ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Monday 11 February 2019

ಕವಿತೆಯಾಗದ ಸಾಲ್ಗಳು

ಕವಿತೆಯಾಗದ ಸಾಲುಗಳು....ಪದ ಪುಂಜದ ಪದಗಳಿಗೆಲ್ಲ ಪ್ರೀತಿಯ ನಮನಗಳು. ಜಗದ ಕಾವ್ಯ ಲೋಕದಲ್ಲಿ ಅವಿತು ಕುಳಿತಕನಸುಗಾರನೇ ಭ್ರಮಲೋಕದ ಆದರ್ಶ ಪದಗಳೆಲ್ಲಯಾವ ಪಕ್ಷಕ್ಕೂ ಬೇಕೆನಿಸದೆ ಪಕ್ಷಾತೀತವಾಗಿ ಉಳಿಯಬೇಕಾದ ಅನಿವಾರ್ಯತೆಯ ಗೊಂದಲದ ಗೂಡಲ್ಲಿ ಯಾವ ಮೊಟ್ಟೆಯಿಟ್ಟು ಇನ್ಯಾವ ಮರಿ ತೆಗೆಯುವೆಯೋ ತಿಳಿಯೇ..ಹರಿತ ಲೇಖನಿ ಒಂಟಿಯಾಗಿಕಕ್ಕಲು ಇಂಕಿಲ್ಲದೆ ಸಾಯುವ ಅಪಾಯವೇನು ಇಲ್ಲ..ಗೀಚಲು ಚಡಪಡಿಸುವ ಚಿಂತಕರ ಬಾಯಿ ಬೆರಳು ಖಾಲಿ ಹಾಳೆ ಹೊದ್ದು ಎಚ್ಚರದಿಂದಲೇ ತೂಕಡಿಸುತ್ತ ಕುಂತಿವೆ.ಯಾವ ಪದವೋ... ಯಾವ ನುಡಿಗಟ್ಟೋ...ಹಸಿದ ಹೊಟ್ಟೆಗೆ ಅನ್ನ ಹಾಕಲಾಗದ ಖಾಲಿ ವೃತ್ತಿಯ ಕವಿ ಏಸು ಗೀಚಿ ಏಸು ಜನಗಳ ಬದಲಿಸಿ ಬಿಡುವೆಯೋ ಎಂದುಖಾಲಿ ಹಾಳೆಯ ಭಾರ ಹೊತ್ತ ಪ್ಯಾಡು ಪ್ರಶ್ನಿಸುವ ಮಟ್ಟ ತಲುಪಿದ್ದು ಯಾರಿಂದ ಹೇಳಿ...?ಇನ್ನೂ ಸಾಕ್ಷಿ ಬೇಕೇ..ಕವಿ ಕೊಟ್ಟ ಸಾಲಕ್ಕೆ ಚಕ್ರಬಡ್ಡಿಯೂ ಮೀಟರ್ ಬಡ್ಡಿಯೂ ವಸೂಲಾಗಿದೆಯೆಂದು ಹೇಳಲಿಕ್ಕೆ..ರವಿರಾಜ್ ಸಾಗರ್.ಮಂಡಗಳಲೆ.

No comments:

Post a Comment