ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ
- Home
- ಸಂಪಾದಕೀಯ
- ಮಕ್ಕಳು ಬರೆದ ಕತೆ /ಕವನಗಳು
- ನಮ್ಮೂರ ಸುದ್ದಿಗಳು
- ಮಕ್ಕಳ ಬರಹಗಳು
- ಬಾಲ ಸಾಧಕರು
- ಮಕ್ಕಳು ಬಿಡಿಸಿದ ಚಿತ್ರಗಳು
- ನಮ್ಮೂರ ಜಾನಪದ
- ಜ್ಞಾನ - ವಿಜ್ಞಾನ
- ಸಾಮಾನ್ಯ ಜ್ಞಾನ
- ನಮ್ಮ ಪತ್ರಿಕಾ ಅಭಿಯಾನಗಳು
- ಓದುಗರ ಓಲೆ
- ಅತಿಥಿ ಸಾಹಿತಿಗಳ ಅಂಕಣ
- ಮಕ್ಕಳ ಪುಸ್ತಕಗಳ ಪರಿಚಯ-ಆನ್ ಲೈನ್ ಬುಕ್ ಹೌಸ್
- ಶೈಕ್ಷಣಿಕ ಲೇಖನಗಳು
- ಶೈಕ್ಷಣಿಕ ಚಟುವಟಿಕೆಗಳು
- ಲಾಂಗ್ವೇಜ್ ಕಾರ್ನರ್
- 1ರಿಂದ -puc ತರಗತಿ ಈ ಶಾಲೆ
- ನನ್ನ ಶೈಕ್ಷಣಿಕ ವೀಡಿಯೋಗಳು
- ಸಾರ್ವಜನಿಕ ಶಿಕ್ಷಣ ಇಲಾಖೆ
- ಹಿಂದಿನ ಸಂಚಿಕೆಗಳು ಮತ್ತು ಪತ್ರಿಕೆ ಕುರಿತು ಮಾಧ್ಯಮ ವರದಿ ...
- ನಮ್ಮ ಕುರಿತು ಫೋಟೋ ಗ್ಯಾಲರಿ
- ಅಂಕಣ ಬರಹ- ಕನಸುಗಳೂರ ಶ್ರಮಿಕ
- ಆನ್ಲೈನ್ ಪುಸ್ತಕ ಮಳಿಗೆಗಳು
- ಪಿಡಿಎಫ್ ಪುಸ್ತಕಗಳು.
- Ravichandra
- ಆನ್ಲೈನ್ ಪಾಠಗಳು - ದೀಕ್ಷಾ ಪೊರ್ಟಲ್
- ಇನ್ನೋವೇಟಿವ್ ಎಜ್ಯುಕೇಶನ್
Saturday 23 February 2019
Monday 18 February 2019
ಮೌನ ಯುದ್ಧಕ್ಕೆ ಕಾವ್ಯದ ಖಡ್ಗ
ಮೌನ ಯುದ್ಧಕ್ಕೆ ಕಾವ್ಯದ ಖಡ್ಗ
"ಮೌನ ಯುದ್ಧ "ಇದು ಗೆಳೆಯ ಸುರೇಶ ರಾಜಮನೆ ಅವರ ಎರಡನೇ ಕೃತಿ.
ಸುಡುವ ಬೆಂಕಿ ಯಲ್ಲಿ ನಕ್ಕವನು ಈಗ ಯುದ್ಧಕ್ಕೆ ಇಳಿದಿದ್ದಾನೆ .
'ನೋವಿನ ನೊಗ ಹೊತ್ತು
ಬದುಕಿನ ಬಂಡಿ ಎಳಯುತ್ತಿರುವಾಗಲೂ ಎಳೆಯ ಮಕ್ಕಳಂತೆ ನಕ್ಕು
ಬದುಕಿನ ಪಾಠ ಹೇಳಿಕೊಡುವವಳು ನನ್ನವ್ವ..
ಎನ್ನುವ ರಾಜಮಾನೆ ಬಾವುಕರಾಗುತ್ತಲೇ ವರ್ತಮಾನದ ತಲ್ಲಣಗಳಿಗೆ ಲೇಖನಿ ಹಿಡಿದು ಸಿಡಿದಿದ್ದಾರೆ.
"ಹಾದಿ ಬೀದಿಯ ತುಂಬಾ ಬಾವುಟದ ನೆರಳು
ಅದರೊಳಗೆ ಹಾರಾಡುವ ಹಸಿರು ತೆನೆಗಳ ಮೇಲಿನ ಹುಳುವಿನ ಹಸಿವು ಹಾರಿಹೋಗಿದೆ
ಬೆಳೆದ ಪೈರಿಗೆ ಸುರಿದ ವಿಷದ ಹಾಲು ಹುಬ್ಬೇರಿಸಿ ನಗುತ್ತಿದೆ
ಹಬ್ಬಗಳ ದಿಬ್ಬಣದ ತೇರಲಿ ಕುಳಿತು
ಗಾಲಿಗಡ್ಡ ಮಲಗಿ ನಾಲಿಗೆ ಚಾಚಿಕೊಂಡಿದೆ" ಎನ್ನುತ್ತಾ ವಿಷವರ್ತುಲ ಕವಿತೆಯಲ್ಲಿ ವರ್ತಮಾನದ ಕುರಿತು ಸಾಂಕೇತಿಕ ಪ್ರತಿಮೆಗಳಲ್ಲಿ ಸಾತ್ವಿಕವಾಗಿ ಸಿಡಿದಿದ್ದಾರೆ.
