ಕಾವ್ಯ ಬೆಳಕಿನತ್ತ "ಬೆಳಕಿನ ಒಂಟಿ ನಡಿಗೆ
ಸಾಹಿತ್ಯ ಸನ್ಮಿತ್ರ ಬೀರು ದೇವರಮನಿಯವರ ಮೊದಲ ಪ್ರಯತ್ನದಲ್ಲೇ ಕಾವ್ಯ ಬೆಳಕಿನ ಜಾಡು ಹಿಡಿದು ಪಯಣಿಸಿದ್ದಾರೆ.ಅವರ ಬೆಳಕಿನ ಒಂಟಿ ನಡಿಗೆ ಕವನ ಸಂಕಲನ ಇತ್ತೀಚೆಗೆ ಬಿಡುಗಡೆ ಆಗಿದೆ.ನಮ್ಮ ರಾಯಚೂರಿನ ಮತ್ತೊಬ್ಬ ಭರವಸೆಯ ಕವಿಯಾಗಿ ಸಾಹಿತ್ಯ ಕೃಷಿಗೆ ಇಳಿದಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರದ ಸಹಾಯಧನವನ್ನು ಪಡೆದುಕೊಂಡಿರುವ ಈ ಕೃತಿ ಹಲವು ವೈವಿಧ್ಯಮಯ ಕವಿತೆಗಳನ್ನು ಒಳಗೊಂಡಿದೆ .ಸದಾ ಕ್ರಿಯಾಶೀಲವಾಗಿರುವ ದೇವರಮನಿ ಅವರು ತಮ್ಮ ಕವಿತೆಗಳಲ್ಲಿ ಅವ್ವ ಅಣ್ಣ ಮತ್ತಿತರ ಸಂಬಂಧಗಳು ಕುರಿತು ಭಾವನಾತ್ಮಕ ನುಡಿಗಳಲ್ಲಿ ಕವಿತೆಯನ್ನು ಕಟ್ಟಿದ್ದಾರೆ .ಹಲವು ಕವಿತೆಗಳು ಮನುಷ್ಯ ಸಂಬಂಧ ಕುರಿತು ಹೇಳುತ್ತವೆ .ಬದುಕಿನ ವಿವಿಧ ಮಜಲುಗಳು ಅವರ ಕವಿತೆಯ ವಸ್ತುವಾಗಿದೆ . ಕಳೆದುಕೊಂಡ ಬಾಲ್ಯ ಕವಿತೆಯಲ್ಲಿ ಬಾಲ್ಯಕ್ಕೆ ೆ ಬಾಲ್ಯಕ್ಕೆ ಹೊರಳಿದ್ದಾರೆ. ಬಿಸಿಲು ನಾಡು ರಾಯಚೂರು ನಿಂದ ಬೆಂಗಳೂರು ಸೇರಿರುವ ಅವರು ತಮ್ಮ ಕವಿತೆಯಲ್ಲಿ ತಮ್ಮ ಭಾಷೆಯನ್ನು ಕೆಲವು ಕವಿತೆಗಳಿಗೆ ಬಳಸಿದ್ದರೆ ಅವರ ಕವಿತೆಗೆ ಇನ್ನಷ್ಟು ಕಾವ್ಯಲಯ ಬರುತಿತ್ತು ಎನಿಸಿತು. ಅದನ್ನು ನನ್ನವ್ವ ಕವಿತೆಯಲ್ಲಿ ಗುರುತಿಸಬಹುದು.ನನ್ನಾಕೆ ಕವಿತೆ ಕಾಡುವಂತಿದೆ. ಆಕೆ ಸುಗಂಧ ಭರಣಿಯ ಸಂಮ್ಮೋಹಿತೆ ಎಂದೇ ಅವರೇ ಹೇಳಿದ್ದಾರೆ.
ಹೊಸ ಭರವಸೆ ಹೊತ್ತ ಅವರ ಕವಿತೆಗಳಲ್ಲಿ ಅವರು ಸಾಹಿತ್ಯ ಕೃಷಿಗೆ ಭರವಸೆಯ ಬೆಳೆಗಾರಾಗಿ ಕಾಣಿಸುತ್ತಾರೆ. ಹೊಸ ಬರಹಗಾರರನ್ನು ಸ್ವಾಗತಿಸಿ ಪ್ರೊತ್ಸಾಹಿಸುವ
ಕಾರ್ಯ ನಮ್ಮದಾಗಬೇಕಾಷ್ಠೆ . ಕವಿತೆ ಗಳು ಅತ್ಯಂತ ಉತ್ತಮ ಎಂದು ಪಂಡಿತರು ಹೇಳಿದ ಪುಸ್ತಕ ಮಾತ್ರ ಬೆಂಬಲಿಸುವ ಅತ್ವಾ ಹೊಸತನ್ನು ಅಸಡ್ಡೆಯಿಂದ ನೋಡದೆ ಒಂದಿಷ್ಟು ಮುಕ್ತವಾಗಿ ವಿಶಾಲವಾಗಿ ಯೋಚಿಸಿ ಕೈಹಿಡಿದು ನಡೆಸಿ. ಒಂದು ಕೃತಿ ಹೇಗೆ ಇರಲಿ ಒಂದಿಷ್ಟು ಧನಾತ್ಮಕವಾಗಿ ಪ್ರೋತ್ಸಾಹಿಸಿದರೆ ಯಾರು ಏನನ್ನು ಕಳೆದುಕೊಳ್ಳುವುದಿಲ್ಲ.. ಅತ್ವಾ ಕೇವಲ ಪ್ರಸಿದ್ದರ ಪುಸ್ತಕದ ಬಗ್ಗೆ ಮಾತ್ರ ಬರೆದು ಬೀಗಿದರೆ ಸಾಲದು.ಹೊಸಬರನ್ನು ಸ್ವಾಗತಿಸೋಣ. ಬೀರು
ಅವರ ಪುಸ್ತಕ ದೇವರ ಮನಿ ಪ್ರಕಾಶನದಲ್ಲಿ ಲಭ್ಯ.ಅವರೊಂದಿಗೆ ಕರೆ ಮಾಡಿ ಮಾತಾಡಿ.8105788751.
ನಿಮ್ಮ ರವಿರಾಜ್ ಸಾಗರ್.
No comments:
Post a Comment