದ್ದಾರೆ.

ಇತ್ತೀಚಿನ ಮಕ್ಕಳ ಸಾಹಿತಿಗಳಲ್ಲಿ ಚಂದ್ರಕಾಂತ ಕರದಳ್ಳಿ ಅವರು, ಆನಂದ ಪಾಟೀಲರು, ಹ.ಸ ಬ್ಯಾಕೋಡ್, ಸಿ ಎಂ ಗೋವಿಂದರೆಡ್ಡಿ, ಗಣೇಶ್ ನಾಡರ್, ಸಹ ಪರಿಸರ ಕುರಿತಾದ ಪದ್ಯಗಳನ್ನೇ ಮಕ್ಕಳಿಗಾಗಿ ರಚಿಸಿದ್ದಾರೆ, ಹ.ಸ ಬ್ಯಾಕೋಡರ ನವೀನ ಸಾಕಿದ ನವಿಲು, ಚಂದ್ರಕಾಂತ ಕರದಳ್ಳಿ  ಕಾಡು ಕನಸಿನ ಬೀಡಿಗೆ ಮಕ್ಕಳ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ ಕುರಿಸುವ ಹೆಸರಿಸಬಹುದಾದ ಅತ್ಯುತ್ತಮ ಕೃತಿಗಳಾಗಿವೆ. ಅಲ್ಲದೆ ನಾಡಿನ ಬಹುತೇಕ ಮಕ್ಕಳ ಸಾಹಿತಿಗಳು ರಚಿಸಿರುವ ಕೃತಿಗಳು ಪರಿಸರದ ಕುರಿತ ಹೆಚ್ಚಿನ ವಸ್ತು ವಿಷಯವನ್ನು ಹೊಂದಿದ್ದನ್ನಾ ಗಮನಿಸಬಹುದು, ಪರಿಸರ ಮಾನವನಿಂದಾಗಿ ವಿನಾಶದ ಅಂಚಿಗೆ ಹೋಗುತ್ತಿರುವ ಹಿನ್ನೆಲೆಗಳಲ್ಲಿ ಪರಿಸರ ಕುರಿತಾದ ಮಕ್ಕಳ ಸಾಹಿತ್ಯ ವಿಫಲವಾಗಿ ರಚನೆಯಾಗುತ್ತಿರುವುದು ಪರಿಸರ ಪ್ರಜ್ಞೆ ಜಾಗೃತಿ ಮೂಡಿಸಲು ಆಶಾದಾಯಕವಾದ ಬೆಳವಣಿಗೆಯೇ ಸರಿ.
ಆದರೆ ಪರಿಸರ ಪ್ರಜ್ಞೆಯ ಸಾಹಿತ್ಯ ಕೃತಿಗಳನ್ನು ಓದಿದವರು ಪರಿಸರ ಸಂರಕ್ಷಣೆಗೆ ಶ್ರಮಿಸುತ್ತಾರೆ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.

ಪರಿಸರವನ್ನು ಆರಾಧಿಸುವ ಮಾನವನ ಸಹಜಗುಣ ಮಕ್ಕಳಲ್ಲಿ ತುಸು ಹೆಚ್ಚಾಗಿಯೇ ಇರುತ್ತದೆ. ಸುತ್ತಮುತ್ತಲಿನ ಪ್ರಾಣಿ ಪಕ್ಷಿ ಕೀಟ ಮರಗಿಡಬಳ್ಳಿ ಹೂವುಗಳ ಬಗ್ಗೆ ಕುತೂಹಲ, ಆಕರ್ಷಣೆ ಹೆಚ್ಚಾಗಿರುತ್ತದೆ. ಹಾಗಾಗಿ ಕವಿಗಳು ಮಕ್ಕಳ ಮನಸ್ಸನ್ನು ಮುಟ್ಟಲು  ಪರಿಸರದ ಕುರಿತಾದ ಕವಿತೆಗಳನ್ನು ಹೆಚ್ಚಾಗಿ ರಚಿಸಿದ್ದಾರೆ. ಮಕ್ಕಳು ಅವುಗಳನ್ನು ಓದುವ ಮೂಲಕ ,ಆಲಿಸು ಮೂಲಕ ಪರಿಸರ ಪ್ರಜ್ಞೆ ಮೂಡಿಸಿಕೊಳ್ಳುವುದಲ್ಲದೆ ಸುತ್ತಲಿನ ಪರಿಸರದ ಜ್ಞಾನ ತಿಳಿದುಕೊಳ್ಳುವರು.
ಇಂದಿನ ಹೊಸ ತಲೆಮಾರಿನ ಮಕ್ಕಳ ಸಾಹಿತಿಗಳು ತಮ್ಮ ಸಾಹಿತ್ಯಕೃತಿಗಳಲ್ಲಿ ಮಕ್ಕಳ ಕಾದಂಬರಿಗಳಲ್ಲಿ ಕಥೆಗಳಲ್ಲಿ ಯಥೇಚ್ಛವಾಗಿ ಪರಿಸರದ ಕುರಿತು ಬರೆದಿದ್ದಾರೆ,. ಇತ್ತೀಚಿಗೆ  ನಮ್ಮ ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿ ಅವರ ಕೃತಿ ಕಾಡು ಕನಸಿನ ಬೀಡಿಗೆ  ಒಂದು ಉತ್ತಮ ಪರಿಸರ ಕಾದಂಬರಿ ಆಗಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ಈ ಕೃತಿಗೆ ಇತ್ತೀಚಿಗೆ ದೊರಕಿದೆ. ಪೂರ್ಣಚಂದ್ರ ತೇಜಸ್ವಿ ಅವರು ಮಕ್ಕಳ ಸಾಹಿತ್ಯಕ್ಕೆ ಪರಿಸರದ ಕುರಿತಾದ ಉತ್ತಮ ಕೃತಿಗಳನ್ನು ನೀಡಿದ್ದಾರೆ.

ಕನ್ನಡದಲ್ಲಿ ಮಕ್ಕಳ ಸಾಹಿತ್ಯ ರಚನೆ ಸಾಕಷ್ಟು ಬೆಳೆದಿದ್ದು ಕುವೆಂಪು ಅವರಂತಹ ಜ್ಞಾನಪೀಠ ಪ್ರಶಸ್ತಿ ವಿಜೇತರು ಸಹ ಮಕ್ಕಳ ಸಾಹಿತ್ಯವನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಶಿವರಾಮಕಾರಂತರು, ತೇಜಸ್ವಿ,ದೊಡ್ಡರಂಗೇಗೌಡ ಎಚ್.ಎಸ, ವೆಂಕಟೇಶಮೂರ್ತಿ, ನಾ ಡಿಸೋಜ , ಬೋಳುವಾರು ಮಹಮದ ಕುಂಇ,  ಮುಂತಾದವರು ಕನ್ನಡ ಮಕ್ಕಳ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಅವರೆಲ್ಲರೂ ಮಕ್ಕಳ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸುವಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ ‌ ಸಾಹಿತ್ಯ ಕೃಷಿ ಮಾಡಿದ್ದಾರೆ.
ನಮ್ಮ ರಾಯಚೂರಿನ ಮಕ್ಕಳ ಸಾಹಿತಿಗಳೂ ಸಹಸ್ರ ಪ್ರಜ್ಞೆಯನ್ನು ತಮ್ಮ ಕೃತಿಯಲ್ಲಿ ಜಾಗೃತಗೊಳಿಸಿದ್ದಾರೆ.

ರವಿರಾಜ್ ಸಾಗರ್.


No comments:

Post a Comment