ಕೆಲವು ಕವಿತೆಗಳಲ್ಲಿ ಅವರದೇ ಬದುಕಿನ ಹೋರಾಟ ಇಣುಕಿದಂತೆ ಕಾಣುತ್ತದೆ. 56 ಕವಿತೆಗಳು ಇರುವ ಈ ಕೃತಿಯಲ್ಲಿ ಹಲವು ವಿಷಯ ವಸ್ತುಗಳು ಕವಿತೆಯಾಗಿ
ಸಂವಾದಿಸುತ್ತವೆ . ವರ್ತಮಾನದ ವಿಷಯ ವಸ್ತುವಿಗೆ ಸೃಜನಶೀಲ ಸಂವೇದನೆ ಹಲವು ಕವಿತೆಯಲ್ಲಿ ಕಂಡುಬರುತ್ತದೆ. ದೇಶಭಕ್ತ. ಬುಡ್ಡಿ ದೀಪದ ಕೆಳಗೆ ,ಹಗಲ ಹಸಿವು ,ನನ್ನ ಕವಿತೆ ,ನನ್ನವ್ವ ,ಹರಿದ ಕೌದಿ, ನಾನೊಂದು ಗುಡಿಸಲ ದೀಪ ,ನೀವು ಒಮ್ಮೆ ಓದಲೇಬೇಕು.
ವರ್ತಮಾನದ ಕುರಿತು ಸಂವೇದನಶೀಲ ನೊಬ್ಬ ಹೇಗೆ ಕವಿತೆಯಲ್ಲಿ ಜಾಗೃತ ಸಂವಹನ ಕ್ರಿಯೆಗೆ ಹೇಗೆ ತೆರೆದುಕೊಳ್ಳಬಲ್ಲ ಎನ್ನುವುದಕ್ಕೂ ಇಲ್ಲಿ ಹಲವು ಉದಾಹರಣೆಗಳು ಕವಿತೆಯಾಗಿ ಓದಿಸಿಕೊಂಡು ಹೋಗುತ್ತದೆ.
ವಿಶ್ವ ಖುಶಿ ಪ್ರಕಾಶನ ಇದನ್ನು ಪ್ರಕಟಿಸಿದ್ದು ಕ್ರಿಯಾಶೀಲ ಬರಹಗಾರ್ತಿ ಲಲಿತಾ .ಕೆ ಹೊಸಪ್ಯಾಟಿ ಅವರು ಬೆನ್ನುಡಿ ಬರೆದು ಹರಸಿದ್ದಾರೆ. ಡಾ.ಟಿ ಯಲ್ಲಪ್ಪ ಅವರ ಮುನ್ನುಡಿ ಕೃತಿಯನ್ನು ಸಮರ್ಥವಾಗಿ ಪರಿಚಯಿಸುತ್ತದೆ. ಮೌನ ಯುದ್ಧಕ್ಕೆ ನೀವು ಸಜ್ಜಾಗಲು ಈ ಕೃತಿಯನ್ನು ಓದಬೇಕು.
ಕೊನೆ ಮಾತು. ನಾನೇಕೆ ಹೊಸ ಪುಸ್ತಕ ಪರಿಚಯಿಸುತ್ತೇನೆ ಎಂದರೆ ಸ್ನೇಹಿತರನ್ನು ಪ್ರೋತ್ಸಾಹಿಸಲಿಕಾಗಿ. ಕಾಲೆಳೆಯುವದಕ್ಕಲ್ಲ.
ಪ್ರಸಿದ್ಧ ಪುಸ್ತಕಗಳ ಬಗ್ಗೆ ಮಾತ್ರ ಬರೆದು ವಿಮರ್ಶಕ ಅನಿಸಿಕೊಳ್ಳದೆ ಯುವ ಬರಹಗಾರರನ್ನು ಪ್ರೋತ್ಸಾಹಿಸುವುದು ಅಗತ್ಯವಿದೆ. ಅವರು ಈಗ ಸಣ್ಣ ವೃಕ್ಷ ವಾಗಿದ್ದರು ಮುಂದೆ ಹೆಮ್ಮರವಾಗಿ ಬೆಳೆಯುವರೆಂದು ಆಶಿಸುತ್ತ ನಾನು ಪುಸ್ತಕ ಪರಿಚಯ ಬರಹ ಮುಂದುವರಿಸುವೆ.
#ರವಿರಾಜ ಮಾರ್ಗ -ಪುಸ್ತಕ ಪರಿಚಯ
Monday 11 February 2019
ಕವಿತೆಯಾಗದ ಸಾಲ್ಗಳು
ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ
ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...
-
ಚಿಕ್ಕಂದಿನಲ್ಲಿ ನಮಗೆ ಬರುತ್ತಿದ್ದ, ನಾವೆಲ್ಲಾ ಹಾಡುತ್ತಿದ್ದ ಮರೆಯಲಾಗದ ಪದ್ಯಗಳು.. ಇವುಗಳಲ್ಲಿ ನಿಮಗೆಷ್ಟು ಗೊತ್ತು.. ತಿಳಿಸಿ..* ❤️❤️❤️...
-
ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಶಾಲಾಮಾಹಿತಿ ಸಲ್ಲಿಸಿ. ಈ ಮೇಲಿನ ಲಿಂಕ್ ಮಾಡಿ ಬೇಡಿಕೆ ಮಾಹಿತಿ ಸಲ್ಲಿಸಲು ಕೋರುವೆವು.
-
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಳೂರು ಶಾಲಾ ಮಕ್ಕಳ ಮಂತ್ರಿಮಂಡಲದಿಂದ ಶಾಲೆಯಲ್ಲಿ ಆಟದ ಮೈದಾನ, ವಿವಿಧ ಕ್ರೀಡಾಂಗಣ, ಶಾಲಾ ಪ್ರಾರ್ಥನ ಅಂಕಣದಲ್ಲಿ ಸಿಮೆಂಟ್ ಬ್ರಿಕ್...